ನಮ್ಮ ಬಾಲ್ಯದಲ್ಲಿ ಯುಗಾದಿ ಸಂಭ್ರಮ
ಬ್ರಹ್ಮಾಂಡದ ಸೃಷ್ಟಿಯ ಮೊದಲ ರವಿಯ ಕಿರಣ ।
ಯುಗಾದಿಯ ಹೊಸ ವರುಷದ ಆರಂಭದ ಕ್ಷಣ ।
ಕೊಪ್ಪಳ ಜಿಲ್ಲೆಯ ಪುಟ್ಟ ಗ್ರಾಮ ಅಳವಂಡಿ ।
ಬಾಲ್ಯವ ಕಳೆದೆನಿಲ್ಲಿ ಅಮ್ಮನ ಮಡಿಲಲ್ಲಾಡಿ ।
ಎಳ್ಳೆಣ್ಣೆ ಸ್ನಾನ ಮಾಡಿ ಹೊಸ ಲಂಗ ರವಿಕೆ ಧರಿಸಿ ।
ಮಾರುದ್ದ ಜಡೆ ಹೆಣೆದು ರಿಬ್ಬನ್ನಿನಿಂದ ಸಿಂಗರಿಸಿ।
ಕಾಲ್ಗೆಜ್ಜೆ ಹಾಕಿ ಹೆಜ್ಜೆಯ ಸದ್ದು ಮಾಡುತ।
ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟುತ ।
ಸಗಣಿ ಗೋಮೂತ್ರದಿ ಸಾರಣೆಯ ಮಾಡಿದೆವು ।
ರಂಗೋಲಿಯ ಚಿತ್ತಾರ ಬಿಡಿಸಿ ನಕ್ಕು ನಲಿದೆವು.।
ಹೂವು ಹಣ್ಣು ಕಾಯಿ ಕರ್ಪೂರದಿ ದೇವರ ಆರಾಧನೆ।
ಹೋಳಿಗೆ ಪಾಯಸ ಬೇವು ಬೆಲ್ಲದ ಸಮರ್ಪಣೆ ।
ಹಣ್ಣೆಲೆಗಳುದುರಿ ಗಿಡದಿ ಚಿಗುರೆಲೆಗಳು ನಾಚಿನಿಂತವು ।
ಹಸಿರಸಿರಿಗೆ ನಸು ನಾಚುತಲಿ ಗೆಳತಿಯರೆಲ್ಲಾ ಕೂಡಿ ನಲಿದೆವು।
ಬೇವು ಬೆಲ್ಲ ಸವಿಯುವ ನಮ್ಮ ತಲೆ ನೇವರಿಸಿದಳಮ್ಮ ।
ಕಷ್ಟ-ಸುಖಗಳೇನೇ ಬರಲಿ ಎದೆಗುಂದದಿರಿಯಂದನಪ್ಪ।
ಶಾಲೆಯ ಮೇಷ್ಟ್ರುಗಳ ಮನೆ ಮನೆಗೆ ತೆರಳಿದೆವು ।
ಬೇವು-ಬೆಲ್ಲವ ನೀಡುತ ಹೊಸವರುಷದ ಶುಭ ಕೋರಿದೆವು।
ವರುಷಕೊಂದು ಹೊಸತು ದಿನ ಸವಿನೆನಪಿನ ಕಂಪನ।
ಯುಗ ಯುಗಾದಿ ಕಳೆದರೂ ಬಾಲ್ಯದ ಸಂಭ್ರಮದಾಲಿಂಗನ।
- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ. ಶಿಕ್ಷಕರು ಎಸಿಒ ಪ್ರೌಡ ಶಾಲಾ ವಿಭಾಗ ಇಳಕಲ್ಲ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ