ಡಾ ಸಿ . ಜಿ ಲಕ್ಷೀಪತಿಯವರು ಈ ಪುಸ್ತಕವನ್ನು ಬರೆದಿದ್ದಾರೆ. ಇಪ್ಪತ್ತು ವರ್ಷಗಳಾದ ಮೇಲೆ ಪುನಃ ಕೌದಿ ಪ್ರಕಾಶನದಿಂದ ಪುಸ್ತಕ ಬಿಡುಗಡೆಯಾಗಿದೆ.
ಓದುಗರನ್ನು ಓದಿಸಿಕೊಂಡು ಹೊಗುವಂತ ಬರಹ ಇವರದ್ದು. ಓದಲು , ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು. ಸರಳವಾದ ಪದಗಳ ಬಳಕೆ ಮಾಡಿದ್ದಾರೆ. ಒಟ್ಟಿನಲ್ಲಿ ಭಾರತದಲ್ಲಿ ಲೈಂಗಿಕತೆಗಳಿಗಿರುವ , ಮೌಢ್ಯತೆಗಳು, ನಂಬಿಕೆಗಳು ಹಾಗೂ ಇತಿಹಾಸವನ್ನು ಹೇಳಿದ್ದಾರೆ.
ಹಳ್ಳಿಗಳಲ್ಲಿ ಗುಟ್ಟಾಗಿ ನಡೆಯುವ ಲೈಂಗಿಕತೆ ಚರ್ಚೆಗಳ ಬಗ್ಗೆ ಹೇಳಿದ್ದಾರೆ ಅವುಗಳನ್ನು ಕೇಳಿದರೆ , ಕಾಮಿಡಿಗಳನ್ನು ಇಷ್ಟೊಂದು ಸಿರೀಯಸ್ ತೊಗೊಳುತ್ತಾರ ಎಂಬ ಪ್ರಶ್ನೆಗಳು ಮೂಡುತ್ತವೆ.
ಹಳ್ಳಿಗಳಲ್ಲಿ ಹೀಗೆ ಮಾತಾಡುತ್ತಾ "ನಿನ್ನ ಮರ್ಮಾಂಗದ ಸುತ್ತ ಕಳ್ಳಿ ಹಾಲನ್ನು ಸವರಿಬಿಡು , ಲೈಂಗಿಕ ಅಂಗ ಗಟ್ಟಿಯಾಗುವುದರ ಜೊತೆಗೆ ದಿರ್ಘವಾಗಿ ಸಂಭೊಗಿಸುವ ಶಕ್ತಿ ಬರುತ್ತೆ" ಎಂದು ಹೇಳಿದನ್ನು ಕೇಳಿ ಹಾಗೇ ಮಾಡಿ, ಆ ಜಾಗವೆಲ್ಲ ಊದುಕೊಂಡಿಹೊಗಿತಂತೆ . ಹೀಗೆ ಹಲವಾರು ಕಟ್ಟುಕತೆಗಳು, ಹಾಸ್ಯರ್ಥದ ಮಾತುಗಳಿವೆ. ಇಂತಹ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಆಂದ್ರಪ್ರದೇಶದ ಕರ್ನೂಲು ಜಿಲ್ಲೆಯ ' ಆಲಂಪುರ' ಎಂಬಲ್ಲಿ ಇವತ್ತಿಗೂ ಯೋನಿ ಪೂಜೆ ಮಾಡುವುದರ ಬಗ್ಗೆ ತಿಳಿಸಿದ್ದಾರೆ. ಅಲ್ಲಿನ ಜನರ ನಂಬಿಕೆ ಯೊನಿಪೂಜೆ ಮಾಡಿದ್ರೆ ಮಕ್ಕಳಾಗುತ್ತೆ ಅಂತಾ .
ನಮ್ಮ ಭಾರತೀಯರು ಲೈಂಗಿಕತೆ ವಿಷಯ ಬಂದರೆ ವೈದ್ಯರ ಬಳಿ ಹೋಗುವವರಿಗಿಂತ ತಾಂತ್ರಿಕರ ಬಳಿ ಹೋಗುತ್ತಾರೆ.
ಈ ಪುಸ್ತಕ ಓದಿದದರಿಂದ ಗೊತ್ತಾಗಿದ್ದು ಪಾಲಿಪುತ್ರದಲ್ಲಿ, ಬನರಾಸ್ಸಿನಲ್ಲಿ ವೆಶ್ಯೆಗೃಹಗಳಿದ್ದವೆಂದು . ಲೈಂಗಿಕತೆಯನ್ನು ಸಮಾಜವು ನಿಗೂಢವಾಗಿ ಇರಿಸಿದೆ. ಅದನ್ನು ಈ ಪುಸ್ತಕ ಮುಕ್ತವಾಗಿ ತೆರೆದಿಟ್ಟಿದೆ. ಇದರಲ್ಲಿ ವಾತ್ಸಾಯಾನ ಕಾಮಸೂತ್ರ , ಕೊಕ್ಕನ ರತಿ ರಹಸ್ಯ , ರತಿ ಸೂತ್ರ, ಮನುಸ್ಮೃತಿ , ಕೌಟಿಲ್ಯನ, ಇವರೆಲ್ಲರ ಅಂಶಗಳನ್ನು ಒಳಗೊಂಡಿದೆ.
ಮುಂಬೈನ ರೆಡ್ ಲೈಟ್ ಎರಿಯಾ ಆದ ಕಾಮಾಟಿಪುರದ ಬಗ್ಗೆಯು ವಿವರಣೆಯನ್ನು ಕೊಟ್ಟಿದ್ದಾರೆ. ಲೈಂಗಿಕ ಕಾರ್ಯಕರ್ತೆಯರ ಒತಿಗಾಗಿ ಕೆಲಸಮಾಡುತ್ತಿರುವ ಕಾರ್ತಿಲಾಲ್ ಭೋಲಾ ಅವರ ಪ್ರಕಾರ , ಭಾರತದಲ್ಲಿ ಸರಿಸುಮಾರು 23,85,000 ವೇಶ್ಯೆಯರಿದ್ದಾರೆ. 2,75,000 ವೇಶ್ಯೆಗೃಹಗಳು ಮತ್ತು 1100 ರೆಡ್ ಲೈಟ್ ಎರಿಯಾಗಳಿವೆ .
ಲೈಂಗಿಕ ಚಟುವಟಿಕೆಯನ್ನು ವೃತ್ತಿಯೆಂದು ಪರಿಗಣಿಸದ ವೇಳೆಯಲ್ಲಿ, ವೇಶ್ಯರು ತುಂಬಾ ನೋವನ್ನು ಅನುಭವಿಸಿದ್ದಾರೆ. ಅವರಿಗೆ ಸಿಗುವ ಅಲ್ಪಸ್ವಲ್ಪ ಹಣದಲ್ಲಿ, ಘರವಾಲಿಗಳಿಗೆ ಕೊಡಬೇಕು, ಪೋಲಿಸರಿಗೆ ಕೊಡಬೇಕಿತ್ತು, ಪೋಲಿಸ್ ದಾಳಿ ಮಾಡಿದರೆ ಲಾಯರ್ ಗೆ ಹಣ ಪಾಲಾಗುತಿತ್ತು . ಹೀಗಾಗಿ ಲೈಂಗಿಕ ಕಾರ್ಯಕರ್ತೆಯರು ಸೇರಿ ಸಭೆ ಸೇರಿದರು ಚರ್ಚೆ ಮಾಡಿದ್ದರು. ಸುಪ್ರೀಂ ಕೋರ್ಟ್ ಕೊಟ್ಟಿರುವ ತೀರ್ಪು ನನಗೆ ಸರಿ ಅನಿಸಿದೆ. ಅದು ಸಹ ಒಂದು ವೃತ್ತಿಯೆಂದು ನೋಡಬೇಕು.
ಗಾಂಧಿಯನ್ನು ನಾನು ತಿಳಿದುಕೊಂಡಿದ್ದು ನಮ್ಮ ಶಿಕ್ಷಕರು ಹೆಳಿದ್ದು ಮಾತ್ರ. ಆದರೆ ಗಾಂಧಿಜಿಯವರ ಲೈಂಗಿಕತೆಯ ವಿಚಾರಗಳು ತಿಳಿದುಕೊಂಡೆ. ತಮ್ಮ 77 ನೇ ವಯಸ್ಸಿನಲ್ಲಿ ಗಾಂಧಿಜಿ ತಮ್ಮ ಮೊಮ್ಮಗಳೊಡನೆ ಬೆತ್ತಲೆ ಮಲಗಿದ್ದರು ಎಂದು ಓದಿದ ನನಗೆ ಆಶ್ಚರ್ಯವಾಗಿತು. 37 ನೇ ವಯಸ್ಸಿಗೆ ಬ್ರಹ್ಮಚರ್ಯವನ್ನು ಆಚರಿಸಿದ ಗಾಂಧಿಗೆ 77 ನೇ ವಯಸ್ಸಿಗೆ ಅನುಮಾನ ಬಂದಿದ್ದು ಏಕೆ..? ಎಂಬುದು ಗೊತ್ತಾಗಲಿಲ್ಲ .
" ಗಟ್ಟಿನಾಣ್ಯ - ಮೃದು ದೇಹ" ಅದ್ಯಾಯವು ನನಗೆ ನಿಜಕ್ಕೂ ಬೇಸರವಾಯಿತು ಅಭಿವೃದ್ಧಿಯ ಹೆಸರಿನಲ್ಲಿ ಅರ್ಥ ಮಂತ್ರಿಯಾದ ಮನಮೊಹನ್ ಸಿಂಗ್ ಅವರು ಉದಾರೀಕರಣ ಜಾರಿಗೆ ತರುವುದರ ಮೂಲಕ ಪರೋಕ್ಷವಾಗಿ ಸೆಕ್ಸ್ ಟೂರಿಸಂ ಗೆ ಒಪ್ಪಿಗೆ ನೀಡಿದರು. ಇದರಲ್ಲಿ ತುಂಬಾ ಜನರು ಬಲಿಯಾಗಿದ್ದಾರೆ, ಮಕ್ಕಳು ಮಹಿಳೆಯರು, ಬೇರೆ ಬೇರೆ, ಸಿಫಿಲಸ್, ಗೊನೆರಿಯಾ , ಏಡ್ಸ್ ರೋಗಗಳಿಗೆ ತುತ್ತಾಗಿದ್ದಾರೆ.
ಸಲಿಂಗರತಿ ಬಗ್ಗೆ ನೋಡಬಹುದು. ವಿರುದ್ಧ ಲಿಂಗಗಳೊಡನೆ ಇರುವದು ಸರಿ ಎಂದು ಒಪ್ಪಿಕೊಳ್ಳುವ ಹಾಗೆ ಸಲಿಂಗರತಿಯನ್ನು ಒಪ್ಪಿಕೊಳ್ಳಬೇಕು.
" ಹಾಯ್ ಸೆಕ್ಸಿ" ಅದ್ಯಾಯನ್ನು ಓದುತ್ತಿರುವಾಗ ಇದೆನು ಹೀಗೆ ಹೇಳಿದ್ದಾರೆ. ಈ ತರ ಸಾಂಗ್ ಇದೇನಾ ಅಂತಾ ಯುಟ್ಯುನಲ್ಲಿ ನೊಡ್ದೆ . ಹಾಡು ಇತ್ತು ನೋಡಿ ನಗುಬಂತು.
ಖೊಜಾಗಳ ಬಗ್ಗೆಯು ಇದರಲ್ಲಿ ವಿವರಿಸಿದ್ದಾರೆ. ಇದರಲ್ಲಿ ಅಮಾಯಕರನ್ನು ಬಳಸಿಕೊಳ್ಳುತ್ತಾರೆ ಎಂಬುದನ್ನು ಸ್ಪಷ್ಟವಾಗಿ ಬಿಚ್ಚಿಟ್ಟಿದ್ದಾರೆ.
" ನಿಷೇಧ " ಅಧ್ಯಾಯದಲ್ಲಿ ಕೆಲವೊಂದು ನಿಷೇಧಗಳಿವೆ.
ಅಣ್ಣ ತಂಗಿಯನ್ನು ನೋಡಬಾರದರಂತೆ . ಎಕೆಂದರೆ ಅವರಿಬ್ಬರು ಲೈಂಗಿಕ ಆಕರ್ಷಣೆಗೆ ಒಳಗಾಗಬಹುದೆಂಬ ನಂಬಿಕೆ ಆಸ್ಟ್ರೇಲಿಯಾದ ಲೆಪರ್ಸ್ ದ್ವೀಪದಲ್ಲಿದೆ.
ಬಾರೋಗೋಸ್ ಎಂಬ ಆಫ್ರಿಕಾದ ಬುಡಕಟ್ಟಿನಲ್ಲಿ ಮೈದುನ ಅತ್ತಿಗೆಯನ್ನು ನೊಡಬಾರದಂತೆ.
ಸೊಲೊಮನ್ ಬುಡಕಟ್ಟಿನಲ್ಲಿ ಅಳಿಯನು ಅತ್ತೆಯ ಮುಖ ನೋಡಬಾರದು. ಕಾರಣ ಇಷ್ಟೇ , ಅತ್ತೆಯಲ್ಲಿ ಹೆಂಡತಿಯ ಪ್ರತಿರೂಪವನ್ನು ಕಾಣುತ್ತೆ , ಹೆಂಡತಿಯನ್ನೆ ಹೋಲುವ ಅತ್ತೆಯ ಬಗೆಗೆ ಭಾವನಾತ್ಮಕ ಸಂಬಂಧ ಹೊಂದುವ ಸಾಧ್ಯತೆಗಳಿರುತ್ತೆ.
ಒಟ್ಟಿನಲ್ಲಿ ಈ ನಿಷೇಧಗಳಿರುವುದು ಎಲ್ಲಿ ಇವರುಗಳ ಮಧ್ಯೆ ಲೈಂಗಿಕ ಸಂಬಂಧ ಏರ್ಪಡುವ ಸಾಧ್ಯತೆಗಳಿವೆ ಅದನ್ನು ನಿಯಂತ್ರಿಸಲು ಈ ಮೇಲಿನ ನಿಷೇಧಗಳು.
"ಸೈಬರ್ ಸೆಕ್ಸ್" ಈ ಪದ ನಂಗೆ ಅಪರಿಚಿತ . ಓದಿದ್ದು ಮೊದಲು ಈ ಪುಸ್ತಕದಲ್ಲಿ.
ತುಂಬಾ ಹೊಸ ಹೊಸ ವಿಚಾರಗಳನ್ನು ಮತ್ತೆ ಮಾಹಿತಿಯನ್ನು ತಿಳಿದುಕೊಂಡೆ . ಪುಸ್ತಕ ಚನ್ನಾಗಿದೆ , ಇಂತಹ ಪುಸ್ತಕ ರಚಿಸಿದ ಲಕ್ಷೀಪತಿ ಸರ್ ಗೆ ಧನ್ಯವಾದಗಳು.
- ಪೂಜಾ ಎಸ್, ಕಲಬುರಗಿ.