ಶನಿವಾರ, ಆಗಸ್ಟ್ 14, 2021

ಟು ಡೇ... (ಕವಿತೆ) - ಶ್ರೀ ಅಂಜನ್ ಕುಮಾರ್ ಪಿ.ಆರ್.

ಟು ಡೇ.....!

ಏನೆಂದು ಹೇಳಲಿ ನಾ
ಇಂದಿನ ಜನ ಜೀವನ
ಸತ್ಯವೇ ಇಲ್ಲದ ಈ ದಿನ
ಸಂಸೃತಿಯ ಹಳೆ ನೆನಪಿನ ಹೊಸ ಮನ !

ಹಾದಿಯಲ್ಲಿ ಹಸಿದ ಮಂದಿ
ಬೀದಿಯಲ್ಲಿ ಗರ್ಜಿಸುವ ಹಂದಿ
ಬೇಡುವವರಿಗೆ ಇಲ್ಲ ಅನ್ನ
ಬಿದಿರ್ ಇಲ್ಲದೆ ಹೊತ್ತ ಹೆಣ 

ಬಿಳಿ ಬಟ್ಟೆ ಮೈ ಗೆ ಸುತ್ತಿ
ಪೆಟ್ಟಿಗೆ ಒಳಗೆ ನಿನ್ನ ಕಟ್ಟಿ
ಬಯಲಲ್ಲಿ ಸ್ವಂತದ ಆಸ್ತಿ
ದೂರದಲ್ಲಿ ನಿಂತು ನಿನ್ನ ಮೈ ಮಣ್ಣಲ್ಲಿ ಮುಚ್ಚಿ!

ಗೊಳೋ ಎಂದು ಕೂಗುವ ದ್ವನಿ
ನೀರಲ್ಲಿ ಮುಳುಗಿ ನೀರಾದ ಮನಿ
ಆಶ್ರಯ ಇಲ್ಲದ ಮಂದಿ
ಸೇರವರೆ ಯಾವುದೋ ಮೂಲೆ ಸಂಧಿ

ಕೊಚ್ಚೋಗುತಿದೆ ಊರ ಜನ
ನೀರಲ್ಲಿ ನೀರಾದ ಕಣ್ಣೀರು ಮನ
ಕರುಣೆ ಅನುಕಂಪ ಇಲ್ಲದೆ ಆಗಿದೆ ಬುಕಂಪನ
ಕಾಗೆಯೂ ಇಲ್ಲದೆ ಇರುವ ಈ ಖಾನನ..! 

ಮಹಾಮಾರಿ ಮೈ ಮಾಟ
ಮುಚ್ಚಿದೆ ದೈವ ಗುಡಿ ಮಠ
ಶಾಲಾ ಕಾಲೇಜು ಇಲ್ಲದ ರೀಜನ್ 
ಮೂರು ಮೂರು ತಿಂಗಳಿಗೂ ಲಾಕ್ ಡೌನ್..!

ಅಂಜನ್ ಕುಮಾರ್ ಪಿ ಆರ್.
ತುಮಕೂರು . 7483146697.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659  ವಾಟ್ಸಪ್ ಮಾತ್ರ)


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...