ಶನಿವಾರ, ಜನವರಿ 15, 2022

ಅಪ್ಪ (ಕವಿತೆ) - ರಾಮಲಿಂಗ ಮಾಡಗಿರಿ.

ಹರಿದ ಅಂಗಿ ಕಚ್ಚೆ ತೊಟ್ಟು
ಕುರುಚಲು ಗಡ್ಡ-ಮೀಸೆ ಬಿಟ್ಟು
ಉರಿ ಬಿಸಿಲಲ್ಲಿ ಬರಿಮೈಲಿ ನಿಂತು
ಬೆವರ ಹನಿಯ ನೆಲಕ್ಕೆ ಬಸಿದು

ಜೀವನ ಜಂಜಾಟಕ್ಕೆ ಸಿಕ್ಕು ವಿದ್ಯೆಯಿಂದ ವಂಚಿತವ
ಮಕ್ಕಳಿಗೆ ಜ್ಞಾನದ ಸುಧೆ ಎರೆದವ
ಆಸೆ-ಆಕಾಂಕ್ಷೆಗಳಿಗೆ ತರ್ಪಣವ ಬಿಟ್ಟು
ತನ್ನವರಿಗಾಗಿ ಜೀವನವನ್ನೇ ಮುಡಿಪಾಗಿಟ್ಟವ

ತಾನುಣ್ಣುವ ತುತ್ತಲಿ
ಮನೆಯೊಡತಿ-ಮಕ್ಕಳ ಹೊಟ್ಟೆ ತುಂಬಿಸಿ
ಹಸಿದೊಟ್ಟೇಲಿ ಮಲಗಿದವ
ಹೊಟ್ಟೆತುಂಬಿತೆಂದವ

ಮಕ್ಕಳು ಬಿಟ್ಟ ಎಂಜಲನ್ನು ಪ್ರೀತಿಯಿಂದ ಉಂಡವ
ಕಣ್ಣೀರಲಿ ಕೈತೊಳೆದು ಪ್ರೇಮದಿಂದ ಸಲುಹಿದವ
ಕಷ್ಟಗಳೆಂಬ ಶರಗಳಿಗೆ ಕವಚವಾಗಿ ಮುಗ್ಗರಿಸಿದವ
ಮೈಯೊಳಗಿನ ರಕ್ತ ಬಸಿದು ಸಿರಿಸಂಪತ್ತ ಗಳಿಸಿದವ

ಮಮತೆ-ಸ್ಪೂರ್ತಿಯ ಸೆಲೆಯಾಗಿ
ಪ್ರೇಮದ ಜ್ಯೋತಿಯಾಗಿ
ಬಾಳೆಂಬ ಗಾಣಕ್ಕೆ ಎತ್ತಾಗಿ ಸವೆದವ
ಮನೆತನದ ಗೌರವವನ್ನು ಕಣ್ರೆಪ್ಪೆಯಾಗಿ ಕಾಯ್ದವ.
                             -ರಾಮಾ.
               (ರಾಮಲಿಂಗ ಮಾಡಗಿರಿ).  


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...