ಶನಿವಾರ, ಫೆಬ್ರವರಿ 25, 2023

ಶರೀಫನ ತಂಬೂರಿ (ಕವಿತೆ) - ಮಹಮ್ಮದ್ ರಫೀಕ್, ಕೊಟ್ಟೂರು.

ನನ್ನ‌ ಪ್ರಶ್ನೆಗಳಿಗೆ ಅವರು ಉತ್ತರ  ನೀಡಲಿಲ್ಲ
ಅವರೂ ಪ್ರಶ್ನೆಗಳಲ್ಲೇ ಉತ್ತರಿಸಿದರು
ಪ್ರಶ್ನೆಗೆ ಪ್ರಶ್ನೆಯೇ ಉತ್ರರವಾದೀತೇ?

ಉತ್ತರಗಳಿಲ್ಲದ ಪ್ರಶ್ನೆಗಳು
ನನ್ನ ಬಳಿಯೂ ಇರುವಾಗ 
ನನ್ನದೂ ತಪ್ಪಲ್ಲವೆಂದು ಹೇಗೆ ಹೇಳಲಿ?

ಹಾಗೇ ಅಳು ಒತ್ತರಿಸಿ
ಬರುತ್ತಿದೆ
ಹೃದಯದ ಭಾರ ಹೆಚ್ಚುತ್ತಿದೆ
ಮನದಾಳದ ದು:ಖ ನೋವುಗಳಿಂದಲ್ಲ
ನನ್ನವರು ದೂರವಾಗುತ್ತಿದ್ದಾರೆಂಬ ದುಗುಡದಿಂದ

ತಪ್ಪು ಒಪ್ಪುಗಳ ನಡುವೆ
ಒಪ್ಪವಾಗಿಹ ಬದುಕು
ಪ್ರಶ್ನೆಗಳಲೇ ಕಂದಕವಾಗದಿರಲಿ
ನಾನು ನಿನಗೆ ಸೋಲಬೇಕೆಂದಿದ್ದೆ
ನನ್ನೊಳಗಿನ ನೀನು ಸೋಲಲಿಲ್ಲ
ನಾನು ಗೆಲ್ಲಲಾಗುತ್ತಿಲ್ಲ!

ಶರೀಫನ  ತಂಬೂರಿ ಶೃತಿ ಹಿಡಿಯಬೇಕಿದೆ
ನನ್ನ ಮನೆಯಂಗಳದ
ಮಣ್ಣಿನಲಿ ಒಡಮೂಡಿದ
ಗಣೇಶ ಪಕ್ಕದ ಮನೆಯ
ಗೌರಿಯ ತೊಡೆಯೇರಿ ಕುಳಿತಿರಲು

- ಮಹಮ್ಮದ್ ರಫೀಕ್, ಕೊಟ್ಟೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...