ಭಾನುವಾರ, ಏಪ್ರಿಲ್ 17, 2022

ಗಜಲ್ - ಮಾಜಾನ್ ಮಸ್ಕಿ.

ದ್ವೇಷದ ಬೆಂಕಿ ಹತ್ತಿ ಉರಿಯುತ್ತಿದೆ ರಕುತ ಯಾರದು 
ಭೇದ ಭಾವದ ಕಿಚ್ಚು ಗಗನ ಮುಟ್ಟುತ್ತಿದೆ ರಕುತ ಯಾರದು 

ಸೌದೆಯಂತೆ ನೊಗ ನೀಡುತ್ತಿರುವರು ಬುದ್ಧಿಹೀನರು 
ಅಹಮಿನ ತುಪ್ಪ ಸುರಿಯುತ್ತಿದೆ ರಕುತ ಯಾರದು 

ಧರ್ಮ ಜಾತಿಯ  ಭ್ರಮೆ ಕಳೆ ಕೀಳಬೇಕಾಗಿದೆ 
ಭಾವೈಕ್ಯತೆಯ ಫಸಲು ಕಾಣದಾಗುತ್ತಿದೆ ರಕುತ ಯಾರದು 

ಹಿಜಾಬ್ ಕೇಸರಿ ಬಿಟ್ಟು ವಿದ್ಯಾ ತಪೋವನ ಸೇರಬೇಕಿದೆ 
ಹೆತ್ತವರ ಅಸಹಾಯಕತೆ ಚೀರುತ್ತಿದೆ ರಕುತ ಯಾರದು 

ಸಮಾನತೆಯ ಕರುಳಿಗೆ ಕೊಳ್ಳಿಯಿಟ್ಟವರು ಯಾರು "ಮಾಜಾ "
ಧರೆಯೇ ಬೇಗೆಯಲ್ಲಿ ಬೇಯುತ್ತಿದೆ ರಕುತ ಯಾರದು 

- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...