ಶನಿವಾರ, ಮಾರ್ಚ್ 8, 2025

ಬದುಕಿಗೆ ಬೆಳಕಾದವರು...

ಬದುಕಿಗೆ ಬೆಳಕಾದವರು...

ಅಜ್ಜಿಯು ಹೇಳಿದ ಕಥೆಗಳ ಮೌಲ್ಯದಲಿ 
ಕಳೆದೆನು ಬಾಲ್ಯವ ಪ್ರೀತಿ ಮಮತೆಯಲಿ 

ತಾಯಿ ನೀಡಿದ ಮಮತೆಯ ಮುತ್ತು
ಅದು ನನ್ನ ಬಾಳಿಗೆ ಮರೆಯದ ತುತ್ತು 

ದೊಡ್ಡಮ್ಮ ಚಿಕ್ಕಮ್ಮರ ಸೌಜನ್ಯದ ಸಲುಗೆ 
ಸ್ಫೂರ್ತಿಯ ಬೆನ್ನೆಲುಬು ನನ್ನ ಬದುಕಿಗೆ 

ತಿದ್ದಿ ಬುದ್ಧಿಯ ಹೇಳಿದರು ಗುರು ಮಾತೆಯರು 
ನಮ್ಮ ಜೀವನಕ್ಕೆ ದೇವರಾದ ಮಹಾತ್ಮರು 

ಅತ್ತೆ ಅಬ್ಬರಿಸಿದರೂ ತಿದ್ದಿದಳು ತನ್ನಂತೆ
ಅವಳ ಕಾಳಜಿಗೆ ತಲೆಬಾಗುವದು ಧನ್ಯತೆ 

ಅಕ್ಕ ತಂಗಿಯರ ವಾತ್ಸಲ್ಯದ ನುಡಿಗಳು 
ಸಾಧನೆಯ ಹಾದಿಗೆ ಬೆಲೆಕಟ್ಟಲಾಗದ ಜೀವನಾಡಿಗಳು

ಅತ್ತಿಗೆ ಕಲಿಸಿದಳು ಜವಾಬ್ದಾರಿ 
ನಿಮಗೆ ನಾನೆಂದು ಆಭಾರಿ 

ಸಪ್ತಪದಿಯ ತುಳಿದು ಬಂದೆ ಹೆಂಡತಿಯಾಗಿ 
ಸಂಸಾರದ ಭಾರ ಹೊರಲು ಜೊತೆಯಾಗಿ 

ದೇವತೆಯಾಗಿ ಹುಟ್ಟಿ ಬಂದಳು ತಾಯಿಯೇ ಮಗಳಾಗಿ 
ಉಸಿರಿರೋವರೆಗೂ ರಕ್ಷಿಸುವೆ ಕಣ್ಗಾವಲಾಗಿ 

ಅನ್ನ ಅಕ್ಷರ ಆಶ್ರಯ ನೀಡಿದಳು ಕನ್ನಡಾಂಬೆ 
ಸರ್ವರನ್ನು ರಕ್ಷಿಸಿ ಕಾಪಾಡುವಳು ಭಾರತಾಂಬೆ 

ಸರ್ವ ಹೆಣ್ಣು ಮಕ್ಕಳಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರೀತಿಯ ಶುಭಾಶಯಗಳು 
ಶ್ರೀ ಮುತ್ತು ಯ.ವಡ್ಡರ 
 ಶಿಕ್ಷಕರು
ಬಾಗಲಕೋಟ 
9845568484

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...