ಶನಿವಾರ, ಜನವರಿ 8, 2022

ಮುದುಡಿದ ನೀಲೋತ್ಪಲ (ಕವಿತೆ) - ಭರತ್ ಕೆ.ಆರ್.

ಸಿರಿತನದಿ ಹುಟ್ಟಿದರು
ಬಡತನದ ಬೇಗೆಯ ಕಣ್ಣಾರೆ ಕಂಡವಳು
ವಿದ್ಯೆಯ ಬೆನ್ನಟ್ಟದಿದ್ದರು
ಜೀವನದ ಬೆನ್ನಟ್ಟಿದವಳು
ಮಮತೆಯ ವಾತ್ಸಲ್ಯ ದೊರೆಯದಿದ್ದರೂ
ಪ್ರೀತಿಯ ಹಂಚುಂಡಿ ಬೆಳೆದವಳು
ಹಣ ಸಂಪತ್ತಿಗೆ ಬೆಲೆ ಕೊಡದವಳು
ಪ್ರೀತಿ ಗುಣಕ್ಕಾಗಿ ಬೆಲೆ ಕೊಟ್ಟವಳು//

ಬಂದುಗಳೆಲ್ಲ ಕೈ ಚೆಲ್ಲಿ ನಿಂತಾಗ 
ಮನ ಗುಂದದೆ ಮುನ್ನಡೆದವಳು
 ಚೊಚ್ಚಲ ಹೆರಿಗೆಯ ಮಾಹಾದಾಷೆಯಲ್ಲಿ
ಜೀವನ್ಮರಣದಲ್ಲಿ ಹೋರಾಡಿ ಬಂದವಳು
ಬಡತನ ವೆಂದು ಹೆದರದೆ
ತಾನೊಂದು ನೆಲೆಯಾಗಿ ನಿಂತವಳು
ನಂಬಿಕೆಯ ಮಾತಿಗೆ ಮರುಳಾಗಿ
ಸಂಬಂಧದೊಳು ದೃಢವಾಗಿ ನಿಂತವಳು//

ಚುಚ್ಚು ಮಾತುಗಳ ಸಹಿಸಿ 
ಹಟ್ಟಹಾಸದಿ ಮೆರೆದವರ ಮುಂದೆ
ಸಹನೆಯ ಮೂರ್ತಿಯಂತೆ ಇದ್ದವಳು 
ತನ್ನ ಮಕ್ಕಳ ಭವಿಷ್ಯಕ್ಕಾಗಿ
ಪರಪ ಮನೆಯ ಕಸಮುಸುರೆ ತಿಕ್ಕಿದವಳು//

ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮಹದಾಷೆ ಹೊತ್ತು ಮುನ್ನಡೆಯುತ್ತಿದ್ದಳು
ಹೀನಾಯವಾಗಿ ಕಂಡು ಅವಮಾನಿಸಿದವರ ಮುಂದೆ
ಹಠ ಛಲದಿಂದ ಬದುಕಿದವಳು
ಎಸ್ಟೇ ಸಂಕಷ್ಟವಿದ್ದರು ಕೈ ಚಾಚದೆ
ದುಡಿದು ಪರಿಶ್ರಮದಿ ಮುಂದೆ ಬಂದವಳು//

ಯಶಸ್ಸಿನ ಮೆಟ್ಟಿಲುಗಳನ್ನು ಮೆಟ್ಟಿ ನಿಂತು
ಕನಸಿನ ಗೋಪುರವ ಕಟ್ಟಲು ಮುಂದಾದವಳು
ಎಲ್ಲವನ್ನೂ ಸಹಿಸದ ಜನರೊಳು
ಕಾಣದ ದೇವರು ಸಹಿಸದಾದನು
ಕೊನೆಗೂ ಕಣ್ಮರೆಯಾಯಿತು ಇಂದು//

ಜೀವನವನ್ನು ಮೌನದಿಂದಲೆ
ನಿರಂತರ ಹೋರಾಟ ಮಾಡಿದ
ದೃಢದಿ ನಿಂತ ಛಲ ಬಿಡದ ಧೀರ ಮಹಿಳೆ ಇಂದು
ಸಹನೆ ಮೂರ್ತಿಯ ಸಹನೆಯಕ   
ಕಟ್ಟೆಯೋಡೆಯದೆ
ಮರೆಯಾಯಿತಿಂದು ಜಗದೊಳು ಶಾಂತಿಯಿಂದಲೇ //
✍️ ಭರತ್ ಕೆ.ಆರ್.
   ನೀಲ ರಂಗಸ್ವಾಮಿ.
   ಕಾರೇಕೆರೆ ಊರು.
     ಹಾಸನ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

13 ಕಾಮೆಂಟ್‌ಗಳು:

  1. ನಿಮ್ಮ ವಾಕ್ಚಾತುರ್ಯ ಅಧ್ಬುತವಾಗಿದೆ.
    ಇಷ್ಟೊಂದು ಚಂದವಾಗಿ ವರ್ಣನೆ ಮಾಡಿದ್ದೀರ

    ಪ್ರತ್ಯುತ್ತರಅಳಿಸಿ
  2. Very precious words are used this Noval
    Super bharath all the best for ur journey ������

    ಪ್ರತ್ಯುತ್ತರಅಳಿಸಿ
  3. “In the middle of difficulty lies opportunity.” — Albert Einstein
    Keep rocking 🤩 superb

    ಪ್ರತ್ಯುತ್ತರಅಳಿಸಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...