ಮಂಗಳವಾರ, ಅಕ್ಟೋಬರ್ 5, 2021

ಬದುಕು ದೂರ (ಕವಿತೆ) - ಮಧು. ಕೆ. ಬಿ (ಭಾವುಕ ಮನ) ಕೊತ್ತತ್ತಿ, ಮಂಡ್ಯ.

ಬದುಕು ದೂರ
           
 ಬೆತ್ತಲ ಬಾಳಲಿ ಕತ್ತಲ ಬದುಕಲಿ.
ಎತ್ತ ನೋಡಲಿ  ದಶದಿಕ್ಕಿನಲ್ಲಿ.
ಬದುಕಿನ ಪಯಣದಲ್ಲಿ//

ಚಿಗುರೊಡೆಯುವ ಕಣ್ಣುಗಳಲ್ಲಿ.
 ಕನಸು ಬಾಡಿದ ಹೃದಯ ಮಂದಿರದಲ್ಲಿ.
ಚಾಮರ ಹಿಡಿದು ನಿಂತಿದೆ ಬದುಕಿನ ಬಂಡಿಯಲ್ಲಿ.//

ಬಣ್ಣದ ತೇರಲಿ ಸಿಂಗಾರ ಇಲ್ಲದ ಬದುಕಲ್ಲಿ.
ಹೊರಟಿದೆ ಮರುಭೂಮಿಯ ಕಡಲಿನಲ್ಲಿ.
ಬತ್ತಿದೆ ಮಮತೆಯ ಮಡಿಲಲ್ಲಿ.//

ತುಂಡು ಹೊಟ್ಟೆಗೆ ತೃಪ್ತಿ ಇಲ್ಲದ ಬದುಕಲಿ.
ಕನಸಿಲ್ಲದ ಜೋಕಾಲಿಯಲ್ಲಿ.
ಮೆರವಣಿಗೆ ಹೊರಟಂತೆ ಕಣ್ಣೀರ ಕಡಲಲ್ಲಿ.//

         
- ಮಧು. ಕೆ. ಬಿ (ಭಾವುಕ ಮನ) ಕೊತ್ತತ್ತಿ, ಮಂಡ್ಯ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...