ಗುರುವಾರ, ಮಾರ್ಚ್ 2, 2023

ಆಧುನಿಕ ಸಿಂಹಾಸನದ (ಕವಿತೆ) - ಶ್ರೀಮತಿ ರೇಖಾ ನಾಡಿಗೇರ.

ರಾಜರಾಳ್ವಿಕೆಯ ಬಂಗಾರ -ಬೆಳ್ಳಿಯ ಸಿಂಹಗಳುಳ್ಳ ಸಿಂಹಾಸನವಲ್ಲವಿದು/
ಮೆತ್ತನೆಯ ತಿರುಗುವ ಸುಖಾಸನಗಳ ಸಿಂಹಾಸನವದು/

ಅಧಿಕಾರದ ಅಂತಸ್ತಿಗೆ ತಕ್ಕಂತೆ ಪ್ಲಾಸ್ಟಿಕ್ಕು, ಕಟ್ಟಿಗೆ, ತಿರುಗುವ ಆಸನ/
ಹೊಣೆಗಾರಿಕೆಯ ನಿಭಾಯಿಸುವ ಯೋಗ್ಯತೆ -ಅಹ೯ತೆ  ಇರಲು ಆಗದು ಪ್ರಹಸನ/

ಕುಚಿ೯ಯದು ಹುಡುಗಾಟಿಕೆಯ ಸರಕಲ್ಲ/
ಕುಚಿ೯ಗಾಗಿ ಅಡ್ಡದಾರಿ ಹಿಡಿದರೆ ಪರಿಣಾಮವೂ ಆಡ್ಡಡ್ಡವೇ ಆಗುವದಲ್ಲ/

ಮೆತ್ತನೆಯ ಕುಚಿ೯ಯಡಿ ಕಾಣದ ಮುಳ್ಳುಗಳು/
ಚುಚ್ಚದಂತೆ ನಿವ೯ಹಿಸಬೇಕು ಎಚ್ಚರಿಕೆಯೊಳು/

ಕಾಲೆಳೆಯುವವರು,ಛೂ ಬಿಡುವವರು, ಹಚ್ಚಿಕೊಡುವವರು ಕೆದಕುವವರು /
ಅಧಿಕಾರದ ಕುರ್ಚಿಯದು ಅಗ್ಗಿಷ್ಟಿಕೆಯಂತೆ  ಶಮನಿಸುವ ಚಾಣಕ್ಯರು ಬಾಳುವರು/

ಕುಚಿ೯  ಏರುವವನ 
ಭಾವ-ಬುದ್ಧಿ ಶುದ್ಧವಿರಲು ಯಶವು ಅವನಿಗೆ/
ಪ್ರಗತಿಯು ದೇಶಕ್ಕೆ; ನೆಮ್ಮದಿಯು ಪ್ರಜಾ ಗಣಕ್ಕೆ/

ಕುಚಿ೯ಗಾಗಿ ನಡೆಯುತ್ತಿವೆ ನಾನಾ ತಾಲೀಮು -ತಂತ್ರ -ಕಸರತ್ತು/
ಜಯವು ಖಚಿತವು ಅಭ್ಯರ್ಥಿಗಳಲ್ಲಿ ಇದ್ದರೆ ನಿಯತ್ತು/

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...