ನಾಡು ನುಡಿ
ನಾಡು ನುಡಿಯ ಅಭಿಮಾನ
ಪೂಜಿಸು ಹೆತ್ತ ತಾಯಿ ಸರಿಸಮಾನ
ಕಾಪಾಡು ಇಬ್ಬರದು ಒಂದೇ ಮಾನ
ಉಳಿಸು ಸತ್ಯ ನ್ಯಾಯ ನೀತಿ ಧರ್ಮನ//
ನೂರು ವೇಷ ಹಾಕಿ ಮೆರದರು
ಹತ್ತು ಭಾಷೆ ಕಲಿತು ಅಲೆದರು
ತಾಯಿ ನಾಡು ನುಡಿ ಮರೆಯದಿರು
ಅದಾಗಿದೆ ಸ್ವಾಭಿಮಾನದ ತವರು//
ಸುಂದರ ಮಾಡಿಕೊ ಜೀವನ
ನೆನೆದು ಚೂರು ತ್ಯಾಗ ಬಲಿದಾನ
ಇಟ್ಟ ಹೆಜ್ಜೆ ಆಗಲು ಪಾವನ
ಅರಿ ಸಾಧು ಸಂತರ ಪ್ರವಚನ//
ಕನ್ನಡ ನಾಡಿನ ಇತಿಹಾಸ ಅರಿತರೆ
ಮುಖದಲಿ ಮುಡುವದು ನಗುವಿನ ಅಕ್ಕರೆ
ಇಂದಿಗೂ ಮಾದರಿ ಶೂರ ಧೀರ ಅರಸರೆ
ಶೌರ್ಯ ಅಮರ ಅಂದರು ಜಾಣ ಜನರೆ//
ಅನ್ನ ಬಟ್ಟೆ ನೀಡಿದ ನೆಲವನೆ
ಗೌರವ ತಂದುಕೊಟ್ಟ ಭಾಷೆಯನೆ
ಮಾಡಿಕೊ ಕಂದ ನಿನ್ನ ಮುಕುಟವನೆ
ನಂದನ ಆ ಬಂಧನ ತಿಳಿ ಕಂದನೆ//
✍️ಧ್ಯಾಮ್ ರಾಜ್.ವಾಯ್ಹ್. ಸಿಂದೋಗಿ, ಸಾ!ಭೈರಾಪೂರ, ತಾ!ಜಿ!ಕೊಪ್ಪಳ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ