ಭಾನುವಾರ, ಜನವರಿ 26, 2025

ಹೇಗಿದ್ದನೇಗಾದ ಹನುಮಂತ...

*ಹೇಗಿದ್ದನೇಗಾದ ಹನುಮಂತ *

ಹಾವೇರಿಯ ಹಳ್ಳಿ ಹೈದ 
ಅವನು ಬಲು ಸೀದಾ ಸಾದ
ಕುರಿ ಕಾಯೋದು ಅವನ ಕಾಯಕವು 
ಕಾಡು ಮೇಡು ಸುತ್ತುತ್ತಿದ್ದನವನು 
ಆಡಿನ ಹಿಂಡಲಿ ಹಾಡುತ ನಲಿಯುತ್ತಿದ್ದ 
ಜನಪ್ರಿಯತೆ ಕನಸಿರದೆ ಅವನ ಪಾಡಿಗಿದ್ದ 
ಸರಿಗಮಪ ಗಾಯಕನಾದ 
ಕನ್ನಡನಾಡಿಗೆ ಪರಿಚಯವಾದ 
ಎಲ್ಲರ ಪ್ರೀತಿಗೆ ಪಾತ್ರನಾದ 
ಈ ಕನ್ನಡದ ಮುದ್ದು ಕಂದ 
ಅಕ್ಕೋರೆ.., ಅಣ್ಣೋರೆ..., ಅನ್ನೋದು ಬಲುಚಂದ 
ಬಿಗ್ ಬಾಸ್ಗೆ ಹೋದ 
ಸಹಜತೆ ಮುಗ್ದತೆನೆ ಹಾಸುಹೊದ್ದಿದ್ದ 
ಎಲ್ಲರೊಡನೆ ಒಲುಮೆಯಲಿ ಒಡನಾಡಿದ 
ಕೋಟಿ ಕೋಟಿ ಕನ್ನಡಿಗರ ಮನಗೆದ್ದ 
ಬೀಗದೆ ಬಿಗ್ಬಾಸ್ ವಿಜಯಮಾಲೆ ಧರಿಸಿದ 
ನಿನಗೆ ವಂದನೆ ಅಭಿನಂದನೆ
ನಿನ್ನಲಿರಲಿ ಸದಾ ಮಣ್ಣಿನ ಸೊಗಡಿನ ಸ್ಪಂದನೆ 
ಸಾಮಾನ್ಯರಿಗೂ ಸಾಧನೆ ಸಾಧ್ಯವೆಂಬುದಕೆ ನೀನೆ ಸ್ಫೂರ್ತಿ 
ಬೆಳಗಲಿ ಜಗದಗಲ ನಿನ್ನಯ ಕೀರ್ತಿ ...
✍️ ಲೋಕರತ್ನ ಸುತೆ ಭವ್ಯ ಸುಧಾಕರ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...