ಬುಧವಾರ, ಸೆಪ್ಟೆಂಬರ್ 28, 2022

ಎಲ್ಲವೂ ಸಾಧ್ಯ - ಅವರವರ ಸಾಮರ್ಥ್ಯ (ಲೇಖನ) - ಶಾಂತಾರಾಮ ಶಿರಸಿ.

ಇದು ಸಾಧ್ಯವೋ-ಅಸಾಧ್ಯವೋ,
ಆಗುತ್ತೋ -ಆಗಲ್ವೋ,
ಮಾಡ್ತೀಯಾ-ಮಾಡಲ್ವಾ,
ಹು-ಉಹೂ,
ಐ ಕ್ಯಾನ್-ಐ ಕಾಂಟ್
ಎಸ್-ನೋ...ಹೀಗೆ ಅನೇಕ ಸಮಾನಾರ್ಥಕಗಳು ನೋಡಬಹುದು...

ಈ ಮನುಷ್ಯನಿಂದ ಎಲ್ಲವೂ ಸಾಧ್ಯ.
ಆದರೆ ವಿಧಿಯ ಮುಂದೆ ಆಟವಾಡಲು ಅಸಾಧ್ಯ.

ಕಾಡು ,ಪೊಟರೆ-ಗುಹೆಯಿಂದ ಗಗನ ಚುಂಬಿ ಕಟ್ಟಡ,
ಭೂಮಿಯಿಂದ ಚಂದ್ರನ ಮೇಲೆ,
ಮನೆ ಅಂಗಳದಿಂದ ಚಂದ್ರನ ಅಂಗಳಕ್ಕೆ,
ಕಲ್ಲು ಉಜ್ಜಿ ಬೆಂಕಿ ಮಾಡುವಲ್ಲಿಂದ ,ಪಂಜು,ಚಿಮಣಿ ದೀಪ,ಪೆಟ್ರೋಮ್ಯಾಕ್ಸ್ ಬೆಳಕಿನಿಂದ ಹಿಡಿದು ವಿದ್ಯುತ್,ಸೌರಶಕ್ತಿ,ಪವನಶಕ್ತಿಯಿಂದ ಬೆಳಕು ಎಲ್ಲೆಡೇ ಹರಿದಾಡುವಂತೆ ಸಾಧ್ಯವಾಗಿಸಿದೆ.
ಪಾರಿವಾಳಗಳ ಮೂಲಕ ಸಂವಹನ ದಿಂದ ಅಂಚೆ,ಕಾಗದ,ಪತ್ರ,ಉಪಗ್ರಹ, ದೂರದರ್ಶನ,ಮೊಬೈಲ್ ವರೆಗೆ,
ಈ ತಂತ್ರಜ್ಞಾನದಿಂದ 'ವಸುದೈವ ಕುಟುಂಬಕಂ'ಎಂಬಂತೆ ಅಂಗೈಯಲ್ಲಿ ಇಡಿಯ ವಿಶ್ವವನ್ನೇ ಕೂತಲ್ಲಿಂದ  ನೋಡಬಹುದನ್ನು ಸಾಧ್ಯವಾಗಿಸಿದ್ದಾರೆ.

ಮನುಷ್ಯನು ಎಲ್ಲವನ್ನೂ ಸಾಧ್ಯವಾಗಿಸಿದ್ದಾನೆ.
ಒಂಚೂರು ನೋಡೊಣ ಬನ್ನಿ..
ಕೂಸು ಹುಟ್ಟಿದಾಗ ಅಳುವುದು,
ತಾಯಿಯ ಎದೆಹಾಲು ಕುಡಿಯುವುದು,
ಬೆಳವಣಿಗೆ ಆಗುತ್ತಿದ್ದಂತೆ ತೆವಳುವುದು,
ಹರಿದಾಡುವುದು,ಅಂಬೆಗಾಲನ್ನಿಟ್ಟು ಮುಂದೆ ಸಾಗುವುದು,
ನೋಡಿ ನಗುವುದು,
ಮ್ಮ,ಮ್ಮ,ಮ್ಮ,ಅಮ್ಮ ಎನ್ನುವುದು,
ಕೈ ಹಿಡಿದು ನಡೆಸಿದಾಗ ನಡೆಯುವುದು,
ತಂದೆ-ತಾಯಿಯರನ್ನು ಅನಿಸರಿಸುವುದು,
ಇತರರನ್ನು ಗುರುತಿಸುವುದು..
ಹೀಗೆ ಒಂದು ಹಂತ.
ನಂತರ ಮಗುವು ಶಿಕ್ಷಣ ಕಲಿಯುವುದು,
ಅಲ್ಲಿ ಶಿಕ್ಷಕರು ಪ್ರಭಾವ ಬೀರುವುದು,
ಗೆಳೆಯ-ಗೆಳತಿಯರು ಬಿಗಿಯಾದ ಬಂಧವು,
ಹದಿಹರೆಯದ ಪ್ರೀತಿ-ಪ್ರೇಮ-ಪ್ರಣಯವು,
ಸಾಕಷ್ಟು ಏರು-ಪೇರು-ಆತಂಕವು,
ಕೆಲವರು ಇಲ್ಲೇ ಕುಸಿಯುತ್ತಾರೆ.
ಮುಂದೆ ಸಾಗುತ್ತಾ ಜವಾಬ್ದಾರಿ ತಲೆಗೆ ಹತ್ತುವುದು.
ಎಲ್ಲವೂ ಸಾಧ್ಯ ಅದು ನಾವು ತೆಗೆದುಕೊಳ್ಳುವ ರೀತಿಯಿಂದ..

ಕೆಲವರು ಶಿಕ್ಷಣ ಪಡೆಯುವುದು ಅರ್ಧಂಬರ್ಧ,ಅದು ಮನೆ,ಮನಿ,ಮನಸ್ಸಿನ,ಬಡತನ,ಶ್ರೀಮಂತಿಕೆ ಕಾರಣಗಳು ಬಹಳಷ್ಟಿವೆ.
ಇನ್ನೂ ಹಲವರು ಶಿಕ್ಷಣ ಪಡೆದು ಒಂದೊಳ್ಳೆ ಉದ್ಯೋಗ ಪಡೆದು ಸೆಟಲ್ ಆಗುವ ಪರ್ಫೆಕ್ಟ್ ಪ್ಲ್ಯಾನ್ ಹಾಕಿರುತ್ತಾರೆ.

ಏನೇ ಆದರೂ ಪ್ರತಿಯೊಬ್ಬರೂ ಬದುಕಲೇ ಬೇಕು.
ಬದುಕೆಂಬುದು ಎಲ್ಲವನ್ನೂ ಸಾಧ್ಯವಾಗಿಸುವಂತೆ ಮಾಡಿಸುತ್ತದೆ.
ಬದುಕಿಗಾಗಿ ಏನಾದರೂ ಸಾಧ್ಯವಾಗಿಸಿಕೊಳ್ಳಲೇಬೇಕು.

ಮನುಷ್ಯ ಎಲ್ಲವನ್ನೂ ಕಲಿಯುತ್ತಿರುತ್ತಾನೆ.
ಅವನಿಂದ ಎಲ್ಲವೂ ಸಾಧ್ಯ.
ಅದರಲ್ಲಿ ಅವರವರ ಮಾನಸಿಕ,ದೈಹಿಕ ಸಾಮರ್ಥ್ಯ, ಆರೋಗ್ಯ, ಶಿಕ್ಷಣ, ಬುದ್ಧಿವಂತಿಕೆ,ಇತ್ಯಾದಿ ಅನೇಕ ಅಂಶಗಳ ಮೇಲೆ.
ಮಗುವೊಂದು ಬೆಳೆಯುತ್ತಿದ್ದಂತೆ ನಡೆಯುತ್ತದೆ.
ಸೈಕಲ್ ಓಡಿಸುತ್ತದೆ.ಅವರವರ ಸಾಮರ್ಥ್ಯಕ್ಕೆ ತಕ್ಕಂತೆ 
ಮೋಟಾರ್ ಬೈಕ್,ಕಾರು,ಬಸ್ಸು,ವಿಮಾನ,ಓಡಿಸುವರು.

ಹಾಗೇ ಬಹುಪಾಲು ಜನರು ರೈತರಾಗುವರು,ಸೈನಿಕರಾಗುತ್ತಾರೆ, ಶಿಕ್ಷಕರು,ಬೋಧಕರು,ಪ್ರೊಫೆಸರ್ ಗಳಾಗುತ್ತಾರೆ, ಆಧ್ಯಾತ್ಮಿಕ,ಶಾಸ್ತ್ರ ಪಂಡಿತರು ಚಿಂತಕರಾಗುತ್ತಾರೆ,
ಬಹುಪಾಲು ಮಂದಿ ಕೂಲಿ ಕಾರ್ಮಿಕರಾಗುತ್ತಾರೆ,
ಡ್ರೈವರ್ಸ್ಗಳು-ಪೈಲೆಟ್ಸ್ಗಳು,
ಪೋಲಿಸರು,ಲಾಯರ್ಸ್ಗಳು,ಹೋರಾಟಗಾರರು,
ಪರಿಸರವಾದಿಗಳು,ಪತ್ರಕರ್ತರು,
ಅಧಿಕಾರಿಸಿಬ್ಬಂಧಿಗಳು,ನಟರು-ನಿರ್ದೇಶಕರು,ಕಲಾವಿದರು,ಸಾಹಿತಿಗಳು-ಕವಿಗಳು-ಬರಹಗಾರು,ಹಾಡುಗಾರರು,ಡ್ಯಾನ್ಸರ್ಸಗಳು,ಚಿತ್ರ-ಶಿಲ್ಪಕಲಾಕಾರಾರಾಗುತ್ತಾರೆ.
ಬಿಲ್ಡರ್ಸ್,ಡೀಲರ್ಸ್,ಬಿಜಿನೆಸ್ಮ್ಯಾನ್ಗಳು,ವ್ಯಾಪಾರಸ್ಥರು,
ಎಂಜಿನಿಯರ್ಸ್ಗಳು,ಡಾಕ್ಟರ್ಸ್ಗಳು-ನರ್ಸ್ಗಳು,ಅಕೌಂಟಂಟ್ ಗಳು,
ಕ್ರೀಡಾಪಟುಗಳು, ವಿಜ್ಞಾನಿಗಳು-ತಂತ್ರಜ್ಞರು,ಮ್ಯೆಕಾನಿಕ್ಗಳು,
ಖಾಸಗಿ ಸಂಘ-ಸಂಸ್ಥೆಗಳು,ಜನಪ್ರತಿನಿಧಿಗಳು,ಮಂತ್ರಿಗಳು,
ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡು ಎಲ್ಲವನ್ನೂ ಸಾಧ್ಯವಾಗಿಸಿದ್ದಾರೆ,
ಸಾಧ್ಯವಾಗಿಸುತ್ತಿದ್ದಾರೆ.

ಸಾಧ್ಯವಾಗಿಸಿದವರ ಬಗೆಗಿನ ಹೊತ್ತಿಗೆಗಳು,ಗೂಗಲ್ ಮಾಹಿತಿಗಳು,ಓದಿದರೂ ಈ ಜೀವನದಲ್ಲಿ ಮುಗಿಸಲು ಸಾಧ್ಯವಾಗುವುದಿಲ್ಲ.
ಪ್ರತಿಯೊಬ್ಬರಿಗೂ ಸಹ ಏನೋ ಕನಸು,ಗುರಿ ಇರುತ್ತೆ.
ಸ್ಟಾರ್ಗಳೆಂದು ,ರೋಲ್ ಮಾಡೆಲ್ ಗಳೆಂದು ಕರೆಸಿಕೊಳ್ಳುವವರು ಎಲ್ಲರಿಗೂ ಮಾದರಿಯಾಗಿರುತ್ತಾರೆ.
ಪ್ರತಿಯೊಬ್ಬರಿಗೂ ನಾನೂ ಸಹ ಅವರಂತೆ ಆಗಬೇಕು ಎಂದು ಅನಿಸಿಯೇ ಅನಿಸಿರುತ್ತೇ.

ಆದರೆ ನಮ್ಮಿಂದ ಸಾಧ್ಯವೇ ಎನ್ನುವುದೊಂದೇ ಪ್ರಶ್ನೇ.
ಇದರ ಹಿಂದಿನ ಸ್ಥಿತಿ-ಪರಿಸ್ಥಿತಿ ಗೊತ್ತಿಲ್ಲ.
ನಾವು ನಮ್ಮಿಂದ ಏನಾದರೊಂದು ಸಾಧ್ಯವಾಗಿಸುವುದಾದರೆ ಸಾಧಿಸಿದವರ ಬಗ್ಗೆ ಅವರ ಸತತ ಶ್ರಮ,ಏಕಾಗ್ರತೆ,ಹೋರಾಟ,ದಿಟ್ಟ ನಿಲುವು,ಗುರಿಯೆಡೆಗಿನ ಗಮನ,ಅವರು ಸಾಗಿದ ದಾರಿ ನೋಡಲೇ ಬೇಕು.
ಆಗ ಸಾಧ್ಯ.
ಈ ಬದುಕು ಬೇಸರವಾದಾಗ ನಮಗಿಂತಲೂ ಕೆಳಗಿನವರ ದುಡಿದು ಹೇಗೆ ಬದುಕುತ್ತಿದ್ದಾರೆ ಎನ್ನುವುದು ಸ್ವಲ್ಪ ನೋಡಿ ಮನಸ್ಸನ್ನು ಗಟ್ಟಿಗೊಳಿಸಿಕೊಳ್ಳಬೇಕು.
ಹಾಗಾಗಿ ಅಸಾಧ್ಯವಾದುದು ಯಾವುದೂ ಇಲ್ಲ.
ಇದು ಸಾಧ್ಯವೆಂದು ಸಾಧಿಸಿದವರ ನೈಜ ಕಥೆಗಳು ಕಣ್ಮುಂದೆ ಕುಣಿಯುತಿರುವಾಗ....
I M POSSIBLE.....👍


- ಶಾಂತಾರಾಮ ಶಿರಸಿ,
ಉತ್ತರ ಕನ್ನಡ...7676106237.

ಮಂಗಳವಾರ, ಸೆಪ್ಟೆಂಬರ್ 20, 2022

ನಾವು 'ಗೇ'ಗಳೇ ಹೀಗೆ (ಕವಿತೆ) - ಗೌತಮ್ ಗೌಡ(ಮಾನಿನಿ)

ಹೌದು ಕಣೋ
ಸುಭಾಸ್
ನಾವು ಗೇ ಗಳೇ
ಹೀಗೆ

ಪ್ರಕೃತಿ ಸಹಜತೆಯಿಂದ
ಹೀಗೆ ಹುಟ್ಟಿದ ನಾವು
ಜಗತ್ತಿನ ಎದುರಿಗೆ ಅಸಹಜರಾಗುತ್ತೇವೆ.
ಜನರ ಅಸಹ್ಯಕ್ಕೆ ಗುರಿಯಾಗುತ್ತೇವೆ.

ಜನಗಳು ಕಟ್ಟುವ 
ಅವಾಚ್ಯ ನಾಮಗಳನ್ನು
ಕೇಳಿಯು ಕೇಳದಂತೆ
ಜೀವಿಸುತ್ತೇವೆ
16ರಲ್ಲಿ ಅಲ್ಲೊಬ್ಬನ
ಕಣ್ಣಿನ ಕಾಂತಿಗೆ ಮೋಹಿತರಾಗಿ
ಪ್ರೀತಿಯ ವಿಷಯ ಮುಟ್ಟಿಸಲು ಹೆಣಗುತ್ತೇವೆ
ಹೇಳಿ ಏಟು ತಿನ್ನುವ ಬದಲು
ಹೇಳದೆ ಇರುವುದೇ ಲೇಸು ಸುಮ್ಮನಾಗುತ್ತೇವೆ

21ರಲ್ಲಿ ಸಿಕ್ಕ ಗೆಳೆಯನನ್ನು
ಶಾಶ್ವತವಾಗಿ ಉಳಿಸಿಕೊಳ್ಳವ
ಸಾಹಸ ನಡೆಸುತ್ತೇವೆ
ಅವನು ಇನ್ಯಾರನ್ನೋ
ಮದುವೆಯಾದಾಗ
ಆತ್ಮ ಹತ್ಯೆಗೆ ಪ್ರಯತ್ನ ನಡೆಸುತ್ತೇವೆ
ಸಾಯುವುದು ಸುಲಭವಲ್ಲ ಎಂದು ತಿಳಿದಾಗ
ಬದುಕಲೊರಡುತ್ತೇವೆ

ಮನೆಯವರ ಬಲವಂತ
ತಾಳಲಾರದೇ
25ರಲ್ಲಿ ಯಾವುದೊ ಹುಡುಗಿಯ
ಮದುವೆಯಾಗಿ ಸತ್ತು ಬದುಕಿದಂತೆ
ಜೀವಿಸುತ್ತೇವೆ

28ರಲ್ಲಿ ಯಾವುದೆ ಅವಕಾಶವಿಲ್ಲದೆ
ಅಂಕಲ್ ಗಳಿಗೆ ದೇಹ ಚಾಚುತ್ತೇವೆ

45ರಲ್ಲಿ ಕಾಮ ಮತ್ತೆ ತೆನೆ ಬಿಟ್ಟಾಗ
ತರುಣನೊಬ್ಬನ ತೊಡೆಯ ಮೇಲೆ ಕೈ ಇಟ್ಟು
ಕಪಾಲ ಮೋಕ್ಷ ಮಾಡಿಸಿಕೊಳ್ಳುತ್ತೇವೆ

ಸಹಜತೆ ಇಂದ ಹೀಗೆ ಹುಟ್ಟಿದರು
ಮನೆ, ಮಾನಕ್ಕಾಗಿ
ಅಸಹಜವಾಗಿ ಬದುಕಿ
ಕೊನೆಗೊಂದು ದಿನ ಇಲ್ಲವಾಗುತ್ತೇವೆ
ಮತ್ತೆ ಮತ್ತೆ ಹುಟ್ಟುತ್ತಾ,, ಇದ್ದು ಇಲ್ಲದಂತೆ
ಜೀವಿಸುತ್ತೇವೆ

ಹೌದು ಕಣೋ
ಸುಭಾಸ್
ನಾವು 'ಗೇ' ಗಳೇ ಹೀಗೆ.

(ಪ್ರಭಾವ ಹಾಗೂ ಅನುಕರಣೆ :ಪ್ರತಿಭಾ ಅವರ ನಾವು ಹುಡುಗಿಯರೇ ಹೀಗೆ ಕವಿತೆ)

-maanini
Gowtham Gowda.

ನನ್ನ ಮೆಚ್ಚಿನ ವಿಷ್ಣುದಾದ (ಲೇಖನ) - ಮಾನಸ ಎಂ ಸೊರಬ.

ಕನ್ನಡ ಚಲನಚಿತ್ರ ಜಗತ್ತಿನ ತಾರೆಯಾಗಿ ದಶಕಗಳ ಕಾಲ ಮೆರೆದು ಇತಿಹಾಸ ಬರೆದ ಕನ್ನಡದ ಹೆಮ್ಮೆ ಅಪ್ಪಟ ಕನ್ನಡದ ಅಭಿಮಾನಿ ಕೋಟಿಗೊಬ್ಬ ವಿಷ್ಣುವರ್ಧನ್ ಸರ್ ಜನಿಸಿದ್ದು 1950 ಸೆಪ್ಟೆಂಬರ್ 18 ರಂದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ.ಕಲಾವಿದರು,ಸಂಭಾಷಣಾಕಾರರು,ಸಂಗೀತ ನಿರ್ದೇಶಕರಾದ ಹೆಚ್.ಎಲ್ .ನಾರಾಯಣ ರಾವ್ ಮತ್ತು  ಕಾಮಾಕ್ಷಮ್ಮ ದಂಪತಿಯ ಹೆಮ್ಮೆಯ ಮಗನಾಗಿ ಹುಟ್ಟಿದ ನಮ್ಮ ದಾದ ಸಂಪತ್ ಕುಮಾರ್ ತಮ್ಮ  ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ,ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು.ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಮುಗಿಸಿದರು.1955 ರಲ್ಲಿ ತಮ್ಮ ಸಿನಿ ಪಯಣ ಆರಂಭಿಸಿ ಬಾಲ ನಟನಾಗಿ ನಟಿಸಿ ತಮ್ಮ ಅಭಿನಯದ ಮೊದಲ ಹೆಜ್ಜೆ ಇಟ್ಟು ಯಶಸ್ಸು ಕಂಡರು. ನಂತರ ರಾಷ್ಟ್ರ ಪ್ರಶಸ್ತಿ ಪಡೆದ  ಎಸ್ ಎಲ್ ಭೈರಪ್ಪ ಅವರ ಕಾದಂಬರಿಯಾಧಾರಿತ  ವಂಶವೃಕ್ಷ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು.ಕನ್ನಡದ ಭೀಷ್ಮ ಪುಟ್ಟಣ್ಣ ಕಣಗಾಲ್ ಅವರ ಮೂಲಕ 1972 ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾ  ಮೂಲಕ ಒಬ್ಬ ಹೊಸ ನಾಯಕ ನಟನ ಪರಿಚಯವಾಯಿತು ಅದೇ ಇವತ್ತಿಗೂ ನೆನಪಾಗುವ ನಾಗರ ಹಾವು ಸಿನಿಮಾ.ಈ ಸಿನಿಮಾದ  ಮೂಲಕ ಪುಟ್ಟಣ್ಣ ಕಣಗಾಲ್ ಅವರು ಸಂಪತ್ ಕುಮಾರ್ ಅವರ ಹೆಸರನ್ನು ವಿಷ್ಣುವರ್ಧನ್ ಆಗಿ ಹೆಸರು ಇಟ್ಟುರು ಇದರಿಂದ ಹೊಸ  ಹೆಸರಿನ ಜನನವಾಯಿತು. ಬೆಂಗಳೂರಿನ ಮೂರು ಚಿತ್ರ ಮಂದಿರದಲ್ಲಿ ನೂರು ದಿನ ಪೂರೈಸಿದ ಮೊದಲ ಸಿನಿಮಾ ಎಂಬ ದಾಖಲೆ ಬರೆದು ರಾಷ್ಟ್ರ ಪ್ರಶಸ್ತಿ ಲಭಿಸಿತು.1979 ರಲ್ಲಿ ಸಾಹಸ ಸಿಂಹ ಎಂಬ ಬಿರುದು ಬಂತು ನಂತರ ಸಾಹಸ ಸಿಂಹ ಎಂಬ ಚಿತ್ರದಲ್ಲಿ ನಟಿಸಿದರು. 1980ರ ದಶಕದಲ್ಲಿ ಶಂಕರ್ ನಾಗ್ ನಿರ್ದೇಶನದ ಮಾಲ್ಗುಡಿ ಡೇಸ್ ಧಾರವಾಹಿಯಲ್ಲಿ ನಟಿಸಿ ಕಿರುತೆರೆಯಲ್ಲಿ ಮಿಂಚಿದರು.    1975 ರಲ್ಲಿ ನಟಿ ಭಾರತಿ ಅವರನ್ನು ವಿವಾಹವಾದರು. ಕೀರ್ತಿ ಹಾಗೂ ಚಂದನ ಇಬ್ಬರು ಪುತ್ರಿಯರು ಇದ್ದಾರೆ.ನಟ ಅನಿರುದ್ಧ ಅವರ ಅಳಿಯ..ಡಾ .ರಾಜಕುಮಾರ್ ಅವರ ಜೊತೆ ಗಂಧದಗುಡಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ ಆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಎನ್ನುವ ಖ್ಯಾತಿಗಳಿಸಿತು.1974 ರಲ್ಲಿ ಭೂತಯ್ಯನ ಮಗ ಅಯ್ಯು ಚಿತ್ರದಲ್ಲಿ ನಟಿಸಿದರು ಇದು ಸೂಪರ್ ಹಿಟ್ ಅಗಿ ಗಲ್ಲಾ ಪೆಟ್ಟಿಗೆ ದಾಖಲೆ ಮುರಿಯಿತು. ನಂತರ ಉದಯೋನ್ಮುಖ ನಟ ರಜನಿಕಾಂತ್ ಅವರ ಜೊತೆ ಅಭಿನಯಿಸಿದರು.1978 ರ ಲ್ಲಿ ರೊಮ್ಯಾಂಟಿಕ್ ಹಿಟ್ ಹೊಂಬಿಸಿಲು ಚಿತ್ರದಲ್ಲಿ ನಟಿಸಿದರು ಅದು ಅತ್ಯುತ್ತಮ ನಟನೆಗಾಗಿ ಮೊದಲ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿತು. ಶ್ರೀನಾಥ್ ಮತ್ತು ಲಕ್ಷ್ಮಿ ಅವರ ಜೊತೆ ನಟಿಸಿದ್ದಾರೆ.70 ರ ದಶಕದಲ್ಲಿ ಅವರ ಪತ್ನಿ ಭಾರತಿ ಅವರ ಜೊತೆ ನಟಿಸಿದ್ದಾರೆ. ದಶಕದ ಪ್ರಸಿದ್ಧ ನಟಿಯರಾದ ಆರತಿ ಮತ್ತು ಮಂಜುಳ ಅವರ ಜೊತೆ ನಟಿಸಿದ್ದಾರೆ.1984 ರಲ್ಲಿ  ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ ನಟಿ ಹೇಮಾ ಮಾಲಿನಿ ಜೊತೆ ಅಭಿನಯಿಸಿದ್ದಾರೆ.ಅದೇ ವರ್ಷ ಕನ್ನಡದಲ್ಲಿ ಸುಹಾಸಿನಿ ಮಣಿರತ್ನಂ ಅವರ ಜೊತೆ ಬಂಧನ ಸಿನಿಮಾದ ಮೂಲಕ ಹೊಸ ಚರಿತ್ರೆಯನ್ನು ಬರೆದರು ಮತ್ತು 2ನೇ ರಾಜ್ಯ ಪ್ರಶಸ್ತಿ ಲಭಿಸಿತು.ಮುಂದೆ ತಮಿಳು ಚಿತ್ರ ಮಾಡಿ ಸೈ ಎನಿಸಿಕೊಂಡರು.ನಂತರ ಅವರ ಹಲವು ಸಿನಿಮಾ ಬ್ಲಾಕ್ ಬಸ್ಟರ್ ಸೂಪರ್ ಹಿಟ್ ಆದವು.ಶಾಸ್ತ್ರೀಯ ಗಾಯಕನಾಗಿ ಮಲಯ ಮಾರುತ ಸಿನಿಮಾದಲ್ಲಿ ನಟಿಸಿ ಒಳ್ಳೆಯ ಮೆಚ್ಚುಗೆಗಳಿಸಿದರು.  1990 ರಲ್ಲಿ ಮುತ್ತಿನ ಹಾರ ಮತ್ತು ವೀರಪ್ಪನಾಯಕ ಸಿನಿಮಾ ದೇಶ ಭಕ್ತಿಯ ಶ್ರೇಷ್ಠ ಸಿನಿಮಾಗಳಾಗಿವೆ.ಮುತ್ತಿನ ಹಾರ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಲಭಿಸಿತು.ಮಲಯಾಳಂ, ಹಿಂದಿ,ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ನಮ್ಮ ದಾದ ಹಲವು ಸೂಪರ್ ಹಿಟ್ ಸಿನಿಮಾದಿಂದ ಹಲವು ಪ್ರಶಸ್ತಿಗಳನ್ನ ಮುಡಿಗೆರಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದ ಪ್ರಸಿದ್ಧ ನಟಿಯರಾದ ಸುಹಾಸಿನಿ ಮಣಿರತ್ನಂ, ಮಾಧವಿ,ಜಯಪ್ರದಾ,ಆರತಿ, ಲಕ್ಷ್ಮಿ, ಭವ್ಯ,ರೂಪಿಣಿ, ಮಂಜುಳಾ,ಸಿತಾರ, ಸೌಂದರ್ಯಾ ,ಪ್ರೇಮಾ, ರೋಜಾ, ಹೀಗೆ ಹಲವು ನಟಿಯರ ಜೊತೆ ನಟಿಸಿದ್ದಾರೆ.ಅಕ್ಷಯ್ ಕುಮಾರ್ ಜೊತೆ ನಟಿಸಿದ್ದಾರೆ.ಕದಂಬ, ಕೋಟಿಗೊಬ್ಬ,ವಿಷ್ಣು ವಿಜಯ, ದಿಗ್ಗಜರು,ಲೈಯನ್ ಗಜಪತಿ ರಾವ್,ಸುಪ್ರಭಾತ,ನಿನೆಲ್ಲೋ ನಾನಲ್ಲಿ ಯಜಮಾನ,ಹಬ್ಬ, ಸೂರ್ಯವಂಶ,ಅಪ್ಪಾಜಿ, ಸೂರಪ್ಪ,ಕಳ್ಳಕುಳ್ಳ,ಸೊಸೆ ತಂದ ಸೌಭಾಗ್ಯ,ಚಿನ್ನ ನಿನ್ನ ಮುದ್ದಾಡುವೆ,ಸಹೋದರರ ಸವಾಲ್,ಕಿಟ್ಟು ಪುಟ್ಟು,ಗುರು ಶಿಷ್ಯರು,ಜಿಮ್ಮಿ ಗಲ್ಲು,ನೀ ಬರೆದ ಕಾದಂಬರಿ,ನೀ ತಂದ ಕಾಣಿಕೆ, ಈ ಜೀವ ನಿನಗಾಗಿ,ಜಯ ಸಿಂಹ,ದೇವ,ಹೃದಯ ಗೀತೆ, ಮತ್ತೇ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ, ಮಣಿಕಂಠನ ಮಹಿಮೆ, ಹಿಮಪಾತ ಲಾಲಿ,ಯಾರೇ ನೀನು ಚೆಲುವೆ,ಪರ್ವ,ರಾಜ ನರಸಿಂಹ,ಹೃದಯವಂತ, ಸಾಹುಕಾರ,ಜೇಷ್ಠ, ವಿಷ್ಣುಸೇನಾ,ಏಕದಂತ,ಕ್ಷಣ ಕ್ಷಣ,ವರ್ಷ,ಅಣ್ಣ ಅತ್ತಿಗೆ, ಸಿರಿವಂತ,ಸಿಂಹಾದ್ರಿಯ ಸಿಂಹ, ಮಾತಾಡು ಮಾತಾಡು ಮಲ್ಲಿಗೆ, ಮೋಜುಗಾರ ಸೊಗಸುಗಾರ, ಹಾಲುಂಡ ತವರು, ಜೀವನದಿ, ಆಪ್ತ ಮಿತ್ರ,ಆಪ್ತ ರಕ್ಷಕ, ಬೂತಯ್ಯನ ಮಗ ಅಯ್ಯು, ಬಂಧನ,ಕರ್ಣ,ಈ ಬಂಧನ,ಹೀಗೆ 220 ಸಿನಿಮಾಗಳ ಮೂಲಕ ಚಿತ್ರ ರಂಗದಲ್ಲಿ ಅವರದ್ದೇ ಆದ ಇತಿಹಾಸ ಬರೆದಿದ್ದಾರೆ.ನಟನೆ ಅಲ್ಲದೆ ಗಾಯಕರಾಗಿ ಹಲವು ಸಿನಿಮಾದಲ್ಲಿ ಹಾಡಿದ್ದಾರೆ, ಹಲವು ಭಕ್ತಿ ಗೀತೆ ಸಹ ಹಾಡಿದ್ದಾರೆ.ನಿರ್ಮಾಪಕರಾಗಿ ಕಥೆಗಾರರಾಗಿ ವೃತ್ತಿ ಜೀವನ ನಡೆಸಿದ್ದಾರೆ.ವಿಷ್ಣು ಸರ್ ಅವರಿಗೆ ಫಿಲ್ಮ್ ಫೇರ್ ಪ್ರಶಸ್ತಿ ,ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗೌರವ ಡಾಕ್ಟರೇಟ್,ಇಂದಿರಾ ಪ್ರತಿಷ್ಠಾನ ರಾಷ್ಟ್ರೀಯ ಪ್ರಶಸ್ತಿ. ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲ್ಮ್ ಫೇರ್ ವಿಶೇಷ ಪ್ರಶಸ್ತಿ,ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಕೇರಳದ ಸಾಂಸ್ಕೃತಿಕ  ಮತ್ತು ಕಲಾ ಪ್ರಶಸ್ತಿ.ಹೀಗೆ ಹಲವು ಪ್ರಶಸ್ತಿ ಲಭಿಸಿತು.ಇವರ ಸ್ಮರಣಾರ್ಥ ಭಾರತ ಸರ್ಕಾರ  2013 ರಲ್ಲಿ ಅಂಚೆ ಚೀಟಿ ಹೊರ ತಂದಿತು. ಇವರನ್ನು ಭಾರತೀಯ ಚಿತ್ರರಂಗದ ಫೀನಿಕ್ಸ್ ಎನ್ನುವರು.ಕರ್ನಾಟಕ ಜನಪ್ರಿಯ ಸಂಸ್ಕೃತಿಕ ಐಕಾನ್ ಗಳಲ್ಲಿ ಒಬ್ಬರು ನಮ್ಮ ದಾದ.ಬೆಂಗಳೂರಿನ ಬನಶಂಕರಿ ದೇವಸ್ಥಾನದಿಂದ  ಕೆಂಗೇರಿಯವರೆಗೆ 14.5km ರಸ್ತೆಯ ಹೆಸರನ್ನು ವಿಷ್ಣುವರ್ಧನ್ ರಸ್ತೆ ಎಂದು ನಾಮಕರಣ ಮಾಡಲಾಗಿದೆ ಒಬ್ಬ ನಟನ ಹೆಸರು ಇಟ್ಟ ಎಷ್ಯದ ಅತಿ ಉದ್ದದ ರಸ್ತೆ ಇದಾಗಿದೆ.ಇವರ ಕಲಾತ್ಮಕ ಸೇವೆ ಸಮಾಜಿಕ ಕಾರ್ಯ ಭಾರತೀಯ ಚಿತ್ರರಂಗಕ್ಕೆ ಇವರು ಮಾಡಿದ ಸೇವೆಯ ಸ್ಮರಣಾರ್ಥವಾಗಿ ರಾಜ್ಯ ಸರ್ಕಾರವು ತನ್ನ ವಾರ್ಷಿಕ ಜೀವಮಾನ ಸಾಧನೆ ಪ್ರಶಸ್ತಿಯನ್ನು.ಡಾ. ವಿಷ್ಣುವರ್ದನ್ ಪ್ರಶಸ್ತಿ ಎಂದು ಕರ್ನಾಟಕ ರಾಜ್ಯ ನಾಮಕರಣ ಮಾಡಿದೆ.ಸ್ನೇಹಲೋಕ ಎಂಬ ಸಂಘಟನೆ ನಿರ್ಮಿಸಿ ಹಲವು ಸಮಾಜಿಕ ಕಾರ್ಯ ಮಾಡಿದ್ದಾರೆ.ಮಂಡ್ಯದ ಮೇಲುಕೋಟೆ ದತ್ತು ಪಡೆದು ಅಭಿವುದ್ಧಿ ಮಾಡಿದ್ದಾರೆ.ಕನ್ನಡ ಪರ ಹೋರಾಟಗಾರರು ಹೌದು. ವಿಷ್ಣು ಮಾಡಿದ ತೆರೆ ಮರೆಯ ಧಾನ,ಸಹಾಯ ಹಲವು. ಭೂಮಿ ಬೆಳಗುವ ಸೂರ್ಯ ಚಂದ್ರರನ್ನು ಬಿಡದ ಗ್ರಹಣ ಎಂಬಂತೆ ಇವರಿಗೂ ಬದುಕಿನಲ್ಲಿ ಹಲವು ನೋವು,ಕಷ್ಟ ಸವಾಲುಗಳು ಇದ್ದವು ಇದನೆಲ್ಲಾ ಮೆಟ್ಟಿ ನಿಂತು ಇಂದಿನ ಯುವ ಪೀಳಿಗೆಗೆ ನಿಜಕ್ಕೂ ಸ್ಫೂರ್ತಿ ಆಗಿದ್ದಾರೆ.ಒಟ್ಟಾರೆ ಹೇಳುವುದಾದರೆ ಈಡಿ ಚಿತ್ರ ಜಗತ್ತಿನಲ್ಲಿ ವಿಷ್ಣುದಾದ ಹೆಸರು ಅಜರಾಮರ. ವೃತ್ತಿ ಜೀವನ, ಬದುಕಿನ ತತ್ವ,ಆಧ್ಯತ್ಮ  ಜೀವನ ನಮಗೆಲ್ಲ ಸ್ಫೂರ್ತಿ.ಬದುಕಿನ ಉದ್ದಕ್ಕೂ ಸಾಧನೆ ಮತ್ತು ಹೆಸರು ಮಾಡಿದ ನಮ್ಮ ವಿಷ್ಣುದಾದ ಅವರ ವ್ಯಕ್ತಿತ್ವ ನಿಜಕ್ಕೂ  ನಮಗೆ ಮಾರ್ಗದರ್ಶಕ.ಅವರ ಸರಳತೆ,ಅವರ ನಿಷ್ಕಲ್ಮಶ ಮುಖದ ನಗು ಇಂದಿಗೂ ಮರೆಯಲಾಗದು.ವಿಷ್ಣು ಎಂದರೇ ಒಂದು ಮುಗ್ಧ ಭಾವನಾತ್ಮಕ ಬಂಧ ಕನ್ನಡಿಗರ ಮನದಲ್ಲಿ ಎಂದಿಗೂ ಶಾಶ್ವತ.59 ವರ್ಷ ನಮ್ಮೊಂದಿಗೆ ಇದ್ದ ಕಲಾಸಂತ ಡಿಸೆಂಬರ್ 30 2009 ನಮ್ಮನ್ನ ಅಗಲಿದರು.ಅಂದು ಇಡೀ ಚಿತ್ರರಂಗ ಹಾಗೂ ಅಭಿಮಾನಿಗಳ ಮನದಲ್ಲಿ ನೀರವ ಮೌನ ಆವರಿಸಿತ್ತು. ಅಭಿಮಾನಿಗಳ ಪಾಲಿಗೆ ದೇವರ ಸ್ವರೂಪ ಆಗಿದ್ದ ಪಂಚಭಾಷಾ ನಟ ವಿಷ್ಣು ದಾದ ನಮ್ಮ  ಹೃದಯಮಾನಸದಲ್ಲಿ ವಿರಾಜಿಸಿದ  ಆಂಗ್ರಿ ಯಂಗ್ ಮ್ಯಾನ್.ವಂಶವೃಕ್ಷದ ಸಂಪತ್ತು ಬೂತಯ್ಯನ ಮಗ ಅಯ್ಯು ನಾಗರಹಾವುವಿನ ರಾಮಾಚಾರಿ ಕರ್ನಾಟಕದ ಸುಪುತ್ರ ನಮ್ಮ ಚಂದನವನದ ಯಜಮಾನ ಮರೆಯದ ಮಾಣಿಕ್ಯ ಎಂದೂ ನಮ್ಮ ಮನದಲ್ಲಿ ಕೋಟಿಗೊಬ್ಬ  ಗುಣದಲ್ಲಿ ಹೃದಯವಂತ ಮಾಮತೆಯಲ್ಲಿ ಸಿರಿವಂತ ಕನ್ನಡ ಮನೆ ಮನೆಯ ಸಾಹಸ ಸಿಂಹ ಎಂದೂ ಮರೆಯದ ಸಿಂಹಾದ್ರಿಯ ಸಿಂಹ ಕನ್ನಡಿಗರಿಗೆ ಆಪ್ತಮಿತ್ರ ವರ್ಷದ ಅಣ್ಣ ಸ್ಕೂಲ್ ಮಾಸ್ಟರ್ ಕದಂಬದ ಅಪ್ಪ  ದಿಗ್ಗಜರು ಜೀವದ ಗೆಳೆಯ ಮೋಜುಗಾರ ಸೊಗಸುಗಾರ ವಿಷ್ಣುಸೇನಾದ ಗುರು ಮುತ್ತಿನ ಹಾರ ವೀರಪ್ಪನಾಯಕನ ದೇಶ ಭಕ್ತ ಹೀಗೆ ಎಲ್ಲಾ ವಯೋಮಾನದವರು ನೋಡಬಹುದಾದ ಸಿನಿಮಾ ಮಾಡಿ ಜನ ಮೆಚ್ಚಿದ ನಾಯಕ ನಟರಾಗಿ  ಅಭಿಮಾನಿಗಳ ರಂಜಿಸಿದ  ರಾಜಾನರಸಿಂಹ. ವಿಷ್ಣುದಾದರ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಹಾಗೂ ಸ್ಫೂರ್ತಿ. ಮತ್ತೇ ಕರುನಾಡಿನಲ್ಲಿ ಹುಟ್ಟಿ ಬನ್ನಿ ಎಂದು ಆಶಿಸುವ ಅಭಿಮಾನಿಗಳಲ್ಲಿ ನಾನು ಒಬ್ಬಳು ನನ್ನ ಮೆಚ್ಚಿನ ವಿಷ್ಣುದಾದರ ಹುಟ್ಟಿದ ದಿನದಂದು ಅವರ ಬಗ್ಗೆ ಹೆಮ್ಮೆ ಇಂದ ಬರೆದಿರುವೆ.ಹುಟ್ಟು ಹಬ್ಬದ ಶುಭಾಶಯಗಳು ದಾದ.

- ಮಾನಸ ಎಂ ಸೊರಬ.


ಶುಕ್ರವಾರ, ಸೆಪ್ಟೆಂಬರ್ 16, 2022

ಬದುಕುವ ಆಸೆ - ನಿರಾಸೆ-ಭರವಸೆ (ಕವಿತೆ) - ಶಾಂತಾರಾಮ ಶಿರಸಿ.

ಬದುಕಿನ ಪಯಣ ನಿರಂತರ,
ಆಶ್ಚರ್ಯಕರ-ಆಹ್ಲಾದಕರ,
ಸಡಗರ-ಖುಷಿಯ ಆನಂದ ಸಾಗರ,
ತಿರುವುಗಳು ಕ್ಲಿಷ್ಟಕರ,
ಹೊಡೆತಗಳು ಘೋರಾತಿಘೋರ-ಭೀಕರ,
ಬದುಕು ಕಷ್ಟಕರ-ಬಲು ವಿಚಿತ್ರ,
ಅನುಭವಗಳು ಸಾವಿರ- ಸಾವಿರ,
ಬತ್ತದ ಆಸೆ -ಆಕಾಂಕ್ಷೆಗಳು ಭಯಂಕರ,
ಸ್ಥಿತಿ-ಗತಿಗಳು,ಸಂದರ್ಭಗಳು ಬಲು ಅಪಾಯಕಾರ,
ಕೊನೆಕಾಣದ ಬಯಕೆಗಳ ಸಾಲು-ಸಾಲು ಅಲೆಗಳ ಅಬ್ಬರ,
ಬದುಕೆಂಬುದು ಮುಗಿಯದ ಸಮರ...

ಭರದಿ ಸಾಗುವ ಬದುಕು,
ಕಂಡಿದ್ದೆಲ್ಲ ಬೇಕು-ಇನ್ನೂ ಬೇಕು,
ದೇಹ ಸವೆದರೂ ಬಗೆಹರಿಯದ ಸಮಸ್ಯೆಗಳು ಮನದಿ ಹೊಕ್ಕು,
ಈ ಬದುಕು ಅನಿಸುವುದು ಆಗಾಗ ಮುರುಕು,
ಅದಕ್ಕೂ-ಇದಕ್ಕೂ ಹೊಂದಿಕೊಳ್ಳಬೇಕು ಪ್ರತೀ ಸಂದರ್ಭಕ್ಕೂ,
ನಿಜಕ್ಕೂ ಆರಕ್ಕೇರದ-ಮೂರಕ್ಕಿಳಿಯದ ಬದುಕು,
ಹೀಗೆಕೆ ಈ ಬದುಕು-ಎಲ್ಲದಕ್ಕೂ ಕಾಂಚಾಣವಿರಬೇಕು...

ಬದುಕು ಮುನ್ನಡೆಯಲೇಬೇಕು,
ಸಿಕ್ಕಷ್ಟು ಸಾಕು ಎನ್ನಲಾರರು ಇನ್ನೂ ಹಣಬೇಕು,
ಇದ್ದದ್ದರಲ್ಲೇ ನೆಮ್ಮದಿಯ ಹುಡುಕು,
ಬದುಕಿಗಾಗಿ ಬದುಕು,
ಈ ಬದುಕನ್ನು ಪ್ರೀತಿಸುತ್ತಾ ಬದುಕು...

- ಶಾಂತಾರಾಮ ಶಿರಸಿ,
ಉತ್ತರ ಕನ್ನಡ..
7676106273


ಕುಡುಕ ಗಂಡ (ಕವಿತೆ) - ಬಿ. ಹೆಚ್. ತಿಮ್ಮಣ್ಣ.

ಸಮಾಜದ ತಿರಳು ಅರಿಯಲಿಲ್ಲ ನೋಡ 
ಮನಸ್ಸಿಗೆ ಬಂದಂತೆ ಹುಚ್ಚನಂತೆ ತಿರುಗಬೇಡ 
ಎಲ್ಲರೊಳಗೊಂದಾಗಿ ಸಿಹಿ ಜೇನಿನಂತೆ ಕೂಡ 
ಗೌರವ ಸಿಗುವುದು ನಿನಗಾಗ ಮರಿಬೇಡ

ಕುಡಿತದ ಚಟಕ್ಕೆ ಆಗಿಹರು ಗುಲಾಮ 
ಮಂದಿ ಸಂಘ ಕೂಡಿ ಹಾಕುವರು ಪಂಗನಾಮ 
ಕುಡಿದ ಮತ್ತಿನಲ್ಲಿ ಕಂಡವರಿಗೆ ಹೊಡಿವರು ಸಲಾಮ
ನಶೆಯೊಳಗೆ ಹೆಜ್ಜೆ ಹಾಕಿದರೂ, ಮನೆ ಸೇರಲಿಲ್ಲ ಸುಗಮ

ಮಧ್ಯಪಾನಕ್ಕೆ ಜಂಟಿಯಾಗಿ ಬಿಡುವರು ತನ್ನ ಮನೆಯ
ಸಂದಿಗೊಂದಿ ಅಲಿಯುತ್ತಾ ಹುಡುಕುವರು ಸೇಂದಿಯ
ಕಳ್ಳಾಟದಿಂದ ಕಣ್ತಪ್ಪಿಸಿ ಕುಡಿದು ಬರುವರು ಸರಾಯಿಯ
ಜೋತಾಡ್ತಾ ಹಿಡಿಯುವರು ಮನೆ ಕಡೆಗೆ ದಾರಿಯ

ಕಣ್ಣಲ್ಲಿ ಕಾಣುವುದೇ ದ್ವಿಪಥದ ಹಾದಿಯು 
ಕುಡಿತ ಇಂಗಲಿಲ್ಲವಾದರೆ ಆಗುವುದು ಭೇದಿಯು 
ಕಾಲ್ಜಾರಿ ಬಿದ್ದರೆ ಮೈಗೆಲ್ಲಾ ಹತ್ತುವುದು ರಾಡಿಯು 
ಇದ ಕಂಡು ಓಡೋಡಿ ಬರುವಳು ಮಡದಿಯು

ಗಂಡನ ದೇಹ ಕಂಡು ಹಿಂಜರಿಯದ ಸತಿಯು
ಕಂಕುಳಲ್ಲಿ ಕೈ ಹಾಕಿ ಎದ್ದು ನಿಲ್ಲಿಸಿದಳು ರತಿಯು 
ಹೆಗಲ್ಮೇಲೆ ಅಚ್ಚುಕೊಂಡು ನಡೆದಳು ಸಬಲೆಯು 
ಮನೆಗೆ ಮುಟ್ಟಿ ಬಟ್ಟೆ ಬಿಚ್ಚಿ ತೊಳೆದಳು ಮೈಯಿಯು

ಕಾಲಿಗೆ ಬಿದ್ದು ಬೇಡುವಳು ಸತಿಯು ಪತಿಯನ್ನು 
ಮಾಡತಿಯಾಕ ಇಂಥ ದುರ್ಬುದ್ಧಿ ಕಾರ್ಯವನ್ನು
ತಿಳಿವಲ್ದು ನಿನಗ ಸಂಸಾರದ ಒಳ ತಿರುಳನ್ನು 
ದುಡಿದು ತಿಂದರೆ ಕಾಣುವೆವು ಸದ್ಗತಿಯನ್ನು

ಮಂದಿ ಮುಲಾಜಿಗೆ ಹೋಗಬೇಡ ನೀನಿನ್ನು
ಗುಲಾಮನಾಗಬೇಡ ಬಾರಿನ ಮಾಲಕನಿಗೆ ನೀನು 
ಮನೆ ಹೆಂಡ್ತಿ ಮಕ್ಕಳನ್ನು ತಳ್ಳಬೇಡ ನರಕಕ್ಕಿನ್ನು 
ತಳ್ಳಿದರೆ ನೀ ತಟ್ಟುವೆ ಯಮದೂತನ ಬಾಗಿಲನ್ನು

ಅಲ್ಪ ಸಮಯಕ್ಕೆ ಸಿಗುವ ಸುಖಕ್ಕೆ 
ನೀ ದೇಹ ಕೆಡಿಸಿಕೊಳ್ಳುವುದು ಯಾತಕ್ಕೆ 
ಹೊತ್ತು ಹೋದ ಮೇಲೆ ಚಿಂತಿಸದಿರು ಅದಕ್ಕೆ 
ಇದ್ದಾಗ ಸರಿಯಾಗಿ ಬದುಕಿ ತೋರಿಸು ಸಮಾಜಕ್ಕೆ

ಮನೆ ಮುರುಕರ ಮಾತಿಗೆ ಕಿವಿಗೊಡಬೇಡ 
ತಳ್ಳುವರು ನಿನ್ನನ್ನು ನರಕದ ಗುಂಡಿಗೆ ನೋಡ 
ಜೀವ ಹೋದಾಗ ಬರಲಿಲ್ಲ ಯಾರು ನಿನ್ನ ಕೂಡ 
ಸೂರು ಕಟ್ಟಿಕೊಂಡು ತಾನೇ ಸತ್ತಿತು ಬಲೆಯಲ್ಲಿ ಜೇಡ

ಕೊಟ್ಟಾನ ಭಗವಂತ ನಮಗೆಲ್ಲ ಪ್ರಾಣ 
ಹಾನಿ ಮಾಡದೆ ಎಚ್ಚರದಿಂದ ನಡೆಯೋಣ 
ಸಾಧನೆಯ ಮೆಟ್ಟಿಲು ಒಂದೊಂದು ಹತ್ತೋಣ
ಕುಡಿತದ ಅರೆ ಸುಖವನ್ನು ಡಬ್ಬಿಯೊಳಗಿಟ್ಟು ಮುಚ್ಚೋಣ

   - ಬಿ. ಹೆಚ್. ತಿಮ್ಮಣ್ಣ.

ಗುರುವಿಗೆ ಶರಣಾಗತಿಯ ಶರಣು (ಕವಿತೆ) - ಅಶ್ವಿನಿ ಭೀ. ಬರಗಾಲಿ, ಗೋಕಾಕ.

ಶರಣೆಂದೆ ಗುರುವೇ ಶರಣು ನಿನಗೆ
ಶರಣಾಗತಿ ದೇವರಿಗಿಂತ ಮಿಗಿಲಾದವರಿಗೆ..!!

ಶಾಖ ಶಕ್ಯಗಳಾಟ ಸುಳ್ಳೆಂದು 
ಶಾಲೆಯನ್ನು ದೇವಾಲಯ ಮಾಡಿದವರಿಗೆ..!!

ಶಿಲೆಯಲ್ಲಿ ಕಲೆಯನ್ನು ಕೆತ್ತಿ
ಶಿಖರದೆತ್ತರಕ್ಕೆ ಬೆಳೆಸಿದವರಿಗೆ..!!

ಶೀಲ ಕುಶಲದಿಂದಿರಲು ತಿಳಿಹೇಳಿ
ಶೀಲ ಸುಶೀಲತೆಯ ಧಾರೆ ಎರೆದವರಿಗೆ..!!

ಶುದ್ಧ ಪರಿಶುದ್ಧ ಭಾವಗಳ ಮೂಡಿಸಿ
ಶುಭ್ರತೆಯ ಬೆಳಕು ನೀಡಿದವರಿಗೆ.!!

ಶೂನ್ಯದ ಜಗತ್ತನ್ನು ಅರ್ಥೈಸಿ
ಶೂನ್ಯತೆಯ ಭಾವವ ಬರಿದಾಗಿಸಿದವರಿಗೆ..!!

ಶೃಂಖಲೆಯ ಬಂಧ ಬಿಡಿಸಿ
ಶೃಂಗಾರದಿ ಚೆಂದಗೊಳಿಸಿದವರಿಗೆ..!!

ಶಲೆ ಇಲ್ಲವಾದರೇ ಜಗವೆಲ್ಲಿ
ಶೆಲೆಯ ನೆಲೆ ನೀವಾಗಿ ನಿಂತವರಿಗೆ..!!

ಶೇಷಾವೇಷನು ಕರ ಮುಗಿದ ನಿಮಗೆ
ಶೇಷ ಚೇತನದ ಒರತೆಯ ಭಾಗವಾಗಿಸಿದವರಿಗೆ..!!

ಶೈತ್ಯೋಪಚಾರ ಮಾಡುವೆವು ನಿಮಗೆ
ಶೈಕ್ಷಣಿಕ ಲೋಕದ ಹೆಮ್ಮೆಯ ದಿಗ್ಗಜರಾದವರಿಗೆ..!!

ಶೂರತೆಯ ಜ್ಞಾನವಿತ್ತು
ಶೂತ್ರದಾಸೆಯ ತೊರೆದು ನಿಂತವರಿಗೆ..!!

ಶೋಷಿತರನ್ನು ಹುರಿದುಂಬಿಸಿ
ಶೋಧಿಸಿ ಶುದ್ಧಿಸಿ ಜಯಮಾಲೆ ತೊಡಿಸಿದವರಿಗೆ..!!

ಶೌರ್ಯ ಪರಾಕ್ರಮಗಳ ಕಲಿಸಿ
ಶೂರತೆಯ ಒಲವ ಪಸರಿಸಿದವರಿಗೆ..!!

ಶಿವಶಂಕರ ರೂಪ ನೀವಾಗಿ
ಶಂಖನಾದದಿ ಜಗವ ಬೆಳಗಿಸಿವರಿಗೆ..!!

ಶಿಕ್ಷಣದ ಅಕ್ಷರವ ಕಲಿಸಿ
ಶಿಲೆಯ ಸುಶಿಕ್ಷತೆಯ ಮೊಳಗಿಸಿದವರಿಗೆ..!

ಶಿಲೆಯಾಗಿ ಅಂದು ಕಲೆಯಾಗಿ ಇಂದು
ಶರಣಾಗತಿಯ ಬಯಸಿಹೆವು ನಾವು ನಿಮ್ಮಿಂದ..!!

ಶರಣು ಶರಣು ಶರಣಾಗತಿ
ಶರಣಾಗತರಾಗಿರುವೆವು ನಮ್ಮೆಲ್ಲ ಗುರುಬಳಗಕ್ಕೆ....!!

ಶರಣಾಗತಿ ಇಂತಿ ನಿಮ್ಮ
ಮಾಸ್ತರನ‌ ಮಗಳು ಅಶ್ವಿನಿ.....!!

- ಅಶ್ವಿನಿ ಭೀ. ಬರಗಾಲಿ, ಗೋಕಾಕ.


ಗುರುದಕ್ಷಿಣೆ (ಸಣ್ಣ ಕತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಹಿಂದಿನ ಕಾಲದಲ್ಲಿ ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಗುರುಕುಲಗಳಿಗೆ ಅವಲಂಬಿತರಾಗುತ್ತಿದ್ದರು. ಈಗಿನ ಹಾಗೆ ಶಾಲೆಗಳು ಪಠ್ಯಕ್ರಮಗಳು ಇದ್ದಿರಲಿಲ್ಲ. ಅರಸನ ಮಕ್ಕಳು, ಶ್ರೀಮಂತರ ಮಕ್ಕಳು, ಬಡವರ ಮಕ್ಕಳು ಎಲ್ಲರೂ ಗುರುಕುಲದಲ್ಲಿಯೇ ವಿದ್ಯೆ ಪಡೆಯುತ್ತಿದ್ದರು. ಕೆಲವೊಂದು ವರ್ಷಗಳ ತರುವಾಯ ಎಲ್ಲರ ವಿದ್ಯಾಭ್ಯಾಸ ಪೂರ್ಣ ಮುಕ್ತಾಯಗೊಂಡ ಮೇಲೆ ತಮ್ಮ ತಮ್ಮ ಮನೆಗಳಿಗೆ ತೆರಳುವ ಮೂಲಕ ಗುರುದಕ್ಷಿಣೆಯನ್ನು ಅರ್ಪಿಸುತ್ತಿದ್ದರು. ಒಮ್ಮೆ ಕೆಲವು ಮಕ್ಕಳ ವಿದ್ಯಾರ್ಜನೆ ಮುಗಿದ ನಂತರ ಅರಸನ ಮಗ ಗುರುಗಳಿಗೆ ಗುರುದಕ್ಷಿಣೆ ಅರ್ಪಿಸಲು ತನ್ನ ಅರಮನೆಯಲ್ಲಿದ್ದ ಬಂಗಾರ, ವಜ್ರವೈಡೂರ್ಯಗಳನ್ನು ತಂದು ಗುರುಗಳಿಗೆ ಗುರುದಕ್ಷಿಣೆಯ ರೂಪದಲ್ಲಿ ಅರ್ಪಿಸಲು ಮುಂದಾದನು. ಗುರುಗಳು ಆ ಬಂಗಾರ ವಜ್ರವೈಡೂರ್ಯಗಳನ್ನು ಸ್ವೀಕಾರ ಮಾಡಲಿಲ್ಲ. ಇದೆಲ್ಲ ನನಗೇಕೆ ಕೊಡುತ್ತಿರುವಿ. ಯಾವ ಆಶೆ ಆಕಾಂಕ್ಷೆಗಳಿಲ್ಲದೆ ಮಕ್ಕಳಿಗೆ ವಿದ್ಯೆ ಕಲಿಸುವ ಗುರುಕುಲವು ಇದಾಗಿದೆ. ಅದು ಇಂತಹ ಅರಣ್ಯದಲ್ಲಿ ನಿಮ್ಮಂತಹವರಿಗಾಗಿ ಆಶ್ರಮಕಟ್ಟಿಕೊಂಡು ವಿದ್ಯಾರ್ಜನೆ ಮಾಡಿಸುತ್ತಿರುತ್ತೆನೆ. ಇದೆಲ್ಲದರ ಅವಶ್ಯಕತೆ ನನಗಿಲ್ಲ. ನಿನಗೆ ಏನಾದರೂ ಕೊಡುವ ಉತ್ಕಟವಾಗಿದ್ದರೆ ಒಂದು ಗೋಮಾತೆಯನ್ನು ತಂದುಕೊಡು ಎಂದರು. ಅವರು ಮಾತಿನಂತೆ ಅರಸನ ಮಗ ಒಂದು ಗೋಮಾತೆಯನ್ನು ತಂದು ಗುರುಕುಲಕ್ಕೆ ಗುರುದಕ್ಷಿಣೆಯ ರೂಪದಲ್ಲಿ ಅರ್ಪಿಸಿದನು.
 ಮಾರನೆ ದಿನ ಶ್ರೀಮಂತನ ಮಗ ತಮ್ಮ ಮನೆಯಲ್ಲಿದ್ದ ದವಸ ಧಾನ್ಯ ಮತ್ತು ನಾಣ್ಯಗಳನ್ನು ಗುರುದಕ್ಷಿಣೆಯಂದು ಗುರುಗಳಿಗೆ ಅರ್ಪಿಸಲು ಮುಂದಾದನು. ಅದು ಕೂಡ ಗುರುಗಳು ಸ್ವೀಕಾರ ಮಾಡಲಿಲ್ಲ. ಇಷ್ಟೊಂದು ಆಹಾರ ಧಾನ್ಯವನ್ನು ತೆಗೆದು ಕೊಂಡು ನಾನೇನು ಮಾಡಲಿ. ನೀನು ಕೊಡುವುದಾದರೆ ಒಂದು ಚಿಕ್ಕ ಮೂಟೆ ತಂದಿಡು. ಅದರಿಂದ ಗುರುಕುಲಕ್ಕೆ ಬಂದವರಿಗೆ ಪ್ರಸಾದಮಾಡಿ ಹಂಚಲಾಗುತ್ತದೆ ಮತ್ತು ಆಕಳಿಗೂ ತಿನ್ನಲು ಹಾಕಲಾಗುತ್ತದೆ. ಗುರುಗಳು ಮಾತು ಕೇಳಿದ ಶ್ರೀಮಂತರ ಮಗ ಒಂದು ಮೂಟೆಯನ್ನು ಆಶ್ರಮದಲ್ಲಿರಿಸಿ ಇನ್ನುಳಿದದನ್ನು ಮರಳಿ ತೆಗೆದುಕೊಂಡು ಹೊದನು. ಇನ್ನೂ ಮೂರನೆಯ ಬಡ ಕುಟುಂಬದಿಂದ ಬಂದ ಬಡ ವಿದ್ಯಾರ್ಥಿಯ ತಾಯಿ ಬಹಳ ಕಷ್ಟಪಟ್ಟು ತನ್ನ ಮಗನನ್ನು ಸಲುಹಿದವಳು ಅಲ್ಲದೆ ವಿದ್ಯೆ ಕೊಡಿಸಲು ಕೂಡ ಬಹಳ ಶ್ರಮಪಟ್ಟಿದಳು. ಆ ಬಡ ವಿದ್ಯಾರ್ಥಿಯ ಹತ್ತಿರ ಗುರುದಕ್ಷಿಣೆ ಕೊಡಲು ಏನು ಇದ್ದಿತ್ತಿಲ್ಲ. ಆದರೂ ಗುರುಗಳಿಗೆ ಏನಾದರೊಂದು ಅರ್ಪಸಬೇಕೆಂದು ಗುರುಗಳಿಗೆ ವಿನಂತಿ ಪೂರ್ವಕ ಕೇಳಿದ. ಗುರುಗಳೇ ನೀವು ಯಾವುದೇ ಕೆಲಸ ಹೇಳಿದರು ಗುರುದಕ್ಷಿಣೆಯ ರೂಪದಲ್ಲಿ ಮಾಡಿಕೊಡಲು ಅಣಿಯಾಗಿದ್ದೆನೆ. ಗುರುಗಳು ಆತನ ಮಾತು ಕೇಳಿ, ಬೇಡಪ್ಪಾ ನಿನ್ನ ಕಡೆಯಿಂದ ನಾನು ಯಾವುದೇ ಅಪೆಕ್ಷೆ ಪಡುವುದಿಲ್ಲ. ನೀನು ಬಡವ ಅಲ್ಲದೆ, ನಿನ್ನ ತಾಯಿಯ ಇಚ್ಛೆಯಂತೆ ಚೆನ್ನಾಗಿ ವಿದ್ಯಾಭ್ಯಾಸ ಮುಗಿಸಿರುವೆ. ಈಗ ನಿನ್ನ ತಾಯಿಗೆ ನೀನು ಸಹಾಯಮಾಡು ಅಂತ ಹೇಳಿದರು. ಆದರೂ ಆ ವಿದ್ಯಾರ್ಥಿಯ ಹಟದ ಮುಂದೆ ಗುರುಗಳು ಆತನಿಗೆ ಒಂದು ಕೆಲಸ ಹೇಳಿದರು. ಅದೆನೆಂದರೆ ಯಾವುದಕ್ಕೂ ಉಪಯೋಗವಿರದ ಒಂದು ಸಸಿಯನ್ನು ತೆಗೆದುಕೊಂಡು ಬಾ ನೋಡೋಣ.
 ಗುರುಗಳಿಗೆ ತಾವು ಕಲಿಸಿದ ವಿದ್ಯೆಯು ಎಷ್ಟರ ಮಟ್ಟಿಗೆ ಆತನಲ್ಲಿ ಮನೆಮಾಡಿದೆ ಎಂಬುದು ಪರಿಕ್ಷಿಸಬೇಕಾಗಿತ್ತು. ಇಷ್ಟೇನಾ ಅಂತ್ಹೇಳಿ ಬಡವಿದ್ಯಾರ್ಥಿ ಸಸಿಗಳನ್ನು ಹುಡುಕಲು ಪ್ರಾರಂಭಿಸಿದ. ಅವನಿಗೆ ಗುರುಗಳು ಹೇಳಿದ ಸಸಿ ಸಿಗಲೇಯಿಲ್ಲ. ಕೊನೆಗೆ ಸುಸ್ತಾಗಿ ಗುರುಗಳಲ್ಲಿ ಬಂದು ಕ್ಷಮೆಯಾಚಿಸಿದ. ಗುರುಗಳು ಅವನನ್ನು ಸಮಾಧಾನ ಪಡಿಸುತ್ತಾರೆ. ಆದರೆ ಗುರುಗಳಲ್ಲಿ ವಿನಂತಿಸಿ ವಿನರ್ಮತೆಯಿಂದ ತನ್ನಲ್ಲಿ ಇದ್ದ ಒಂದು ದೊಡ್ಡ ಗ್ರಂಥವನ್ನು ಅರ್ಪಿಸುತ್ತಾನೆ. ಇದೆನಪ್ಪಾ ? ಅಂತ ಕೇಳಲು, ಗುರುಗಳೇ ನೀವು ಹೇಳಿದ ಪ್ರಕಾರ ಉಪಯೋಗವಿಲ್ಲದ ಬದಲಾಗಿ ಉಪಯೋಗವಿದ್ದ ಮತ್ತು ಪ್ರತಿಯೊಂದರಲ್ಲಿ ಔಷಧಿಯ ಗುಣವಿದ್ದ ಸಸಿಗಳ ಚಿತ್ರಣವಿದೆ. ಹೊರತು ಬೇರೆ ಸಸ್ಯಗಳದಿಲ್ಲ. ಅದಕ್ಕೆ ನಾನು ಹುಡುಕಿದ ಪ್ರತಿಯೊಂದು ಸಸಿಯಲ್ಲಿ  ಯಾವ ಯಾವ ಔಷಧಿ ಗುಣಗಳಿವೆ ಮತ್ತು ಅದು ಏತಕ್ಕಾಗಿ ಉಪಯೋಗವಾಗುತ್ತದೆ. ಇದರ ಎಲ್ಲ ವಿವರಣೆ ಈ ಆಯುರ್ವೇದದ ಔಷಧಿಯ ಗ್ರಂಥವನ್ನಾಗಿ ತಯಾರಿಸಿ ತಂದಿದ್ದೆನೆ ಅರ್ಪಿಸಬೇಕು. ಗುರುಗಳಿಗೆ ಬಹಳ ಸಂತೋಷವಾಗುತ್ತದೆ. ನಿಜವಾಗಿಯೂ ನಾನು ಕಲಿಸಿದ ವಿದ್ಯೆಯನ್ನು ಉಪಯೋಗಿಸಿ, ಗುರುದಕ್ಷಿಣೆಯ ರೂಪದಲ್ಲಿ ನೀನು ಕೊಟ್ಟ ಕಾಣಿಕೆ ಅತೀ ಮೌಲ್ಯವಾದದ್ದಾಗಿದೆ. ನಿಜವಾದ ಶಿಷ್ಯ ನೀನೆಯೆಂದು ಆಶಿರ್ವದಿಸುತ್ತಾರೆ. ಸರಿಯಾಗಿ ಕಲೆತ ವಿದ್ಯೆ ವಿನಯತೆಯನ್ನು ಮತ್ತು ಪ್ರಾವಿಣ್ಯತೆಯನ್ನು ತೋರಿಸುತ್ತದೆ. ಗುರು ಶಿಷ್ಯರ ಬಾಂಧವ್ಯ ವಿದ್ಯಾರ್ಜನೆಯಿಂದ ಯಾವ ರೂಪ ಪಡೆದುಕೊಂಡಿತೆಂಬುದು ಈ ಕಥೆಯಿಂದ ತಿಳಿಯುತ್ತದೆ.
(ಅನುವಾದಿತ ಕಥೆ)

✍️   ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಕಪ್ಪು ಹಲಗೆಯ ಮಾಂತ್ರಿಕ (ಕವಿತೆ) - ಹನುಮಂತ ದಾಸರ ಹೊಗರನಾಳ.

ಹೊಕ್ಕೀದಿ ದಿನ ಶಾಲಿಗಿ ಹಾಕ್ಕೊಂಡ ಹೊತ್ತಿಗೆಗಳ ಹೆಗಲಿಗೆ
ಹೊತ್ತಿಗೆಗಳ ಹೆಗಲಿಗೆ ಹಾಕೊಂಡ ಜ್ಞಾನದ ಬುತ್ತಿಯ ಬಿಚ್ಚಾಕ
ಜ್ಞಾನದ ಬುತ್ತಿಯ ಬಿಚ್ಚಾಕ ನನ ಗುರುವೇ ಅಜ್ಞಾನವ ಅಳಿಸಿ ಸುಜ್ಞಾನದ ಅಕ್ಷರವ ಬಿತ್ತಿ ಬೆಳೆಯಾಕ .!!

ದಿನ ಬೇಗ ಎದ್ದೇಳತಿ ನಿನ್ನ ಅಬ್ಬರದಿ ನೀ ಇರತಿ
ಕೆಲಸ ಕಾರ್ಯಗಳನು ಬಹುಬೇಗ ಮುಗಿಸತಿ
ತಿಂಡಿ ತಿನಿಸುಗಳನು ಮಾತ್ರ ಸಮಯವಿದ್ದರ ನೀ ತಿನ್ನತಿ 
ಯಾರೇನೇ ಅಂದರೂ ನಿನ್ನ ತಯಾರಿಯಲ್ಲಿ ನೀ ಇರತಿ.....!!

ಆತುರದಲ್ಲಿರತಿ ನೀ ಶಾಲಿಗಿ ಹೋಗಾಕ
ನಕ್ಕು ನಲಿದು ಮಕ್ಕಳೊಂದಿಗೆ  ಆಡಾಕಾ
ಆಟೋಟಗಳ ಮೂಲಕ ಬದುಕಿನ ಪಾಠವ ಕಲಿಸಾಕ
ಬದುಕಿಗೊಂದು ಕೈತೋರಿ ಸರಿ ದಾರಿಯ ತಿಳಿಸಾಕ....!!

ಹಾಕತೀ ಕಾಲಿಗೆ ನೀ ಹರುಕ ಚಪ್ಪಾಲು 
ಇಟ್ಟೀದಿ ತಲೆಮ್ಯಾಲೊಂದು ರುಮಾಲು
ಹಿಡದಿ ಕೈಯಾಗೊಂದು ಮುರುಕ ಕೋಲು
ಆದರೂ ಎಲ್ಲಾ ಇರುವಂತೆ ತೋರತಿ ಮುಖದೊಳಗೊಂದು ಸ್ಮೈಲ...!!

ಕಳೆಯತಿ ನೀ ಸಮಯ ಅತೀಹೆಚ್ಚು ಶ್ಯಾಲ್ಯಾಗ
ಮನಿಗ್ಹೋದರ ಕುಡತಿ ಸುಮ್ಮ ಎಲ್ಲೋ ಒಂದು ಮೂಲ್ಯಾಗ
ಅಚ್ಚಳಿಯದೇ ಕೂಡತಿ ವಿದ್ಯಾರ್ಥಿಗಳ ಎದೆಯಾಗ
ನೀ ಕಲಿಸಿದ ಶಿಷ್ಯರ ಸಾಧನೆಯ ನೋಡಿ ಎದೆತಟ್ಟಿ ನಗತಿ ಮನದಾಗ.....!!

ನಿಸ್ವಾರ್ಥ ಸೇವೆಯ ಹೀರೋ ನೀ ಶಿಕ್ಷಕ
ನಮ್ಮೆಲ್ಲರ ಬದುಕಿಗೆ ನೀ ಮೊದಲ ಪ್ರೇರಕ
ಸಹನೆ ತಾಳ್ಮೆಯ ಭಾವುಕಗಳ ಸಂಪಾದಕ
ರಾಷ್ಟ್ರದ ಏಳಿಗೆಗೆ ನೀ ಮೊದಲ ಕಪ್ಪು ಹಲಗೆಯ ಮಾಂತ್ರಿಕ...!!

- ಹನುಮಂತ ದಾಸರ ಹೊಗರನಾಳ.

ಪ್ರೇಮ ಧರ್ಮ (ಸಣ್ಣ ಕತೆ) - ಮನು ವೈದ್ಯ.

ಅಧ್ಯಾಯ -ಒಂದಕ್ಕಾಗಿ ಗಮನಿಸಿ - http://vicharamantapasahityapatrike.blogspot.com/2022/09/blog-post_3.html

ಅಧ್ಯಾಯ -೨

ಆಗ ಮಧ್ಯಾಹ್ನ ಸುಮಾರು‌ ೧.೩೦‌ ರ ಸಮಯ.. ಅಚ್ಯುತಾನಂದ ಹೆಗಡೆಯವರು ಆಗಷ್ಟೇ ಊಟ ಮುಗಿಸಿ, ಮನೆಯ ಜಗಲಿಯಲ್ಲಿ ಕೂತು ಎಲೆ ಅಡಿಕೆ ಹಾಕಿಕೊಳ್ಳುತ್ತಾ, "ಮಗ ಬತ್ತೆ ಹೇಳಿದ್ದಾ, ಇಷ್ಟೊತ್ತಿಗೆ ಬರಕಾಗಿತ್ತು. ಹೊಸನಗರದಿಂದ ೧೨  ಗಂಟೆಗೆ ಬಸ್ಸು ಬಿಡ್ತ.. ಅಲ್ಲಿಂದ ಹೊಸಳ್ಳಿಗೆ ೧ ತಾಸು ಸಾಕು.. ಇವಾಗ ೧.೩೦ ಆತು. ಇಷ್ಟೊತ್ತಿಗೆಲ್ಲಾ‌ ಅವ ಮನೆಲಿರಕಾಗಿತ್ತು. ಶಿವಮೊಗ್ಗದಿಂದ ಹೊರಡಲೇ ಲೇಟ್ ಮಾಡ್ಕಂಡು ಬಸ್ಸು ತಪ್ಪಿ ಹೋತ ಎಂತೇನ..?" ಎಂದು ಗೊಣಗಿದರು, ತಂಬಾಕಿನ‌ ಎಸಳನ್ನು ಬಾಯಿಗೆ ಎಸೆದುಕೊಳ್ಳುತ್ತಾ.. 
ಅಷ್ಟರಲ್ಲಿ‌ ಬ್ಯಾಗ್ ಒಂದನ್ನು ಹೆಗಲಿಗೇರಿಸಿಕೊಂಡು, ಪ್ರತೀಕ್ ಆಗಷ್ಟೇ ಮನೆಯ ಒಳಗೆ ಬಂದ.. ಇದನ್ನು ನೋಡಿದ ಅಚ್ಯುತಾನಂದರು, "ಅಯ್ಯೋ‌ ಈಗಷ್ಟೇ ನಿನ್ನ ಬಗ್ಗೇನೆ ಯೋಚ್ನೆ ಮಾಡ್ತಾ ಇದ್ದಿದ್ದೆ, ಎಂತ ಇಷ್ಟು ತಡ ಆಗೋತಾ..?" ಎಂದರು ಬಾಯಲ್ಲಿ ತುಂಬಿದ ತಂಬಾಕಿನ‌ ರಸವನ್ನು ಮೆಲ್ಲುತ್ತಾ.. 
"ಎಂತಾ ಇಲ್ಲೆ, ಬಸ್ಸು ತಡ ಆತು ಅಷ್ಟೆ.." ಎಂದಷ್ಟೇ ಹೇಳಿ  ಹಾಗೇ ಒಳಗೆ ನಡೆದುಬಿಟ್ಟ ಪ್ರತೀಕ್..
"ಮಗಾ ಬಂದ್ಯ.. ನಿಂದೇ ಬರು‌ ಹಾಯ್ತಾ ಇದ್ದಿದ್ದೆ, ಬೇಗ ಸ್ನಾನ‌ ಮಾಡ್ಕಂಡು ಬಾ ಊಟ ಮಾಡ್ಲಕ್ಕು.." ಎಂದಳು ಸರೋಜ‌‌ ಪ್ರತೀಕ್ ಒಳ ಬರುತ್ತಿರುವುದನ್ನು ನೋಡಿ..
"ಹೂಂ.." ಎಂದಷ್ಟೇ ಹೇಳಿ ಸ್ನಾನ ಮುಗಿಸಿ ಊಟಕ್ಕೆ ಬಂದು ಕುಳಿತ..
ಸರೋಜ ಊಟ ಬಡಿಸುತ್ತಾ, "ತಮಾ, ಸಾಗರ ಬದಿ ಒಂದು ಹುಡುಗಿ ಜಾತಕ ಬೈಂದು.. ನಿಂಗಳ ಇಬ್ಬರ ಜಾತಕ ಚೋಲೋ ಹೊಂದಾಣಿಕೆ ಆಗ್ತಡಾ, ಗೋವಿಂದ ಭಟ್ಟರು ಹೇಳಿದ್ರು..ಹುಡುಗಿ ಡಿಗ್ರಿ ಮುಗಿಸಿ ಮನೆಲ್ಲೇ ಇದ್ದಡಾ.. ಒಬ್ಬಳೇ ಮಗಳಡಾ. ಎರಡು ಎಕರೆ ಜಮೀನು ಇದ್ದಡಾ. ಸಣ್ಣ ನೌಕರಿ ಆದ್ರೂ ಅಡ್ಡಿಲ್ಲೆ, ಶಿವಮೊಗ್ಗ ಬದಿಗೆ ಇದ್ದವು ಆದ್ರೆ ಸಾಕು ಹೇಳಿದ್ದ.. ಹುಡುಗಿಗೂ ೩೦ ವರ್ಷ ಆತು.. ನೋಡಲೂ ಚೊಲೋ ಇದ್ದು.. ನೀ ಒಂದ ಸಲ ನೋಡಿ ಎಂತದು ಹೇಳು.." ಎಂದು‌ ಹೇಳಿ ಮಗನ ಮುಖ ನೋಡಿದಳು..
ಪ್ರತೀಕ್ ಇದೆಲ್ಲಾ ಮಾಮೂಲು ಎಂಬಂತೆ, ಊಟ ಮಾಡುತ್ತಿದ್ದವನು ತಲೆ ಎತ್ತದೆ, 
"ಅಮ್ಮಾ.. ಈ ನಮ್ಮ ಬ್ರಾಹ್ಮಣ ಜಾತಿಯವರ ಕರ್ಮ ಕಾಂಡ.. ಇವೆಲ್ಲಾ ಮೊದಲು ಹೀಂಗೆ ಹೇಳ್ತ, ಕಡಿಗೆ ಒಂದೊಂದೇ ಖ್ಯಾತೆ ತೆಗಿತಾ ಬತ್ತ.. ಹೀಂಗೆ ಎಷ್ಟು ಜಾತಕ ಬಂತು, ಏನೂ ಆಗದೇ ಹೋತು ಈ ನಾಲ್ಕು ವರ್ಷದಲ್ಲಿ‌ ನಿಂಗೇ ಗೊತ್ತಿದ್ದಲಿ..ಬಿಡು. ಮೊದ್ಲು ಆ ಹುಡುಗಿ ಮನೆಯವು ಎಂತದೂ ಜಾಸ್ತಿ ಡಿಮ್ಯಾಂಡ್ ಇಲ್ಲದೇ ನನ್ನ ಒಪ್ಕಳ್ಳಲಿ, ಆಮೇಲೆ ನೋಡನ.." ಎಂದಷ್ಟೇ ಕ್ಲುಪ್ತವಾಗಿ ಹೇಳಿ, ಮತ್ತೇನೂ ಹೇಳಲು ಉಳಿದಿಲ್ಲ ಎಂಬಂತೆ ಬೇಗ ಊಟ ಮುಗಿಸಿ ಎದ್ದು ಕೈ ತೊಳೆದುಕೊಂಡ.. ಸರೋಜ ಮತ್ತೇನೋ ಹೇಳಲು ಹೋದವಳು, ಮಗನ ಮುಖದಲ್ಲಿದ್ದ ತಿರಾಸ್ಕಾರ ಭಾವ ನೋಡಿ ಸುಮ್ಮನಾದಳು..  
'ಈಗಲಾದರೂ ತಾನು, ತನ್ನ ಮತ್ತು ರೀಟಾಳ ಪ್ರೇಮ ವಿಷಯ ಹೇಳದಿದ್ದರೆ, ಅನಾಹುತವಾದೀತು..' ಎಂದು ಮನದಲ್ಲೇ ಅಂದುಕೊಳ್ಳುತ್ತಾ ಪ್ರತೀಕ್ ಏನೋ‌‌ ನಿರ್ಧಾರಕ್ಕೆ ಬಂದವನಂತೆ ತನ್ನ ರೂಮಿನೆಡೆಗೆ ಹೆಜ್ಜೆ ಹಾಕಿದ..
ಅಲ್ಲೇ ದೂರದಲ್ಲೆಲ್ಲೋ "ಯಾವ ಹೂವು ಯಾರ ಮುಡಿಗೋ.." ಎಂಬ ಹಾಡು ಧ್ವನಿಸುತ್ತಿತ್ತು...
----+++------++-------++-------------
"ಅಲ್ದ ಶಂಕರಾ.. ಹೀಂಗೆ ಬಂದ ಹುಡುಗರನ್ನೆಲ್ಲಾ, ಅದು ಸರಿ, ಇಲ್ಲೆ, ಇದು ಸರಿ ಇಲ್ಲೆ ಹೇಳಿ ಬಿಡ್ತಾ ಹೋದರೆ ನಿನ್ನ ಮಗಳಿಗೆ ಮದ್ವೆ ಕಷ್ಟ ನೋಡು.." ಎಂದು ಅಚ್ಯುತಾನಂದರು‌ ಎಲೆ ಅಡಿಕೆ ಜೊತೆ ತಂಬಾಕನ್ನು ಸೇರಿಸಿ ಬಾಯಿಗಿಡುತ್ತಾ ಹೇಳಿದರು..
"ಹಾಂಗೇಳಿ ಎಂತೆತವ್ಕೋ ನನ್ನ ಮಗಳು ಪ್ರೇಮಾ ನ ಗಂಟು ಹಾಕಲಾಗ್ತನ..? ನೋಡ ಚೊಲೋ ಕಾರು, ಬಂಗ್ಲೆ, ಆಸ್ತಿ ಇಪ್ಪ ಗಂಡು ನೋಡಿ ಪ್ರೇಮಾನ ಮದುವೆ ಮಾಡವು ಅದ್ಕಂಡಿದ್ದು ತಪ್ಪ ಹೇಳು.?" ಎಂದು ತಂಬಾಕು ಬೆರೆತ ತಾಂಬೂಲವನ್ನು ಬಾಯಿಗಿಡುತ್ತಾ ಹೇಳಿದರು ಶಂಕರ ಹೆಗಡೆಯವರು.
ಅಚ್ಯುತಾನಂದರ ಮನೆಯ ಬೀದಿಯ ಕೊನೆಯಲ್ಲೆ ಅವರ ಮನೆಯಿರುವುದು.. ತನ್ನ ಮಗಳು ಪ್ರೇಮಾಳಿಗೆ ಕಳೆದ ೬ ವರ್ಷಗಳಿಂದ ಗಂಡು ನೋಡುತ್ತಲೇ ಇದ್ದಾರೆ. ಆದರೆ ಯಾವ ಗಂಡೂ ಅವರಿಗೆ ಸರಿ ಬರಲೇ ಇಲ್ಲ.. ಪಿ.ಯು.ಸಿ ಮುಗಿಸಿ ಮನೆಯಲ್ಲೇ ಇರುವ ಪ್ರೇಮಳಿಗೆ, ದೊಡ್ಡ ಹಣವಂತ, ಬೆಂಗಳೂರಂತ ನಗರದಲ್ಲಿ ದೊಡ್ಡ ಉದ್ಯೋಗದಲ್ಲಿರುವ ಗಂಡನ್ನೇ ನೋಡಿ ಮದುವೆ ಮಾಡಬೇಕೆಂಬ ಮಹದಾಸೆ ಶಂಕರ ಹೆಗಡೆಯವರದು.. ಇರುವವಳು ಒಬ್ಬಳೇ ಮಗಳು, ಮನೆಯಲ್ಲಿ ತಾನು ಮತ್ತೆ ತನ್ನ ಹೆಂಡತಿಯನ್ನು ಬಿಟ್ಟರೆ ಅವಳಿಗೆ ಮತ್ತಾರು‌ ದಿಕ್ಕಿಲ್ಲ, ಎಂಬ ಆಲೋಚನೆಯನ್ನು ಮುಂದಿಟ್ಟುಕೊಂಡು, ಅದೆಷ್ಟೋ ಒಳ್ಳೆ ಸಂಬಂಧಗಳು ಬಂದರೂ, ಇದಕ್ಕೂ ಒಳ್ಳೆಯ ಸಂಬಂಧ ಬರಬಹುದೆಂದುಕೊಳ್ಳುತ್ತಾ, ಏನಾದರೂ ಒಂದು ಐಬು ಹೇಳಿ‌ ಅದನ್ನು ತಿರಸ್ಕರಿಸುತ್ತಿದ್ದ.. ಮೊನ್ನೆ ಒಂದು ಸಂಬಂಧ ಬಂದಿತ್ತು. ಒಳ್ಳೆಯ ಜಮೀನು ಮನೆ ಇರುವ ಸಂಬಂಧ, ಒಬ್ಬನೇ ಮಗ, ಸ್ಪುರರ್ದೂಪಿ. ಡಿಗ್ರಿ ಮುಗಿಸಿ, ಕೃಷಿಯಲ್ಲೇ ಏನಾದರೂ ಸಾಧಿಸಬೇಕೆಂಬ ಹಂಬಲದಿಂದ ಹೊರಗಡೆ ನೌಕರಿಗೆಂದು ಹೋಗದೆ, ತನ್ನ ಮನೆಯಲ್ಲೇ ಇರುವ ೪೦ ಎಕರೆ ಕೃಷಿ ಭೂಮಿಯನ್ನೇ ನೋಡಿಕೊಂಡಿದ್ದ.. ಅವನು ಮನೆಯಲ್ಲಿದ್ದಾನೆ, ಸ್ವಲ್ಪ‌ ಕಪ್ಪು ಎಂಬ ಕಾರಣ ನೀಡಿ‌ ಆ ಸಂಬಂಧವನ್ನೂ ತಿರಸ್ಕರಿಸಿಬಿಟ್ಟಿದ್ದರು ಶಂಕರ ಹೆಗಡೆಯವರು..
ಅದಕ್ಕೇ ಅಚ್ಯುತಾನಂದರು ಹಾಗೆ ಕೇಳಿದ್ದು..
"ಅದೆಲ್ಲಾ ಸರಿ, ನಿನ್ನ ಮಗಳಿಗೆ ಈಗ ಸುಮಾರು ೨೮ ವರ್ಷ.. ನೀ ಹೀಂಗೆ ಮಾಡ್ತಾ ಇದ್ರೆ, ಅವಳಿಗೆ ವಯಸ್ಸಾಗ್ತು.. ಹೆಣ್ಣು ಮಕ್ಕಳಿಗೆ ೩೦ ಆದ ಮೇಲೆ ಗಂಡು ಸಿಗದು ಕಷ್ಟ ನೋಡು.." ಎಂದು ಅಚ್ಯುತಾನಂದರು ಎಚ್ಚರಿಸಿದರು..
"ಹಾಂಗೆಲ್ಲಾ ಎಂತಾ ಆಗ್ತಿಲ್ಲೆ.. ನನ್ನ ಮಗಳು ನೋಡಲೆ ಬೆಳ್ಳಗೆ ಒಳ್ಳೆ ಗೊಂಬೆ ಇದ್ದಾಂಗೆ ಇದ್ದು.. ಅದ್ಕೆ ಚೊಲೋ ಸಂಬಂಧ ಇವತ್ತಲ್ಲ ನಾಳೆ ಸಿಕ್ಕೇ ಸಿಗ್ತು ತಗ.." ಎಂದರು ಶಂಕರ ಹೆಗಡೆಯವರು ತನ್ನ  ನಿಲುವನ್ನು ಸಮರ್ಥಿಸಿಕೊಳ್ಳುತ್ತಾ..
"ಏನೋ‌ ಎಲ್ಲಾ ಒಳ್ಳೇದು ಆದ್ರೆ ಅಷ್ಟೆ ಸಾಕು..‌ಎಂದು ಹೇಳುತ್ತಾ ಅಚ್ಯುತಾನಂದರು ಮತ್ತೇನೋ ಜ್ಞಾಪಿಸಿಕೊಂಡಂತೆ  "ಅಲ್ದ ನನ್ನ ಮಗಗೊಂದು ಎಲ್ಲಾದರೂ ಒಳ್ಳೆ ಹುಡುಗಿ ಇದ್ದರೆ ನೋಡು ಹೇಳಿದ್ದೆ, ಏನಾತು ಅದು.." ಎಂದರು ವಿಷಯ ಬದಲಿಸುತ್ತಾ..
"ಓಹ್ ಅದಾ, ನಾನೂ ನಂಗೆ ಗೊತ್ತಿರ ಮೂರ್ನಾಲ್ಕು ಕಡೆ ಹೇಳಿಟ್ಟಿದ್ದೆ.. ಅವ್ಕೆ ದೊಡ್ಡ ನೌಕರಿಲಿದ್ದವೆ ಆಗವಡ, ನಿನ್ನ ಮಗನ‌ ನೌಕರಿ ಅಷ್ಟು ದೊಡ್ಡದಲ್ಲ ಹೇಳಿ ನೀನೇ ಅವತ್ತು ಹೇಳಿದ್ಯಲಾ.., ನಮ್ಮ‌ ಜಾತಿವ್ಕೆ ದುಡ್ಡಿನ ದುರಾಸೆ ಹಿಡದೋಜು ನೋಡು.." ಎಂದು ಹೇಳುತ್ತಾ, ತಂಬಾಕಿನ ತಾಂಬೂಲವನ್ನು ಉಗುಳಲು ಎದ್ದು ಹೊರಗಡೆ ಹೊರಟರು‌ ಶಂಕರ ಹೆಗಡೆಯವರು..
ಅವರ ಮಾತನ್ನು ಕೇಳಿದ ಅಚ್ಯುತಾನಂದರು ಆಶ್ಚರ್ಯದಿಂದ ಅವರನ್ನೇ ನೋಡುತ್ತಾ ಕುಳಿತರು.. "ಎಲಾ ಇವನ, ಇವನು ಇವನ ಮಗಳಿಗೆ ಹಣವಿರುವ ಗಂಡನ್ನು ನೋಡಿದರೆ ಅದು ದುರಾಸೆಯಲ್ಲ, ಮತ್ತೊಬ್ಬರು ಅದೇ ಕೆಲಸ ಮಾಡಿದರೆ ದುರಾಸೆ. ಇದು ನಮ್ಮ ಬ್ರಾಹ್ಮಣ ಜಾತಿಯ ದುರವಸ್ಥೆ.." ಎಂದು ಮನದಲ್ಲೇ ಅಂದುಕೊಂಡರು..
ಅಷ್ಟರಲ್ಲಿ ಶಂಕರ ಹೆಗಡೆಯವರು "ಸರಿ ನಾನಿನ್ನು ಹೊರಡ್ತೆ, ಆಗಲೇ ಬೆಳಿಗ್ಗೆ ೧೦ ಗಂಟೆ ಆಗೋತು, ತೋಟದಲ್ಲಿ ಸ್ವಲ್ಪ‌ ಕೆಲಸ ಇದ್ದು, ಸಂಜೆ ಬತ್ತೆ.." ಎಂದು ತುರಾತುರಿಯಿಂದ ಹೊರಟರು.
ಅಚ್ಯುತಾನಂದರು "ಸರಿ..ಸರಿ.." ಎಂದು ಅವರನ್ನು ಬೀಳ್ಕೊಟ್ಟರು..
-------++++-------++++-----++-----
ಪ್ರತೀಕ್ ಮನೆಗೆ ಬಂದು ೧ ವಾರವೇ ಕಳೆದಿತ್ತು.. ತನ್ನ ರೀಟಾಳ ಮದುವೆಯ ವಿಷಯವನ್ನು ಮನೆಯಲ್ಲಿ ಮಾತನಾಡಿ, ಒಪ್ಪಿಸಿ ಫಿಕ್ಸ ಮಾಡಿಕೊಂಡೇ ಬರಬೇಕೆಂದು, ಏನೋ ಒಂದು‌ ಸುಳ್ಳು ನೆಪವೊಡ್ಡಿ ೮ ದಿನ ರಜೆ ತೆಗೆದುಕೊಂಡು‌ ಬಂದಿದ್ದ.. ಯಾವತ್ತೂ ರಜೆ ತೆಗೆದುಕೊಳ್ಳದೇ, ಕೆಲಸ ಮಾಡುತ್ತಿದ್ದ ಪ್ರತೀಕ್ ನನ್ನು‌ ಕಂಡರೆ ಸಂಸ್ಥೆಯ ಮುಖ್ಯಸ್ಥರಿಗೆ ತುಂಬಾ ಇಷ್ಟ..‌ಕೆಲಸದಲ್ಲಿ‌ ಅವನಿಗಿರುವ ಶ್ರದ್ಧೆ, ಅವನ‌ ಕೌಶಲ್ಯ ಎಲ್ಲವೂ ಅಚ್ಚು, ಮೆಚ್ಚಾಗಿತ್ತು ಅವರಿಗೆ..‌ಅದಕ್ಕೆ ಹಿಂದೂ, ಮುಂದೂ ಯೋಚಿಸದೇ ಅವನಿಗೆ ರಜೆಯನ್ನು ಮಂಜೂರು ಮಾಡಿದ್ದರು..ಅದರಲ್ಲಿ ೬ ದಿನಗಳು ಆಗಲೇ ಕಳೆದು ಹೋಗಿವೆ.. ಇನ್ನೂ ತನ್ನ ವಿಷಯದ ಒಂದು ತುಣುಕನ್ನೂ ಮನೆಯಲ್ಲಿ ಹೇಳಿಲ್ಲ.. ೨ ದಿನದಲ್ಲಿ ಎಲ್ಲವನ್ನೂ ಹೇಳಿ ಒಪ್ಪಿಸಲೇ ಬೇಕೆಂದು ತೀರ್ಮಾನಿಸಿ, ಅಪ್ಪನ ಹತ್ತಿರ ಈಗಲೇ ಹೇಳಿಬಿಡೋಣ ಎಂದು ಗಟ್ಟಿ ಮನಸ್ಸಿನೊಂದಿಗೆ, ತನ್ನ ರೂಮಿನಿಂದ ಮನೆಯ ಜಗುಲಿಯ ಕಡೆ ಬಂದ..‌ಆದರೆ ಅಲ್ಲಿ‌ ಅವನ ತಂದೆ ಇರಲಿಲ್ಲ..‌ತೋಟದ ಕಡೆ ಹೋದರು ಎಂದು ಅಮ್ಮ‌ನಿಂದ ತಿಳಿಯಿತು.. ಸರಿ ಅವರು ಬರಲಿ‌ ಆಮೇಲೇ ಹೇಳಿದರಾಯಿತು..‌ಎಂದು ಕೊಂಡು‌ ಅಲ್ಲೇ ಜಗುಲಿಯಲ್ಲೇ ಕುಳಿತು ತಂದೆಗಾಗಿ ಕಾಯತೊಡಗಿದ.. ಅವನಿಗೆ ರೀಟಾ ಮತ್ತೆ, ಮತ್ತೆ ನೆನಪಾಗುತ್ತಿದ್ದಳು..ತಂದೆ ಬರುವುದರೊಳಗೆ ಅವಳಿಗೊಂದು ಕಾಲ್ ಮಾಡಿಬಿಡೋಣ ಎಂದುಕೊಂಡು ಮೊಬೈಲ್ ಎತ್ತಿಕೊಂಡು ಅಂಗಳಕ್ಕೆ ಹೆಜ್ಜೆ ಇಟ್ಟ..

ಇತ್ತ ತೋಟದಿಂದ ಬರುವಾಗ ಅಚ್ಯುತಾನಂದರು ಶಂಕರ ಹೆಗಡೆಯವರನ್ನು ಮಾತಾಡಿಸಿಕೊಂಡು ಹೋಗೋಣ ಎಂದುಕೊಂಡು ಬರುತ್ತಿದ್ದರು..‌ಅವರ ತೋಟಕ್ಕೆ ಹೋಗುವಾಗ, ಬರುವಾಗ ಶಂಕರ ಹೆಗಡೆಯವರ ಮನೆಯನ್ನು ದಾಟಿಕೊಂಡೇ ಹೋಗಬೇಕು.. ಹೇಗೂ ದಾರಿಯಲ್ಲೇ ಮನೆ ಸಿಗುತ್ತದೆ ಒಮ್ಮೆ ಹೋಗಿ ಮಾತಾಡಿಸಿಕೊಂಡು ಬರೋಣ ಎಂದುಕೊಂಡು ಹೊರಟಿದ್ದರು.. 
ಶಂಕರ ಹೆಗಡೆಯವರು ಮತ್ತೆ ಅವರ ಧರ್ಮಪತ್ನಿ ಇಬ್ಬರೂ ಏನೋ‌‌ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿದ್ದರು.. ಮನೆಯಲ್ಲಿ ಅವರ ಮಗಳು ಪ್ರೇಮಾ ಒಬ್ಬಳೇ ಇದ್ದಳು.. ಎಂದಿನಂತೆ ಅವರ ಮನೆ ಕೆಲಸದ ಆಳು ಹನುಮಂತು ಕೂಡ ಕೆಲಸಕ್ಕೆ ಬಂದಿದ್ದ.. ಇದಾವುದೂ ತಿಳಿಯದ ಅಚ್ಯುತಾನಂದರು ಮನೆಯ ಬಾಗಿಲು ತೆರೆದಿದ್ದು ನೋಡಿ ಹಾಗೇ ಒಳಗಡೆ ಹೋದರು.. ಇನ್ನೇನು ಶಂಕರ ಹೆಗಡೆಯವರನ್ನು ಕೂಗಬೇಕು ಅನ್ನುವಷ್ಟರಲ್ಲಿ, ಒಳಗಿನಿಂದ ಒಂದು ಗಂಡು ಮತ್ತು ಹೆಣ್ಣಿನ ಧ್ವನಿ ಅವರಿಗೆ ಕೇಳಿಬಂತು.. ಅದು ಮಾಮೂಲಿನಂತಿರಲಿಲ್ಲ.. "ಥೂ ಪೋಲಿ.. ಹಗಲಲ್ಲೇ ಶುರು ಮಾಡಿದ್ಯಾ, ಬಿಡು.. ಯಾರಾದ್ರೂ ಬಂದ್ರೆ ಕಷ್ಟ.." ಎಂದು ಹೇಳುತ್ತಾ ನಗುತ್ತಿರುವುದು ಕೇಳಿಸಿತು ಅವರಿಗೆ..
ತಕ್ಷಣ ಆ ಧ್ವನಿ ಪ್ರೇಮಾಳದ್ದೆಂದು ಅವರಿಗೆ ತಿಳಿದುಹೋಯಿತು.. ಅದರ ಹಿಂದೆಯೇ ಮತ್ತೊಂದು‌ ಧ್ವನಿ‌ ತೇಲಿ‌ ಬಂತು.. "ಸುಮ್ನಿರು, ಇಂಥ ಒಳ್ಳೆ ಅವಕಾಶ, ಮತ್ತೆ ಸಿಗೋದಿಲ್ಲ." ಎನ್ನುತ್ತಾ ಮುತ್ತಿಡುವ ಶಬ್ಧ..‌ಆ ಗಂಡಿನ‌ ಧ್ವನಿ ಯಾರದೆಂದು ತಕ್ಷಣ ತಿಳಿಯಲಿಲ್ಲ..ಅವರ ಮನಸ್ಸು ಏನೋ‌ ಕೇಡು ಶಂಕಿಸಿತು.. ಹಾಗೇ ಆ ಧ್ವನಿ ಬಂದತ್ತ ಹೋದರು ಅಚ್ಯುತಾನಂದರು..‌ ಅಲ್ಲಿ ಅಡಿಗೆ ಮನೆಯಲ್ಲಿ‌ನ ದೃಶ್ಯ ನೋಡಿ ಗರಬಡಿದವರಂತೆ ನಿಂತು ಬಿಟ್ಟರು.. ಮನೆಯ ಆಳು ಹನುಮಂತು ಪ್ರೇಮಾಳನ್ನು ತಬ್ಬಿಕೊಂಡು ಮುತ್ತಿಡುತ್ತಿದ್ದ, ಅವಳೂ ಕೂಡ ನಗುತ್ತಾ ಅವನನ್ನು‌ ತಬ್ಬಿಕೊಂಡಿದ್ದಳು.. ಅವರು ತಮ್ಮ ರಾಸಲೀಲೆಯಲ್ಲಿ‌ ಎಷ್ಟು ತಲ್ಲೀನರಾಗಿದ್ದರೆಂದರೆ, ಅಲ್ಲಿ ಅಚ್ಯುತಾನಂದರು ಬಂದಿದ್ದು ಅವರಿಗೆ ತಿಳಿಯಲೇ ಇಲ್ಲ..‌ಅಚ್ಯುತಾನಂದರಿಗೆ ಅಲ್ಲಿರಲಾಗದೇ ಹಾಗೇ ಸಪ್ಪಳ‌ ಮಾಡದೇ ಬೇಸರದಿಂದ ಹಿಂತಿರುಗಿ ಮನೆಗೆ ಬಂದುಬಿಟ್ಟರು.. 
ಅವರು ಹೋದ ಅರ್ಧ ಗಂಟೆಯ ನಂತರ ಹನುಮಂತು ಅಂಗಿಯನ್ನು ಹಾಕಿಕೊಳ್ಳುತ್ತಾ, ಏನೂ ಆಗಿಲ್ಲವೆಂಬಂತೆ ಮನೆಯಿಂದ ಹೊರಬಿದ್ದು ತೋಟದತ್ತ ನಡೆದ.. ಇತ್ತ ಪ್ರೇಮಾ ತನ್ನ ಸಿಉರೆಯನ್ನು ಸರಿಯಾಗಿ ಕಟ್ಟಿಕೊಂಡು, ಕೆದರಿದ ಕೂದಲನ್ನು ಸರಿಪಡಿಸಿಕೊಂಡು, ರೂಮಿನಿಂದ ಹೊರಬಿದ್ದು ಅಡಿಗೆ ಮನೆಯತ್ತ ತೆರಳಿ ಎಂದಿನಂತೆ ತನ್ನ ಕೆಲಸದಲ್ಲಿ ತನ್ಮಯಳಾದಳು.. ಇದಕ್ಕೂ ಮುಂಚೆ ಅಲ್ಲಿ‌ ಇಂಥದ್ದೊಂದು ಘಟನೆ ನಡೆದಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲದಂತಿತ್ತು ಅಲ್ಲಿನ‌ ವಾತಾವರಣ.. ಆ ಮನೆಯಲ್ಲಿರುವ ಮರದ ಕಂಬಗಳು 'ತಮಗೆ ಇದೆಲ್ಲಾ ಮಾಮೂಲೆ, ಎಷ್ಟು ಸಾರಿ ನೋಡಿದ್ದೆವೋ..' ಎಂಬಂತೆ ಮೂಕ ಸಾಕ್ಷಿಗಳಾಗಿ‌ ನಿಂತಿದ್ದವು..

ಇತ್ತ ಮನೆಗೆ ಬಂದ ಅಚ್ಯುತಾನಂದರಿಗೆ ಮನಸ್ಸು ಕೆಟ್ಟಂತಾಗಿತ್ತು.. ಅವರಿಬ್ಬರೂ ತಬ್ಬಿಕೊಂಡು ನಡೆಸುತ್ತಿದ್ದ ರಾಸಲೀಲೆಯ ದೃಶ್ಯ ಮತ್ತೆ, ಮತ್ತೆ ಕಣ್ಣ ಮುಂದೆ ತೇಲಿ‌ ಬಂದಂತಾಗಿ ಕುಳಿತಲ್ಲಿ, ನಿಂತಲ್ಲಿ‌ ಚಡಪಡಿಸತೊಡಗಿದ್ದರು.. ಮಲ್ಲಿಗೆ ಹೂವೆಂದು ನಂಬಿದ್ದು,  ಅದ್ಯಾವುದೋ ಪರಿಮಳವಿಲ್ಲದ ಕೆಲಸಕ್ಕೆ ಬಾರದ ಕಾಡು ಹೂವಾದರೆ ಆಗುವಂತ ಬೇಸರ ಅವರಿಗಿಂದು ಆಗಿತ್ತು.. ಅಲ್ಲೇ ಜಗುಲಿಯ ಮೇಲೆ ಕುಳಿತಿದ್ದ ಪ್ರತೀಕ್ ತಂದೆಯ ಚಡಪಡಿಕೆಯನ್ನು ಗಮನಿಸಿ 
"ಅಪ್ಪಾ ಎಂತಾ ಆತ.. ? ಎಂತಕ್ಕೆ ಇಷ್ಟು ಚಡಪಡಿಸ್ತಾ ಇದ್ದೆ..?" ಎಂದು ಕೇಳಿದ..
ಅವರಿಗಾದ ಗಾಬರಿಯಲ್ಲಿ ಅವರಿಗೆ ಜಗುಲಿಯ ಮೇಲೆ ತನ್ನ ಮಗ ಕುಳಿತಿರುವನೆಂಬುದು ಕೂಡ ಕಾಣಲಿಲ್ಲ..ಮಗನ ಪ್ರಶ್ನೆಯಿಂದ ತಕ್ಷಣ ಎಚ್ಚೆತ್ತ  ಅವರು, "ಛೇ ಎಂತಾ ಹೀನ ಕೆಲಸ, ಎಂತಾ ದ್ರೋಹ, ನಂಗೆ ಇಷ್ಟು ಬೇಜಾರಾಗ್ತಾ ಇದ್ದು, ಇನ್ನು ಅವಳ ತಂದೆಗೆ ಎಷ್ಟು ಬೇಜಾರು ಆಗ್ಲಕ್ಕು.. ಛೇ..ಛೇ.." ಎನ್ನುತ್ತಾ ಅವರ ಅಸಮಧಾನವನ್ನು ಹೊರಹಾಕಿದರು.. ಪ್ರತೀಕ್ ಗೆ ಅವರ ಮಾತು ಅರ್ಥವಾಗದೇ, "ಎಂತಾ ದ್ರೋಹ, ಯಾರ ತಂದೆ..? ಎಂತದು ಹೇಳಿ ಸರಿಯಾಗಿ ಹೇಳು‌ ಅಪ್ಪಾ.." ಎಂದೊಡನೆ ಅವರು ತಾನು ಕಂಡದ್ದೆಲ್ಲಾ ವಿವರಿಸಿ, "ನೋಡು ಅವಳ ಅಪ್ಪ ಅವಳ ಮದುವೆಗೆ ಸಂಬಂಧ ನೋಡ್ತಾ ಇದ್ರೆ ಇವಳು ಇಲ್ಲಿ ಹೊರಗಿನ ಜಾತಿ ಕೆಲಸದ ಆಳಿನ ಜೊತೆ ಗುಟ್ಟಾಗಿ‌ ಸಂಸಾರ ನಡೆಸಿದ್ದು.." ಎಂದು ಮತ್ತಷ್ಟು ಅಸಮಧಾನದಿಂದ ಹೇಳಿದರು..
ಇವೆಲ್ಲವನ್ನೂ ತಾಳ್ಮೆಯಿಂದ ಕೇಳಿಸಿಕೊಂಡ ಪ್ರತೀಕ್ ಚಿಕ್ಕದಾಗಿ ಮುಗುಳ್ನಕ್ಕು, "ನೋಡಿದ್ಯ ಅಪ್ಪಾ, ನಮ್ಮ ಜಾತಿ ಹುಡುಗೀರು ಹೇಂಗಿರ್ತ ಹೇಳಿ.. ಇಲ್ಲಿ ಹಳ್ಳಿಯಲ್ಲಿದ್ದವೇ ಹೀಂಗೆ, ಇನ್ನು ಹೊರಗಡೆ ನೌಕರಿ ಮಾಡ್ತಾ ಇರ ನಮ್ಮ ಜಾತಿ‌ ಹುಡುಗೀರು ಹೇಂಗಿದ್ದಿಕ್ಕು ಹೇಳಿ‌ ನೀನೇ ವಿಚಾರ ಮಾಡು..ಇಲ್ಲಿ ಪ್ರೇಮಾದೊಂದೇ ತಪ್ಪಲ್ಲ, ಅವಳ ಅಪ್ಪಂದು ತಪ್ಪೆಯಾ..‌ಅವಂಗೆ ತನ್ನ ಮಗಳ ಆಸೆ, ಕನಸಿಗಿಂತ ಹಣ ಮುಖ್ಯ..ಅವನ ಹಣದ ಅಂಧಕಾರಿಂದ ಮಗಳ ಮನಸ್ಸನ್ನು ಅರ್ಥ ಮಾಡ್ಕಳದ್ದೇ ತಪ್ಪು ಮಾಡದ.." ಎಂದು ಹೇಳಿ ದೀರ್ಘವಾದ ನಿಟ್ಟುಸಿರುಬಿಟ್ಟ ಪ್ರತೀಕ್.. 
"ಹೌದು ಅದೂ ನಿಜ..‌ಆದರೂ ನಮ್ಮ ಬ್ರಾಹ್ಮಣ ಸಮಾಜ ಎಷ್ಟು ಹಾಳಾಗಿ ಹೋಯ್ದು.." ಎಂದರು ಬೇಸರದಿಂದ.. 
ಇದೇ ಸರಿಯಾದ ಸಮಯವೆಂದು ಪ್ರತೀಕ್ ತನ್ನ ಪ್ರೀತಿಯ ವಿಷಯವನ್ನು ತಂದೆಯ ಮುಂದೆ ಬಿಚ್ಚಿಟ್ಟ.. 
ಮೊದಲೇ ಪ್ರೇಮಾಳ ವಿಷಯದಿಂದ ಬೇಸರಗೊಂಡಿದ್ದ ಅಚ್ಯುತಾನಂದರಿಗೆ ತನ್ನ ಮಗ ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆಂದು ತಿಳಿದು ಮತ್ತಷ್ಟು ಗಾಬರಿಗೊಂಡರು..
"ಛೇ, ಛೇ ಇದು‌ ಸಾಧ್ಯ‌ ಇಲ್ಲೆ, ಆ ಕ್ರಿಶ್ಚಿಯನ್ ಹುಡುಗಿ ನಮ್ಮ‌ ಮನೆ ಸೊಸೆ ಅಪ್ಪದು ನಂಗೆ ಬಿಲ್‌ಕುಲ್ ಇಷ್ಟ ಇಲ್ಲೆ.." ಎಂದು ಖಡಾಖಂಡಿತವಾಗಿ ಹೇಳಿಬಿಟ್ಟರು..ಇಷ್ಟು ಹೊತ್ತು ಇವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ಸರೋಜ ಕೂಡ ಅಚ್ಯುತಾನಂದರ ಮಾತಿಗೆ ದನಿಗೂಡಿಸಿದಳು..
"ಅಪ್ಪಾ.. ರೀಟಾ ಚಿಕ್ಕ ವಯಸ್ಸಿನಲ್ಲೇ ತಂದೆ, ತಾಯಿನ ಕಳ್ಕಂಡು, ಅನಾಥಾಶ್ರಮದಲ್ಲೇ ಬೆಳೆದಳು.. ಈ ಪ್ರೇಮಾನಂಥ ಹುಡುಗಿ ಅಲ್ಲ ಅವಳು..ಅವಳು ಹುಟ್ಟಿನಿಂದ ಕ್ರಿಶ್ಚಿಯನ್ ಆದರೂ, ಹಿಂದೂ‌ ಸಂಸ್ಕಾರವನ್ನು ಚೊಲೋ ಅರ್ಥ ಮಾಡ್ಕಂಜು.. ನಮ್ಮ ಸಂಪ್ರದಾಯಕ್ಕೂ ಹೊಂದಿಕೊಂಡು ಹೋಗ ಒಳ್ಳೆ ಹುಡುಗಿ ಅವಳು., ಅಪ್ಪಾ ಈ ಧರ್ಮ, ಜಾತಿ ಎಲ್ಲಾ ನಾವೇ ಮಾಡ್ಕಂಡಿದ್ದು, ಪ್ರೇಮಕ್ಕೆ ಯಾವ ಧರ್ಮನೂ ಇಲ್ಲೆ.. ಪ್ರೇಮವೇ ಒಂದು ಧರ್ಮ. ವಿಶ್ವಾಸ ದ್ರೋಹ, ಹಣದ ದುರಾಸೆ ಇರ ನಮ್ಮ ಬ್ರಾಹ್ಮಣ ಜಾತಿ ಹುಡುಗಿರೀಗಿಂತ,  ಹಣಕ್ಕಿಂತ ಪ್ರೀತಿ, ವಿಶ್ವಾಸನೇ ಮುಖ್ಯ ಹೇಳ ನನ್ನ ರೀಟಾನೆ ಎಷ್ಟೋ ಮೇಲು.." ಎಂದು‌ ತರ ತರವಾಗಿ ತಂದೆ, ತಾಯಿಯರಿಗೆ ಅರ್ಥ ಮಾಡಿಸಲು ನೋಡಿದ.. 
ಅವನು ಎಷ್ಟೇ ಅರ್ಥ ಮಾಡಿಸಲು ನೋಡಿದರೂ, ಅವರು ಮಾತ್ರ ಕ್ರಿಶ್ಚಿಯನ್ ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ನೀಡಲೇ ಇಲ್ಲ... 
ಪ್ರತೀಕ್ ಇನ್ನೇನೂ ಹೇಳಲು ಉಳಿದಿಲ್ಲ, ಎಂದು ಸೋತ ಮುಖದೊಂದಿಗೆ ಮರುದಿನ ಬೆಳಿಗ್ಗೆ ವಾಪಸ್ಸು ಶಿವಮೊಗ್ಗಕ್ಕೆ ಹೊರಡಲು‌ ಸಿದ್ದನಾದ.. ಸರೋಜಳಿಗೆ ಮಗ ಏನಾದರೂ ಮಾಡಿಕೊಂಡು ಬಿಟ್ಟರೆ ಎಂದು ಗಾಬರಿ..‌ಅವಳ‌ ಗಾಬರಿಯನ್ನು ಅರ್ಥ ಮಾಡಿಕೊಂಡ ಪ್ರತೀಕ್, "ಅಮ್ಮಾ, ನಿಂಗ ಯಾರೂ ಹೆದ್ರಡಿ, ನಾನು ಅವಳನ್ನು ಕಟ್ಟಿಕ್ಯಂಡು ಓಡಿ ಹೋಗಲ್ಲೆ, ನಿಂಗಳ ಒಪ್ಪಿಗೆ ತಗಂಡೆ ಮದ್ವೆ ಆಗ್ತೆ.. ಆದರೆ ಒಂದು ವಿಷಯ ನಿಂಗ ತೋರಿಸ ನಮ್ಮ ಜಾತಿ ಯಾವ ಹುಡುಗೀನೂ ನಾನು ಮದುವೆ ಆಗಲ್ಲೆ, ನಾನು ಮದುವೆ ಆದ್ರೆ, ನಾನು ಪ್ರೀತಿ ಮಾಡಿರ ರೀಟಾ ಜೊತೆನೆ.. ವಿಚಾರ ಮಾಡಿ, ನಿಂಗಳ ನಿರ್ಧಾರ ತಿಳಿಸಿ.." ಎಂದು ಹೇಳಿ ಶಿವಮೊಗ್ಗಕ್ಕೆ ಹೊರಟುಬಿಟ್ಟ..

ಹಾಗೇ ಕೆಲವು ತಿಂಗಳು ಕಳೆದುಹೋಯಿತು.. ಅಚ್ಯುತಾನಂದರಿಗೆ ಹಾಗೂ‌ ಸರೋಜಮ್ಮನಿಗೆ ಮನಶ್ಯಾಂತಿಯೇ ಇಲ್ಲದಂತಾಗಿತ್ತು ಮಗನ ವಿಷಯದಿಂದ.. 
ಆದರೆ ಅವರ ಮನಸ್ಸು ಬದಲಾಯಿಸಿಕೊಳ್ಳುವಂತ ಘಟನೆ ಆಗ ನಡೆದಿತ್ತು..
"ಹೆಗಡ್ರೆ, ಹೆಗಡ್ರೆ, ಶಂಕರ ಹೆಗಡೇರ ಮಗಳು ನೇಣು ಹಾಕ್ಕೊಂಬಿಟ್ಲಂತೆ.." ಎಂದು ಗಾಬರಿಯಿಂದ ಎದುಸಿರುಬಿಡುತ್ತಾ, ಅವರ ಮನೆಯ ಆಳು ನಾರಾಯಣ ಅಚ್ಯುತಾನಂದರಿಗೆ  ಸುದ್ದಿ ಮುಟ್ಟಿಸಿದ.. 
ಅಚ್ಯುತಾನಂದರಿಗೆ ನಿಂತ ಜಾಗವೇ ಕುಸಿದಂತಾಯಿತು.. ಅವರಿಗೆ ತಾವು ಅಂದು ನೋಡಿದ ದೃಶ್ಯ ಮತ್ತೆ ನೆನಪಾಯಿತು.. 
"ಎಂತಕ್ಕಾ..? ನೇಣು ಹಾಕ್ಕಂಬಂತಾದು ಎಂತಾಗಿತ್ತು ಅವಳಿಗೆ..?" ಎಂದು ಕೇಳಿದರು ಅಚ್ಯುತಾನಂದರು ಗಾಬರಿಯನ್ನು ಮುಚ್ಚಿಕೊಳ್ಳುತ್ತಾ..
"ಅಯ್ಯೋ ಆ ಪ್ರೇಮಮ್ಮ ಮನೆ ಆಳು ಹನುಮಂತು ಜೊತೆ ಕಳ್ಳ ಸಂಬಂಧ ಇಟ್ಟಂಡಿದ್ರಂತೆ, ಆ ಹನುಮಂತು ನಮ್ಮ‌ ಪ್ರೇಮಮ್ಮನೋರಿಗೆ ಮೋಸ ಮಾಡಿ ಎಲ್ಲಿಗೋ ಓಡಿಹೋದ ಹಲ್ಕಟ್ಟು ನನ್ನಮಗ. ಅವನೇನೋ ಓಡಿ ಹೋದ, ಆದರೆ ಅಮ್ಮಾವ್ರಿಗೆ ಮೂರು ತಿಂಗಳು.. ಮರ್ಯಾದೆಗೆ ಹೆದರಿ ಹೀಗೆ ಮಾಡ್ಕಂಬಿಟ್ಟರು ಪ್ರೇಮಮ್ಮನೋರು.." ಎಂದು ದುಃಖದಲ್ಲಿ ಹೇಳಿದ. ಅದನ್ನು ಕೇಳಿದ ಅಚ್ಯುತಾನಂದರು, "ಅನೈತಿಕತೆ ಯಾವತ್ತೂ ಅನರ್ಥಕ್ಕೇ ದಾರಿ ಮಾಡಿಕೊಡುತ್ತದೆ.." ಎಂದು ಮೆಲ್ಲನೆ ಮನಸಲ್ಲಿ ಹೇಳಿಕೊಂಡರು ಬೇಸರದಿಂದ.. ಅವರಿಗೆ ತಮ್ಮ ಮಗನ ನೆನಪಾಯಿತು.. "ಇಷ್ಟು ದಿನ ಮಗ ನಮಗೆ ಮೋಸ ಮಾಡಿದ್ದಾನೆಂದುಕೊಂಡಿದ್ದೆ. ಹಾಗೆ ನೋಡಿದರೆ, ಪ್ರೇಮಾಳಿಗಿಂತ ನನ್ನ ಮಗ ಉತ್ತಮ. ಅವನು ತನ್ನ ಪ್ರೀತಿಯ ವಿಷಯವನ್ನು ಮುಚ್ಚಿಡದೇ, ಎಲ್ಲವನ್ನೂ ಹೇಳಿ, ಇನ್ನೂ ಮದುವೆ ಮಾಡಿಕೊಳ್ಳದೇ ನಮ್ಮ ಒಪ್ಪಿಗೆಗಾಗಿ ಕಾದು ಕುಳಿತಿದ್ದಾನೆ.. ಅದು ಸಂಸ್ಕಾರ, ಅದೇ ಧರ್ಮ.. ಈ ಜಾತಿ, ಸಂಪ್ರದಾಯಕ್ಕಿಂತ ಆತ ಹೇಳಿದ ಪ್ರೇಮ ಧರ್ಮವೇ ದೊಡ್ಡದು.. ಹೌದು, ಮತ್ತೊಂದು ಅನರ್ಥವಾಗುವ ಮುಂಚೆ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬೇಕು.." ಎಂದು ಮನಸ್ಸಲ್ಲೇ ಅಂದುಕೊಂಡು, ಒಂದು ಗಟ್ಟಿ ನಿರ್ಧಾಕ್ಕೆ ಬಂದವರಂತೆ ಮರುದಿನವೇ ಶಿವಮೊಗ್ಗಕ್ಕೆ ಹೊರಟರು..
-----+++----------+++-------+++-----
"ಎರಡು ಮನಸ್ಸು ಒಂದಾಗತ್ತೆ ಅಂದ್ರೆ ಎರಡು ಧರ್ಮ ಒಂದಾಗಲೇ ಬೇಕು.." ಎಂಬ ಮಾತನ್ನು ನಾಗರಹಾವು ಸಿನಿಮಾದಲ್ಲಿ ಚಾಮಯ್ಯ ಮೇಷ್ಟ್ರು ಹೇಳಿದ್ದನ್ನು ಕೇಳಿ ಶಭಾಸ್ ಅಂತ‌ ಹೇಳಿ ಅಭಿನಂದಿಸುತ್ತೇವೆ.. ಆದರೆ ನಿಜ ಜೀವನದಲ್ಲಿ ಅದನ್ನು ಪಾಲಿಸುವುದಿಲ್ಲ.. ಇದೀಗ ನಾನು ಪಾಲಿಸಿದ್ದೇನೆ.. ನನಗೆ ಆತ್ಮ ಸಂತೃಪ್ತಿಯಿದೆ.. " ಎಂದು ಮಗನ ಮದುವೆಗೆ ಬಂದವರಲ್ಲಿ ಅಚ್ಯುತಾನಂದರು ಹೇಳುತ್ತಿದ್ದರು..
ಅಲ್ಲಿ ಮಂಟಪದಲ್ಲಿ, ರೀಟಾ ಮತ್ತು ಪ್ರತೀಕ್ ನಗುತ್ತಾ ನಿಂತಿದ್ದರು.. ಅವರ ಸುತ್ತ ಅವರ ಗೆಳೆಯ ಗೆಳತಿಯರು, ನಿಂತುಕೊಂಡು ಛೇಡಿಸುತ್ತಾ, ಅವರಿಗೆ ಶುಭಾಶಯ ತಿಳಿಸುತ್ತಿದ್ದರು..
ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆದಂತಿತ್ತು ಅವರಿಬ್ಬರ ಜೋಡಿ...

ಮುಕ್ತಾಯ

- ಮನು ವೈದ್ಯ.


ಅಮ್ಮ (ಕವಿತೆ) - ಬಸವರಾಜ್ ಪಾಟೀಲ.

ಕೋಟಿ ಕೋಟಿ ಗಳಿಸಿದರೇನು

 ಸಾಧನೆಯ ಶಿಖರವೆರಿದರೇನು

 ಎಷ್ಟು ಸ್ನೆಹಿತರಿದ್ದರೇನು 

ವಿಲಾಸಿ ಜೀವನ ನಿನ್ನದಾಗಿದ್ದರೇನು

 ಜನ್ಮ ಕೊಟ್ಟವಳ ಬಳಿ ನಿನಿರದಿದ್ದರೆ

 ಎಲ್ಲವೂ ನಿರರ್ಥಕ

  ಈಡೀ ಜಗತ್ತೆ ನಿನಂದಕೊಂಡಳು 

ನಿನ್ನ ಇರುವಿಕೆಯಲ್ಲಿ ಜಗದಾನಂದ ಕಂಡಳು 

ನಿನ್ನ ಆರೈಕೆಯಲ್ಲಿ ತನ್ನ ತಾ ಸವೆದು ಕೊಂಡಳು

 ನಿನಗಾಗಿ ಏನೆಲ್ಲವ ತ್ಯಾಗ ಮಾಡಿದಳು

 ಅವಳು ದುಡಿಯಲುನಿಂತಿದ್ದರೆ ಕೋಟಿಗಳು ಅವಳ ಕಾಲ ಕೆಳಗೆ

 ಅವಳು ಸಾಧಿಸಲು ನಿಂತರೆ ಜಗಕ್ಕೆ ಸ್ಪೂರ್ತಿ 

ಅವಳ ಜೊತೆ ನಿನರದಿದ್ದರೆ

 ಏನು ಸಾಧಿಸಿದರೇನು

 ಏನು ಗಳಿಸಿದರೇನು

- ಬಸವರಾಜ್ ಪಾಟೀಲ (ಗದಗ್)*


ಶುಕ್ರವಾರ, ಸೆಪ್ಟೆಂಬರ್ 2, 2022

ಪ್ರಿಯತಮೆ (ಕವಿತೆ) - ವೈಷ್ಣವಿ ರಾಜಕುಮಾರ್.

ಜೀವಕ್ಕೆ ಜೀವ ಕೊಡೋ ಜೀವಿ ನಾನು
ಪ್ರಾಣಕ್ಕೆ ಪ್ರಾಣ ಕೊಡೋ ಪ್ರೇಮಿ ನಾನು
ನೀ ಬಿಟ್ಟು ಹೋದರೆ ನಾ ಹೇಗೆ ಬಾಳಲಿ
ತಿರುಗಿ ಬಾ ನನ್ನ ಬಾಳಲಿ...

ಕನಸಿನಲ್ಲಿಯೂ ಊಹಿಸಲಿಲ್ಲ
ನಿನ್ನನ್ನು ನಾ ಕಂಡೆ
ಮನಸಿನಲ್ಲಿಯೂ ಬಯಸಲಿಲ್ಲ
ನಿನ್ನಿಂದ ಆ ಖುಷಿ ಕಂಡೆ...

ನನ್ನ ಬಾಳಲ್ಲಿ ಬೆಳಕಾಗಿ ಬಂದಿರುವೆ ನೀನು
ಆ ಬೆಳಕಿನ ಸೊಬಗು ನಾ ಕಂಡೆ
ನೀನು ಯಾವಾಗಲೂ ಖುಷಿಯಾಗಿರು
ನಿನ್ನ ಖುಷಿಯಲ್ಲಿ ನಾನು ಖುಷಿ ಕಾಣುವೆ...

ನನ್ನ ಹೃದಯದ ದೀಪ ನೀನು
ಯಾವಾಗಲೂ ಬೆಳಗುತ್ತಾ ಇರು
ನನ್ನ ಮುದ್ದಿನ ಪ್ರಿಯತಮೆ
ನನ್ನನ್ನು ಬಿಟ್ಟು ಹೋಗದಿರು...

- ವೈಷ್ಣವಿ  ರಾಜಕುಮಾರ್
ಪಿಯುಸಿ ವಿದ್ಯಾರ್ಥಿನಿ
ಊರು:-ಕರಕ್ಯಾಳ
ತಾಲೂಕಾ:-ಔರಾದ್(ಬಾ)
ಜಿಲ್ಲಾ:-ಬೀದರ್.


ನಾನು ಪರಿಪೂರ್ಣನೆ ? ( ಲೇಖನ) - ಮಹೇಶ್_ಎಂ_ಗದ್ವಾಲ್.

ಹೌದು ನಾನು ಪರಿಪೂರ್ಣನೆ ಎನ್ನುವ ಪ್ರೆಶ್ನೆ ತಲೆಯೊಳಗೆ ಬಂದಿದೆ ತಡ ಯೋಚಿಸುತ್ತಾ ಕುಳಿತವನಿಗೆ ಅನ್ನಿಸಿದ್ದು ಇಷ್ಟೇ, ಯಾವ ವಿಷಯದಲ್ಲಿ ಪರಿಪೂರ್ಣತೆ ಹೊಂದಬೇಕು, ಬದುಕಿನಲ್ಲಿ ಹೊಳಿಯಬೇಕಾ ? ಅಥವಾ ಹೋಳಿಯುತ್ತಿರುವರ ಬದುಕ ನೋಡಿ ಹರ್ಷ ಪಡಬೇಕಾ ? ಇಲ್ಲ ಸುಂದರವಾದ ಆಸೆಗಳಲ್ಲಿ ಬಂದಿಯಾಗಿ ಮುಂದೆ ಸಾಗ್ಬೇಕಾ ? ಯಾವುದನ್ನ ಜೀವನದಲಿ ಅಳವಡಿಸಿಕೊಳ್ಳಬೇಕು, ಎನ್ನುವ ಆಲೋಚನೆ ಏನೂ ಮಹತ್ತರವಾಗಿತ್ತು ಇವೆಲ್ಲವನ್ನ ಮೇಲಕ್ಕಾಗುತ್ತ ನಡೆದಾಗಲೇ ಅನ್ನಿಸಿದಿಷ್ಟೇ, ಇಲ್ಲಿ ವಾಸ್ಥವತೆಗೆ ಹೋಲಿಸಿದಾಗ ನಾನು ಸ್ವಾರ್ಥಿಯಾಗಿಬಿಡುತ್ತೇನೆ ನನ್ನೊಳಗಿನ ಕೆಲವಿಷಯಗಳಿಂದ ಅದು ಬದುಕಿನೊಳು ಜೀವನ ನಡೆಸಲು ಉಸಿರಾಡುವುದಕ್ಕೆ ಏನ್ ಉಪಯುಕ್ತವೋ ಅದನ್ನೆ ಪಡುಯುವುದರಲ್ಲಿ ನಾನು ಸ್ವಾರ್ಥಿಯಾಗಿದ್ದೇನೆ. 
ಇನ್ನು ಕೆಲವೊಂದಿಷ್ಟು ಜೊತೆಗಿರುವ ಸ್ವಾರ್ಥ ಎಂತಹದ್ದು ಎಂದು ಗಮನಿಸುತ್ತಾ ಮುನ್ನಡೆದಾಗ, ಊರಲ್ಲೇ ಇದ್ದು ಮಾರುದ್ದ ಅಂತರದಲ್ಲೇ ದಿನನಿತ್ಯ ತಿರಿಗಾಡಿದ್ರು ಆತ ಹಿಂತಿರುಗಿ ಕ್ಷಣವಾದರೂ ನೋಡದೆ ಉಳಿದುಬಿಟ್ಟಿರುತ್ತಾನೆ ಆತನಿಗೆ ಆ ಕ್ಷಣ ನಾವು ಉಪಯುಕ್ತರಾಗಿರುವುದಿಲ್ಲ. ಯಾವ ನಮ್ಮಿಂದ ಉಪಯೋಗವಿದೆಯೆಂದು ತಿಳಿಯುತ್ತೋ ಆವಾಗ್ಲೇ ಆತ ದಿನೇದಿನೇ ಹತ್ತಿರವಾಗಲು ಶುರುಮಾಡಿಯೇ ಬಿಡುತ್ತಾನೆ, ಯಾವಾಗ್ ಆತ ನಮ್ಮೊಡನೆ ಬೆರೆಯಲು ಪ್ರಾರಂಬಿಸಿದ್ನೋ ಆವಾಗ್ ಆತನ ಸ್ವಾರ್ಥ ಕೆಲಸಮಾಡಲು ಶುರುಮಾಡಿಯೇಬಿಡುತ್ತೆ.ಸೂಕ್ಷ್ಮವಾಗಿ ಗಮಿಸಿದಾಗ ಇದು ಅರಿವಿಗೆ ಬರುತ್ತೆ ವಿನಃ ಅದು ಅಷ್ಟ್ ಬೇಗ ತಿಳಿಯುವಂತಹದಲ್ಲ. ಈ ಸ್ವಾರ್ಥ ಇದಿಯಲ್ಲ ತಿನ್ನೋ ತಟ್ಟೆಯಲ್ಲಿ ಮಣ್ಣ್ ಎರಚಿ ನಗಾಡುವಂತವರೇ.
 ಹುಷಾರು..... !   

ಇದೇನಪ್ಪ ನಾನ್ ಪರಿಪೂರ್ಣನೆ ಅಂತ ಶೀರ್ಷಿಕೆ ತಗೊಂಡ್ ಏನ್ ಏನೋ ಹೇಳ್ತಿದಾನೆ ಅಂತ ತಲೆಯೊಳಗೆ ಯೋಚನೆ ಬಂದಿರಬವುದು, ಅದು ಬರೋದು ಸಹ ಸಹಜನೆ.
 ಯಾವಾಗ ಮತ್ತೊಬ್ಬನನ್ನ ತುಳೀಬೇಕು,ಆತನ ಮನೆಯ ಹೆಣ್ಣುಮಕ್ಕಳನ್ನ ಕೆಟ್ಟದೃಷ್ಟಿಯಿಂದ ನೋಡ್ಬೇಕು, ಆತನ ಹೆಜ್ಜೆ ಹೆಜ್ಜೆಗೂ ತಪ್ಪಿನೊಳಗೆ ದೂಡಬೇಕು, ಆತನ ಮಣ್ಣಿನ ಮೇಲೆ ಕುಳಿತು ದುಡ್ಡು ಹೆಣ್ಣಿಸಬೇಕು ಎಂದು ಯಾವೊಬ್ಬ ವ್ಯಕ್ತಿಯು ಇಂತ ಹೀನಾಯವಾದ ಆಲೋಚನೆಗಳಲ್ಲಿ ಸಮಾಜದಲ್ಲಿ ನಂಬಿಸಿ ಹೊಳೆಯಲು ಯತ್ನಿಸಿದಾಗ ಆತನೇ #ಅಪರಿಪೂರ್ಣ_ವ್ಯಕ್ತಿ. !

ಪರಿಪೂರ್ಣ ನೆಂದರೆ ಯಾರು ? 

ಪರಿಪೂರ್ಣತೆ ಯನ್ನು ಜೀವನದಲಿ ಪಡೀಬೇಕು ಅನ್ನುವ ವ್ಯಕ್ತಿ ಆಸೆ, ಕಾಮ, ಕ್ರೋದ, ಮದ, ಮತ್ಸರ್ಯ, ಲೋಭ, ಮೋಹ, ಇವುಗಳನೆಲ್ಲವನ್ನ ಬಂದಿಖಾನೆಯಲ್ಲಿ ಬಂಧಿಸಿ ಲೋಕಕ್ಕೆ ಬೆಳಕಾಗಿ ಮಾನವಕುಲಕ್ಕೆ ಮಾದರಿಯಾಗಿ, ಸಾಧುಸಂತರಿಗೆ ನಮಿಸಿ, ಒಂದು ಹೆಣ್ಣಿಗೆ ದೈವಿತೆಯ ದೃಷ್ಠಿಯಿಂದ ನೋಡಿ, ಸನ್ಮಾರ್ಗದಲ್ಲಿ ಸಾಗಿ, ಹೆಜ್ಜೆ ಹೆಜ್ಜೆಗೂ ಪ್ರತಿ ಕಣಕ್ಕೂ ಒಳಿತನ್ನ ಬಯಸುವ ಜ್ಞಾನಿಯೇ ಪರಿಪೂರ್ಣ ನು ಈ ಕಲಿಯುಗದಲ್ಲಿ ಎನ್ನುವುದು ನನ್ನ ಮಾತು ಮತ್ತು ನನ್ನೊಳಗಿನ ಅಂತರಾಳದ ಅನಿಸಿಕೆ. 

ತರ್ಕ ಮತ್ತು ಪ್ರೆಶ್ನೆ ಇವೆರೆಡು ಬಂದೆ ಬರುತ್ತೆ.
ಒಂದೊಳ್ಳೆ ವ್ಯಕ್ತಿತ್ವವನ್ನ ರೂಪಿಸಿಕೊಳ್ಳಲು ಮುನ್ನಡೆದಾಗ, ಸಾವಿರಾರು ಪ್ರೆಶ್ನೆಗಳಿಗೆ ಉತ್ತರ ನೀಡುತ್ತಲೇ ನಡೆದಾಗ ಮೂರ್ಖರ ಮಾತು ಮೌನವಾಗಿ ಬದಲಾಗುತ್ತೆ ವಿನಃ ಅವರೊಂದಿಗೆ ಅವರಂತೆಯೇ ನಟಿಸುವುದರಿಂದಲ್ಲ. 

ಇಲ್ಲಿ ಬೇಕಿರೋದು ಇವತ್ತಿನ ಸಮಾಜೆಕ್ಕೆ ಕೇವಲ ಸದ್ಯದ ಖುಷಿ ಮತ್ತು ಸದ್ಯದ ಸುಖಗಳು ಹೊರೆತು, ಮುಂದಿನ ದಿನಗಳಲ್ಲಿ ನಾವು ಬದುಕಲು ಏನನ್ನ ನಿರ್ಧರಿಸಿಕೊಳ್ಳಬೇಕು ಅನ್ನೋ ಆಲೋಚನೆ ಕೆಲವೊಂದಿಷ್ಟು ಮನಸುಗಳಿಗೆ ಬೇಡವಾದ ವಿಚಾರವಾಗಿದೆ. 

ಬದುಕೇನು ಅದೇಗೋ ಮುನ್ನಡೆಯುತ್ತೆ ಆಗಂತ ತಿಪ್ಪೆಯಲ್ಲಿ ಹೇಸಿಗೆತಿಂದು ಬದುಕುವ ಜೀವಗಳಂತೆ ಬದುಕಿದರೆ ಅವಕ್ಕೂ ನಮಗೂ ಏನೂ ಸಂಬಂಧ, ಅಲ್ವೇ ?

ಮನಸು ಬದಲಾದರೆ ಪರಿಸ್ಥಿತಿ ಬದಲಾದೀತು,ಪರಸ್ಥಿತಿ ಬದಲಾದರೆ ಬದುಕು ಬದಲಾದೀತು, ಈ ಬದುಕು ಬದಲಾದರೆ ಭವ್ಯವಾದ ದೇಗುಲದಂತ ಈ ನಾಡು ಬದಲಾದೀತು, ನಾಡಿನೊಳಗಿರುವ ಅದೆಷ್ಟೋ ಮನಗಳು ನಿನ್ನೊಳಗಿನ ವ್ಯಕ್ತಿತ್ವ ರೂಪಿಸಿಕೊಂಡಾಗಲೇ ನೀನು ಪರಿಪೂರ್ಣನೆಂದು ಈ ಜಗಕ್ಕೆ ಸಾರುವ ದಿನವದು ಎಂದು ಹೇಳಬವುದಲ್ಲವೇ. ?
- ಮಹೇಶ್_ಎಂ_ಗದ್ವಾಲ್.


ಗಣೇಶ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಏಕದಂತ ಮೊದಲ ಪೂಜಿಪೆ
ಕರವ ಮುಗಿದು ನಿನ್ನಯ ಜಪಿಪೆ
ನೀಡು ವರವ ತರುವ ಬಲವ
ವಿಘ್ನ ಅಳಿಸಿ ಕರುಣೆ ತೋರಿಪೆ

ಬೆನಕ ನಿನಗೆ ಮೊದಕರ್ಪಣೆ
ವಿದ್ಯಪ್ರದಾಯಕ ಭಕ್ತಿ ಸಮರ್ಪಣೆ
ಅಗ್ರಗಣ್ಯನೆ ಮನದಿ ನೆಲೆಸುತ
ಹರಿಸು ಎಮ್ಮನು ಗೌರಿಪುತ್ರನೆ

ಚತುರತೆಯದಿ ಪಡೆದೆ ಆತ್ಮಲಿಂಗವ
ಮಾತೆಯ ಭಾಷೆಗೆ ನೀ ಗೆದ್ದೆ ಜಗವ
ನಕ್ಕ ಚಂದ್ರನಿಗೆ ನೀ ಕೊಟ್ಟ ಶಾಪದಿ
ಪ್ರಾಯಶ್ವಿದಲಿ ಕಳೆಯುತಿಹನು ದಿನವ

ಪೂಜಿಸಿಕೊಂಡು ವಿಷ್ಣುವಿಗೆ ಶಂಖವನಿತ್ತೆ
ಕುಬೇರನ ಅಷ್ಟೈಶ್ವರ್ಯದ ಮದವನಳಿಸಿದೆ 
ವ್ಯಾಸರ ಜೊತೆಗೂಡಿ ಮಹಾಕಾವ್ಯ ರಚಿಸುತ 
ಅನಂತ ನಾಮದಿ ವಿಖ್ಯಾತನಾದೆ 

ಬರುವೆ ನೀನು ಗಣೇಶ ಚತುರ್ಥಿಯಂದು
ಎಲ್ಲರ ಮನೆಮನದ ವಿಘ್ನ ತೊಳೆಯಲೆಂದು
ಲೋಕಮಾನ್ಯ ಟಿಳಕರಿಂದ ಒಗ್ಗುಡಿದೆವಂದು
ಒಂದೇ ಮತದಿ ನಿನ್ನ ಪೂಜಿಪೆವು ಇಂದು.

-  ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.

ಪ್ರೇಮ ಧರ್ಮ (ಸಣ್ಣ ಕತೆ) - ಮನು ವೈದ್ಯ

೧ 
ಅವನಿಗೆ ಎಚ್ಚರವಾದಾಗ  ಬೆಳಗಿನ 8 ಗಂಟೆ. ಹಾಸಿಗೆಯಿಂದ ಎದ್ದು ಒಮ್ಮೆ ಮೈ ಮುರಿದು, ತಾನಿದ್ದ ಎಂಟನೆ ಮಹಡಿಯಲ್ಲಿನ ರೂಮಿನ ಕಿಟಕಿಯ ಕರ್ಟನ್ ಸರಿಸಿ ಹೊರಗಡೆ ಇಣುಕಿದ. ಅದು ಚಳಿಗಾಲವಾದ್ದರಿಂದ, ಸುತ್ತಲೂ ತುಂಬಿದ ಇಬ್ಬನಿಯ ಪರದೆಯನ್ನು ಸರಿಸುತ್ತಾ ಸೂರ್ಯ ತನ್ನ ಪ್ರಖರತೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದ. ಹಾಗೇ ಜೋರಾಗಿ ಆಕಳಿಸುತ್ತಾ, ತಾನಿದ್ದ ಹಾಸಿಗೆಯಡೆ ತಿರುಗಿ ನೋಡಿದ.. ಅವಳಿನ್ನೂ ಮಲಗೇ ಇದ್ದಾಳೆ. ಹಾಗೇ ಅವಳ ಹತ್ತಿರ ಕುಳಿತು, ಅವಳ ತುಂಬು ಕೂದಲನ್ನು  ನೇವರಿಸುತ್ತಾ, ಅವಳ ಹಣೆಯ ಮೇಲೊಮ್ಮೆ ಚುಂಬಿಸಿದ. ಅವಳು ಮಲಗಿದಲ್ಲೇ ಸ್ವಲ್ಪ ಕೊಸರಾಡಿ, ಮುಚ್ಚಿದ ಕಣ್ಣನ್ನು ತೆರೆಯದೇ, "ಹೆಗಡೆ ಡಾರ್ಲಿಂಗ್.." ಎಂದು ಸಣ್ಣಗೆ ಕನವರಿಸಿದಳು. ಅವನು ಅದೊಂದು ರೀತಿಯಲ್ಲಿ ಸಂತೃಪ್ತಿಯ ಮುಗುಳು ನಗುವಿನೊಂದಿಗೆ, "ಇವಳಿಗಿನ್ನೂ ಸಕ್ಕರೆ ನಿದ್ದೆ, ಅಲ್ಲ..ಅಲ್ಲ... ರಾತ್ರಿ ಸುಖದಿಂದ ದಣಿದ ದೇಹಕ್ಕೆ ಬಂದ ಸುಖದ ನಿದ್ದೆ.." ಎಂದು ಅಂದುಕೊಳ್ಳುತ್ತಾ, ಅಲ್ಲೇ ಟೇಬಲ್ ಮೇಲಿದ್ದ ಸಿಗರೇಟ್ ಪ್ಯಾಕ್ ಗೆ ಕೈ ಚಾಚಿದ.. ಸಿಗರೇಟ್ ಒಂದನ್ನು ಹೊತ್ತಿಸಿಕೊಂಡು, ಕಿಟಕಿಯ ಮುಂದೆ ನಿಂತು ನೆಮ್ಮದಿಯ ಹೊಗೆ ಬಿಡುತ್ತಾ ನಿಂತುಕೊಂಡ 32 ರ ಯುವಕ ಪ್ರತೀಕ್ ಹೆಗಡೆ.. 
ಏನೂ ಅವಸರವಿಲ್ಲದಂತೆ, ಸಿಗರೇಟ್ ಸೇದುತ್ತಾ ನಿಂತಿರುವ ಅವನ ಭಂಗಿಯೇ ಹೇಳುತ್ತಿತ್ತು, ಹಿಂದೆಂದೂ ಕಾಣದ ಸಂತೋಷ, ಸಂತೃಪ್ತಿ ಯನ್ನು ಅವನು ಇಂದು ಅನುಭವಿಸುತ್ತಿದ್ದಾನೆ ಎಂದು.. ಅದಕ್ಕೆ ಸಾಕ್ಷಿಯೆಂಬಂತೆ, ಅವನ ಮುಖದಲ್ಲಿ‌ ಆ ಸಂತೃಪ್ತಿಯ ಅಲೆ, ಸಂತಸದ ಮುಗುಳು ನಗೆ ಎರಡೂ ಮೂಡಿ, ಹೊಸದೊಂದು ಕಳೆಯನ್ನು  ತಂದುಕೊಟ್ಟಿತ್ತು.. ಹಾಗೇ ಸಿಗರೇಟ್ ಹೊಗೆಯೊಂದಿಗೆ ಅವನ ಯೋಚನೆ ಸಾಗುತ್ತಿತ್ತು.. "ನನ್ನ ಇಂದಿನ ಈ ಸಂತಸಕ್ಕೆ, ಹಿಂದೆಂದೂ ಕಾಣದ ಸಂತೃಪ್ತಿಗೆ ಈ ರೀಟಾ ಫರ್ನಾಂಡಿಸ್ ಕಾರಣ.." ಎಂದು ಅಂದುಕೊಳ್ಳುತ್ತಾ ಹಾಸಿಗೆಯತ್ತ ನೋಡಿದ.. ಅವಳಿನ್ನೂ ನಿದ್ದೆಯಲ್ಲೇ ಇದ್ದಳು.. "ನೀನೇನಾದರೂ ನನ್ನ ಜೀವನದಲ್ಲಿ ಬರದೇ ಹೋಗಿದ್ದರೆ ನಾನು ಏನಾಗುತ್ತಿದ್ದೇನೋ..? ಥ್ಯಾಂಕ್ಸ್ ರೀಟಾ ಡಾರ್ಲಿಂಗ್.." ಎಂದು ಅವಳತ್ತ ನೋಡುತ್ತಾ, ಮನಸಲ್ಲೇ ಅಂದುಕೊಂಡ.. ಹಾಗೇ ಅವನ ಯೋಚನೆ ಗತಕ್ಕೆ ಸಾಗಿತು.. 
ಹತ್ತು ವರ್ಷಗಳ ಹಿಂದೆ ಆಗಷ್ಟೆ   MSW ಡಿಗ್ರಿ ಮುಗಿಸಿದ ಪ್ರತೀಕ್ ಗೆ ಜೀವನದ ಕುರಿತು ದೊಡ್ಡ, ದೊಡ್ಡ ಕನಸುಗಳಿದ್ದವು.. ಏನಾದರೂ ಸಾಧಿಸಬೇಕೆಂಬ ಛಲ. ಎಲ್ಲರಂತೆ ಹಣ ಗಳಿಸಿ, ಮನೆ ಕಟ್ಟುವಂತ ಸಾಧಾರಣ ಯೋಚನೆ ಅವನದಲ್ಲ.. ನೋಡಲು ಬಹಳ‌ ಸರಳವಾಗಿ, ಅತೀ ಸಾಮಾನ್ಯನಂತೆ ಇರುವ ಪ್ರತೀಕ್ ನ ವ್ಯಕ್ತಿತ್ವ, ವಿಚಾರ ಧಾರೆಗಳು ಇತರರಿಗಿಂತ ಭಿನ್ನವಾಗಿತ್ತು. ಸಮಾಜಕ್ಕೆ ತನ್ನಿಂದಾದ ಕೊಡುಗೆಯನ್ನು ಕೊಡಬೇಕು. ಆ ಮೂಲಕ ತನ್ನನ್ನು ತಾನು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂಬ ಆಲೋಚನೆ ಅವನದು. ಇದರ ಜೊತೆ ಸಾಹಿತ್ಯದ ಗೀಳು ಬೇರೆ ಇತ್ತು.. ತನ್ನ ಬರವಣಿಗೆಯಿಂದ ತಾನಂದುಕೊಂಡ ಕೆಲಸ ಸಾಧಿಸಬೇಕು ಎಂಬ ಕನಸನ್ನು ಹೊತ್ತು ತನ್ನ ವಿದ್ಯಾಭ್ಯಾಸ ಮುಗಿಸಿ ಹೊರ ಪ್ರಪಂಚಕ್ಕೆ ಕಾಲಿಟ್ಟ ಪ್ರತೀಕ್ ಗೆ ತಾನಂದುಕೊಂಡ ಕೆಲಸ ಅಷ್ಟು ಸುಲಭವಲ್ಲ ಎಂಬುದು ವರ್ಷವಾಗುವಷ್ಟರಲ್ಲೇ ತಿಳಿದು ಹೋಯಿತು.. ಸಾಹಿತ್ಯವೊಂದೇ ಹೊಟ್ಟೆ ತುಂಬಿಸಲಾರದು, ಉದ್ಯೋಗದ ಜೊತೆ, ಜೊತೆಗೆ ಅದನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಅನಿವಾರ್ಯ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಪ್ರತೀಕ್ ಗೆ ಉದ್ಯೋಗವೇನೋ ಸಿಕ್ಕಿತ್ತು.. ಉದ್ಯೋಗದ ಒತ್ತಡದಲ್ಲಿ ಮೂರ್ನಾಲ್ಕು ವರ್ಷಗಳೇ ಕಳೆದಿದ್ದವು..ಆದರೆ ಅವನಂದುಕೊಂಡ ಕನಸು ಕನಸಾಗೇ ಉಳಿದಿತ್ತು.. ಕೆಲಸ ಜಾಸ್ತಿ, ಸಂಬಳ ಕಡಿಮೆ ಎಂಬಂತ ಉದ್ಯೋಗ..‌ಮೊದಲಿಂದಲೂ ಕಷ್ಟದಲ್ಲೇ ಬೆಳೆದ ಪ್ರತೀಕ್ ಗೆ ಕಷ್ಟವನ್ನು ಮೆಟ್ಟಿ ನಿಲ್ಲುವ ಮನಸ್ಥಿತಿ ಮೊದಲಿಂದಲೂ ಇತ್ತು.. ಯಾವುದಕ್ಕೂ ಹೆದರದೇ ಗರಿ ಬಿಚ್ಚಿ ಹಾರುತ್ತಿದ್ದ ತನ್ನ ಕನಸುಗಳಿಗೆ ಮತ್ತೆ ರೆಕ್ಕೆ ಪುಕ್ಕಗಳನ್ನು ಜೋಡಿಸಿಕೊಳ್ಳುತ್ತಾ, ಉದ್ಯೋಗವನ್ನು ಬದಲಿಸುತ್ತಾ ಸಾಗಿದ.. ಒಂದು ಹಂತದಲ್ಲಿ ತನ್ನ ಬರವಣಿಗೆಯ ಮೂಲಕ ಸ್ವಲ್ಪ ಮಟ್ಟಿಗೆ ಹೆಸರನ್ನು ಮಾಡಿದ.. ಹರಿಯುವ ನದಿಯಂತೆ ಹಾಗೇ ಮುನ್ನಡೆಯತೊಡಗಿದ್ದ.. ಸಮಾಜಮುಖಿ ಕೆಲಸಗಳಲ್ಲಿ ಭಾಗವಹಿಸುತ್ತಾ, ಬರವಣಿಗೆಯಲ್ಲಿಯೂ ಉನ್ನತಿ ಸಾಧಿಸುತ್ತಾ, ಒಂದೆರಡು ಕೃತಿಗಳನ್ನೂ ಬಿಡುಗಡೆ ಮಾಡಿದ ಪ್ರತೀಕ್..‌
ಆದರೆ ಜೀವನ ಯಾವಾಗಲೂ ಒಂದೇ ರೀತಿ ಇರುವುದಿಲ್ಲ.. ಕಾಲ ಬದಲಾಗುತ್ತಲೇ ಇರುವುದು.. ಇಷ್ಟೆಲ್ಲಾ ಮಾಡಿದ ಪ್ರತೀಕ್ ನ ಆರ್ಥಿಕ‌ ಸ್ಥಿತಿ ಪಾತಾಳಕ್ಕೇ ಇತ್ತು.. ಚಿಕ್ಕ ಮಟ್ಟದ ಉದ್ಯೋಗದಿಂದ ಆತನಿಗೆ ಬರುವ ಸಂಬಳ ಮಾತ್ರ ತುಂಬಾ ಕಡಿಮೆ.. ತನ್ನ ಕನಸಿನ ಸಾಕಾರಕ್ಕಾಗಿ ಉದ್ಯೋಗ ಬದಲಿಸುತ್ತಾ ಸಾಗಿದ ಅವನಿಗೆ ತನ್ನ ಉದ್ಯೋಗದ ಕುರಿತು ಚಿಂತೆ ಶುರುವಾಗಿದ್ದು, ಮನೆಯಲ್ಲಿ  ಆತನ ಮದುವೆ ಮಾತುಕತೆ ಪ್ರಾರಂಭಗೊಂಡಾಗಲೇ.. ಆಗಲೇ ಉದ್ಯೋಗ ಮಾಡುತ್ತಾ 7-8 ವರ್ಷಗಳೇ ಕಳೆದು ಹೋಗಿತ್ತು.. ಕೃಷಿ ಕುಟುಂಬದಿಂದ ಬಂದ ಪ್ರತೀಕ್ ಗೆ ಮನೆಯಲ್ಲಿ ತಕ್ಕ ಮಟ್ಟಿಗೆ ಕೃಷಿ ಭೂಮಿಯೇನೋ ಇತ್ತು..ಆದರೆ ಬ್ರಾಹ್ಮಣ ಕುಟುಂಬದವನಾಗಿದ್ದರಿಂದ, ಅದೆಷ್ಟೇ ಕೃಷಿ ಭೂಮಿಯಿದ್ದರೂ, ಹೆಣ್ಣು ಸಿಗಬೇಕೆಂದರೆ, ಬೆಂಗಳೂರಿನಲ್ಲಿ ದೊಡ್ಡ ಉದ್ಯೋಗವಿದ್ದರೆ ಮಾತ್ರ ಸಾಧ್ಯ ಎನ್ನುವ ಪರಿಸ್ಥಿತಿ ಇತ್ತು.. ಆದರೆ ತನ್ನ ಕನಸಿನ ಸಾಕಾರಕ್ಕಾಗಿ ಬೆಂಗಳೂರನ್ನು ತೊರೆದು ತನ್ನ ಊರಾದ ಶಿವಮೊಗ್ಗಕ್ಕೆ ಬಂದು, ಒಂದು ಸಂಸ್ಥೆಯಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಪ್ರತೀಕ್ ಗೆ ಹೆಣ್ಣು ಸಿಗುವುದೇ ಕಷ್ಟವಾಗತೊಡಗಿತ್ತು.. 
ನಿಜವಾದ ಸಮಸ್ಯೆ ಪ್ರಾರಂಭವಾಗಿದ್ದೆ ಇಲ್ಲಿ.. 

ಪ್ರತೀಕ್ ಉದ್ಯೋಗದಲ್ಲಿರುವನೆಂದು ಹಲವಾರು ಹೆಣ್ಣಿನ ಜಾತಕಗಳೇನೋ ಬಂದವು..ಆದರೆ ಅವನು ಸ್ವಲ್ಪ ಕಪ್ಪು ಎಂದೋ, ಸಂಬಳ ಕಡಿಮೆ ಎಂಬ ಕಾರಣಕ್ಕೆ, ಮದುವೆಯಾಗಲು ಹಲವು ಹೆಣ್ಣಿನ ಮನೆಯವರು ತಿರಸ್ಕರಿಸಿದರು. ಇನ್ನೂ ಹಲವು ಜಾತಕ ಸರಿ ಇಲ್ಲವೆಂದು ತಿರಸ್ಕರಿಸಿದರು.. ಇನ್ನೂ ಕೆಲವು ಮದುವೆ ಆಗಿಬಿಡುವುದೋ ಎಂಬಲ್ಲಿಗೆ ಹೋಗಿ ತಿರಸ್ಕೃತವಾದವು.. ಹೀಗೆಯೇ ಎರಡು ಮೂರು ವರ್ಷಗಳು ಕಳೆದವೇ ಹೊರತು, ಪ್ರತೀಕ್ ಗೆ ಹೆಣ್ಣು ಮಾತ್ರ ಸಿಗಲಿಲ್ಲ.. ತನ್ನ ಜೀವನ ಸಂಗಾತಿಯಾಗುವವಳ ಕುರಿತು ಹಲವು ಕನಸುಗಳನ್ನು ಕಂಡಿದ್ದ ಪ್ರತೀಕ್ ಗೆ ಇದರಿಂದ ಮನಸ್ಸು ಸಾಕಷ್ಟು ನೊಂದಿತು.. ಹೆಣ್ಣು ಕೊಡುವ ಯಾರೂ ಈತನ ಗುಣದ ಬಗ್ಗೆಯಾಗಲೀ, ಇವನಲ್ಲಿರುವ ಕೌಶಲ್ಯದ ಬಗ್ಗೆಯಾಗಲೀ ವಿಚಾರಿಸದೇ, ಮದುವೆಯನ್ನು ಒಂದು ವ್ಯವಹಾರದಂತೆ ಮಾತುಕತೆ ಮಾಡುತ್ತಿದ್ದದ್ದು, ಉದಾತ್ತ ಧ್ಯೇಯಗಳನ್ನಿಟ್ಟುಕೊಂಡಿದ್ದ ಪ್ರತೀಕ್  ಗೆ ಬೇಸರ ತಂದಿತು.. "ಬ್ರಾಹ್ಮಣ ಜಾತಿಯ ಹುಡುಗಿಯರಿಗೆ ಹುಡುಗನ ಗುಣಕ್ಕಿಂತ, ಆತನ ಹಣ, ಅಂತಸ್ತು ಮುಖ್ಯ.." ಎಂದು ಆತನಿಗೆ ಬಲವಾಗಿ ಅನಿಸತೊಡಗಿತ್ತು.. ತನ್ನನ್ನು ಮದುವೆಯಾಗುವ ಹುಡುಗಿ ತನ್ನ ಗುಣವನ್ನು ನೋಡಿ ಇಷ್ಟಪಡಬೇಕು, ತನ್ನ ಸಾಧನೆಗೆ, ತನ್ನ ಕನಸಿಗೆ ನೀರೆರೆದು ಪ್ರೋತ್ಸಾಹಿಸುವವಳಾಗಿರಬೇಕು ಎಂಬ ಆಸೆ ಇಟ್ಟುಕೊಂಡಿದ್ದ ಅವನಿಗೆ ತನ್ನ ಆಸೆಗೆ ತಣ್ಣೀರೆರೆಚಿದಂತಾಗಿ ಬಹಳ ನೊಂದುಕೊಂಡಿದ್ದ.. 
"ನಮ್ಮ ಜಾತಿ ಹುಡುಗೀರಿಗೆ ಸಿಕ್ಕಾಪಟ್ಟೆ ಸೊಕ್ಕು, ಅವ್ಕೆ ಗುಣ ಮುಖ್ಯ ಅಲ್ಲ, ಹಣ.. ಹಣ ಒಂದಿದ್ದರೆ, ಅವು ಮುಸ್ಲೀಂ ಹುಡುಗನ ಜೊತೆ ಬೇಕಾದ್ರೂ ಓಡಿ ಹೋಗ್ತ.. ನನ್ನ ಗುಣ ಇಷ್ಟಪಟ್ಟು ಬಪ್ಪ ಬೇರೆ ಜಾತಿ ಹುಡುಗಿ ಆದ್ರೂ ಅಡ್ಡಿಲ್ಲೆ, ನಾ ಅವ್ರನ್ನೇ ಮದ್ವೆ ಆಗ್ತೆ.." ಎಂದು ತನ್ನ ಅಪ್ಪ, ಅಮ್ಮನ ಮುಂದೆ ನೊಂದು ನುಡಿದಿದ್ದ ಪ್ರತೀಕ್.. 
"ಮಗಾ.. ಎಂತಕ್ಕೆ ಹೀಂಗೆ ಮಾತಾಡ್ತೆ, ಬೇರೆ ಜಾತಿ ಹುಡುಗೀರು, ನಮ್ಮ ಮನೆ ಸಂಪ್ರದಾಯಕ್ಕೆ ಹೊಂದಕಂಡು ಹೋಗ್ತ್ವಿಲ್ಲೆ.. ಅದರಲ್ಲೂ ಅವು ಮಾಂಸ, ಮಡ್ಡಿ ಎಲ್ಲಾ ತಿಂತ, ಬೇಡ.. ನಿಂಗೆ ನಮ್ಮ ಜಾತೀಲೆ ಚೊಲೋ ಹುಡುಗಿ ಸಿಕ್ತು.. ಎಲ್ಲದಕ್ಕೂ ಟೈಮ್ ಬರವು.." ಹೇಳಿ ಅವನ ಅಮ್ಮ ಸಮಾಧಾನ ಹೇಳಿದ್ದಳು.. ಪ್ರತೀಕ್ ಇದಕ್ಕೆ ಏನೂ ಮಾತಾಡದೇ ಹಾಗೇ ಹೊರಟುಹೋಗಿದ್ದ.. ಆದರೆ ಅವನ ಮನದ ವೇದನೆ ಮಾತ್ರ ಕಡಿಮೆಯಾಗಿರಲಿಲ್ಲ..
"ಈ ಬ್ರಾಹ್ಮಣ ಹುಡುಗಿಯರು ಕಾಲೇಜು, ಜಾಬ್ ಹೇಳಿ ಅವರಿವರ ಜೊತೆ ಚಕ್ಕಂದ ಆಡಿ, ಕೊನೆಗೆ ತುಂಬಾ ಸಾಚಾ ಅನ್ನೋ ತರ ಮನೆಯಲ್ಲಿ ತೋರಿಸಿದ, ಇಂಜಿನಿಯರ್, ಡಾಕ್ಟರ್ ಹುಡುಗನನ್ನು ಮದುವೆ ಆಗ್ತಾರೆ..‌ಅಲ್ಲಿ ಬಕ್ರಾ ಆಗೋದು ಮಾತ್ರ ನಮ್ಮ ಜಾತಿ ಹುಡುಗನೇ.." ಎಂದು ಅದೆಷ್ಟೋ ಸಲ ತನ್ನ ಗೆಳೆಯರೊಂದಿಗೆ ತನ್ನ ಜಾತಿಯ ಗುಣಗಾನ ಮಾಡಿದ್ದ ಪ್ರತೀಕ್..
ಇದೀಗ ಪ್ರತೀಕ್ ನ ಮನಸ್ಸು ನಿರಾಸೆಯ ಕರಿಮೋಡದಿಂದಲೇ ತುಂಬಿಕೊಂಡಿತ್ತು.. ವಯಸ್ಸು 30 ದಾಟಿದರೂ ಮದುವೆಯಿಲ್ಲ.. ಉದ್ಯೋಗದಲ್ಲೂ ಉನ್ನತಿಯಿಲ್ಲ.. ಕಷ್ಟಗಳು, ಸಮಸ್ಯೆಗಳ ಸುರಿಮಳೆಯೇ ಸುರಿಯತೊಡಗಿತ್ತು.. ಇದರಿಂದ ನಿಧಾನವಾಗಿ ಕುಡಿತದತ್ತ ವಾಲಿದ.. ಸಿಗರೇಟ್ ಅಭ್ಯಾಸ ಅಂಟಿಕೊಂಡಿತು.. ಬ್ರಾಹ್ಮಣ ಹುಡುಗಿಯರೆಂದರೆ ಸಾಕು ಉರಿದು ಬೀಳತೊಡಗಿದ.. ಇದೇ ಸಂದರ್ಭದಲ್ಲಿ ಅವನು ಮತ್ತೆ ಉದ್ಯೋಗ ಬದಲಾಯಿಸಿದ್ದ.. ಇದೀಗ ಸಿಕ್ಕ ಉದ್ಯೋಗದಲ್ಲಿ, ಸಂಬಳ ತಕ್ಕಮಟ್ಟಿಗೆ ಒಳ್ಳೆಯದಿತ್ತು.. ಇದೀಗಲಾದರೂ ಮದುವೆಯಾಗಬಹುದೆಂಬ ಆಸೆ ಮತ್ತೆ ಚಿಗುರೊಡೆಯುತ್ತಿರುವಾಗಲೇ, ಮತ್ತೆ, ಅದೇ ಹಳೆಯ ರಾಗ, ಮತ್ತದೇ ಹುಡುಗಿಯರ ಸಮಸ್ಯೆ.. ಮತ್ತೆ ಹಲವು ಪ್ರೊಪೋಸಲ್ ಬಂದವು ಹೋದವು..ಆದರೆ ಮದುವೆ ಮಾತ್ರ  ಕೈಗೆಟುಕದ ದ್ರಾಕ್ಷಿಯಾಗಿತ್ತು..
ಅವನ ತಾಳ್ಮೆಯ ಕಟ್ಟೆ ಒಡೆದಿತ್ತು.. ಬೇರೆ ಜಾತಿಯಾದರೂ ಸರಿ, ತನ್ನನ್ನು ಇಷ್ಟಪಟ್ಟು ಬರುವ ಹುಡುಗಿಯನ್ನು ಮದುವೆ ಆಗಿಬಿಡಬೇಕು ಎಂದು ನಿರ್ಧಾರ ಮಾಡಿದ್ದ.. ಆಗಲೇ ಅವನಿಗೆ ತಾನು ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಸಂಸ್ಥೆಯಲ್ಲಿ ರೀಟಾಳ ಪರಿಚಯವಾಗಿದ್ದು..‌ರೀಟಾ, ಪ್ರತೀಕ್ ನ ಬರವಣಿಗೆಗೆ ಅಭಿಮಾನಿಯಾಗಿದ್ದಳು, ಅವನು ಬರೆದ ಪ್ರತಿಯೊಂದು, ಲೇಖನ, ಕಥೆ, ಕವನಗಳನ್ನು ತಪ್ಪದೇ ಓದಿ ಪ್ರೋತ್ಸಾಹಿಸುತ್ತಿದ್ದಳು..ನೋಡಲು ಎರಕಹೊಯ್ದ ಗೊಂಬೆಯಂತಿದ್ದಳು.. ಸೌಂದರ್ಯಕ್ಕೆ ತಕ್ಕ ಗುಣ.. ಪ್ರಾಮಾಣಿಕತೆ ಹಾಗೂ ನೇರ ನುಡಿಯ ಪ್ರತೀಕ್ ನ ವ್ಯಕ್ತಿತ್ವ ಹಾಗೂ ಅವನ ಬರವಣಿಗೆ ಇವೆಲ್ಲವೂ ಅವಳಿಗೆ ತುಂಬಾ ಇಷ್ಟವಾಗಿತ್ತು.. ಪ್ರತೀಕ್ ಕೂಡ ಅವಳಿಗೆ ಮನಸೋತಿದ್ದ.. ಪ್ರೇಮಕ್ಕೆ ಯಾವ ಜಾತಿ..? ಅದಕ್ಕೆ ಯಾವ ಪರಿಧಿ..? ಒಟ್ಟಿನಲ್ಲಿ ಇಬ್ಬರ ಮನಸ್ಸು ಒಂದಾಗಿತ್ತು.. ಹೃದಯಗಳು ಬೆರೆತಿತ್ತು.. ಮದುವೆಯೆಂಬ ಸಾಮಾಜಿಕ ಬಂಧನವೊಂದು ಬಾಕಿಯಿತ್ತು.. 
ಆ ದಿನ ಅದೇನೋ ಕೆಲಸದ ಮೇಲೆ ಹೊರಗಡೆ ಹೋಗಿದ್ದ ಇಬ್ಬರೂ ಶಿವಮೊಗ್ಗಕ್ಕೆ ಹಿಂದಿರುಗುವಾಗ ತಡರಾತ್ರಿ ಆಗಿತ್ತು.. ಇನ್ನೇನು ಮಾಡುವುದು ಎಂದು ಶಿವಮೊಗ್ಗದಲ್ಲೇ ಒಂದು ಲಾಡ್ಜ ಬುಕ್ ಮಾಡಿದರು.. ಆ ರಾತ್ರಿ ಅವರಿಬ್ಬರು ಮತ್ತಷ್ಟು ಹತ್ತಿರವಾಗಿದ್ದರು.. ಇಬ್ಬರೂ ಪ್ರೇಮದಲಿ ಒಂದಾಗಿದ್ದರು..

ಅದರ ಪರಿಣಾಮವೇ ಇದೀಗ ಪ್ರತೀಕ್ ಮುಖದಲ್ಲಿನ ಸಂತೃಪ್ತಿ, ಸಂತೋಷಕ್ಕೆ ಕಾರಣ..‌ ಅದು ಕಾಮ ವಾಂಛೆಯ ಸಂತೃಪ್ತಿಯಲ್ಲ.. ಅವಳನ್ನು ಅನುಭವಿಸಿದ ಸಂತೋಷವೂ ಅಲ್ಲ.. ಅದೆಲ್ಲವನ್ನೂ ಮೀರಿದ್ದು.. ಪ್ರೇಮದಲಿ ಒಂದಾದ ಇಬ್ಬರು ಪ್ರೇಮಿಗಳ ಶೃಂಗಾರ ಕಾವ್ಯವೇ ಇದು.. ಪ್ರತೀಕ್ ಯೋಚನೆಯಲ್ಲಿ ಮುಳುಗಿದ್ದ.. ಅವನು ಹಿಡಿದಿದ್ದ ಸಿಗರೇಟ್ ಚಿಕ್ಕದಾಗುತ್ತಾ ಬಂದು ಅವನ ತೋರುಬೆರಳನ್ನು ಸುಟ್ಟಾಗ ಇಹಲೋಕಕ್ಕೆ ಬಂದ.. ಅಷ್ಟರಲ್ಲಿ ರೀಟಾ ನಿದ್ದೆಯಿಂದೆದ್ದು ಬಂದು ಅವನನ್ನು ಹಿಂದಿನಿಂದ ತಬ್ಬಿಕೊಂಡು, "ಹೆಗಡೆ ಡಾರ್ಲಿಂಗ್ ಏನು ಯೋಚನೆ ಮಾಡ್ತಾ ಇದಿಯಾ..?" ಎಂದಳು..
"ಏನಿಲ್ಲ ಚಿನ್ನಾ, ಇಷ್ಟು ದಿನ ಶೃಂಗಾರ ಕಾವ್ಯವನ್ನು ಕಲ್ಪನೆಯಲ್ಲಿ ಬರೆಯುತ್ತಿದ್ದೆ, ನಿನ್ನೆ ಅದರ ಅನುಭವ ಆಯ್ತು..ಅದನ್ನೇ ಯೋಚಿಸುತ್ತಾ ಇದ್ದೆ.." ಎಂದು ಅವಳನ್ನು ನೋಡಿ ಮುಗುಳ್ನಕ್ಕ..
"ಛಿ.. ಹೋಗು, ನಿಂಗೆ ಸ್ವಲ್ಪಾನೂ ನಾಚಿಕೆನೇ ಇಲ್ಲ, ಅಲ್ವಾ ಕವಿರಾಯ, ರಸಿಕ ರಾಜ.." ಎಂದಳು ಹುಸಿಕೋಪ ನಟಿಸುತ್ತಾ ಮುದ್ದಿನಿಂದ..
ಹಾಗೇ ಪ್ರತೀಕ್ ಅವಳ ಮುಖವನ್ನು ತನ್ನ ಅಂಗೈಯಲ್ಲಿ ಹಿಡಿದು,ಅವಳ ಹಣೆಯ ಮೇಲೊಂದು ಹೂ ಮುತ್ತನ್ನಿಟ್ಟು, "I Love You Reeta"  ಎಂದು ಪಿಸುಗುಟ್ಟಿದ..
"Love You too Darling.." ಎಂದು ಅವಳು ಪ್ರತಿ ನುಡಿದಳು..
"ರೀಟಾ ನಮ್ಮಿಬ್ಬರ ಜಾತಿ, ಧರ್ಮ ಬೇರೆ, ಬೇರೆ.. ಮದುವೆಯಾಗಲು ಸಾವಿರ ಸಮಸ್ಯೆ ಬರಬಹುದು, ಏನೇ ಆದರೂ ನೀ ನನ್ನ ಕೈ ಬಿಡಲ್ಲ ಅಲ್ವಾ..?" ಎಂದು ಆತ್ಮೀಯತೆಯ ಭಾವದಿಂದ ಕೇಳಿದ ಪ್ರತೀಕ್..
"ಇಲ್ಲ ಕಣೋ, ಅದೆಷ್ಟೇ ಕಷ್ಟ ಬರಲಿ, I am yours.., ನಾನು ಯಾವತ್ತಿದ್ದರೂ ನಿನ್ನವಳು.." ಎಂದು  ದೀರ್ಘವಾದ ನಿಟ್ಟುಸಿರು ಬಿಡುತ್ತಾ ಅವನ ಎದೆಯ ಮೇಲೆ ಒರಗಿದಳು.. 
'ನಾನೂ ಕೂಡ ನಿನ್ನವನೇ..' ಎಂಬಂತೆ ಅವಳ‌ ತಲೆಯನ್ನು ಪ್ರೀತಿಯಿಂದ ನೇವರಿಸಿದ.. 
ಆದರೆ ಅಂದುಕೊಂಡಂತೆ ಯಾವುದೂ ನಡೆಯಲಾರದು.. ಅವರ ಇಂದಿನ ಈ ಸಂಗಮ ಮುಂದೆ ಯಾವುದಕ್ಕೆ ದಾರಿ ಮಾಡಿಕೊಡುತ್ತದೋ ಕಾಲವೇ ನಿರ್ಧರಿಸಬೇಕು...!

*ಮುಂದುವರೆಯುವುದು*

- ಮನು ವೈದ್ಯ.

ಮಣ್ಣಲ್ಲಿ ಮಣ್ಣಾಗಿ ಹೋದೆ ಅರಸುತನ ಜಪಿಸುತ (ಕವಿತೆ) - ಕೆ.ಬಿ ಮಧು.

ಗುಡಿ ಕಟ್ಟಿದರು ಭಾವೈಕ್ಯತೆ ಎಂದು
ಗುಡಿ ಗುಡಿಯ ಒಳಗೆ ಮೂರ್ತಿ ಒಂದೇ
ಮರೆತೆವ ! ಏಕಾಗ್ರತೆಗೆ ಗುಡಿ ಒಂದೇ
ದುಡಿಮೆ ದೇವರು ಎಂದೆ

ಹುಂಡಿಗಳೇ ಏಕೆ ಇವನ ಮುಂದೆ !
ಎತ್ತ ತಿರುಗಿದರು ಕಾರು ಬಾರೋ ಶಿವನ ಮುಂದೆ
ತುಂಬಿ ತುಳುಕುತ್ತಿವೆ ಹುಂಡಿಗಳೊಳಗೆ ನಾಣ್ಯಗಳ ಹಿoಡು
ಬೇಡದೆ ಕೊಟ್ಟೆವು ವಜ್ರ ವೈಡೂರ್ಯಗಳ  ದಂಡು.

ಕಂಬನಿ ಸುರಿಸುತ್ತಿದೆ ಬಾಗಿಲ ಮುಂದು 
ತುಂಡು ಹೊಟ್ಟೆಗೆ ಜೀವವು ಬೆಂದು
ನಿತ್ಯವೂ ಬೇಡುತ್ತಿರುವರು ಒಂದು ಹಿಂಡು
ತಿರುಗಿ ನೋಡಲಿಲ್ಲ ಆ ಶಿವನ ಒಂದು ತುಂಡು

ಮನೆಯ ಮರವು ಬಾಡಿದೆಂದು ಹೊರನೋಕಿ 
ಪಾಪದ ವಿಭೂತಿ ಹಣೆಯ ಮೇಲೆ ಗೀಚಿ
ಪರಶಿವನ ಕರೆದು ಪರಕಾಕಿ
ನಿತ್ಯವೂ ಉಳಿಯುವನ ಈ ಪಾತಕಿ

ಮರೆತೇ  ಮಮತೆಯ ಯಾಕಿಂದು !, 
ಅರ ಶಿವನ ಕರೆಯುತ, ಪರರ ಮರೆಯುತ
ಹೆಂಡವ ಕುಡಿದು ಉಂಡಿತುಂಬುತ 
ಮಣ್ಣಲ್ಲಿ ಮಣ್ಣಾಗಿ ಹೋದೆ ಅರಸುತನ ಜಪಿಸುತ.,//

- ಕೆ.ಬಿ ಮಧು
ಕೊತ್ತತ್ತಿ ಹೋಬಳ್ಳಿ ,ಕೊತ್ತತ್ತಿ ಗ್ರಾಮ, ಮಂಡ್ಯ ತಾಲೂಕ್, ಮಂಡ್ಯ ಜಿಲ್ಲೆ.
9902431161.



ಗಣನಾಯಕ (ಕವಿತೆ) - ಆಶಾ.ಎಲ್.ಎಸ್. ಶಿವಮೊಗ್ಗ.

ಪಾರ್ವತಿಯ ಮುದ್ದು ಕಂದ 
ಭಕ್ತರನುದ್ಧರಿಸಲು ಭೂಮಿಗೆ ಬಂದ
ಶಿವನ ಪ್ರೀತಿಪಾತ್ರನೀತನು
ಈತನನುಜನು ಷಣ್ಮುಖನು

ಮೊದಲು ನಿನ್ನ ಪೂಜಿಸೇ
ಕಾರ್ಯಗಳೆಲ್ಲ ಪಡೆವುದು ವಿಜಯ
ನಿನ್ನ ನಾಮ ಪಠಿಸಿದವಗೆ
ಇಲ್ಲ ಯಾವುದೇ ವಿಘ್ನವೂ

ಸಿದ್ಧಿಬುದ್ಧಿಗಳಿಗೆ ಅಧಿಪತಿಯು
ಜ್ಞಾನಮಯ ನೀನೇ ಚಿನ್ಮಯ
ಪಾಶಾಂಕುಶಧಾರಿ ವಿಘ್ನರಾಜನೇ
ಇಲಿಯನೇರಿ ಮೆರೆವ ಶಕ್ತಿರೂಪನೇ

ಮಂಗಲ ಚರಣ ಸಂಕಟ ಹರಣನೇ
 ಶಕ್ತಿ ಸಹಿತನೇ ಭಕ್ತರ ಪೊರೆವವನೇ
ಮೋದಕವನು ನೀಡುವೆನು ಬಾರೋಬಾ
ಮುತ್ತಿರುವ ಕತ್ತಲನ್ನು ದೂರಮಾಡು ಬಾಬಾ

ಜಗವ್ಯಾಪಿಸಿರುವೇ ವಿಶ್ವವಂದ್ಯನೇ
ಪರಬ್ರಹ್ಮರೂಪ ಸ್ವರೂಪ ಗಣೇಶನೇ
ನಿನಗಿದೋ ಮಾಡುವೆವು ವಂದನೇ
ಎಲ್ಲರನೂ ಪೊರೆಯೋ ಗಣನಾಯಕನೇ

- ಆಶಾ.ಎಲ್.ಎಸ್. ಶಿವಮೊಗ್ಗ.

ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ (ಕವಿತೆ) - ಶಾಂತಾರಾಮ ಶಿರಸಿ.

ಶ್ರೀಕೃಷ್ಣ ಜಗದೋದ್ಧಾರಕ, 
ಮುದ್ದು ಕೃಷ್ಣ ಪ್ರೀತಿಯ ದ್ಯೋತಕ,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ... 

ಶ್ರೀ ಕೃಷ್ಣ ಯದುನಂದನ,
ಮನಮೋಹನ ನೀ ರಾಧಾಜೀವನ, 
ಅತಿ ಮಧುರ ಸ್ವರ ಕೊಳಲುವಾದನ,
ಕೃಷ್ಣ-ಸುಧಾಮ ಬಿಡಿಸದ ಸ್ನೇಹ ಬಂಧನ,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

ನವಿಲು ಗರಿಯು ಬಲು ಚಂದವು, 
ಮನಕೆ ಮುದವು ಕೊಳಲ ನಾದವು,
ಕಾಯಕ ನನ್ನದು ನಿನ್ನದೆ ಫಲವು,
ನಿನ್ನ ಜಪಿಸುವ ನಾಮವು ಹಲವು,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

ಜಗದೊಡೆಯನು ನೀನು,
ಸಕಲರೂ ಸಲಹುವ ಭಕ್ತಜನಪರಿಪಾಲಕ ನೀನು,
ನಿನ್ನ ನಾಮ ಜಪಿಸುವ ಭಕ್ತನು ನಾನು- ಕಷ್ಟದಿ  ಕಾಯುವ ಪ್ರಭು ನೀನು,
ದೇವನು ನೀನು ನಿತ್ಯ ಕರಮುಗಿದು ಆರಾಧಿಸುತಿಹೆನು ನಿನ್ನನು,
ಕದ್ದು ಬೆಣ್ಣೆ ಮೆದ್ದನಮ್ಮ ಮುದ್ದು ಕೃಷ್ಣ ಬಂದನಮ್ಮ...

- ಶಾಂತಾರಾಮ ಶಿರಸಿ, 
ಉತ್ತರ ಕನ್ನಡ.


ಗಣಾಧೀಶ (ಕವಿತೆ) - ಶಿವಾ ಮದಭಾಂವಿ

ಹಾಡಿರೇ ಗಣಪನ ಭಜಿಸಿರೆ ಗಣಪನ 
ಕಡುಬು ಮೋದಕ ಪ್ರಿಯ ಗೌರಿಸುತನ
ಸಡಗರ-ಸಂಭ್ರಮದ ಸರದಾರನ
ಭಜಿಸಿರೆ ಹುಲ್ಲು ಗರಿಕೆಯ ಪ್ರಿಯನ

ಮೂಶಿಕವಾಹನವ ಏರಿ ಬರುವ ಚತುರನ
ಭಜಿಸಿರೆ ಹಾಡಿರೇ ಗಜಮುಖನ 
ಸಂಕಷ್ಟ ನಿವಾರಿಸುವ ವಿಘ್ನ ವಿನಾಶಕನ
ಭಜಿಸಿರೆನ್ನ ಮುಕ್ಕಣ್ಣನ ಪ್ರಿಯಸುತನ

ತಾಯಿಯಾಜ್ಞೆಗೆ ತಂದೆಯ ತಡೆದ ಆಜ್ಞಾಪಾಲಕನ
ಭಜಿಸಿರೆ ಗಣೇಶನ ಪ್ರಥಮಪೂಜಿತನ
ರಾವಣನ ಗರ್ವ ಮುರಿದ ಗಣಾಧೀಶನ
ಭಜಿಸಿರೆ ಸಿದ್ದಿಪ್ರದಾಯಕ ವಿಘ್ನೇಶನ

ಷಣ್ಮುಖನ ಲೋಕ ಸುತ್ತಿಸಿದ ಜಾಣನಾ
ಭಜಿಸಿರೆ ಭಜಿಸಿರೆ ಶಿವಗೌರಿತನಯನ
ತಂದೆ ತಾಯಿಯಲ್ಲಿ ಲೋಕವ ಕಾಣೆಂದು ತಿಳಿಸಿದ
ಗಣನಾಥನ ಪಾಡಿ ಭಜಿಸಿರೆ ಎಲ್ಲಾ

- ಶಿವಾ ಮದಭಾಂವಿ.
ಗೋಕಾಕ.

ಕಣ್ಣೀರಿನ ಆತ್ಮೀಯತೆ (ಕವಿತೆ) - ರಾಕೇಶ್ ಡಿ ವೀರಾಪುರ.

ಮನೆಯೆಂಬ ಮನದೊಳಗೆ ಮಾಡಿದ ಬಂಧ 
ಇಂದಿಗೂ ಅಳಿಯದೆ ಉಳಿದಿಹ ಅನುಬಂಧ
ಇರುವೆ ನೀ ಕಷ್ಟಸುಖದಲಿ ಭಾಗಿಯಾಗಿ ಗೆಳೆಯ
ಬೇಡುವೆ ನಿನ್ನ ಕೊನೆವರೆಗು ನನ್ನ ಜೊತೆಗಿರುವೆಯ

ನೀನಿದ್ದರೆ ಎನ್ನಯ ಜೊತೆಯಲಿ ಬೆನ್ನೆಲುಬಾಗಿ
ಎದುರಿಸಿ ನಿಲ್ಲುವೆ ಬರುವ ಕಷ್ಟಗಳ ಧೈರ್ಯವಾಗಿ
 ಸಾಗುವೆನು ನೀ ನೀಡುವ ಸಲಹೆಯ ಹಾದಿಯಾಗಿ
ಬಾಳೆನು ಗೆಳೆಯಾ ನಿನ್ನೆಯ ಪ್ರೀತಿಯ ಹೊರತಾಗಿ
 
 ನನ್ನಯ ಬದುಕಲಿ ಬೆಳಕಾಗಿ ಬಂದೆಯ ಜೊತೆ
ಕೊಡುತ್ತಿರುವೆ ನಿನಗಿಂದು ಕಣ್ಣೀರಿನ ಆತ್ಮೀಯತೆ
ಬರೆದರೂ ಪದಸಾಲದ ನಿನ್ನ ಮನದ ವೈಶಾಲ್ಯತೆ
ನಿನಗಾಗಿ ಎಷ್ಟು ಬರೆದರೂ ಸಾಲದು ನಾ ಕವಿತೆ

ಹೃದಯದಿಂದ ಕೋರುವೆ ನಿನಗೆ ವಿಶೇಷ ನಮನ
ಹೀಗೆ ಸಾಗಲಿ ನಿಮ್ಮಿಬ್ಬರ ಗೆಳೆತನದ ಪ್ರಯಾಣ
ಆದರ್ಶವಾಗಿಹುದು ನನಗೆ ನಿನ್ನಲ್ಲಿನ ಒಳ್ಳತನ 
ಸ್ನೇಹಿಯೆ ತುಂಬು ಮನದಿ ಹರಸುವೆನು ನಿನ್ನನಾ.

- ರಾಕೇಶ್ ಡಿ ವೀರಾಪುರ.


ಕಾಲಾಯೇ ತಸ್ಮಯ್ ನಮಃ (ಕವಿತೆ) - ಮಾನಸ. ಎಂ, ಸೊರಬ.

ಸಮಯವ ಕೈಯಲ್ಲಿ ಹಿಡಿದು ಇನ್ನೊಬ್ಬರ ಭಾವನೆಯನ್ನು ಆಟಿಕೆಯ ಹಾಗೇ ಬಳಸಿ ಮೋಸ ಮಾಡಿ ಸಮಯಕ್ಕೆ ತಕ್ಕಂತೆ ಊಸರವಳ್ಳಿಯ ಹಾಗೆ ಬಣ್ಣ ಬದಲಿಸಿ ಸಮಯನ್ನೆ ತನ್ನ  ದಾಳದ ಹಾಗೆ  ಉಪಯೋಗಿಸುವ ಸಮಯವಾದಿ ಅವಕಾಶವಾದಿ.
     
ಸಮಯವನ್ನು  ಸದುಪಯೋಗ ಮಾಡಿಕೊಂಡು
ಒಳ್ಳೆಯ ಮನಸ್ಥಿತಿ ಇಂದ ತನ್ನ ಗುರಿ ಸಾಧಿಸಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ತನ್ನ ಒಳ್ಳೆಯ ಕೆಲಸಕ್ಕೆ ದಾರಿಯನ್ನು ಮಾಡಿಕೊಂಡು ಒಳ್ಳೆಯ ರೀತಿಯಲ್ಲಿ ಸಮಯನ್ನು ಬಳಸಿಕೊಳ್ಳುವುದು ಕೂಡ ಅವಕಾಶವಾದಿ
     
ಸಮಯ ಎಲ್ಲದಕ್ಕೂ ಉತ್ತರ ಅಲ್ವಾ
ಒಬ್ಬರನ್ನ ಕೆಟ್ಟೋರು ಮಾಡೋದು ಸಮಯ ಒಳ್ಳೆಯವರನ್ನು ಮಾಡೋದು ಸಮಯ.
ಸಿಗುವ ಅವಕಾಶ ಒಳ್ಳೆಯದಕ್ಕೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸಿಕೊಂಡರೆ ಅದು ನಿಜಕ್ಕೂ  ಒಳ್ಳೆಯದೆ .
ಕಾಲಾಯೇ ತಸ್ಮಯ್ ನಮಃ 

       - ಮಾನಸ. ಎಂ, ಸೊರಬ.

ನನ್ನವರು ನೀವೂ ಹೃದಯವಂತರು (ಕವಿತೆ) - ಹೆಚ್.ಹೆಚ್.ಮೈಲಾರಿ.

ಹೇಳಲಾಗದ ಭಾವ
ಮರೆಯಲಾಗದ ಜೀವ
ನೀವೂ
ಮರೆಯಲಾಗದ ಜೀವ

ನಮ್ಮೊಂದಿಗಿರಲು ನೀವು
ಮನ ತುಂಬಿದ ನಗುವು

ಕೂಡಿ ಆಡಿದ ಸಮಯ
ಮಾಸದ ಸ್ಮರಣೀಯ

ಕೋಟಿ ಕೊಟ್ಟರೂ ಸಿಗದು ಈ ಪ್ರೀತಿ
ಯಾರಿಲ್ಲ ನಿಮಗೆ ಸರಿಸಾಟಿ

ನೀವೇ ಸುಂದರ
ನಿಮ್ಮ ನೆನಪುಗಳೇ ಮಧುರ

ಮರೆಯಲಾಗದ ಬಂಧ
ಬಿಡಿಸಲಾಗದ ಅನುಬಂಧ

ಬೀಳ್ಕೊಡುವಾಗ ಮನಸ್ಸಿಗೆ ಕೊಂಚ ಬೇಸರ
ಉಜ್ವಲ ಭವಿಷ್ಯ ನಿಮಗಿದೆ ಮುಂದೆಂಬುದೇ ಸಡಗರ

ನಿಮ್ಮಿಷ್ಟದ ಜೀವನ ನಿಮ್ಮದಾಗಲಿ
ಶುಭವಾಗಲಿ ನಿಮಗೆ ಶುಭವಾಗಲಿ...


- ಹೆಚ್.ಹೆಚ್.ಮೈಲಾರಿ. ( ಪಾಪಚ್ಚಿ)


ವಿದ್ಯಾಲಯ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ಮಾತೆ ಶ್ರೀ ಶಾರದೆಯ ಆಲಯ 
ನಾವು ಕಲಿಯುವ ವಿದ್ಯಾಲಯ 
ಮೊದಲು ಕಲಿಯಬೇಕು ವಿನಯ 
ಆಗ ಜೀವನವು ಕಲ್ಪವೃಕ್ಷಾಲಯ 

ಮೊದಲ ಗುರುವೇ ತಾಯಿಯು 
ಮನೆಯೇ ಪ್ರಥಮ ಶಾಲೆಯು 
ತಂದೆಯೆ ಪ್ರಪ್ರಥಮ ದೈವವು 
ಒಡಹುಟ್ಟಿದವರೆ ಸಹ ಪಾಟಿಯು 

ವಿದ್ಯಾಲಯದಿ ನೂತನ ಸ್ನೇಹವು 
ಜೊತೆಗೆ ಆಟ ಪಾಠಗಳ ಕೂಟವು 
ಶಿಕ್ಷಕರಿಗೆ ಕೊಡಬೇಕು ಗೌರವವು 
ಶಿಸ್ತಿನಿಂದಿದ್ದರೆ ಮಾನ ಸಮ್ಮಾನವು 

ಗುರುಗಳು ಮಾಡುವರು ಬೋಧನೆ 
ನಾವು ಮಾಡಬೇಕು ಅವ್ರ ಆರಾಧನೆ 
ಕಲಿಕೆಯಲ್ಲಿರಬೇಕು ಬಹಳ ಸಹನೆ 
ಆಗಲೇ ಸಾಧ್ಯವಾಗುವದು ಸಾಧನೆ 
- ಮಲ್ಲಿಕಾರ್ಜುನ ಎಸ್ ಆಲಮೇಲ ಯಡ್ರಾಮಿ.

ರಕ್ಷಾ ಬಂಧನ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಮರದ ಆಸರೆಯಿಂದ ಬೆಳೆದ ಲತೆಯು 
ಬೆನ್ನಿಗೆ ಅಂಟಿಕೊಂಡು ಹುಟ್ಟಿದ ಸೋದರಿಯು 
ಕರುಳ ಬಳ್ಳಿ ಕತ್ತರಿಸಿ ಭವ ನೀಡಿದ ತಾಯಿಯು
ಜೀವನದುದ್ದಕ್ಕೂ ಮರೆಯಲಾಗುವುದೇ ತೋರಿದ ಮಮತೆಯು

ಅರಳುವ ಹೂಗಳಂತೆ ನಲ್ಮೊಗೆಯ ತುಟಿಯು
ಮುಖದ ಮೇಲೆ ಹೊಳೆವ ಬೆಳದಿಂಗಳ ಕಳೆಯು 
ನೀ ನಕ್ಕರೆ ಸುರಿಯುವುದು ಹೂವಿನ ಸೋನೆಯು 
ನನ್ನೆದೆಗೆ ಅಪ್ಪಿದೊಡೆ ದೂರಾಗುವುದು ಕಲ್ಮಶದ ನಶೆಯು

ಕೂಡಿ ಆಡುವೆವು ಮನ ಬಿಚ್ಚಿ ನಾವು
ಕಳೆದು ದೂರಾಗುವುದು ಹಡೆದವ್ವನ ನೋವು  
ಚಳಿಯೆಂದು ನಡುಗಿದೊಡೆ ನೀಡುವಳು ಕಾವು 
ಸಿಹಿ ಬೆರಸಿ ನೀಡುವಳು ಬೆಲ್ಲ ಕಲಿಸಿದ ಬೇವು

ಇಳೆ ರವಿಗೆ ಇರುವುದು ಬೆಳಕಿನ ಬಂಧನ 
ಶಶಿ,ಪುಷ್ಪಕೆ ನೀಡುವನು ಬೆಳದಿಂಗಳ ಬೆಳಕನ 
ನೀನಿರುವೆ ನನಗೆ ಬಂಗಾರದ ಚಂದನ 
ನಮ್ಮಿಬ್ಬರನ್ನು ಕೂಡಿಸಲು ಬಂತು ರಕ್ಷಾ ಬಂಧನ

ಅಣ್ಣನರಸಿ ಅಭಿಮಾನದಿಂದ ಬಂದ ಸಹೋದರಿ, 
ನಿನಗೆ ದೊರೆಯಲಿ ಸುಖ ಸಂಸಾರದ ದಾರಿ
ತವರಿನ ಹೆಸರನ್ನು ಬೆಳಗಿಸುವ ಕುಮಾರಿ 
ಎಂದೆಂದಿಗೂ ನನ್ನ ಹೃದಯದಲ್ಲಿರುವೆ ಬಂಗಾರಿ

ನನ್ನೆದೆ ಬಡಿತವು ನೀನಾದೆ ಪುಣ್ಯಮಾತೆ
ನೀಡುವೆ ನಿನಗೆ ದೇವರಿನ ಆದ್ಯತೆ 
ನಿನ್ನಲ್ಲಿ ನೆಲೆಸಿರುವುದು ತಾಯಿಯ ಮಮತೆ
ಸಹೋದರಿಯೇ ಜಗತ್ತಿಗೆ ಎರಡನೇ ದೇವತೆ.
  - ಬಿ.ಹೆಚ್.ತಿಮ್ಮಣ್ಣ.

ಮನಕಂಟಿದ ಕವಿತೆಗಳು (ವಿಮರ್ಶೆ) - ಮೈಬೂಬಸಾಹೇಬ.ವಾಯ್‌.ಜೆ.

 ಕಡಿಮೆ ಸಮಯದಲ್ಲಿ ಮಮತೆಯಿಂದ ಮನಗೆದ್ದ ಸಹೋದರ 

ಷಕೀಬ್ ಕಣದ್ಮನೆಯವರ ಸರಳತೆ ಎಂತಹ ವ್ಯಕ್ತಿಗೂ ಮಾದರಿ. ತಲೆ ಹೋಗುವ ಸಮಸ್ಯೆಯಿದ್ದರೂ ಹೂ  ನಗೆ ಚೆಲ್ಲುವ  ಶ್ರಮಜೀವಿ. ವಿದ್ಯಾರ್ಥಿ ಜೀವನದ ಜೊತೆಜೊತೆಗೆ ರೈತನ ಪಟ್ಟ ಹೊತ್ತಿರುವ ಯಾವಾಗಲೂ ತೋಟ -ಜಮೀನು ಕೆಲಸಗಳಲ್ಲಿ  ತೊಡಗಿ ಭೂಮಿಯ ಸ್ವರ್ಗವ  ಕಾಣುವ ವ್ಯಕ್ತಿತ್ವ ಒಂದೆಡೆಯಾದರೆ, ಕನ್ನಡ ನುಡಿಯುವ ಮನ ಮುಡಿಯದ ಭಾವಗಳು ಕಾಣಲಾಗದು. ಅಂತಹಾ ಕನ್ನಡ ಪರಿಸರದಿಂದಲೇ ಬೆಳೆದು ಬಂದಿರುವ ಷಕೀಬ್ ಅವರು ಮೋಹದ ಮೋಡದ ಮೂಲಕ ಕನ್ನಡ ಪುಸ್ತಕ ಪ್ರಪಂಚಕ್ಕೆ ಪರಿಚಿತರಾಗಿದ್ದಾರೆ. ಅವರ ಭಾಷೆ,ಭಾವ ನುಡಿಗಳ ಮೃದುತ್ವ, ಆಂತರ್ಯದ ಧೋರಣೆ ಅದಮ್ಯ ಹಂಬಲ ನಾಡು ನುಡಿಗಾಗಿ ನುಡಿಯುವ ಒಳಗ ಕರಳು ಎಲ್ಲವೂ ಒಂದಿಲ್ಲೊಂದು ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡಲು ನಿರತವಾಗಿದೆ ಅದಕ್ಕಾಗಿಯೇ ದೇಶದ ಬೆನ್ನೆಲುಬಿಗೆ ಹೊತ್ತಿಗೆ ಅರ್ಪಿಸಿದ್ದಾರೆ.
     ಬಂಡಾಯದ ಹಿನ್ನೆಲೆ ಹೊಂದಿರುವ ಡಾ ಸಿದ್ದ್ರಾಮ ಕಾರಣೀಕ ಅವರ ಮುನ್ನುಡಿ,ಹಂಪಿ ವಿವಿಯ ಕನ್ನಡ ಸಂಶೋಧಕ ಶರೀಪ ಹಸಮಕಲ್ಲ ಅವರ ಬೆನ್ನುಡಿಯನ್ನೊಳಗೊಂಡು ಕನ್ನಡ ಪುಸ್ತಕ ಪ್ರಾಧಿಕಾರದ ಧನಸಹಾಯ ಪಡೆದು ಮುದ್ರಿತವಾಗಿದ್ದು, 
  'ಕರುಳಲ್ಲಿ ಹುಟ್ಟ್ತೈತೆ ಕನ್ನಡ
   ಕಂಠದಲ್ಲಿ ಹರಿದಾಡತೈ ಗಡಗಡ '
 ಎನ್ನುವ ಪದ್ಯದ ಸಾಲುಗಳು ಕನ್ನಡ ಭಾಷೆಯ ಹಿರಿಮೆಯನ್ನು ಎತ್ತಿತೋರಿಸುವ ಮೂಲಕ ನಾಡುನುಡಿಯ ಪ್ರಖರತೆಯನ್ನು ತಲೆದೋರುವಲ್ಲಿ ಸಹಕಾರಿಯಾಗಿದೆ. 
ನಾಡುನುಡಿ,ದೇಶ ಪ್ರೇಮ,ಅನ್ನದಾತರಿಗೆ ಸಲಾಮು,ಹಜರತ್ ಸುಲ್ತಾನರ ಪರಾಕ್ರಮ,ಚಂದಿರನ ಲೋಲುಪತೆ,ಪ್ರಣಯದ ಹಾಡು,ಹಕ್ಕಿಹಾಡುವ ಶೋಕಗೀತೆ,ನನ್ನದಲ್ಲದ ಲೇಖನಿ ಎನ್ನುವ ಹಲವು ಪದ್ಯಗಳು ಮತ್ತೆ ಮತ್ತೆ ಓದಿಸಿಕೊಂಡರೆ, 
ಹೃದಯವನ್ನು ಗುಡಿಗೆ ಹೋಲಿಸಿ,ಸ್ನೇಹದಲ್ಲಿ ದೇವರನ್ನು ಕಾಣುವ ರೂಪಕ ಅತ್ಯಾಪ್ತವಾಗಿಸುತ್ತದೆ.
 "ನೆಮ್ಮದಿ ಇರದ ಜೀವನ 
 ಯಮನಿಗೆ ಅಹ್ವಾನ" 
    ಎನ್ನುವ ಕವಿವಾಣಿ,ಜೀವನದಲ್ಲಿ ತೃಪ್ತಿ ಎನ್ನುವುದು ಅತೀವ ಕಾಳಜಿಯ ವಾಕ್ಯವಾಗಿ ಗುರುತಿಸಿಕೊಂಡು ಜೀವನ ಪ್ರೀತಿಯನ್ನು ಸಾರುವುದರಲ್ಲಿ ಸಹಕಾರಿಯಾಗಿದೆ.'ಕವಿಯ ಕಲ್ಪನೆಗೆ ಎಟುಕದ ಸೌಂದರ್ಯ ನಿನ್ನದು ನಿನಗೆಂದೆ ಕಾಯುವ ಭಾಗ್ಯ‌ ನನ್ನದು'
  ಈ ರಸಭರಿತ ಕಾವ್ಯ ಕಲ್ಪನೆಗೂ ನಿಲುಕದ ನಿಲುವು ಪ್ರಾಸಭರಿತವಾದ ಹೊಸ ಛಾಯೆಯಗಳ ಮಾಯೆಯನ್ನು ಬರಮಾಡಿಕೊಳ್ಳುವ,
'ಅವಳು ನಕ್ಕರೆ ಮಲ್ಲಿಗೆಯ ಛಾಯೆ'ಎನ್ನುವಲ್ಲಿ ಪ್ರೇಮಿಯನ್ನು ಪ್ರೇಮಿಸುವ ಪರಿಯಲ್ಲಿ‌ ಹೊಸ ಪ್ರಮೇಯ ತೆರೆಯಲೆತ್ನಿಸಿದ್ದಾರೆ‌.ಆಚಾರ ಪತ್ನಿಯೊಂದಿಗೆ ವ್ಯವಹರಿಸುವ ವಿಚಾರ ಸತಿಯ ಸೇರಿಸಿ ಅದಕೆ ಸವಿಯ ಸುರಿಸಿ ಹರಸುವ ಪರಿ ಪರೋಕ್ಷವಾಗಿ ಪ್ರಪಂಚವೆಲ್ಲಾ ಪ್ರೇಮದಲ್ಲಿದೆ ಪ್ರೀತಿ ಇಲ್ಲದ ಹೊರತು ಏನನ್ನು ಮಾಡಲಾರೆ ದ್ವೇಷವನ್ನು ಕೂಡಾ' ಎನ್ನುವ  ಚಂಪಾ ಅವರ ಕವಿತೆಯ ಸಾಲುಗಳು ನೆನಪಿಸುತ್ತಾರೆ 
    ಪ್ರೇಮ ಋತುಮಾನಗಳಾಗಿ,ಶತಮಾನದ ಭಾವಗಳಾಗಿ,ಯುಗ ಯುಗಗಳ ಬಂಧನಗಳಾಗಿ ಬೆಳೆದರೂ ಹಳತಾಗುವುದಿಲ್ಲ. ಅಳತೆಯ ಸೆಳೆತದಲ್ಲಿ ಸಿಲುಕಿ ನಲುಗುವ ಹಲವಾರು ಪಡ್ಡೆ ಹುಡುಗರನ್ನು ಇಬ್ಬನಿಯ ರೂಪಕದಲ್ಲಿ ವಿವರಿಸುವ ಪ್ರಯತ್ನ‌ ಕೂಡ ಪ್ರಯಾಸದಿಂದ ಕೂಡಿದ್ದರೂ ಕೆಚ್ಚೆದೆಯಲ್ಲಿ ದೇಶಬಾಂದವರನ್ನು ಹಚ್ಚೆ ಹಾಕಿಸಿಕೊಳ್ಳಿ ಎನ್ನುವ 'ಮೌನರಾಗ'ಹೊಸತಲೆಮಾರಿನ ಹೋರಾಟಗಾರರಿಗೆ ಪರಿಚಯ ಮಾಡಿಸುತ್ತದೆ.
   ತಂಗಿಗಾಗಿ,ಮೌನಯಾನ ದಂತಹ ಕೆಲವು ಪದ್ಯಗಳು ಒಡಲ ಪ್ರೇಮ,ಪ್ರಾದೇಶಿಕತೆ ದಾರ್ಶನಿಕತೆಯನ್ನು ತಿಳಿಸುವುದರೊಂದಿಗೆ ತಿಳಿಸಿ ಪ್ರಾಂತ್ಯದ ಪ್ರೀತಿಯಿಂದ ರಾಷ್ಟ್ರಪ್ರೇಮದತ್ತ ತಿರುಗುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ.ಎನ್ನುವ ಕವಿಭಾವ ರಸದೌತ್ತತೆ ಸಾರುವಲ್ಲಿ ನಿರತವಾಗಿದೆ.
ತಮ್ಮ ತವರೂರಾದ ನವಿಲುರೂನಿಂದ ಹಿಡಿದು, ಭಾರತ ದೇಶದ ಬಗ್ಗೆಯೂ ಕವಿತೆಗಳನ್ನು ರಚಿಸಿ ದೇಶಪ್ರೇಮ ಮೆರೆದಿದ್ದಾರೆ. ತನ್ನ ಪ್ರೇಯಸಿಯನ್ನು ಕವಿತೆಗಳ ಮೂಲಕ ಕಾಡಿ, ಬೇಡಿ,  ಆರಾಧಿಸಿ, ಪ್ರೇಮ ಲಹರಿ ಒಂದೆಡೆ ಅದ್ಭುತವಾಗಿ ಮೂಡಿ ಬಂದಿದೆ. ಜೊತೆಗೆ ಪ್ರಕೃತಿಯ ಮಡಿಲಿನಲ್ಲಿ ಜೀವನ ನಡೆಸುವ ಇವರು ತಮ್ಮ ಕವನ ಸಂಕಲನದಲ್ಲಿ ಪ್ರಕೃತಿಯ ವಿವಿಧ ರೀತಿಯ ಮಜಲುಗಳನ್ನು ತುಂಬಾ ಮೋಹಕವಾಗಿ ವರ್ಣಿಸಿದ್ದಾರೆ
 ಒಂದೆರಡು ಕವಿತೆಗಳಾದ, ಹೀಗೇಕೆ?, ಕಣ್ಣೀರ ಮಳೆ
 ನಾನು ತುಂಬಾ ಭಾವುಕನಾದ ಕವಿತೆಗಳು. ತಮ್ಮ ತಂಗಿಯರಿಗೆ ಕವಿತೆ ಬರೆದು ಅಣ್ಣನ ವಾಸ್ತಲ್ಯವನ್ನು ಮೆರೆದಿರುವುದು  ಬಾಂಧವ್ಯಗಳಿಗೆ ಸಂಬಂಧಗಳಿಗೆ ಇವರು ನೀಡುವ ಪ್ರಾಮುಖ್ಯತೆಯನ್ನು ಕಲಿಸಿಕೊಡುತ್ತವೆ.    ಭಾರತದ ಬೆನ್ನೆಲುಬು ರೈತ, ಮತ್ತು ಯೋಧರಿಗೆ ನೈಜ್ಯತೆಯ  ವಂದನಾರ್ಪಣೆ   ಸಲ್ಲಿಸಿದ್ದಾರೆ. "ಈ ಪುಸ್ತಕದ ಪ್ರತಿ  ಪುಟಗಳ ತೆನೆ ಹಿಡಿದ ಕೈಗಳು ಚಿಹ್ನೆಯೂ" ಕವಿಯ ರೈತನ ಮೇಲಿನ ಅಭಿಮಾನ ತಿಳಿಸಿಕೊಡುತ್ತದೆ. ಮೊಟ್ಟಮೊದಲ ಪ್ರಯತ್ನವೇ ರಂಗುರಂಗಾಗಿದ್ದರು, ಅಲ್ಲಲ್ಲಿ ಕೆಲಮಟ್ಟಿನ ದ್ವಂದ್ವಗಳು ಕಂಡುಬಂದರೂ ಮೊದಲ ಪ್ರಯತ್ನದ ಕವನ ಕೃಷಿಯಲ್ಲಿ ತಕ್ಕಮಟ್ಟಿನ ಕಥನ ಪ್ರಿಯತೆಯೂ ಸೃಜಿಸಿದ್ದಾರೆ.ಎಲ್ಲವೂ ಒಳಿತಾಗಲಿ ಹೊಸತನ ನಿರಂತರವಾಗಲಿ.. ಮೋಹದ ಮೋಡಗಳು ತಿಳಿಯಾಗಿರುವಂತೆ ಬಾಸವಾಗುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಅತಿ  ಹೆಚ್ಚು ವಿಮರ್ಶೆ, ಕಥೆ, ಕವನ, ಕಾದಂಬರಿ ನಿಮ್ಮಿಂದ ಕರುನಾಡಿಗೆ ಕೊಡುಗೆ ಆಗಲಿ
    ನಾಡಿನ ಬಹುಸಂಖ್ಯಾತ ಆವಾಸದ ಮೇಲೆ ಬರೆ ಎಳೆಯುವ ಹುನ್ನಾರಗಳು ನಡೆಯುತ್ತಿರುವ ಈ ದಿನಗಳಲ್ಲಿ,ಸಮಾನ ಚಿಂತನೆಯ ಸುಸಂಸ್ಕೃತ ವ್ಯಕ್ತಿಯ ನಿರ್ಮಾಣ ಕಾರ್ಯ ಶಿಕ್ಷಣ ಸಂಸ್ಥೆಗಳು ಮಾಡಬೇಕಾದ ಹೊತ್ತಿನಲ್ಲಿ ಪಠ್ಯಗಳಲ್ಲಿ ವೈರತ್ವದ ಬೀಜ ನೆಡುವ ಕೆಲಸ ಗೊತ್ತಿಲ್ಲದದಂತೆ ನಡೆಯುವತ್ತಿರುವುದು ಖೇದಕರ ಸಂಗತಿ.ಈ ವರ್ಗೀಕರಣ ಪದ್ದತಿ ಹಿಂದಿನಿಂದಲೂ ನಡೆಯುತ್ತಲೇ ಬಂದಿತ್ತು. ಈಗಾಗಲೂ ನಡೆಯುತ್ತಿದೆ ಆ ವಿಚಾರ ಬೇರೆ,ಆದರೆ ಸಮತೆ ಬಿತ್ತುವ ನೆಲದಲ್ಲಿ ವೈಷಮ್ಯ,ದ್ವೇಷ,ಅಸೂಯೆ,ಅಸಮಾನತೆ, ಅಂದಭಕ್ತಿಯನ್ನು ದೇಶಭಕ್ತಿಯ ರೂಪದಲ್ಲಿ ಪಠ್ಯದಲ್ಲಿ ಇರಿಸುತ್ತಿರುವುದು ಅಂದಕ್ಕಾರದ ಮಹೋನ್ನತ ಹಂತ ತಲುಪಿದೆ ಎಂದ್ಹೇಳಡ್ಡಿಯಿಲ್ಲ‌.
       ಬಹು ಸಂಸ್ಕೃತಿಯ ಭಾರತ,ಜಾತಿ,ಮತ,ಧರ್ಮ,ಪಂಥಗಳನ್ನು ದೂರ ಸರಿಸಿ ನಾವೆಲ್ಲಾ ಭಾರತೀಯರು ಎನ್ನುವ ಭಾವ ಮೂಡಿಸುವ ಹೊತ್ತಿಗೆಯಲ್ಲಿ ವಿಷ ಪೋಣಿಸುವ ಹುನ್ನಾರ ನಡೆಯುತ್ತಿರುವ ವಿಚಾರ ಹೀನ ಸಂಸ್ಕಾರದ ಲಕ್ಷಣಗಳು,ಭಾರತೀಯತೆ,ಬಂದುತ್ವ,ಸಹೋದರತ್ವದ   ಉಗ್ರಾಣ ನಮ್ಮ ದೇಶ, ಅದನ್ನು ಅಗ್ರಹಾರದಂತೆ ಬದಲಿಸುತ್ತಿರುವ ಹೊಲಸು ರಾಜಕೀಯದವರು  ಮುಂದ್ಯಾವುದಕ್ಕೂ ಹೇಸುವುದಿಲ್ಲ. ಎನ್ನುವ ಕನ್ಸರ್ವೇಶನ್ನಗಳು ಆಗಾಗ ಸಾಬಿತಾಗುತ್ತಿವೆ.ಪ್ರಗತಿಪರ ವಿಚಾರವಾದಿಗಳನ್ನು ದೇಶದ್ರೋಹದ ಪಟ್ಟಕಟ್ಟಿ ಸಮಾಜದಿಂದ ತಿರಸ್ಕೃತರನ್ನಾಗಿ ಮಾಡುವ ಕುತಂತ್ರಿಗಳಿವರೆನ್ನುವುದರಲ್ಲಿ ಸಂದೇಹವಿಲ್ಲ.ಇಂತಹ ಬಸವಾದಿ ಶರಣರ ನಾಡಿನಲ್ಲಿ ಸಮಾನತೆಗಾಗಿ ಹಾತೊರೆಯುತ್ತಿರುವ ಪ್ರಗತಿಪರ ಚರಿಸ್ಮಾ ಕಾಣುವುದು ‌ವಿರಳಾತೀವಿರಳ ಅಂತ ವಿರಳ ಸಂಗತಿಗಳನ್ನು ತನ್ನ ಸರಳ ಸಾಹಿತ್ಯದಲ್ಲಿ ಅಳವಡಿಸಿ ಕೊಂಡಿದ್ದಲ್ಲದೆ ಬರೆದಂತೆ ಬದುಕಿರುವ ಚೇತನಕ್ಕೆ ಅಭಯ ಹಸ್ತದಿಂದ ಬರಮಾಡಿಕೊಳ್ಳೋಣ.

- ಮೈಬೂಬಸಾಹೇಬ.ವಾಯ್‌.ಜೆ.

ನಶಾ ಮುಕ್ತ - ಪರಿಸರಯುಕ್ತ ಭಾರತಕ್ಕಾಗಿ ಕೈ ಜೋಡಿಸೋಣ (ಲೇಖನ) - ಹನುಮಂತ ದಾಸರ ಹೊಗರನಾಳ.

ಸುಂದರ ಮತ್ತು ಸೊಗಸಾದ ಬದುಕನ್ನು ಸರಳವಾಗಿ ಸುಲಲಿತವಾಗಿ ಸಾಗಿ ಬದುಕುವ ಕ್ಷಣಗಳು ಸಾವಿರಾರು ನಮ್ಮೆಲ್ಲರ ಕಣ್ಮುಂದೆ ಸುಳಿದಿವೆ ಅಂತಹ ಒಳ್ಳೆಯ ಕ್ಷಣಗಳನ್ನು ಅನುಭವಿಸಿ ಆರೋಗ್ಯತವಾಗಿ ಬದುಕಿ ನಲಿಯುವ ಬದಲು ನಾವು ಇಂದಿನ ದಿನಮಾನಗಳಲ್ಲಿ ಹಲವಾರು ದುಶ್ಚಟಗಳಿಗೆ ಬಂಧಿಯಾಗಿ ನಮ್ಮ ಬದುಕಿಗೆ ನಾವೇ ಬೆಂಕಿ ಇಟ್ಟುಕೊಳ್ಳುವಂತಹ ಸಮಯ ಸಮೀಪ ಸುಳಿದಾಗಿದೆ. ಭಾರತದಲ್ಲಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಸಂಬಂಧಿಸಿದಂತೆ ಉತ್ಪನ್ನಗಳ ತಯಾರಿಕಾ ಕಾರ್ಖಾನೆಗಳೂ ಕೂಡ ಹೇರಾಳವಾಗಿ ಅಭಿರುದ್ಧಿ ಹೊಂದುತ್ತಿರುವುದರಿಂದ ದೇಶಕ್ಕೆ ಆದಾಯ ಹೆಚ್ಚುತ್ತಿದೆ ಎನ್ನುವುದಾದರೆ ಮತ್ತೊಂದೆಡೆ ನೋಡಿದಾಗ ಇಂತಹ ಉತ್ಪನ್ನಗಳ ತಯಾರಿಕೆಯಿಂದ ಮುಖ್ಯವಾಗಿ ಯುವ ಪೀಳಿಗೆಯ ಮೇಲೆ ಬಹಳಷ್ಟು ಪರಿಣಾಮ ಬಿರುತ್ತದೆ. ವಿಶೇಷವಾಗಿ ಒಂದು ದೇಶಕ್ಕೆ ಯುವ ಪೀಳಿಗೆಯ ಶಕ್ತಿ ಅತ್ಯಾವಶ್ಯಕವಾಗಿರುತ್ತದೆ ಹೀಗಿರುವಾಗ ಇಂತಹ ಉತ್ಪನ್ನಗಳಿಂದ ಹದೆಗೆಡುತ್ತಿರುವ ಯುವ ಪೀಳಿಗೆ ಅಷ್ಟೇ ಅಲ್ಲದೇ ಇಂದಿನ ದಿನಮಾನಗಳಲ್ಲಿ ವಯೋಮಿತಿಗೆ ಮೀರಿ ಅಂದರೆ ಮುಖದ ಮೇಲೆ ಮೀಸೆ ಗಡ್ಡ ಮೂಡದೇ ಇರುವ ಬಾಲಕರು, ಹೆಣ್ಣು, ಗಂಡೆನ್ನದೆ ಪ್ರತಿಯೊಬ್ಬರೂ ಮಧ್ಯಪಾನ, ಧೂಮಪಾನ, ಗೂಟಕಾ, ತಂಬಾಕು ಹೀಗೆ ಹಲವಾರು ಚಟಗಳಿಗೆ ಮಾರುಹೋಗುವುದಷ್ಟೇ ಅಲ್ಲದೇ ಅದು ದೈನಂದಿನ ಚಟುವಟಿಕೆಯಾಗಿ ಮಾರ್ಪಟ್ಟಿದೆ ಹಾಗೂ ಬಿಟ್ಟರೂ ಬಿಡಲಾಗದ ಮಾಯೆ ಎಂಬಂತಾಗಿದೆ.
ಮಧ್ಯಪಾನ ಮತ್ತು ತಂಬಾಕು ಉತ್ಪನ್ನದ ವ್ಯಾಪಾರ ದೇಶದ ಮೂರನೇ ಅತಿದೊಡ್ಡ ವ್ಯಾಪಾರವಾಗಿದೆ. ದೇಶದಲ್ಲಿ  ದಿನಕ್ಕೆ ಸುಮಾರು 5 ಜನ ಇಂತಹ ದುಶ್ಚಟಕ್ಕೆ ಬಲಿಯಾಗಿ ಪ್ರಾಣ ಕಳೆದುಕೊಂಡವರಿದ್ದರೆ, ಕರ್ನಾಟಕದಲ್ಲಿ ಸುಮಾರು 6000 ಜನರು  ವರ್ಷಕ್ಕೆ ಈ ಮಧ್ಯಪಾನ ಮತ್ತು ಧೂಮಪಾನಗಳಂತಹ ವ್ಯಸನಗಳಿಂದ ಜೀವ ಕಳೆದುಕೊಳ್ಳುತ್ತಾರೆ. ಇಂತಹ ಭಯಾನಕ ಮತ್ತು ಮಾರಕವಾದಂತಹ ದುಶ್ಚಟಗಳಿಂದ ಪ್ರತಿಯೊಬ್ಬ ವ್ಯಕ್ತಿಯು ದೂರವಿರಲು ಮತ್ತು ತಡೆಗಟ್ಟಲು ಭಾರತ ಸರ್ಕಾರ ಹಲವಾರು ಅಭಿಯಾನ ಮತ್ತು ಯೋಜನೆಗಳನ್ನು ಜಾರಿಗೆ ತಂದು ಸಂಬಂಧಿಸಿದ ಇಲಾಖೆಗಳ ಮೂಲಕ ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಮಾಹಿತಿ ತಲುಪಿ ಅವರನ್ನು ಜಾಗೃತಗೊಳಿಸಲೆಂದು ಹಲವಾರು " ತಂಬಾಕು ಮುಕ್ತ ಭಾರತ ", " ನಶಾ ಮುಕ್ತ ಭಾರತ "
ಮಧ್ಯಪಾನ ಮುಕ್ತ ಭಾರತ ಹೀಗೆ ಹಲವಾರು ಅಭಿಯಾನಗಳನ್ನು, ಕಾರ್ಯಕ್ರಮಗಳನ್ನು ಸಾರ್ವಜನಿಕರ ಹಿತಾಸಕ್ತಿಗಾಗಿ ನಡೆಯುತ್ತಲೇ ಇವೆ. ಆದರೇ ದುರದೃಷ್ಟವೆಂದರೇ ಭಾರತ ಮಧ್ಯಪಾನ ಮತ್ತು ಧೂಮಪಾನ ವ್ಯಾಪಾರದಲ್ಲಿ 3ನೇ ಅತಿದೊಡ್ಡ ವ್ಯಾಪಾರ ಹೊಂದಿದ್ದರೂ ಅದರಿಂದ ಶೇಖರಣೆಗೊಂಡ ಆದಾಯದಿಂದ ನಕ್ಸಲರಿಸ್ಮ್, ಟೆರಾರಿಸ್ಮ್ ಹೀಗೆ ಅನೇಕ ಕೆಟ್ಟ ಕೃತ್ಯಕ್ಕೆ ಮತ್ತು ಕೆಟ್ಟ ಕಾರ್ಯಕ್ರಮಗಳ ಉತ್ತೇಜನಕ್ಕೆ ಹಾಗೂ ಅಭಿರುದ್ಧಿಗಾಗಿ ಬಳಸಲಾಗುತ್ತಿದೆ ಎಂಬ ಸತ್ಯಂಶ ಹೊರಬಿದ್ದಿದೆ. ಆದರೇ ಯಾವತ್ತೂ ನಮ್ಮ ದೇಶ ಈ ಮಧ್ಯಪಾನ ಮತ್ತು ತಂಬಾಕು ಉತ್ಪನ್ನಗಳ ತಯಾರಿಕಾ ಕ್ಷೇತ್ರಗಳಿಂದ ಬರುವ ಆದಾಯದ ರೂಪ ಸಂಪೂರ್ಣವಾಗಿ ಬದಲಾಗಬೇಕು ಮತ್ತು ಅಂತಹ ವ್ಯಾಪಾರ ಕೇಂದ್ರಗಳನ್ನು ಸ್ಥಗಿತಗೊಳಿಸಬೇಕು ಆ ವ್ಯಾಪಾರಗಳಿಂದ ದೇಶಕ್ಕೆ ಬರುವ ಆದಾಯಕ್ಕೆ ಕಡಿವಾಣವಾಕಬೇಕು ಹಾಗೂ ಅಂತಹ ವ್ಯಾಪಾರಗಳು ನಡೆಯದಂತೆ ಸರ್ಕಾರ ಅದೊಂದು ಬಹುದೊಡ್ಡ ಕಾರ್ಯ ಮಾಡಬೇಕಿದೆ. ಏಕೆಂದರೆ ಮಧ್ಯಪಾನ ಮತ್ತು ಧುಮಪಾನದಿಂದ ಎಷ್ಟೋ ಯುವಕರು ಸಾವಿಗೀಡಾಗುತ್ತಿದ್ದಾರೆ ಅದೆಷ್ಟೋ ಶ್ವಾಸಕೋಶ, ಕ್ಯಾನ್ಸರ್ ಗಳಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅದೆಷ್ಟೋ ಪಾಲಕರು ಮಕ್ಕಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ, ಅದೆಷ್ಟೋ ಮಹಿಳೆಯರು ಪತಿಗಳನ್ನು ಕಳೆದುಕೊಂಡು ಮುಂಡೆಯರಾಗಿದ್ದಾರೆ, ಅದೆಷ್ಟೋ ಕಂದಮ್ಮಗಳು ತಂದೆಯನ್ನು ಕಳೆದುಕೊಂಡು ಅನಾಥ ಹಾಗೂ ತಂದೆಯ ಪ್ರೀತಿ ಇಲ್ಲದೇ ಮರುಗಿ ಬದುಕುತ್ತಿವೆ ಅದಕ್ಕಾಗಿ ಇಂತಹ ಹಲವಾರು ಭಾವನೋತ್ಮಕ ಅಂಶಗಳನ್ನು ಮನಗಂಡು ಸರ್ಕಾರ ನಶೆ ಮುಕ್ತ ಭಾರತಕ್ಕಾಗಿ ಕೈ ಜೋಡಿಸಿ ಮಧ್ಯಪಾನ ಮತ್ತು ಧೂಮಪಾನಕ್ಕೆ ಕಡಿವಾಣ ಹಾಕಬೇಕು ಹಾಗೂ ಯುವ ಜನತೆಯನ್ನು ಅಷ್ಟೇ ಅಲ್ಲದೇ ಪ್ರತಿಯೊಬ್ಬ ಮಾನವನನ್ನು ಅಂತಹ ಕೆಟ್ಟ ಚಟಗಳಿಂದ ಹೊರ ಬರುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಮುಖ್ಯವಾಗಿ ದೇಶದಲ್ಲಿ ಯಾರೇ ಹುಟ್ಟಿದ್ದರೂ ಅವರು ತಮ್ಮ ಸ್ವಂತ ನಿರ್ಧಾರದಿಂದ ಯಾವುದೇ ಆತ್ಮಹತ್ಯ ಕೃತ್ಯಕ್ಕೆ ಕೈ ಹಾಕುವುದಾಗಲಿ ಆತ್ಮಹತ್ಯ ಮಾಡಿಕೊಳ್ಳುವುದಾಗಲಿ ಆದರೇ ಆಕಸ್ಮಿಕವಾಗಿ ಬದುಕುಳಿದರೆ ಅವನಿಗೆ ಕಾನೂನು ಪ್ರಕಾರ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂಬ ಸುಪ್ರೀಂ ಕೋರ್ಟ್ ನಿಯಮದಂತೆ ಇಂತಹ ಚಟಗಳಿಗೆ ತುತ್ತಾಗುವವರಿಗೂ ಕೂಡ ದಂಡ ಮತ್ತು ಶಿಕ್ಷೆ ವಿಧಿಸುವಂತಹ ನಿಯಮಗಳು ಅವಶ್ಯವಾಗಿ ಜಾರಿಯಾಗಲಿ ವಿಶೇಷವಾಗಿ ಇಂತಹ ಕೆಟ್ಟ ಚಟಗಳು ಬರೀ ಪುರುಷರಿಗಷ್ಟೇ ಅಂಟಿದ್ದಲ್ಲ ಇದು ಮಹಿಳೆಯರಿಗೂ ತಲುಪಿದೆ ಅವರೂ ಕೂಡ ಕೆಟ್ಟ ಚಟಗಳಿಗೆ ದಾಸರಾಗಿದ್ದಾರೆ ಹಾಗೂ ಅದೊಂದು ಪ್ರಸ್ತುತ ಕಾಲಮಾನದ ಪಾಶ್ಚಿಮತ್ಯಾ ಶೈಲಿಯ ಟ್ರೆಂಡ್ ಆಗಿ ರೂಪಿತಗೊಂಡಿದೆ ಈ ಶೈಲಿಯನ್ನು ಆದಷ್ಟು ಬೇಗ ಕಡಿಮೆಗೊಳಿಸುವಂತೆ ಕಡಿವಾಣ ಹಾಕಬೇಕು ಏಕೆಂದರೆ ಪುರುಷರಿಗಿಂತ ಮಹಿಳೆಯರಿಗೆ ನಿಕೋಟಿನ್ ಮತ್ತು ಸ್ಪಿರಿಟ್ ನಂತಹ ಅಂಶಗಳು ದೇಹಕ್ಕೆ ಬೇಗನೆ ಅಂಟಿಕೊಂಡು ಇಡೀ ದೇಹದ ಸ್ಥಿತಿಯನ್ನೇ ಬದಲಿಸಿ ಅವರ ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬಿಡುಗಡೆಗೂ, ಸ್ಥನಗಳ ಹಾರ್ಮೋನಿಗೂ ಮತ್ತು ಇನ್ನಿತರ ದೇಹದ ಬದಲಾವಣೆಗೆ ಕಾರಣವಾಗಿರುವ ಎಲ್ಲಾ ತೆರನಾದ ಹಾರ್ಮೋನ್ ಬಿಡುಗಡೆಯ ತೊಂದರೆಗೂ ಮತ್ತು ಬಂಜೆತನಕ್ಕೂ ಕಾರಣವಾಗಬಲ್ಲ ಪದಾರ್ಥಗಳಾಗಿವೆ ಹೀಗಾಗಿ ಇಂತಹ ದುಶ್ಚಟಗಳಿಂದ ಆದಷ್ಟು ಮಹಿಳೆಯರನ್ನು ಮುಕ್ತಗೊಳಿಸುವಂತಹ ಕಾರ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವಾಲಯಗಳು ಕಾರ್ಯನಿರ್ವಹಿಸಬೇಕಿದೆ. ಭಾರತೀಯ ನಾಗರಿಕರಾದ ನಾವುಗಳು ಯಾವುದೇ ಕೆಟ್ಟ ಚಟಗಳಿಗೆ ದಾಸರಾಗದೆ ಯಾವುದೇ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ, ಚೈನೀಸ್ ತಿಂಡಿ ತಿನಿಸುಗಳಿಗೆ ಎಡಿಕ್ಟ್ ಆಗದೇ ನಮ್ಮ ದೇಶಿಯ ಪದ್ಧತಿಯ ತಿಂಡಿ ತಿನಿಸುಗಳು, ಉಡುಗೆ ತೊಡುಗೆಯ ಸಂಸ್ಕೃತಿಯ ಜೊತೆಗೆ ಸ್ವದೇಶೀ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ನಮ್ಮ ದೇಶದ ಆದಾಯವನ್ನು ಹೆಚ್ಚಿಸುವುದಲ್ಲದೇ ಆರೋಗ್ಯತವಾದ ದೇಶ ಮತ್ತು ಆರೋಗ್ಯತವಾದ ದೇಹವನ್ನಾಗಿ ಕಾಪಾಡಿಕೊಳ್ಳಬಹುದು. ಭವ್ಯ ಭಾರತದಲ್ಲಿ ಭಿನ್ನವಾಗಿ ಬದುಕೋಣ, ಭವ್ಯ ಭಾರತಕ್ಕೊಂದು ಭಿನ್ನತೆಯ ಭಾವ ತರೋಣ ಬೇರಾವುದೇ ದುಶ್ಚಟಕ್ಕೊಳಗಾಗಿ ದೇಹದ ಖಿನ್ನತೆಗೆ ಬಲಿಯಾಗದಿರೋಣ ಸಹಸ್ರಾರು ವರ್ಷಗಳಿರುವ ಭಾರತದ ಇತಿಹಾಸದಂತೆ ಒಳ್ಳೆಯ ತಿಂಡಿ ತಿನಿಸು ಆಹಾರ ಪದ್ಧತಿಯನ್ನು ಅನುಸರಿಸಿ ಧ್ಯಾನ ಯೋಗಾಸನಗಳೊಂದಿಗೆ ನೂರಾರು ವರ್ಷಗಳಷ್ಟು ಬದುಕೋಣ ನಶಾ ಮುಕ್ತ ಭಾರತ-ಪರಿಸರಯುಕ್ತ ಭಾರತವೆಂದು ವಿಶ್ವಕ್ಕೆ ಮಾದರಿಯಾಗೋಣ.
- ಹನುಮಂತ ದಾಸರ ಹೊಗರನಾಳ.
ಮೊ:9945246234.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...