ಅರಿತವರು ಅನುಭವದಿಂದ ಹೇಳಿಹರು ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೆ ಮೇಲೆಂದು,
"ಮೇಟಿಯಿಂ ರಾಟೆ ನಡೆದುದಲ್ಲದೆ-ದೇಶ
ದಾಟವೆ ಕೆಡಗುಂ"ಸರ್ವಜ್ಞ ನ ನುಡಿ ಅರಿಯಬೇಕು ಶ್ರೇಷ್ಠ ವೆಂದು,
ಜೈ ಕಿಸಾನ್ ಎಂದು ಕೂಗಿ ಸಾರಿ-ಸಾರಿ ಹೇಳಿಹರು ಶ್ರೇಷ್ಠರು ಅಂದು,
ರೈತನಿಗೆ ನಮಿಸುತಿರು ಎಂದೆಂದೂ..
ಹಸಿವ ನೀಗಿಸಿ ಒರೆಸುವನು ಕಂಬನಿ,
ಶ್ರೇಷ್ಠ ಕಾಯಕದ ಹಿಂದಿದೆ ರೈತನ ಬೆವರ ಹನಿ,
ಹಗಲು-ರಾತ್ರಿ ಎನ್ನದೇ ಸುರಿಸುವನು ಯಾರಿಗೂ ಕಾಣದಿರುವ ಕಣ್ಣ ಕಂಬನಿ..
ಭೂ ತಾಯಿಯ ಪ್ರೀತಿಯ ಕುವರ,
ಭೂಮಿಯನು ಉತ್ತಿ-ಬಿತ್ತಿ ಉಳುಮೆಯ ಮಾಡಿ ಕಾಣುವನು ಬೆಳೆದು ನಿಂತ ಪೈರಿನ ಹಸಿರ,
ರೈತನಿಗೆ ಬೆನ್ನೆಲುಬಾಗಿ ನಿಲ್ಲುತ್ತವೆ ನೇಗಿಲು-ನೊಗ, ರಗಡ್ ಎತ್ತು-ಕೋಣ, ಆಧುನಿಕ ಯಂತ್ರ-ಜ್ಞಾನದ ತಂತ್ರ,
ರೈತನು ಬೆಳೆದ ಹಸಿರಿನಿಂದ ನಾವಾಡುತಿಹೆವು ಉಸಿರ,
ಅನ್ನ - ಆಹಾರದ ಹಿಂದಿದೆ ರೈತನ ಬೆವರಿನ ಶ್ರಮ ಅಪಾರ,
ಅನ್ನವನು ನೀಡಿ ಹಸಿವ ನೀಗಿಸುವ ಸರದಾರ,
ನಾವು ಬದುಕಲು ರೈತನೇ ಆಧಾರ,
ರೈತನಿಗೆ ನಮಿಸುತಿರು ನಿರಂತರ,
ಜೈ ಕಿಸಾನ್ ಎಂಬ ಶ್ರೇಷ್ಠರ ನುಡಿಯು ಹೊತ್ತಿದೆ ಭಾರ,
"ಅನ್ನತೋ ಪ್ರಾಣ:
ಪ್ರಾಣತೋ ಪರಬ್ರಹ್ಮ"
"ಅನ್ನದಾತೋ-ಸುಖೀಭವ" ನಿತ್ಯ-ಸತ್ಯ ಸಾರ
ಕೃಷಿಯಿಂದ ಕೂಡಿದ ಬದುಕು
ಖುಷಿಯಿಂದ ಮುಂದೂಕು...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
8762110543
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ