ಕನ್ನಡದ ಕವಿ ಕುವೆಂಪು
ಬರೆದ ಕವಿತೆಗಳ ಇಂಪು
ಕೊಡುವದು ಮನಕ್ಕೆ ತಂಪು.
ಬರೆದರು ಕವಿತೆಗಳ ಸಾಗರ
ಕೇಳುಗರಿಗೆ ಅತಿ ಮಧುರ
ಮತ್ತೆ,ಮತ್ತೆ ಆಳಿಸುವ ಆತುರ.
ಸಾಹಿತ್ಯದ ಸುಂದರ ಮೂರುತಿ
ಕವಿತೆಗಳಲ್ಲಿ ಬಿಂಬಿಸಿದರು ಸಂಸ್ಕೃತಿ
ಬೆಳಗಿಸಿದರು ಜ್ಞಾನದ ಜ್ಯೋತಿ
ಪೋಣಿಸಿದರು ಅಕ್ಷರಗಳ ಜೋಡಣೆ
ಪಡೆದರು ಅನೇಕ ಬಿರುದಗಳ ಸನ್ಮಾನ
ಅವರೆ ಕವಿತೆ,ಬರಹಗಳ ಖಜಾನೆ.
ಪಸರಿಸಿದರು ಭಾರತೀಯ ಪರಂಪರೆ
ಅವರೆ ಸಾಹಿತ್ಯದ ಉಸಿರು
ಬೆಳಸಿದರು ಬರಹದ ಹಸಿರು.
- ಕಾಡಪ್ಪಾ ಮಾಲಗಾಂವಿ, ಶಿರೋಳ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ