ಮಂಗಳವಾರ, ಮಾರ್ಚ್ 11, 2025

ನಾ ಕಂಡಂತೆ ಭವ್ಯ ಸುಧಾಕರ್ ಜಗಮನೆ...

ನಾ ಕಂಡಂತೆ ಭವ್ಯಸುಧಾಕರ್ ಜಗಮನೆ...


 ಅಂದು ನಾನು ಕೊರೊನಾ ಎಂಬ ನರಕಯಾತನೆಯಿಂದ ಹೊರಬಂದು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಸಮಯ ಯಾರು ಸ್ನೆಹಿತರು ಇಲ್ಲದೆ ಪುಸ್ತಕಗಳ ಜೊತೆ ಒಂಟಿ ಪಯಣಿಗಳಾಗಿದ್ದೆ. ಒಂದು ದಿನ ಒಂದು ಮೆಸೆಜ್ ಬಂತು ಅದು ವಡ್ಡಾರಾಧನೆಯ ಕೃತಿ ಮೊದಲು ಸಂಪಾದನೆ ಮಾಡಿದವರು ಯಾರು ಎಂದು ಪ್ರಶ್ನೆ ಯಾಗಿತ್ತು ಪುರುಷರು ಇರಬಹುದು ಎಂದು ತಿಳಿದು ನಾನು ರಿಪ್ಲೈ ಮಾಡದೆ ಇರುವಾಗ ನಂತರ ಡಿಲಿಟ್ ಮಾಡಿದರು ಏಕೆ ಡಿಲಿಟ್ ಮಾಡಿದ್ದು ಎಂದು ನಾನು ಮರು ಪ್ರಶ್ನೆ ಕೆಳುತ್ತಾ, ನಮ್ಮ ವಡ್ಡಾರಾಧನೆ ಚರ್ಚೆ ಸಾಗಿತ್ತು ಅವರ ವಾಟ್ಸಪ್ ಮತ್ತು ಟೆಲಿಗ್ರಾಂ ಡಿಪಿ ವಿಶ್ವಶಾಂತಿಯೇ ಇಷ್ಟೇ ಹೆಸರು ನನಗೆ ಗೊತ್ತಿತ್ತು ಒಬ್ಬೊರನೊಬ್ಬರು ನೊಡದ ವೈಯಕ್ತಿಕ ವಿಷಯ ಗೊತ್ತಿರದ ಯಾವ ಜಿಲ್ಲೆಯವರು ಎಂದು ಕೂಡಾ ತಿಳಿಯದವರು ಆದ ನಾವು ನಮ್ಮ ಸ್ನೇಹ ಪಯಣ ಮಂದುವರೆಸಿದೆವು. ನಾವು ಅಪರಿಚಿತರು ಇದ್ದರು ಪರಿಚಿತರಾದೆವು. ಅವರು ನನಗೆ ಅಪರಿಚಿತರು ಹೊಸ ಪರಿಚಯ ಅಂತ ಯಾವಾಗಲೂ ಅನಿಸಲಿಲ್ಲ ಅಷ್ಟು ಆತ್ಮೀಯ ಸ್ವಭಾವ ಅವರದು ನಗುಮೊಗದ ಮೃದುಮನಸಿನ ಸಾಹಿತಿ ಅವರು ಸ್ನೇಹಿತೆ ಸಾಹಿತಿ ಅಂತಾ ನನಗೆ ಗೊತ್ತಾದದ್ದು ನಮ್ಮ ಸ್ನೇಹ ಪ್ರಾರಂಭವಾಗಿ ಒಂದು ವರ್ಷ ದ ನಂತರ ನನಗೆ ಬಹಳಷ್ಟು ಖುಷಿ ಅನಿಸಿತು. ಸ್ನೇಹ ಅನ್ನೊದು ಹಾಗೆಯೇ ಅದು ದೇವರು ಕೊಟ್ಟ ವರ ಸ್ನೇಹ ಹಲವರ ಜೊತೆ ಆಗುತ್ತೆ ಆದ್ರೆ ನಿಷ್ಕಲ್ಮಶ ಸ್ನೇಹ ಸಿಗೋದು ಅಪರೂಪ ನಮ್ಮ ಸ್ನೇಹ ಯಾವುದನ್ನು ಅಪೆಕ್ಷೆ ಮಾಡದ ನಿಷ್ಕಲ್ಮಶ ಗೆಳೆತನ. ನಾವು ಒಬ್ಬರಿಗೊಬ್ಬರು ನಮ್ಮ ವೈಯಕ್ತಿಕ ಪರಿಚಯ ಯಾರು ಹೇಳಿಕೊಂಡಿರಲಿಲ್ಲ ಆದರೂ ನಮ್ಮ ಸ್ನೇಹ ಬಹಳ ಗಾಡವಾಗಿತ್ತು ನಮ್ಮ ಸ್ನೇಹಕ್ಕೆ ಈಗ ಮೂರುವರ್ಷ ಇಲ್ಲಿಯವರೆಗೂ ನಾವು ಯಾವತ್ತೂ ಜಗಳವಾಡಿಲ್ಲ ಅಷ್ಟು ಹೊಂದಾಣಿಕೆ ನಮ್ಮಲ್ಲಿ ನಾನು ಸಖಿಯ ಲೇಖನ ಬರೆದಾಗಲೆ ಗೊತ್ತಾಗಿದ್ದು ಅವರ ಮನಸು ಅಷ್ಟು ಮೃದು ಆತ್ಮೀಯತೆ ಏಕೆ ಎಂದು ಸಖಿ ಬಾಲ್ಯದಲ್ಲಿ ನಡೆಸಿದ ಜೀವನದ ಹೊರಾಟ ಸಂಘರ್ಷದಿಂದ ಅವರ ವ್ಯಕ್ತಿತ್ವ ವಜ್ರದ ಹಾಗೆ ಹೊಳೆಯುತಿರುವುದು ಎಂದು ತಿಳಿಯಿತು .

ನಮ್ಮ ಸ್ನೇಹ ಪಯಣದಲ್ಲಿ ಇನ್ನು ಒಬ್ಬರು ಇದ್ದಾರೆ ಅವರಷಬಗ್ಗೆ ಹೇಳದಿದ್ದರೆ ನಮ್ಮ ಸ್ನೇಹ ಅಪೂರ್ಣ ವಾಗುವುದು ಎಂದು ಹೆಳುತಿರುವೆ ಸದಾ ಪುಸ್ತಕ ಓದುತ್ತಾ ಪುಸ್ತಕದ ಹುಳುವಾಗಿರುವ ಮಂಗಳೂರಿನ ಸಖಿ ಪ್ರಿಯಾ ನಮ್ಮ ಮೂವರ ಸ್ನೇಹ ಪಯಣ ಮೂರುವರ್ಷಗಳ ಹಿಂದೆ ಪ್ರಾರಂಭವಾದದ್ದು ,ಈ ಇಬ್ಬರು ನನಗೆ ಪರಿಚಯ ವಾದಾಗ ಅವರು ಓದುವ ರೀತಿಯನ್ನು ನೊಡಿ ಈಗ ತಾನೆ ಸ್ನಾತಕೋತ್ತರ ಪದವಿಯನ್ನು ಮುಗಿಸಿರುವ ಯುವ ಹುಡುಗಿಯರು ಆಗಿರಬಹುದು ಎಂದು ಕೊಂಡಿದ್ದೆ ಅವರು ವಿವಾಹಿತರಾಗಿದ್ದರು ಮನೆಯ ಎಲ್ಲಾ ಕೆಲಸವನ್ನು ಮುಗಿಸಿ ಸಂಸಾರ ನಿಭಾಯಿಸುತ್ತಾ ಓದಿಗೆ ಸಮಯ ಮೀಸಲಿಡುವುದು ನೊಡಿ ನನಗೆ ಬಹಳ ಮೆಚ್ಚುಗೆ ಆಯಿತು ಓದಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವುದು ಅವರಿಂದ ಕಲಿತೆ ಸಂಸಾರ, ಜವಾಬ್ದಾರಿ ನಿಭಾಯಿತ್ತಾ ಹೀಗೂ ಸಹ ಓದಬಹುದು ಎಂಬುದು ನೊಡಿ ಮನಸ್ಸಿಗೆ ಸ್ಪೂರ್ತಿ ತಂದಿತು ಇದು ವ್ಯಕ್ತಿ ಪರಿಚಯವಾಗಿರುವುದರಿಂದ ಸಖಿ ಪ್ರಿಯಾ ಬಗ್ಗೆ ಹೆಚ್ಚು ಹೇಳದೆ ನನ್ನ ಲೇಖನ ಮುಂದುವರೆಸುತ್ತೆನೆ. ನಮ್ಮ ಮೂವರ ಸ್ನೇಹಕ್ಕಾಗಿ ಸ್ನೇಹಿತೆ ಭವ್ಯ ಬರೆದ 'ಬಂದ ಮಧುರ ಬಂದ ' ನುಡಿಮುತ್ತು ಇಲ್ಲಿ ಬರೆಯಲು ಇಚ್ಚಿಸುವೆ 

"ಸ್ನೇಹವೂ ಸುಮಧುರ ಸಂಬಂಧ ಬಂದ
ಮನಸು ಮನಸುಗಳ ಬಾಂಧವ್ಯ ಬಂದ 
ಚಿಂತೆಯನು ಅಳಿಸುವ ಚಿತ್ತವರಳಿಸುವ
 ಚಿನ್ಮಯಾನಂದ
ಅನುಗಾಲ ಅಚ್ಚಳಿಯದಿರಲಿ
 ಈ ಅನುಬಂಧ "


ಇಂದು ಬಹಳಷ್ಟು ಜನ ವಾಟ್ಸಪ್ ನಲ್ಲಿ  ಸಮಯ ವ್ಯರ್ಥ ಮಾಡುತ್ತಿರುವ ಈಗಿನ ಕಾಲದಲ್ಲಿ ಚಾಟ್ ಮೂಲಕ ಕನ್ನಡ ಸಾಹಿತ್ಯವನ್ನು ಚರ್ಚೆ ಮಾಡುತ್ತಾ ಓದಬಹುದು ಎಂಬುದು ನನಗೆ ಗೊತ್ತಾಗಿದ್ದು ಅವರಿಂದ ನಾವು ದಿನಾಲೂ ಒಂದು ಗಂಟೆ ಓದಿಗಾಗಿ ಮಿಸಲಿಡುತ್ತಾ ನಮ್ಮ ಸಾಹಿತ್ಯ ಓದಿನ ಪಯಣ ಮುಂದುವರೆಸಿದೆವು ಚರ್ಚಿಸಿದ ವಿಷಯ ಹೇಗೆ ಸೇವ್ ಮಾಡಿ ಇಟ್ಟುಕೊಳ್ಳಬೇಕೆಂಬುದನ್ನು ಕಲಿತೆ ಆಗತಾನೆ ಮೊಬೈಲ್ ನಲ್ಲಿ ಕನ್ನಡ ಭಾಷೆಯಲ್ಲಿ ಟೈಪ್ ಮಾಡುವುದನ್ನು ಕಲಿಯುತ್ತಿದ್ದ ನನಗೆ ಎಲ್ಲಾ ಹೊಸದು 'ಕರ್ನಾಟಕ 'ಎಂದು ಬರೆಯಬೆಕಾದರೆ ಅರ್ಕಾ ಕಾರ '೯ 'ಈ ರ ಟೈಪ್ ಮಾಡಲು ಬರದೆ ಇರುವಾಗ ಮೆಡಮ್ ಗೆ ಕೇಳಿದಾಗ ಕನ್ನಡದ ೧೨೩ ಇರುತ್ತೆ ಅಲ್ವಾ ಅದು' ೯ 'ಟೈಪ್ ಮಾಡಿ ಎಂದು ಸಲಹೆ ನೀಡಿದರು ಇದು ಹಾಸ್ಯಾಸ್ಪದವಾಗಿದ್ದರೂ ಕೂಡ ಹೀಗೂ ಬರೆಯಬಹುದು ಎಂದು ಆ' ೯ 'ಅಂಕಿಯನ್ನು' ರ 'ಪದ ಬಳಕೆಗೆ ಟೈಪ್ ಮಾಡುವುದು ಮುಂದುವರೆಸಿ ಬರೆಯ ತೊಡಗಿದೆ ವಾಟ್ಸಪ್ ಚಾಟ್ ನಲ್ಲಿ ಇಂಗ್ಲಿಷ್ ಬಳಕೆ ಮಾಡುವ ಈಗಿನ ಕಾಲದಲ್ಲಿ ಸಖಿ ಶಿವಮೊಗ್ಗದಲ್ಲಿ ಇದ್ದುಕೊಂಡು ಯಾವುದೇ ಮುಖಪರಿಚಯ ಇಲ್ಲದ ಕಲಬುರ್ಗಿಯಲ್ಲಿ ಇರುವ ನನಗೆ ಕನ್ನಡ ಅಕ್ಷರ ಟೈಪ್ ಕಲ್ಪಿಸಿರುವುದು ಹೆಮ್ಮೆಯ ವಿಷಯ ನಾನು ಯಾವಾಗಲೂ' ೯' ಈ ಅಕ್ಷರ ಬರೆಯುವಾಗ ಪ್ರತಿಬಾರಿ ಭವ್ಯ ಮೇಡಮ್ ನೆನಪಾಗುವರು ಮಹಿಳೆಗೆ ಮಹಿಳೆ ಶತ್ರುವಾಗಿರುವ ಈ ಕಾಲದಲ್ಲಿ ಅವರ ನಿಸ್ವಾರ್ಥ ಸ್ನೇಹ ನನಗೆ ಬಹಳಷ್ಟು ಖುಷಿ ಕೊಟ್ಟಿತು ಮಹಿಳೆಯರಿಗೆ ಮೂವತ್ತು ನಲವತ್ತು ವಯಸ್ಸು ದಾಟಿದರೆ ಸಾಕು ನಮ್ಮ ಜೀವನ ಇಲ್ಲಿಗೆ ಮುಗಿಯಿತು ನಾವು ಏನು ಸಾಧನೆ ಮಾಡಲಾಗದು ಎನ್ನುವ ಪ್ರಶ್ನೆ ಕಾಡತೊಡಗುವುದು ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಯಾವ ವಯಸ್ಸಿನಲ್ಲಿ ಬೆಕಾದರೂ ಮಹಿಳೆಯು ಕೂಡ ಸಾಧನೆ ಮಾಡಬಹುದು ಎಂಬುದನ್ನು ತೋರಿಸಿದ ಭವ್ಯ ಸುಧಾಕರ್ ಜಗಮನೆ ಮೇಡಮ್ ಎಲ್ಲಾ ಮಹಿಳೆಯರಿಗೆ ಆದರ್ಶರಾಗಿದ್ದಾರೆ ಅವರ ಸಾಹಿತ್ಯ ಸಾಧನೆ ಹೀಗೆ ಬೆಳೆಯಲಿ ಎಂದು ಹಾರೈಸುತ್ತಾ
 ನನ್ನ ಚಿಕ್ಕ ಲೇಖನ ಮುಗಿಸುತ್ತೆನೆ...

ಎರಡು ವರ್ಷಗಳ ಹಿಂದೆ ಬರೆದ ನನ್ನ ಈ ಕವನ ನಮ್ಮ ಸ್ನೇಹ ಬಾಂಧವ್ಯಕ್ಕಾಗಿ ಸಮರ್ಪಣೆ .


ಇಂಟರ್ನೆಟ್ ಯುಗದ ಓದುವ ಸಖಿಯರು

ಸಾಹಿತ್ಯ ಓದುವ ಜಾಣ ಸಖಿಯರು
ಲೇಖನಿ ಹಿಡಿದು ಬರೆಯಲು ಹೊರಟರು 
ಮನಸಿನ ಭಾವನೆ ಕವನದಲ್ಲಿ ಹಂಚಿದರು
ಇದುವರೆಗೆ ಒಬ್ಬರನ್ನೊಬ್ಬರು ನೋಡದ 
ವಾಟ್ಸಾಪಿನ ಆತ್ಮೀಯ ಸಖಿಯರು

ಪ್ರಾಚೀನ ಕೃತಿಗಳಾದ ವಡ್ಡಾರಾಧನೆ
ಪಂಪಭಾರತ ಕೃತಿ ಗಳ ಚರ್ಚೆಯ
ಮೂಲಕ ಆದರೂ ಪರಿಚಿತರು
ಆಧುನಿಕ ಯುಗದ ಪ್ರಾಣಸಖಿಯರು

 ರಾಷ್ಟ್ರಕವಿ ಕುವೆಂಪು ನಡೆದಾಡಿದ
ಸೊಬಗಿನ ಸಿರಿಯ ಮಲೆನಾಡಿನ
 ಶಿವಮೊಗ್ಗದಲ್ಲಿ ಇರುವಳು ಒಬ್ಬಳು
ಕವಿರಾಜಮಾರ್ಗ ಕಾರ ನಡೆದಾಡಿದ
ಬಿಸಿಲೂರಿನ ಕಲ್ಯಾಣ ಕರ್ನಾಟಕದ
ಕಲ್ಬುರ್ಗಿಯಲ್ಲಿ ಇರುವಳು ಇನ್ನೊಬ್ಬಳು

ಒಬ್ಬಳು ಓದುವಳು ಕಂಪ್ಯೂಟರಿನಲ್ಲಿ 
ಇನ್ನೊಬ್ಬಳು ಓದುವಳು ಪುಸ್ತಕದಲ್ಲಿ
ಒಬ್ಬರಿಗೊಬ್ಬರೂ ಸ್ಪರ್ಧೆಗೆ ಇಳಿದಂತೆ
ಇಬ್ಬರು ಕೂಡಿ ಓದುವರು ಮೊಬೈಲ್ ನಲ್ಲಿ
ವಾಟ್ಸಪ್ ಯುಗದ ವಾಟ್ಸಪ್ ಸಖಿಯರು

ಅಪರಿಚಿತರಿದ್ದರು ಪರಿಚಿತರಾದರು
ಒಂಬತ್ತು ತಿಂಗಳಿನಿಂದ ಸ್ಪರ್ಧಾತ್ಮಕ
 ಪರೀಕ್ಷೆಗೆ ಕೂಡಿ ಓದುತಲಿರವರು
ವಯಸ್ಸು ಮೂವತ್ತೈದು ದಾಟಿದರು
ಹಠ ಬಿಡದೆ ಓದುತಲಿರುವ ಸಖಿಯರು

ಮದುವೆಯಾದರು ಸಂಸಾರ
 ನಿಭಾಯಿಸುತ ಹುಟ್ಟಿದ ಮನೆಯ
 ಕೊಟ್ಟ ಮನೆಯ ಜವಾಬ್ದಾರಿ ಹೊತ್ತು
  ಕುಟುಂಬದ ಕಣ್ಣಾದ ಓದುವ ಸಖಿಯರು

ಎಲ್ಲರ ಮೆಚ್ಚಿನ ಓದುವ ಮನೆಯ
ಓದು ಕರ್ನಾಟಕ ವಾಟ್ಸಪ್ ಬಳಗದ
ಪ್ರಶ್ನೆ ಸರಣಿಗೆ ಉತ್ತರ ಬಿಡಿಸುವರು 
ನಗುನಗುತ ಹರುಷದಿ ನಾ ಮೊದಲು
ನಿ ಮೊದಲು ಎನ್ನುತ್ತಾ ಪುಸ್ತಕ ಓದುವರು
ಇಂಟರ್ನೆಟ್ ಯುಗದ ವಾಟ್ಸಪ್ ಸಖಿಯರು 


ಎಲ್ಲರ ಮೆಚ್ಚಿನ ಸ್ಪರ್ಧಾತಿಗಳ ಸ್ಫೂರ್ತಿ 
ಸುಕ್ಷಿತ ಟೆಲಿಗ್ರಾಂ ಬಳಗದಲಿರುವರು
ಕಠಿಣ ಪ್ರಶ್ನೆಗಳು ಚರ್ಚಿಸುತಲೀರುವರು
ಉತ್ತರ ಸಿಗದ ಪ್ರಶ್ನೆಗೆ ಉತ್ತರ ಹುಡುಕುವರು
ಇಂಟರ್ನೆಟ್ ಯುಗದ ಟೆಲಿಗ್ರಾಂ ಸಖಿಯರು

ಸಾಹಿತ್ಯ ಸಂಭ್ರಮ ಮೂಡಿಗೆರಿ
 ವಾಟ್ಸಪ್ ಬಳಗದಲಿ 
ಜಪಾನ್ ದೇಶದ ಸಾಹಿತ್ಯ ಪ್ರಕಾರದ
 ಹಾಯ್ಕು ಕವನ ಬರೆಯುತಲಿರುವರು
  ಕವನ ಲೋಕದ ಕವಯತ್ರಿ ಸಖಿಯರು

ಗೂಗಲ್ ಮೀಟಲ್ಲಿ ಪಾಠವ ಹೇಳುತ್ತ ಕೇಳುತ್ತಲಿರುವರು ಗೂಗಲ್ ಮೀಟ್
 ಯುಗದ ಓದುವ ಸಖಿಯರು
ಗೂಗಲ್ ಲೋಕದ ಗೂಗಲ್ ಮಿಟ್ ಸಖಿಯರು
ಇಂಟರ್ನೆಟ್ ಯುಗದ ಓದುವಸಖಿಯರು...

ಬರಹಗಾರರು:
ಡಾ.ಭಾಗ್ಯಜ್ಯೋತಿ ಸುನಿಲ್ ಕುಮಾರ್ ಗಾಯಕವಾಡ, ಬಸವಕಲ್ಯಾಣ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...