ಸಾಹಿತ್ಯ ವಿಚಾರಗಳ ಪ್ರಸರಣೆ, ಹಾಗೂ ಸಾಹಿತ್ಯ ರಚನೆಗೆ ಪೋಷಣೆ ನೀಡುವ ಮತ್ತು ಸೂಕ್ತ ವೇದಿಕೆಯನ್ನು ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಬ್ಲಾಗ್ ಓದಿ, ಓದಿಸಿ ಶೇರ್ ಮಾಡಿ ಪ್ರೋತ್ಸಾಹಿಸಿ ಹೆಚ್ಚಿನ ಮಾಹಿತಿಗೆ : 9448241450 ಸಂಪಾದಕರು. ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಬುಧವಾರ, ಜೂನ್ 30, 2021
ಬಾಳಪುಟ (ಕವಿತೆ) - ವಿಜಯಲಕ್ಷ್ಮಿ ಡೋಣಿ.
ವೈದ್ಯೋ ನಾರಾಯಣೋ ಹರಿಃ (ಕವಿತೆ) - ಮೊಹಮ್ಮದ್ ಹುಮಾಯೂನ್ ಎನ್.
ಫಲಿತಾಂಶ ಪ್ರಕಟ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಉಪೇಕ್ಷೆ (ಕರೋನಾ ಜಾಗೃತಿ ಕತೆ) - ಸಂಗೀತ ಶಿಲ್ಪ
ಮೂಡನಂಬಿಕೆಯಲ್ಲಿನ ವೈಜ್ಞಾನಿಕತೆ (ಲೇಖನ) - ದಾನೇಶ್ವರಿ ಬಸವರಾಜ ಶಿಗ್ಗಾವ.
ಡಾ ಬಸವರಾಜ ಕ್ಯಾವಟರ (ಪರಿಚಯ ಲೇಖನ) - ಶ್ರೀ ಶಿವನಗೌಡ ಪೋಲಿಸ್ ಪಾಟೀಲ
ಮಂಗಳವಾರ, ಜೂನ್ 29, 2021
ವೈರಸ್ ಮೇಲಿನ ವಿಜಯ (ಕರೋನಾ ಜಾಗೃತಿ ಕತೆ) - ಲಕ್ಷ್ಮೀ ಯಶಸ್ವಿನಿ.
ವೈರಸ್
ಮೇಲಿನ ವಿಜಯ
ಕರುನಾಡು ಕಥಾ ಸ್ಪರ್ಧೆ ೨೦೨೧ ರಲ್ಲಿ ದ್ವಿತೀಯ ಬಹುಮಾನ ಪಡೆದ ಕತೆ.
ಮಂಗಳ
ಪುರ ಅಂತ ಒಂದು ಊರು. ಆ ಊರಲ್ಲಿ ಸು ೧೫೦ ಮನೆ. ಅದರಲ್ಲಿ ಕೂಲಿ ನಾಲಿ ಮಾಡುವ ಗಂಡು ಹೆಣ್ಣುಗಳು, ವಯಸ್ಸಾಗಿರುವ
ಮುದುಕರು, ಶಾಲೆಗೆ ಹೋಗುವ ಮಕ್ಕಳು, ಹೀಗೆ ಹಲವು ಜನ ಮಂಗಳಪುರದಲ್ಲಿದ್ದರು. ಅದೇ ಊರಿನಲ್ಲಿ ಆಶಾ ರಾಣಿ
ಎಂಬ ಒಬ್ಬ ಅಂಗನವಾಡಿ ಮೇಡಂ ಹಾಗೂ ಅವರ ಒಬ್ಬಳೇ ಮಗಳು ಚಾಂದಿನಿ ವಾಸವಾಗಿದ್ದರು. ಊರಿನವರ ಮಕ್ಕಳು
ಹಲವಾರು ಜನ ಚನ್ನಾಗಿ ಓದಿಕೊಂಡು ಪಟ್ಟಣದಲ್ಲಿ ಕೆಲಸದಲ್ಲಿದ್ದರು. ಊರಿನಲ್ಲಿ ಉಳಿದುಕೊಂಡಿರುವವರಲ್ಲಿ
ತಕ್ಕ ಮಟ್ಟಿಗೆ ಓದಿರುವವಳು ಆಶಾರಾಣಿ ಮಾತ್ರ. ಆವತ್ತು ಒಂದು ದಿನ ಕತ್ತಲ
ರಾತ್ರಿ, ಧನ ಕರುಗಳೆಲ್ಲಾ ಕೊಟ್ಟಿಗೆಯಲ್ಲಿ ಮೆಲುಕು ಹಾಕುತ್ತಿದ್ದರೆ, ಮನೆಯ ಮಂದಿಯೆಲ್ಲಾ ಕೂಲಿ ಮಾಡಿ
ಧಣಿದು ಬಂದು ಮಲಗಲು ರೆಡಿ ಆಗುತ್ತಿದ್ದರು. ಇನ್ನ ಕೆಲವರು ಮನೆ ಹೊರಗೆ ಕೂತು ಹರಟೆಹೊಡೆಯುತ್ತಿದ್ದರೆ
ಆಶಾ ರಾಣಿ ಹಾಗೂ ಮಗಳು ದಾರವಾಹಿ ನೋಡುತ್ತಾ ಹಾಗೆ ಚಾನಲ್ ಬದಲಿಸಿದ್ದೇ ತಡ! ಸೂಟ್ ಬೂಟ್ ಹಾಕಿಕೊಂಡಿದ್ದ
ಆಂಕರ್ ಒಬ್ಬ ಬಾಯಿ ಬಡಿದುಕೊಳ್ಳುತ್ತಿದ್ದ.ಬ್ರೇಕಿಂಗ್ ನ್ಯೂಸ್ ʼಭಾರತಕ್ಕೂ ಬಂತು ಮಹಾಮಾರಿ ಕರೋನಾ. ಸಾಯುವರೇ ಲಕ್ಷ ಲಕ್ಷ
ಜನ ?ʼ ಕೇಳುತ್ತಿದ್ದಂತೆ ಆಶಾರಾಣಿಯ ಎದೆ ದಸಕ್ಕೆಂದಿತು. ಇನ್ನು ನಮ್ಮ ಕತೆ ಮುಗಿದಂತೆ, ಬರಹ್ಮಯ್ಯನವರು
ಹೇಳಿದ ಕಲಿಯುಗದ ಅಂತ್ಯ ಬಂದೇ ಬಿಟ್ಟಿತು ಎಂದು ಚಿಂತಿಸಲು ಪ್ರಾರಂಭಿಸಿದಳು. ಟಿ ವಿ ಆಂಕರ್ ನ ಕಿರುಚಾಟ
ಹಾಗೇ ಮುಂದುವರೆದಿತ್ತು. ಆಶಾರಾಣಿಗೆ ಭಯದಿಂದ ಅಲ್ಲೇ ಪ್ರಾಣ ಹೋಗಿ ಬಿಡುವಷ್ಟರಲ್ಲಿಯೇ ದೇವರ ದಯೆ
ಯೋ ಅಥವಾ ಆಂಕರ್ ಧಣಿದಿದ್ದನೋ ಅಂತೂ ಬಂತು ಒಂದು
ಸಣ್ಣ ಬ್ರೇಕ್ . ʼʼನಿಮ್ಮ ಟಾಯ್ಲೆಟ್ ಶುಭ್ರವಾಗಿದೆಯೇ ?! ಎನ್ನುತ್ತಾ. ಅಷ್ಟರಲ್ಲಿ ಆಶಾರಾಣಿ ಟಿ
ವಿ ಆಫ್ ಮಾಡಿ ಮಗಳಿಗೆ ಮಲಗಲು ಸೂಚಿಸಿದಳು. ತಾನೂ ಮಲಗಿದಂತೆ ನಟಿಸಿದಳಾದರೂ ರಾತ್ರಿಯೆಲ್ಲ ಅವಳಿಗೆ
ನಿದ್ರೆಯೇ ಬಂದಿರಲಿಲ್ಲ.
ಬೆಳ್ಳಿಗ್ಗೆ
ಎದ್ದು ನೋಡುತ್ತಾಳೆ ಊರಿನಲ್ಲೆಲ್ಲಾ ಅದೇ ಕರೋನಾ ಸುದ್ಧಿ,
ಎಲ್ಲೆಲ್ಲೂ ಭಯ, ಆತಂಕ, ಕೂಲಿಗೆ ಹೋಗುವವರಿಗಂತೂ ಮನಸ್ಸೇ ಇಲ್ಲ, ಶಾಲಾ ಕಾಲೇಜುಗಳಿಗೆ ೧೫ ದಿನದ ರಜೆ
ಬೇರೆ ಘೋಷಣೆ ಆಗಿದೆ. ಮಗಳನ್ನು ಜೊಪಾನವಾಗಿ ಮನೆಯಲ್ಲಿಯೇ ಇರುವಂತೆ ಹೇಳಿ ಅಂಗನವಾಡಿಗೆ ಬಂದಳು ಆಶಾ.
೨-೩ ಕೆಲಸಗಳನ್ನು ಈದಿನ ಮುಗಿಸಬೇಕು ಎಂದುಕೊಂಡು ಬಂದಿದ್ದಳಾದರೂ ಮನಸಲ್ಲೆಲ್ಲಾ ಕರೋನಾದೇ ಚಿಂತೆಯಾಗಿ ಯಾವ ಕೆಲಸವನ್ನು ಮಾಡಲಾಗಲಿಲ್ಲ. ತನಗೆ
ತಿಳಿದಿದ್ದ ಅಲ್ಪ ಸ್ವಲ್ಪ ಜ್ಞಾನದಿಂದ ಅಂತರ್ಜಾಲದಲ್ಲಿ ಕರೋನಾದ ಕುರಿತು ಹೆಚ್ಚಿನ ಮಾಹಿತಿಯನ್ನು
ಹುಡುಕಿದಳು. ಅಲ್ಲಿ ಅವಳಿಗೆ ಪೂರ್ತಿ ಮಾಹಿತಿ ಸಿಗಲಿಲ್ಲವಾದರೂ ಹೊರಗೆ ಹೋಗುವಾಗ ಸದಾ ಮಾಸ್ಕ ಧರಿಸುವ
ಇತರರೊಂದಿಗೆ ೩-೪ ಅಡಿಗಳಷ್ಟು ದೈಹಿಕ ಅಂತರ ಕಾಯ್ದುಕೊಳ್ಳುವ ಹಾಗೂ ಕೈ ಕಾಲು ಮೂಗು ಬಾಯಿಗಳನ್ನು ಆಗಾಗ
ಸ್ವಚ್ಛ ಗೊಳಿಸಿಕೊಳ್ಳುತ್ತಾ ಮನೆಯಲ್ಲಿಯೇ ಉಳಿಯುವುದರಿಂದ ಹಾಗೂ ಬಿಸಿ ಬಿಸಿ ಆಹಾರ ಬಿಸಿ ನೀರು ಸೇವನೆಯಿಂದ
ಖಂಡಿತಾವಾಗಿ ಕರೋನಾ ಬರದಂತೆ ಮಾಡಬಹುದು ಎಂದು ಹಾಗೇ ಇಂತಹಾ ಖಾಯಿಲೆಗಳು ಇದು ಮೊದಲಲ್ಲದೇ ಅನೇಕ ಭಾರಿ
ಬಂದು ಹೋಗಿವೆ ಎಂಬುದನ್ನು ಆಶಾರಾಣಿ ಅರಿತುಕೊಂಡಳು. ಈ ವಿಷಯವನ್ನು ಊರವರಿಗೆಲ್ಲಾ ತಿಳಿಸಿ ಅವರನ್ನು
ಕರೋನಾದಿಂದ ಅದಕ್ಕೂ ಮುಖ್ಯವಾಗಿ ಕರೋನಾದ ಆತಂಕ ಹಾಗೂ ಭಯಗಳಿಂದ ಮುಕ್ತರನ್ನಾಗಿಸಬೇಕೆಂದು ನಿರ್ಧರಿಸಿ
ಮನೆಯ ಕಡೆ ಹೊರಟಳು.
ಮನೆಗೆ
ಬಂದು ನೋಡುವಷ್ಟರಲ್ಲಿಯೇ ಮಗಳು ಯಾವುದೋ ನ್ಯೋಸ್ ಚಾನಲ್ ಹಾಕಿಕೊಂಡು ಕುಳಿತಿದ್ದಳು. ಮತ್ತೆ ಇನ್ನ
ಯಾರೋ ಒಬ್ಬ ಆಂಕರ್ ಈವತ್ತು ʼʼಕೋವಿಡ್ ರಣ ತಾಂಡವʼʼ ೧೦೦ ಜನಕ್ಕೆ ಸೋಂಕು ೩ ಜನರನ್ನು ಬಲಿ ಪಡೆದ
ಕರೋನಾʼʼ ಎಂದು ನ್ಯೋಸ್ ಬ್ರೇಕ್ ಮಾಡುತ್ತಿದ್ದ. ಆಶಾ ಟಿವಿ ಆಫ್ ಮಾಡಿ ಹೊರಗೆ ಬಂದಳು ಎಲ್ಲರ ಮನೆಯಲ್ಲೂ ಅದೇ ಬ್ರೇಕಿಂಗ್
ನ್ಯೂಸ್ . ʼʼಸರ್ಕಾರ ೧೫ ದಿನಗಳ ಲಾಕ್ ಡೌನ್ ಘೋಷಣೆ ಮಾಡಿದೆ ,ಲಾಕ್ ಡೌನ್ ಸಮಯದಲ್ಲಿ ಏನು ಇರುತ್ತೆ
ಏನು ಇರುವುದಿಲ್ಲ !ʼʼ ಎಂದು ಆಂಕರ್ ಹೇಳುತ್ತಿದ್ದರೆ, ಮನೆಯ ಮುದುಕಿಯರು ʼʼನಾವು ಇರ್ತೀವೋ ಇಲ್ವೋ
, ಶಿವನೇ ಬಲ್ಲ. ಎಂದು ಮಾತನಾಡಿಕೊಳ್ಳುತ್ತಿದ್ದರು. ಆಶಾ ಊರವರನ್ನೆಲ್ಲಾ ಕರೆದು ತಾನು ತಿಳಿದುಕೊಂಡ
ಕೋವಿಡ್ ನಿಯಂತ್ರಣ ಮಾಡುವ ಕ್ರಮಗಳ ಕುರಿತು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದಳು. ಆಶಾಳ ಉದಾರಗುಣ
ಹಾಗೂ ಬುದ್ಧಿವಂತಿಕೆ ತಿಳಿದಿದ್ದ ಊರಿನವರು ಅವಳ ಮಾತನ್ನು ನಂಬಿದರಲ್ಲದೇ ಅವಳು ಹೇಳಿದ ಎಲ್ಲಾ ಕ್ರಮಗಳನ್ನು
ಪಾಲಿಸಲು ಪ್ರಾರಂಭಿಸಿದರು ಅದಕ್ಕೂ ಮುಖ್ಯವಾಗಿ ನ್ಯೋಸ್ ಚಾನಲ್ ಗಳನ್ನು ನೊಡುವುದು ಬಿಟ್ಟರು. ೨
ದಿನಗಳಲ್ಲಿಯೇ ಪೇಟೆಯಲ್ಲಿ ಕೆಲಸದಲ್ಲಿದ ಮಕ್ಕಳೆಲ್ಲಾ ಲಾಕ್ ಡೌನ್ ಕಾರಣದಿಂದ ಊರಿಗೆ ಮರಳುವುದಕ್ಕೆ
ಪ್ರಾರಂಭಿಸಿದರು. ಊರಿನವರಿಗೆಲ್ಲಾ ತಮ್ಮ ಮಕ್ಕಳು ಇಷ್ಟು ದಿನಗಳ ನಂತರ ಈ ಕರೋನಾ ದಯೇ ಇಂದ ಒಂದಷ್ಟು
ದಿನ ನಮ್ಮೊಂದಿಗೆ ಇರಲು ಬರುತ್ತಿರುವರಲ್ಲ ಎಂದು ಸಂತೋಷಪಡುತ್ತಿದ್ದರೆ, ಆಶಾರಾಣಿಗೆ ಇವರ ಜೊತೆ ಜೊತೆಯಲ್ಲಿಯೇ
ಕರೋನಾ ಕೂಡಾ ಊರಿಗೆ ಬರುವುದೇನೋ ಎಂಬ ಚಿಂತೆ ಕಾಡುತ್ತಿತ್ತು. ಪೇಟೆಯ ಯುವಕರು ಊರಿಗೆ ಬಂದ ಮೇಲೆ ಆಶಾ
ಹೇಳಿದ ಸುರಕ್ಷತಾ ಕ್ರಮಗಳನ್ನು ಊರಿನವರು ಪಾಲಿಸುವುದನ್ನು ನಿಲ್ಲಿಸಿದರು. ಪೇಟೆಯಿಂದ ಬಂದ ಯುವಕರು
ಆಶಾಳ ಮಾತುಗಳನ್ನು ʼಇವಳೇನು ದೊಡ್ಡ ಡಾಕ್ಟರಾ ?, ನಮಗೆ ಬುದ್ಧಿ ಹೇಳೋಕೆ ಬರ್ತಾಳೆ. ಎಂದು ನಿರ್ಲಕ್ಷಿಸ
ತೊಡಗಿದರು.
೨-೩
ದಿನಗಳಲ್ಲಿ ಆ ಊರಿನ ಒಬ್ಬ ಯುವಕನಿಗೆ ತೀವ್ರವಾದ ಜ್ವರ ಕಾಣಿಸಿಕೊಂಡು ಆಸ್ಪತ್ರೆಯ ಪರೀಕ್ಷೆಯಲ್ಲಿ
ಅವನಿಗೆ ಕರೋನಾ ಸೋಂಕು ಬಂದಿರುವುದು ದೃಡಪಟ್ಟಿತ್ತು. ಆಶಾ ತಾನೂ ಕರೋನಾದಿಂದ ನಮ್ಮ ಊರನ್ನು ರಕ್ಷಿಸಬೇಕೆಂದುಕೊಂಡೆ
ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬಹಳ ನೊಂದುಕೊಂಡಳು. ಆ ಯುವಕನ ಜೊತೆಗೆ ಅವನ ಸಂಪರ್ಕದಲ್ಲಿದ್ದ ಮತ್ತೂ ೫-೬ ಮಂದಿಗೆ ಸೋಂಕು ದೃಡಪಟ್ಟಿತ್ತು. ಯುವಕರು ಚೇತರಿಸಿಕೊಂಡರಾದರೂ
ವಯಸ್ಸಾದ ಇಬ್ಬರು ಮುದುಕಿಯರು ಕರೋನಾಗೆ ಬಲಿ ಆಗಬೇಕಾಯಿತು. ಸತ್ತವರನ್ನು ಕೊನೆ ಸಲ ನೋಡುವುದಕ್ಕೂ
ಸಹಾ ಸಾಧ್ಯವಾಗದೇ ಊರಿನವರೆಲ್ಲಾ ಬಹುವಾಗಿ ನೊಂದುಕೊಂಡರು. ಆಶಾಳ ಮಾತನ್ನು ಕೇಳದೇ ಇದ್ದ ಪಶ್ಚಾತಾಪ
ಸಹಾ ಅವರನ್ನು ಕಾಡುತ್ತಿತ್ತು. ಆದದ್ಧ ಆಗಿ ಹೊಗಿದೆ ಇನ್ನಾದರೂ ನಾವು ನಮ್ಮ ಊರನ್ನು ಕರೋನಾದಿಂದ ಕಾಪಾಡಿಕೊಳ್ಳಬೇಕು
ಹಾಗೂ ನಮ್ಮ ಸುತ್ತ ಮತ್ತಲ ಹಳಿಗಳಲ್ಲಿಯೂ ಕರೋನಾ ಕುರಿತು ಜಾಗೃತಿ ಉಂಟು ಮಾಡಬೇಕೆಂದು ಆಶಾ ಊರವರಿಗೆ
ಧೈರ್ಯ ಹೇಳಿದಳು. ಅದೇ ಊರಿನ ಯುವಕರ ತಂಡ ಕಟ್ಟಿಕೊಂಡು
ಮನೆ ಮನೆಗೆ ತೆರಳಿ ಕರೋನಾ ಮುಂಜಾಗ್ರತೆಗ ಬಗ್ಗೆ ಜಾಗೃತಿ ಮೂಡಿಸುವ, ಒಂದು ವೇಳೆ ರೋಗ ಲಕ್ಷಣಗಳು ಕಾಣಿಸಿಕೊಂಡರೆ
ತಕ್ಷಣ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯುವ ಬಗ್ಗೆ ಆ ಜನರಿಗೆ ಮನವರಿಕೆ ಮಾಡತೊಡಗಿದರು. ಅಷ್ಟೇ
ಅಲ್ಲದೇ ನಿಮ್ಮೊಂದಿಗೆ ನಾವಿದ್ದೇವೆ, ಭಯ ಪಡಬೇಡಿ. ಎಂದು ಈ ಯುವಕರ ತಂಡ ಎಲ್ಲರಿಗೂ ದೈರ್ಯ ಹೇಳಿ ಅವರ
ಮನ ಪರಿವರ್ತನೆ ಮಾಡಲು ಪ್ರಾರಂಭಿಸಿದರು.
ಆಶಾರಾಣಿ
ಲಾಕ್ ಡೌನ್ ಕಾರಣದಿಂದ ಕೆಲಸಗಳು ಇಲ್ಲದೇ ಊಟಕ್ಕೂ ಸಹಾ ಕಷ್ಟ ಪಡುತ್ತಿದ್ದವರನ್ನು ಅವರು ಮನೆಗಳ
ಬಳಿ ಹೋದಾಗ ಗಮನಿಸುತ್ತಿದ್ದಳು. ಇದಕ್ಕಾಗಿ ತಮಗೆ ತಿಳಿದ ಕೆಲವು ಧನಿಕರ ಸಂಘ ಸಂಸ್ಥೆಗಳ ಸಹಾಯ ಪಡೆದು
ಬಡವರಿಗಾಗಿ ಆಗಾರದ ಕಿಟ್ ಗಳನ್ನು ವಿತರಿಸುವ ಕೆಲಸವನ್ನು ಸಹಾ ಆಶಾಳ ನೇತೃತ್ವದ ಈ ತಂಡ ಮಾಡಿತು.
ಹೀಗೆ ಭಯ ಆತಂಕಗಳಿಂಗಳಿಂದ ಮುಕ್ತವಾಗಿ ರಾಮಾಯಣ ಮಹಾಭಾರತ ದಾರವಾಹಿಗಳನ್ನು ನೊಡುತ್ತಾ, ಅಜ್ಜಿಯರು
ಮಕ್ಕಳಿಗೆ ಕಥೆಗಳನ್ನು ಹೇಳುತ್ತಾ , ಮನೆಯಲ್ಲಿ ಆಟ ಆಡುತ್ತಾ, ಊರಿಂದ ಬಂದಿದ್ದ ಮಕ್ಕಳಿಗೆ ಒಳ್ಳೆಯ
ಅಡುಗೆಗಳನ್ನು ಮಾಡಿಕೊಡುತ್ತಾ ಊರಿನವರೆಲ್ಲಾ ಕಾಲ ಕಳೆದರು. ಯಾರೂ ಸಹಾ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು
ಮರೆಯಲಿಲ್ಲ ಹಾಗೂ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಹೋಗುತ್ತಿರಲಿಲ್ಲ.
ಹೀಗೆ
ಕೊವಿಡ್ ಎಲ್ಲಾ ಕಡೆ ಕಡಿಮೆ ಆಗುತ್ತಾ ಬರುವ ವೇಳೆಗಾಗಲೇ ಕೋವಿಡ್ ನಿಯಂತ್ರಕ ಲಸಿಕೆ ಬಂದಿದೆ ಎಂಬುದನ್ನು
ತಿಳಿದು ಆಶಾ ಅತ್ಯಂತ ಸಂತೋಷ ಪಟ್ಟಳು. ತಮ್ಮ ಊರಿನ ಹಾಗೂ ನೆರೆಹೊರೆಯ ಊರುಗಳವರಿಗೆಲ್ಲಾ ತಪ್ಪದೇ ಲಸಿಕೆ
ಹಾಕಿಸಬೇಕೆಂದು ನಿರ್ಧರಿಸಿದಳು. ಆದರೆ ಮಾಧ್ಯಮಗಳಲ್ಲಿ ಹಾಗೂ ಜನರ ಭಾಯಲ್ಲಿ ಲಸಿಕೆ ಹಾಕಿಸಿಕೊಂಡು
ಆ ಊರಲ್ಲಿ ಇವರು ಸತ್ತರು ಈ ಊರಲ್ಲಿ ಅವರು ಸತ್ತರು ಎಂಬ ವದಂತಿಗಳು ಹರಿದಾಡ ತೊಡಗಿದ್ದವು. ಇದನ್ನು
ಕೇಳಿ ಆಶಾಳಿಗೂ ಸಹಾ ಭಯವಾಗಿದಲ್ಲದೇ ನಾವ್ಯಾರೂ ಈ ಲಸಿಕೆ ಪಡೆಯಬಾರದು ಎಂದುಕೊಳ್ಳುತ್ತಿದ್ದಾಗಲೇ,
ಪ್ರಪಂಚದ ಹಲವು ದೇಶಗಳಲ್ಲಿ ಇದೇ ಮಾದರಿಯ ಲಸಿಕೆ ಕಂಡು ಹಿಡಿಯಲಾಗಿದ್ದು ಲಕ್ಷಾಂತರ ಮಂದಿ ಲಸಿಕೆ ಪಡೆಯುತ್ತಿರುವುದು
ಹಾಗೂ ರೋಗಮುಕ್ತವಾಗುತ್ತಿರುವುದನ್ನು ಹಾಗೇ ವಿಶ್ವ ಆರೋಗ್ಯ ಸಂಸ್ಥೆಯೇ ಈ ಲಸಿಕೆಗಳನ್ನು ಶಿಪ್ಪಾರಸ್ಸು
ಮಾಡಿರುವರು ಎಂಬುದನ್ನು ತಿಳಿದುಕೊಂಡಳು. ಇನ್ನು ಊರಿನಲ್ಲಿ
ಹರಿದಾಡುತ್ತಿದ ವದಂತಿಗಳ ಬಗ್ಗೆ ವಿಚಾರಣೆ ಮಾಡಲಾಗಿ ಅವೆಲ್ಲವೂ ಸತ್ಯಕ್ಕೆ ದೂರವಾದವು ಎಂಬುದು ಆಶಾಳಿಗೆ
ತಿಳಿಯಿತು. ತಾನೂ ಈ ಹಿಂದೆ ಹಲವು ಶಿಶುಗಳಿಗೆ ವ್ಯಾಕ್ಸಿನ್ ಮಾಡಿಸಿದವಳಾಗಿದ್ದು ತೋಳಿಗೆ ಚುಚ್ಚು
ಮದ್ದು ನೀಡಿದಾಗ ಆ ಭಾಗದಲ್ಲಿ ೨-೩ ದಿನ ನೊವು ಕಾಣಿಸಿಕೊಳ್ಳುವುದು ಹಾಗೂ ಜ್ವರ ಬರುವುದು ಸಾಮಾನ್ಯ
ಎಂಬುದು ಆಶಾಳಿಗೆ ಈಗಾಗಲೇ ತಿಳಿದಿತ್ತು. ಅದಕ್ಕೂ ಮೀರಿ ಸಾವು ಸಂಭವಿಸಿದಲ್ಲಿ ಅದು ಬೇರೆ ಯಾವುದೋ
ಕಾರಣದಿಂದ ಆಗಿರುತ್ತದೆ ಅಷ್ಟೇ ಹೊರತು ಅದಕ್ಕೆ ಕೋವಿಡ್ ವ್ಯಾಕ್ಸಿನ್ ಕಾರಣವಾಗಿರುವುದಿಲ್ಲ ಎಂಬುದನ್ನು
ದೃಡಪಡಿಸಿಕೊಂಡ ನಂತರ ಆಶಾ ತನ್ನ ತಂಡದೊಂದಿಗೆ ವ್ಯಾಕ್ಸಿನ್ ಕುರಿತ ಜಾಗೃತಿಗೆ ಮುಂದಾದಳು. ಅಷ್ಟರಲ್ಲಿ
ಕೋವಿಡ್ ೨ ನೇ ಅಲೆ ಸದ್ದು ಮಾಡಲು ಪ್ರಾರಂಭವಾಗಿ, ಕೋವಿಡ್ ವ್ಯಾಕ್ಸಿನ್ ತೆಗೆದುಕೊಳ್ಳದಿದ್ದಲ್ಲಿ
ನಮಗೆ ಈ ಕರೋನಾದಿಂದ ಮುಕ್ತಿ ಇಲ್ಲ ಎಂಬುದನ್ನು ಆಶಾ ಮತ್ತಷ್ಟು ಪ್ರಚಾರ ಮಾಡಿದಳು ಹಾಗೂ ಎಲ್ಲರಿಗೂ
ಸೂಕ್ತ ಮಾರ್ಗದರ್ಶನ ನೀಡಿ ಅವರೆಲ್ಲಾ ವ್ಯಾಕ್ಸಿನ್ ಪಡೆದುಕೊಳ್ಳುವಂತೆ ಮಾಡಿ, ಜನರನ್ನು ಕೋವಿಡ್
ವೈರಸ್ ನಿಂದ ಪಾರು ಮಾಡಿ ದೇಶಕ್ಕೆ ಮಾದರಿ ಎನಿಸಿಕೊಂಡಳು.
ಕೋವಿಡ್
ನಿಯಂತ್ರಣಕ್ಕಾಗಿ ಶರ್ಮಿಸುತ್ತಿರುವ ಆಶಾಳಂತಹ ಸಾವಿರಾರು ಜನ ಕೋವಿಡ್ ವಾರಿಯರ್ಸ್ ಗೆ ಈ ಕಥೆ ಅರ್ಪಣೆ.
ಕಥೆಯ
ನೀತಿ.
೧)
ಕೋವಿಡ್ ಕುರಿತಾದ ಮುಂಜಾಗ್ರತಾ ಕ್ರಮಗಳನ್ನು ಸರಿಯಾಗಿ ಪಾಲಿಸುವುದರಿಂದ ಕರೋನಾವನ್ನು ತಡೆಗಟ್ಟಬಹುದು.
೨)
ಕರೋನಾ ಕುರಿತು ಭಯ ಪಡಬಾರದು ಆದರೆ ಎಚ್ಚರಿಕೆ ಇರಬೇಕು.
೩)
ಎಲ್ಲರೂ ತಪ್ಪದೇ ಕರೋನಾ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ವ್ಯಾಕ್ಸಿನ್ ಇಂದ ಯಾವುದೇ ಅಡ್ಡ ಪರಿಣಾಮಗಳು
ಇಲ್ಲ.
-
ಲಕ್ಷ್ಮೀ
ಯಶಸ್ವಿನಿ ಸಿ ಎಸ್ D/O
ಸಿ ಆರ್
ಶ್ರೀನಿವಾಸನ್
ದ್ವಿತಿಯ
ಪಿಯುಸಿ
ನ್ಯೂಟನ್
ಇಂಟಿಗ್ರೇಟೆಡ್ ಪಿ ಯು ಕಾಲೇಜ್
ಚಿಕ್ಕಬಳ್ಳಾಪುರ.
PH
: 9019946886.
(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : 9448713659 ವಾಟ್ಸಪ್ ಮಾತ್ರ )
ನೀ ಮಾಯೆಯೋ, ನೀ ಛಾಯೆಯೋ !(ಕವಿತೆ) - ಶ್ರೀಮತಿ ಆಶಾ ಮುನಿರಾಜ್.
ಹಕ್ಕಿ ಮತ್ತು ಮರಿ (ಸಣ್ಣ ಕತೆ) - ರಾಕೇಶ್ ವಿ ಪತ್ತಾರ.
ಮುಗಿಲ ಹಕ್ಕು ಕೊಡಿ ನಮಗೆ........(ಎನ್ ಎಲ್ ಚನ್ನೇಗೌಡರ ಪರಿಚಯ ಲೇಖನ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.
ಕಂದನ ಕನಲು (ಶಿಶುಗೀತೆ) - ಕಮಲಮ್ಮ.
ಚಿಂತೆ ಚಿತೆಗೆ ದಾರಿ (ಕವಿತೆ) - ಜಿ ಟಿ ಆರ್ ದುರ್ಗಾ ಬಂಗಾರಪೇಟೆ.
ಶಾಲೆ ತೆರೆಯುವ ಬಯಕೆ (ಕವಿತೆ) - ಆನಂದಜಲ.
ಗಜಲ್ - ಆರ್ ಶೈಲಜಾ ಬಾಬು
ವಿಶೇಷ ಸೂಚನೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.
ಸೋಮವಾರ, ಜೂನ್ 28, 2021
ಕರೋನಾ ಬಂದ್ರೆ ಡೇಂಜರಪ್ಪೊ (ಕರೋನಾ ಜಾಗೃತಿ ಕವಿತೆ) - ಶ್ರೀ ಕೆ ಎನ್ ಅಕ್ರಂಪಾಷ.
ಸರ್ಕಾರಿ ಶಾಲೆ ಉಳಿಸಿ (ಲೇಖನ ಬರಹ) - ಸಚಿನ್ ಚವಾನ್.
ಕನಕ ಗೀತೆ (ಕವಿತೆ) - ಅಂಬರೀಶ್ ನಾಯ್ಕೋಡಿ
ಕೋವಿಡ್ ನಿಯಂತ್ರಣ (ಕರೋನಾ ಜಾಗೃತಿ ಕತೆ) - ಪಿ ಎಂ ಕೋಕಿಲ ಜಗದೀಶ್.
ಗಜಲ್ - ಶ್ರೀಮತಿ ಗಿರಿಜಾ ಮಾಲಿ ಪಾಟೀಲ
ವನಸಿರಿ (ಕವಿತೆ) - ಆನಂದಜಲ.
ಟಂಕಾ ಬರೆಯಿರಿ ಪಂಕ ಕಟ್ಟಿಕೊಂಡು (ಲೇಖನ ಬರಹ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.
'ರುಬಾಯಿಗಳು' ಮತ್ತು ಡಿ ವಿ ಜಿ (ಕಾರ್ಯಕ್ರಮದ ವರದಿ) - ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ.
ಭಾನುವಾರ, ಜೂನ್ 27, 2021
ಅನುಭವವವೇ ಜೀವನ ಸಾರ (ಕರೋನಾ ಜಾಗೃತಿ ಕತೆ) - ಶ್ರೀಮತಿ ಜೋಶಿ ನಿಸರಾಣಿ.
ಕಲಿತು ಮುಗಿಯದು (ಕರೋನಾ ಜಾಗೃತಿ ಕತೆ) - ಅಖಿಲಾ ಶೆಟ್ಟಿ ಪುತ್ತೂರು.
ಭಯಬೇಡ..! (ಕರೋನಾ ಜಾಗೃತಿ ಕತೆ) - ನಿಧಿ ಬಿ ನಾಯ್ಕ್
ಶನಿವಾರ, ಜೂನ್ 26, 2021
ಸಾಗಾಕಮ್ಮ (ಜಾನಪದ ಶೈಲಿಯ ಕಿರು ನಾಟಕ) - ಅಂಜನ್ ಕುಮಾರ್ ಪಿ ಆರ್.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.
ದಿನಾಂಕ 1-7 2025, ಬೇಲೂರು: ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...
-
ಅಂತರಾಷ್ಟ್ರೀಯ ಮಹಿಳಾ ದಿನ... International WOMEN'S Day... ಆತ್ಮೀಯ ಗೆಳತಿ ಅಕ್ಷತಾ ಸಾಂಸ್ಕೃತಿಕ ನಗರಿ ಮೈಸೂರಿನ ಜಿಲ್ಲೆಯ ತವರೂರಿನ ಹೆಣ್ಣು...
-
ಶ್ರೀಮತಿ ಆಶಾಕಿರಣ ಬೇಲೂರು. ಶಿಕ್ಷಕರು, ಬರಹಗಾರರು ಹಾಗೂ ಸಾಮಾಜ ಸೇವಕರು. ಬೇಲೂರು, ಹಾಸನ ಜಿಲ್ಲೆ. ಇವರು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ 14 ನೇ ವಾರ್ಷಿಕೋತ್ಸವ...
-
ಬಾಲ್ಯದ ಆ ದಿನಗಳು....... ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮ ಹನುಮಾನ ಮಂದಿರ,ಗಣಪತಿ ಮಂದಿರ,ವಿಠಲನರುಕ್ಮಿಣಿ ಮಂದಿರ ,ದುರ್ಗವ್ವ, ಮರುಗವ್ವ ಹೀಗೆ ಹತ್ತು ಹಲವ...