ಗುರುವಾರ, ಜನವರಿ 27, 2022

ಕಣ್ಣಲಿಳಿದ ಬೆಳಕು (ಕವಿತೆ) - ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಬೆಣ್ಣೆ ಚಂದ್ರ ಕಣ್ಣಲಿಳಿದ
ಎಣ್ಣೆ ಲಾಂದ್ರ ಏತಕೆ
ಸಣ್ಣ ಸುಂದ್ರ ಬಣ್ಣಬಳಿದ
ನುಣ್ಣ ಮನದ ಮಂಚಕೆ.....

ತಂಬೆಲರ ನಡುಕ ಹೆಚ್ಚಿ
ಹೊಂಬಣ್ಣದ ಮೈಯಿಗೆ
ಅಂಬು ಮೇಣ್ ಚಳಿಯ ಹಚ್ಚಿ
ಕಂಬಳಿಯೆಳೆದೆ ಮೆಲ್ಲಗೆ....

ಸಾಗರವು ಉಕ್ಕಿ ಕರೆದು
ಮಾಗಿಚಳಿಯ ವೇಗಕೆ
ಸಾಗಿಬಂದ ಅಲೆಯು ಕೊರೆದು
ಬಾಗಿಬಳುಕೋ ಲಾಸ್ಯಕೆ ....

ಕಾಯುತಿರಲು ಸನಿಹ ಬರುವ
ಬೇಯದಾಸೆ ತುಡಿತಕೆ
ನೋಯಿಸದೆ ಕೇಳುತಿರುವ
ಮಾಯದಾಸೆ ಮಿಡಿತಕೆ....

ಕಣ್ಣ ಹೊಳಪು ಕರೆದು ತಂತು
ಸಣ್ಣ ತಪ್ಪು ಮಾಡಲು
ತಣ್ಣ ಮಳಲ ತೀರ ಕೂತು
ಬಣ್ಣ ಕನಸು ಕಾಣಲು ....
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...