ಶುಕ್ರವಾರ, ಜೂನ್ 25, 2021

ಸುದ್ದಿ ಪ್ರಕಟಣೆ : ಧಾರವಾಡ.

ದಾರವಾಡ: ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ ರಾಜ್ಯ ತುಂಬೆಲ್ಲಾ ಶಿಕ್ಷಣ, ಸಂಸ್ಕೃತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಹಗಲಿರುಳು ಸೇವೆ ಸಲ್ಲಿಸುವ ಮೂಲಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಸಂಘಟನೆಯನ್ನು ರಾಜ್ಯಾದ್ಯಂತ ಬಲಪಡಿಸುವ ನಿಟ್ಟಿನಲ್ಲಿ ವಿಸ್ತರಣೆ ಮಾಡುವ ಕಾರ್ಯ ಸಹ ಸದ್ದುಗದಲ್ಲವಿಲದೆ ಮಾಡುವಲ್ಲಿ ಮಗ್ನವಾಗಿದೆ.ತರುವಾಯ ಈದಿಗ ರಾಜ್ಯ ಸಮಿತಿಯ ಸಂಚಾಲಕರಾಗಿ, ಬೀದರ ಜಿಲ್ಲೆಯ ಸಾಹಿತಿಯಾಗಿ, ಸಮಾಜಿಕ ಸೇವಕರಾಗಿ,ಪರಿಸರ ಸಂರಕ್ಷಕರಾಗಿ,ವಿಮರ್ಶಕರಾಗಿ,ಹೋರಾಟಗಾರರಾಗಿ, ಪತ್ರಿಕಾ ವರದಿಗಾರರಾಗಿ, ಸಂಘಟಕರಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಗಲಿರುಳು ನಿಸ್ವಾರ್ಥ ಸೇವಾ ಮನೋಭಾವದಿಂದ ದುಡಿಯುತ್ತಿರುವ ಶ್ರೀ ಸಂಗಮೇಶ ಎನ್ ಜವಾದಿಯವರನ್ನು ನೇಮಕಾತಿ ಮಾಡಲಾಗಿದೆ. ಮಾಡಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಲು ಬಯಸುತ್ತೇವೆ. ಆದಕಾರಣ ಸಂಗಮೇಶ ಎನ್ ಜವಾದಿಯವರು ತಮ್ಮ ಜವಾಬ್ದಾರಿಯನ್ನು ಶೀಘ್ರವಾಗಿ ವಹಿಸಿಕೊಂಡು, ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಲು ಅವರಲ್ಲಿ ಕೋರುತ್ತಾ, ಅವರಿಗೆ ಶುಭ ಹಾರೈಕೆಗಳು ಸಲ್ಲಿಸುತ್ತೇವೆಂದು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಡಾ.ಐ.ಎ.ಲೋಕಾಪುರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...