ಮಣ್ಣಿನ ಬಸವ
ಪೂಜೆಯ ಮಾಡಿಹೆನು ನಾನಿಂದು ರೈತನ ಮನೆ ಮಗನನ್ನು, ಮಣ್ಣಲ್ಲಿ ಮಣ್ಣಾಗಿ ದುಡಿಯುವ ಮನೆಯ ಮಗನನ್ನೂ.
ಮೂಕನಾಗಿ ದುಡಿಯುತ್ತಿರುವ ದೇವನನ್ನು, ಕಲಿಯುಗದ ಕಾಮಧೇನುವನ್ನು ಕರುಣಾಕರ ಮೂರ್ತಿಯನ್ನು ಪೂಜೆಯ ಮಾಡುತಿಹನು.
ನಿನ್ನ ಅಂಗಾಲನ ಮಣ್ಣ ತೆಗೆದು
ಮೂರ್ತಿಯ ಮಾಡಿ, ಪೂಜೆ ಮಾಡುತ್ತಿರುವೆನು. ನಿನ್ನ ಶೃಂಗಾರವ ಮಾಡಿ ಕಣ್ತುಂಬ ನೋಡುತ್ತಿರುವೆ.
ಮುಂದಿನ ಜನ್ಮಕ್ಕೆ ನಿನ್ನ ಮನೆ ಆಳಾಗಿ ಬಂದ ಸೇವೆಯ ಮಾಡುವೆ. ನಿನ್ನ ಋಣವ ತೀರಿಸುವೆ.
- ದಾನೇಶ್ವರಿ ಬಸವರಾಜ ಶಿಗ್ಗಾವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ