ಬಾಳ ದಾರಿಯಲ್ಲಿ ಬರುವ ಕಷ್ಟಗಳಿಗೆ
ಅಳುಕದೇನೆ ಒಂದು ಘಳಿಗೆ
ನಂಬಿಕೆ/ಭರವಸೆ ಗಳ ದಿವಟಿಗೆ ಹಿಡಿದು
ನಡೆ ಓ ಮನವೆ ಬೆಳಕಿನೆಡೆಗೆ.!!
ಜ್ಞಾನದ ಬೆಳಕಿನಿಂದ ಮರೆಯಾಗಬೇಕು
ನಮ್ಮ ಮನದಲ್ಲಿನ ಅಂಧಕಾರ
ಉತ್ತಮ ನಡೆ ನುಡಿಗಳಿಂದ ಆಗಬೇಕು
ನಮ್ಮಯ ಬದುಕು ಸಾಕ್ಷಾತ್ಕಾರ.!!
ಜೀವನದಿ ಎಷ್ಟೇ ಕಷ್ಟಗಳು ಎದುರಾದರು
ಕುಗ್ಗದಿರಲಿ ನಮ್ಮ ಆತ್ಮವಿಸ್ವಾಸ
ಛಲದಿಂದ ಮುನ್ನುಗ್ಗಿ ಗೆಲುವನು ಸಾಧಿಸಿ
ನಿರ್ಮಿಸಬೇಕು ಹೊಸ ಇತಿಹಾಸ.!!
- ಶಿವಾನಂದ ಭಾಗಾಯಿ , ಬೆಳಗಾವಿ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ