ಶನಿವಾರ, ಜುಲೈ 31, 2021

ದಿಟ್ಟ ಹೆಜ್ಜೆ (ನ್ಯಾನೋ ಕತೆ) - ಭವ್ಯ ಟಿ.ಎಸ್. ಶಿಕ್ಷಕರು. ಹೊಸನಗರ, ಶಿವಮೊಗ್ಗ.

ದಿಟ್ಟ ಹೆಜ್ಜೆ  (ನ್ಯಾನೋ ಕತೆ).

ವೈದೇಹಿ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಪ್ರತಿಭಾವಂತ ಹುಡುಗಿ.ಪದವಿ ಮುಗಿಸಿ ಉತ್ತಮ ಹುದ್ದೆಗೆ ಆಯ್ಕೆಯಾಗಿ ಕುಟುಂಬಕ್ಕೆ ಆಧಾರವಾದಳು.
ಸಹೋದರನನ್ನು ಓದಿಸುತ್ತಿದ್ದಳು.ಆಗಲೇ ೨೫ಕ್ಕೆ ಕಾಲಿಟ್ಟಿದ್ದ ಮಗಳ ಮದುವೆಯ ಚಿಂತೆ ತಂದೆಗೆ.ಹುದ್ದೆ ಯಲ್ಲಿದ್ದ ಸ್ಫುರದ್ರೂಪಿ ಹುಡುಗನ ಸಂಬಂಧ ಹುಡುಕಿ
ಬಂದಿತ್ತು.ಪರಿಚಯ ಆಪ್ತತೆ ಬೆಳೆಸಿದ ಹುಡುಗ ಮತ್ತು 
ಅವನ ಮನೆಯವರು ವೈದೇಹಿಯನ್ನು ವೈಯಕ್ತಿಕ 
ಭೇಟಿಗಾಗಿ ಒಂದು ಸ್ಥಳಕ್ಕೆ ಕರೆದರು.ಮದುವೆಯ ನಂತರ ತವರು ಮನೆಯರೊಂದಿಗೆ ಯಾವುದೇ
ವ್ಯವಹಾರ ಇರಕೂಡದು, ಸಂಬಾವನೆಯನ್ನು ಸಂಪೂರ್ಣ ನಮಗೆ ಕೊಡಬೇಕು ಎಂದರು.
ಮೌನವಾಗಿ ಅಲ್ಲಿಂದ ಮನೆಗೆ ಬಂದ ವೈದೇಹಿ
ಮರುದಿನ ತಂದೆಯ ಮೂಲಕ ಸಂಬಂಧದ ನಿರಾಕರಣೆ
ತಿಳಿಸಿದ್ದಳು.ವೈದೇಹಿಯ ಮದುವೆ ೫ವರ್ಷ ತಡವಾಯಿತು. ಆದರೆ ಆಕೆ ಈಗ ಜಿಲ್ಲಾಧಿಕಾರಿ.ಆಕೆಯ
ತವರನ್ನು ತನ್ನವರಂತೆ ಕಾಣುತ್ತಿದ್ದ ಬಡ ಕುಟುಂಬದ
ವ್ಯಕ್ತಿ ಆಕೆಯ ಜೀವನ ಸಂಗಾತಿ.

- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ,
ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶುಕ್ರವಾರ, ಜುಲೈ 30, 2021

ಸರ್ಕಾರಿ ಶಾಲೆ ಅಳಿವು ಉಳಿವು (ಲೇಖನ) - ಶ್ರೀ ವೀರಂತರೆಡ್ಡಿ ಜಂಪಾ, ಹುಮನಾಬಾದ.

ಸರ್ಕಾರಿ ಶಾಲೆ ಅಳಿವು ಉಳಿವು
(ಹಣತೆ ಕವಿ ಬಳಗ ಮಹಾರಾಷ್ಟ್ರ ಘಟಕದ ಲೇಖನ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ಲೇಖನ)

ವನರಾಜ ಸಿಂಹ ಸ್ವಲ್ಪ ದೂರ ಸಾಗಿದ ಮೇಲೆ ಒಂದು ಕ್ಷಣ ನಿಂತು,ಹಿಂದಿರುಗಿ ತಾನು ಸಾಗಿ ಬಂದ ದಾರಿಯನ್ನು ಗಂಭೀರವಾಗಿ ಅವಲೋಕಿಸಿ ಮತ್ತೆ ಮುಂದೆ ಸಾಗುತ್ತದೆ. ಅದಕ್ಕೆ ಸಿಂಹಾವಲೋಕನವೆನ್ನುತ್ತಾರೆ.ಹೊಸ ದಾರಿಗೆ ಹೆಜ್ಜೆ ಹಾಕಲಿರುವ ನಾವು ಸಾಗಿ ಬಂದ ದಾರಿಯನ್ನು ಸಿಂಹಾವಲೋಕನ ಮಾಡುವುದೆಂದೇ ನನ್ನ ಅಭಿಪ್ರಾಯ..

ಶಿಕ್ಷಣವೆಂಬ ಶಬ್ದ ನಮ್ಮ ಮನಸ್ಸಿನಲ್ಲಿ ಮೂಡುತ್ತಿದ್ದಂತೆಯೇ ಅದರ ಹಿಂದೆಯೇ ಪೂರಕವಾಗಿ ಬರುವ ಇನ್ನೊಂದು ಶಬ್ದವೆಂದರೆ ಅದು ಶಿಕ್ಷಕ.ಶಿಕ್ಷಣದ ಅರ್ಥವನ್ನು ಅರ್ಥೈಸುವುದು ಅಷ್ಟು ಸುಲಭವಾದುದಲ್ಲ.ಯಾಕೆಂದರೆ ಶಿಕ್ಷಣದ ಕ್ಷಿತಿಜವು ಇಂದು ವಿಶಾಲವಾಗಿದ್ದು ಅದು ಜೀವನದ ಎಲ್ಲ ರಂಗಗಳಲ್ಲಿ ಪ್ರವೇಶಿಸಿದೆ.ಅನೇಕ ಶಿಕ್ಷಣ ತಜ್ಞರು, ಮನಶಾಸ್ತ್ರಜ್ಞರು ನೀಡಿದ ಶಿಕ್ಷಣದ ವ್ಯಾಖ್ಯಾನಗಳು ಅವರವರ ಅನಿಸಿಕೆಗಳು ಆಯಾ ಕಾಲದ ಅವಶ್ಯಕತೆ ಹಾಗೂ ಮೌಲ್ಯ ಗಳಿಗೆ ಅನುಗುಣವಾಗಿರುತ್ತದೆ.ಕಾಲ ಬದಲಾದಂತೆ ಮಾನವನ ಮೌಲ್ಯಗಳು, ಆಶೋತ್ತರಗಳು ಬದಲಾಗುತ್ತ ಶಿಕ್ಷಣದ ಅರ್ಥ ಮತ್ತು ವ್ಯಾಪ್ತಿ ವಿಶಾಲವಾಗುತ್ತ ಸಾಗುತ್ತಿದೆ.ಹೊಸ ಹೊಸ ಅನ್ವೇಷಣೆಗಳಿಂದ ಹೊಸ ದೃಷ್ಟಿ ಬೆಳೆಯುತ್ತಿದೆ..

ನಾವು ಕಲಿಯುವ ಸಂದರ್ಭದಲ್ಲಿ " ಛಡಿ ಛಂ ಛಂ..ವಿದ್ಯಾ ಘಂ ಘಂ..ಅಲ್ಲಿ ಉತ್ತಮ ಕಲಿಕೆಯಾಗುತಿತ್ತು.

"ಕೃತಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಬಡಿದು ಬುದ್ದಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯ..!
ತ್ರೇತಾಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಬಡಿದು,ಬಯ್ದು ಬುದ್ದಿಯ ಕಲಿಸಿದೊಡೆ ಆಗಲಿಮಹಾಪ್ರಸಾದವೆಂದನಯ್ಯ..!!
ದ್ವಾಪಾರಯುಗದಲ್ಲಿ ಶ್ರೀಗುರು ಶಿಷ್ಯಂಗೆ, ಝಂಕಿಸಿ ಬುದ್ದಿಯ  ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯ..!!
ಕಲಿಯುಗದಲ್ಲಿ ಶ್ರೀಗುರು, ಶಿಷ್ಯಂಗೆ ಕೈ ಮುಗಿದು ಬುದ್ದಿಯ ಕಲಿಸಿದೊಡೆ ಆಗಲಿ ಮಹಾಪ್ರಸಾದವೆಂದನಯ್ಯಗುಹೇಶ್ವರಾ..
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾನು ಬೆರಗಾದೆನು..
ಎಂದು ಶರಣರು ಹೇಳಿದ ಮಾತು  ಸರ್ವಕಾಲಿಕ ಸತ್ಯವಾಗಿದೆ.ಇಂದು ಈ ವಿಷಯ ಎಲ್ಲರೂ ಯೋಚಿಸಬೇಕಾಗಿದೆ.

ಆಗಿನ ಪಠ್ಯದಲ್ಲಿ ಮೌಲ್ಯ ಶಿಕ್ಷಣ, ಬದುಕು ಕಟ್ಟಿಕೊಳ್ಳುವ ಕಲೆ ಇನ್ನಿತರ ವಿಷಯಗಳು ಹಾಸು ಹೊಕ್ಕಾಗಿದ್ದವು.ಆದರೆ ಈಗ....? ?
"ಮನುಷ್ಯ ಆಕಾಶದಲ್ಲಿ ಹಕ್ಕಿಯಂತೆ ಹಾರಲು ಕಲಿತ.ಸಮುದ್ರದಲ್ಲಿ ಮೀನಿನಂತೆ ಈಜಲು ಕಲಿತ.
ಆದರೆ ಸಮಾಜದಲ್ಲಿ ಮನುಷ್ಯನಂತೆ ಬದುಕಲು ಕಲಿಯಲೇ ಇಲ್ಲ" ವೆಂದು ಡಾ: ಎಸ್ ರಾಧಾಕೃಷ್ಣನ್ ಹೇಳಿದ್ದಾರೆ.ನಮಗೆ ಇಲ್ಲಿ ಮೌಲ್ಯ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ.

ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು, ಆದರೆ ಮೌಲ್ಯ ಕುಸಿಯಬಾರದಲ್ವ... ಹೊಂದಾಣಿಕೆ ಮಾಡಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು.

*ಹಳೆಯ ಮತದ ಕೊಳೆಯಲ್ಲಿ ಹೊಸ ಮತಿಯ ಹೊಳೆಯಲ್ಲಿ ಕೊಚ್ಚಿ ಹೋಗಲಿ,ಬರಲಿ ವಿಜ್ಞಾನದ ಬುದ್ದಿ......* ರಾಷ್ಟ್ರ ಕವಿ ಕುವೆಂಪು ರವರ ಅಮರವಾಣಿಯಂತೆ,ಶಿಕ್ಷಣ ಕ್ಷೇತ್ರವನ್ನಾವರಿಸಿದ ಹಳೆಯ ಅಭಿಪ್ರಾಯಗಳ ಕಳೆಯಲ್ಲವೂ ಮನೋವೈಜ್ಞಾನಿಕ ದೃಷ್ಟಿಯಿಂದ ಹೊಸಮತಿಯ ಹೊಳೆಯಲ್ಲಿ ಸಾಗಬೇಕಾಗಿದೆ.

ಮಗುವಿನ ವಿಕಾಸದ ಕ್ರಿಯೆಯಲ್ಲಿ ಬೋಧನಾ ಸೂತ್ರ ಹಿಡಿದಿರುವ ಶಿಕ್ಷಕನ ಪಾತ್ರ ಬಹಳ ಗುರುತರವಾದದ್ದು. ಶಿಕ್ಷಣವೇ ಬಾಳಿನ ಬೆಳಕು.ಆ ಬೆಳಕನ್ನು ಶಿಕ್ಷಕರು ಮಗುವಿಗೆ ಒದಗಿಸಿಕೊಡುವಲ್ಲಿ ವಿಫಲವಾದರೆ ಮಗುವಿನ ಭಾವಿ ಭವಿಷ್ಯವನ್ನು ಅಜ್ಞಾನದ ಬಾವಿಗೆ ನೂಕಿದಂತೆಯೇ ಸರಿ.ಹಾಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಿಕ್ಷಕರದ್ದಾಗಬೇಕು..

ಒಂದು ಉತ್ತಮ ಶಾಲೆಯಾಗಬೇಕಾದರೆ ವಾಚನಾಲಯ, ಪ್ರಯೋಗಾಲಯ,ದೃಕ್ ಶ್ರವಣದಿಂದ ಮಕ್ಕಳು ನೋಡಿ ಕಲಿಯುವಂತೆ ಪ್ರೊಜೆಕ್ಟರಗಳು,ವಿಸಿಡಿ,ಡಿವಿಡಿ, ಕಂಪ್ಯೂಟರ್ ಗಳು, ಟಿ.ವಿ ಮೊದಲಾದವುಗಳಿದ್ದರೆ ಮಕ್ಕಳಲ್ಲಿ  ಉತ್ತಮ ಕಲಿಕೆಯಾಗಿ ಸರ್ವಾಂಗೀಣ ಉನ್ನತಿಯಾಗುತ್ತದೆಂದು ಎಲ್ಲೋ ಕೇಳಿದ್ದೆ...ಓದಿದ್ದೆ...ಅದರೆ ಇಂದು ಪ್ರತಿಯೊಂದು ಸರ್ಕಾರಿ ಶಾಲೆಯಲ್ಲಿ ಸರಕಾರ ಇವುಗಳ ವ್ಯವಸ್ಥೆ ಮಾಡಿದೆ.ಅವುಗಳ ಬಳಕೆ ಹಾಗೂ ಅನುಷ್ಠಾನ ಉತ್ತಮೀಕರಿಸಿದರೆ ಮಕ್ಕಳ ಕಲಿಕೆ ಉತ್ತಮವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಎರಡು ವರ್ಷದಿಂದ ಕಾಡುತ್ತಿರುವ ಈ ಕೊರೋನಾ ಮಹಾ ಮಾರಿ ಯಿಂದ ಖಾಸಗಿ ಶಾಲೆಗಳು ನಡೆಯದೆ ಪಾಲಕರಲ್ಲಿ ಫೀ ವಸೂಲಿ ಮಾಡುತ್ತಿರುವುದರಿಂದ  ಸರಕಾರಿ ಶಾಲೆಗಳಲ್ಲಿನ ಉತ್ತಮ ಕಲಿಕಾ ವ್ಯವಸ್ಥೆಯಿಂದ ಪಾಲಕರು ಸಹಜವಾಗಿ ಸರಕಾರಿ ಶಾಲೆಳಗತ್ತ ಮುಖಮಾಡಿ ತಮ್ಮ ಮಕ್ಕಳಿಗೆ ದಾಖಲಿಸುತ್ತಿದ್ದಾರೆ.ಇದು ಉತ್ತಮ ಬೆಳವಣಿಗೆಯಲ್ಲವೇ..

ಇಲ್ಲಿ ಶಿಕ್ಷಕ ತನ್ನ ವೃತ್ತಿಯನ್ನು ತುಂಬು ಗೌರವದಿಂದ ಕಂಡು  ಕರ್ತವ್ಯಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು.
 
ಜೊತೆಗೆ ಪಾಲಕರು, ಪೋಷಕರು, ಸಮಾಜ ಸಂಘಟಕರು ಮಗುವಿನ ಬಗ್ಗೆ ಭಾವಿ ಕುಡಿಗಳ ಬಗ್ಗೆ ಆಸಕ್ತಿ ಹೊಂದಿದ್ದಾಗ ಮಾತ್ರ ಬರುವ ದಿನಗಳು ಸುಂದರವಾಗಿರಲು ಸಾಧ್ಯ.
ಅದಲ್ಲದೇ ನಮ್ಮ ಸರ್ಕಾರಿ ಶಾಲೆಗಳ ಅಳಿವು ಉಳಿವು ನಮ್ಮ ಕೈಯಲ್ಲಿಯೇ ಇದೆ ಎಂದರೆ ತಪ್ಪಾಗಲಾರದು.

 - ವೀರಂತರೆಡ್ಡಿ ಜಂಪಾ
ಹುಮನಾಬಾದ.ಜಿ.ಬೀದರ
ಪಿನ್. ಸಂ.೫೮೫೩೩೦.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನ ಗುರು ಮೋಡಿಗಾರ (ಕವನ) - ಡಾ ನಾಗಮಣಿ ಸಿ‌ ಎಂ.

ನನ್ನ ಗುರು ಮೋಡಿಗಾರ
ನನ್ನ ಗುರು ಮೋಡಿಗಾರ ನುಡಿದರೆ ಮುತ್ತು ಪೋಣಿಸಿದಂತೆ
ಭೇಧ ಭಾವ ಅರಿಯದ ಮುಗ್ಧ
 ನೀಲಿ ಅಂಗಿಯ ಬಂಡಾಯಗಾರ
ನಮ್ಮ ಜನಗಳ ನೋವ ಎಚ್ಚರಿಸಿದವ
 ಹೆಣ್ಣುಮಕ್ಕಳಿಗೆ ತಾಯ್ತನವ ತೋರಿದವ
ಶೋಷಿತರ ಅವಮಾನಿತರ ಪ್ರಾಣಮಿತ್ರ
ಆನ ಮರುಳ ಕಂಡು ಮುಗ್ಧತೆಯಿಂದ ನಕ್ಕವ
ತನ್ನೊಡಲ ಕರುಳು ಬಳ್ಳಿಯ ಸಂಬಂಧ ಬೆಸೆದ, 
ತನ್ನವಲ್ಲದ ಕೂಸುಗಳ ಜೋಗುಳವಾಡಿದ ಮೋಡಿಗಾರ 
ವಾತ್ಸಲ್ಯದ ಕರುಣಾಮೂರ್ತಿ  ನನ್ನ ಗುರು ಮೋಡಿಗಾರ.

ತನ್ನವರ ಕುರಿತು ಗದ್ಯಪದ್ಯಗಳ ಬರೆದು
ತನ್ನವರ ಶೋಷಣೆಗೆ ಬರವಣಿಗೆಯ ಹಾದಿ ತೋರಿ
ದಲಿತ ಬಂಡಾಯಕ್ಕೆ ಹೊಸ ದಾರಿ ತೋರಿದ ಮೋಡಿಗಾರ
ಮಾರ್ಕ್ಸ ಲೋಹಿಯಾ ಗಾಂಧಿ ಚಿಂತನೆ
ಬುದ್ಧ ಬಸವ ಅಂಬೇಡ್ಕರರ ಬಿಗಿದಪ್ಪಿದ
ಮೌನ ಗುಣದ ನಿಜ ಮೋಡಿಗಾರ

ಎಲ್ಲಿ ಹೋಯಿತು ಮೋಡಿಗಾರನ ಕರುಳಬಳ್ಳಿ
ಕರೆದರೂ ಬಾರದು, ಮರೆಯಲೂ ಆಗದು
ಹಣತೆಯಲ್ಲಿನ ತೈಲ ಬತ್ತಿಯೊಂದಿಗೆ ಬೆರೆತು
ಭಾವನೆಯ ಕತ್ತಲೆಯು ಕಳಿಯುತ್ತಾ
ಗುರುವಿನ ಹಣತೆಯಾ ಜ್ಯೋತಿ ಮೋಡಿಯಾಯಿತು.

ಜ್ಯೋತಿಯೆನ್ನುವ ಜೀವ ಜಾರಿ ಹೋಯಿತು
ಬತ್ತಿಯೇನ್ನುವ ಭಾವನೆ ಮುಳುಗಿ ಮುಗಿಯಿತು.
ದೇಹವೆನ್ನುವ ಹಣತೆ ಒಡೆದು ಮಣ್ಣುಗೂಡಿತು.
ಇನ್ನು ಜ್ಯೋತಿಯು ಇಲ್ಲ ಹಣತೆಯೂ ಇಲ್ಲ 
ಬತ್ತಿಯೆನ್ನುವ ಭಾವನೆ ಹತ್ತಿ ಉರಿದ ನೆನಪು ಮಾತ್ರ
ಉಳಿಸಿದ ಮೋಡಿಗಾರ ನನ್ನ ಗುರು ನಿಜದ ಮೋಡಿಗಾರ.
- ಡಾ. ನಾಗಮಣಿ ಸಿ.ಎಂ.
ಸಂಯೋಜಕರು, ಕನ್ನಡ ವಿಭಾಗ.
ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯ, ಕೋಲಾರ.

ರಾಜ್ಯ ಮಟ್ಟದ ಕರುನಾಡು ಆದರ್ಶ ಗುರು ಪ್ರಶಸ್ತಿ ಪುರಸ್ಕೃತರಾದ ಡಾ ನಾಗಮಣಿ ಸಿ ‌ಎಂ ರವರು ತಮ್ಮ ಗುರುಗಳಾದ ಡಾ ವಿ ನಾಗರಾಜ್ ಸರ್ ರವರ ಕುರಿತು ರಚಿಸಿರುವ 'ನನ್ನ ಗುರು' ಕವನ‌ ಸಂಕಲನದಿಂದ ಆಯ್ದ ಪದ್ಯ ನಮ್ಮ ಓದುಗರಿಗಾಗಿ.... ಇವರ ನನ್ನ ಗುರು ಕವನ ಸಂಕಲನ ಸಧ್ಯದಲ್ಲಿಯೇ ಬಿಡುಗಡೆಯಾಗಲಿದ್ದು ಇದಕ್ಕಾಗಿ ವಿಚಾರ ಮಂಟಪ ಸಾಹಿತ್ಯ ಪತ್ರಿಕಾ ಬಳಗದ ವತಿಯಿಂದ ಮಾನ್ಯರಿಗೆ ಅಭಿನಂದನೆಗಳು 💐💐 



( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನಿಕರ (ಕವಿತೆ) - ಶ್ರೀ ಸಿದ್ಧರಾಮ ಸಿ ಸರಸಂಬಿ ಕಲಬುರ್ಗಿ.

ಕನಿಕರ

ಕನಿಕರ ಇದೆಯಾ ನಿಮಗೆ ?
ಕೊರೊನಾ ಕಾಲಡಿ ಸಿಲುಕಿದವರ
ಕಷ್ಟದಲ್ಲಿ ಕಣ್ಣಿರಿಡುವವರ
ಬಿರುಗಾಳಿಗೆ ನರಳಿದವರ
ನರನರಳಿ ಹೊರಳುವವರ
ಹೊರಳಿ ಮೇಲೆಳಲಾಗದವರ ಬಗ್ಗೆ.

ಕನಿಕರ ಇದೆಯಾ ನಿಮಗೆ?
ಆಸೆಗೆ ಹಣ ನೀಡುವವರ
ದುಷ್ಟರ ದುರಾಸೆಗೆ ಬಲಿಯಾದವರ
ಮೊಸದ ಸುಳಿಗೆ ಸಿಲುಕಿದವರ
ನಿರಾಸೆಯಿಂದ ತಿರುಗುವವರ
ತಿರುಗಿದರು ಜೀವ ಉಳಿಯದವರ ಬಗ್ಗೆ

ಕನಿಕರ ಇದೆಯಾ ನಿಮಗೆ?
ಮಡದಿ ಮಕ್ಕಳ ಹೊತ್ತು ಭಾರ
ಅನಿವಾರ್ಯವಾಗಿ ನಡೆದರು ದೂರ
ನಿರುದ್ಯೋಗ ಭೂತ ಬಡಿದವರ
ನೆಲೆ ಇಲ್ಲದೆ ಅಲೆಯುವವರ
ಅಲೆದರೂ ನೆಲೆ ಸಿಗದವರ ಬಗ್ಗೆ.

ಕನಿಕರ ಇದೆಯಾ ನಿಮಗೆ? 
ಬಡತನದಿ ಬೆಂದವರ
ಈ ನಾಡಲಿ ನೊಂದವರ
ಅನ್ನವಿಲ್ಲದೆ ಹಸಿದವರ
ಹಸಿದು ಉಸಿರಿಲ್ಲದವರ
ಉಸಿರಿದ್ಧು ನರಸತ್ತವರ ಬಗ್ಗೆ.
     ಇದೆಯಾ , ಸ್ವಾಮಿ ನಿಮಗೆ ,ಕನಿ...ಕರ ?

- ಸಿದ್ಧರಾಮ ಸಿ ಸರಸಂಬಿ. ಕಲಬುರ್ಗಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹಗುರಾದ ಮುಗಿಲು (ಕವಿತೆ) - ಎಂ ಪಿ ಹನ್ಸಿನಿ.

ಹಗುರಾದ ಮುಗಿಲು
ಉದಧಿಯಲ್ಲಿ ಮತ್ಸ್ಯದಂತೆ ಈಜುವ ಅಭ್ರಗಳೆ 
ನೀವೆಷ್ಟು ಮನೋಹರ
ಮುಂಜಾನೆಯ ಮುಗಿಲು ಕವಿದ ವಾತಾವರಣ 
ಎಂಥ ವೈಭವ
ಇಂಪಾದ ಸಂಜೆಯ ದಿನಕರನ ಬಣ್ಣದಲ್ಲಿ    ಕಿರಣಗಳು ರಮಣೀಯ
ಶಶಿಧರನ ನಾಚಿಕೆಯನ್ನು ಅಡಗಾಣಿಪ ಮೇಘ  
ನಿನ್ನ ಝೇಂಕಾರ
ಅಂಬುಧರ ಮುಂಗಾರು ಹನಿಗಳನ್ನು ಸುರಿಸಿದಾಗ
ಮನಸ್ಸಿಗೆ ಆತಂಕವೂ ನಿಜಾ!
ಮನಃಶಾಂತಿಯು ನಿಜಾ!

- ಎಂ.ಪಿ.ಹನ್ಸಿನಿ ೧೦ ನೇ ತರಗತಿಯ ವಿದ್ಯಾರ್ಥಿ (ದಿಯಾ ಅಕಾಡೆಮಿ ಆಫ್ ಲರ್ನಿಂಗ್) ಸ್ಕೂಲ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾರತದ ವಿಜ್ಞಾನಿಗಳಿಗೆ ಸವಾಲಾಗಿತ್ತೆ ಕೊರೋನ ವೈರಸ್? (ಲೇಖನ) - ಜಯಶ್ರೀ. ಆರ್. ಉಪನ್ಯಾಸಕರು, ಕೊಳ್ಳೇಗಾಲ.

ಭಾರತದ ವಿಜ್ಞಾನಿಗಳಿಗೆ ಸವಾಲಾಗಿತ್ತೆ ಕೊರೋನ ವೈರಸ್?

ಸಹಸ್ರಾರು ವರ್ಷಗಳ ಮೊದಲೇ ಜಗತ್ತಿಗೆ ಅದ್ಭುತ ವಿಜ್ಞಾನವನ್ನು ಭಾರತ ಬೋಧಿಸಿತ್ತು .ಸನಾತನ ಧರ್ಮಗಳು ನಮ್ಮ ದೇಶದಲ್ಲಿ ವೈಜ್ಞಾನಿಕವಾಗಿ ಬೆಳೆದು ಬಂದವು. ಯಾವುದೇ ರೋಗಗಳು ಜನ್ಮ ತಾಳಿದರೂ ವಿಜ್ಞಾನಕ್ಕೆ ಸವಾಲಾಗೆ ಇರುತ್ತದೆ.ಇಷ್ಟಕ್ಕೂ ನಮ್ಮ ದೇಶದಲ್ಲಿ ನಾವು ಕಂಡಂತಹ ರೋಗಗಳು ಬೇರೆ ದೇಶಗಳಿಂದ ಬಂದಂತಹವೇ ಆಗಿವೆ‌. ಕಾರಣ ಅಲ್ಲಿನ ಜೀವನವಶೈಲಿಯೇ ಆಗಿದೆ. ಇನ್ನೂ ಹೆಚ್ಚು ಪ್ರಜ್ಞಾವಂತರಾಗಿ ಆಲೋಚಿಸಿದರೆ, ಇಂದಿನ ಕೊರೋನ ವೈರಸ್ ಜೈವಿಕ ಅಸ್ತ್ರ ಎನ್ನಬಹುದು.ಅಭಿವೃದ್ಧಿ ರಾಷ್ಟ್ರ ಗಳ ಅಧಃಪತನಕ್ಕೆ ರೂಪಿಸಿರುವ ಸಂಚು ಆಗಿರಬಹುದು.ಬಹು ರಾಷ್ಟ್ರ ಗಳ ವಿಜ್ಞಾನಿಗಳಿಗೆ ಸವಾಲಾಗಿದ್ದ ಕೊರೋನ ವೈರಸ್ಗೆ ಬ್ರಹ್ಮಾಸ್ತ್ರ ಭಾರತದಲ್ಲಿ ಸಿದ್ದವಾಗೆಬಿಟ್ಟಿತು. ಕೊರೋನ ಜಾಗತಿಕ ಮಾರಕ ಕಾಯಿಲೆಯಾಗಿ ಲಕ್ಷಾಂತರ ಜನರ ಮರಣ ಮೃದಂಗ ಬಾರಿಸಿದ್ದು, ಇನ್ನು  ದಶಕ ಕಳೆದರು ಮುಕ್ತಿ ದೊರೆಯದೆಂದು ಹಲವಾರು ದೇಶಗಳು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಕಾಯಿಲೆಗಳು ಹೊಸತೇನು ಅಲ್ಲ. ಒಂದಲ್ಲ ಒಂದು ಕಾಯಿಲೆ ಸೃಷ್ಟಿಯಾಗುವುದು ಅವುಗಳಿಂದ ಉಂಟಾಗಬಹುದಾದ ಮೃತ್ಯುವನ್ನು ತಡೆಗಟ್ಟಲು ಪ್ರತಿ ದೇಶದಲ್ಲೂ ವಿಜ್ಞಾನಿಗಳು ಶ್ರಮವಹಿಸುತ್ತಲೆ ಇದ್ದಾರೆ. ಸಿಡುಬು, ಪೋಲಿಯೋ, ಧನುರ್ವಾಯು ಇಂತಹ ಮಾರಕ ರೋಗಗಳು ವಿಜ್ಞಾನಿಗಳ ಸತತ ಪ್ರಯತ್ನ, ಲಸಿಕೆಗಳ ಗುಣಮಟ್ಟದಿಂದ ಇಂದು ಈ ಕಾಯಿಲೆಗಳಲ್ಲಿ ಕೆಲವು ಶೂನ್ಯಕ್ಕೆ ಇಳಿದಿದೆ. ಇನ್ನೂ ಕೆಲವು ತೀರಾ ಕಡಿಮೆ ಪ್ರಮಾಣದಲ್ಲಿ ಬಾಧಿಸುತ್ತಿವೆ,ಪ್ರತಿ ಬಾರಿಯೂ ರೋಗಗಳು ಸಾಂಕ್ರಾಮಿಕ ಲಕ್ಷಣಗಳಿಂದ ಮನುಕುಲಕ್ಕೆ ಕಂಟಕವಾದಾಗ ಲಸಿಕೆ ಕಂಡು ಹಿಡಿಯುವುದು ಜಾಗತಿಕ ಆರೋಗ್ಯದ  ವಿಜಯವಾಗಿದೆ. ಲಸಿಕೆ ಯಿಂದ ರೋಗ ಸಂಪೂರ್ಣ ನಾಶವಾಗುವುದಿಲ್ಲ ರೋಗ ನಿರೋಧಕತೆ ಹೆಚ್ಚಿಸಿ ಉಲ್ಬಣವಾಗುವುದನ್ನು ತಪ್ಪಿಸುತ್ತದೆ.ಇಂತಹ ರೋಗ-ರುಜಿನಗಳು ತಾಂಡವವಾಡಲು ಕಾರಣ ಜಾಗತೀಕರಣ.ಬೇರೆ ದೇಶಗಳಿಂದ ಸೋಂಕು ನಮ್ಮ ದೇಶದೊಳಗೆ ನುಸುಳಲು  ಈ ಜಾಗತೀಕರಣದ ಸೋಗೆ ಮಾರ್ಗವಾಗಿದೆ.ಇಂದು ಮಾನವನ ಬಹುದೊಡ್ಡ ಬೇಡಿಕೆ ರೋಗಗಳ ನಿರ್ಮೂಲನೆ  ಈ  ಆಂದೋಲನಕ್ಕೆ ಲಸಿಕೆಯೆ ನಾಂದಿಯಾಗಿದೆ,ರೋಗಗಳ ವಿರುದ್ಧ ರಕ್ಷಣೆ ಪಡೆಯಲು ಲಸಿಕೆಗಳನ್ನು ಉಪಯೋಗಿಸಬೇಕು ಇದು ಮಾನವ ಕುಲದ ಆರೋಗ್ಯದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಸಾರ್ವಜನಿಕ ಆರೋಗ್ಯ ಕಾರ್ಯಕ್ರಮಗಳು ಇದರ ಕುರಿತು ಜಾಗೃತಿ ಮೂಡಿಸುತ್ತಲೇ ಇವೆ. ಆದರೂ ಎಷ್ಟೋ ವಿದ್ಯಾವಂತ ನಾಗರೀಕರು ಕೊರೋನ ಲಸಿಕೆ ಪಡೆಯಲು ನಿರಾಕರಿಸಿದರು. ಕೋಟ್ಯಂತರ ಜೀವ ರಕ್ಷಕಕ್ಕೆ ಬೆಂಬಲ ನೀಡದೇ ಮೂರ್ಖತನ ಪ್ರದರ್ಶಿಸಿದ್ದಾರೆ. ಲಸಿಕೆಗಳು ರಕ್ತದಲ್ಲಿ ಆಂಟಿಬಾಡಿ ತಯಾರಿಕೆಗೆ ಪ್ರಚೋದನೆ ನೀಡುತ್ತವೆ. ವ್ಯಕ್ತಿ ರೋಗದಿಂದ ನರಳದೆ ಇರುವಂತೆ ಮಾಡುತ್ತದೆ. ಲಸಿಕೆಯಿಂದ ಕೆಲವರಿಗೆ ಅಲ್ಪ ಪ್ರಮಾಣದಲ್ಲಿ ತೊಂದರೆಯಾಗಬಹುದು, ಆದರೆ ಆ ಲಕ್ಷಣಗಳು ಲಸಿಕೆಯ ಕಾರ್ಯವೈಖರಿಯನ್ನು ಸೂಚಿಸುತ್ತದೆ. ಕೃತಕ ರೋಗ ಪ್ರತಿಬಂಧಕ ಶಕ್ತಿಯು ಹೆಚ್ಚುತ್ತದೆ, ಲಸಿಕೆ ತಯಾರಾಗುವ ಮೊದಲೇ ವಿಜ್ಞಾನಿಗಳು ಯಾವ ರೋಗಾಣುವಿನ ವಿರುದ್ಧ ಲಸಿಕೆ ಕಂಡು ಹಿಡಿಯಬೇಕೋ  ಆ ರೋಗಾಣುವನ್ನು ಅಧ್ಯಯನಕ್ಕೆ ಒಳಪಡಿಸುತ್ತಾರೆ. ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಕೊಂದು ಇಲ್ಲವೆ ದುರ್ಬಲೀಕರಿಸಿ ಲಸಿಕೆ ತಯಾರಿಸುತ್ತಾರೆ.ಪ್ರಯೋಗವನ್ನು ಪ್ರಾಣಿಗಳಿಗೆ ಮಾಡಿ ನಿಜವಾದ ರೋಗಾಣುವಿಗೆ ಒಡ್ಡಿ ಅದಕ್ಕೆ ರೋಗ ನಿರೋಧಕ ಶಕ್ತಿ ಬಂದಿದೆಯೇ ಎಂದು ಪರಿಶೀಲಿಸಿ ನಂತರ ಮಾನವರ ಮೇಲೆ ಪ್ರಯೋಗಿಸುತ್ತಾರೆ. ಇದರರ್ಥ ರೋಗಕಾರಕ ಸೂಕ್ಷ್ಮ ಜೀವಿಗಳನ್ನು ಕೊಂದು,ಇಲ್ಲವೇ ದುರ್ಬಲೀಕರಿಸಿ ತಯಾರಿಸುವ ಔಷಧಿಯೇ ಲಸಿಕೆ. ಇದು ದೇಹದೊಳಗೆ 'ಪ್ರತಿ ಕಾಯ'ಸೃಷ್ಟಿಸಿ ರಕ್ಷಣೆ ಒದಗಿಸುತ್ತದೆ. ಪ್ರಾಣಿ ಗಳ ಮೇಲಿನ ಪ್ರಯೋಗ ಸಫಲ ವಾದರೆ ಮಾತ್ರ ಆರೋಗ್ಯವಂತ ವ್ಯಕ್ತಿ ಗಳ ಮೇಲೆ ಸಮ್ಮತಿ ಪಡೆದು ಲಸಿಕೆ ಪರೀಕ್ಷಿಸುವುದು. ಇದು ಕನಿಷ್ಠ ಮೂರು ಹಂತಗಳ ಬಳಿಕ ಸಾರ್ವಜನಿಕವಾಗಿ ಲಭ್ಯವಾಗುತ್ತದೆ. 
ಲಸಿಕೆಯ ಜನಕ 'ಎಡ್ವರ್ಡ್ ಜೆನ್ನರ್' ಈ ಮಹಾನುಭಾವ ಹುಟ್ಟು ಹಾಕಿದ ಪ್ರಯೋಗವೇ ಲಸಿಕೆ. ಇದರಿಂದ ಜಗತ್ತಿಗೆ ಜೀವಸಂಕುಲ ಉಳಿಸಲು ನೆರವಾಗಿದೆ. ಕೊರೋನ ಲಸಿಕೆ ಯನ್ನು ತುರ್ತಾಗಿ ಬಳಸಿರಬಹುದು, ಆದರೆ ಕಾರ್ಯಕ್ಷಮತೆ ಪರೀಕ್ಷಿಸಲಾಗಿದೆ.ಮಾನವ ಸಂಪನ್ಮೂಲ ದೇಶದ ಅತ್ಯಂತ ದೊಡ್ಡ ಸಂಪತ್ತು, ಅದನ್ನು ಉಳಿಸಿಕೊಳ್ಳಲು ಪ್ರತಿ ದೇಶವು ಪ್ರಯತ್ನಿಸುತ್ತಿವೆ, ಈ ದೇಶ ನಮಗೆ ಸಮಯೋಚಿತವಾಗಿ ಅತ್ಯದ್ಭುತ ಕೊಡುಗೆಯಾಗಿ ಲಸಿಕೆಯನ್ನು  ನೀಡಿದೆ.ಸುರಕ್ಷಿತ ಮಾರ್ಗವನ್ನು ಪಾಲಿಸಲಾಗದ ನಾವು ರೋಗಗಳು ಸೃಷ್ಟಿಯಾಗದಂತೆ  ಬದುಕಲು ಸಾಧ್ಯವಿಲ್ಲ, ಆದರೆ ಬದುಕಿಗಾಗಿ ಲಸಿಕೆ ಪಡೆದು ಸುರಕ್ಷಿತೆಯಿಂದ ಜೀವಿಸೋಣ,ದೇಶವನ್ನು ಬೆಂಬಲಿಸೋಣ, ವಿಜ್ಞಾನಿಗಳನ್ನು ಗೌರವಿಸೋಣ.ಲಸಿಕೆ ಎಲ್ಲರಿಗೂ ಆದಷ್ಟು ಬೇಗ ದೊರೆಯುತ್ತದೆ, ಆಗ ನಮ್ಮ ದೇಶವನ್ನು 'ಕೊರೊನಮುಕ್ತ' ದೇಶವನ್ನಾಗಿ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬ ನಾಗರೀಕನೂ ಕೂಡ ಲಸಿಕೆಯ ಮಹತ್ವವನ್ನು ತಾನು ತಿಳಿದು, ಇತರರಿಗೂ ತಿಳಿಸಬೇಕು.
                
 -   ಜಯಶ್ರೀ. ಆರ್.                             
   ಉಪನ್ಯಾಸಕರು
   ಜೆ.ಎಸ್.ಎಸ್ ನರ್ಸಿಂಗ್ ಕಾಲೇಜು, ಕೊಳ್ಳೇಗಾಲ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಮೂರನೇ ಅವಧಿಯ ಫಲಿತಾಂಶ ಪ್ರಕಟಣೆ.

ವಿಚಾರ ಮಂಟಪ ಪಾಕ್ಷಿಕ ಸ್ಪರ್ಧೆ ಫಲಿತಾಂಶ ಪ್ರಕಟಣೆ.


ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಬರಹಗಾರರಿಗಾಗಿ ಪ್ರತಿ ಹದಿನೈದು ದಿನಕ್ಕೊಮ್ಮೆ ಆ ಅವಧಿಯಲ್ಲಿ ಹೆಚ್ಚು  ವೀಕ್ಷಕರನ್ನು ಗಳಿಸಿದ ಒಬ್ಬ ಕವಿ/ಲೇಖಕರಿಗೆ ವಾರದ ಉತ್ತಮ‌ ಕವಿ/ಬರಹಗಾರರು ಎಂಬ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು ಎಂಬ  ಪ್ರಕಟಣೆ ನೀಡಿದ್ದೇವು. 

ಅದರಂತೆ ಮೂರನೇ ಅವಧಿಯಲ್ಲಿ 
ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇವರ ಬರಹ ದಿನಾಂಕ ೧೫:೦೭:೨೦೨೧ - ೩೦:೦೭:೨೦೨೧ ರ ನಡುವೆ ಅತಿ ಹೆಚ್ಚು ವೀಕ್ಷಕರನ್ನು ಗಳಿಸಿರುವ ಕಾರಣ, ಮಾನ್ಯರಿಗೆ ನಮ್ಮ ವಿಚಾರ ಮಂಟಪ ಪತ್ರಿಕೆಯ ವತಿಯಿಂದ ವಾರದ ಉತ್ತಮ ಬರಹಗಾರರು ಎಂದು ಗುರುತಿಸಿ ಅಭಿನಂಧನಾ ಪತ್ರವನ್ನು ‌ನೀಡಿ ಗೌರವಿಸುತ್ತಿದ್ದೇವೆ.
ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಹಾಗೂ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಸಮಸ್ತ ಪಧಾದಿಕಾರಿಗಳ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐

2021 ನೇ ಸಾಲಿನ ಕರುನಾಡು ಆದರ್ಶ ಗುರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ - ಕರುನಾಡು ಸಾಹಿತ್ಯ ಪರಿಷತ್ತು, ಜಿಲ್ಲಾ ಘಟಕ, ಕೋಲಾರ.

2021 ನೇ ಸಾಲಿನ ಕರುನಾಡು ಆದರ್ಶ ಗುರು ಪ್ರಶಸ್ತಿ ಪ್ರಧಾನ ಕಾರ್ಯಕ್ರಮ.

ಕರುನಾಡು ಸಾಹಿತ್ಯ ಪರಿಷತ್ತು ರಾಜ್ಯ ಘಟಕ ಚಿಕ್ಕಬಳ್ಳಾಪುರದ ವತಿಯಿಂದ ಕೊಡ ಮಾಡುವ ೨೦೨೧ ನೇ ಸಾಲಿನ ಆದರ್ಶ ಗುರು ರಾಜ್ಯ ಮಟ್ಟದ ಪ್ರಶಸ್ತಿಗೆ ಕೋಲಾರದ 
 ಡಾ ನಾಗಮಣಿ ಸಿ ಎಂ 

 ಡಾ ನೇತ್ರಾವತಿ ಕೆ ವಿ

 ಹಾಗೂ ವಿಜಯಪುರದ ಅಮರೇಶ ಎನ್ ಚಿಮ್ಮಲಗಿ  ಹಾಗೂ ಬೀದರ್ ನ ಸಾವಿತ್ರಿ  ಇವರು ಆಯ್ಕೆ ಯಾಗಿರುತ್ತಾರೆ ಎಂದು ಕರುನಾಡು ಸಾಹಿತ್ಯ ಪರಿಷತ್ತ್ ನ ರಾಜ್ಯಾಧ್ಯಾಕ್ಷರಾದ ಶ್ರೀ ಫಯಾಜ್ ಅಹಮದ್ ಖಾನ್, ಹಾಗೂ ಕಾರ್ಯದರ್ಶಿಗಳಾದ ಶ್ರೀ ಕೆ ಎನ್ ಅಕ್ರಂಪಾಷ ರವರು ಪ್ರಕಟಣೆಯಲ್ಲಿತಿಳಿಸಿರುತ್ತಾರೆ.

ಕೋಲಾರ ಜಿಲ್ಲೆಯ  ಪ್ರಶಸ್ತಿ ಪುರಸ್ಕೃತರು ಇಬ್ಬರೂ ಸಹಾ ಕೋಲಾರದ  ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ.

*ಇವರ ಸಾಹಿತ್ಯ ಸೇವೆ,  ಹಲವು ವರ್ಷಗಳ ಭೋಧನಾನುಭವನ,  ವೈಚಾರಿಕ ಹಾಗೂ ಸಮಾಜಮುಖಿ ಕಾರ್ಯಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ಗೌರವಪೂರ್ವಕವಾಗಿ ನೀಡಲಾಗಿದೆ*.ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
ದಿನಾಂಕ 30.07.2021 ರಂದು ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕದ ಪಧಾದಿಕಾರಿಗಳ ಸಮ್ಮುಖದಲ್ಲಿ ಈರ್ವರಿಗೂ ಅಭಿನಂದನಾ ಸನ್ಮಾನ ಹಾಗೂ ಆದರ್ಶ ಗುರು  ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. 

ಕರುನಾಡು ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ವರುಣ್ ರಾಜ್ ಜೀ, ಕಾರ್ಯದರ್ಶಿಗಳಾದ ರಾಜ್ ಕುಮಾರ್ ವಿ, ಸಂಚಾಲಕರಾದ ಸುಧಾಮ ಎಸ್, ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಲಕ್ಷ್ಮೀ ಕೆ ಬಿ, ಸಹ ಸಂಚಾಲಕರಾದ ಶ್ರೀ ಮುತ್ಯಾಲಪ್ಪ ಎಂ ಎನ್ ಸೇರಿದಂತೆ ಎಲ್ಲಾ ಪಧಾದಿಕಾರಿಗಳು ಹಾಗೂ ಕನ್ನಡ ವಿಭಾಗದ ಎಲ್ಲಾ  ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಶಸ್ತಿಪುರಸ್ಕೃತರಿಗೆ ಶುಭಾಶಯಗಳನ್ನು ಹಾಗೂ ಅಭಿನಂದನೆಗಳನ್ನು ಕೋರಿದರು.


ಆದರ್ಶ ಗುರು ಪ್ರಶಸ್ತಿ ಸ್ವೀಕರಿಸಿದ ಡಾ ನಾಗಮಣಿ ಸಿ ‌ಎಂ ಹಾಗೂ ಡಾ ನೇತ್ರಾವತಿ ‌ಕೆ ವಿ ಇವರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ಅಭಿನಂದನೆಗಳು 💐💐



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಚುಟುಕುಗಳು - ಭರತ್ ಕುಮಾರ್ ಆರ್ ಕೊಣನೂರು.

ಚುಟುಕುಗಳು

೧) ಪ್ರೀತಿ ಗೋಸ್ಕರ
ತಂದೆ ತಾಯಿನ ದೊರಮಾಡಬೇಡ
ಒಂದು ದಿನದ ಆಸೆಗೋಸ್ಕರ
ಇಡೀ ಜೀವನವನ್ನೇ ಹಾಳುಮಾಡಿಕೊಳ್ಳಬೇಡ
ಒಂದು ಬಾರಿ ಹಾಳಾದಜೀವನ
ಮತ್ತೆ ಎಂದಿಗೂ ಸಿಗುವುದಿಲ್ಲ
ಇದು ಜೀವನದ ಸತ್ಯ


೨) ವಿದ್ಯೆಯಲ್ಲಿ ಸರಸ್ವತಿಯಾಗಿ
ಗುಣದಲ್ಲಿ ಗುಲಾಬಿಯಾಗಿ
ನಗುವಲ್ಲಿ ತಾವರೆಯಾಗಿ
ಮನದಲ್ಲಿ ಮಲ್ಲಿಗೆಯಾಗಿ
ನಗುನಗುತ ಇರು ನೀ
ಗುರುವಿನ ಗುಲಾಮನಾಗಿ

೩) ಮನುಷ್ಯ ತಾಯಿ ಗರ್ಭದಲ್ಲಿ ಇದ್ದಾಗ
ಅವನಿಗೆ ಉಸಿರು ಇತ್ತು ಹೆಸರು ಇರಲಿಲ್ಲ
ತಾಯಿ ಗರ್ಭದಿಂದ ಹೊರ ಬಂದಮೇಲೆ ಹೆಸರು ಬಂತು
ಅದೇ ಸಾಯುವಾಗ ಹೂಸಿರು ನಿಂತು ಹೆಸರು ಉಳಿಯುತದೆ
ಆ ಹೆಸರು ಉಳಿಯ ಬೇಕಾದರೆ
ಉಸಿರು ಇದಾಗಲೇ ಏನಾದರು
ಸಾಹಸ ಮಾಡು ನಿನ್ನ ಉಸಿರು
ನಿಂತರು ನಿನ್ನ ಹೆಸರು ಉಳಿಯುತದೆ

೪) ಕಾಲೇಜಿಗೆ ಹೊಗ್ಗಿದೆ ನೆನ್ನೆ
ಅಲ್ಲಿ ಸಿಕ್ಕಿದಳು ಒಬ್ಬಳು ಕನ್ನ್ಯೆ
ಅವಳ ನೋಡುತ್ತಾ ನಿತ್ತೆ ನನ್ ಅಲ್ಲೇ
ಅವಳ ಪರಿಚಯ ವಾಯಿತು ಅಲ್ಲೇ
ನಾ ನೋಳಿಯುತ ನೀತಿದ್ದೆ ಅಲ್ಲೇ
ನೋಳಿಯುತ  ತಲೆ ಬಗ್ಗಿಸಿದೆ ಅಲ್ಲೇ
ತಲೆ ಬಗ್ಗಿಸಿದ ಕೊಡಲೇ ಕಂಡಿತು
ನನಗೆ ಅವಳ ಕಾಲಿನ ಕಾಳು ಉಗ್ಗೂರದ ಗೆಜ್ಜೆ
ಆಗಲೇ ತಿಳಿಯಿತು ನನಗೆ
ಲಾಕ್ ಡಾವ್ನ್ ಟೈಮ್ ನಲ್ಲಿ ಅಗ್ಗಿತು ಅವಳ ಮದುವೆ
ಅಲ್ಲಿಂದ ಹೊರಟೆ ನಾ ಮೆಲ್ಲನೆ ಕ್ಲಾಸ್ ರೋಮ್ ಒಳಗೆ

೫) ಏ ಹೂವೆ ನೀ ಎಷ್ಟು ಸುಂದರ
ನಿನ್ನನು ನೋಡಿ ಇಷ್ಟ ಪಡದ ಮನಸುಗಳೇ ಇಲ್ಲ
ಎಲ್ಲರನು ಅಕರ್ಷಿಸುವ ನೀ ಎಷ್ಟು ಸುಂದರ
ನೀ ಅರಳಿದಾಗ ನಿನ್ನನು ಜೋಪಾನ ಮಾಡದ ಕೈಗಳೇ ಇಲ್ಲ
ಅದೇ ನೀ ಒಂದು ಬಾರಿ ಬಾಡಿ ಹೋದರೆ
ನಿನ್ನನು ಬಿಸಡದ ಜಾಗಾಗಲೇ ಇಲ್ಲ
ಹಾಗೆ ಮನುಷ್ಯನ ಜೀವನವು 
ಒಬ್ಬ ವ್ಯಕ್ತಿ ಒಂದು ಸ್ಥಾನದಲಿ ಇದ್ದರೆ
ಅವನ ಜೀವನವು ಸುಂದರ ವಾಗಿರುತ್ತದೆ
ಅವನನ್ನು ಪ್ರೀತಿಸದ ಜನಗಳೇ ಇಲ್ಲ
ಅದೇ ಅ ವ್ಯಕ್ತಿ ಒಂದು ಬಾರಿ ಅ ಸ್ಥಾನ ದಿಂದ ಕೆಳಗೆ ಇಲಿದರೆ
 ಅವನನ್ನು ತುಳಿಯದ ವ್ಯಕ್ತಿ ಗಳೇ ಇಲ್ಲ
ಇದುವೇ ಜೀವನ

೬)ನಾವು ಎಷ್ಟೆ ಸೌoದರ್ಯವಾಗಿದ್ದರು
ನಮ್ಮ ಮುಖದಲ್ಲಿ ಒಂದು
ನಗು ಇಲ್ಲದಿದ್ದರೆ ಅ ಸೌoದರ್ಯ ವ್ಯರ್ಥ
ಹಾಗೆ ಮನುಷ್ಯ ತನ್ನ ಜೀವನ ವನ್ನು
ರೂಪಿಸಿ ಕೊಳ್ಳ ದಿದ್ದರೆ ಅ ಜೀವನವೇ ವ್ಯರ್ಥ

- ಭರತ್ ಕುಮಾರ್ ಆರ್
ಕೊಣನೂರು

✍️✍️✍️✍️✍️

ಪುಣ್ಯ ಚೇತನ (ಕವಿತೆ) - ಶ್ರೀಮತಿ ಸುಮಾ ಬಸವರಾಜ ಹಡಪದ ಹಳಿಯಾಳ (ತಾ ) ಉತ್ತರಕನ್ನಡ.

ಪುಣ್ಯ ಚೇತನ 

ಜನಾಂಗದ  ದನಿಯಾಗಿ 
ದಲಿತರ ನೋವಿಗೆ  ಸಿರಿಯಾಗಿ 
ಚಳುವಳಿಗಳ ಶಕ್ತಿಯಾಗಿ 
ಹೋರಾಟಕ್ಕೆ  ಕೆಚ್ಚು  ತುಂಬಿದವರು 


ಅಸಮಾನತೆ, ಧರ್ಮ  ಜಾತಿಗಳ 
ನಡುವಿನ  ಸಂಘರ್ಷಗಳು  
ನೋವು  ಹಸಿವಿಗಳಂಥ 
ಒಳಸಂಕಟಗಳಿಗೆ ಧ್ವನಿಯಾದವರು 

ಬಂಡಾಯದ  ಖಣಿ 
ದಮನಿತರ  ದನಿ 
ಕನ್ನಡದ  ಮಣಿ 
ಎಂದೆನಿಸಿದವರು 

ಬದುಕಿನ ಹೋರಾಟಕ್ಕೆ 
ಸ್ಫೂರ್ತಿ ತುಂಬಿದವರು 
ಕೃತಿಗಳ, ಪ್ರಶಸ್ತಿಗಳ ಒಡೆಯ 
 ನಮ್ಮಯ ಗುರುಇವರು 

- ಸುಮಾ ಬಸವರಾಜ  ಹಡಪದ ಹಳಿಯಾಳ (ತಾ ) ಉತ್ತರಕನ್ನಡ (ಜಿಲ್ಲೆ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಾನು ನಾಳೆ ಸತ್ತರೆ ನೀವೇನು ಮಾಡುವೀರಿ? (ಕವಿತೆ) - ಕೆಂಚಪ್ಪ ಎಮ್ಕೆ.ಅಯ್ಯನಹಳ್ಳಿ.

ನಾನು ನಾಳೆ ಸತ್ತರೆ ನೀವೇನು ಮಾಡುವೀರಿ?

ನಾಳೆ ನಾನು ಸತ್ತರೆ,ಹಣತೆ ಹಚ್ಚಿಟ್ಟು
ಮೈ ತೊಳೆದು ಸಿಂಗರಿಸಿ 
ಊರ ಮೆರವಣಿಗೆ ಮಾಡಿ
ನನ್ನ ಕೊನೆಯ ದಿನಕ್ಕೆ ಕೊನೆಯ
ಕಣ್ಣೀರ ಹನಿ ಹಾಕುವಿರ?

ಹಾರ ಹಾಕಿ ಭಾರವಾಗಿದ್ದ
ಶನಿಮುಂಡೆದು
ಮನೆಗೆ-ಊರಿಗೆಂದು ಒಳಗೊಳಗೆ
ಖುಷಿ ಪಡುವಿರಾ?

ಎಂದೂ...
ಮಮಂಕಾರ ತೊರದ ನೀವುಗಳು 
ಈಗ ಬಂದು ಪಾಪ ಒಳ್ಳೆಯ ಹುಡುಗ
ಸಾಯುವ ವಯಸ್ಸೇ ಅಲ್ಲವೆಂದು ಮರುಗುವಿರಾ.?

ಜೊತೆಗೆ ಇದ್ದಾಗ ಬಳೆ ಹಾಕದ ಹೆಂಡತಿ
ಅವತ್ತು ಹಸಿರು ಬಳೆಹಾಕಿ ಹೆಂಡತಿ, ಮಕ್ಕಳು 
ಬಿದ್ದು ಬಿದ್ದು ಅಳುತ್ತಿದ್ದಾರೆ,ನನ್ನ ಚಿತ್ತ ಕೇಳದೆ,
ಇವರಿಗೆ ಏನನ್ನುವಿರಾ?

ಇಂದಲ್ಲ ನಾಳೆ ನಾನು ಸಾಯಲೇ ಬೇಕು,
ನನ್ನ ತನವ ಉಳಿಯಲೇ ಬೇಕು.!

- ಕೆಂಚಪ್ಪ ಎಮ್
ಕೆ.ಅಯ್ಯನಹಳ್ಳಿ.

ಗೆಳೆತನ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಗೆಳೆತನ

ನಿನ್ನ ಏಳ್ಗೆಯ ಕಂಡು ಹೆಮ್ಮೆ ಪಡದಿರಲಾರೆ
ಯಾವ ಜನುಮದ ಬಂಧು ನನ್ನ ಗೆಳೆಯನೆ
ಲೆಕ್ಕವಿಲ್ಲದ ಗಳಿಗೆ ಕೂಡಿ ನಡೆದೆವು ಜೊತೆಗೆ
ಮನವನರಳಿಸೊ ಬೆರಗು ನೀನೆ ಆಗಿಹೆ

ಕುಗ್ಗಿ ಬಾಡಿದ ವೇಳೆ ನೊಂದು ಬಾಗಿದ ಕ್ಷಣದಿ
ಸೋತು ನಿಂತರುವಾಗ ನೆರವು ನೀಡುವೆ
ಎನ್ನ ದುಃಖಕೆ ಮರುಗಿ  ನಗೆಯ ಉಕ್ಕಿಸುವವನೆ
ಯಾವ ಜನುಮದ ಪುಣ್ಯ ನಿನ್ನ ಪರಿಚಯ 

ಅಮೃತಕು ಮಿಗಿಲಾದ ಸವಿಯ ನೀಡುವೆ ಗೆಳೆಯ
ಭೂಮಿ ತೂಕದ ಸಹನೆ ನಮ್ಮೊಳಡಗಿದೆ
ಎಲ್ಲೆ ಮೀರಿದ ಸ್ನೇಹ ಬಂಧ ಬೆಸೆದಿದೆ ನಮ್ಮ
ಗೆಳೆತನಕು ಮಿಗಿಲೊಂದು ಜಗದಿ ಏನಿದೆ?

ವಂಚನೆಯ ತೊರೆದೇವು ಸ್ವಾರ್ಥವನೆ ಬಿಟ್ಟು
ಮೇಲು ಕೀಳನು ಮೆಟ್ಟಿ ಅಹಂಮಿಕೆಯ ಮರತೇವು
ಸಂಕೋಚ ಇರದೇನೆ  ಭಾವ ಬೆಳಗುತಲಿಹುದು
ತಾಯಿಗಿಂತಲೂ ಮಿಗಿಲು ಎಮ್ಮ ಸ್ನೇಹವು

          -   ಶ್ರೀ ತುಳಸಿದಾಸ ಬಿ ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೆನಪಿನ ಅಲೆಯಲ್ಲಿ (ಕವಿತೆ) - ಪುರುಷೋತ್ತಮ ಪೆಮ್ನಳ್ಳಿ.

ನೆನಪಿನ ಅಲೆಯಲ್ಲಿ

ಬಾಳ ದೋಣಿಯ ಪಯಣದಲಿ ನೆನಪುಗಳು
ಧಾವಿಸಿ ಸ್ಮರಿಸಿದವು ಕಳೆದ ಸಮಯವ
ಮನದ ಅಂತರಾಳದಲ್ಲಿ ಸವಯದ ಮೆಲುಕು 
ಬಿಡಿಸಲಾಗದ ಕಗ್ಗಂಟಲ್ಲಿ ಬಳಲಿದ ಬದುಕು...

ತಂದೆತಾಯಿಯ ಕಷ್ಟವಂದು ಕಣ್ಣಮುಂದೆ
ನೋವುಗಳು ಹಲವಾರು ಅಂದು ಬೆನ್ನಹಿಂದೆ
ನಂಬಿದ ಪ್ರಾಮಾಣಿಕ ಬದುಕ ಪ್ರತಿಫಲವು
ಸಿಹಿಫಲದಂತೆ ದೊರೆಯಿತು ನೆಮ್ಮದಿಗೆ ಇಂದು...

ಊಟ ಉಡುಪಿನ ಕೊರತೆಯಲಿ ಬಯಸಿತ್ತು ಮನವು 
ಬರುವುದ ಸುಖದಿನವು ನಮ್ಮ ಬಾಳಿಗೆಂದು
ತಂದೆಯ ಕರ್ಮಫಲವೋ ತಾಯಿಯ ದಾನವೋ
ಬಂದಿತು ಬಾಳಿಗೆ ಪ್ರಜ್ವಲದ ಬದುಕಿನ ಕ್ಷಣವು.

ಅರಿವಿಗೆ ಬಂತು ಶ್ರಮಕ್ಕೆ ತಕ್ಕ ಪ್ರತಿಫಲವು ಬಾಳಲ್ಲಿ
ಅ‌ಸೂಯೆ ಬದುಕ ಬಿಟ್ಟು ಬಾಳುವುದೇ ಬದುಕಿಲ್ಲಿ
ಸನ್ಮಾರ್ಗಕೆ ವಿಜಯವು ಕರ್ಮದ ಫಲವಾಗಿ
ಕಾಯಬೇಕು ನೆಮ್ಮದಿಯ ಸಮಯಕ್ಕೆ ನಾವಾಗಿ...

🌹ಪುರುಷೋತ್ತಮ ಪೆಮ್ನಳ್ಳಿ🌹
ಪಾವಗಡ ತಾ ತುಮಕೂರು ಜಿ
ದೂ 9632296809.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಪ್ಪು ಸುಂದರಿ (ಕವಿತೆ) - ಶ್ರೀಧರ ಗಸ್ತಿ. ಶಿಕ್ಷಕರು ಹಾಗೂ ಸಾಹಿತಿಗಳು ಧಾರವಾಡ.

ಕಪ್ಪು ಸುಂದರಿ

ಎದೆ ಮಿಡಿಯುವಾಕಿ ಮನ ಸೆಳೆಯುವಾಕಿ
ಮಿರು ಮಿರುಗಿ ಹೊಂಟಿಯಲ್ಲೇ 
ಮಿಡಿಕ್ಯಾಡಿ ನನ್ನ ತನು ಮನವ ಕೆಡಿಸಿ
ಮಾಯಾವಿಯಾದಿಯಲ್ಲೇ
ಕಪ್ಪು ಸುಂದರಿ ಕಪ್ಪು ಸುಂದರಿ

ನಿಟ್ಟಿಲೇ ದುಡಿವ  ಭಟ್ಟಂಗಿಗಳಿಗೆ
ಕೈ ಕೊಟ್ಟು ನಡಿದಿಯಲ್ಲೇ
ಕೂಳಿಲ್ಲದವರ ಹೊಟ್ಟೆಯನು ಬಸಿದು
ಹೊಂಚಾಕಿ ಕುಳಿತಿಯಲ್ಲೇ 
ಕಪ್ಪು ಸುಂದರಿ ಕಪ್ಪು ಸುಂದರಿ

ಸೂರಿಲ್ಲದವರ ಮಾತಿಲ್ಲದವರ
ಕಣ್ಣೀರ ಕೋಡೆಯಾದೆ 
ಮೆರೆವವರ ಭಂಟಿ ಪುಂಡರ ಒಡತಿ
ಕುಲುಕ್ಯಾಡಿ ನಕ್ಕಿಯಲ್ಲೇ 
ಕಪ್ಪು ಸುಂದರಿ ಕಪ್ಪು ಸುಂದರಿ

ಗುಡಗುಡಿಯ ಹೊಕ್ಕೆ ಉಳ್ಳವರ ಸವತಿ
ಕಳ್ಳಾಟ ಆಡಿ ನೀನೂ
ಮಾಡಿರುವ ತಪ್ಪ ಹೊಟ್ಟಿಯಲಿ ಹಾಕಿ
ಹುಂಡಿಯ ಸೇರಿಬಿಟ್ಟೆ
ಕಪ್ಪು ಸುಂದರಿ ಕಪ್ಪು ಸುಂದರಿ

ಬಚ್ಚಿಟ್ಟ ಹೆಣವ ಮುಚ್ಚಿಟ್ಟ ಹಣವ
ಕೊಳೆಯಾದ ಕೊಳ್ಳೆ ಯಾಗಿ
ಸುಟ್ಟಾವೋ ನಿನ್ನ ಟೊಳ್ಳಾದ ಮೈಯ
ಹಪ ಹಪಿಸೊ ದೆವ್ವವಾಗಿ. 
ಕಪ್ಪು ಸುಂದರಿ ಕಪ್ಪು ಸುಂದರಿ

     ✍ಶ್ರೀಧರ ಗಸ್ತಿ. ಶಿಕ್ಷಕರು ಹಾಗೂ ಸಾಹಿತಿಗಳು  ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪುಸ್ತಕ ಪರಿಚಯ : ಮಾರ್ಗಾನ್ವೇಷಣೆ - ಪ್ರೊ. ನಿತ್ಯಾನಂದ ಬಿ. ಶೆಟ್ಟಿ.


ಪುಸ್ತಕ ಪರಿಚಯ 
ಪುಸ್ತಕದ ಹೆಸರು : ಮಾರ್ಗಾನ್ವೇಷಣೆ.
ಲೇಖಕರು: ಪ್ರೊ ನಿತ್ಯಾನಂದ ಬಿ ಶೆಟ್ಟಿ.
ಪುಸ್ತಕದ ಪ್ರಕಾರ: ಸಾಹಿತ್ಯ ಸಂಶೋಧನೆಯ ರೀತಿ - ನೀತಿಗಳ ಕುರಿತು.

(ಪುಸ್ತಕದ ಮುಖ ಪುಟ)

"ನಮಗಿರುವ ಕಾಳಜಿ ಮತ್ತು ಪ್ರಾಮಾಣಿಕತೆ ನಮ್ಮ ಕೆಲಸದ ಗುಣಮಟ್ಟವನ್ನು ನಿರ್ಧರಿಸುತ್ತವೆ. ಒಂದು ಮನೆ ಕಟ್ಟುವುದಿರಲಿ, ಸಸಿ ನೆಟ್ಟು ಪೋಷಿಸುವುದಿರಲಿ, ವಿಶ್ವವಿದ್ಯಾಲಯವೊಂದರ ವಿಭಾಗವನ್ನು ಬೆಳೆಸುವುದಿರಲಿ, ಅಥವಾ ಸಣ್ಣದೊಂದು ಬರವಣಿಗೆ ಮಾಡುವುದೇ ಇರಲಿ, ನಾವು ತೋರಿಸುವ ಕಾಳಜಿ ಅವುಗಳ ಶ್ರೇಯಸ್ಸಿಗೆ ಕಾರಣವಾಗಿರುತ್ತದೆ. ಪ್ರಸ್ತುತ ಪುಸ್ತಕ ಲೇಖಕರಿಗಿರುವ ಕಾಳಜಿ ಮತ್ತು ಪ್ರಾಮಾಣಿಕತೆಗಳಿಂದ ರೂಪುಗೊಂಡಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. ಹಾಗಾದರೆ, ಇಲ್ಲಿರುವ ಕಾಳಜಿಗಳು ಯಾವುವು?ಕನ್ನಡ, ಸಾಹಿತ್ಯ, ಸಂಶೋಧನೆ, ಶೈಕ್ಷಣಿಕ ಲೋಕ ಮತ್ತು ಕಲಿಕೆ ಇಲ್ಲಿ ಕಾಳಜಿಗೊಳಪಟ್ಟ ಅಂಶಗಳು. ಇವೆಲ್ಲವೂ ಒಂದಾಗುವುದು ಸಾಹಿತ್ಯ ಸಂಶೋಧನೆಯನ್ನು ಅನ್ವೇಷಣೆ ಮಾಡುವ ಹಂಬಲದಲ್ಲಿ."

- ಎನ್ ಎಸ್ ಗುಂಡೂರ (ಮಾರ್ಗಾನ್ವೇಷಣೆ ಪುಸ್ತಕದ ಮುನ್ನುಡಿಯಿಂದ)
ಸಂಶೋಧನೆ ಮಾಡುವುದು ಹೇಗೆ? ಯಾಕೆ? ಅದರಿಂದಾಗುವ ಉಪಯೋಗಗಳೇನು? ಅಂತಹ ಉಪಯೋಗಗಳಿಗ್ಯಾವುದಕ್ಕೂ ಆಸೆ ಆಮಿಷೆಗಳಿಲ್ಲದೆ ನಿರಂತರವಾಗಿ ಮತ್ತು ನಿರರ್ಗಳವಾಗಿ ಏಕೋಚಿತ್ತಭಾವದಿಂದ ನಮ್ಮ ಪೂರ್ವಸೂರಿಗಳು ನಡೆಸಿದ ಸಂಶೋಧನೆ ಎಂತಹ ಸಂಶೋಧನೆ? ಅವರನ್ನು ನಾವ್ಯಾಕಿಂದು ನೆನೆಯಬೇಕು? ಎಂಬ ಹಲವಾರು ಪ್ರಶ್ನೆಗಳೊಂದಿಗೆ ಮಾನವಿಕಗಳೆಲ್ಲದರ ಒಂದೊಂದೇ ಅಂಶವನ್ನು ತಮ್ಮ ಪುಸ್ತಕದಲ್ಲಿ ಎಳೆಯುತ್ತಾ, ಹಿಗ್ಗಿಸುತ್ತಾ ಹೊಸದೊಂದನ್ನು ಕಟ್ಟುತ್ತಾ, ಹೀಗೆ ಮತ್ತೆ ಮತ್ತೆ contradict ಮಾಡುತ್ತಾ, ಹಲವಾರು ಜಿಜ್ಞಾಸೆಗಳನ್ನು ಕುರಿತು ಬಹಳ ಪರಿಕಲ್ಪನಾತ್ಮಕವಾಗಿ ತಾತ್ವಿಕತೆಯನ್ನು ಅಡಿಗಡಿಗೂ ಮೈವೆತ್ತಂತೆ 'ನಿತ್ಯಾನಂದ ಬಿ. ಶೆಟ್ಟಿ'ಯವರ "ಮಾರ್ಗಾನ್ವೇಷಣೆ" ಎಂಬ ಸಾಹಿತ್ಯ ಸಂಶೋಧನೆಗೆ ಸಂಬಂಧಿಸಿದ ಪುಸ್ತಕ ಇನ್ನೇನು ಕೆಲವೇ ದಿನಗಳಲ್ಲಿ ಓದುಗ ಲೋಕಕ್ಕೆ ಕಾಲಿಡಲಿದೆ. 
ಶ್ರೀಧರ ಆರ್ ವಿ
ಈ ಅಭೂತಪೂರ್ವವಾದ ಕೆಲಸಕ್ಕೆ ಪ್ರೊ. ನಿತ್ಯಾನಂದ ಬಿ. ಶೆಟ್ಟಿಯವರಿಗೆ ಅಭಿನಂದನೆಗಳು. 🌹🍀🙏

(ಪುಸ್ತಕದ ಕುರಿತಾದ ಅಭಿಪ್ರಾಯ - ಶ್ರೀ ಶ್ರೀಧರ ಆರ್.ವಿ.)  


(ಪುಸ್ತಕದಿಂದ ಆಯ್ದ ಭಾಗ)


ಪ್ರತಿಗಳಿಗಾಗಿ: (ಪುಸ್ತಕ ದಿನಾಂಕ : 07.08.2021 ರ ನಂತರ ಓದುಗರ ಕೈ ಸೇರಲಿದೆ)

ಖರೀದಿಯ ಮತ್ತು  ಹಣ ಪಾವತಿಸುವ ವಿವರಗಳು 👇

350 ಮುಖಬೆಲೆಯ ಈ ಪುಸ್ತಕದ ಪ್ರಕಟಣಾಪೂರ್ವ ಮಾರಾಟ ಬೆಲೆ ರೂ. 325/- 

 ಬ್ಯಾಂಕ್ ಖಾತೆಯ  ವಿವರಗಳನ್ನು ಗಮನಿಸಿ ಗೂಗಲ್/ಫೋನ್ ಪೇ ಮೂಲಕ ಪಾವತಿ ಮಾಡಿ. ಅದರ Screen Shot ಅನ್ನು ಈ ಕೆಳಗಿನ ನಂಬರ್ ಗೆ ಕಳಿಸಿ. ತಮ್ಮ ಸ್ಪಷ್ಟ ವಿಳಾಸವನ್ನು  ದೂರವಾಣಿ ಸಂಖ್ಯೆಯೊಂದಿಗೆ ನಮೂದಿಸುವುದನ್ನು ಮರೆಯದಿರಿ.

ಪುಸ್ತಕದ ಅಂಚೆ ವೆಚ್ಚವನ್ನು ಪ್ರಕಾಶನ ಸಂಸ್ಥೆ ಭರಿಸುವುದು. 

*ಬೆಸುಗೆ ಪಬ್ಲಿಕೇಶನ್ಸ್*
ಬೆಸುಗೆ ಟ್ರಸ್ಟ್ (ರಿ.)ನ ಅಂಗಸಂಸ್ಥೆ
1. Account Name : Besuge Publications

2. Bank name : Bank of Maharashtra, Tumkuru

3. Acct. No. : 68001406947
4.IFSC. : MAHAB0001197

ಸಂಪರ್ಕಕ್ಕೆ : 8970162207.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಕಂದ (ಕವಿತೆ) - ಶ್ರೀ ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ.

ಕಂದ

ಕಂದ ಓ ಕಂದ ಚಂದವೊ ಚಂದ  ನೀನ್ನ ಈ ಬಂಧ....
ಆ ಅಂದವ ಸವಿಯಲು ಧರೆಯಲಿ  ಪಡುವರು ಎಲ್ಲರೂ ಮಹಾನಂದ....
ಯಾಕೊ ಈ ದೇವ ಆದ ಮಂದ ... ಅಲ್ಲಲ್ಲ... ನೊಂದ...ನೊಂದ...!!ಪಲ್ಲವಿ!!

ನಿನ್ನ ಧರೆಗೆ ತಂದ ಕಂದ!!
ಆ ದೇವ ನನ್ನ ಘನತೆ ಹೆಚ್ಚಿಸಿದ !
ಎಲ್ಲಕಿಂತ ಮಿಗಿಲು ಅಪ್ಪನ ಪದವಿ ನೀಡಿದ!!

ನೀ ಅಳಲು!!
ಆಯ್ತು ಭುವಿ ಒಡಲು!
ಕರುಣಾಮಯಿ ತಾಯಿ ಒಡಲು!!

ನೀ ನಗಲು!!
ಆಯ್ತು ನದಿ ಕಡಲು!
ಸವಿಯಲು ಕೆನೆ ಹಾಲು!!

ನನಗೆ ನೀನು ನಿನಗೆ ನಾನು!!
ಅನ್ನುವ ಆ ದೇವನು!
ಕಂದ ನಿನ್ನ ನಂಬಿ ಒಮ್ಮೆ ನಕ್ಕನು!!

ನಿನಗೆ ಸೋತು ಕೈಲಾಸ ಹೊಕ್ಕನು!!
ನಿನ್ನ ಕ್ಷಣ ಕ್ಷಣಕು ಈಗ ನೆನೆವನು!
ನಾನೆಕೆ ಕಂದನಾಗಲಿಲ್ಲ ಅಂದು ಕೋರಗಿದನು!!

ಅಳಿಯದೆ ಉಳಿಸಿದಿ ಮನು ಕುಲದ ಕಂದನ ಮಮತೆ!!
ನಾನೆಕೆ ನೀನೆ ಕಳದೆ ಮನೆ ಯೋಳಗಿನ ಎಲ್ಲಾ ಕೊರತೆ!
ಅಯ್ಯೋ ಕಂದ ನಿನ್ನ ನಲಿವಲಿ ನಾನೆ  ಮೂರು ಲೋಕ ಮರೆತೆ!!

ಪುಟ್ಟ ಪುಟ್ಪ ಹೆಜ್ಜೆಗಳು ಸೇರಿ ಆಯ್ತು ಜೀವನ ಪುಸ್ತಕ!!
ನಮಿಸುವೆ ನಿನ್ನ ಅಡಿದಾವರೆಗಳಲಿ ಇಟ್ಟು ಮಸ್ತಕ!
ಸೋಲದವರಾರು ಇಲ್ಲ ಇಲ್ಲಿ ನಿನ್ನ ಹಸ್ತಕ!!

✍️ ಧ್ಯಾಮ್ ರಾಜ್ ವಾಯ್ಹ್ ಸಿಂಧೋಗಿ!ಭೈರಾಪೂರ ,ತಾ !ಜಿ! ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಂಶೊಧನೆ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಸಂಶೋಧನೆ

ನಾನು ದಿನ ಹಗಲು ರಾತ್ರಿ ಎನ್ನದೆ
ಮನದೊಳಗೆ ಸಾಹಿತ್ಯವ ಹುಡುಕ್ಕುತ್ತಿದ್ದೇನೆ
ಪದಗಳ ಒಳಗುಟ್ಟಿನ ಹೂಗುಚ್ಚುಗಳಿವೆ
ಅಂತರಾಳದೊಳಗೆ ಹುದುಗಿವೆ

ಪ್ರಾಸ ಅಂತ್ಯ ತ್ರಿಪದಿ ಷಟ್ಪದಿಗಳನ್ನು 
ಇವುಗಳನ್ನು ಹಳೆ ತಲೆಗಳು ಸಂಶೋಧಿಸಿದ್ದಾರೆ
ಕನ್ನಡದ ಶಿಲೆಯೊಳಗೂ ಕೊರೆದಿದ್ದಾರೆ
ಕಲ್ಲು ಮಣ್ಣು ಚಿನ್ನ ಹೊನ್ನಿನಲ್ಲೂ ಹುಡುಕಿದ್ದಾರೆ

ದಿಗ್ಗಜರು ಸಂಶೋಧನೆ ಅಪಾರವಾದುದು
ನಾನೂ ಹಗಲು ರಾತ್ರಿಗಳು ಎದ್ದು ಕುಳಿತು
ಬಿದ್ದು ಒದ್ದಾಡಿದರು ಪತ್ತೆ ಹಚ್ಚಲು ಆಗುತ್ತಿಲ್ಲ
ಮನೆಯೊಳಗೆ ಹೊಲಗದ್ದೆಗೆ ಹೋದರು ಸಿಗುತ್ತಿಲ್ಲ

ಕನ್ನಡದ ಸೌಂದರ್ಯವನ್ನು ಕೆತ್ತಿರುವರು
ಎಂಟು ದಿಗ್ಗಜರು ಬಂಟನಾಗಿರುವ ಪಂಪ ರನ್ನರು
ಪದಪದಕ್ಕು ಸಂಶೋಧಿಸಿದ ನಿಘಂಟುಕಾರರು
ಹೆಜ್ಜೆಯೊಳಗಿನ ಸುದ್ದಿಗು ಪದಗಳ ಜೀವದಾತರು

ನಾನು ಕಣ್ಣು ಮುಚ್ಚಿದರೆ ಸಾಕು
ಬಡಿದೆಚ್ಚರಿಸುತ್ತಿವೆ ಸಾಹಿತ್ಯದ ಮೆಲುಕು
ಊಟ ತಿನ್ನುವಂಗಿಲ್ಲ ನಿದ್ರೆ ಮಾಡುವಂತಿಲ್ಲ
ಜಳಕನು ಮಾಡೊಂಗಿಲ್ಲ ಕಾಡುತ್ತದೆ ಕವಿತೆಗಳೆಲ್ಲ

ನನ್ನ ಬತ್ತಿದ ಮೆದುಳಲ್ಲಿ ಜ್ಞಾನದ ಸುಳುವು
ಜಲಧಾರೆಯು ತುಟು ತುಟು ಅನುಕುತ್ತಿದೆ
ಆದರೂ ಹೊಸ ಹೊಸ ಸಾಹಿತ್ಯ ಹುಡುಕ್ಕುತ್ತಿದೆ
ಕವಿತೆಯ ಸಂಶೋಧನೆ ನನ್ನ ಬಿಡದೆ ಬೆನ್ನಟ್ಟಿದೆ 

- ಜಿ ಟಿ ಆರ್ ದುರ್ಗ
ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬುಧವಾರ, ಜುಲೈ 28, 2021

ಗಜಲ್ - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

*ಗಜಲ್*

ನಿಶ್ಯಬ್ದ ಕಡಲು ಪ್ರಕ್ಷುಬ್ಧವಾಗುತ್ತದೆ ಒಮ್ಮೊಮ್ಮೆ
ಅಸಹನೆ ಕಂಬನಿಯಾಗಿ ಸುರಿಯುತ್ತದೆ ಒಮ್ಮೊಮ್ಮೆ

ಭುವಿಯ ಒಡಲಲ್ಲೂ ಜ್ವಾಲಾಮುಖಿ ಅಡಗಿರುತ್ತದೆ
ನಗುವಿನ ಅಂತರಾಳದಲೂ ನೋವಿರುತ್ತದೆ ಒಮ್ಮೊಮ್ಮೆ

ಮಂಜಿನ ಮೋಡದಿ ಘರ್ಷಣೆಯ ಕಾವಿರುವುದಿಲ್ಲವೆ?
ಮಾತು ಮಾತು ಮಥಿಸಿ ಸಿಡಿದೇಳುತ್ತದೆ ಒಮ್ಮೊಮ್ಮೆ

ಧುತ್ತೆಂದು ಚಂಡಮಾರುತ ಬೀಸುವುದು ಎಲ್ಲಿಂದಲೊ
ಸಧ್ಭಾವನೆಯೂ ಕಠೊರವಾಗುತ್ತದೆ ಒಮ್ಮೊಮ್ಮೆ

ನೆಮ್ಮದಿಯ ಬದುಕಿಗೆ ಸಹನೆಯೆ ಮೂಲ  'ಆರಾಧ್ಯೆ'
ಆದರೂ ಕೋಪ ಸರ್ವನಾಶಕೆ ಎಳೆಯುತ್ತದೆ ಒಮ್ಮೊಮ್ಮೆ
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮೂರಕ್ಷರದ ಬದುಕು (ಕವಿತೆ) - ಹನುಮಂತ ದಾಸರ ಹೊಗರನಾಳ.

ಮೂರಕ್ಷರದ ಬದುಕು

ಅಗೆದಷ್ಟು ಭೂಮಿ, ಹತ್ತಿದಷ್ಟು ಭಾನು
ಸುತ್ತಿದಷ್ಟು ಪ್ರಪಂಚ.
ಆಡಿದಷ್ಟು ಮಾತು, ನೋಡಿದಷ್ಟು ನೋಟ
ಬೇಡಿದಷ್ಟು ಊಟ.
ಕೈ ಹಾಕಿದಷ್ಟು ಅವಕಾಶ, ಖಾಲಿ ಕುಳಿತಷ್ಟು ದುಶ್ಚಟ,
ಇದ್ಹಂಗ ನೀ ನಡೆಯೋ ಬಿದ್ದೆದ್ದರೂ ಚಿಂತೆಯಿಲ್ಲ, ಇದು ಮೂರು ದಿನದ ಪರದಾಟ.

ಅತಿಯಾಸೆ ಪಡಬ್ಯಾಡ, ಸಿಕ್ಕಿದ್ದು ಬಿಡಬ್ಯಾಡ
ಸಿಕ್ಕೀತೆಂದು ಮುಚ್ಚಿಟ್ಟು ಮರುಗಬೇಡ, ಅನ್ಯರಿಗೆ ಹಂಚಿ ನೀ ಸೊಕ್ಕೀಲೆ ಮೆರಿಬ್ಯಾಡ.
ಸಿಕ್ಕಿದ್ದು ಶರಣಂಗೆ, ಮಿಕ್ಕಿದ್ದು ಭಾವುಕಂಗೆ
ಭಿಕ್ಷೆ-ಭೋಜನವ ಸವಿದು ಮೋಕ್ಷ ಪಡಿಬೇಕ
ಮೂರಕ್ಷರದ ಬದುಕಿದು ಮುನ್ನೂರು ತೊಳಲಾಟ...!!
-ಹನುಮಂತ ದಾಸರ ಹೊಗರನಾಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮುಂಗಾರು ಮಳೆ* (ಮಾನ್ಸೂನ್ವ ರೈನ್ ) (ಲೇಖನ) - ಮೋಹನ್ ಪ್ರಸಾದ. ಎಸ್.

*ಮುಂಗಾರು ಮಳೆ* (ಮಾನ್ಸೂನ್ವ ರೈನ್ ).


*ಭಾರತದಲ್ಲಿ ಮಳೆಗಾಲ*
   ಪಶ್ಚಿಮ ದೇಶಗಳಲ್ಲಿ ವಷ೯ ವನ್ನು  ಸ್ಟ್ರಿಂಗ್, ಸಮ್ಮರ್, ಆಟಮ್, ವಿಂಟರ್, ಎಂದು ನಾಲ್ಕು ವಿಭಾಗ ಮಾಡಿದ್ದಾರೆ. ಆದರೆ ಭಾರತದಲ್ಲಿ ಹವಾಮಾನಕ್ಕೆ ಅನುಗುಣವಾಗಿ 3 ಕಾಲವನ್ನು ಹೇಳುವುದು ಬ್ರಿಟೀಷರ ಕಾಲದಿಂದ ರೂಢಿ ಆಗಿದೆ. ಅವು- ಬೇಸಿಗೆಕಾಲ,ಮಳೆಗಾಲ ಚಳಿಗಾಲ,,ಆದರೆ ಪ್ರಾಚೀನರು ಭಾರತದ ಕಾಲ ಗಣನೆಯಲ್ಲಿ -"ವಸಂತ," ಗ್ರೀಷ್ಮ," ವಷ೯," ಶರತ್," ಹೇಮಂತ," ಶಿಶಿರ," ಎಂದು ಆರು(6)ಋತು ಅಥವಾ ಕಾಲವನ್ನು ವಿಭಾಗಿಸಿದ್ದಾರೆ. ಅದರಲ್ಲಿ "ವಷ೯ಋತು"ಮಳೆಯ ಋತು ,ಅಂದರೆ "ಶ್ರಾವಣ "ಮತ್ತು "ಭಾದ್ರಪದ "ಮಾಸಗಳು. ಕರ್ನಾಟಕದ ಹಳ್ಳಿಗಳಲ್ಲಿ ಋತುಗಳು ಮತ್ತು ಮಳೆ ಮಹಾನಕ್ಷತ್ರಗಳು ಇನ್ನೂ ಪ್ರಚಲಿತದಲ್ಲಿದೆ. ಭರಣಿ ಮಳೆಗೆ -ಬಿತ್ತನೆ, ಆರಿದ್ರ ಮಳೆಗೆ -ಹಬ್ಬ, ಮೃಗಶಿರ(ವ
ಮಿರಗನ ಮಳೆ) ಇವು ವಿಶಿಷ್ಟವಾದವುಗಳು. 

*ಭಾರತದಲ್ಲಿ ಮುಂಗಾರು ಮಳೆ*
 ಭಾರತಕ್ಕೆ ಮುಂಗಾರು ಮಳೆ ಅತ್ಯಂತ ಪ್ರಮುಖವಾದುದು  ಭಾರತದ ಬಹಳಷ್ಟು ಬೆಳೆ ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬೀ ಸಮುದ್ರದಿಂದ ಹುಟ್ಟಿ ಬರುವ ನೈರುತ್ಯ ಮಾರುತಗಳು ತರುವ "ಮುಂಗಾರು ಮಳೆ" (ಮಾನ್ಸೂನ್ ಮಳೆ) ಭಾರತದ ಜೀವ ಜಲಸಂಪನ್ಮೂಲ, ಜೀವನಾಧಾರ, ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುವುದು. 
*ಕರ್ನಾಟಕದಲ್ಲಿ ಮುಂಗಾರು ಮಳೆಯ ಲಾಭ*
 ಇದನ್ನು "ನೈಋತ್ಯ ಮಾನ್ಸೂನ್ ಮಾರುತಗಳ ಕಾಲ "ಎಂತಲೂ ಕರೆಯುತ್ತಾರೆ,.ಅರಬ್ಬೀ ಸಮುದ್ರದ ಮೇಲಿಂದ ಬೀಸುವ ತೇವಾಂಶಭರಿತ ಮಾರುತಗಳನ್ನು ಮಲೆನಾಡು ಘಟ್ಟಗಳು ತಡೆದು ಅಧಿಕ ಮಳೆ ಸುರಿಸುತ್ತವೆ ಪೂರ್ವದ ಕಡೆಗೆ ಹೋದಂತೆಲ್ಲಾ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ.  ಹೀಗಾಗಿ ಪೂರ್ವದ ಮೈದಾನವು  ಮಳೆ ನೆರಳಿನ ಪ್ರದೇಶವಾಗಿ ಪರಿಣಮಿಸುತ್ತದೆ . 
ಅತೀ ಆರ್ದ್ರತೆಯುಳ್ಳ ಮಾನ್ಸೂನ್ ವಾಯುಗುಣವನ್ನು   ಹೊಂದಿರುವ ಕರ್ನಾಟಕದ ಪ್ರಮುಖ ಪ್ರದೇಶಗಳೆಂದರೆ -ಕರಾವಳಿ ಪ್ರದೇಶ,ಪಶ್ಚಿಮಘಟ್ಟ ಪ್ರದೇಶ, ಮಲೆನಾಡು ಪ್ರದೇಶಗಳು. 
"ಕರ್ನಾಟಕದಲ್ಲಿನ ವಾಯುಗುಣದ ಲಕ್ಷಣಗಳನ್ನಾಧರಿಸಿ"(4)ರೀತಿಯಲ್ಲಿ  ವಿಂಗಡಿಸಲಾಗಿದೆ, 
1.ಮುಂಗಾರು ಮಳೆಗಾಲ ಅಥವಾ ನೈರುತ್ಯ ಮಾನ್ಸೂನ್ ಗಾಳಿಗಳ ಕಾಲ (ಜೂನ್ ದಿಂದ ಸೆಪ್ಟೆಂಬರ್) 
2.ಹಿಂಗಾರು ಮಳೆಗಾಲ ಅಥವಾ ಈಶಾನ್ಯ ಮಾನ್ಸೂನ್ ಗಾಳಿಕಾಲ (ಅಕ್ಟೋಬರ್ ದಿಂದ ಡಿಸೆಂಬರ್) 
3.ಬೇಸಿಗೆ ಕಾಲ (ಮಾರ್ಚ್ ದಿಂದ ಮೇ) 
4.ಚಳಿಗಾಲ (ಡಿಸೆಂಬರ್ ದಿಂದ ಫೆಬ್ರವರಿ) .
ಮುಂಗಾರು ಮಳೆಗಾಲದ ಅವಧಿಯಲ್ಲಿ ಅತೀ ಹೆಚ್ಚು ಮಳೆಯನ್ನು ಪಡೆಯುವ ಜಿಲ್ಲೆಗಳೆಂದರೆ :ಉಡುಪಿ, ದ- ಕನ್ನಡ, ಉ-ಕನ್ನಡ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ. ಮುಂತಾದವು. 
ಕಡಿಮೆ ಪ್ರಮಾಣದ ಮಳೆ ಬೀಳುವುದು. ವಿಜಾಪುರ, ರಾಯಚೂರು, ಕೊಪ್ಪಳ, ಗದಗ, ಗುಲ್ಬರ್ಗಾ, ಬಳ್ಳಾರಿ, ಚಿತ್ರದುರ್ಗ. ಮುಂತಾದವು.
"ಮುಂಗಾರು ಮಳೆಯಲ್ಲಿ" ಬೆಳೆಯುವ ಬೆಳೆಗಳು.  ಕರ್ನಾಟಕದಲ್ಲಿ ಶೇಕಡ 80ರಷ್ಟು ಮಳೆಯಾಗುತ್ತದೆ ಆದ್ದರಿಂದ ಬೆಳೆಗಳ ಬೇಸಾಯಕ್ಕೆ ಉತ್ತಮ ಕಾಲವಾಗಿದೆ. ಆದ್ದರಿಂದ ಇಲ್ಲಿ *ಮೆಕ್ಕೆಜೋಳ.ಸೂರ್ಯಕಾಂತಿ,ಉದ್ದು,ಸೊಯಾಬಿನ್, ಹೆಸರು, ಶೇಂಗಾ,ಭತ್ತ,ಕಬ್ಬು,ಬಾಳೆ,ತೆಂಗು,ಅಡಿಕೆ,ಈರುಳ್ಳಿ,*ಮುಂತಾದ ಬೆಳೆಗಳುನ್ನು ಬೆಳೆಯುವರು. 
""ಮುನ್ಸೂನ್ ಮಾರುತುಗಳು ಭಾರತೀಯ ರೈತರೊಡನೆ ಆಡುವ ಜೂಜಾಟ"" ಎಂದೂ ಸಹ ಕರೆಯುವರು. 
 *ಹಿಂಗಾರು ಮಳೆ*
ಹಿಂಗಾರು ಮಳೆ ಅಥವಾ ಈಶಾನ್ಯ ಮಾರುತಗಳಿಂದ (ಉತ್ತರ ಮತ್ತು ಪೂರ್ವದ ಮಧ್ಯದ ದಿಕ್ಕು) ಬರುವ ಮಳೆ ಉತ್ತರ ದಿಕ್ಕಿನಿಂದ ಮಾರುತಗಳು ಆರಂಭವಾಗಿ ವಾಯುಭಾರ ಕುಸಿತವಿರುವ ಬಂಗಾಳ ಕೊಲ್ಲಿ ಪ್ರವೇಶ ಮಾಡಿ ಭಾರತದ ಪೂರ್ವ ರಾಜ್ಯ ಗಳಿಗೆ ಮಳೆ ತರುವವುದು,ಮಧ್ಯ ಭಾಗಕ್ಕೆ ಸಾಧಾರಣ ಮಳೆ ತರುವುದು. ಶೇಕಡ 12ರಷ್ಟು ರಾಜ್ಯದಲ್ಲಿ ಮರೆಯಾಗುತ್ತದೆ. 
ಹಿಂಗಾರಿನಲ್ಲಿ ಬೆಳೆಯುವ ಬೆಳೆಗಳೆಂದರೆ :-""ಗೋಧಿ, ಹತ್ತಿ, ಬಿಳಿ ಜೋಳ"",ಮುಂತಾದವು.
ಹೀಗೆ ಮುಂಗಾರು ಮಳೆಯ ಲಾಭ ಹೆಚ್ಚಾಗಿ ಭಾರತ ಪಡೆಯುವುದು. ಹಾಗೂ ಈ ಮಳೆಯಿಂದ ಅಧಿಕ ಲಾಭನೂ ಇದೆ ನಷ್ಟನೂ ಇದೆ,  ಈ ವರ್ಷ ಉತ್ತಮ ವರ್ಷಾಧಾರೆ ಆಗುವುದೊಂದಿಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲವು ಕಡೆ ಅಧಿಕ ಮಳೆಯಿಂದ ಸಾಕಷ್ಟು ಆಸ್ತಿ -ಪಾಸ್ತಿ, ಬೆಳೆ, ಹಾಳಾಗಿದೆ. 

ಒಟ್ಟಾರೆಯಾಗಿ ಭಾರತದ ರೈತರು ಮುಂಗಾರು ಮಳೆಯನ್ನು ಅವಲಂಬಿಸಿ ಬೆಳೆ ಬೆಳೆಯುವರು...... 
   
   - ಮೋಹನ್ ಪ್ರಸಾದ. ಎಸ್.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶಾಲೆ ಬಿಡುವ ಮುನ್ನ ಮರಳಿ ನೋಡಿತೆನ್ನ ಮನ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

ಶಾಲೆ ಬಿಡುವ ಮುನ್ನ ಮರಳಿ ನೋಡಿತೆನ್ನ ಮನ

ಮನೆಮನೆಯ ಕುಸುಮಗಳು ಸೇರಿದೆವು ಎ.ಸಿ.ಓ. ಶಾಲೆಯಲ್ಲಿ ।
ಗುರು ಮಾತೆಯರಾಗಿ ಗುರುತಿಸಿದೆವು ಸಮಾಜದಲ್ಲಿ ।
ಅಕ್ಕತಂಗಿಯರಂತೆ ಕೂಡಿ ನಲಿದೆವು।  
ನಕ್ಕು ನಲಿಯುತ ದಿನಗಳ ಕಳೆದೆವು॥
 
ಮಕ್ಕಳ ಮನಸ್ಸನ್ನರಿತು ಪಾಠ ಮಾಡಿದೆವು। 
ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳಿದೆವು ।
ಮಾತೃಹೃದಯಿ ಯಾಗಿ ಮಕ್ಕಳಿಗೆ ಕಂಡೆವು ।
ಎಲ್ಲೇ ಕಂಡರೂ ನಮಸ್ತೆ ಮಿಸ್ ಎಂಬ ಗೌರವ ಪಡೆದೆವು।
 
ಅನ್ನದಾತರಾಗಿಹರು ಸಂಸ್ಥೆಯ ಸಂಸ್ಥಾಪಕರು। 
ನೋವು ನಲಿವುಗಳಿಗೆ ಸ್ಪಂದಿಸುವ ದೇವರು। 
ಪಿತೃ ಭ್ರಾತೃ ಮನದ ಮಹನೀಯರು
ಕಷ್ಟದಲ್ಲಿದ್ದವರಿಗೆ ಕರುಣಾಮಯಿಗಳು ।

ಸಹೋದರರ ವಾತ್ಸಲ್ಯವಿದೆ ಗುರು ವೃಂದದಲಿ। 
ಸಹಕಾರದ ಸಂಯಮವಿದೆ ಹೃದಯದಲಿ। 
ಜಾತಿ ಭೇದವ ಮರೆತು ವೃತ್ತಿಯಲ್ಲಿ ತೊಡಗಿದೆವು। 
ಮುಗ್ದ ಮಕ್ಕಳ ಮನವನ್ನು ಜಾಗೃತಗೊಳಿಸಿದೆವು।.
ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆ ಇದು ಸುಂದರ ।
ಜ್ಞಾನಾರ್ಜನೆಯ ಹಸಿವಿರುವವರಿಗೆ ಮಂದಿರ ।
ಬಾಗಿಲೊಳು ಕೈಮುಗಿದು ಒಳಗೆ ಬಾ ಮಗುವೆ ।
ಜ್ಞಾನ ದೇಗುಲವಿದು ಸರಸ್ವತಿ ನಿಲಯ ।

ಜುಲೈ 8ರಂದು ೨೦೨೧ ರಂದು ನಾನು ಶಿಕ್ಷಕಿ ವೃತ್ತಿಯಿಂದ ವಿಮುಖಳಾಗುವುದಾಗಿ ತಿಳಿಸಿದಾಗ ನನ್ನ ಆತ್ಮೀಯ ಸಹ ಶಿಕ್ಷಕಿಯರೆಲ್ಲ ಪ್ರೀತಿಯ ಭೋಜನ ಏರ್ಪಡಿಸುವುದರೊಂದಿಗೆ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ಸೀರೆಯನ್ನು ಉಡುಗೊರೆಯಾಗಿ ನೀಡಿ ಪ್ರೀತಿಯಿಂದ ವಿದಾಯ ಹೇಳಿದ್ದು ಮರೆಯಲಾರದ ನೆನಪು .ಅವರೆಲ್ಲರಿಗೂ ನಾನು ಈ ಮೂಲಕ ಧನ್ಯವಾದಗಳನ್ನು ಅರ್ಪಿಸುತ್ತೇನೆ .೨೦೦೭ ಜೂನ್ ೧ ರಂದು,ನಾನು ಬಾಗಲಕೋಟ ಜಿಲ್ಲೆಯ ಇಲಕಲ್ಲಿನ ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯಲ್ಲಿ ಕನ್ನಡ ಮಾಧ್ಯಮ ಪ್ರೌಢ ವಿಭಾಗದಲ್ಲಿ ಸಮಾಜ ವಿಜ್ಞಾನ ಶಿಕ್ಷಕಿಯಾಗಿ ವೃತ್ತಿಯಲ್ಲಿ ನಿರತಳಾದೆ .ಆಗ ಸಂಸ್ಥೆಯ ಅಧ್ಯಕ್ಷರು ಶ್ರೀಯುತ ಡಿ. ಪಿ. ಡಾಗರವರು ಇದ್ದರು ಮತ್ತು ಮುಖ್ಯೋಪಾಧ್ಯಾಯರಾಗಿ ಶ್ರೀ ವಿ.ಎಸ್. ದೇಸಾಯಿಯವರು ಕಾರ್ಯನಿರ್ವಹಿಸುತ್ತಿದ್ದರು. 

ಅಲ್ಲಿಂದ ನನ್ನ ಶಿಕ್ಷಕಿ ವೃತ್ತಿ ಆರಂಭವಾಗಿ, ೨೦೨೧ರ ವರೆಗೆ ಹಲವಾರು ಮರೆಯಲಾರದ ಭಾವನಾತ್ಮಕ ಸಂಬಂಧಗಳ ಬೆಸುಗೆಯಲ್ಲಿ ಬಂಧಿಯಾಗಿದೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಹಂತದಿಂದ ಹತ್ತನೆಯ ತರಗತಿಯವರೆಗೆ ಸಾವಿರಾರು ವಿದ್ಯಾರ್ಥಿಗಳು  ಶಿಕ್ಷಣ ಪಡೆಯುತ್ತಿದ್ದರು.ಎ .ಸಿ. ಓ ಸಂಸ್ಥೆಯಲ್ಲಿ ಶಿಕ್ಷಕಿ ವೃತ್ತಿ ನಿರ್ವಹಿಸಿದ ಬಗ್ಗೆ ಸಂತೃಪ್ತಿಯಿದೆ ಮತ್ತು ಹೆಮ್ಮೆಯೆನಿಸುತ್ತಿದೆ.ಪದವಿ ಶಿಕ್ಷಣ ಪಡೆದವರೆಲ್ಲರಿಗೂ ಸರಕಾರಿ ವೃತ್ತಿ ದೊರೆಯುವುದು  ಅಸಾಧ್ಯ, ಅಂತಹ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ವೃತ್ತಿ ಒದಗಿಸುವ ಮೂಲಕ ಸಾಕಷ್ಟು ಕುಟುಂಬಗಳ ಬದುಕಿಗೆ ದಾರಿದೀಪವಾಗಿವೆ .'ಮುಳುಗುವವನಿಗೆ ಹುಲ್ಲುಕಡ್ಡಿಯೂ ಆಸರೆ' ಎಂಬಂತೆ ಕೊರೋನಾ ಸೋಂಕಿನಂತಹ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಿಕ್ಷಕರನ್ನು ಕೈಬಿಡದೆ ಮಾನವೀಯತೆ ತೋರಿದ್ದಾರೆ .

      ೧೯೭೫ ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಹಂತಹಂತವಾಗಿ ಬೆಳೆಯುತ್ತಾ ಇಂದು ಇಳಕಲ್ ನಗರದಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದು ನಿಂತಿದೆ.ಸಾವಿರಾರು ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ತಾವು ಕಲಿತ ಈ ಸಂಸ್ಥೆಯ ಬಗ್ಗೆ, ಆಡಳಿತ ಮಂಡಳಿಯವರ ಬಗ್ಗೆ ಮತ್ತು ಶಿಕ್ಷಕ ವೃಂದದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವುದನ್ನು ಕೇಳಿ ಹೆಮ್ಮೆಯೆನಿಸುತ್ತದೆ . 

ನನ್ನ ೧೪ ವರ್ಷದ ವೃತ್ತಿಜೀವನದುದ್ದಕ್ಕೂ ಪ್ರತಿಯೊಂದು ವಿಷಯದಲ್ಲಿಯೂ ಸಹಾಯ, ಮಾರ್ಗದರ್ಶನ ನೀಡಿವರನ್ನು ನೆನೆಯಲೇಬೇಕು .ಶಾಲೆಯಲ್ಲಿ ಪ್ರತಿಯೊಂದು ಶೈಕ್ಷಣಿಕ ಕಾರ್ಯಕ್ರಮ ನಡೆದಾಗಲೂ ಆ ಕಾರ್ಯಕ್ರಮದಲ್ಲಿ ನಿರೂಪಣೆಯ ಜವಾಬ್ದಾರಿಯನ್ನು ಕೊಡುತ್ತಿದ್ದರು. ಮೊದಮೊದಲು ಭಯ ಎನಿಸುತ್ತಿತ್ತು ಪ್ರತಿ ಹಂತದಲ್ಲಿಯೂ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ವಿ. ಎಸ್.ದೇಸಾಯಿ ಗುರುಗಳು ತುಂಬಾ ತಾಳ್ಮೆಯಿಂದ ಕಾರ್ಯಕ್ರಮದ ನಿರ್ವಹಣೆ ಮಾಡುವ ವಿಧಾನ ತಿಳಿಸುವುದರ ಜೊತೆಗೆ ಕಾರ್ಯಕ್ರಮ ಮುಗಿದ ಮೇಲೆ ಮೆಚ್ಚುಗೆ ವ್ಯಕ್ತ ಪಡಿಸುವುದನ್ನು ಮರೆಯುತ್ತಿರಲಿಲ್ಲ. ಜೊತೆಗೆ ಕೆಲವೊಂದು  ವಿಷಯವನ್ನು ನೀವು ಚೆನ್ನಾಗಿ ಪ್ರಸ್ತುತಪಡಿಸಿದ್ದೀರಿ ಎಂದು ಆಡಳಿತಮಂಡಳಿಯವರು ತಿಳಿಸಿದರು ಎಂದಾಗ ಒಂದು ರೀತಿಯ ಸಮಾಧಾನ. ವೃತ್ತಿ ಜೀವನದುದ್ದಕ್ಕೂ ಸಾಕಷ್ಟು ನಿರೂಪಣಾ ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಕೈಗೊಂಡಿರುವುದರ ಸಂತೃಪ್ತಿ ಇದೆ .ಇದಕ್ಕೆ ಸಹಕಾರ ನೀಡಿದ ಅವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸುತ್ತೇನೆ .
       ಮೊಟ್ಟಮೊದಲ ಬಾರಿಗೆ ಇಳಕಲ್ ನಗರದಲ್ಲಿ ದೇವಲ ಮಹರ್ಷಿ ಉತ್ಸವ ಸಮಾರಂಭದಲ್ಲಿ ನಿರೂಪಣೆ ಮಾಡಲು ಸಹೋದರ ಸಮಾನರಾದ ಶ್ರೀ ವೇಣುಶಂಕರ ಕುಂಟೋಜಿಯವರು ಅವಕಾಶ ಕಲ್ಪಿಸಿದರು .ಶ್ರೀ ಶ್ರೀ ಶ್ರೀ ದಯಾನಂದಪುರಿ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ ಆ ಸಮಾರಂಭದಲ್ಲಿ ಅಷ್ಟೊಂದು ಜನರೆದುರು ನಿರೂಪಣೆ ಮಾಡಲು ನಿರಾಕರಿಸಿದೆ .ನಿಮ್ಮಿಂದ ಸಾಧ್ಯ ಮೇಡಮ್ ಪ್ರಯತ್ನಿಸಿ ಎಂದು ಧೈರ್ಯ ತುಂಬಿದಾಗ ಯಶಶ್ವಿಯಾಗಿ ಶ್ರೀಮತಿ ವಿಜಯಲಕ್ಷ್ಮೀ  ಗೂಳಿ ಅವರೊಂದಿಗೆ ನಿರೂಪಣೆ ಮಾಡಿದೆ.ಅಲ್ಲಿಂದ ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆಗೆ ಅವಕಾಶ ಸಿಕ್ಕಿತು, ಅದಕ್ಕಾಗಿ ಶ್ರೀ ವೇಣುಶಂಕರ ಕುಂಟೋಜಿ ಅವರಿಗೆ ಧನ್ಯವಾದಗಳನ್ನು  ತಿಳಿಸುವೆ .

  ನನ್ನ ವೃತ್ತಿ ಜೀವನದಲ್ಲಿ ಮರೆಯಲಾರದ ಕ್ಷಣವೆಂದರೆ ಹರಿಹರದ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮೀಜಿ ಅವರಿಂದ ಪ್ರಶಂಸೆಗೆ ಒಳಗಾಗಿ  ಶಾಲುಓದಿಸಿಕೊಂಡು ಸನ್ಮಾನಗೊಳ್ಳುವಂತಹ ಅವಕಾಶವನ್ನು ೨೦೧೮ ರಲ್ಲಿ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀ ಬಿ. ಆರ್. ಕಟ್ಟಿಯವರು ಕಲ್ಪಿಸಿಕೊಟ್ಟಿದ್ದರು.ಅದಕ್ಕೆ ಕಾರಣ ಸ್ವಾಮಿ ವಿವೇಕಾನಂದರ ೧೫೦ ನೇ  ಜನ್ಮ ಶತಮಾನೋತ್ಸವದ ನಿಮಿತ್ತ ಅವರ ಜೀವನಕ್ಕೆ ಸಂಬಂಧಿಸಿದಂತಹ ವಿಷಯವಸ್ತುವನ್ನು ವಿದ್ಯಾರ್ಥಿಗಳಿಗೆ ಒದಗಿಸಿ ಅದರ ಅಧ್ಯಯನದ ಮೇಲೆ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿ ಅತಿ ಹೆಚ್ಚು ಅಂಕ ಪಡೆದವರಿಗೆ ಪುಸ್ತಕರೂಪದ ಬಹುಮಾನ ನೀಡುವ ಮೂಲಕ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಲಿ ಎನ್ನುವ ಸದುದ್ದೇಶದಿಂದ ಹರಿಹರದ ಶ್ರೀ ರಾಮಕೃಷ್ಣ ಆಶ್ರಮದ ಟ್ರಸ್ಟ್ ನವರು ಎಲ್ಲಾ ಊರುಗಳಲ್ಲಿಯೂ ಈ ರೀತಿ ಪರೀಕ್ಷೆ ಏರ್ಪಡಿಸಿದ್ದರು. 
ಅದೇ ರೀತಿ ಇಳಕಲ್ ನಗರದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೂ ಪರೀಕ್ಷೆ ನಡೆಸಿದರು. ನಮ್ಮ ಶಾಲೆಯ ವತಿಯಿಂದ ಆ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ನನಗೆ ಮತ್ತು ಕನ್ನಡ ಮಾಧ್ಯಮ ಪ್ರಾಥಮಿಕ ವಿಭಾಗದ ಸಹ ಶಿಕ್ಷಕರಾದ ಶ್ರೀ ಎಂ. ಕೆ .ಬಗಾಡೆಯವರಿಗೆ ವಹಿಸಿದ್ದರು .ಯಶಸ್ವಿಯಾಗಿ  ಪರೀಕ್ಷೆ ನಡೆಯಲು ಸಹಕಾರ ನೀಡಿದರು ಎನ್ನುವ ಕಾರಣಕ್ಕೆ ಎಂ.ಕೆ.ಬಗಾಡೆಯವರಿಗೆ ಮತ್ತು ನನಗೆ  ಶ್ರೀ ಶಾರದೇಶಾನಂದ  ಸ್ವಾಮೀಜಿಯವರಿಂದ ಗೌರವ ಸ್ವೀಕರಿಸುವ  ಸದಾವಕಾಶ ಒದಗಿದ್ದು, ವೃತ್ತಿಜೀವನದ ಸ್ಮರಣೀಯ ನೆನಪು.
          ಮತ್ತೊಂದು ನಿರೂಪಣೆ ಮಾಡುವ ಅವಕಾಶ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ  ಶ್ರೀ ಬಿ.ಆರ್. ಕಟ್ಟಿಯವರಿಂದ ಒದಗಿಬಂತು. ನನ್ನಿಂದ ಸಾಧ್ಯ ಎನ್ನುವ  ಆತ್ಮವಿಶ್ವಾಸ ನನ್ನಲ್ಲಿ ಇರಲಿಲ್ಲ. ಆದರೆ ಅವರಲ್ಲಿತ್ತು.೧೩-೧೧-೨೦೧೮ ರಂದು ಇಳಕಲ್ ನಗರದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷೆಯ ಮೇಲಿದ್ದ ಭಯ ಹೋಗಲಾಡಿಸಲು "ಹತ್ತರ ಭಯ ಹತ್ತಿರ ಬೇಡ! ಎನ್ನುವ ವ್ಯಕ್ತಿತ್ವ ವಿಕಸನದ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಕೆ ಅನಂತರಾಮು ಮತ್ತು ಹರಿಹರದ ಶ್ರೀ ರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದ ಸ್ವಾಮೀಜಿ ಅವರಿಂದ ಏರ್ಪಡಿಸಿದ್ದರು. 
ಇಲಕಲ್ಲ  ನಗರದ ಎಲ್ಲ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ -ಶಿಕ್ಷಕಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿತ್ತು .ಶಾಲಾ ಹಂತದ ನಿರೂಪಣೆಯೇ ಬೇರೆ, ಅಷ್ಟೊಂದು ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮೂಹದ ನಡುವೆ ನಿರೂಪಣೆ ಮಾಡುವೆನೆಂಬ ಧೈರ್ಯ ನನಗಿರಲಿಲ್ಲ. ಆದರೆ ಶ್ರೀ ಬಿ. ಆರ್. ಕಟ್ಟಿಯವರು,  ನೀವೇ ನಿರೂಪಣೆ ಮಾಡಬೇಕು ಎಂದಾಗ, ಧೈರ್ಯದಿಂದ ಒಪ್ಪಿಕೊಂಡೆ .ಸರಿ ಸುಮಾರು ೫೦೦ ವಿದ್ಯಾರ್ಥಿಗಳು ಇರಬಹುದೇನೋ, ಅಂತಹ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದು ಅವಿಸ್ಮರಣೀಯ ನೆನಪು. ಆತ್ಮವಿಶ್ವಾಸದ ಮಾತುಗಳಿಂದ ಧೈರ್ಯ ತುಂಬಿ ಯಶಸ್ವಿಯಾಗಿ ಶೈಕ್ಷಣಿಕ ಕಾರ್ಯಕ್ರಮ ನೆರವೇರುವಂತೆ ಮಾಡಿದ ಶ್ರೀ ಕಟ್ಟಿ ಸರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ .  ಮೈಸೂರಿನ ಡಾ.ಕೆ ಅನಂತರಾಮು ಮತ್ತು ಶ್ರೀ ಶಾರದೇಶಾನಂದ ಸ್ವಾಮೀಜಿಗಳು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಬಗ್ಗೆ ಇದ್ದಂತಹ ಭಯವನ್ನು ಹೋಗಲಾಡಿಸುವಂತಹ ಹಲವಾರು ಉಪಯುಕ್ತ ಮಾಹಿತಿಯನ್ನು ತಿಳಿಸುವುದರ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಯ ಬಗ್ಗೆ ನಿರ್ಭಯರನ್ನಾಗಿ ಮಾಡುವ ಪ್ರಯತ್ನ ಮಾಡಿದರು .
 
         ಇಲಕಲ್ಲಿನ ಅನುಭವ ಮಂಟಪದಲ್ಲಿ ಮಹಾತ್ಮಾ ಗಾಂಧೀಜಿಯವರ ಜೀವನ ಚರಿತ್ರೆ ಕುರಿತು ನಾಟಕವೊಂದನ್ನು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದರು.ಈ ತಂಡದಲ್ಲಿ ಬೇರೆ ಬೇರೆ ರಾಜ್ಯದಿಂದ ಬಂದಂತಹ ಯುವಕರು ಅಭಿನಯದ ಮೂಲಕ ಮಹಾತ್ಮಾ ಗಾಂಧೀಜಿಯವರ ಜೀವನದ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡು ಊರೂರುಗಳಿಗೆ ಸಂಚರಿಸುತ್ತಾ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಸಿದ್ದರು .ಅದಕ್ಕಾಗಿ ಇಲ್ಲಿನ ಶ್ರೀ ಗುರುಮಹಾಂತ ಸ್ವಾಮೀಜಿಯವರು  ಅನುಭವ ಮಂಟಪವನ್ನು ಉಚಿತವಾಗಿ ನಾಟಕ ಪ್ರದರ್ಶನಕ್ಕೆ ನೀಡುವ ಮೂಲಕ, ಎಲ್ಲ ಶಾಲೆಯ ವಿದ್ಯಾರ್ಥಿಗಳು ಅಲ್ಲಿಯೇ ಬಂದು ನೋಡಲು ಅವಕಾಶ ಕಲ್ಪಿಸಿದ್ದರು.ಅದೇ ರೀತಿ ನಮ್ಮ  ಶಾಲೆಯ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಕರೆದುಕೊಂಡು ಹೋಗಿದ್ದೆವು. ನಾಟಕ ಪ್ರದರ್ಶನದ ನಂತರ ಅವರ ಅಭಿನಯದ ಬಗ್ಗೆ ಅನಿಸಿಕೆ ಹೇಳುವ ಅವಕಾಶ ಸಿಕ್ಕಾಗ ನಮ್ಮ ಶಾಲೆಯ ಪರವಾಗಿ ಅನಿಸಿಕೆ ಹಂಚಿಕೊಂಡ ಕ್ಷಣವೂ ನನಗೆ ಅಮೂಲ್ಯವೆನಿಸಿತ್ತು .ಭೂಮಿ ಹದವಾಗಿದ್ದಾಗ ಬೀಜ ಬಿತ್ತನೆ ಮಾಡಿದರೆ ಉತ್ತಮ ಬೆಳೆ ಬರುವಂತೆ, ವಿದ್ಯಾರ್ಥಿ ಜೀವನವೆಂದರೆ ಹದವಾದ ಭೂಮಿ ಇದ್ದಂತೆ .ಇಂತಹ ಸಂದರ್ಭದಲ್ಲಿ ಸದ್ವಿಚಾರಗಳನ್ನು ಬಿತ್ತರಿಸಿದರೆ ಅದರಂತೆ ಅವರು ನಡೆದುಕೊಳ್ಳುವರೆಂಬ ಸದುದ್ದೇಶದಿಂದ ಈ ಜಾಗೃತಿ ಅಭಿಯಾನ ನಿರಂತರವಾಗಿ ನಡೆಯುತ್ತಿದೆ .
       ಎ .ಸಿ. ಓ. ಶಾಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಶ್ರೀ ಆರ್.ಎಂ. ಬಸನಗೌಡ ಇವರು ವಿದ್ಯಾರ್ಥಿಗಳೆಲ್ಲರ ಅಚ್ಚುಮೆಚ್ಚಿನ ಶಿಕ್ಷಕರಾಗಿದ್ದರು. ರಾಷ್ಟ್ರೀಯ ಹಬ್ಬಗಳಾದ ಆಗಸ್ಟ್ ೧೫,ಜನೇವರಿ ೨೬ ಮತ್ತು ಮಹಾತ್ಮಾ ಗಾಂಧಿ ಜಯಂತಿಯಂತಹ ಸಂದರ್ಭಗಳಲ್ಲಿ ಎಲ್ಲ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಳ್ಳುವಂತೆ ಮಾಡುವ ಕೆಲಸವನ್ನು ಎಲ್ಲ ಶಿಕ್ಷಕ-ಶಿಕ್ಷಕಿಯರು  ಅಚ್ಚುಕಟ್ಟಾಗಿ ನೆರವೇರಿಸುತ್ತಿದ್ದು, ಮಕ್ಕಳ ಮನಸ್ಸಿಗೆ ಮುದ ತರುವಂಥ ವಿಷಯವಾಗಿತ್ತು .ಅಲ್ಲದೆ ಶೈಕ್ಷಣಿಕ ಪ್ರವಾಸಗಳನ್ನು ಕೈಗೊಂಡಾಗ ಶಿಸ್ತಿನಿಂದ ವಿದ್ಯಾರ್ಥಿಗಳ ಯೋಗಕ್ಷೇಮದ ಜವಾಬ್ದಾರಿಯನ್ನು ಹೊತ್ತು ಸುರಕ್ಷಿತವಾಗಿ ಅವರನ್ನು ಕರೆತರುವ ಗುರುತರ ಜವಾಬ್ದಾರಿಯ ಕೆಲಸ ಮಾಡುವುದನ್ನು ಕಂಡರೆ ಸಂತೋಷವೆನಿಸುತ್ತಿತ್ತು. ಕನ್ನಡ ಮಾಧ್ಯಮ ಪ್ರೌಢ ವಿಭಾಗದ ವಿದ್ಯಾರ್ಥಿಗಳೊಂದಿಗೆ 3ಸಾರಿ ಶೈಕ್ಷಣಿಕ ಪ್ರವಾಸ ಮಾಡಿದ ಮಧುರ ಅನುಭವಗಳು ನೆನಪಿನಂಗಳದಲಿ ಹಾಗೆ ವಿಹರಿಸುತ್ತಿರುತ್ತವೆ .ವಾರ್ಷಿಕ ಸ್ನೇಹ ಸಮ್ಮೇಳನ ದಂತಹ ಪ್ರಮುಖ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಆದರ್ಶ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಕ್ರೀಡಾಪಟುಗಳ ಸನ್ಮಾನ ಸಮಾರಂಭವು ಸಹ ಎ.ಸಿ.ಓ.ಶಿಕ್ಷಣ ಸಂಸ್ಥೆಯ ವಿಶೇಷತೆಗಳಲ್ಲಿ ಒಂದಾಗಿತ್ತು .ಅಲ್ಲದೆ ಎಪ್ಪತ್ತು ವಸಂತಗಳನ್ನು ಪೂರೈಸಿದಂತಹ ಆಡಳಿತ ಮಂಡಳಿಯ ದಂಪತಿಗಳಿಗೆ ಸನ್ಮಾನಿಸುವ ಸಮಾರಂಭವು ಸಹ ವಿನೂತನ ಕಾರ್ಯಕ್ರಮವಾಗಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸುವಲ್ಲಿ ಸಹಾಯಕವಾದ ಮಾರ್ಗದರ್ಶನದ ಅಂಶ ಬಿಂಬಿತವಾಗುತ್ತಿತ್ತು .ಒಟ್ಟಾರೆಯಾಗಿ     ಪ್ರತಿಯೊಂದು ಕಾರ್ಯಚಟುವಟಿಕೆಗಳಲ್ಲಿ ಆಡಳಿತ ಮಂಡಳಿಯವರು ಮತ್ತು ಶಿಕ್ಷಕರ ಸಹಕಾರದಿಂದ ಉತ್ತಮ ಶೈಕ್ಷಣಿಕ ಚಟುವಟಿಕೆಗಳ ಮೂಲಕ ಪ್ರಗತಿ ಪಥದತ್ತ ಸಾಗುತ್ತಿರುವ ಶಿಕ್ಷಣ ಸಂಸ್ಥೆಯು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಬಯಸುತ್ತೇನೆ. ಶಾಲೆಯಿಂದ ವಿಮುಖಳಾಗುತ್ತಿರುವುದು ಮನಸ್ಸಿಗೆ ಬೇಸರದ ವಿಷಯವಾಗಿದ್ದರೂ ಸಹ, ನನ್ನಂತೆಯೇ ಶಿಕ್ಷಕ ವೃತ್ತಿಯನ್ನು ಮಾಡಲು ಹಂಬಲಿಸುವಂತಹ ಪದವೀಧರರಿಗೆ ಇದು ಅವಕಾಶ ಕಲ್ಪಿಸುವ ಕ್ಷಣವೆಂದು ಭಾವಿಸಿ, ಸಂತೃಪ್ತಿಯಿಂದ ಶಾಲೆಯಿಂದ ಬೀಳ್ಕೊಡುಗೆಯನ್ನು ಪಡೆಯುತ್ತಿದ್ದೇನೆ. ಹಾಗೆಯೇ ಸಂಸ್ಥೆಯ ಹಿರಿಯ ಚೇತನಗಳಾದ  ಶ್ರೀಯುತ ಎಂ. ಎಸ್. ಕೊಡಗಲಿ,      ಗೋಟೂರ ಸರ್ ,ಗೊಂಬಿ ಸರ್ ,ಕೆ ಎಚ್ .ಕಂದಿಕೊಂಡ ಸರ್, ಎನ್ ಎಚ್.  ಪತ್ತಾರ್ ಸರ್  ಇವರೆಲ್ಲರೂ ನಮ್ಮನ್ನಗಲಿದ್ದಾರೆ .ಈ ಹಿರಿಯ ಚೇತನಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
ಸಂಸ್ಥೆಯ ಅಧ್ಯಕ್ಷರಾಗಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಪಿ. ಎನ್ .ದರಕ  ಅವರಿಗೆ ಹಾಗೂ ಕನ್ನಡ ಮಾಧ್ಯಮ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ಬಿ. ಎಸ್ .ಕವಡಿಮಟ್ಟಿ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀ ವಸಂತ್ ಎಸ್. ಗುಡೂರು ಇವರಿಗೂ ಸಹ ಧನ್ಯವಾದಗಳನ್ನು ತಿಳಿಸುತ್ತೇನೆ .ಸಂಸ್ಥೆಯ ಹಿರಿಯರಾದ ಪಿತೃ ಸಮಾನರಾದ ಶ್ರೀ ಡಿ .ಪಿ. ಡಾಗರವರಿಗೂ ಸಹ ವಂದನೆಗಳನ್ನು ಸಲ್ಲಿಸುತ್ತೇನೆ .ಪ್ರೀತಿಯಿಂದ ಬೀಳ್ಕೊಡುಗೆ ನೀಡಿದ ಎಲ್ಲಾಸಹ ಶಿಕ್ಷಕಿಯರ ನೆನಪಿನಲ್ಲಿ .........
 

- ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ ಇಲಕಲ್ಲ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮನುಷ್ಯನ ಗುಣ (ಕವಿತೆ) - ಶ್ರೀ ಜಿ ಟಿ ಆರ್ ದುರ್ಗಾ, ಬಂಗಾರಪೇಟೆ.

ಮನುಷ್ಯನ ಗುಣ

ಹೀಗಿದ್ದದ್ದು ಕಾಲ ಹೀಗೇ ಇರಲ್ಲ
ನಾಳೆ ಹೇಗೆ ಇರುವುದು ಚಿಂತೆ ನಿನಗಿಲ್ಲ
ಬರುವುದನ್ನು ಪಡೆಯಬೇಕು
ಅದೃಷ್ಟವು ಬರುವವರೆಗೆ ಕಾಯಲೆಬೇಕು

ಚಿಂತೆಯಿಂದ ನೂರು ಖಾಯಿಲೆ ಚೆಟ್ಟ ಕಟ್ಟಕೆ 
ಮನಸ್ಸಿನಲ್ಲಿ ಬೇಸರ ಬೇಡ ಜೀವನ ಕಳಿಯಾಕೆ
ತುತ್ತು ಕೂಳಿಗಾಗಿ ಏಕೆ ಮೋಸ ವಂಚನೆ
ಇನ್ನೊಬ್ಬರಿಗೆ ಅನ್ಯಾಯ ಇನ್ನೇನಿದೆ ಯೋಚನೆ

ಬಂಧು ಬಳಗವೆಲ್ಲ ಕೇಳೋದೊಂದೆ ಸಹಕಾರ
ಅದಕ್ಕೆ ಕೋಪಬೇಡ ಮನದಲಿ ಮಾಡು ಸಹಕಾರ
ಇದ್ರೆ ಹಂಚಿ ತಿನ್ನು ಅವರಿಗೆ ತೃಪ್ತಿತಾನೆ
ಕೊಟ್ಟವರ ಎಂದು ಮರಿಬೇಡಿ ಸ್ನೇಹವನ್ನೆ

ಒಂದು ಬಾರೆ ಯೋಚಿಸಿ ಹಿಂದಿನ ಕಷ್ಟ ಆವತ್ತು
ಅದನ್ನು ಯಾವತ್ತು ಮರಿಬೇಡ ಸಿಗೊದಿಲ್ಲ ತುತ್ತು
ಕಷ್ಟ ಎನ್ನುವರಿಗೆ ಕೈ ಹಿಡಿಯುವ ಗುಣವಿರಬೇಕು
ಹಣ ಎಂದು ಶಾಶ್ವತವಲ್ಲ ಮೊದಲು ತಿಳಿಬೇಕು

ಒಳ್ಳೆ ಮಾರ್ಗ ತೋರಿದವರು ದೂರ ತಳ್ಬೇಡ
ನಿನ್ನೆ ಬಂದವರಿಗಿಂತ ಹಳೆಯವರನ್ನು ತೊರಿಬೇಡ
ಕತ್ತಲೆ ಬೆಳಕಿನಂತೆ ಜೀವನ ನೀ ಕೇಳು
ಐಶ್ವರ್ಯ ಇರುತ್ತೆ ನಾಳೆ ಹೋಗುತ್ತೆ  ಹೇಳುವೆ ಕೇಳು

ಆಕಾಶಕ್ಕೆ ಏಣಿಯನ್ನು ಹಾಕಕ್ಕಾಗಲ
ಒಳಗುಟ್ಟಿನ ಮನುಷ್ಯನನ್ನು ನಂಬಕ್ಕಾಗಲ್ಲ
ಇರುವ ಸಂಬಂಧವ ಹಣಕ್ಕಾಗಿ ತೂಕ ಮಾಡ್ಬೇಡಿ
ಮನುಷ್ಯತ್ವ ಯಾವತ್ತು ನೀನು ಕಳ್ಕೊಬೇಡಿ
ಜಿ ಟಿ ಆರ್ ದುರ್ಗ 
ಜಿ ಹೆಚ್ ಎಲ್ ಬಂಗಾರಪೇಟೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಡಾll ಪಿ. ಎಮ್. ಪ್ರಕಾಶ ಭೋಜೆಯವರು ಗುರುಕುಲ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ

*ಡಾll ಪಿ. ಎಮ್.  ಪ್ರಕಾಶ ಭೋಜೆಯವರು ಗುರುಕುಲ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ*

ಬೆಳಗಾವಿ: ಜಿಲ್ಲೆಯ ಸದಗಾಲ ಗ್ರಾಮದ ರಾಗಿರುವ ಡಾll ಪ್ರಕಾಶ ಎಮ್. ಭೋಜೆಯವರ ಶಿಕ್ಷಣ ಕ್ಷೇತ್ರ, ಸಾಹಿತ್ಯ ಕ್ಷೇತ್ರ, ಸಮಾಜ ಸೇವೆ, ಹಾಗೂ ಇವರ ಇನ್ನೂ ಅನೇಕ ಸೇವೆಗಳನ್ನು ಗುರ್ತಿಸಿ ಗುರು ಕುಲ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷಾರದ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟನೆ ತಿಳಿಸಿದ್ದಾರೆ.

ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ ತುಂಬು ಹೃದಯದ ಅಭಿನಂದನೆಗಳು 💐💐


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಡಾll ಬಿ. ಎಸ್. ಬಾಗೇವಾಡಿಮಠರವರು ಗುರುಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ

*ಡಾll ಬಿ. ಎಸ್. ಬಾಗೇವಾಡಿಮಠರವರು ಗುರುಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ*
ರಾಣಿಬೇನ್ನೂರು: ನಗರದ ಯುವ ಕವಿ ಸಾಹಿತಿ ಹಾಗೂ ಲೇಖಕರಾದ ರಾಣಿಬೇನ್ನೂರು ಹಾವೇರಿ ಜಿಲ್ಲೆಯವರಾದ
ಡಾll ಬಸವರಾಜ ಎಸ್  ಬಾಗೇವಾಡಿಮಠರವರ ಸಾಹಿತ್ಯ ಕ್ಷೇತ್ರ, ಸಮಾಜ ಸೇವೆ, ಹಾಗೂ ಇವರ ಅನೇಕ ಸೇವೆಗಳನ್ನು ಗುರ್ತಿಸಿ ಗುರು ಕುಲ ಚಾಣಕ್ಯ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆಂದು ಗುರುಕುಲ ಕಲಾ ಪ್ರತಿಷ್ಠಾನ (ರಿ) ರಾಜ್ಯ ಘಟಕದ ಸಂಸ್ಥೆಯ ಅಧ್ಯಕ್ಷಾರದ ಹುಲಿಯೂರುದುರ್ಗ ಲಕ್ಷ್ಮೀ ನಾರಾಯಣ್ ರವರು ಪ್ರಕಟನೆ ತಿಳಿಸಿದ್ದಾರೆ.

ಮಾನ್ಯರಿಗೆ ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ವತಿಯಿಂದ  ತುಂಬು ಹೃದಯದ ಅಭಿನಂದನೆಗಳು. 💐💐



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಮಂಗಳವಾರ, ಜುಲೈ 27, 2021

ಬದಲಾಗಲಿ ಬದುಕು(ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಬದಲಾಗಲಿ ಬದುಕು 

ಮಂಡಿ ಊರಿದ್ದು ಅನ್ನಕ್ಕೆ
ಗುಂಡಿ ತೋಡಿದ್ದು ಸದ್ಗತಿಗೆ
ಚಂಡೆ ಸದ್ದಿನ ಮೆರವಣಿಗೆ
ದಂಡೆ ಮಾಸಿದಂತೆ ಬದುಕು

ಓಡಿ ಸೇರಿದ್ದು ರಸ್ತೆಗೆ
ಹಿಡಿದು ನಿಂತದ್ದು ಪೊರಕೆ
ಗೂಡಿಸಿದ್ದೆ ತಡ ರಸ್ತೆ ಶುಚಿ
ದಡ ಮುಟ್ಟದ ಬದುಕು

ಹಸಿವು ತಾಳದೆ ಕೂಗಿದೆ
ಬಿಸಿದು ಬಯಸದೆ ಬೇಡಿದೆ
ಮನೆಯಿಲ್ಲದೆ ಮಲಗಿದೆ
ಕೊನೆ ಇಲ್ಲದ ನೋವು

ಮಳೆ ಬಾರದೆ ಸೊರಗಿದೆ
ಬೆಳೆ ಉಣ್ಣದೆ ಮಾರಿದೆ
ಗಳಿಕೆ ಇಲ್ಲದೆ ಬೆವರಿದೆ
ಭದ್ರತೆ ಇಲ್ಲದ ಬದುಕು

ಚಳಿಗೆ ಬೆದರದೆ ಎದ್ದೆ
ಮಳೆಗೆ ದುಡಿಯುತ ನೆನೆದೆ
ಒಳಗೆ ತಿಳಿಯದೆ ಅತ್ತೆ
ನಲಿವಿರದೆ ಸೊರಗಿದ ಬಾಳು
  
   
        -  ಶ್ರೀ ತುಳಸಿದಾಸ ಬಿ ಎಸ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...