ಶುಕ್ರವಾರ, ಜನವರಿ 13, 2023

ಗುರುತು ಕಾಲವೆ ಉಳಿಸಿದೆ (ಕವಿತೆ) - ತುಳಸಿದಾಸ ಬಿ ಎಸ್.

ಒಲವು ಕಲಹ ಪ್ರೀತಿಯೊಳಗೆ
ಜೇನು ಗೂಡಿನಂತೆಯೆ
ಸಹನೆ ಮುನಿಸು ಪ್ರೀತಿಯೊಳಗೆ
ಭೂಮಿ ತಾಯಿಯಂತೆಯೆ

ಬಾಳು ನದಿಗೆ ಗಂಡು-ಹೆಣ್ಣು
ಎರಡು ದಡಗಳಂತೆಯೆ
ಎರಡು ತಾಳ ಸೇರಿ ಹೊರಡೊ
ಒಂದೆ ನಾದದಂತೆಯೆ

ಎರಡು ಕಣ್ಣು ಸೇರಿ ಕಾಣೊ
ವಸ್ತು ಒಂದರಂತೆಯೆ
ಎರಡು ದೇಹ ಚಕ್ರದಂತೆ
ಬಾಳು ಬಂಡಿ ಒಂದೆಯೆ

ತಿರುಗಿ ಬರುವ ಸಮಯದಂತೆ 
ಕಷ್ಟ ಸುಖವ ಸಹಿಸುತ
ಭಾನು ಭುವಿಯ ಬೆಳಗಿದಂತೆ
ಕಾಲ ಬದುಕು ಬೆಳಗಲಿ

ಮಿಂದು ಏಳುವ ದೇಹದಂತೆ
ಭಾವ ಮಡಿಯಗೊಳಿಸುವ
ಸರದಿಯಂತೆ ನಮ್ಮನಳಿಸಿ
ಗುರುತು ಕಾಲವೆ ಉಳಿಸಿದೆ
- ತುಳಸಿದಾಸ ಬಿ ಎಸ್,
 ಶಿಕ್ಷಕರು ಸಿಂಧನೂರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಾಳೆ ಇಂದ ಅಂಗಳ 'ಓದು-ಬರಹ' (ಕಥಾ-ಕಾವ್ಯ) ಕಮ್ಮಟ ಪ್ರಾರಂಭ.

ಅಂಗಳ ಕಮ್ಯುನಿಟಿ ಟ್ರಸ್ಟ್ ನ ವಿಚಾರ ಮಂಟಪ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನಸಿರಿ ವೇದಿಕೆ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ಆರು ತಿಂಗಳ *ಆನ್ ಲೈನ್ ...