ಸೋಮವಾರ, ಮೇ 13, 2024

ಮತ್ತೆ, ತಿರಿಗಿ ಬರಲೇ ಇಲ್ಲ (ಕವಿತೆ) - ನಾಗು.

ದಿನದಿನವೂ ತೀವ್ರವಾಗುತ್ತಿರುವ ಬಯಕೆ..
ಬೆದೆಗೆ ಬಂದಿದೆ ದೇಹ,
ಮನಸ್ಸು, ಅತ್ಮ.
ನೂರಾರು ಕನಸು, ಸಾವಿರಾರು ಬಯಕೆ.
ಮಿಲನ, ಸಮ್ಮಿಲನಕ್ಕಾಗಿ ಹಾತೊರೆತ. 

ಬಾಯ್ ಪ್ರೆಂಡ್, ಗಂಡ, ಪಕ್ಕದ ಮನೆಯವನು.... ದೇಹ ಹೀರುವ ದುಂಬಿಗಳು. ಹಿಡಿದು, ಮುದ್ದಿಸಿ, ರಮಿಸಿ, ಸ್ಖಲಿಸಿ...
ಒರೆಸಿಕೊಂಡು ಎದ್ದು ಹೋಗಿ ಬಿಡುವವರೇ ಎಲ್ಲರೂ....

ದೇಹದ ಆಸೆ ತಣಿದರೂ... ಮನಸ್ಸು, ಆತ್ಮಗಳಿಗೆ ನಿತ್ಯ ಉಪವಾಸ.
ಯಾರಿಂದಲೂ ಇಲ್ಲ ತೃಪ್ತಿ.

ಕಾಯುತ್ತಲೇ ಇದ್ದೆ. 
ನನ್ನ ಮನವನ್ನು ಮುಟ್ಟಬಲ್ಲ, ಅತ್ಮವನ್ನು ತಣಿಸಬಲ್ಲ ಪುರುಷ ಸಿಂಹನಿಗಾಗಿ. 
ಕನಿಷ್ಟ, 
ಕೆಲಸ ಮುಗಿದ ಮೇಲೆ,
ಅಪ್ಪಿ, ಹಣೆಗೊಂದು ಮುತ್ತಿಟ್ಟು, ಮಾತಾಡಿ-ಮನಸ್ಸು ಮುಟ್ಟಬಲ್ಲವನಿಗಾಗಿ.

ಕೊನೆಗೂ ಒಬ್ಬ ಬಂದ. ಮನ್ಮಥ ರೂಪ. ದೇಹ, ಮನಸ್ಸನ್ನು ಮುಟ್ಟಿತ್ತು ಅವನ ಪ್ರೀತಿ, ಪ್ರತಾಪ!
ಅಪ್ಪಿ, ಮುತ್ತಿಟ್ಟು, ಹಣೆಸವರಿ, ಮತ್ತೆ ಬರುವೆ ಎಂದ. 
ಪ್ಯಾಂಟ್ ಏರಿಸಿ, ಜಿಪ್ ಎಳೆದು, ಕಣ್ ಹೊಡೆದು, ಆಸೆ ಚಿಗುರಿಸಿ ಹೋದ.

ಮತ್ತೆ ಬರುತ್ತಾನೆಂದು ಕಾದು ಕಾದು, ಕಾದು ಕನ್ಯೆಯಾಗಿಯೇ ಉಳಿದೆ..... 
ದೇಹ ಮುಟ್ಟಿದ ನೂರರಲ್ಲಿ... ಒಬ್ಬನೂ ಮುಟ್ಟಲಾಗಲಿಲ್ಲ ನನ್ನ  ಆತ್ಮವನ್ನು. 

ಮತ್ತೆ, ತಿರಿಗಿ ಬರಲೇ ಇಲ್ಲ.
ಮನಸ್ಸು
ಮುಟ್ಟುವ, ದಾಹ ತೀರಿಸುವ ಅಸೆ ಚಿಗುರಿಸಿದ ಅವನು.

- ನಾಗು. 

ನನ್ನವ್ವ (ಕವಿತೆ) - ಕುರುಬರ ಗಾದಿಲಿಂಗಪ್ಪ, ಪಟ್ಟಣಸೆರಗು.

ನನ್ನವ್ವ ಮಗುವಿನಂತವಳು.
ನಮ್ಮಂತೆ ಹುಟ್ಟಿದರು, ಸುಖವಾಗಿ ಬೆಳೆದವಳಲ್ಲ;
ಬಂಧುಗಳ, ನೆರೆಹೊರೆಯವರ ಜೊತೆಗೆ 
ಆಟಪಾಠಗಳೆಂದು ಕುಣಿದು, ನಲಿದು ಖುಷಿ ಪಟ್ಟವಳಲ್ಲ ನನ್ನವ್ವ.

ತಾಯ ಮಡಿಲಿಂದ ಭುವಿಗೆ ಬಂದ್ದದೆ ತಡ ದುಡಿತದ ಯಂತ್ರವಾದವಳು
ಮಕ್ಕಳ ಜೊತೆ ಆಟವಾಡುವ ವಯಸ್ಸಿನಲ್ಲಿ 
ಅಕ್ಕನ ಮಕ್ಕಳ ತಾಯಂತೆ ಪೊರೆದವಳು. ತೊಳೆಯುತ್ತ, ಬಳಿಯುತ್ತ, ಅಡಿಗೆ ಮಾಡುತ್ತ ಪಾತ್ರೆ ಕಸಬರಿಗೆಯೊಟ್ಟಿಗೆ ಆಟವಾಡುತ್ತ ದೊಡ್ಡವಳಾದಳು ನನ್ನವ್ವ.

ನನ್ನವ್ವ ದೊಡ್ಡವಳಾದ್ದದೇ ತಡ ಮೂರುಗಂಟಿಗೆ ಕೊರಳೊಡ್ಡಿ ನಿಂತು ಹಿರಿದಾದ ಮನೆಯ ಹಿರಿಸೊಸೆಯಾದವಳು.
ಹದಿಹರೆಯದ ಗರತಿ
ಮೂರುಗಂಟಿಗೆ ಪ್ರತಿಯಾಗಿ ಮೂರೊತ್ತು ಮನೆ-ಹೊಲ, ಗಂಡ-ಮಕ್ಕಳು ಎಂದು ದುಡಿದವಳು ನನ್ನವ್ವ. 

ತಾಯಿತಂದೆಯಿಲ್ಲದ ತವರು ಕರುಣೆಗೆ ಬೀಡಾದರೆ, ಗಂಡನ ಮನೆಯ ಬಗೆಗೆ ಹೇಳಬೇಕೆ?
ಅತ್ತೆ ಮಾವ, ನಾದಿನಿ-ಮೈದುನರಿರುವ ಗೂಡಿನ
ಹಿರಿಸೊಸೆಯಲ್ಲವೇ ನನ್ನವ್ವ
ಒಲವಿಲ್ಲ, ನಲಿವಿಲ್ಲ, ಮಾತಿಲ್ಲ.
ದುಡಿತದ ಗರತಿಯಾದಳು ನನ್ನವ್ವ.

ನನ್ನವ್ವ ತಾಯಿಯಾದಳು, ಅತ್ತೆಯಾದಳು, ಅಜ್ಜಿಯೂ ಆದಳು 
ಆದರೂ, ಸುಖವು ಹುಣ್ಣಿಮೆಯ ತಂಗಾಳಿಯಂತೆ...
ಅವಳ ಆಸೆಗಳ ಕೇಳಿದವರಿಲ್ಲ
ಅವಳ ಬೈಯುತ್ತ ನೀ ಸುಮ್ಮನಿರು, ನಿನಗೇನು ಗೊತ್ತು, ನೀ ಮಾತನಾಡಬೇಡ ಎಂದು
ಸುಮ್ಮನಿರಿಸಿದ್ದೇ ಆಯಿತು.
ಆಕೆಯ ದುಡಿತದ ತುತ್ತಿಗರೆ ಎಲ್ಲ.

ಈಗ ೪೫ರ ಹರೆಯದ ಹೆಂಗಸು ನನ್ನವ್ವ ಆದರೂ, ೬೫ರ ಇಳಿಯ ವಯಸ್ಸಿನ ಅಜ್ಜಿಯಂತಾಗಿಹಳು.
ತನಗಾಗಿ ಅಲ್ಲ, ಮನೆ-ಹೊಲ, ಗಂಡ-ಮಕ್ಕಳು ಕುಟುಂಬ ಎಂದು
ಹಗಲಿರುಳು ದುಡಿದುದರ ಫಲವಾಗಿ. ಎತ್ತಿನ ಬಾಲದ ಹೊಡೆತದಿಂದ ಕಣ್ಣು ಮಸುಕಾಗಿಸಿಕೊಂಡಿಹಳು,
ಎತ್ತಿನ ಅಂಕಣದ ಸಗಣಿಯ ದಿನನಿತ್ಯ ಎತ್ತುತಿದ್ದರ ಫಲವಾಗಿ. 
ಸಾಲದಕ್ಕೆ
ಜಾರಿಬಿದ್ದು ಹಲ್ಲು ಕಳೆದುಕೊಂಡು ನೋವು ತಿನ್ನುತಿಹಳು.  

ಆಗಾಗ ಕಣ್ಣಿನಿಂದ ನೀರು ಸೋರುತ್ತಿರುತ್ತದೆ
ಅದು ಕಣ್ಣನೋವಿನ ನೀರೋ, ಮನದ ನೋವಿನ ನೀರೋ
ಅವಳ ಹೊರತು ಕಂಡವರು ಅರಿಯರು ಆ ಬಿಸಿನೀರ ಕಥೆಯ ವ್ಯಥೆಯ. 

ಏನಾದರೂ, ನನ್ನವ್ವ ಮಗುವಿನಂತವಳು ಬಿದ್ದು ಗಾಯಮಾಡಿಕೊಂಡು ಎದ್ದೊಡುವ ಮಗುವಿನಂತೆ,
ಬೈಸಿಕೊಂಡರು, ಬಡಿಸಿಕೊಂಡರು ಮೈಕೊಡವಿ ಮುನ್ನಡೆಯುವ ಮಗುವಿನಂತೆ ನನ್ನವ್ವ.

ಅವ್ವ, ನಿನಗೆ ನಾ ಏನ ಕೊಡಲಿ? ಪ್ರೀತಿಯ ಹೊರತು.
ಅವ್ವ, ನಾ ಏನ ಬೇಡಲಿ? ಕ್ಷಮೆಯ ಹೊರತು.


 - ಕುರಬರ ಗಾದಿಲಿಂಗಪ್ಪ, ಪಟ್ಟಣಸೆರಗು. ಬಳ್ಳಾರಿ ಜಿಲ್ಲೆ.

 (ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9113036287 ವಾಟ್ಸಪ್‌ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...