ಶನಿವಾರ, ಜುಲೈ 10, 2021

ಸಲಹು ತಾಯೆ (ಕವಿತೆ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ಸಲಹು ತಾಯೆ

ಒತ್ತಾರೆ ಎದ್ದು ನಾವು ಭಕ್ತಿಯಿಂದ ನಮಿಪೆವು 
ಭೂತಾಯವ್ವ ರೈತರನ್ನ ಸಲಹವ್ವ 
ಜಗದ ಪ್ರಾಣ ಕಣ್ಣು ಇವನವ್ವ 
ಇವನಿದ್ದರೆ ಜಗವು ಇರುವುದವ್ವಾ
              ॥ ಪಲ್ಲವಿ ॥ 

ಮೂಡಣದಿ ನೇಸರನ ಕಿರಣ ಬಿದ್ದಾವ ।
ಜವರಾಯನ ಮಳೆಹನಿ ಚಿಮ್ಮಿ ನಿಂತಾವ ।
ಹದವಾದ ಹೊಲಗಳು ಮುದದಿಂದ ಕರೆದಾವ ।
ಬಿತ್ತನೆಯ ಸುಗ್ಗಿಗೆ ನಾಚಿ ನಿಂತಾವ ।
                ॥ಪಲ್ಲವಿ ॥
                              
ಜೋಡಿ ಎತ್ತುಗಳು ಗೆಳೆಯರಾಗ್ಯಾವ ।
ಬಿಸಿಲು ಮಳೆಗಂಜದೆ ಜೊತೆಯಾಗಿ ನಿಂತಾವ ।
ಸುಗ್ಗಿ ಕಾಲಕ್ಕೆ ಗೆಜ್ಜೆಯಲ್ಲಿ ಹಿಗ್ಗಿ ಕುಣಿದಾವ ।
ಹಗಲಿರುಳೆನ್ನದೆ ನಿನ್ನ ನೆರವಿಗೆ ಬಂದಾವ ।
॥ಪಲ್ಲವಿ ॥

ಜಗಕೆಲ್ಲ ಧಾನ್ಯವ ಬೆಳೆಯುವ ದೇವರೇ ।
ಜನರೊಳಿತಿಗಾಗಿ ಇರುವ ಅನ್ನದಾತರೇ।
ಮಡದಿ ಮಕ್ಕಳೆಲ್ಲಾ ಸೇರಿ ದುಡಿಯುತಲಿರುವಿರಿ ।
ಹಸಿದರೊಡಲಿಗೆ ಅನ್ನವನಿಕ್ಕುವಿರಿ ।
                ॥ಪಲ್ಲವಿ॥

ಕನಸು ಕಾಣುತ್ತಲಿರುವ ಅನ್ನದಾತ ನಿತ್ಯವೂ ।
ಬದುಕು ಬಂಗಾರದಂತಾಗುವುದು  ಸತ್ಯವು ।
ಮಣ್ಣಿನ ಮಕ್ಕಳಿಗೆ ಕಣ್ಣೀರು ಯಾಕವ್ವಾ ।
ಪನ್ನೀರು ಹರಿಯಲಿ ದಾರಿ ತೋರವ್ವಾ ।
                ॥ಪಲ್ಲವಿ॥
     
  - ಸುಮಂಗಲಾ ಕೃಷ್ಣ ಕೊಪ್ಪರದ 
ಶಿಕ್ಷಕಿ ಎ.ಸಿ.ಒ ಕನ್ನಡ ಮಾಧ್ಯಮ ಪ್ರೌಢಶಾಲೆ ಇಲಕಲ್ಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...