ಭಾನುವಾರ, ಮಾರ್ಚ್ 30, 2025

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಗಸು...



ಹೊಸ ವರುಷದ ಬಂದಿದೆ
ಮರ ಗಿಡಗಳಲ್ಲಿ ಚಿಗುರು ಎಲೆ 
ಹಸಿರಾಗಿ ಕಣ್ಣುದುಂಬಿದೆ
ಎಲ್ಲರ ಮನಸುಗಳು ಒಂದಾಗಿ 
ಸಿಹಿಯನ್ನ ಎಲ್ಲರೊಡನೆ ಬೆರಸಿ
ಕಹಿಯನ್ನ ಎಲ್ಲರಿಂದ ಮರೆಸಿ
ಬನ್ನಿ ಬಂದಿದೆ ಹೊಸ ಸಂವತ್ಸರದ
ಋತುವಿನ ಚಿಗುರಿನ ಹಸಿರು 
ತೋರಣದ ಈ ಯುಗಾದಿ ಹಬ್ಬ..


ಬೇವು - ಬೆಲ್ಲವನ್ನ 
ಮಿತಿಯಾಗಿ ಆನಂದವಾಗಿ 
ತಿಂದು ಸವಿಯೋಣ 
ಕುಟುಂಬಗಳ ಜೊತೆಯಲ್ಲಿ 
ಇದ್ದು ಜೇನಿನ 
ಗೂಡಿನಂತೆ ಹಬ್ಬ ಆಚರಿಸೋಣ 
ಮಾವಿನ ಚಿಗುರಿನ ಎಲೆಯಂತೆ
ಹಸಿರಾಗಲಿ ನಿಮ್ಮ ಬದುಕು 
ಈ ಯುಗಾದಿ ಹಬ್ಬದಲ್ಲಿ...


ನಿನ್ನ ಜೀವನದ ಪ್ರತಿ ದಿನವೂ 
ನಿನಗೆ ಹೊಸ ಹಬ್ಬವಿಂದ್ದತೆ
ಯಾಕಂದ್ರೆ ನೀ ಮಾಡುವ ಕಾಯಕ ಸೇವೆಯೇ ವಿಶೇಷವಿದ್ದಂತೆ
ನೀ ನಡೆಯುವ ಹೆಜ್ಜೆಯಲ್ಲಿ
ಹಸಿರು ನಿನಗೆ ಉಸಿರಾಗಲಿ 
ನಿನ್ನ ಮಾಡುವ ಸೇವೆ ಎಲೆ 
ಮರಿ ಕಾಯಿಯಂತೆ ನಿಸ್ವಾರ್ಥವಾಗಿ
ನೊಂದವರಿಗೆ ಆಸರೆಯಾಗಿ
ಬಡ ಮಕ್ಕಳಿಗೆ ಗುರುವಾಗಿ
ಹೆತ್ತವರಿಗೆ ಮುದ್ದಿನ ಮಗಳಾಗಿ
ಒಂದು ದಿನ ಹೆಸರು ಮರವಾಗಿ 
ದೊಡ್ಡದಾಗಿ ಬೆಳೆಯಲಿ...

          ಕಾರ್ತಿಕ್...✍️
     ( ಶ್ರವಣ ಬೆಳಗೊಳ )

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...