ಬುಧವಾರ, ಆಗಸ್ಟ್ 11, 2021

ನಾಗರ ಪಂಚಮಿ ( ಕವಿತೆ) - ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.

ನಾಗರ ಪಂಚಮಿ

ಬಂದೈತಿ ಬಾರೇ ಪಂಚಮಿ
ಆಡೋಣವಂತೆ ಜೋಕಾಲಿ
ತಿನ್ನೋಣವಂತೆ ಚಕ್ಕುಲಿ
ಮನೇಲಿ ಮಾಡ್ಯಾರ ಎಳ್ಳುಂಡಿ!

ಕೊಬ್ಬರಿ ಕಣಕವ ಕೈಯಲ್ಲಿ
ತಿರುಗಿಸುವಂತೆ ಖುಷಿಯಲ್ಲಿ
ವಿಧ-ವಿಧ ತಿಂಡಿಯು ಈಗಿಲ್ಲಿ
ಕೂಡಿ ತಿನ್ನೋಣ ಗೆಳೆಯರಿಲ್ಲಿ!

ನಾಗಗೇ ಹಾಲು ಎರೆಯೋಣ
ನಾಗದಾರ ಕೊರಳಲ್ಲಿ ಹಾಕೋಣ
ನಾಗದೋಷವ ಕಳೆಯೋಣ
ಹುತ್ತಿಗೆ ಪೂಜೆಯ ಮಾಡೋಣ!

ಸಂತಸದಿ ಉಯ್ಯಾಲೆ ಆಡೋಣ
ಪಂಚಮಿಯ ಹಬ್ಬವ ಮಾಡೋಣ
ಎಳ್ಳು-ಉಂಡಿಯ ಹಂಚೋಣ
ಎಲ್ಲರೂ ಕೂಡಿ ಹಬ್ಬವ ಮಾಡೋಣ!

- ಶ್ರೀ ಸೋಮಶೇಖರ ಹ ರಾಂಪೂರ ಸಹ ಶಿಕ್ಷಕರು ವಿಜಯಪೂರ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನೊಂದವಳು(ಸಣ್ಣಕಥೆ) - ಎಂ.‌ಆಶಾಕಿರಣ್

ಈ ಕಥಾನಾಯಕಿಯ ಹೆಸರು ಕುಸುಮ, ಇವಳು ಹಳ್ಳಿಯಲ್ಲಿ ಒಂದು ಬಡಕುಟುಂಬದಲ್ಲಿ ಜನಿಸುತ್ತಾಳೆ. ಇವಳ ತಂದೆಗೆ  ಗಂಡು ಮಗು ಬೇಕೆಂಬ ಹಂಬಲ, ಇದರ ಫಲವಾಗಿ ಇವನಿಗೆ ನಾಲ್ಕು ಹೆಣ್ಣುಮಕ...