ಭಾನುವಾರ, ಜೂನ್ 20, 2021

ಭಾವ ತೋರಣ. (ಕವಿತೆ). - ಹಂಸರಾಗ ಶೆಟ್ಟಿ

   ಭಾವ ತೋರಣ....

ಹೃದಯದಲಿ ಅರಳಿದ ಭಾವ ಮಂದಿರ
ನವಿರು ಕನಸುಗಳ ಚಿತ್ತಾರ
ಭಾವ ಬೆಸೆದ ನೂರ್ಮಡಿಲ ತಾಣ
ಬಾಳ ಹೊಸ ರಾಗದ ಅನಾವರಣ...

ಕನಸು ಕಂಗಳ ಲಾಸ್ಯದಲಿ
ತುಟಿಯಂಚಿನ ಮುಗ್ಧತೆಯಲಿ
ಕಣ್ಣೀರ ಅಭಿಷೇಕದ ಮೆರೆಯಲಿ
ಸ್ಪರ್ಶ ಸಾಂತ್ವನದ ನಲ್ನುಡಿಯಲಿ...

ಹತಾಶೆ ನಿರಾಶೆಯ ಮೆಲುಕು
ಆಶಾವಾದ ಭರವಸೆಯ ಬೆಳಕು
ಸಂಬಂಧಗಳ ಅರಿವಿನ ನಂಬಿಕೆ
ಭಾವನೆಗಳ ಪ್ರಪಂಚದ ಸ್ವಂತಿಕೆ..

ಹೆಪ್ಪುಗಟ್ಟಿದ ಮೌನದಲಿ ಮಾತು
ತಾಳ್ಮೆ ಸಹನೆಯ ಭಾವ ತಂತು
ನಿಗೂಢ ನಿರೀಕ್ಷೆಯ ಅಂತಃಕರಣ
ಮರೀಚಿಕೆ ಕನಸುಗಳ  ಸ್ಪುರಣ
ಮನದ ಮಾತುಗಳ ತೋರಣ

 - ಹಂಸರಾಗ ಶೆಟ್ಟಿ ಶಿಕ್ಷಕಿ ಗೋಳಿತೊಟ್ಟು ಕಡಬ ತಾಲೂಕು ದಕ.




3 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...