ಭಾನುವಾರ, ಜನವರಿ 30, 2022

ಸೈನಿಕನಾಗಬೇಡ ಎಂದು ಹೇಳಬೇಡ (ಕವಿತೆ) - ಪಂಗರಗಾ ರವಿಚಂದ್ರ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ಅವನನ್ನು
ಶತ್ರುಗಳ ರುಂಡ ಚೆಂಡಾಡುವ ಶಕ್ತಿ ಅವನ್ನಲ್ಲಿದೆ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ನಿನ್ನ ಮಗನನ್ನು
ಭಾರತಾಂಬೆಯ ಅನೇಕ ಮಕ್ಕಳನ್ನು ಕಾಯುವ ಧೈರ್ಯ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಹೊರಟಿರುವವನನ್ನು ತಡೆಯಬೇಡ ನೀನು
ಭಾರತದ ಅತ್ಯುತ್ತಮ ಸೇವೆಯನ್ನು ಮಾಡಬೇಕೆಂಬ ತುಡಿತ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಯೋಚಿಸುವವನನ್ನು ಹುರಿದುಂಬಿಸು ನೀನು
ಕೆಲವೇ ದಿನಗಳಲ್ಲಿ ನಿನ್ನನ್ನು ಭಾರತೀಯರನ್ನು ಕಾಯಲು ಗಡಿಗೆ ಹೋಗಿ ನಿಲ್ಲುವ ತಾಕತ್ತು ಅವನ್ನಲ್ಲಿದೆ

-  ಪಂಗರಗಾ ರವಿಚಂದ್ರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...