ಭಾರತಾಂಬೆಯ ಹೆಮ್ಮೆಯ ಸುಪುತ್ರನೇ
ದೇಶದ ಕೆಚ್ಚೆದೆಯ ಕಲಿಯೇ
ಯುವಜನರ ಮುತ್ತಿನ ಮಾಣಿಕ್ಯನೇ
ಭಾರತದ ಚೇತನ ಶಕ್ತಿಯೇ ||
ನೀನು ಯಾರಿಗೂ ಅಂಜದ ವೀರ
ಸ್ವಾತಂತ್ರ್ಯ ಪಡೆಯಲು ಹೋರಾಡಿದ ಧೀರ
ಯೌವ್ವನದಲ್ಲಿ ನೀನು ಕಂಡೆ ನೂರಾರು ಕನಸು
ಯುವಕರ ಪಾಲಿಗೆ ಈಗ ಕನಸೇ ನನಸು ||
ಅಪ್ರತಿಮ ದೇಶಭಕ್ತನೇ
ಭಾರತಾಂಬೆಯ ವೀರ ಸೇನಾನಿಯೇ
ಬ್ರಿಟೀಷರ ಪಾಲಿಗೆ ಶಕ್ತಿಯ ಚೆಂಡೇ
ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಗಂಡೇ ||
ಕೋಟ್ಯಾಂತರ ಜನರಿಗೆ ಸ್ಪೂರ್ತಿಯೂ
ದೇಶದ ಅಪ್ರತಿಮ ದೇಶಭಕ್ತನೂ
ಇತಿಹಾಸ ಪುಟದಲ್ಲಿ ಉಳಿದಿರುವ ಶೂರನೂ
ನಿನ್ನ ಸಾವು ಇಂದಿಗೂ ನಿಗೂಢವೂ ||
ನೇತಾಜಿ ಎಂಬ ಹೆಮ್ಮೆ ಅಮರ
ಈ ನಾಡಲ್ಲಿ ನೀನು ಸಮರ
ನಮ್ಮ ನಾಡಿನ ಕೆಚ್ಚೆದೆ ಹುಲಿಯೇ
ನಿನಗೆ ನನ್ನ ಕೋಟಿ ವಂದನೆ ||
- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ