ಶನಿವಾರ, ಜೂನ್ 26, 2021

ಸಾಗಾಕಮ್ಮ (ಜಾನಪದ ಶೈಲಿಯ ಕಿರು ನಾಟಕ) - ಅಂಜನ್ ಕುಮಾರ್ ಪಿ ಆರ್.

ಕರುನಾಡು ಸಾಹಿತ್ಯ ಪರಿಷತ್ತು ಹಾಗೂ ಶ್ರೀ ಟ್ರಸ್ಟ್ --
ಬೆಂಗಳೂರು ಇವರ ಸಹಯೋಗದ ಕಥಾ ಸ್ವರ್ಧೆ...!""

ಕಥೆ :- ಸಾಗಕಮ್ಮ...!
              ಕೊರೋನ ಜಾಗೃತಿ ಮೂಡಿಸುವ ಕಿರು 
ಕಥೆ ಜಾನಪದ ಶೈಲಿ...!

ಕರುನಾಡು ಕಥಾ ಸ್ಪರ್ದೆಯಲ್ಲಿ ಸಮಾಧಾನಕರ ಸ್ಥಾನ ಪಡೆದಿರುವ ಕತೆ 

ರಚನೆ :- ಕವಿ ಕಾವ್ಯ ಕಲ್ಪನೆ ಅಂಜನ್
                 ಹೆಸರಲ್ಲೇನಿದೆ ..!?
ವಡ್ಡರ ಸಿದ್ದರಾಮ ಅಂಕಿತ ನಾಮ..!



 (ನುಡಿ..:- ಈ ದಿನ ನೀವೇ ನೋಡಿ ತಿಳಿದಂತೆ  ಮಹಾಮಾರಿ ಕೊರೋನ ದ ಬೆಂಕಿ ಹೊತ್ತಿ ಉರಿಯುತ್ತಿರುವ ಘಟನೆ ಪ್ರತಿದಿನ ಕಾಣುತ್ತಿದ್ದೇವೆ ,ಹಾಗೆ ಈ ಕತೆಯಲ್ಲಿ ಒಂದು ಹಳ್ಳಿಯ ಜನರು ಸಾಯುತ್ತಿದ್ದಾರೆ ! ಕೊರೋನ ಹರಡಿ. ಆದಕ್ಕೆ  ಊರ ಮಂದಿ  ಅವರ ಮೂಡನಂಬಿಕೆ  ನಂಬಿ  ಮಾರಿಯನ್ನು ಶಾಂತಿ ಮಾಡಲು ಸಾಮಾಜಿಕ ಅಂತರ ಇಲ್ಲದೆ ನೆರೆದಿದ್ದಾರೆ ಮತ್ತು ಅದೇ ಹಳ್ಳಿಯ ಸೊಸೈಟಿ ಯ ಬಳಿ ಗುಂಪು ಇರುತ್ತಾರೆ ಅವರಿಗೆ ಯಾವ ರೀತಿ ಊರಿನ ಅವಿದ್ಯಾವಂತರು ಹೇಗೆ ವಿದ್ಯಾವಂತರಿಗೆ ಬುದ್ದಿ ಹೇಳುತ್ತಾರೆ ಎಂದು ನೋಡೋಣ ಬನ್ನಿ...! ..)

 
                 ಹಳ್ಳಿಯ ಕೆಲ ಹಿರಿಯರು  ಊರಾಹೊಳಗೆ 
ಹಳ್ಳಿಕಟ್ಟೆ ಮೇಲೆ ಕುಳಿತು ಈ ರೀತಿ ಅರಚುತಿದ್ದರೆ  _ ಲೇ ಮಿಂಡ್ರೀ ವಸಿ ದೂರ ಕುಂದ್ರು ಲೇ ಇಗ್ಲೆ ಮಂದಿ ಯಲ್ಲ ಎದೆ ಮ್ಯಾಗ ಮಣ್ಣ ಆಕೊಂಡ ಹೊರೋರು , ಮಣ್ಣ ಆಕೋರು ಇಲ್ಲದಾಯಂಗ ವತ್ತರಕ್ಕ ಹೋಗಕತ್ತವ್ ರೆ 
ನಮಗೂ ಆ ಕಿತ್ತೋದ್ದ ಕೋರೋಣ ಬರ್ಲಿ ಅಂತೀರಾ ..!? ಎಂದ ರಾಮಣ್ಣ  ಮತ್ತೊಬ್ಬ ರಚ್ಚಿಗ್ ಎದ್ದು ಟವಲ್ ಕೊಡವಿ,"" ಎನ್ರಲ ನನ್  ಸ್ವೊತಿ ಮಕ್ಳ ನಿಮ್ಗೆ ಎನ್ ಅಂದ್ರು ಅದು ಇದೀಯ ..!?. ಆ ನನ್ ವಾಲೆ ಸೆಲೆ ಎದ್ದು ಹೋಗ್ರಲ್ಲ ಕ್ಯಮೆ ನೋಡ್ರಿ ..! ನಮ್ಮ ಹಳ್ಳಿಯಾಗ ಕೋರೋಣ ಗೊರೋಣ ..! ಅಂತ ಊರ ಜನಕ್ಕೆ ಮಂಡೆ ಬಿಸಿ ಮಾಡ್ತಾ ಇದ್ದೀರಾ ..! ಎಂದು ಕಿರುಚಿ ಕೆಮ್ಮಿ ಮೋಟು ಬೀಡಿ ಹಿಡಿದು ನಿಂತ.

ಊರ ಬೀದಿಯಲ್ಲಿ ಒಬ್ಬ  ಉಸಿರು ಕಟ್ಟಿ ಕೆಮ್ಮುತ್ತ ಉಗಿಯಿತ್ತ ವಾಂತಿ ಮಾಡಿಕೊಂಡು ಬರ್ತಾ ಇದ್ದ ಇದನ್ನು ನೋಡಿದ ಜನ ಎಲ್ಲ ದೂರ ಹೋಗ್ಬಿಟ್  ನಾವು ಊರು ಬಿಟ್ಟು ಹೋಗೋಣ ಎಂದು ಸಣ್ಣ ಸಣ್ಣ ದ್ವನಿಯಲ್ಲಿ ದಿಟ್ಟವಾಗಿ ಮಾತಾಡುತ್ತಿದ್ದರು...

ಇನ್ನು ಕೆಲವರು ಮಾರಿ ಅವ್ವ ಕೋಪ ಮಾಡಿಕೊಂಡು ಇದಾಳೆ ಅದಕ್ಕ ಹಿಂಗೆ ಉರಾಗೆ ಮಂದಿ ಕೊರಗಿ ಹೊರಗಿ ಹೋಗ್ತಾ ಇದ್ದರೆ ಎಂದು ವಯಸ್ಸು ಆದ ಮುದುಕಿಯರು ನುಡಿದರು ..

ಹಾಗೆ ಅಮ್ಮನ  ಪೂಜೆಗೆ ಸಿದ್ಧವಾದ ಜನರು

ಜೇಡಿ ಮಣ್ಣು
ದಪ್ಪ ಕೆಂಪು ಕಣ್ಣು
ಅರಿಶಿಣ ಕುಂಕುಮ
ಕರಪೂರ ಕಡ್ಡಿ ಹೋಮ

ಕೋಳಿ ಕುರಿ 
ರಕ್ತ ಬಲಿ
ಬಂದ ಹೊಸ ನಾರಿ
ಬಿಟ್ಟಳು ಶಾಲಿ 

ಸಾಗಾಕುವ 
ಮಾರ ಅವ್ವ ನ
ಊರ ಕಾಯುವ
ದೇವಿಗೆ ನಮ್ಮ ನಮನ

ಹೀಗೆ ಒಂದಾಗಿ ಸೇರಿ ಮಾರಿ ಮಾಡಿ ರಕ್ತ ಬಲಿ ಕೊಟ್ಟರು
ಸಾಮ ರಸ , ಸಾರಾಯಿ , ಹೆಂಡ  ಕುಡಿದು ತೆಲಾಡಿ ಕುಣಿಯುತ್ತಿದ್ದರು ಆಗ ಒಬ್ಬ ವಯಸ್ಸು ಆದ ಮುದುಕ ಕೆಮ್ಮುತ್ತಾ ವಾಂತಿ . ಬೇದಿಕಿಂದ ಉಸಿರು ಗಟ್ಟಿ ಸತ್ತ ..ಸಾಯುವಾಗ ನರಲಾಡಿ  ಕೊರಗಿ ಆಯೋ ಅವ್ವ ಅವ್ವ ಅವ್ವ ಎಂದು ಎದೆ ಹಿಡಿದು ಕೊನೆಯಲ್ಲಿ ಉಸಿರು ನಿಂತು ಸದ್ದು ಇಲ್ಲದೆ ಆಯ್ತು. ಆಗ ಗಾಬರಿಗೊಂಡ ಊರ ಮಂದಿ ಅಂತರ ಕಾಪಾಡಿ ಕೊಂಡು ಬಂದರು ಹಾಗೆ ಊರಿನ ಕೆಲವು ಜನರು ವೈದ್ಯರನ್ನು ಸಂಪರ್ಕಿಸಿ ಕರೆತಂದು ಊರಿನ ಎಲ್ಲ ಜನರಿಗೂ ವ್ಯಕ್ಷಿನ್  ( ಲಸಿಕೆ) ಹ್ಯಾಕಿದರು ಆದ್ರೆ ಇದರಿಂದ ವಯಸ್ಸು ಆದ ಮುದುಕ ಮುದುಕಿಯರು ಸತ್ತರು ಮತ್ತು ನೋವುಗಳಿಂದ ನರಳಿ ಗೋಳಾಡಿದರು .. ಇದರಿಂದ ಇನ್ನೂ ಹೆಚ್ಚಿನ ಭಯ ಆತಂಕ ಉಂಟಾಗಿ .. "ಈ ಡಾಕ್ಟರ್ ಸುಳೆ ಮಕ್ಳು ಅವರ ಜೊತೆಗೆ ಈ ರಂಡಿ ಮಕ್ಳು ಪಂಚಾಯಿತಿ ಅವರು '" ಕೆರ ಕಳೇಚಿ ಕೊಂಡು ಆಕ್ಬೇಕ್ ಎಂದು ಜನ  ದೊಂಬಿ ಎದ್ದರೂ .! ಮನೆ ಗೆ ಸೂಜಿ ಚಿಕಿತ್ಸೆ ಕೊಡಲು ಬಂದವರಿಗೆ ಚಪ್ಪಲಿ ಸೇವೆ ಪೊರಕೆ ಸೇವೆ ಸಲ್ಲಿಸಿದರು ಬಂದ ಪೊಲೀಸರ ಬಟ್ಟೆ ಕಳಚಿ ಲೈಟ್ ಕಂಬಕ್ಕೆ ಕಟ್ಟಿ ಹೊಡೆದು ಹಟ್ಟಿ ಗೆ ಬಾರದ ಹ್ಯಾಂಗೆ ಮಾಡಿ ಬಿಟ್ಟರು ಈ ಪುರ ದ ಒಳಗೆ ಯಾರು ಸಹ ಬಾರದೆ ಹೋದರು ಯೋಚಿಸಿದ ಕೆಲವು ಮಂದಿ ಅವರು ಓದಿಲ್ಲ ಬರೆದಿಲ್ಲ ಆದ್ರೆ ಸಾಮಾನ್ಯ ಪ್ರಜ್ಞೆ ಅಷ್ಟೆ ಇದೆ ಇವರು ಜಿಲ್ಲಾ ಆಸ್ಪತ್ರೆ ಇಂದ ವೈದ್ಯರನ್ನು ( ನರರನ್ನ) ಕರೆಸಿ ಚಿಕಿತ್ಸೆ ಕೊಡಲು ಹೇಳಿದರು ಊರಿನ ಎಲ್ಲರೂ ಇದಕ್ಕೆ ಒಪ್ಪಿದರು ಎಲ್ಲರೂ ಅಂತರ ಕಾಪಾಡಿ ಕೊಂಡಿ ಬಂದರು  ಹೀಂಗ ಮಾಸ್ಕ್ ಹಾಕಿಕೊಂಡು ಇದ್ದರೂ ಆಗ ನೆನಪಾಯಿತು ಈರಣ್ಣ ಹೇಳಿದರು " ಅಜ್ಜ ನಾವು  ಹಿಂದಿನ ಕಾಲದಲ್ಲಿ  ದನ ಕರ ಗ್ಲೈಗೆ  ಕುಕ್ಕೆ ಹಾಕಿ ಇದ್ದರೆ ಈಗ ನಾವೇ ಬಾಯಿ ಕುಕ್ಕೆ ಹಾಕುವ ಗತಿ ಬಂದಿದೆ ಅಂದ್ರೂ ಅಜ್ಜ ಅವರು"" ಅವ್ನ್ ಅವ್ವನ್ ಯಾವ ಬ್ಲ ಈ ಕಾಯಿಲೆ ಕಂಡು ಹಿಡಿದದ್ದು ಇದು ಹೆಂಗ್ ಬರುತ್ತೆ ಎನ್ ಆಗುತ್ತೆ ಅಂತಾನೆ ಗೊತ್ತಿಲ್ಲ ಅಂದು ಬೈಯುತ್ತಿದ್ದರು .. 

ಮುಂದೆ  ಊರಹೊಳಗೆ ಅಕ್ಕಿ ಕೊಡುವ ಸ್ಥಳದಲ್ಲಿ ಜೇನಿನ ನ ಹ್ಯಾಂಗ ಗುಂಪು ಗಟ್ಟಿ ನಿಂತಿದ್ದರು ಒಬ್ಬರು ಮಾಸ್ಕ್  ಆಕಿಲ್ಲ್ಲ ದುರನು ಇಲ್ಲ ಮೊದಲು ಅಕ್ಕಿ ಕೊಡುವ ಆ ವ್ಯಕ್ತಿ ಹೆ ಆಕಿಲ್ಲಾ ಇದನ್ನು ಕಂಡ ಒಬ್ಬ ಅಜ್ಜ   "ಹೆ ಕೆಪ್ರುದುಳ್ಳೆ ಮಾಸ್ಕ್ ಅಕೋ ಮುದೇವಿ " ಎಂದರು ಅಲ್ಲಿ ನೆರೆದಿದ್ದವರ ಪಕರಿಸಿ ನಕ್ಕರು ಮತ್ತೆ ಅವರು ನಗೋ ನಿಮ್ ಬಾಯಿಗೆ ಮಾಸ್ಕ್ ಆಕದೆ ಇರೋ ನಿಮ್ ಎಲ್ಲರ ಬಾಯಿಗೆ ಎಲೇಮಕ್ಲು ಬ್ಯದೀ  ಆಕ್ಳಿ ಅಂದ್ರು .. ನೋಡಿ ಎಲ್ಲರೂ ಟವಲ್ ಸೀರೆ ಕೈ ಬಟ್ಟೆ ಕಟ್ಟಿ ಕೊಂಡ್ರು ಮತ್ತೆ ಒಬ್ಬ ಕುಡುಕ " ಅವನ್ ಅಜ್ಜಿ ಪಿಂಡ ಅವರ ಅಮ್ಮನ ಕೊನೆಯಲ್ಲಿ ಇದೀಯ ಕೋರೋಣ ಎಂದು ನಡುಗಿ ನುಳಿದಿ ಕೊಂಡು ಬರ್ತಾ ಇದ್ದ ಬಂದ ಪೋಲಿಸ್ ಮಾಮ್ ಲಾಟಿ ಎತ್ತಿ ಹಿಂದಕ್ಕೆ ಕೊಟ್ಟ ತಕ್ಷಣ ಕೂಡಿದ ನಿಷೆ ಇಳಿದು ನೆಟ್ಟಗೆ ಆದ .. 

ಹೀಗೆ ಅಲ್ಲಿ ಇದ್ದ ಅವಿದ್ಯಾವಂತರು ಬುದ್ದಿವಂತರಿಗೆ ಕೊರೊ ನ ಬಗ್ಗೆ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡ್ತಾ ಇದ್ದರು ಆದರೆ ಹಳ್ಳಿ ಜನ ಮೂಡನಂಬಿಕೆ ಯ ಮಣ್ಣು ಗೊಂಬೆಗೆ ಮೊರೆ ಹೋಗಿ ಇದ್ದರೂ .. 
ಮುಂದೆ  ಊರನ್ನು ಒಂದು ವಾರ ಲಕಡೌನ್ ಮಾಡಲಾಯ್ತು ಕೊನೆಗೆ ಊರಿನಲ್ಲಿ ಹೆಣಗಳ ಸಂಖ್ಯೆ ಕಮ್ಮಿ ಆಯ್ತು .. 

ಈ ಕತೆ ನೈಜ್ಯ ಇಲ್ಲಿ ಚಿತ್ರಣ ಗೊಂಡಿದೆ ..! 
ದಯವಿಟ್ಟು ಎಲ್ಲರೂ ಲಸಿಕೆ ಹಾಕಿಸಿ ಕೊಳ್ಳಿ 

 "ಘಟ ಇದ್ದರೆ ಮಠ ಕಟ್ಟಬಹುದು...!''

ಮುದ್ರಣದಲ್ಲಿ ತಪ್ಪಾಗಿದ್ದರೆ ಕ್ಷಮಿಸಿ...!
ಧನ್ಯವಾದಗಳು....!


                               ಅಂಜನ್ ಕುಮಾರ್ p r
                                ಪುರ ಹಾಗಲ ವಾಡಿ                                      ಗುಬ್ಬಿ ತಾಲೂಕು ತುಮಕೂರು ಜಿಲ್ಲೆ 
                             ದೂ:- ೭೪೮೩೧೪೬೬೯೭


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448241450 ಸಂಪಾದಕರು ವಿ ಮ ಸಾ ಪತ್ರಿಕೆ )

9 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...