ಭಾನುವಾರ, ನವೆಂಬರ್ 14, 2021

ನೆಮ್ಮದಿಯ ನಿಟ್ಟುಸಿರು (ಕವಿತೆ) - ಭರತ್ ಕೆ.ಆರ್.

ಬಡತನದ ಬೇಗೆಯ ಕಣ್ಣಾರೆ ಕಂಡು
ಸುಡುತಿಹುದು ಮನ ಮನಸ್ಸುಗಳನ್ನು
ಒಳಗೊಳಗೇ ತಾನು ಕಸಿವಿಸಿಗೊಂಡು
ತಬ್ಬಿಬ್ಬಾಗಿ ಮಂಕಾಗಿ  ಕುಳಿತಿಹರು//

ಬಡತನದಲ್ಲಿ ಸಿರಿತನ ಕಂಡವರು
ಪುಟ್ಟ ಗುಡಿಸಲ ಸೂರಿನಡಿಯಲ್ಲಿ
ಪ್ರೀತಿಯನ್ನು ಹಂಚುತ್ತಾ ಬೆಳೆದವರು
ಬೇದ ಭಾವ ತೋರದ ಮುಗ್ಧ ಜನರು//

ಪ್ರತ್ಯೇಕ ಕೊಠಡಿಗಳ ಗೊಡೆಯಿಲ್ಲ
ಬಿರುಕು ಮೂಡಿದ ಮನಮನಸ್ಸುಗಳಿಲ್ಲ
ಅಸ್ಸುಯ್ಯೆ ಇಂದ ಕೂಡಿದ ಬಂದುತ್ವವಿಲ್ಲ
ತಾನು ತನ್ನದೆನ್ನುವ ಘರ್ವವಿಲ್ಲ//

ಸಿರಿತನಕ್ಕೆ ಮಾರುಹೋಗದ ಮಂದಿ
ಬಡತನಕ್ಕೆ ಕುಗ್ಗಿ ಹಿಂಜರಿಯದ ಮಂದಿ
ಕಷ್ಟಕ್ಕೆ ಒಗ್ಗೂಡಿ ಜೊತೆಗೂಡುವ ಮಂದಿ
ಮನುಷತ್ವ ಅರಿತು ಮುನ್ನಡೆಯುವ ಮಂದಿ //

ನೆರೆಹೊರೆಯೊಳು ಸಹಬಾಳ್ವೆ ನೆಡೆಸಿಹರು
ಎಲ್ಲಾ ಕೂತು ಹಂಚುಂಡಿ ತಿನ್ನುವರು
ಶುದ್ಧ ಮನಸ್ಸಿನ ಮುಗ್ಧ ಮನಸ್ಸಿನವರು
ಏನು ಇಲ್ಲದ ಬಡ ಜನರು ನನ್ನವರು//
✍️ಭರತ್ ಕೆ ಆರ್  S/O ರಂಗಸ್ವಾಮಿ. ಎಂಜಿನಿಯರಿಂಗ್ ವಿದ್ಯಾರ್ಥಿ, ಹಾಸನ ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

8 ಕಾಮೆಂಟ್‌ಗಳು:

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...