ಭಾನುವಾರ, ಜುಲೈ 11, 2021

ರೈತನ ಮಿತ್ರ ನೇಸರ (ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

ರೈತನ ಮಿತ್ರ ನೇಸರ

ಮುಂಜಾನೆಯ ಮಂಜ ಹನಿಯಲಿ 
ಸಾಗಿದೆ ಅನ್ನದಾತನ ಕಾಯಕ
ಕಂಡು ಸಂತಸಗೊಂಡ ರವಿಯು
ನೀಡಿದ ಭೂರಮೆಗೆ ಬೆಚ್ಚನೆಯ ಶಾಖ...

ಹಸಿರ ಸಿರಿಯ ಒಡಲಲ್ಲಿ ಅವನ 
ನೆಮ್ಮದಿಯ ಜೀವನದ ಪರಿಯು
ನೇಸರನ ರಶ್ಮಿಯ ಕಿರಣದ ಮುತ್ತಿಗೆ
ಮಳೆಯಾಗಿ ಸುರಿಯಿತು ಮೋಡವು...

ಮಳೆ ಕಂಡರೆ ಸಂತಸವು ರೈತನಿಗೆ
ಹಸಿರಾಗಿ ಕಂಗೊಳಿಸುವಳೆಂದು ಧರೆ
ಭೂತಾಯಿಯ ನಂಬಿ ದುಡಿವುದೆ
ಕಾಯಕಯೋಗಿಯ ನಿತ್ಯ ಕಾರ್ಯವು...

ಸಿರಿಧಾನ್ಯವು ಮೈತುಂಬಿದರೆ ತೆನೆಯಲ್ಲಿ
ಸಂತಸವು ತೇಲುವುದು ಮೊಗದಲ್ಲಿ
ಪರರ ಹಸಿವ ತಣಿಸುವ ಆಶಯದಿ
ದುಡಿದು ನೀಡುವನು ಜೀವಕೆ ಅಭಯ...

ಭೂತಾಯಿಯೇ ಅವನ ಸರ್ವಸ್ವವು
ನೇಸರನ ಹೊಂಗಿರಣವೆ ಅಭಯವು
ನಿರಂತರ ಕಾಯಕವು ಹೊಲದಲ್ಲಿ
ಫಸಲಿನ ಲಾಭವು ನಿರ್ಮಲ ಮನದಲ್ಲಿ...

ರೈತನು ಬಿಸಿಲಲಿ ದುಡಿದು ಹರಿಸಿದ
ಬೆವರಿಗೆ ಬೆಲೆಯಾಗಿ ಆದಿತ್ಯನು
ಮಳೆಯ ಹೊನ್ನ ಸುರಿಸುವನು
ಧರೆಯ ತಂಪು ಮಾಡಿ ಹರಿಸುವನು...

ಕೃಷಿ ಕಾಯಕವೇ ರೈತನ ಬದುಕಿನ ನೆಲೆ
ಯಾರಿಗೂ ಬರದು ಅವನ ಕಾಯಕ ಕಲೆ....

- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ
ದೂ : ೯೬೩೨೨೯೬೮೦೯.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

4 ಕಾಮೆಂಟ್‌ಗಳು:

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...