ಮಂಗಳವಾರ, ಆಗಸ್ಟ್ 2, 2022

ಚಪ್ಪಲಿಗಳು (ಕವಿತೆ) - ಮಹಮ್ಮದ್ ರಫೀಕ್ ಕೊಟ್ಟೂರು.

ಚಪ್ಪಲಿಗಳು ತಾವೇ ಚಲಿಸಲಾರವು
ಮನೆ ಹೊರಗೇ 
ಒಂದು ಮತ್ತೊಂದರ ಸಾಂತ್ವಾನಗೈಯುತ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಬೆನ್ನ ಮೇಲೆ ಒಡೆಯನ 
ಕಾಲುಗಳು 
ಕಣ್ಣು ಕಿವಿಗಳ ಮುಚ್ಚಿಕೊಂಡಿಹವು
ತನ್ನವರು ಕಾಣದಂತೆ , ಕೇಳದಂತೆ
ಹೊರಗೇ 
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಕಲ್ಲು ಮುಳ್ಳುಗಳಿಗೆ 
ತನ್ನ ಎದೆಯೊಡ್ಡಿ 
ಕೊಚ್ಚೆಯಲೂ  ನಡೆಯುವ ಅವನ
ಕಾಲುಗಳ ಅಪ್ಪಿಕೊಂಡಿಹವು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು

ಎದೆ ಸವೆದು ಬೆನ್ನು ಬಾಗಿದರೂ
ಬೆನ್ನು ಬಿಡದ ಅವನು 
ತುಳಿಯುತಿಹನು ತುಳಿಯುತಲೆ ಇಹನು
ಕೊನೆಗೆ ಹೊರಗೇ
ಒಡೆಯನ ನಿರೀಕ್ಷೇಯಲೇ
ಅವನ ದಾರಿ ಕಾಯುತಿಹವು.

  - ಮಹಮ್ಮದ್ ರಫೀಕ್ ಕೊಟ್ಟೂರು.



ಕಂಪು ಅಳಿಯದಿರಲಿ (ಕವಿತೆ) - ತುಳಸಿದಾಸ ಬಿ.ಎಸ್.

ದನಿ ಕೇಳಿ ಮನವು
ಕುಣಿದಂತೆ ನವಿಲು
ಜಾಣೆ ವಾರಿ ನೋಟಕೆ
ಇಣುಕಿದಂತೆ ಶಶಿಯು

ಚಿನ್ನ ನಿನ್ನ ನುಡಿಯು
ಜೇನಿನಂತೆ ಸವಿಯು
ಮನದ ಭಾವ ತಿಳಿಯಲು
ಮಿನುಗಿದಂತೆ ತಾರೆಯು

ತಾಳದಾದ ಬಯಕೆಗೆ
ಬಾಳೆಯಂತೆ ಬಾಗಿದೆ
ಗಳಿಸಿ ಪ್ರೀತಿ ನೆಲದ ಹಾಗೆ
ಅಳಿಯದಂತೆ ಉಳಿಯಲಿ

ಬೆಸೆದ ಬಂಧ ಹೂವಿನಂತೆ
ಉಸಿರು ಗಂಧ ಸೂಸಲಿ
ಹುಸಿಯದಂತೆ ಪ್ರೀತಿ ಬಳ್ಳಿ
ಹಸಿರು ಚದುರಿ ಹಬ್ಬಲಿ

ತಂಪನೆರೆವ ಗಾಳಿಯಂತೆ
ಗುಂಪು ಪ್ರೀತಿ ಸಾಗಲಿ
ಇಂಪು ಸುಖದ ನಿದ್ರೆಯಂತೆ
ಕಂಪು ಅಳಿಯದಿರಲಿ
- ತುಳಸಿದಾಸ ಬಿ. ಎಸ್.


ನಿತ್ಯ ಕಾಯಕವಾಸಿ (ಕವಿತೆ) - ರಾಕೇಶ್ ಡಿ ವೀರಾಪುರ.

ನಿತ್ಯ ಕಾಯಕವಾಸಿ ನಮ್ಮ ರೈತನು
ಬೇಸಾಯವ ಕಸುಬಾಗಿಸಿಕೊಂಡವನು
ಮಳೆಯ ನಡುವೆ ದುಡಿಯುವಾತನು
ವರ್ಷ ಪೂರ್ತಿ ಶ್ರಮ ಪಡುವ ಧೀರನು
 
ತಾನು ಹಸಿದಿದ್ದರೂ ಈ ನಮ್ಮ ರೈತನು
ದೇಶದ ಹೊಟ್ಟೆ ತುಂಬಿಸುವ ಗುಣದವನು
ತನಗಾಗಿ ಹೆಚ್ಚೇನು ನಿರೀಕ್ಷೆಯ ಮಾಡದವನು
ದೇಶಕ್ಕಾಗಿ ನಿತ್ಯ ಬೆವರ ಹನಿಯ ಬಸಿಯುವನು

 ಬಂದರೂ ಸಮಸ್ಯೆಗಳು ನೂರಾರು ಜೀವನದಿ
ಎದೆಗುಂದದೆ ದುಡಿಯುವ ನಿತ್ಯವು ಕಾಯಕದಿ
ಇದ್ದರೂ ಸಾಲದ ಮಾಡಿರುವ ಭಯವು ಮನದಿ
ನಂಬಿಕೆ ಇಡುವ ಒಳ್ಳೆಯ ಫಸಲಿನ ನಿರೀಕ್ಷೆಯಲಿ

 ರೈತ ಬೆಳೆದ ಬೆಳೆಗಳಿಗೆ ಸಿಗದೆ ಬೆಂಬಲ ಬೆಲೆ
ಹೆಚ್ಚಾಗುತ್ತಿವೆ ರೈತರು ಕುಣಿಕೆಗೆ ಕೊಡುವ ತಲೆ
ಅರಿಯಬೇಕಿದೆ ನಾವೆಲ್ಲರೂ ಒಮ್ಮೆ ಅವನ ಬೆಲೆ
ಮಾಡದಿದ್ದರೆ ಸಹಾಯವ ಅಳಿವುದು ನಮ್ಮ ನೆಲೆ

ಹೆತ್ತ ತಾಯಿಯ ಮೇಲಿರುವಂತೆ  ಮಮಕಾರ
ಸ್ವಲ್ಪವಾದರೂ ಇರಲಿ ರೈತನ ಮೇಲೆ ಕನಿಕರ
ರೈತರಿದ್ದರೆ ಸೌಕ್ಯವು ನಮ್ಮೆಲ್ಲರ ಈ ಜೀವನ
ಅದನು ಅರಿತು ಅನ್ನದಾತರ ಗೌರವಿಸೋಣ.
- ರಾಕೇಶ್ ಡಿ ವೀರಾಪುರ.


ಬಾ ಮಳೆಯೇ ಬಾ (ಕವಿತೆ) - ಶಾಂತಾರಾಮ ಶಿರಸಿ.

ನಾನು ನಿನಗಾಗಿ ಕಾದಿರುವ ಕಡಲು,
ಹನಿ ಹನಿಯಾಗಿ ಸುರಿದು,
ಈ ಭುವಿಯ ದಾಹವ ಇಂಗಿಸಲು,
ಮನುಜರು ಮಾಡಿಹ ಕೊಳೆಯ ತೊಳೆದು ಸ್ವಚ್ಚಾವಾಗಿಸು ಬಾ,
ಮಿಕ್ಕಿದ್ದು ನೀರಾಗಿ ಉಕ್ಕಿ ಹರಿಯಲು,
ಬಾ ಮಳೆಯೇ ಬಾ
ಕಡಲ ಒಡಲ ಸೇರಲು..

ಬಿಸಿಯಾಗಿ ಒಣಗಿಹ ಈ ಭೂ ಸಿರಿಯ ತಣಿಸಿ ಹಸಿರಾಗಿಸು ಬಾ,
ಭುವಿಯ ಉಳುವ ರೈತನ ಮೊಗದಲಿ ನಗುವ ತರಿಸು ಬಾ,
ಹನಿಗಳಾಗಿ ಸುರಿದು ಬೇಸರದಿ ಮನಕೆ ನೀರಾಗಿ ಸೋಕಿ ಅಪ್ಪಿಕೊಳ್ಳು ಬಾ,
ನಿನ್ನ ಹನಿಗಳಲ್ಲಿ ಮೈ ಒಡ್ಡಿ ಕುಣಿಯಬೇಕೆಂಬ ಈ ಮನದಾಸೆಯ ತೀರಿಸಲು ಬಾ ಮಳೆಯೇ ಬಾ...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106237



ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...