ಗುರುವಾರ, ಜನವರಿ 27, 2022

ಕಣ್ಣಲಿಳಿದ ಬೆಳಕು (ಕವಿತೆ) - ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಬೆಣ್ಣೆ ಚಂದ್ರ ಕಣ್ಣಲಿಳಿದ
ಎಣ್ಣೆ ಲಾಂದ್ರ ಏತಕೆ
ಸಣ್ಣ ಸುಂದ್ರ ಬಣ್ಣಬಳಿದ
ನುಣ್ಣ ಮನದ ಮಂಚಕೆ.....

ತಂಬೆಲರ ನಡುಕ ಹೆಚ್ಚಿ
ಹೊಂಬಣ್ಣದ ಮೈಯಿಗೆ
ಅಂಬು ಮೇಣ್ ಚಳಿಯ ಹಚ್ಚಿ
ಕಂಬಳಿಯೆಳೆದೆ ಮೆಲ್ಲಗೆ....

ಸಾಗರವು ಉಕ್ಕಿ ಕರೆದು
ಮಾಗಿಚಳಿಯ ವೇಗಕೆ
ಸಾಗಿಬಂದ ಅಲೆಯು ಕೊರೆದು
ಬಾಗಿಬಳುಕೋ ಲಾಸ್ಯಕೆ ....

ಕಾಯುತಿರಲು ಸನಿಹ ಬರುವ
ಬೇಯದಾಸೆ ತುಡಿತಕೆ
ನೋಯಿಸದೆ ಕೇಳುತಿರುವ
ಮಾಯದಾಸೆ ಮಿಡಿತಕೆ....

ಕಣ್ಣ ಹೊಳಪು ಕರೆದು ತಂತು
ಸಣ್ಣ ತಪ್ಪು ಮಾಡಲು
ತಣ್ಣ ಮಳಲ ತೀರ ಕೂತು
ಬಣ್ಣ ಕನಸು ಕಾಣಲು ....
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...