ಶನಿವಾರ, ಡಿಸೆಂಬರ್ 11, 2021

ಆಧುನಿಕ ವಚನಗಳು - ಸೂಗಮ್ಮ ಡಿ ಪಾಟೀಲ್.

ಅಂಬುಗಳ ಶೂಲ

ಅಂಬುಗಳ ಶೂಲದಿ ಜಗದಿ ತಿವಿದು ಬೀಳಿಸುವರಯ್ಯ
ಅಲ್ಪಮತಿಯಾದರೂ ಜ್ಞಾನಿಯಂತೆ ಕಂಗೊಳಿಸುವರಯ್ಯ
ಸುಜ್ಞಾನಿಗಳ ಕಂಡರೆ ಅಜ್ಞಾನಿಯೆಂದು ಆಡಿಕೊಳ್ಳುವರಯ್ಯ
ಸುಳ್ಳಾಡುತ್ತಲೇ ಸತ್ಯವಂತರೆಂದು ಗುರುತಿಸಿಕೊಳ್ಳುವರಯ್ಯ
ನಿತ್ಯದಿ ಧರ್ಮದಿಂದ ಇರುವವರಿಗೆ ಬೆಲೆ ಎಲ್ಲಿಹುದಯ್ಯ
ಮೇಲೇರುವ ತವಕ ಕೊನೆಗಾಣಿಸುವರಯ್ಯ
 ಶ್ರೀ ಮಹೇಶ್ವರ//

ಮಾಯಾ ಮನೆ

ಮಾಯಾ ಮನೆಯೊಳಗೆ ಬಂದಿಯಾಗಿರುವೆನಯ್ಯ
ನಿಜದಿ ಮನೆ ಅಲ್ಲಿಹುದು                ಎಂಬುದನ್ನೇ ಮರೆತಿಹೆನಯ್ಯ
ನಾನು ನನ್ನದೆಂಬ ಮೋಹದಲಿ
ಬೇಯುತಿಹೆನಯ್ಯ
ಯಾವುದೂ ಬಾರದು
ನಮ್ಮೊಂದಿಗೆಂಬುದ ಅರಿತಿಲ್ಲವಯ್ಯ
ದ್ರವ್ಯದ ಸಂಗ್ರಹವೇ ಯುಗದಿ ದೊಡ್ಡದಾಯಿತಯ್ಯ
ಧನದಾಹ ಅವನತಿಯ ಮೂಲವಯ್ಯ
ಶ್ರೀ ಮಹೇಶ್ವರ //
  - ಸೂಗಮ್ಮ ಡಿ  ಪಾಟೀಲ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...