ಗುರುವಾರ, ಅಕ್ಟೋಬರ್ 13, 2022

ಕುವೆಂಪು (ಕವಿತೆ) - ಕಾಡಪ್ಪಾ ಮಾಲಗಾಂವಿ, ಶಿರೋಳ.

ಕನ್ನಡದ ಕವಿ ಕುವೆಂಪು
ಬರೆದ ಕವಿತೆಗಳ ಇಂಪು
ಕೊಡುವದು ಮನಕ್ಕೆ ತಂಪು.

ಬರೆದರು ಕವಿತೆಗಳ ಸಾಗರ
ಕೇಳುಗರಿಗೆ ಅತಿ ಮಧುರ
ಮತ್ತೆ,ಮತ್ತೆ ಆಳಿಸುವ ಆತುರ.

ಸಾಹಿತ್ಯದ ಸುಂದರ ಮೂರುತಿ
ಕವಿತೆಗಳಲ್ಲಿ ಬಿಂಬಿಸಿದರು ಸಂಸ್ಕೃತಿ
ಬೆಳಗಿಸಿದರು ಜ್ಞಾನದ ಜ್ಯೋತಿ

ಪೋಣಿಸಿದರು ಅಕ್ಷರಗಳ ಜೋಡಣೆ
ಪಡೆದರು ಅನೇಕ ಬಿರುದಗಳ ಸನ್ಮಾನ
ಅವರೆ ಕವಿತೆ,ಬರಹಗಳ ಖಜಾನೆ.

ಪಸರಿಸಿದರು ಭಾರತೀಯ ಪರಂಪರೆ
ಅವರೆ ಸಾಹಿತ್ಯದ ಉಸಿರು
ಬೆಳಸಿದರು ಬರಹದ ಹಸಿರು.

- ಕಾಡಪ್ಪಾ ಮಾಲಗಾಂವಿ, ಶಿರೋಳ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...