ಶುಕ್ರವಾರ, ಜುಲೈ 30, 2021

ಚುಟುಕುಗಳು - ಭರತ್ ಕುಮಾರ್ ಆರ್ ಕೊಣನೂರು.

ಚುಟುಕುಗಳು

೧) ಪ್ರೀತಿ ಗೋಸ್ಕರ
ತಂದೆ ತಾಯಿನ ದೊರಮಾಡಬೇಡ
ಒಂದು ದಿನದ ಆಸೆಗೋಸ್ಕರ
ಇಡೀ ಜೀವನವನ್ನೇ ಹಾಳುಮಾಡಿಕೊಳ್ಳಬೇಡ
ಒಂದು ಬಾರಿ ಹಾಳಾದಜೀವನ
ಮತ್ತೆ ಎಂದಿಗೂ ಸಿಗುವುದಿಲ್ಲ
ಇದು ಜೀವನದ ಸತ್ಯ


೨) ವಿದ್ಯೆಯಲ್ಲಿ ಸರಸ್ವತಿಯಾಗಿ
ಗುಣದಲ್ಲಿ ಗುಲಾಬಿಯಾಗಿ
ನಗುವಲ್ಲಿ ತಾವರೆಯಾಗಿ
ಮನದಲ್ಲಿ ಮಲ್ಲಿಗೆಯಾಗಿ
ನಗುನಗುತ ಇರು ನೀ
ಗುರುವಿನ ಗುಲಾಮನಾಗಿ

೩) ಮನುಷ್ಯ ತಾಯಿ ಗರ್ಭದಲ್ಲಿ ಇದ್ದಾಗ
ಅವನಿಗೆ ಉಸಿರು ಇತ್ತು ಹೆಸರು ಇರಲಿಲ್ಲ
ತಾಯಿ ಗರ್ಭದಿಂದ ಹೊರ ಬಂದಮೇಲೆ ಹೆಸರು ಬಂತು
ಅದೇ ಸಾಯುವಾಗ ಹೂಸಿರು ನಿಂತು ಹೆಸರು ಉಳಿಯುತದೆ
ಆ ಹೆಸರು ಉಳಿಯ ಬೇಕಾದರೆ
ಉಸಿರು ಇದಾಗಲೇ ಏನಾದರು
ಸಾಹಸ ಮಾಡು ನಿನ್ನ ಉಸಿರು
ನಿಂತರು ನಿನ್ನ ಹೆಸರು ಉಳಿಯುತದೆ

೪) ಕಾಲೇಜಿಗೆ ಹೊಗ್ಗಿದೆ ನೆನ್ನೆ
ಅಲ್ಲಿ ಸಿಕ್ಕಿದಳು ಒಬ್ಬಳು ಕನ್ನ್ಯೆ
ಅವಳ ನೋಡುತ್ತಾ ನಿತ್ತೆ ನನ್ ಅಲ್ಲೇ
ಅವಳ ಪರಿಚಯ ವಾಯಿತು ಅಲ್ಲೇ
ನಾ ನೋಳಿಯುತ ನೀತಿದ್ದೆ ಅಲ್ಲೇ
ನೋಳಿಯುತ  ತಲೆ ಬಗ್ಗಿಸಿದೆ ಅಲ್ಲೇ
ತಲೆ ಬಗ್ಗಿಸಿದ ಕೊಡಲೇ ಕಂಡಿತು
ನನಗೆ ಅವಳ ಕಾಲಿನ ಕಾಳು ಉಗ್ಗೂರದ ಗೆಜ್ಜೆ
ಆಗಲೇ ತಿಳಿಯಿತು ನನಗೆ
ಲಾಕ್ ಡಾವ್ನ್ ಟೈಮ್ ನಲ್ಲಿ ಅಗ್ಗಿತು ಅವಳ ಮದುವೆ
ಅಲ್ಲಿಂದ ಹೊರಟೆ ನಾ ಮೆಲ್ಲನೆ ಕ್ಲಾಸ್ ರೋಮ್ ಒಳಗೆ

೫) ಏ ಹೂವೆ ನೀ ಎಷ್ಟು ಸುಂದರ
ನಿನ್ನನು ನೋಡಿ ಇಷ್ಟ ಪಡದ ಮನಸುಗಳೇ ಇಲ್ಲ
ಎಲ್ಲರನು ಅಕರ್ಷಿಸುವ ನೀ ಎಷ್ಟು ಸುಂದರ
ನೀ ಅರಳಿದಾಗ ನಿನ್ನನು ಜೋಪಾನ ಮಾಡದ ಕೈಗಳೇ ಇಲ್ಲ
ಅದೇ ನೀ ಒಂದು ಬಾರಿ ಬಾಡಿ ಹೋದರೆ
ನಿನ್ನನು ಬಿಸಡದ ಜಾಗಾಗಲೇ ಇಲ್ಲ
ಹಾಗೆ ಮನುಷ್ಯನ ಜೀವನವು 
ಒಬ್ಬ ವ್ಯಕ್ತಿ ಒಂದು ಸ್ಥಾನದಲಿ ಇದ್ದರೆ
ಅವನ ಜೀವನವು ಸುಂದರ ವಾಗಿರುತ್ತದೆ
ಅವನನ್ನು ಪ್ರೀತಿಸದ ಜನಗಳೇ ಇಲ್ಲ
ಅದೇ ಅ ವ್ಯಕ್ತಿ ಒಂದು ಬಾರಿ ಅ ಸ್ಥಾನ ದಿಂದ ಕೆಳಗೆ ಇಲಿದರೆ
 ಅವನನ್ನು ತುಳಿಯದ ವ್ಯಕ್ತಿ ಗಳೇ ಇಲ್ಲ
ಇದುವೇ ಜೀವನ

೬)ನಾವು ಎಷ್ಟೆ ಸೌoದರ್ಯವಾಗಿದ್ದರು
ನಮ್ಮ ಮುಖದಲ್ಲಿ ಒಂದು
ನಗು ಇಲ್ಲದಿದ್ದರೆ ಅ ಸೌoದರ್ಯ ವ್ಯರ್ಥ
ಹಾಗೆ ಮನುಷ್ಯ ತನ್ನ ಜೀವನ ವನ್ನು
ರೂಪಿಸಿ ಕೊಳ್ಳ ದಿದ್ದರೆ ಅ ಜೀವನವೇ ವ್ಯರ್ಥ

- ಭರತ್ ಕುಮಾರ್ ಆರ್
ಕೊಣನೂರು

✍️✍️✍️✍️✍️

1 ಕಾಮೆಂಟ್‌:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...