ಶನಿವಾರ, ಸೆಪ್ಟೆಂಬರ್ 4, 2021

ಶಿಕ್ಷಕರ ದಿನಾಚರಣೆ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ, ಪಾವಗಡ ತಾ ತುಮಕೂರು ಜಿ.

ಶಿಕ್ಷಕರ ದಿನಾಚರಣೆ
ಕಲಿಸಿದ ಗುರುವಿನ ಹಿರಿಮೆಗೆ ಗರಿಮೆಯ ದಿನವು
ಖುಷಿಯಲಿ ತೇಲುತ ಸಾಗಿದೆ ಮಗುವ ಮನವು
ಅಕ್ಷರ ಮಂತ್ರವ  ತಲೆಯಲಿ ಬಿತ್ತಿ ಜ್ಞಾನವ ಮೂಡಿಸಿದ
ಮನುಕುಲವ ಬೆಳಗಿದ ದೇವರ ಪ್ರತಿರೂಪ
ಗುರುವೇ ನಿನಗಿದೋ ಕೋಟಿ ಕೋಟಿ ನಮನ.||

ಗುರುವಿನ ದಿನಕೆ ರಾಧಾಕೃಷ್ಣನ್ ರ ಹೆಸರಿನ ಸ್ಮರಣೆ
ಕಲಿಕಾ ಕಾಯಕದಿ ತೊಡಗಿದ ಗುರುವಿಗೆ ಪ್ರೇರಣೆ
ಹೆಸರ ಬಯಸದ ಕಾಯಕಯೋಗಿಯೇ ಗುರುವು
ನಭದಿ ಗುರುವಿಗೆ ಯಾರಿಹರು ಸರಿಸಮವು
ಗುರುವೇ ನಿನಗಿದೋ ಕೋಟಿ ನಮನ.||

ಮಕ್ಕಳ ಮನಸಲಿ ಜ್ಞಾನ ಗಳಿಕೆಯ ಕಿಡಿಯ ಹೊತ್ತಿಸಿ
ಅವರವರ ಭವಿಷ್ಯವ ಬೆಳಗುವ ಮಾರ್ಗವ ತೋರಿಸಿ
ಮಕ್ಕಳ ಮನಸಲಿ ಚೇತನ ಶಕ್ತಿಯ ತುಂಬುತ ಸಾಗಿ
ಸನ್ನಡತೆಯ ಕಲಿಸಿದೆ ಗುರು ಹಿರಿಯರಿಗೆ ಬಾಗಿ
ಗುರುವೇ ನಿನಗಿದೋ ಕೋಟಿ ನಮನ.||

ಸಕಲ ದೇವಗಣಕೂ ಗುರುವೇ ಆದಿಯು
ಸಾಧನೆ ಛಲದ ಮನಕೆ ಹಾದಿಯ ಕನ್ನಡಿಯು
ಸರಳ ಸಜ್ಜನಿಕೆಗೆ ಗುರುವೇ ಜೀವನ ಪಾಠವು
ಓಂ ಮಂತ್ರವ ಕಲಿಸಿ ಬಾಳ ಬೆಳಗಿದ ದಾರಿದೀಪವು
ಗುರುವೇ ನಿನಗಿದೋ ಕೋಟಿ ನಮನ. ||

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659  ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...