ಭಾನುವಾರ, ಜನವರಿ 30, 2022

ಪ್ರೇಮ ವಿರಹ (ಕವಿತೆ) - ಶ್ರುತಿ ಚಂದ್ರು ಎಸ್

  ನೋಡದೆ ಇರಲಾರೆನು ಪ್ರೀತಿಯ ಕೊಡಲಾರೆನು ಮರೆತು ಬದುಕಲಾರೆನು ಅಗಲಿಕೆಯನ್ನು ಸಹಿಸಲಾರೆನೂ
 ॥  ಇದೆಂಥ ವಿಚಿತ್ರ ॥

ಮನಸ್ಸಿನಲ್ಲಿ ತುಂಬಿದೆ ನೋವುಗಳು 
ಸೇರುತ್ತಿಲ್ಲ ಊಟ ಉಪಚಾರಗಳು ನಗುವುದನ್ನೇ ಮರೆತಿದೆ ಈ ಮನವು ॥

ಏಳಲಾರದ ದುಗುಡ ದುಮ್ಮಾನವು
 ನೋವು ತರಿಸಿದೆ ಮನಸ್ಸಿನ ಭಾವನೆಗಳು ಕಾಡಿಸುತ್ತಿವೆ
 ಆದ  ಕ್ಷಣಗಳು ॥

ಊಹಿಸಿಕೊಳ್ಳಲಾರದ ವಿಚಿತ್ರ ಅನುಭವಗಳು !
ಇದೇನೂ ಅಂಥ ತಿಳಿಯಲಾರದದೆನು  ನಾನೀಗ ।
॥ಒಲವೇ ॥

ಉತ್ತರಿಸು  ಬಳಿ ಬಂದು
          ನೀನೀಗ !
    - ಶ್ರುತಿ ಚಂದ್ರು ಎಸ್., ಕೊಟ್ಟೂರು .


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

1 ಕಾಮೆಂಟ್‌:

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...