ಬಡತನದ ಬೇಗೆಯ ಕಣ್ಣಾರೆ ಕಂಡು
ಸುಡುತಿಹುದು ಮನ ಮನಸ್ಸುಗಳನ್ನು
ಒಳಗೊಳಗೇ ತಾನು ಕಸಿವಿಸಿಗೊಂಡು
ತಬ್ಬಿಬ್ಬಾಗಿ ಮಂಕಾಗಿ ಕುಳಿತಿಹರು//
ಬಡತನದಲ್ಲಿ ಸಿರಿತನ ಕಂಡವರು
ಪುಟ್ಟ ಗುಡಿಸಲ ಸೂರಿನಡಿಯಲ್ಲಿ
ಪ್ರೀತಿಯನ್ನು ಹಂಚುತ್ತಾ ಬೆಳೆದವರು
ಬೇದ ಭಾವ ತೋರದ ಮುಗ್ಧ ಜನರು//
ಪ್ರತ್ಯೇಕ ಕೊಠಡಿಗಳ ಗೊಡೆಯಿಲ್ಲ
ಬಿರುಕು ಮೂಡಿದ ಮನಮನಸ್ಸುಗಳಿಲ್ಲ
ಅಸ್ಸುಯ್ಯೆ ಇಂದ ಕೂಡಿದ ಬಂದುತ್ವವಿಲ್ಲ
ತಾನು ತನ್ನದೆನ್ನುವ ಘರ್ವವಿಲ್ಲ//
ಸಿರಿತನಕ್ಕೆ ಮಾರುಹೋಗದ ಮಂದಿ
ಬಡತನಕ್ಕೆ ಕುಗ್ಗಿ ಹಿಂಜರಿಯದ ಮಂದಿ
ಕಷ್ಟಕ್ಕೆ ಒಗ್ಗೂಡಿ ಜೊತೆಗೂಡುವ ಮಂದಿ
ಮನುಷತ್ವ ಅರಿತು ಮುನ್ನಡೆಯುವ ಮಂದಿ //
ನೆರೆಹೊರೆಯೊಳು ಸಹಬಾಳ್ವೆ ನೆಡೆಸಿಹರು
ಎಲ್ಲಾ ಕೂತು ಹಂಚುಂಡಿ ತಿನ್ನುವರು
ಶುದ್ಧ ಮನಸ್ಸಿನ ಮುಗ್ಧ ಮನಸ್ಸಿನವರು
ಏನು ಇಲ್ಲದ ಬಡ ಜನರು ನನ್ನವರು//
✍️ಭರತ್ ಕೆ ಆರ್ S/O ರಂಗಸ್ವಾಮಿ. ಎಂಜಿನಿಯರಿಂಗ್ ವಿದ್ಯಾರ್ಥಿ, ಹಾಸನ ಜಿಲ್ಲೆ.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
Yenu illada bada janaru ninnavaru . 👌👌👌👌👍👍⚘⚘
ಪ್ರತ್ಯುತ್ತರಅಳಿಸಿNice bharath
ಪ್ರತ್ಯುತ್ತರಅಳಿಸಿNice imagination bharath
ಪ್ರತ್ಯುತ್ತರಅಳಿಸಿUltimate maga
ಪ್ರತ್ಯುತ್ತರಅಳಿಸಿSuper bro
ಪ್ರತ್ಯುತ್ತರಅಳಿಸಿಸುಂದರ ಸಾಲುಗಳು
ಪ್ರತ್ಯುತ್ತರಅಳಿಸಿUltimate
ಪ್ರತ್ಯುತ್ತರಅಳಿಸಿSuperb bro👍👍👍👍
ಪ್ರತ್ಯುತ್ತರಅಳಿಸಿ