ಶನಿವಾರ, ಏಪ್ರಿಲ್ 8, 2023

ಕನ್ನಡಮ್ಮನಿಗೆ ನಮನ (ಕವನ) - ಸುಭಾಷ್. ಜೆ. ಎಸ್. ಎಸ್.

ಕಲಿಯುವಾಗ ಸುಂದರ ಸ್ವರ್ಗವು
ರಮ್ಯರಮಣೀಯ ನಿಸರ್ಗವು
ಕಂಬನಿಗೆ ಮಿಡಿಯುವ ನಾಡು
ಕೈ ಹಿಡಿದು ಮೇಲೆತ್ತುವ ಬೀಡು 
ಅಮ್ಮ ಎಂದರೆ ಆರೈಕೆ
ಅಪ್ಪ ಎಂದರೆ ಓಲೈಕೆ

ಗಾಯಕರ ಗ್ರಾಮವಿದು 
ಲೇಖಕರ ಲೋಕವಿದು
ಶಾಸನಗಳ ನಾಡಿದು
ಕವಿಗಳ ಬೀಡಿದು

ಅಮೃತವೇ ಕಾವೇರಿ
ಶ್ರೀಮಂತಿಕೆಯೇ ಶ್ರೀಗಂಧ 
ಮಲೆನಾಡಿನ ಮಂದಹಾಸ
ಕಗಮೃಗಗಳ ತವರೂರು

ಜಂಬೂಸವಾರಿಯ ವೈಭೋಗ
ತರ ತರ ತಿನಿಸುಗಳ ಈ ಯೋಗ
ದೇವಾಲಯಗಳ ಆಗರ
ಎಂದಿಗೂ ಮಧುರ ಈ ನಗರ

ಕನ್ನಡವೇ ನಮ್ಮ ಉಸಿರು
ಕರ್ನಾಟಕವೇ ನಮ್ಮ ತವರು
ಕನ್ನಡಾಂಭೆಯೇ ನಮ್ಮಮ್ಮ 
ಅವಳಿಗೊಂದು ನಮನವ ಸಲ್ಲಿಸೋಣ.
- ಸುಭಾಷ್. ಜೆ. ಎಸ್. ಎಸ್.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ..

ಸಾಧನೆಗೆ ವಯಸ್ಸು ಮುಖ್ಯವಲ್ಲ, ಪ್ರಾಮಾಣಿಕ ಪ್ರಯತ್ನ ಮುಖ್ಯ...  ಭೂಮಿಯ ಮೇಲೆ ಹುಟ್ಟಿರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಸಾಧನೆ ಮಾಡಬೇಕೆಂಬ ಹಂ...