ಗುರುವಾರ, ಅಕ್ಟೋಬರ್ 27, 2022

ಕಿತ್ತೂರ ರಾಣಿ ಚೆನ್ನಮ್ಮಾ (ಕವಿತೆ) - ಕಾಡಪ್ಪಾ ಮಾಲಗಾಂವಿ, ಶಿರೋಳ.

ಕಿತ್ತೂರ ರಾಣಿ ಚೆನ್ನಮ್ಮಾ
ಸಾಹಸ,ಪರಾಕ್ರಮದ ವೀರಮ್ಮಾ
ಕನ್ನಡಿಗರ ಹೆಮ್ಮೆಯ ನಮ್ಮಮ್ಮಾ.

ತೆಗೆದುಕೊಂಡಳು ಮಗುವನ್ನು ದತ್ತು
ಬ್ರಿಟಿಷರು ತಂದರು ಅದಕ್ಕೆ ಆಪತ್ತು
ಚೆನ್ನಮ್ಮಾ ನುಡಿದಳು ಅದು ನನ್ನ ಸ್ವತ್ತು.

ಬ್ರಿಟಿಷರು ಸಾರಿದರು ಯುದ್ಧ
ಅಮ್ಮಾ ನುಡಿದಳು ನಾವು ಸಿದ್ದ
ವೀರವಣಿತೆ ಘೋಷಿಸಿದಳು ಗೆಲುವು ಶತ ಸಿದ್ದ.

ಜೊತೆಯಾಗಿ ನಿಂತರು ಯೋಧರು
ಕಿತ್ತೂರು ಗಾಗಿ ಪ್ರಾಣ ತ್ಯಾಗ  ಮಾಡದರು ಶೂರರು
ನೆತ್ತರ ಹರಸಿ ಜಯವಾದರು.

ಪರಕಿಯರು ರೂಪಿಸಿದರು ಸಂಚು
ಅಮ್ಮಾ ಆದಳು ಗುಡಗು,ಸಿಡಿಲಿನ ಮಿಂಚು
ವೀರಾವೇಷದಿಂದ ಹಿಡಿದಳು ಕ್ಯೆಯಲ್ಲಿ ಮಚ್ಚು.

ಆಳಿಸಿದಳು ವೀರ,ಭಂಟರ ಸಂದೇಶ
ಪಣತೊಟ್ಟಲು ವ್ಯೆರಿಗಳ
ಸರ್ವನಾಶ
ಕೂಗಿದಳು ಹರ,ಹರ, ಮಹಾದೇವ ಉಪದೇಶ.

- ಕಾಡಪ್ಪಾ ಮಾಲಗಾಂವಿ, ಶಿರೋಳ.


ಕಡಲ ತೀರದ ಭಾರ್ಗವ (ಕವಿತೆ) - ಸೂಗಮ್ಮ ಡಿ. ಪಾಟೀಲ್.

ಕೋಟ ಗ್ರಾಮದಲ್ಲಿ ಉದಯಿಸಿದವರು
ಶೇಷ ಕಾರಂತ  ಲಕ್ಷ್ಮಿಯರ ತನಯರಿವರು
ಜ್ಞಾನದ ಕಣಜವಾಗಂದು  ಮಿನುಗಿದವರು 
ಬದುಕಿನ ಅನುಭವದಿಂದ ಹೆಚ್ಚು ಕಲಿತವರು

ಗಾಂಧೀಜಿಯ ಅಸಹಕಾರ ಚಳುವಳಿಗಂದು
ಸ್ವತಃ ಓಗೊಟ್ಟು ಕಾಲೇಜು ತೊರೆದವರಂದು
ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಮುಕಿದವರು
ವೈವಿಧ್ಯೆತೆಯಡೆಗೆ ದೃಷ್ಟಿಯನು ಹರಿಸಿದವರು

ಬದುಕು ಬರಹಗಳೆರಡು ಒಂದೇ ಎಂದವರು
ಸ್ವಾನುಭವದಲ್ಲಿಯೇ ಬರೆಯುತ ಸಾಗಿದವರು
ಅಂಧಕಾರದಲ್ಲಿರುವರ ಕಣ್ಣನು  ತೆರಿಸಿದವರು 
ಸುಂದರ ಬದುಕಿಗೆ  ದಾರಿಯ ತೋರಿದವರು

ಖಾದಿ ಸ್ವದೇಶಿ ವಿಚಾರಗಳ ಪ್ರಚಾರಗೈದವರು
ಸರ್ವ ವಿಧದಲ್ಲೂ ಸಾಹಿತ್ಯವನು ರಚಿಸಿದವರು
ಸಮಯದ ಮಹತ್ವ ಕಾರ್ಯದಲಿ  ತಿಳಿಸಿದರು
ಯಾರಿಗೂ  ಕಾಯಿಸದ  ಸಮಯ ಪಾಲಕರು

ಕಡಿಮೆಯಿದ್ದವನಂದು ತೆಗೆದುಕೊಂಡನೆಂದು
ಕಳ್ಳನಿಗೂ  ಕನಿಕರವನು  ತೋರಿದವರಂದು
ಔದಾರ್ಯದ  ಪ್ರತೀಕವಾಗಿ  ಬಾಳಿದವರು
ನಮ್ಮ ನಾಡು  ಕಂಡ ಮಹಾನ ಚೇತನಯಿವರು 

ಯಕ್ಷಗಾನ ಕಲೆ ಜಗತ್ತಿಗೆ ಪರಿಚಯಿಸಿದವರು
ಗೆಜ್ಜೆ ಕಟ್ಟಿ  ಕುಣಿದಂತ  ಸರಳ  ವ್ಯಕ್ತಿಯಿವರು
ಜ್ಞಾನ ಪೀಠ ಪ್ರಶಸ್ತಿ ಪಡೆದಂತ ಸಾಧಕರಿವರು
ನಡೆದಾಡುವ ವಿಶ್ವಕೋಶ ನಮ್ಮ ಕಾರಂತಜ್ಜರು

 - ಸೂಗಮ್ಮ ಡಿ. ಪಾಟೀಲ್,
      ಉತ್ನಾಳ್.


ಮರದೆಲೆ (ಕವಿತೆ) - ಬಿ.ಹೆಚ್.ತಿಮ್ಮಣ್ಣ

ಮರದೆಲೆಯು ಒಣಗಿ ಚಿಗುರಾವೆ ತಿರುಗಿ 
ಹೊಸ ಉಡುಪು ಧರಿಸಿ ನಿಂತಾವೆ ಮರಿಗಿ 
ಕಣ್ಣರಳಿಸಿ ನೋಡು ತಂಪಾವ ಇನ್ನು 
ಖುಷಿಯಾಗಿ ಅಂತು ಮೈನೆರೆದೆನು ಎಂದು

ಚಿಗುರಿಲೆಯ ಮೇಲೆ ಮನಸ್ಸಾಯಿತು ಇಬ್ಬನಿಗೆ
ಕೂಡೋಣ ಇಬ್ಬರೂ ನಾವೆಂದಿತು ಎಲೆಗೆ
ನಿನ್ನ ಸೌಂದರ್ಯಕ್ಕೆ ನಾಚಿ ಜಾರಿ ಬಿದ್ದಿತು ಹನಿಯು ನೆಲಕ್ಕೆ
ಬರುವನು ಸೂರ್ಯ ಕೆಂಗಣ್ಣ ಬಿಡುತ 
ಸುಡುವನೆಂದು ಭಯಪಟ್ಟು ಅಡಗಿ ಮಣ್ಣೊಳಗ ಕುಂತಿತ

ಕರುಳ ಬಳ್ಳಿಯ ಹರಿದು ಬೀಸಾಡಿದರೆ ಮರವು 
ನೀನುದುರಿ ನದಿಯೊಳು ಬಿದ್ದರೆ ಸಾಗುವೆ ದೋಣಿಯಂತೆ
ನಿನಗ್ಯಾವ ಅಂಬಿಗನ ಬೇಕಿಲ್ಲ ಆಗ 
ತೊಡೆಗೋಡೆಯು ನಿರ್ಮಿಸುವರು ಯಾರಿಲ್ಲ ನಿನಗ

ನೆಲದೊಳಗೆ ಹುದುಗಿ ಫಲವತ್ತತೆಯ ಕೊಟ್ಟು
ಇಳುವರಿಯ ತರುವಲ್ಲಿ ರೈತನಿಗಾದೆ ನೀನಾಸರೆ
ಮರದಡಿಗೆ ನೆರಳರಿಸಿ ಬಂದವರಿಗೆ ದಣಿವಾರಿಸಿದೆ
ನೀನುದುರಿ ಬಿದ್ದರೆ ಕಳೆದೋಗುವುದು ಮರದಂದವು

ನಿನ್ನ ತಾಯಿಗೆ ಮೊದಲು ನೀನುಟ್ಟುವೆ 
ಮಿಕ್ಕವರಿಗೆ ಬರಲು ಚಾನ್ಸ್ ಕೊಡುವೆ 
ನಿನ್ನ ಬಿಟ್ಟು ಉಳಿದವರನ್ನು ಕೊಲ್ಲುವರು ಮನವೇ
ಕೊನೆಗೊಮ್ಮೆ ಯಾರಿಗೂ ಭಾರವಾಗದೇ ನೀ ಸಾಯುವೆ

  - ಬಿ.ಹೆಚ್.ತಿಮ್ಮಣ್ಣ


ದೇಶದ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರ (ಲೇಖನ) - ಸಂಗಮೇಶ ಎನ್ ಜವಾದಿ.

ವಿಶ್ವದ ನಾನಾ ಭಾಗಗಳಲ್ಲಿ ನಡೆದ, ನಡೆಯುತ್ತಿರುವ ಘಟನೆಗಳ ಮಾಹಿತಿ ಮತ್ತು ಮನರಂಜನೆಯನ್ನು ಬಿತ್ತರಿಸುವ ಮತ್ತು ಪ್ರಸಾರ ಮಾಡಲು ಸಹಾಯ ಮಾಡುವ ಎಲ್ಲಾ ರೀತಿಯ ವಿವಿಧ ಸಾಧನಗಳೇ ಸಮೂಹ ಮಾಧ್ಯಮ. 

ರೇಡಿಯೋ, ಪತ್ರಿಕೆಗಳು , ಕೇಬಲ್, ದೂರದರ್ಶನ ಮತ್ತು ರಂಗಭೂಮಿ ಸೇರಿದಂತೆ ಎಲ್ಲವೂ ಸಮೂಹ ಮಾಧ್ಯಮದ ಅಂಗಗಳಾಗಿವೆ. ಈ ಸಾಧನಗಳು ಸಮಾಜದ ಅಭಿಪ್ರಾಯಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಹಂಚಿಕೊಳ್ಳಲು ಮತ್ತು ಸಾರ್ವಜನಿಕರ ಸದಾಶಯ ನೀತಿಗಳು ಜನಸಾಮಾನ್ಯರಿಗೆ ತಲುಪಿಸುವುದೇ ಇವುಗಳ ಪ್ರಮುಖ ಉದ್ದೇಶವಾಗಿದೆ. ಇಂದಿನ ಸಮೂಹ ಮಾಧ್ಯಮಗಳ ವ್ಯವಸ್ಥೆ ಮೂಲಕ, ನಾವು ಅದರ ಭಾಗವಾಗಿ ಹೋಗಿದ್ದೇವೆ. ಹೀಗಾಗಿ 

ಪ್ರಸ್ತುತ ಯುಗವನ್ನು ಮಾಹಿತಿಯ ಯುಗ ಎಂದು ಕರೆಯಲಾಗುತ್ತದೆ. ಮಾಹಿತಿಯನ್ನು ಹರಡಲು ಮತ್ತು ಹಂಚಿಕೊಳ್ಳಲು ಸಮೂಹ ಮಾಧ್ಯಮವು ಬೇಕೇ ಬೇಕು, ಇದನ್ನು ನಾವು ಆಧುನಿಕ ಯುಗದಲ್ಲಿ ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದೇವೆ ಮತ್ತು ಬಳಸಲಾಗುತ್ತದೆ. ಡಿಜಿಟಲ್ ತಂತ್ರಜ್ಞಾನದ ಪ್ರಗತಿಯ ನಂತರ ಸಮೂಹ ಮಾಧ್ಯಮವು ಹೆಚ್ಚು ಪ್ರಬಲವಾಗಿದೆ. ಇದು ವಿವಿಧ ಪ್ರಮುಖ ವಿಚಾರಗಳು, ಸುದ್ದಿಗಳು ಮತ್ತು ಅಭಿಪ್ರಾಯಗಳು ಅತ್ಯಂತ ಪ್ರಭಾವಶಾಲಿ ಮೂಲದ ನೆಲೆಯಾಗಿದೆ. ಇದು ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿಯನ್ನು ತ್ವರಿತವಾಗಿ ಒದಗಿಸುತ್ತಿದೆ.

ಅಂದಹಾಗೆ ಇಂದಿನ ಜಗತ್ತಿನಲ್ಲಿ, ಸಮೂಹ ಮಾಧ್ಯಮವು ಇಂಟರ್ನೆಟ್ , ಸೆಲ್ ಫೋನ್‌ಗಳು, ಎಲೆಕ್ಟ್ರಾನಿಕ್ ಮೇಲ್, ಕಂಪ್ಯೂಟರ್‌ಗಳು, ಪೇಜರ್‌ಗಳು ಮತ್ತು ಉಪಗ್ರಹಗಳನ್ನು ಅಳವಡಿಸಿಕೊಂಡಿದೆ. ಈ ಎಲ್ಲಾ ಹೊಸ ಸೇರ್ಪಡೆಗಳು ಒಂದೇ ಮೂಲದಿಂದ ಬಹಳಷ್ಟು ಜನರಿಗೆ ಮಾಹಿತಿಯನ್ನು ರವಾನಿಸುವ ಕಾರ್ಯ ಯಶಸ್ವಿಯಾಗಿ ನಿರ್ವಹಿಸುತ್ತಿವೆ. ಹಾಗಾಗಿ ಸಮೂಹ ಮಾಧ್ಯಮಗಳ ಬಗ್ಗೆ ಮಾತನಾಡುವಾಗ ರೇಡಿಯೋ, ದೂರದರ್ಶನ, ಪತ್ರಿಕಾ ಮತ್ತು ಸಿನಿಮಾ ಜನರ ಗಮನ ಸೆಳೆಯುವಂತಹದು ನಿಜ. ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ತಾಣವಾಗಿದೆ.ಇದರ ಸುತ್ತ ಜನರು ಹೆಚ್ಚಾಗಿ ಗಿರಕಿ ಹೊಡೆದು ಸುತ್ತುತ್ತಿರುವುದು ಕಾಣುತ್ತೇವೆ. 

ಇನ್ನು ಇತರ ಸಮೂಹ ಮಾಧ್ಯಮ ಸಾಧನಗಳಿಗೆ ಹೋಲಿಸಿದರೆ, ಪತ್ರಿಕೆಗಳಲ್ಲಿ ಪ್ರಕಟವಾದ ಮಾಹಿತಿಯು ವಿಭಿನ್ನವಾಗಿದೆ. ಇದು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಇತ್ತೀಚಿನ ಘಟನೆಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಕೆಲವು ನಿಯತಕಾಲಿಕೆಗಳು ಮತ್ತು ವೃತ್ತಪತ್ರಿಕೆಗಳು ಸುದ್ದಿ, ಘಟನೆಗಳು, ಕ್ರೀಡೆ, ಸಾಂಸ್ಕೃತಿಕ ಜೀವನ, ಧಾರ್ಮಿಕ,ಸಾಹಿತಿಕ, ಕೃಷಿ, ಶಿಕ್ಷಣ, ಫ್ಯಾಷನ್ ಮತ್ತು ಯುವಜನರಿಗೆ ಮನರಂಜನೆಯ ವರದಿಗಳನ್ನು ಬಿತ್ತರಿಸುತ್ತದೆ.

ಈ ಮಾಧ್ಯಮಗಳ ಜೊತೆ ಜೊತೆಯಲ್ಲಿ ಕರಪತ್ರಗಳು, ಪುಸ್ತಕಗಳು, ನಿಯತಕಾಲಿಕೆಗಳು, ಪೋಸ್ಟರ್‌ಗಳು, ಜಾಹೀರಾತು ಫಲಕಗಳು ಸಹ ಪ್ರಾಮುಖ್ಯತೆಯನ್ನು ಪಡೆದುಕೊಂಡಿವೆ. ಇವುಗಳ ಬಳಕೆ ಗ್ರಾಹಕರು ಅವರ ಅವಶ್ಯಕತೆಯ ಅನುಗುಣವಾಗಿ ಬಳಸಿಕೊಳ್ಳುತ್ತಾರೆ.ಇದಲ್ಲದೆ, ಈ ಉಪಕರಣಗಳ ವ್ಯಾಪ್ತಿಯು ದೇಶದಾದ್ಯಂತ ವಾಸಿಸುವ ಜನಸಾಮಾನ್ಯರಿಗೆ ಮುಟ್ಟಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತದೆ.

ಟಿವಿ ನೋಡುವ ಅಥವಾ ರೇಡಿಯೊವನ್ನು ಕೇಳುವ ಮೂಲಕ, ನಮ್ಮ ಇತಿಹಾಸ, ಸಾಹಿತ್ಯ ಮತ್ತು ಸಾಂಸ್ಕೃತಿಕ ಜ್ಞಾನವನ್ನು ತಿಳಿದುಕೊಳ್ಳಬಹುದಾಗಿದೆ.ಅದೇ ರೀತಿ ಸಮೂಹ ಮಾಧ್ಯಮವು ಇಂದಿನ ಜಗತ್ತಿನಲ್ಲಿ ಅತಿ ವೇಗವಾಗಿ ಬೆಳೆದು ಪ್ರಸಿದ್ಧಿ ಪಡೆಯಲು ಸೆಲ್ ಫೋನ್ ಪ್ರಮುಖ ಸಾಧನ ಅಂದರೆ ತಪ್ಪಾಗಲಾರದು. ಈ ಸೆಲ್ ಫೋನ್‌ಗಳು, ಇಂಟರ್ನೆಟ್, ಕಂಪ್ಯೂಟರ್‌ಗಳು, ಪೇಜರ್‌ಗಳು, ಇಮೇಲ್‌ಗಳು ಮತ್ತು ಉಪಗ್ರಹಗಳನ್ನು ಒಳಗೊಂಡಿದೆ. ಈ ಮಾಧ್ಯಮಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಬಹು ಬೇಗ ಮಾಹಿತಿಯನ್ನು ರವಾನೆ ಮಾಡಲು ಸಹಕರಿಸುತ್ತದೆ.ಇದು ಜನಸಾಮಾನ್ಯರ ಅಚ್ಚುಮೆಚ್ಚಿನ ಗೆಳೆಯ ಎನ್ನುವಂತೆ ಭಾಸವಾಗುತ್ತಿದೆ, ಎನ್ನುವ ಮಟ್ಟಿಗೆ ಈ ಸಾಧನ ಕೆಲಸ ಮಾಡುತ್ತಿದೆ.

ಸಮೂಹ ಮಾಧ್ಯಮವು ವಿವಿಧ ಘಟನೆಗಳು ಮತ್ತು ಸನ್ನಿವೇಶಗಳಿಗೆ ಅನುಗುಣವಾಗಿ ಮಾಹಿತಿ ಮತ್ತು ಅಭಿಪ್ರಾಯಗಳನ್ನು ಜನರಿಗೆ ಒದಗಿಸುತ್ತಿವೆ. ಸಮೂಹ ಮಾಧ್ಯಮದ ಬಹು ಮಾಧ್ಯಮಗಳ ಮೂಲಕ ನಾವು ಪಡೆಯುವ ಮಾಹಿತಿಯು ವ್ಯಕ್ತಿನಿಷ್ಠ, ಮಾಧ್ಯಮಿಕ ಮತ್ತು ಪ್ರಾಥಮಿಕ ಮಾಹಿತಿ ಎಂದೆಷ್ಟೇ ಹೇಳಬಹುದು. 

ಪ್ರೇಕ್ಷಕರಾಗಿ, ಸಮೂಹ ಮಾಧ್ಯಮದ ಮೂಲಕ ಪ್ರಪಂಚದಾದ್ಯಂತ ನಡೆಯುತ್ತಿರುವ ಘಟನೆಗಳ ಕುರಿತು ನಾವು ಮಾಹಿತಿಗಳ ಸುದ್ದಿಗಳನ್ನು ಪಡೆಯುತ್ತೇವೆ. ಟಿವಿ, ರೇಡಿಯೋದಲ್ಲಿ ಪ್ರಸಾರ ಆಗುವ, ಪತ್ರಿಕೆಗಳು ಅಥವಾ ನಿಯತಕಾಲಿಕೆಗಳಲ್ಲಿ ಪ್ರಕಟಣೆ ಮಾಡುವ ಮಾಧ್ಯಮಗಳ ಮಾಹಿತಿಯನ್ನು ನೋಡುತ್ತೇವೆ. ಇದಲ್ಲದೆ, ಜಾಹೀರಾತುಗಳು ಮುಖ್ಯವಾಗಿ ಮಾಹಿತಿ ಉದ್ದೇಶಗಳಿಗಾಗಿ, ಸರ್ಕಾರವು ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ವಿವರಿಸಲು, ತಿಳಿಸಲು ಮತ್ತು ಬೆಂಬಲಿಸಲು ಸಮೂಹ ಮಾಧ್ಯಮದ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಈ ಮೂಲಕ ಮಾಧ್ಯಮಗಳು ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ.ಇದಲ್ಲದೇ ಪತ್ರಿಕೆಯು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಎಲ್ಲಾ ವಸ್ತುಗಳ ಪ್ರಸಾರದ ಮಹತ್ವಪೂರ್ಣ ಸಾಧನವಾಗಿವೆ. ಹೀಗೆ ಹತ್ತು ಹಲವು ವಿನೂತನ ರೀತಿಯಲ್ಲಿ ಮಾಧ್ಯಮಗಳು ಸರ್ಕಾರದ ಸೇವೆಗಳನ್ನು ಜನರ ಬಳಿಗೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೀವೆ.ಈ ಮೂಲಕ  ದೇಶದ ಅಭಿವೃದ್ಧಿಯಲ್ಲಿ ಅವುಗಳದೇ ಆದ ವಿಶಿಷ್ಟ ಪಾತ್ರದ ಕೊಡುಗೆ ಮತ್ತು ಸೇವೆಯನ್ನು ನೀಡುತ್ತೀವೆ.

ಹಾಗಾಗಿ ಸಮೂಹ ಮಾಧ್ಯಮಗಳ ಮೂಲಕ ಎಲ್ಲಾ ಘಟನೆಗಳ ಆಗುಹೋಗುಗಳು ಮನೆಯಲ್ಲಿ ಕುಳಿತು ಜನ ಕಲಿಯಬಹುದು ಅಥವಾ ಅರಿಯಬಹುದು.ಹಾಗೆಯೇ ಮಾಧ್ಯಮಗಳು ಸರ್ಕಾರಕ್ಕೆ ತನ್ನ ಅಭಿಪ್ರಾಯಗಳನ್ನು ಕಡಿಮೆ ಸಮಯದಲ್ಲಿ ತಿಳಿಸಿ. ಪ್ರಸಾರ, ಜಾಹೀರಾತು, ಪ್ರಚಾರ ಮಾಡಲು ಮತ್ತು ಪ್ರಕಟಿಸಲು ಸಹಾಯ ಮಾಡುತ್ತವೆ.ಅಲ್ಲದೇ ಇಪ್ಪತ್ನಾಲ್ಕು ಗಂಟೆಗಳಲ್ಲಿ ಸಂಭವಿಸಿದ ಎಲ್ಲಾ ಸುದ್ದಿ ಮತ್ತು ವೀಕ್ಷಣೆಗಳೊಂದಿಗೆ ಇದು ಬೆಳಗಿನ ಉಪಾಹಾರದ ಸಮಯದಲ್ಲಿ ನಮ್ಮ ಮನೆ ಬಾಗಿಲಿಗೆ ಬರುತ್ತದೆ. ಕಾರಣ ಇದು ಜ್ಞಾನದ ಭಂಡಾರ, ಪ್ರಸ್ತುತ ಇತಿಹಾಸ ಮತ್ತು ಅವಸರದ ಸಾಹಿತ್ಯವಾಗಿದೆ ಎಂದೆಷ್ಟೇ ನಿಖರವಾಗಿ ಹೇಳಬಹುದು. ಪತ್ರಿಕೆಯ ಅಧ್ಯಯನದಿಂದ ದೇಶ-ವಿದೇಶಗಳ ಸುದ್ದಿ ಮತ್ತು ನೋಟಗಳನ್ನು ನಾವು ಅತ್ಯಂತ ಅಗ್ಗದ ವೆಚ್ಚದಲ್ಲಿ ತಿಳಿದುಕೊಳ್ಳಬಹುದಾಗಿದೆ.ಅದಕ್ಕಾಗಿ ಸಮೂಹ ಮಾಧ್ಯಮವು ಹೆಚ್ಚಿನ ಪ್ರಯೋಜನಗಳನ್ನು ಹೊಂದಿದೆ ಎಂಬುದಂತೂ ಸತ್ಯ. ಈ ತನ್ಮೂಲಕ ಮಾಧ್ಯಮಗಳ ನಿಸ್ವಾರ್ಥ ಸೇವಾ ಕೈಂಕರ್ಯಗಳ ಪಾತ್ರ ದೊಡ್ಡದಾಗಿದೆ.  

ಈ ನಿಟ್ಟಿನಲ್ಲಿ ಕುಲಂಕುಶವಾಗಿ ಯೋಚಿಸುವುದಾದರೆ, ಸಾರ್ವಜನಿಕ ಜೀವನದಲ್ಲಿ ಸಮೂಹ ಮಾಧ್ಯಮಗಳ ಪಾತ್ರ ಬಹಳ ಮುಖ್ಯ ಮತ್ತು ಅಷ್ಟೇ ಅಗತ್ಯತೆ ಇಂದಿನ ದಿನಗಳಲ್ಲಿ ಇದೆ.ಇವುಗಳು ಇಲ್ಲದಿದ್ದರೆ ಬದುಕು ಕಷ್ಟ ಎಂಬ ಭಾವನೆ ಪ್ರತಿಯೊಬ್ಬರಲ್ಲಿಯೂ ಮೂಡಿದೆ.ಮಾಧ್ಯಮಗಳು ಇಲ್ಲದೆ ಹೋದರೆ ನಮ್ಮಗಳ ಜೀವನ ಶೂನ್ಯ ಎನ್ನುವ ಹಂತದಲ್ಲಿ (ಉದಾಹರಣೆಗೆ: ಸೆಲ್ ಫೋನ್ - ಸಧ್ಯ ನಾವು ಇವುಗಳ ಮೇಲೆ ಸಂಪೂರ್ಣ ಅವಲಂಬಿತರಾಗಿದ್ದೇವೆ) ಬಾಳುತ್ತಿದ್ದೇವೆ. 

ಇದು ಎಲ್ಲೋ ಒಂದು ಕಡೆ ನಮ್ಮ ಅತಿರೇಕದ ಬಳಕೆಯಿಂದ ನಮ್ಮ ಜೀವನದ ಭಾವನೆಗಳ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಇರುತ್ತದೆ. ಪರಿಣಾಮ ಅನಾಹುತಕ್ಕೆ ಕಾರಣವಾಗಬಹುದು. ಆದಕಾರಣ ಬಂಧುಗಳೇ, ಎಚ್ಚರಿಕೆಯಿಂದ ನಮಗೆ ಅತ್ಯವಶ್ಯಕತೆ ಅನಿಸಿದಾಗ ಮಾತ್ರ ಮಾಧ್ಯಮಗಳನ್ನು ಬಳಕೆ ಮಾಡಿಕೊಳ್ಳಬೇಕು. ಸುಖಾ ಸುಮ್ಮನೆ ಸಮಯ ಕಳೆಯಲು ಮಾಧ್ಯಮಗಳು ಖಂಡಿತವಾಗಿ ಬಳಸಿಕೊಳ್ಳಬೇಡಿ, ಇದು ಸರಿಯಾದ ಕ್ರಮವಲ್ಲ. ಮಾಧ್ಯಮಗಳಿಂದ ನಿಮಗೆ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದ್ದರೆ ಮಾತ್ರ ಖಂಡಿತವಾಗಿ ಬಳಸಿಕೊಳ್ಳಬೇಕು.ಇಲ್ಲದೇ ಇದ್ದರೆ ಖಂಡಿತವಾಗಿಯೂ ಉಪಯೋಗಿಸಬೇಡಿ. ಅಲ್ಲದೇ ಎಂದೆಂದಿಗೂ ಮಾಧ್ಯಮಗಳ ಮುಖಾಂತರ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಇದು ದೇಶದ ಕಾನೂನು ಉಲ್ಲಂಘಿಸಿದಂತೆ ಎನ್ನುವುದು ಮರೆಯಬೇಡಿ.

ಒಟ್ಟಾರೆಯಾಗಿ ಹೇಳುವುದಾದರೆ, ಜನಸಾಮಾನ್ಯರಲ್ಲಿ ಬದಲಾವಣೆಯನ್ನು ತರಬಲ್ಲ ಮಾಧ್ಯಮವಾಗಿದೆ.ಇದು ಪರಿಣಾಮಕಾರಿ ಸಾಧನವಾಗಿದ್ದರೂ, ನಾವು ಅದರ ಬಳಕೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಈ ತನ್ಮೂಲಕ ದೇಶದ ಪ್ರಗತಿಯಲ್ಲಿ ಮಾಧ್ಯಮಗಳು ಯಶಸ್ಸಿಗಾಗಿ ಕಾರ್ಯ ನಿರ್ವಹಣೆ ಮಾಡುತ್ತಿವೆ.ಹೀಗಾಗಿ ಪ್ರತಿಯೊಬ್ಬರೂ ಇದನ್ನು ಸದುಪಯೋಗ ಪಡಿಸಿಕೊಂಡು. ಸರ್ವರ ಹಿತಕ್ಕಾಗಿ, ಒಳ್ಳೆಯ ವಿಚಾರಗಳೊಂದಿಗೆ ಕಾಯಕ ಮಾಡಬೇಕು.ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಪ್ರಮಾಣಿಕ ಪ್ರಯತ್ನ ಮಾಡಬೇಕು.

ಕೊನೆಯ ಮಾತು : ಜಗತ್ತಿನ ಎಲ್ಲಾ ಸುಖ ಸಾಧನಗಳು ನಮ್ಮ ಬಳಿಯಲ್ಲಿ ಇದ್ದರು. ನೆಮ್ಮದಿ ಇಲ್ಲವಾಗಬಹುದು. ಯಾವುದೇ ಬಾಹ್ಯ ವಸ್ತುವಾಗಲಿ, ವ್ಯಕ್ತಿಯಾಗಲಿ.ನಮಗೆ ನೆಮ್ಮದಿಯ ಅನುಭವವನ್ನು ನೀಡಲು ಸಾಧ್ಯವಿಲ್ಲ. ನೆಮ್ಮದಿಯು ನಮ್ಮ ಮಾನಸಿಕ ಅನುಭವ ಮತ್ತು ಅನುಭಾವದ ಸ್ಥಿತಿಯ ಮೇಲೆ ದೊರೆಯುತ್ತದೆ. ಅದನ್ನು ನಮ್ಮೊಳಗೆ ನಾವೇ ಕಂಡುಕೊಳ್ಳಬೇಕು.ಆಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಬಹುದು. ಮತ್ತು ಆ ಸ್ಥಿತಿಯಲ್ಲಿ ನೆಲೆ ನಿಂತಾಗ, ನಿಲ್ಲಬೇಕು ಅಂದಾಗ ಮಾತ್ರ ಸುಖದ ನಿಜವಾದ ಅಲೌಕಿಕ ಅರ್ಥ ಹಾಗೂ ಅನುಭವವು ನಮ್ಮದಾಗುತ್ತದೆ.


- ಸಂಗಮೇಶ ಎನ್ ಜವಾದಿ.
ಅಂಕಣಕಾರರು, ಸಾಮಾಜಿಕ ಸೇವಕರು.
ಬೀದರ ಜಿಲ್ಲೆ.

ಯಾರನ್ನೂ ನೋಯಿಸಬೇಡ - ಇನ್ಯಾರನ್ನೂ ನಿಂದಿಸಬೇಡ (ಲೇಖನ) - ಹನುಮಂತ ದಾಸರ, ಹೊಗರನಾಳ.

ನಾವು ಹುಟ್ಟಿದ್ದು ಯಾರನ್ನೋ ನೋಯಿಸಲಿಕ್ಕಾಗಲಿ ನೆಚ್ಚಿಸಲಿಕ್ಕಾಗಲಿ ಅಲ್ಲ ಬದುಕಿನ ನೈಸರ್ಗಿಕತೆಯಿಂದ ನಾವೆಲ್ಲರೂ ಈ ಧರೆಗೆ ಬಂದಿಳಿದಿದ್ದೇವೆ. ಆ ನೈಸರ್ಗಿಕತೆಯ ನೈಜತೆಯೊಳಗೆ ನಾವು ಬದುಕಬೇಕಿದೆ ಅಷ್ಟೇ. ನಾವು ಹುಟ್ಟುವಾಗ ಯಾರು ಎಷ್ಟು ಜನ ಜೊತೆಗಿದ್ದರೋ ನಾವು ಈ ಲೋಕವನ್ನು ಬಿಟ್ಟು ಹೋಗುವಾಗ ಎಷ್ಟು ಜನ ಜೊತೆಗಿದ್ದರೋ ಎಂಬುದು ಇಲ್ಲಿ ಮುಖ್ಯವಾಗಲ್ಲ ಈ ಎರೆಡು ಸನ್ನಿವೇಶಗಳ ಮಧ್ಯೆ ಒಂದು ಮುಖ್ಯವಾದ ಬಂಧವಿದೆ ಅದೇ ಸ್ನೇಹಾನುಬಂಧ, ಪ್ರೇಮಾನುಬಂಧ ಬದುಕಿನ ಅನುಭಂಧವೂ ಕೂಡ ಹೌದು. ಈ ಅನುಬಂಧನಗಳ ಗಟ್ಟಿತನ ಎಷ್ಟಿತ್ತೋ ಅಷ್ಟು ನಮ್ಮ ಬದುಕು ಗಟ್ಟಿತನದಿಂದ ಕೂಡಿರುತ್ತದೆ. ನಾವು ಯಾವುದೋ ಕಾರಣಕ್ಕೆ ಯಾರದೋ ಮಾತಿಗೆ ಮಂಕಾಗಿ ಅನಾವಶ್ಯಕವಾಗಿ ಯಾರ ಮೇಲೋ ಕ್ಷುಲ್ಲಕ ಕಾರಣಕ್ಕೆ ದ್ವೇಷ ಅಸೂಯೆ ಇಟ್ಟುಕೊಂಡು ಬದುಕನ್ನು ನಡೆಸಲು ಹೊರಟರೆ ಅದು ಬದುಕಾಗುವುದಿಲ್ಲ ಬದುಕಿನ ಲಕ್ಷಣವೂ ಅಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅದೆಷ್ಟೋ ಅಪಾರ ಸಂಪತ್ತಿನ ಸಂಪನ್ಮೂಲಗಳು ನೆರೆದಿವೆ ಅಂತಹ ಸಂಪನ್ಮೂಲಗಳ ಸಾರವನ್ನು ಸೇವೆದು ಪರಿಸರ ಪ್ರೇಮಿ ನಿಸರ್ಗಪ್ರೇಮಿಯಾಗಿ ಯಾರ ನೆರೆಹೊರೆಯವರೊಂದಿಗೂ ಬೇರಾವುದೇ ಅನ್ಯ ವಿಷಯಕ್ಕೆ ಸಿಲುಕಿ ಮತ್ತೊಬ್ಬರ ಮನವನ್ನು ನೋಯಿಸುವಂತಹ ಕೆಲಸಕ್ಕೆ ನಾವು ಯಾವತ್ತೂ ಕೈಹಾಕಬಾರದು ಮತ್ತು ನಮಗೆ ಸಂಬಂಧಿಸದೇ ಇರುವ ವಿಷಯಗಳಿಗೆ ಗೋಜಿಗೆ ನಾವೆಂದೂ ಸುಳಿಯಬಾರದು. ನಮ್ಮ ಪ್ರತೀ ಹೆಜ್ಜೆ ಪ್ರತೀ ಮಾತು ನಡೆ ನುಡಿ ನಮ್ಮ ಹಿಡಿತದಲ್ಲೇ ಇರಬೇಕು ಯಾರನ್ನೋ ಅತೀಯಾಗಿ ನಂಬಿ ಯಾರ ಮೇಲೋ ಅತಿಯಾದ ಭರವಸೆ ಇಡೋದು ಅವರ ಮೇಲೆಯೇ ಅವಲಂಬಿತವಾಗುವುದು ಮಾಡದೇ ನಮ್ಮ ದಾರಿಯಲ್ಲೇ ನಾವು ಸರಿಯಾದ ಹೆಜ್ಜೆಗಳನ್ನು ಹಾಕಿದರೆ ಯಾವುದೇ ತೊಂದರೆ ನಮಗಾಗಲಿ ನಮ್ಮವರಿಗಾಗಲಿ ಹಾಗೂ ನಮ್ಮಿಂದ ಸಮಾಜಕ್ಕಾಗಲಿ ಆಗುವುದಿಲ್ಲ. ನಮ್ಮ ಬದುಕು ಮೂರೇ ಮೂರು ದಿನದ ಸಂತೆ ಆ ಸಂತೆಯ ಮೊದಲ ಘಟ್ಟ ಜನನ ಎರಡನೆಯ ಘಟ್ಟ ಜೀವನ ಮೂರನೇ ಘಟ್ಟ ಮರಣ ಈ ಮೂರು ಘಟ್ಟಗಳಲ್ಲಿ ಕೊನೆಯ ಮೂರನೇ ಘಟ್ಟಕ್ಕೆ ತೃಪ್ತಿ ಹಾಗೂ ಮುಕ್ತಿ ದೊರೆಯಬೇಕಾದರೆ ಮೊದಲ ಘಟ್ಟದಿಂದ ಎರಡನೇ ಘಟ್ಟ ಸರಿಯಾಗಿರಬೇಕು ಮತ್ತು ನಿಷ್ಠೆಯ ಬದುಕು ಬಲಿಷ್ಠವಾಗಿರಬೇಕು ಆಗಿದ್ದಾಗ ಮಾತ್ರ ಮರಣದ ಘಟ್ಟಕ್ಕೆ ಬೆಲೆ ಸಿಗುವುದು ಗೌರವ ಸಿಗುವುದು. ಈ ಮೂರು ಘಟ್ಟಗಳನ್ನು ದಾಟಿ ದಡ ಸೇರುವ ಹೊತ್ತಿಗೆ ಅದೆಷ್ಟೋ ಕಷ್ಟಗಳು ಎದುರಾಗುತ್ತವೆ. ಅಂತಹ ಹಲವಾರು ಕಷ್ಟಗಳನ್ನು ಸೂಕ್ಷ್ಮವಾಗಿ ದಾಟಿದಾಗಲೇ ನಮಗೆ ಸನ್ಮಾರ್ಗ ದೊರೆತು ಬದುಕಿನಲಿ ಸ್ವರ್ಗದ ಸಿರಿಯನು ಸವಿಯಲು ಸಾಧ್ಯವಾಗುತ್ತದೆ. ಸಮಯವಿದ್ದಾಗ ಸಾಧ್ಯವಾದರೇ ಮತ್ತೊಬ್ಬರಿಗೆ ಸಹಾಯ ಮಾಡೋಣ ಹಸಿದವರಿಗೆ ಹಿಡಿಯೊಳಗಿನ ಒಂದಿಷ್ಟು ಅನ್ನವನ್ನು ಕೊಟ್ಟು ಹಸಿವನ್ನು ನೀಗಿಸೋಣ ಕಷ್ಟ ಅಂತ ಬಂದೋರಿಗೆ ತಗುಲಿದ ಸಮಸ್ಯೆಗೆ ಪರಿಹಾರ ಸೂಚಿಸೋಣ ಮಾನವೀಯ ಬದುಕನ್ನು ನಮ್ಮ ಸುತ್ತಲಿನವರೊಂದಿಗೆ ಕಟ್ಟಿಕೊಳ್ಳೋಣ ಸ್ನೇಹ ಬಾಂಧವ್ಯದಿಂದ ಬದುಕೋಣ ಯಾವಾಗಲೂ ಯಾರು ಏನೇ ಅಂದರೂ ನಮ್ಮ ಬಗ್ಗೆ ಆಡಿಕೊಂಡರೂ ಚಾಡಿ ಚುಚ್ಚು ಮಾತನ್ನು ಆಡಿದರೂ ಯಾವುದನ್ನೂ ಲೆಕ್ಕಿಸದೇ ಯಾರೊಂದಿಗೂ ವೈರತ್ವ ದ್ವೇಷ ವಿರೋಧ ಇಟ್ಟುಕೊಳ್ಳದೇ ಯಾರೇ ನಿನ್ನನ್ನು ತಿರಸ್ಕರಿಸಿದರೂ ಕಿಂಚಿತ್ತೂ ಅವರ ಮೇಲೆ ಹಠಸಾಧಿಸದೇ ನಾವೆಲ್ಲಾ ಒಂದೇ ನಿಮ್ಮಲ್ಲಿ ನಾನೂ ಒಬ್ಬ ಎಂದು ಡಿವಿಜಿ ಯವರ ಮಾತಿನಂತೆ "ಎಲ್ಲರೊಳೊಂದಾಗು ಮಂಕುತಿಮ್ಮಾ" ಎಂಬಂತೆ ನನ್ನೊಳಗೆ ಎಲ್ಲಾರು ಎನ್ನುವುದಕ್ಕಿಂದ ಎಲ್ಲರೋಳು ನಾನೊಬ್ಬ ಎಂದು ನಮ್ಮ ಸುಂದರ ಲೋಕದಲ್ಲಿ ನಾವು ನಗುನಗುತ್ತಾ ಬಾಳಿ ಬದುಕಿ ನಮ್ಮ ಮೂರು ದಿನದ ಸಂತಿಯ ಪಯಣವನ್ನು ಮುಗಿಸಿದಾಗಲೇ ನಮಗೆ ನಮ್ಮ ವ್ಯಕ್ತಿತ್ವಕ್ಕೆ ಘನತೆ ಗೌರವ ಹೆಚ್ಚಾಗಿ ಮೂರು ದಿನದ ಸಂತೆಯ ಸ್ವಾದ ನೂರಾರು ವರ್ಷಗಳು ಉರುಳಿದರೂ ಶಾಶ್ವತವಾಗಿ ಜನಮನದಲ್ಲಿ ಅಜರಾಮರವಾಗಿ ಉಳಿಯುತ್ತದೆ ಹೀಗೆ ನಾವು ಪ್ರತಿಯೊಬ್ಬರೊಂದಿಗೆ ಯಾವತ್ತೂ ಗುದ್ದಾಟ ತಿಕ್ಕಾಟ ಜಗಳ ಮುಂತಾದ ವಿಚಾರಗಳಿಗೆ ಮಾರುಹೋಗದೆ ಒಳ್ಳೆಯ ಸ್ನೇಹ ಸಂಬಂಧದ ಗುಣಲಕ್ಷಣಗಳನ್ನು ನಮ್ಮಲ್ಲಿ ಅಳವಡಿಸಿಕೊಂಡರೇ ನಮ್ಮ ಜೀವನ ಸಾರ್ಥಕವಾಗುವುದು ಬೇರಾವ ಆಮಿಷಗಳಿಗೆ ಬಲಿಯಾಗಿ ಬಂಗಾರದ ಬದುಕನ್ನು ಬರೀ ಅನಾವಶ್ಯಕ ವಿಚಾರಗಳಿಗೆ ಬಲಿಕೊಡುವುದು ಒಳಿತಲ್ಲ ಇರುವಷ್ಟು ದಿನ ಅಷ್ಟೇ ಅಲ್ಲ ಇಂತಹ ಗುಣಗಳು ನಮ್ಮಲ್ಲಿದ್ದರೆ ನಮ್ಮ ಆಯಸ್ಸು ಮತ್ತಷ್ಟು ಹೆಚ್ಚಾಗಬಹುದು ವಿನಾ ಕಾರಣಗಲೇ ನಮ್ಮನ್ನು ಮತ್ತು ನಮ್ಮ ಬದುಕಿನ ಕೆಲ ಕ್ಷಣಗಳನ್ನು ಸಂತೋಷದಿಂದ ನಗುನಗುತಾ ಅನುಭವಿಸಲು ಅನುವುಮಾಡಿಕೊಡುವುದಿಲ್ಲ ಜೀವನದ ಮಟ್ಟವನ್ನು ಗೊತ್ತಿಲ್ಲದೇ ಕುಗ್ಗಿಸಿ ಆಯಸ್ಸನ್ನು ಕೂಡ ಕಡಿಮೆಗೊಳಿಸಲು ಕಾರಣವಾಗಿರುತ್ತವೆ ಹೀಗಾಗಿ "ಸರ್ವ ಜನಾಂಗದ ಶಾಂತಿಯ ತೋಟ"ದಲ್ಲಿ ಸರ್ವ ಜನಮನಗಳೊಂದಿಗೆ ಬೆರೆತು ಅರಿತು ಬದುಕೋಣ, ಪ್ರೀತಿ ಪ್ರೇಮದೊಂದಿಗೆ ಬೆರೆತು ಜಾತಿ-ವರ್ಣ ಧರ್ಮದ ಭೀತಿಯನ್ನು ತೊರೆಯೋಣ ಮಾನವ ನೀತಿಯನ್ನು ಅಳವಡಿಸಿಕೊಳ್ಳೋಣ.

- ಹನುಮಂತ ದಾಸರ ಹೊಗರನಾಳ.


ಮಂಗಳವಾರ, ಅಕ್ಟೋಬರ್ 18, 2022

ಸಮಯವಿರದ ಪಪ್ಪಾ - ಬದುಕ ಪ್ರೀತಿಸುವ ಹುಡುಗಿ...! (ಲೇಖನ) - ಧನುಷ್ ಎಚ್ ಶೇಖರ್.

ಸವಿತಾ ನಾಗಭೂಷಣ ಅವರ ‘ಜಾತ್ರೆಯಲ್ಲಿ ಶಿವ’ ಕವನ ಸಂಕಲನವು ವಿಭಿನ್ನ ಅಭಿವ್ಯಕ್ತಿಯ ಸೂಕ್ಷ್ಮ ಭಾವದ ಕವಿತೆಗಳಿಂದಲೇ ಆಕರ್ಷಿಸುತ್ತದೆ. ಈ ಕೃತಿ ಬೆಳಕು ಕಂಡು ಸುಮಾರು ಎರಡು ದಶಕಗಳೇ ಕಳೆದಿವೆಯಾದರೂ, ಕವಿತೆಯೊಳಗಿನ ಸಾವಯವ ಅಂತಃಸತ್ವ ಮತ್ತೆ ಮತ್ತೆ ಅದರತ್ತ ಹೊರಳುವಂತೆ ಮಾಡುತ್ತದೆ. ದಲಿತ-ಬಂಡಾಯ ಸಾಹಿತ್ಯ ಘಟ್ಟದ ಪ್ರಭಾವ ವಲಯದಲ್ಲಿ ಅದರದ್ದೇ ಆದ ಒಂದು ಅವಿಭಾಜ್ಯ ಅಂಗದಂತೆ ಬೆಳೆದು ಬಂದ ಸ್ತ್ರೀವಾದವು ತನ್ನ ಅನನ್ಯ ಸಾಧ್ಯತೆಗಳನ್ನು ಪ್ರಕಟಪಡಿಸುತ್ತಲೇ ಬಂದಿದೆ. ಅದು ಪ್ರಸ್ತುತ ಪಡಿಸುವ ಲೋಕ, ಬಳಸಿಕೊಂಡ ಅಭಿವ್ಯಕ್ತಿ ಮಾದರಿ ಇದೆಲ್ಲಕ್ಕೂ ತಳಹದಿಯಂತೆ ದುಡಿಸಿಕೊಂಡ ಭಾಷೆ ಎಲ್ಲವೂ ಅದುವರೆಗೂ ಪ್ರಕಟಗೊಂಡಿರದ ಅನಾಮಿಕ ಕವಿಯೊಬ್ಬನ ಕವಿತೆಯಂತೆ ಬೆರಗು ಮೂಡಿಸುವಂತದ್ದು. ಸ್ರೀವಾದಿ ಚಿಂತನೆಗಳು ಸಾಹಿತ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನ ಹೆಜ್ಜೆ ಗುರುತನ್ನು ಮೂಡಿಸಿವೆಯಾದರೂ ಕಾವ್ಯ ಪ್ರಕಾರದಲ್ಲಿ ಮತ್ತಷ್ಟು ದೃಡವಾಗಿ ನಾಗಾಲೋಟದಿಂದ ಮುಂದುವರೆದವು. ಯಾವ ವಿಷಯಗಳನ್ನು ಕವಿತೆಯ ವಸ್ತುವಾಗಿಸಲು ಸಾಧ್ಯವಿಲ್ಲವೆಂದು ಗಣನೆಗೇ ತೆಗೆದುಕೊಳ್ಳದೆ ಗೌಣವಾಗಿಸಲಾಗಿತ್ತೋ ಅಂತಹ ವಸ್ತುಗಳೇ ಮುಖ್ಯವಾಹಿನಿಗೆ ಬಂದು ತಮ್ಮ ಅಭಿವ್ಯಕ್ತಿಯ ಹಕ್ಕನ್ನು ಪಡೆದುಕೊಂಡವು. ಅನ್ಯಾಯ ಅಸಮಾನತೆಗಳಿಗೆ ತತ್ಕ್ಷಣಿಕ ಏರು ಧ್ವನಿಯ ವಿರೋಧವನ್ನು ತೋರದೆ, ತಣ್ಣಗೇ ಆದರೂ ಬೆಚ್ಚಗಿನ ಪ್ರತಿರೋಧವನ್ನು ತೋರುವುದು ಈ ಸಾಹಿತ್ಯ ಘಟ್ಟದ ವೈಶಿಷ್ಟ್ಯ. ಇದಕ್ಕೆ ಸಾರಾಸಗಟಾದ ಉದಾಹರಣೆ ಎಂಬಂತೆ ಸವಿತಾ ಅವರ “ಸಮಯವಿದೆಯೇ ಪಪ್ಪಾ” ಕವಿತೆಯನ್ನು ಗಮನಿಸಬಹುದು.

  ಸಮಯವಿದೆಯೇ ಪಪ್ಪಾ? ಎಂದು ಪ್ರಾರಂಭವಾಗುವ ಕವಿತೆ ಕೊನೆಯವರೆಗೂ ಪಪ್ಪನಿಗೆ ಯಾಕೆ ಸಮಯವಿಲ್ಲ ಎನ್ನುವುದನ್ನೇ ಕುರಿತು ಚರ್ಚಿಸುತ್ತದೆ. ಕವಿತೆಯ ಮೊದಲ ಭಾಗದಲ್ಲಿ ಹುಡುಗಿಗೆ ತನ್ನ ಸುತ್ತಲಿನ ಪ್ರಕೃತಿಯಲ್ಲಿ ಕಾಣುವುದೆಲ್ಲ ಸೋಜಿಗವೇ! ಅಲ್ಲಿ ಹರಿಯುವ ನದಿ, ಅದರಲ್ಲಾಡುವ ಪುಟಾಣಿ ಮೀನು, ಮರದ ಕೊಂಬೆಗಳಲ್ಲಿ ಅಡಗಿರುವ ಗುಬ್ಬಚ್ಚಿ ಗೂಡು ಎಲ್ಲದರಲ್ಲಿಯೂ ತಾನೆಲ್ಲೂ ಕಾಣದಂತಹ ದಿಗ್ಭ್ರಮೆಯೊಂದು ಪುಟ್ಟ ಹುಡುಗಿಯನ್ನು ಆವರಿಸುತ್ತಾ ಹೋಗುತ್ತದೆ. ಮಗಳು ತನ್ನ ತಂದೆಗೆ ಭಿನೈಸುವ ಶೈಲಿ ಇದರಲ್ಲಿದೆ. ಮಗಳಿಗೆ ಯಾರೂ ಕಾಣಿಸದ ವಿಸ್ಮಯಗಳನ್ನು ಕಂಡಾಗ ಅದನ್ನು ಮೊದಲು ತೋರಬೇಕೆನಿಸುವುದು ತನ್ನ ಪಪ್ಪನಿಗೇ ಆದರೂ ಪಪ್ಪನಿಗೆ ಇದ್ಯಾವುದಕ್ಕೂ ಸಮಯವಿಲ್ಲ. ಮಗುವಿಗೆ ಪಪ್ಪಾ ಪರಿಚಯಿಸಬೇಕಿದ್ದ ಪ್ರಪಂಚವನ್ನು ಮಗುವೇ ಅವನಿಗೆ ಪರಿಚಯಿಸ ಹೋಗಿರುವುದು ಸಮಯವಿಲ್ಲದ ಪಪ್ಪನಿಗೆ ತೋರುವ ವ್ಯಂಗ್ಯ! 

ನೀನು ಬಾ ನೋಡು
ನಿಂಬೆಯ ಎಲೆ ಮೆದ್ದು 
ಗಡದ್ದು ನಿದ್ದೆಯಲ್ಲಿದೆ ಕಂಬಳಿ ಹುಳು
ಬಾ ಪಪ್ಪಾ ತೋರಿಸುವೆನು...

 ತನ್ನ ಸುತ್ತಲಿನ ಪ್ರಕೃತಿಯೊಂದಿಗೇ ಆಡಿ ಕೂಡಿ ಬೆಳೆದ ಹುಡುಗಿಗೆ ಶಾಲೆಯನ್ನೂ ತಪ್ಪಿಸಿ ಅಸಹಜವಾದದ್ದನ್ನು ಪರೀಕ್ಷಿಸಿ ನೋಡುವ ಕೌತುಕವೊಂದು ಹುಟ್ಟಿಕೊಳ್ಳುತ್ತದೆ. ಯಾವುದನ್ನು ಸಮಾಜ ನಿಜವೆಂದು ಬಿಂಬಿಸಹೊರಟಿದೆಯೋ ಅದರ ಸತ್ಯಾಸತ್ಯತೆಗಳನ್ನು ತಿಳಿಯುವ ಅರಿವು ಅವಳಲ್ಲಿ ಮೂಡಿದೆ. ಪುಟ್ಟ ಹುಡುಗಿಯಾಗಿದ್ದಾಗ ಯಾವುದನ್ನು ತದೇಕ ಚಿತ್ತದಿಂದ ಅಚ್ಚರಿಗೊಂಡು ನೋಡಿದ್ದಳೋ ಅವೆಲ್ಲವನ್ನು ಪರೀಕ್ಷೆಗೊಡ್ಡುವಲ್ಲಿಗೆ ಪುಟ್ಟ ಹುಡುಗಿ ಬೆಳೆದಿದ್ದಾಳೆ. ಅವಳಿಗೆ ಶಾಲೆಯಲ್ಲಿ ಸಿಗದೇ ವಂಚಿಸಿದ ತಿಳಿವು ಪ್ರಕೃತಿಯಲ್ಲೇ ಸಿಗುತ್ತಿದೆ. ಅದೇ ಅವಳಿಗೆ ನಿತ್ಯ ನೂತನವಾಗಿ, ಭ್ರಮೆ ಕಳಚಿ ವಾಸ್ತವ ಪ್ರಪಂಚಕ್ಕೆ ತೆರೆದುಕೊಳ್ಳುವ ಹೆದ್ದಾರಿಯಾಗಿ ಕಾಣಿಸುತ್ತಿದೆ. ಆದರೆ ಈ ಬಗೆಯ ತಿಳಿವನ್ನು ಜ್ಞಾನವೆಂದೇ ಒಪ್ಪಲು ಸಿದ್ದವಿಲ್ಲದ ಸಮಾಜಕ್ಕೆ, ಪಪ್ಪನನ್ನೂ ಒಳಗೊಂಡಂತೆ ಅದೊಂದು ಸಮಯ ವ್ಯರ್ಥಗೊಳಿಸುವ ಕ್ಲೀಷೆಯಾಗಿ ಕಾಣುತ್ತದೆ. 

ಶಾಲೆ ತಪ್ಪಿಸಿ ಅಡ್ಡಾಡುತ್ತಿರುವಳೆಂದು ಪಪ್ಪಾ ಬೆತ್ತ ಹಿಡಿದು ಕಾದಿದ್ದಾನೆ. ಅವನ ಬೆತ್ತ ಎಲ್ಲ ನಿಜಗಳನ್ನು ಬಾಯಿ ಬಿಡಿಸುವ ಅಸ್ತ್ರದಂತಿದೆ. ಆದರೆ ನಿಜವ ಹೇಳಲು ಸಾಧ್ಯವಿರುವುದು ಬೆತ್ತ ಆಚೆ ಇಟ್ಟಾಗಲೇ ಹೊರತು ಅದನ್ನು ಪ್ರಯೋಗಿಸುವುದರಿಂದಲ್ಲ ಎನ್ನುತ್ತದೆ ಕವಿತೆ.
ಬೆತ್ತ ಆಚೆ ಇಡು
ನಿಜವ ಹೇಳುವೆನು
ಪಾಠದ ಪುಸ್ತಕ ತೆರೆದರೆ
ಬರೀ ಗುಡ್ಡ ಬೆಟ್ಟ ನದಿಯೇ ಕಾಣುವುದು

ಓದಿನಲ್ಲಿ ಹಿಂದೆ ಬಿದ್ದ ಮಕ್ಕಳ ಸ್ಥಿತಿ ಹೇಗಿರುತ್ತದೆ ಮತ್ತು ಸ್ವತಃ ಹೆತ್ತ ತಂದೆ ತಾಯಿಗಳೇ ಓದಿನಲ್ಲಿ ಮುಂದಿರುವ ಹಾಗೂ ಓದಿನ ಆಸಕ್ತಿಯೇ ಇಲ್ಲದ ಮಕ್ಕಳನ್ನು ಯಾಕೆ ಭಿನ್ನ ದೃಷ್ಟಿಯಿಂದ ಕಾಣುತ್ತಾರೆಂಬುದರ ಸೂಕ್ಷ್ಮ ಪ್ರಜ್ಞೆಯೊಂದು ಕವಿತೆಯ ಅಂತರಾಳದಲ್ಲಿ ಹುದುಗಿದೆ. ಆಧುನಿಕತೆಯು ಉಂಟುಮಾಡಿದ ಹಲವು ಗೊಂದಲಗಳಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆಯೂ ಕೂಡ ಒಂದು. ಇದಕ್ಕೆ ಒಂದು ನಿರ್ದಿಷ್ಟ ಗುರಿ ಹಾಗೂ ಉದ್ದೇಶ ಇರಲೇಬೇಕೆ? ಇದರ ಹೊರತಾಗಿಯೂ ಆಯ್ಕೆಗಳಿವೆಯೇ ಎಂಬ ದ್ವಂದ್ವದಲ್ಲಿ ಸಿಲುಕಿ ತೊಳಲಾಡುತ್ತಿರುವುದು ಇಲ್ಲಿ ಗೋಚರವಾಗುತ್ತದೆ. ಇದು ಬದುಕನ್ನು ಅರಿಯುವ ಮತ್ತು ಜೀವನದ ಹಠ, ಛಲಗಳನ್ನು ವೃದ್ಧಿಸುವ ಆತ್ಮವಿಶ್ವಾಸದ ಬಾಗಿಲುಗಳನ್ನೇ ತೆರೆಯದೆ, ಪೈಪೋಟಿಗೆ ಬಿದ್ದು ಮನುಷ್ಯನ ಅಸೀಮ ಸಾಧ್ಯತೆಗಳನ್ನೇ ಕಸಿಯುತ್ತಿರುವ ಸಣ್ಣ ಭಯ ಕಾಡದಿರದು. ಸ್ವಾತಂತ್ರೋತ್ತರ ಭಾರತದಲ್ಲಿ ಇನ್ನೂ ವಿದ್ಯೆಯ ಬೆಳಗನ್ನೇ ಕಾಣದ ಸಮುದಾಯಗಳು ಇರಬಹುದಾದ ನಮ್ಮ ಸಮಾಜದಲ್ಲಿ, ಅಲ್ಪಪ್ರಮಾಣದಲ್ಲಾದರೂ ಓದಿದವರು ಎನಿಸಿಕೊಂಡ ಜನರು ತಮ್ಮ ಮಕ್ಕಳನ್ನು ಬೆಳಸುತ್ತಿರುವ ಪರಿಗೆ ಕವಿತೆ ಕನ್ನಡಿ ಹಿಡಿದಂತಿದೆ. ಮಕ್ಕಳಿಗೆ ಅವರ ಶಕ್ತಿ-ಸಾಮರ್ಥ್ಯಗಳನ್ನು ತಿಳಿದುಕೊಳ್ಳಲು ಒಂದು ಪ್ರತ್ಯೇಕ 'ಸ್ಪೇಸ್‍' ನ ಅವಶ್ಯಕತೆ ಇರುತ್ತದೆ. ಅದನ್ನು ಸೃಷ್ಟಿಸುವ ಹೊಣೆಗಾರಿಕೆ ಏಕಕಾಲದಲ್ಲಿ ಶಿಕ್ಷಕರನ್ನೂ, ಪೋಷಕರನ್ನೂ  ಅವಲಂಬಿಸಿರುತ್ತದೆ. ಇದನ್ನರಿಯದೆ ಒಬ್ಬರನ್ನು ಮತ್ತೊಬ್ಬರ ಜೊತೆಗೆ ತುಲನೆ ಮಾಡುವುದು, ದೂರುವುದು ಮಾನಸಿಕ ಹಿಂಸೆಯಾಗುತ್ತದೆಯೇ ವಿನಃ ಮತ್ತಾವ ನಿರೀಕ್ಷೆಯನ್ನೂ ಪೂರೈಸಲಾರದು.

ಛೀ...ಕೂಳಿಗೆ ದಂಡ ಎಂದು
ದೂರದಿರು ಪಪ್ಪಾ
ಬೇಜಾರಾಗದಿರು...

ಇಂದು ನಮ್ಮ ಮುಂದಿರುವ ಸವಾಲಿನಂತಹ ಶಿಕ್ಷಣವನ್ನು ಒತ್ತಾಯಪೂರ್ವಕವಾಗಿ ಕಲಿಯಲಸಾಧ್ಯವಾದರೆ ಬದುಕನ್ನು ಕಟ್ಟಿಕೊಳ್ಳುವುದಾದರೂ ಹೇಗೆ? ಎಂಬ ಪ್ರಶ್ನೆಗೆ ಕವಿತೆಯೇ ಉತ್ತರಿಸುತ್ತದೆ. ಪಪ್ಪನ ಇಚ್ಚೆಯಂತೆಯೇ ಓದಿದ ಶಾರಿ ಮತ್ತು ಗಣಿ ದೊಡ್ಡ ಅಧಿಕಾರಿಯಾಗಬಹುದು ದೂರ ದೇಶಕ್ಕೆ ರೆಕ್ಕೆಬಿಚ್ಚಿ ಹಾರಿಹೋಗಬಹುದು. ಆದರೆ ಅವರಂತಲ್ಲದ ಈ ಹುಡುಗಿ ಅದೇ ಸಮಯವಿರದ ಪಪ್ಪಾ ಒಪ್ಪಿದರೆ,

ಅಜ್ಜ ನಿನಗಿತ್ತ
ತುಂಡು ಭೂಮಿಯನ್ನೇ
ಉತ್ತುವೆನು, ಬಿತ್ತುವೆನು
ಈ ಹಳೆಯ ಮನೆಯೇ ಸಾಕು 
ಇಲ್ಲೇ ನಿನ್ನೊಂದಿಗೆ ಒಂದು 
ತುತ್ತು ಉಣ್ಣುವೆನು.
  
ಎಂಬ ಮಹತ್ವದ ಆಶಯವೊಂದನ್ನು ವ್ಯಕ್ತಪಡಿಸುತ್ತಾಳೆ. ಇದರಲ್ಲಿ ಗಮನಿಸಬಹುದಾದ ಮತ್ತೊಂದು ಅಂಶವಿದೆ. ಯಾವ ಜವಾಬ್ದಾರಿಯನ್ನು ನಮ್ಮ ಪುರುಷ ಪ್ರಧಾನ ವ್ಯವಸ್ಥೆ ಗಂಡಿನ ಮೇಲೆ ಹೊರಿಸುತ್ತದೆಯೋ ಅದರ ಸ್ಥಾನ ಪಲ್ಲಟವೊಂದರ ಉದಾಹರಣೆ ಇಲ್ಲಿ ನಿರಾಡಂಬರವಾಗಿ ದಾಖಲಾಗಿದೆ. ತಂಗಿ ಅಣ್ಣನ ಹಾಗೆ ವಿದ್ಯಾವಂತೆಯಲ್ಲದಿದ್ದರೇನು, ಕೊನೆಯಲ್ಲಿ ನಿನ್ನೊಂದಿಗೆ ಒಂದು ತುತ್ತು ಉಣ್ಣುವ ಹಂಬಲವನ್ನು ಉಳಿಸಿಕೊಂಡವಳು ನಾನೊಬ್ಬಳೇ ಅಲ್ಲವೇನು ಎನ್ನುವ ವಿಶ್ವಾಸ ಅವಳೊಟ್ಟಿಗಿದೆ. ಇದೇ ವಿಶ್ವಾಸ ಅವಳಿಗೆ ಕವಿತೆಯನ್ನು ಕಟ್ಟಲು ಅದರೊಂದಿಗೇ ಬಾಳಲು ಬದುಕಿನ ಎಂದೂ ಬತ್ತದ ಉತ್ಸಾಹದ ಚಿಲುಮೆಯನ್ನು ಕಾಪಿಟ್ಟುಕೊಳ್ಳಲು ಆಧಾರವಾಗಿದೆ.

ನೋಡುತ್ತಾ...ಇರು
ನಿನ್ನ ಮೇಲೆಯೇ ಒಂದು 
ಕವಿತೆ ಕಟ್ಟುವೆನು
ಕವಿತೆಯ ಬಲದಿಂದಲೇ
ಕೊನೆತನಕ ಬಾಳುವೆನು.....

 
- ಧನುಷ್ ಎಚ್ ಶೇಖರ್
ಬೆಂಗಳೂರು, 6362470940.


ಸೋಮವಾರ, ಅಕ್ಟೋಬರ್ 17, 2022

ಮೋಡಿಕಾರ ಈ ಮಾತುಗಾರ (ಕವಿತೆ) - ಗಂಗಾಧರ ಬಾಣಸಂದ್ರ.

ಅಬ್ಬಾ! ಇದೇನು ಚಮತ್ಕಾರ
ಮನೆಮಹಲ್ಲು ಎಲ್ಲವೂ ಚಿತ್ತಾರ
ಮೋಡಿಗಾರನ ಮಾತಿಗೆ
ಮರುಳಾದರೆ ನನ್ನ ಜನ!

ಹರಿದ ಸೀರೆಯುಟ್ಟು 
ಜಗದವ್ವ
ಅಂಗಲಾಚುತ್ತಿದ್ದಾಳೆ.
ಅವಳಿಗೊಂದು ಸೂರಿಲ್ಲ!
ಅದೋ ಒಮ್ಮೆ
ಕಣ್ಣೊರೆಸಿ ನಗುತ್ತಿದ್ದಾಳೆ
ಜೋಪಡಿಯ ನೆತ್ತಿಯಲ್ಲಿ
ಬಾವುಟವೊಂದ ನೆಟ್ಟು...
ಅದೇನು ಸಂಭ್ರಮ 
ಅದೇನು ಮಹೋತ್ಸವ ...

ಅದೋ ಅವಳ ಪತಾಕೆ....
ಕಣ್ಣು ಹಾಯಿಸಿದಷ್ಟು ಖುಷಿಯೇ
ಒಡಲಲಿ ಅವಿತ ಹಸಿವಿನ ಕೂಗು
ಧರಣಿ ಧಣಿಯೇ 
ನೇಯ್ದಕೊಂಡ ನೇಣುರಿ ಕಾವು
ಕಾಣದಾಗಿದೆ, ಕೇಳದಾಗಿದೆ
ಭೋರ್ಗರೆವ ಹೆಣದ 
ವಾದ್ಯಗೋಷ್ಠಿಯ ಕಂಡು
ಅವಳು ಕೂಗುತ್ತಿದ್ದಾಳೆ
ಅಬ್ಬಾ! ಅದೇನು ಮಹೋತ್ಸವ.


ಅದೇನು ಸಂಭ್ರಮ
ಜಗದವ್ವ ಕೇಳುತ್ತಿದ್ದಾಳೆ
ಅತ್ಯಾಚಾರದ ಸದ್ದಿಲ್ಲವೇ?
ಭ್ರಷ್ಟಾಚಾರಕೆ ಕೊನೆಯಿಲ್ಲವೇ?
ಸೌಹರ್ದತೆಯ ನಾಡಿನೊಳಗ 
ದ್ವೇಷದ ಕುಲುಮೆಯೊಂದು ಕಾದಿಲ್ಲವೇ?
ದೀನದಲಿತ ಬಡವ ಬೀದಿಯೊಳಗೆ ಬಿದ್ದಿಲ್ಲವೇ?
ಅದೋ ಅಂದು ಮೊಳಗಿದ
ಭೀಮಾ ಘರ್ಜನೆ
 ನೆಪವಲ್ಲವೇ ?
ಗಾಂಧಿಯ ಸ್ವರಾಜ್ಯ 
ಸಂಕೋಲೆಯಾಗಿಲ್ಲವೇ?
 
ಅದೇನು ಚಮತ್ಕಾರ 
ಮನೆಮಹಲ್ಲು ಎಲ್ಲವೂ ಚಿತ್ತಾರ
ಮೋಡಿಗಾರನ ಮಾತಿಗೆ
ಮರುಳಾದರೆ ನನ್ನ ಜನ?
ಪ್ರಭುತ್ವದ ಗುದ್ದಿಗೆ 
ಮಠ-ಮಾನ್ಯಗಳ ಗದ್ದುಗೆಗೆ
ಗುಲಾಮರಾದರೇ ನನ್ನ ಜನ
ಜಗದವ್ವ
ಕೇಳುತ್ತಿದ್ದಾಳೆ........
 
        
- ಗಂಗಾಧರ್ ಬಾಣಸಂದ್ರ.
  ಮೊ:8722780127


ಭಾನುವಾರ, ಅಕ್ಟೋಬರ್ 16, 2022

ಹಬ್ಬ ಹರಿದಿನಗಳು (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ಸಾಂಪ್ರದಾಯಿಕ ಹಬ್ಬಗಳಲ್ಲಿ 
ನಾಡ ಸಂಸ್ಕೃತಿಯ ಕಹಳೆ ಉದುತಲಿ
ಹಬ್ಬ ಹರಿದಿನಗಳ ಸುರಿಮಳೆಯಲ್ಲಿ
ಮಿಂದೆದ್ದ ಜನರು ಭಾವೈಕತೆಯಲಿ 

ಹೊಸವರ್ಷದ ಪಯಣದಲಿ
ಯುಗಾದಿಯ ಹಬ್ಬ ಆಚರಣೆಯಲಿ
ಸಮನಾಗಿ ಸಿಹಿ ಕಹಿ ಅನುಭವಿಸುತಲಿ
ಶುಭಕಾರ್ಯಗಳು ಅಕ್ಷಯ ತದಿಗೆಯಲಿ

ಎತ್ತುಗಳ ಅಲಂಕಾರ ಮೆರವಣಿಗೆಯಲ್ಲಿ
ಕಾರ ಹುಣ್ಣಿಮೆಯ ಪೂಜೆ ಕರಿ ಹರಿಯುವಲಿ
ದುಡಿವ ರೈತ ಭೂಮಾತೆಗೆ ಕೈಮುಗಿಯುತಲಿ
ಈ ಹಬ್ಬ ಕೃಷಿ ರೈತರಿಗೆ ಸುಖಸಂತಸ ತರುವಲ್ಲಿ

ಎತ್ತುಗಳೇ ರೈತರಪಾಲಿಗೆ ಪಾಲಿಪ ದೇವರು 
ಉಳುವ ಭೂಮಿಯೇ ಸಲಹುವ ತಾಯಿಯು
ಮಣ್ಣಿನಿಂದ ಮಾಡಿದ ಎತ್ತುಗಳು ಪೂಜಿಸುವರಂತೆ
ಮನೆಮನೆಯಲ್ಲಿ ಜೊಡೆತ್ತುಗಳ ಬಲು ಸಿಂಗಾರವಂತೆ 

ನಾಗಪಂಚಮಿ ಹಬ್ಬ ಒಡಹುಟ್ಟಿದವರ ಶ್ರೇಯಸ್ಸಿಗಾಗಿ 
ಚಿಗಳಿ ತಂಬಿಟ್ಟು ಬೆಲ್ಲದ ನೈವೆದ್ಯ ನಾಗಪ್ಪನಿಗಾಗಿ
ಹೆಣ್ಣುಮಕ್ಕಳಿಗೆ ಜೋಕಾಲಿ ಜೀಕುವಸಲುವಾಗಿ
ಹಾರೈಸುವ ತವರಿನ ಅಂಗಳ ಬಾಲೆಯರಿಗಾಗಿ

ಮಗಳು ಮಹಾಗೌರಿಯಾದಳು ಮನೆಯಲ್ಲಿ 
ಸೊಸೆ ವರಮಹಾಲಕ್ಷ್ಮಿಯಾದಳು ಧರೆಯಲ್ಲಿ
ತಂಗಿಯ ರಕ್ಷಣೆಗೆ ನಿಂತ ಅಣ್ಣ ನೂಲ ಹುಣ್ಣಿಮೆಯಲಿ
ಸಿಂಗರಿಸಿ ಪೂಜಿಸಿಹರು ಶ್ರೀಕೃಷ್ಣನನ್ನು ಜನ್ಮಾಷ್ಟಿಮಿಯಲ್ಲಿ

ಗಣೆಶ ಚತುರ್ಥಿಯ ಗಣಪನ ಆಗಮನ
ಮೊದಕ ಕಜ್ಜಾಯ ಗಣಪಗೆ ಅರ್ಪಣ
ವಿಘ್ನಗಳ ಅಳಿಸಿ ಶುಭಹಾರೈಸುವ ಇತನ ಮನ 
ಗಣಪನೆಂದರೆ ಮಕ್ಕಳಿಗೆ ಪಂಚಪ್ರಾಣ

ಬಂದಿಹಳು ಹರ್ಷದಿ ಮನೆಮನೆಗೆ
ನವರಾತ್ರಿಯ ನವದಿನಗಳ ಕರೆಗೆ
ಆದಿಶಕ್ತಿಯ ಅವತಾರಗಳ ಪೂಜೆಗೆ
ಕಷ್ಟವ ಅಳಿಸಿ ನಿಂತಿಹಳು ದೇವಿ ಬೆನ್ನಿಗೆ 

ಬೆಳಕು ಚೆಲ್ಲುವ ದೀಪಾವಳಿ ಹಬ್ಬ
ಮಹಾಲಕ್ಷ್ಮಿಯ ನೆನೆವು ಮನೆಯತುಂಬ
ಶ್ರೀದೇವಿಯ ಸುಖಸಮೃದ್ಧಿಯ ಬೆಳಕ
ಮನೆಮನೆಗಳ ಮುಂದೆ ದೀಪಗಳ ಥಳಕ

ಹುಲ್ಲುಲ್ಲಿಗೇ ಚಲಾಂಬರಿಗೇಯ ಕೂಗ
ಹೊಲದ ತುಂಬ ಚೆಲ್ಲಿದೆ ಖಾದ್ಯದ ಚರಗ
ಪಾಂಡವರು ಕುಂತಾರ ಬನ್ನಿಯಮರ ಕೆಳಗ
ಬೆಳೆದ ಪೈರಿನ ನಡುವೆ ಪೂಜೆಯ ಮೆರಗ

ಕೂಡಲ ಸಂಗಮದಲಿ ಭಕ್ತಜನರ ಸಂಗ
ಸಂಕ್ರಮಣದಲಿ ಕಳೆದಾವ ಕರ್ಮತುಂಬ
ಊರೂರ ಗುಡಿಯಲ್ಲಿ ಮನೆದೇವರ ಪೂಜೆ
ಎಳ್ಳು ಬೆಲ್ಲ ಹಂಚಿ ಕೈಮುಗಿದಾರು ಇಳೆಸಂಜೆ

ಹೊಳಿ ಹುಣ್ಣಿಮೆಯ ಓಕುಳಿ
ಜಾತಿ ಮತ ಪಂಥ ಅಳಿದ ಸವಕಳಿ
ಬಣ್ಣಬಣ್ಣಗಳಲ್ಲಿ ಮುಳಿಗೆದ್ದ ಜಂಗುಳಿ
ಸಂಜೆಗೆ ಕಾಮ ದಹನದ ಹಾವಳಿ 

ಬಸವ ಜಯಂತಿ ವಿಶ್ವಕ್ಕೆ ಶಾಂತಿ
ವಚನಗಳಿಂದ ಕಳೆವ ಮನದ ಭ್ರಾಂತಿ
ತನು ಶುದ್ಧ ಮನ ಶುದ್ಧತೆಗೆ
ಶರಣ ಶರಣೆಯರ ಬಸವ ಸಂಕ್ರಾಂತಿ

ಹಲವು ಬಗೆಯ ವೇಷಭೂಷಣ 
ಅದರಲ್ಲಿ ಹಲವು ಹಬ್ಬಗಳ ಆಚರಣ
ಸಂಪ್ರದಾಯದ ಹಾದಿಯಲಿ ಪಯಣ
ನಾಡಲಿ ಹಬ್ಬಹರಿದಿನಗಳ ವೈಭವೀಕರಣ 



-  ಶ್ರೀಮತಿ ಸುಲೋಚನಾ ಮಾಲಿಪಾಟೀಲ, ಧಾರವಾಡ.

ಆರಾಧನೆ (ಕವಿತೆ) - ವಿಕಾಸ್ ಕನ್ನಸಂದ್ರ.

ಹಿಂದೂ ಧರ್ಮದ ಸಂಸ್ಕ್ರತಿ ಸಡಗರ
ನಾಡಿಗೆಲ್ಲ ಹೆಮ್ಮೆಯ ನವರಾತ್ರಿ ಸಂಭ್ರಮ
ಮೈಸೂರು ದಸರೆಗೆ ಎಲ್ಲಿಲ್ಲದ ಕೀರುತಿ
ತಾಯಿ ಚಾಮುಂಡಿಗೆ ಬೆಳಗುವ ತುಪ್ಪದ ಆರತಿ.

ಜಯ ಜಯ ಜಯಹೇ ಜಗನ್ಮಾತೆ
ಜಗದ ಜನರ ಕಾಯುವ ಪರಮೇಶ್ವರಿ
ಕರಗಳ ಮುಗಿದ ಭಕ್ತರ ಕಾಯುವ ಜಗದೀಶ್ವರಿ
ಲೋಕ ಶಕ್ತಿ ಮಾತೆ ತ್ರಿಭುವನ ಪೋಷಿಣಿ.

ದುಷ್ಟರ ಸಂಹರಿಸಿ ಶಿಷ್ಟರ ಕಾಯುವೆ
ಲೋಕದ ಮಾತೆ  ಏ ಸರ್ವೇಶ್ವರಿ 
ಬೆಟ್ಟದ ವಾಸಿ ನೀ ಚಾಮುಂಡೇಶ್ವರಿ
ತೋರಿದೆ ಎಲೆಲ್ಲೂ ನಿನ್ನಯ ನವರೂಪ.

ಸಿಂಹವಾಹಿನಿ ಚಾಮುಂಡಿ ಪರಮ ಪಾವನಿ
ಭಕ್ತರನ್ನು ಪೊರೆಯುವ ಚಾಮುಂಡೇಶ್ವರಿ
ನಾಗಕಂಕಣ ನಟರಾಜ ಮನೋಹರಿ
ಹಿಮಗಿರಿ ವಾಸಿನಿ ಮಹಾಶಕ್ತಿ ಮಹೇಶ್ವರಿ.

ಅಸುರ ಗುಣಗಳ ದಮನ ಮಾಡುವೆ ತಾಯಿ
ಅಭಯ ಹಸ್ತ ನೀಡಿ ಪೊರೆವ ತಾಯಿ
ಮಹಿಷಾನ ಕೊಂದ ಮಹಾತಾಯಿ
ನವದುರ್ಗೆಯ ಅವತಾರ ಮಹಾತಾಯಿ

ಗೆಲುವಿನ ದಿನದ ಆಚರಣೆಯ ವಿಜಯದಶಮಿ
ಬನ್ನಿ ಕೊಟ್ಟು ಸ್ನೇಹ ಭಾವೈಕ್ಯತೆ ಸಾರುವ ಹಬ್ಬ
ನವರಾತ್ರಿ ಶಕ್ತಿ ವೈಭವ ಸಂತಸ ಸಡಗರದ ಹಬ್ಬ
ಜಯ ಜಯ ತಾಯಿ ಜಗದ ಜನನಿ
ಬೆಳಗುವೆವು ನಿನಗೆ ತುಪ್ಪದ ಆರತಿ.

 - ವಿಕಾಸ್ ಕನ್ನಸಂದ್ರ,  7760600657.


ಕಾಲಿಲ್ಲದ ಸಾವು ಯಾರಿಗೆ? (ಕವಿತೆ) - ಶ್ರೀಧರ ಆರ್.ವಿ., ರಾಯಚೆರ್ಲು.

ನೋಡಿ ನಗುವ, ಕೇಳಿ ಹಿಡಿಯುವ ಮಿಡಿತಗಳಿಗೆ ಏನೆಂದು ಉಸಿರಲಿ. 

ಹಾರುವ ಭಾರದಲಿ ತೇಲುವ ನಿರ್ವಾತದಲಿ ತಟ್ಟಿ ಇಣುಕುವ 
ತೋರಿಕೆಗಳಿಗೆ ಚಿತ್ತವೊಂದೆಂದು ಹೇಳಲೇ ಹಲವಲ್ಲವೇ ಮನಸ್ಸಿಗೆ ರೋಗಗಳು.

ಕಾಲಿನ ಕಮಾನುಗಳು
ಕೆಸರಗದ್ದೆಯ ಓಟಗಳು
ನಿಂತು ನೀರಾಗಿಸುವ ನಿರ್ಜನ
ಕೂಗಾಟಗಳಿಗೆಲ್ಲ ನಿಂತು ಋಜು ಹಾಕಬಹುದೇ.

ಯಾತ್ರೆಗೀತ್ರೆಗಳ ಮಿಸುಕಾಟಗಳಲಿ ತೂಗಿ ತೊಪ್ಪೆಯಾಗುವ ಲಾಗಮಿಲ್ಲದ ಸಾಚಾಗಳ ಹೇರಿಕೆಗಳಲ್ಲಿ ಉಸಿರು ಬಿಗಿದಪ್ಪಿಕೊಳ್ಳಲಾದೀತೆ.

ಗಡ್ಡಬಿಟ್ಟವರ ಸಂತೆಯಲಿ ಕಾವಿಧಾರಿಗಳ 
ಶವಯಾತ್ರೆಗಳು 
ನಲುಗುವ 
ನರಕದ ಬಾಗಿಲಿಗೆ 
ತಲುಪಿದರೂ ಕೀಗಳು ಬೇಕಲ್ಲವೇ.

ಜಮೀನು ಜಾಮೀನುಗಳ
ಉಚ್ಚಿಗೆದ್ದು ರೊಚ್ಚುಕಾರುವವರ
ಹುಚ್ಚಿಗೆ ಸರಳ ಪಂಜುಗಳು
ಕೈಗೆ ನಿಲುಕಾಲದೀತೆ.

ತೋರಿ ನಗಿಸುವವನ ಸಂತೆಗೊಂದು ಅರ್ಥ ಬೇಡವೆ.
ಯಾರಿಗಿಲ್ಲಿ ನ್ಯಾಯ ಯಾರಿಗಿಲ್ಲಿ ಅನ್ಯಾಯಗಳ ಬಹುಮಾನವಿದೆಯೆಂದು
ಒಟ್ಟಿನಲ್ಲಿ ದಾಖಲಾಗುವವರ ಹೆಚ್ಚಿದ್ದಾರೆ ಆಗದಿದ್ದವರಿಗೂ ಸರತಿ ಬಂದು ನಿಯುಕ್ತಿ ಮಾಡುತ್ತೆ.

ಕಾಲಿಲ್ಲದ ಶವಗಳೊಮ್ಮೆ 
ಖಾಲಿತನದಿಂದ ಮಣ್ಣಾಗಲಾರವು
ಚೀತೆಯೇರುವ ಹೊತ್ತಿಗೆ ತಲೆಯೊಳಗಿನ ಖಾಲಿತನ ನಾಲ್ಕಾರು ಬಂಧುಗಳಿಗೆ ಕಾಣಿಸುತ್ತವೆ ಆಗದಾರೂ 
ಪಥದ ಬಾವುಟಗಳು ಭೂಗೋಳದ ತುಂಬಾ ಹಾರಾಡಬೇಕಿದೆ.

- ಶ್ರೀಧರ ಆರ್.ವಿ., ರಾಯಚೆರ್ಲು.


ಶನಿವಾರ, ಅಕ್ಟೋಬರ್ 15, 2022

ಮಾತಿನ ಮಲ್ಲಿ (ಕವಿತೆ) - ಮೈಲಾರಿ.ಹೆಚ್.ಹೆಚ್.

ಇವಳೆಂದರೆ
ಮಾತಿನಮಲ್ಲಿ
ಮಾತನಾಡುತಾಳೆ
ನಗುವ ಚೆಲ್ಲಿ

ಇವಳ ನಗುವಿಗೆ
ಭಾಸ್ಕರ ಸರಿಯುತ್ತಾನೆ
ಮೋಡದ ಮರೆಯಲ್ಲಿ

ಇವಳ ನಗೆಯಲಿ
ನಲಿಯುತ್ತದೆ
ಸಮುದ್ರ ಅಲೆಯಲ್ಲಿ

ಕಲ್ಮಶವಿರದು
ಮನಸ್ಸಿನಲ್ಲಿ
ನಗುವಿರಲಿ 
ನಿಮ್ಮ ಜೀವನದಲ್ಲಿ...

- ಮೈಲಾರಿ.ಹೆಚ್.ಹೆಚ್.

ಪ್ರೀತಿಸುವ ಪ್ರೇಮಿಗಳು (ಕವಿತೆ) - ವೈಷ್ಣವಿ ರಾಜಕುಮಾರ್.

ಪ್ರೀತಿಸಿದ ಹೃದಯಗಳಿಗೆ,
ಪ್ರೀತಿ ಎಷ್ಟು ಸೊಗಸಾಗಿದೆ,
ಅದರಲ್ಲಿ ನೋವು ನಲಿವು ಎಲ್ಲಾ ಅಡಗಿದೆ,
ಅದನ್ನು ಅನುಭವಿಸಿದವರಿಗೆ ತಿಳಿದಿದೆ.

ಪ್ರೀತಿ ಪದವಿದೆ ಬಲು ಚಿಕ್ಕ,
ಪ್ರೀತಿ ಮಾಡಿದವರಿಗೆ ಇಲ್ಲ ಲೆಕ್ಕ,
ಕೇಳುವುದಕ್ಕೆ ಇಂಪಾಗಿದೆ,
ಪ್ರೇಮಿಗಳಿಗೆ ಸೊಗಸಾಗಿದೆ.

ಪ್ರೇಮಿಗಳಲ್ಲಿ ಇದೆ ತುಂಟತನ,
ಪ್ರೀತಿಯಲ್ಲಿ ಕ್ಷಮೆ ಕೇಳುವ ಗುಣ,
ಕ್ಷಮಿಸುವ ಒಳ್ಳೆ ಮನಸ್ಸು,
ಇದ್ರೆ ಅದು ಪ್ರೀತಿ ಶಾಶ್ವತ.

ಪ್ರೀತಿ ಸಿಗುವುದು ಅದೃಷ್ಟವಂತರಿಗೆ,
ಪ್ರೀತಿ ಪಡೆಯುವವರು ಅದೃಷ್ಟವಂತರು,
ಪ್ರೀತಿ ಇದೆ ಬಂಗಾರ,
ಪ್ರೇಮಿಗಳಿಗೆ ಅದು ಶೃಂಗಾರ.

- ವೈಷ್ಣವಿ ರಾಜಕುಮಾರ್
ಪಿಯುಸಿ ವಿದ್ಯಾರ್ಥಿ
ಊರು:-ಕರಕ್ಯಾಳ
ತಾಲೂಕಾ:-ಔರಾದ್(ಬಾ)
ಜಿಲ್ಲಾ:-ಬೀದರ.


ಜ್ಞಾನದ ದೀಪ (ಕವಿತೆ) - ರಾಕೇಶ್.ಎಂ.

ಪ್ರಜ್ವಲಿಸಿತು ಜ್ಯೋತಿ,
ಜ್ಞಾನದ ಜ್ಯೋತಿ....
ಕತ್ತಲೆಯ ದೂಡಿ ಚೆಲ್ಲಿತ್ತು ಬೆಳಕ....

ಅಜ್ಞಾನವೆಂಬ ಅಂಧಕಾರವ ಕಳೆದು,
ಸುಜ್ಞಾನವೆಂಬ ಬೆಳಕನು ನೀಡಿ....
ತಾ ಉರಿದು ಪರರಿಗೆ ಬೆಳಕ ಹಂಚಿತು.
ಈ ಬೆಳಕ ಹಾದಿಯಲ್ಲಿ ಬೆಳೆದ ಹಲವರು
ಸಾಧನೆಯ ಶಿಖರವನೇರಿದರು.

ನಾನಾಗಬೇಕು ದೀಪದ ಹಾಗೆ
ತಾ ಉರಿದು ಪರರ ಜೀವಕೆ ಬೆಳಕ ನೀಡಬೇಕು.
ಧೀನನ ಮನೆಯಲ್ಲಿ ನಾ ಜ್ಯೋತಿಯಾಗಬೇಕು.
ಅಸಹಾಯಕನ ಮನೆಯಲ್ಲಿ ಬೆಳಕ ಚೆಲ್ಲಬೇಕು.

ಹರಿಯಬೇಕು ಜ್ಞಾನದ ಪ್ರವಾಹ, 
 ಪ್ರಪಂಚವ ಬೆಳಗಬೇಕು ನಂದಾ ಜ್ಯೋತಿಯಾಗಿ.
ಅಜ್ಞಾನದ ಕತ್ತಲೆಯ ಓಡಿಸಿ
ಜಗವ ಬೆಳಗುವ ದೀಪವಾಗಬೇಕು.

ನಾನು, 

ಅಖಂಡ ದೀಪವಾಗಬೇಕು. 
ಅನಂತ ಜ್ಞಾನವಾಗಬೇಕು. 

- ರಾಕೇಶ್.ಎಂ
ಬೆಂಗಳೂರು.

ಶುಕ್ರವಾರ, ಅಕ್ಟೋಬರ್ 14, 2022

ಪಕ್ಕದ ಮನೆಯ ಮುದುಕಿ ಸತ್ತಿರಲು... (ಕವಿತೆ) - ರಾಘವೇಂದ್ರ ಡಿ. ತಳವಾರ.

ಪಕ್ಕದ ಮನೆಯ ಮುದುಕಿ ಸತ್ತಿರಲು
ನಾಲ್ಕು ಜನರೂ ಇಲ್ಲ ಕಣ್ಣೀರ ಸುರಿಸಲು
ಯಾವಾಗ ಹೋಗುವುದೋ ಪೀಡೆ ಎಂದವರೆಷ್ಟೋ
ಅಂತೂ ಹೋಯಿತೆಂದು ಸಂತಸ ಪಟ್ಟವರೆಷ್ಟೋ...

ಪಕ್ಕದ ಮನೆಯ ಮುಂದೆ ಶವವು ಮಲಗಿರಲು
ಅಕ್ಕ ಪಕ್ಕದ ಮನೆಯಲಿ ಪಾರ್ಟಿ ಮಾಡಿಹರು
ಅಲ್ಲಿ ಕಾಟಾಚಾರದ ಆಚರಣೆ ನಡೆದಿರಲು
ನೊಂದಿಹರೇನೋ ಆ ಯಮರಾಜನ ಸಂಗಡಿಗರು...

ಆದರೂ ಅಲ್ಲಿ ಸುರಿಸಿಹರು ಕೃತಕ ಕಣ್ಣೀರು
ಈ ಪ್ಯಾಟೆಯ ಬದುಕಲ್ಲಿ ಯಾರಿಗೆ ಇನ್ಯಾರು,
ಕೊನೆಗೆ ಹೊರಲು ನಾಲ್ಕು ಜನರೂ ಸಿಗಲೇ ಇಲ್ಲಿ
ಕರೆದೊಯ್ಯುವರು ನಾಲ್ಕು ಚಕ್ರದ ವಾಹನದಲ್ಲಿ...

ಸಿಗುವುದೂ ಇಲ್ಲ ಜಾಗ ಇಡಲು ಕೊಳ್ಳಿ
ಇಟ್ಟು ಬರುವರು ಶವವ ಯಂತ್ರದ ಮಡಿಲಲ್ಲಿ,
ಇದು ಯಾಂತ್ರಿಕ ಯುಗ ಕಾಣೋ ಮನಸುಗಳು ಮಾಯ
ಮನೆ ಮುಂದಿನ ಹೆಣವೂ ಕಾಣದು ಜನಕೆ, ಅರಿತವರಾರು ಈ ಹೊಸ ಯುಗದ ಗಮ್ಯ.....

- ರಾಘವೇಂದ್ರ ಡಿ. ತಳವಾರ.

ಗುರುವಾರ, ಅಕ್ಟೋಬರ್ 13, 2022

ಪ್ರಶಸ್ತಿ ಬೇಕೇ ? ಪ್ರಶಸ್ತಿ! (ಕವಿತೆ) - ಮಹರ್ಷಿ.

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ಸಾಧನೆ, ಸೇವೆ ಬೇಕಾಗಿಲ್ಲ,  ಸಾಹಿತಿ ಆಗಿರಬೇಕೆಂದಿಲ್ಲ.
'ಗೌಡ' ಬೇಕೇ ? ರತ್ನ ಬೇಕೆ ? ಕೇಸರಿ, ಶ್ರೀ, ಮಾಣಿಕ್ಯ ಬೇಕೇ ? 
ಸಾಧನೆ ಏನು ಮಾಡದೆ ಇದ್ದರು ಸಾಧಕ ರತ್ನ ಅವಾರ್ಡು ಬೇಕೆ ?

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ಎಲ್ಲರಂತೆ ಅಲ್ಲ ನಾವು. ನಂಬಹುದು ನಮ್ಮನು ನೀವು.
ಹಣವನು ನಾವು ಪಡೆಯುವುದಿಲ್ಲ.
ಮೆಂಬರ್ ಶಿಫಲಿ ಡಿಸ್ಕೌಂಟ್ ಇಲ್ಲ. 
ನಮ್ಮಲ್ಲೇನು ಮೋಸವು ಇಲ್ಲ. ಬೇಡಿಕೆ ಎಂದು ಇಳಿಯುವುದಿಲ್ಲ. ಹಣ ಕೊಟ್ಟರೆ ಪ್ರಶಸ್ತಿ ಉಂಟು. ರೆಕಮೆಂಡೇಷನ್ ನಡಿಯುವುದಿಲ್ಲ. 

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

ರಾಜ್ಯ ಮಟ್ಟದ ಪ್ರಶಸ್ತಿ ಉಂಟು, ರಾಷ್ಟ್ರ ಮಟ್ಟದ ಪ್ರಶಸ್ತಿ ಉಂಟು. ಬೇಗ ಬಂದರೆ ಮತ್ತಷ್ಟುಂಟು.

ಪ್ರಶಸ್ತಿ ಬೇಕೆ ? ಪ್ರಶಸ್ತಿ!
೫ ಕ್ಕೆ ಒಂದು, ೧೦ ಕ್ಕೆ ಮೂರು!
ಪ್ರಶಸ್ತಿ ಬೇಕೆ ? ಪ್ರಶಸ್ತಿ!

- ಮಹರ್ಷಿ.

ಅತಿಯಾದ ಮೊಬೈಲ್ ಬಳಕೆಯ ಆಪತ್ತುಗಳು (ಲೇಖನ) - ಹನುಮಂತ ದಾಸರ.

ಜಗತ್ತಿನ ಬಹುತೇಕ ಜನರು ತಂತ್ರಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳ ಅತಿಯಾದ ಬಳಕೆ ಮತ್ತು ಉಪಯೋಗದಿಂದ ಇಂದು ಮಾನಸಿಕ ಹಾಗೂ ದೇಹದ ಇನ್ನಿತರ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಮತ್ತು ಇದು ಬರೀ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ್ದಷ್ಟೇ ಅಲ್ಲದೇ ಸುತ್ತಲಿನ ವಾತಾವರಣಕ್ಕೂ,ಪ್ರಾಣಿ ಪಕ್ಷಿಗಳ ಬದುಕಿಗೂ ಮಾರಕವಾಗಿ ಪರಿಣಮಿಸಿದೆ.
ಹೊಸ ಹೊಸ ತಂತ್ರಜ್ಞಾನ ಮತ್ತು ಆವಿಷ್ಕಾರಗಳ ಬೆನ್ನಿಗೆ ಬಿದ್ದ ಮಾನವ ತನ್ನ ದಿನನಿತ್ಯದ ಕೆಲಸ ಕಾರ್ಯಗಳನ್ನೂ ಕೂಡ ನಡೆಸುಕೊಳ್ಳುವಲ್ಲಿ ತಂತ್ರಜ್ಞಾನಗಳ ಮೇಲೆ ಅತಿಯಾಗಿ ಅವಲಂಬಿತವಾಗಿರುವ ಸನ್ನಿವೇಶ ಇಂದು ನಮ್ಮೆದುರಿಗೆ ಸುಳಿದಿದೆ. ಮಾನವನ ಬದುಕಿಗೆ ಬೇಕಾದ ಪ್ರತಿಯೊಂದು ಕಾರ್ಯಗಳಿಗೆ ಇಂದು ತಂತ್ರಜ್ಞಾನ ಸಹಪಾಠಿಯಾಗಿ ನಿಂತಿದೆ.
 ಇಂತಹ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಎಂಬ ಒಂದು ವಿಶೇಷ, ವಿಭಿನ್ನ ಹಾಗೂ ವಿಚಿತ್ರವಾದಂತಹ ತಂತ್ರಜ್ಞಾನ ಇಂದು ಪ್ರತಿಯೊಬ್ಬ ಮಾನವನನ್ನು ಆಳುವಂತಾಗಿದೆ. ಪ್ರತೀ ಕ್ಷಣವೂ ಮೊಬೈಲ್ ಬಳಕೆ ಇಲ್ಲದ ವ್ಯಕ್ತಿಯನ್ನು ಹುಡುಕಿದರೆ ಅದು ಜಗತ್ತಿನ ತುಂಬಾ ಕಷ್ಟಕರವಾದ ಸಂಶೋಧನೆಯಾಗಿರುತ್ತದೆ. ಜಗತ್ತಿನಲ್ಲಿ ಎಷ್ಟು ತಂತ್ರಜ್ಞಾನಗಳು ಅನಾವರಣಗೊಂಡಿವೆಯೋ ಅಷ್ಟೇ ಮಾನವನ ಆರೋಗ್ಯದ ಮೇಲೆ ಪ್ರಭಾವಬೀರುತ್ತವೆ. ಮೊಬೈಲ್ ಎನ್ನುವುದು ಅಂಗೈಯೊಳಗಿನ ಒಂದು ಚಿಕ್ಕ ತಂತ್ರಜ್ಞಾನದ ಸಾಧನೆಯದರೂ ಅದು ಇಡೀ ಜಗತ್ತನ್ನೇ ಅಂಗೈಯಲ್ಲಿ ತೋರಿಸುವಂತಹ ತಂತ್ರವನ್ನು ಒಳಗೊಂಡಿದೆ ಮತ್ತು ಅಂತಹ ವಿಭಿನ್ನ ತಂತ್ರಜ್ಞಾನದಿಂದ ನಾವು ಏನು ಬೇಕಾದರೂ ಕ್ಷಣಾರ್ದಾದಲ್ಲೇ ಪಡೆದುಕೊಳ್ಳಬಹುದು. ಇಂತಹ ಮೊಬೈಲ್ ತಂತ್ರಜ್ಞಾನದಿಂದ ಜಗತ್ತಿನಲ್ಲಿ ಏನೆಲ್ಲಾ ನಡಿಯಬೇಕೋ ಅದೆಲ್ಲಾ ನಡಿಯುತ್ತೆ, ಏನೆಲ್ಲಾ ನಡಿಯಬಾರದೋ ಅದೆಲ್ಲಾ ನಡಿಯುತ್ತೆ ಹಾಗೂ ಸಮಾಜದ ಮೇಲೆಯೂ ಕೆಟ್ಟ ಹಾಗೂ ಒಳ್ಳೆಯತನದ ಪ್ರಭಾವಬೀರುತ್ತದೆ ಆದರೇ ಮಾನವನು ಅದನ್ನು ಉಪಯೋಗಿಸಿಕೊಳ್ಳುವುದರ ಮೇಲೆ ಅವಲಂಬಿತವಾಗಿರುತ್ತದೆ. ಆದರೇ ಅವಶ್ಯಕತೆಗಿಂತ ಅತೀಯಾಗಿ  ಮೊಬೈಲ್ ನ್ನು ಉಪಯೋಗಿಸುತ್ತಿದ್ದೇವೆ ಜೊತೆಗೆ ಗೊತ್ತಿಲ್ಲದೇ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದೇವೆ. ಮುಖ್ಯವಾಗಿ ಮನುಷ್ಯನಿಗೆ ಬೇಕಾಗಿದ್ದು ಅವನ ಮಾನಸಿಕ ಸ್ಥಿತಿ, ಮಾನಸಿಕ ಸ್ಥಿತಿ ಸರಿಯಾಗಿದ್ದರೆ ಮಾತ್ರ ಮನುಷ್ಯ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ. ಹೀಗಿರುವಾಗ ಅತಿಯಾದ ಮೋಬೈಲ್ ಬಳಕೆಯಿಂದ ಮಾನವನ ಮೃದು ಮನಸ್ಸಿನ ಮೇಲೆ ಒತ್ತಡ ಬಿದ್ದು ಅವನ ಆರೋಗ್ಯ ಸ್ಥಿತಿಗೂ ಕಾರಣವಾಗುತ್ತದೆ. ಇತ್ತೀಚಿಗಂತೂ ಚಿಕ್ಕ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲ ಅಂದ್ರೆ ಮಕ್ಕಳು ಊಟ ಮಾಡುವುದಿಲ್ಲ ನಿದ್ರೆ ಮಾಡುವುದಿಲ್ಲ. ಸ್ವಲ್ಪ ಕೆಲವು ವರ್ಷಗಳ ಹಿಂದಿನ ದಿನಗಳನ್ನು ನೆನಪಿಸಿಕೊಂಡರೆ ಆಗ ಮಕ್ಕಳು ಅತ್ತಾಗ ಅವರ ಕೈಯಲ್ಲಿ ಯಾವುದು ಆಟದ ಬೊಂಬೆಯೋ ಆಟಿಕೆ ವಸ್ತುಗಳನ್ನೊ ಕೊಟ್ಟು ಅವರ ಗಮನವನ್ನು ಅವುಗಳ ಮೇಲಿರಿಸಿ ಸುಮ್ಮನಿರಿಸುವುದು ಮತ್ತು ಊಟ ಮಾಡಲು ತಿರಸ್ಕರಿಸಿದಾಗ ಚಂದ್ರನನ್ನು ತೋರಿಸಿಯೋ ಅಥವಾ ನಾಯಿ ಬರುತ್ತೆ ಹಾಗೆ ಹೀಗೆ ಅಂತ ಏನೇನೋ ಹೇಳಿ ಊಟ ಮಾಡಿಸಿ ಜೋಗುಳದಲ್ಲಿ ತಾಯಿ ಲಾಲಿ ಹಾಡಿ ಮಗುವನ್ನು ಮಲಗಿಸುವಂತಹ ಕಾಲವಿತ್ತು ಆದರೇ ಇಂದು ಅದೆಲ್ಲಾ ಬದಲಾಗಿ ವಿರುದ್ಧ ದಾರಿಯಲ್ಲಿ ನಡಿಯುತ್ತಿದೆ ಅದಕ್ಕೆಲ್ಲಾ ಮೂಲ ಮಂತ್ರ ಈ ಮೊಬೈಲ್ ಎಂಬ ತಂತ್ರ. ಪ್ರತೀ ಕ್ಷಣವೂ ಮಕ್ಕಳ ಕೈಯಲ್ಲಿ ಮೊಬೈಲ್ ಇಲ್ಲವೆಂದರೆ ಅವತ್ತು ಆ ಮಗು ಊಟ ಮಾಡುವುದಿಲ್ಲ, ನಿದ್ದೆ ಮಾಡುವುದಿಲ್ಲ ಮೇಲಾಗಿ ಯಾರನ್ನೂ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಅತ್ತು ಅತ್ತು ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ಸೇರುವುದಂತೂ ಖಚಿತ ಹೀಗೆ ಮೊಬೈಲ್ ಒಂದು ಬಿಟ್ಟರೂ ಬಿಡದ ಈ ಮಾಯೆ ಎಂಬಂತಾಗಿ ಮೊಬೈಲ್ ಮನುಷ್ಯನಿಗೆ ಮರಳೋ, ಮನುಷ್ಯ ಮೊಬೈಲ್ ಗೆ ಮರಳೋ ಎಂಬ ಪ್ರಶ್ನೆ ಕಾಡುವಂತಾಗಿದೆ.

ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಗಳು :

ಕಣ್ಣಿನ ಮೇಲೆ ಪರಿಣಾಮ :- ಮುಖ್ಯವಾಗಿ ಚಿಕ್ಕಮಕ್ಕಳ ಹಠಕ್ಕೆ ಅವರ ಕೈಯಲ್ಲಿ ಮೊಬೈಲ್ ಕೊಟ್ಟು ಗೇಮ್ ಹಚ್ಚಿ ಕೊಟ್ಟು ನಮ್ಮ ಕೆಲಸದಲ್ಲಿ ನಾವು ನಿರತರಾಗುವುದರಿಂದ ಮಕ್ಕಳು ಮೊಬೈಲ್ ಉಪಯೋಗಿಸುವಾಗ ಮೊಬೈಲ್ ಸ್ಕ್ರೀನ್ ಬಹಳ ಬ್ರೈಟ್ಟ್ನೆಸ್ ಹೊಂದಿರುವುದರಿಂದ ಮಕ್ಕಳ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರಿ ದೃಷ್ಟಿ ಹೀನತೆ, ಕಣ್ಣು ಹುರಿ, ತಲೆನೋವು ಹೀಗೆ ಮುಂತಾದ ಕಾರಣಗಳಿಗೆ ತುತ್ತಾಗಿ ಚಿಕ್ಕಮಕ್ಕಳಿಗೆ ಕನ್ನಡಕ ಧರಿಸುವಂತಹ ಸಾಧ್ಯತೆಗಳು ಹೆಚ್ಚಾಗಿ ಕುರುಡುತನವಾಗಬಹುದು ಮತ್ತು ಇದು ಯುವಕರ ಆರೋಗ್ಯದ ಮೇಲೆಯೂ ಪ್ರಭಾವ ಬೀರಿ ದೂರದೃಷ್ಟಿ, ಸಮೀಪದೃಷ್ಟಿ ಎಂಬಂತಹ ಖಾಯಿಲೆಗೆ ತುತ್ತಾಗುತ್ತಾರೆ ಮತ್ತು ತಲೆನೋವು,ಸಿಟ್ಟು, ಚಂಚಲತೆ, ಲಕ್ಷ್ಯ, ಗಮನಕ್ಕೆ ಕೊರತೆಯುಂಟಾಗುತ್ತದೆ.

ಕಿವಿ: ಅತೀಯಾಗಿ ಮೊಬೈಲ್ ಒಳಗೆ ಮಾತನಾಡುವುದರಿಂದ, ಅತಿಯಾದ ಸೌಂಡ್ ಇಟ್ಟು ಹಾಡು ಕೇಳುವುದರಿಂದ, ಇಯರ್ ಫೋನ್ ಹಾಕಿ ಡಿಜೆ ಹಾಡುಗಳನ್ನು ಬಹಳ ಸೌಂಡ್ ಇಟ್ಟುಕೊಳ್ಳುವುದರಿಂದ ಹಾಗೂ ತಾಸುಗಟ್ಟಲೆ ಮಾತನಾಡುವಾಗ ಮೊಬೈಲ್ ಬಿಸಿಯಾಗಿ ಕಿವಿಗೆ ಬಿಸಿ ತಾಕುವುದು ಇಂತಹ ಕಾರಣಗಳಿಂದ ಕಿವಿಯ ಭಾಗಕ್ಕೆ ತೊಂದರೆಯಾಗಿ ಕಿವಿ ಕೇಳದಂತಾಗಿ ಕಿವುಡುತನಕ್ಕೂ ಕಾರಣವಾಗುತ್ತದೆ.

ಬಾಯಿ : ಅತೀಯಾಗಿ ಮೊಬೈಲ್ ನಲ್ಲಿ ತಾಸುಗಟ್ಟಲೆ ಮಾತನಾಡುವುದರಿಂದ ಬಾಯಿಗೂ ಹಾಗೂ ದವಡೆಗೂ ಆಯಾಸವಾಗಿ ಗಂಟಲಿನಲ್ಲಿ ನೀರಿನಂಶ ಕಡಿಮೆಯಾಗಿ ಗಂಟಲು ಆರುವುದು ಮತ್ತು ಡಿಹೈಡ್ರೇಷನ್ ಆಗುತ್ತದೆ.

ಚರ್ಮ : ಅತೀಯಾಗಿ ಮೊಬೈಲ್ ಬಳಕೆ ಮಾಡುವಾಗ ಮೊಬೈಲ್ ಅತೀ ಬಿಸಿಯಾಗಿ ಬ್ಯಾಟರಿ ಬ್ಲಾಸ್ಟ್ ಆಗಬಹುದು ಅದರಿಂದ ದೇಹದ ಯಾವುದೇ ಭಾಗ ನ್ಯೂನತೆಗೆ ಕಾರಣವಾಗಬಹುದು ಮತ್ತು ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಚರ್ಮದ ಸ್ಪರ್ಶಜ್ಞಾನ ಕಡಿಮೆಯಾಗುತ್ತದೆ ಮತ್ತು ಚರ್ಮದಲ್ಲಿನ ನೀರಿನಂಶ ಮತ್ತು ರಕ್ತ ಸುಟ್ಟು ಅಲರ್ಜಿಗೂ ಕಾರಣವಾಗಬಹುದು.

ಮೆದುಳು : ಅತೀಯಾಗಿ ಮೊಬೈಲ್ ಒಳಗೆ ಮಾತನಾಡುವುದರಿಂದ, ಯಾವಾಗಲೂ ಮೊಬೈಲ್ ಸ್ಕ್ರೀನ್ ನೋಡುವುದರಿಂದ (ರಾತ್ರಿವೇಳೆಯಲ್ಲಿ ಮಾತ್ರ ಬ್ರೈಟ್ಟ್ನೆಸ್ ಕಡಿಮೆ ಇರಬೇಕು), ಬಿಸಿಯಾದ ಮೊಬೈಲ್ ಉಪಯೋಗಿಸುವುದರಿಂದ ಕಣ್ಣಿಗೂ ಆಯಾಸವಾಗಿ, ಕಿವಿಯ ತಮಟೆಯ ಮೇಲೆ ಒತ್ತಡ ಬೀರಿ, ಚರ್ಮದ ಮೇಲೆಯೂ ಪರಿಣಾಮ ಬೀರಿ ನಂತರ ಮೆದುಳಿನ ಮೇಲೆಯೂ ಒತ್ತಡ ಬಿದ್ದಾಗ ಮೆದುಳಿನ ನರಗಳು ಆಯಾಸವಾಗಬಹುದು ಮತ್ತು ಮೆದುಳಿಗೆ ಅನಾವಶ್ಯಕ ಕೆಲಸ ಕೊಟ್ಟಾಗ ತಲೆನೋವು, ಸಿಟ್ಟು, ಚಂಚಲತೆ, ದೃಢ ನಿರ್ಧಾರ ಹಾಳಾಗಬಹುದು, ವಿಚಾರ ಶಕ್ತಿ ಹಾಳಾಗಬಹುದು, ಜ್ಞಾನ ಪಡೆದುಕೊಳ್ಳುವ ಶಕ್ತಿ ಕಡಿಮೆಯಾಗಬಹುದು, ಏಕಾಗ್ರತೆ ಕುಂಠಿತಗೊಳ್ಳಬಹುದು, ಮಾನಸಿಕ ಒತ್ತಡ ಹೆಚ್ಚಾಗಿ ಮನುಷ್ಯ ಮಾನಸಿಕ ರೋಗಕ್ಕೂ ತುತ್ತಾಗಬಹುದು ಮತ್ತು ದೇಹದ ಬೆಳವಣಿಗೆಯ ಮೇಲೂ ಪರಿಣಾಮಬೀರಬಹುದು.

ಅಂಡಾನುವಿನ ಮೇಲೆ ಪರಿಣಾಮ : ಅತಿಯಾದ ಮೊಬೈಲ್ ಬಳಕೆಯಿಂದ ಹಾಗೂ ಈ ಮೇಲಿನ ಎಲ್ಲಾ ಅಂಶಗಳಿಂದ ಹೆಣ್ಣು ಮತ್ತು ಗಂಡಿನ ಅಂಡಾನು ಹಾಗೂ ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು- ಹೆಣ್ಣಿನ ಲೈಂಗಿಕ ಕ್ರಿಯೆಯಲ್ಲಿ ಬಿಡುಗಡೆಯಗುವ ಹಾರ್ಮೋನ್ ಗಳಾದ ಇಸ್ಟ್ರೋಜನ್ ಮತ್ತು ಪ್ರಾಜೆಸ್ಟಿರೋನ್ ಮೇಲೂ ಪರಿಣಾಮ ಬೀರುತ್ತದೆ ಎಂಬುದು ಸಾಬೀತಾಗಿದೆ. ಹೀಗೆ ಮೊಬೈಲ್ ಗಳಂತಹ ಇನ್ನಿತರ ತಂತ್ರಜ್ಞಾನ ಸಾಧನಗಳ ಅತಿಯಾದ ಬಳಕೆಯಿಂದ ಮಾನವನ ಮುಖ್ಯವಾದ ಅಂಗಾಗಳ ಮೇಲೆ ಅತಿಯಾದ ಪರಿಣಾಮಬೀರುತ್ತದೆ.ಇಂತಹ ಕಾರಣಕ್ಕಾಗಿಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಅಕ್ಟೋಬರ್ 10 ರಂದು ಮಾನಸಿಕ ಆರೋಗ್ಯ ದಿನ ಎಂದು ಆಚರಿಸಲಾಗುತ್ತಿದೆ.

ಈ ಎಲ್ಲಾ ಅಂಶಗಳನ್ನು ಮನಗಂಡು ನಾವು ನಮ್ಮ ದಿನನಿತ್ಯದ ಮತ್ತು ಮಿತ್ಯ ಮೊಬೈಲ್ ಬಳಕೆಯ ಮೇಲೆ ಗಮನ ಹರಿಸಿ ನಮ್ಮ ಆರೋಗ್ಯವನ್ನು ನಾವು ಮೂಡುಪಾಗಿಟ್ಟುಕೊಳ್ಳಬೇಕಿದೆ ಮತ್ತು ಮೊಬೈಲ್ ಇಡೀ ಜಗತ್ತನ್ನು ಅಂಗೈಯಲ್ಲಿ ತೋರಿಸಿ ನಮ್ಮ ಆರೋಗ್ಯವನ್ನು ಕಸಿದು ಕೊಳ್ಳುವಂತಹ ಹುನ್ನಾರಕ್ಕೆ ನಾವು ತುತ್ತಾಗದಿರೋಣ. "ನಮ್ಮ ಆರೋಗ್ಯ ನಮ್ಮ ಕೈಯಲ್ಲಿ, ಮಿತವಾಗಿ ಮೊಬೈಲ್ ಬಳಸಿ ಹಿತವಾಗಿ ಜೀವಿಸಿ".
 ಅತಿಯಾದ ಮೊಬೈಲ್ ನಲ್ಲಿ ತಲ್ಲಿನರಾಗುವುದನ್ನು  ಬಿಟ್ಟು ಸ್ವಲ್ಪ ಸಮಯ ಸಂಬಂಧಿಕರು, ಸ್ನೇಹಿತರು, ಅಕ್ಕಪಕ್ಕದವರೊಂದಿಗೆ ಪರಸ್ಪರವಾಗಿ ಬೆರೆಯುವುದು, ಮತ್ತೊಬ್ಬರ ಕಷ್ಟ ಸುಖದ ಬಗ್ಗೆ ಮಾತನಾಡುವುದಾಗಲಿ ಅಥವಾ ಬೇರೊಬ್ಬರಿಗೆ ಸಹಾಯ ಮಾಡುವುದಾಗಲಿ, ದಿನಾಲು ಸ್ವಲ್ಪ ಸಮಯ ಮೊಬೈಲ್ ಬಿಟ್ಟು  ಧ್ಯಾನದಲ್ಲಿ ಮುಳುಗುವುದು, ಸುತ್ತಲಿನ ಪರಿಸರದೊಂದಿಗೆ ಬೆರೆಯುವುದು, ಒಳ್ಳೆಯ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಪಶು ಪಕ್ಷಿಗಳ ಇಂಚರವನ್ನು ಆಲಿಸುವುದು, ಬಿಡುವಿದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವುದು, ವಿಭಿನ್ನ ವಿಚಾರಗಳ ಬಗ್ಗೆ ತಿಳಿಯುವುದು ಬರೆಯುವುದು ಹಿರಿಯರೊಂದಿಗೆ ಬೆರೆತು ವಿಶೇಷ ವಿಚಾರಗಳ ಬಗ್ಗೆ ಚರ್ಚೆ ಮಾಡುವುದು, ಚಿಕ್ಕ ಮಕ್ಕಳ ಜೊತೆಗೆ ಆಟ ಆಡುವುದು, ಗ್ರಾಮೀಣ ಕ್ರೀಡೆಗಳನ್ನು ಆಡುವುದು ಇಂತಹ ಹವ್ಯಾಸಗಳನ್ನು  ನಾವು ಮೈಗೂಡಿಸಿಕೊಂಡಾಗ ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವೂ ಹಿತವಾಗಿರುತ್ತದೆ.
- ಹನುಮಂತ ದಾಸರ, ಹೊಗರನಾಳ.


ನೆನಪುಗಳ ಜಾತ್ರೆ (ಭಾವಗೀತೆ) - ಮಧುಮಾಲತಿ ರುದ್ರೇಶ್.

ಕಳೆದು ಹೋಗಿರುವೆ ನಿನ್ನ ನೆನಪುಗಳ ಜಾತ್ರೆಯಲಿ
 ಗೆಳೆಯ ನೀ ಬಂದು ಸಹಕರಿಸು ಈ ಒಲವ ಯಾತ್ರೆಯಲಿ

 ಬಂದೊಮ್ಮೆ ಸೇರಿಬಿಡು ನನ್ನೊಲವ ನಿಲ್ದಾಣಕೆ
 ಸುರಿಸು ಪ್ರೀತಿಯ ತುಂತುರು ಹನಿಯ ಈ ಮನಕೆ

 ಒಲವಿಂದ ನೀನೊಮ್ಮೆ ಕಣ್ತೆರೆದು ನೋಡು ಇನಿಯ
 ಜಗವೇ ಪ್ರೇಮಲೋಕದ ಗೂಡು ನೀ ಕಾಣೆಯ

 ನಿನ್ನೆದೆಯ ಬಂಧೀಖಾನೆಯ ಪ್ರೇಮ ಕೈದಿ ನಾನು
 ಸವಿನುಡಿಯ ಸರಳುಗಳ ಹಿಂದೆ ಸುಖಿಯಾಗಿಹೆನು

 ಸವಿದಷ್ಟು ಸಿಹಿಯೆನಿಸುವ ಕಲ್ಲುಸಕ್ಕರೆ ನಿನ್ನ ಪ್ರೀತಿ 
ಭೃಂಗ ಸಖ್ಯದಿ ಸವಿಜೇನಾದ ಪ್ರೀತಿ ಮಧುವ ರೀತಿ

 ಮಳೆ ನಿಂತರೂ ನಿಲ್ಲದ ಮಳೆ ಹನಿಯಂತೆ ನೀನು
 ನೀನಿರೆ ಪ್ರತಿಕ್ಷಣವು ಸವಿದಂತೆ ಹಾಲುಜೇನು 

ಸದ್ದಿಲ್ಲದೆ ಕದ್ದೊಯ್ದಿರುವೆ ನೀ ಎನ್ನ ಮನವ 
ನಿನ್ನ ಹೃದಯದಲೇ ಹುಡುಕಿದೆ ನಾನದರ ವಿಳಾಸವ

 ನಿನ್ನ ನೆನಪಿನ ಜಾತ್ರೆಯಲಿ ಪುಳಕಗೊಂಡಿದೆ ಮನ 
ನಿನ್ನ ಸನಿಹವದು ಪ್ರೇಮ ಸುಮಗಳರಳಿದ ಹೂಬನ

 - ಮಧುಮಾಲತಿ ರುದ್ರೇಶ್, ಬೇಲೂರು.

ಮಂದಾರವೇ ನೀ (ಕವಿತೆ) - ಶಿವಾ ಮದಭಾಂವಿ, ಗೋಕಾಕ.

ಲತೆಗಳಲ್ಲಿ ಕುಸುಮವರಳಿ
ಇವಳ ದಂತಪಂಕ್ತಿಗಳೇ ಬಾನಾಡಿ ಬೆಳ್ಳಕ್ಕಿಸಾಲು 
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ
ನಿಂತಿಹಳು ಚೆಲುವಿ ನಗುಮೊಗವ ಚೆಲ್ಲಿ

ಕುಡಿಹುಬ್ಬ ಕಾಮನಬಿಲ್ಲು
ಕಣ್ಣೇರಡು ಕಮಲದ ಹೂವು
ನಿಂತಿಹಳು ಚೆಲುವಿ ಹೂವ ಚೆಲ್ಲಿ
ನಿಂತಿಹಳು ಚೆಲುವಿ ಹೂವ ಚೆಲ್ಲಿ

ನಗುಮೊಗದಲಿ ತುಂಬಿದೆ ಒಲವು
ಇವಳ ಸವಿ ಮಾತುಗಳಲ್ಲಿದೆ ಬಲವು
ನಿಂತಿಹಳು ಮನದನ್ನೆ ನಲ್ಲನೆದೆಯ ಕದ್ದು
ಇವಳಿಂದ ಚಿಗುರುತಿದೆ ಮನದಲಿ ಹೂಬಳ್ಳಿ

ಮನದಲಿ ಮನೆಯ ಮಾಡಿ
ಕ್ಷಣ ಕ್ಷಣವೂ ಉಸಿರಲಿ ಉಸಿರಾಗಿ ಬೆರೆತು
ಬರುವ ನೋಡುತ ನಿಂತಿಹಳು ಮಲ್ಲಿ
ನೋಡುತ ನಿಂತಿಹಳು ಮನದ ಚೆಲುವಿ ಮಲ್ಲಿ
- ಶಿವಾ ಮದಭಾಂವಿ, ಗೋಕಾಕ.

ಸೌಂದರ್ಯ ಲಹರಿ (ಕವಿತೆ) - ಶಾಂತಾರಾಮ ಶಿರಸಿ.

ಮುದ್ದು ಕುವರಿ,
ಪೆದ್ದು ಮರಿ,
ಸೌಂದರ್ಯ ಸಿರಿ,
ನಿನ್ನಂದವು ರಂಗಿನ ನವಿಲು ಗರಿ...

ಸೌಂದರ್ಯವೆಲ್ಲಾ ನಿನ್ನಲ್ಲೇ ಸೃಷ್ಟಿಸಿ,
ನಿನ್ನ ನೋಡಲು ಬಹಳ ಖುಸಿ(ಷಿ),
ಸೀರೆಯುಟ್ಟು-ಮಲ್ಲಿಗೆಯ ಮುಡಿದು-ಹಣೆಯ ಮೇಲೆ ಬೊಟ್ಟಿಟ್ಟು ಶೃಂಗರಿಸಿ,
ಪದೇ-ಪದೇ ಅದೇ ಮುಂಗುರುಳ ಸರಿಸಿ,
ಕೆಂದುಟಿಯ ಕೆಂಪನೆಯ ತುಟಿಯಿಂದ ನಗುವ ಹೊರಸೂಸಿ,
ಹಾರುವ ಹಕ್ಕಿಗಳಿಗೆಲ್ಲಾ ಹಾಗೇ ಕೈಬೀಸಿ,
ನೋಡುವ ಹುಡುಗರನೆಲ್ಲಾ ಮೋಹಿಸಿ...

ಮುನಿಸಿರದ ಮುತ್ತಿನಂಥ ಮಾತುಗಳು,
ಕೈಯಾರೆ ತಿನಿಸುವ ತಿನಿಸುಗಳು,
ಯಾರಿಗೂ ಬೇಧ-ಭಾವ ತೋರದೇ,
ಎಲ್ಲರೂ ನನ್ನಂತೇ ಎಂದೇ,
ನಿನ್ನನ್ನು ಮರೆಯದ ಈ ಹೃದಯ ಉಸಿರಾಡುತಿದೆ...

 - ಶಾಂತಾರಾಮ ಶಿರಸಿ.

ನನ್ನ ಸುಂದರ ಶಾಲೆ (ಕವಿತೆ) - ಕೊಟ್ರೇಶ ನಡುವಿನಮನಿ.

ಕಣ್ಣಿನುದ್ದಕ್ಕೂ ನೋಡಿದರೆ ಕಾಣುವುದು ನಿಮಗೆ ಹಸಿರು ವನ,
ಸುಖ, ದುಃಖಗಳನ್ನು ಸರಿಸಮಾನವಾಗಿ ಸ್ವೀಕರಿಸಿ ಜೀವನ
ನಡೆಸುತ್ತಿದ್ದಾರೆ, ಹಿರೇಹೊನ್ನಿಹಳ್ಳಿ ಜನ.

ಕಲ್ಲು ಮುಳ್ಳುಗಳನ್ನು ಬುನಾದಿ ಮಾಡಿಕೊಂಡು ನಿಂತಿದೆ ಬಾಹುಬಲಿಯಂತೆ ಗುಡ್ಡದ ಮೇಲೆ, 
ಕಾನನದ ನಡುವೆ ನವಿಲು, ನರಿಗಳ ಮಧುರ ಸ್ವರ ಕೇಳಿ
ಮೈಮರೆತು ನಿಂತಿದೆ, ಕಿ.ರಾ.ಚೆನ್ನಮ್ಮ ವಸತಿ ಶಾಲೆ.

ನನ್ನ ಸುಂದರ ಶಾಲೆಯ ಮುಖ್ಯ  ಪ್ರವೇಶ ದ್ವಾರದಲ್ಲಿದೆ
“ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ” ಎಂಬ ಫಲಕ.
ಜ್ಞಾನ ಸಂಪಾದಿಸಿಕೊಂಡರೆ, ಸಮಾಜದಲ್ಲಿ ಗೌರವ ಸಿಗುವುದು
ಕೊನೆಯತನಕ.
ಇವರೇ ನಮ್ಮ ಶಾಲೆಗೊಂದು ಕಳಶಪ್ರಾಯ,    ಅಸಿಪ್ ಅಲಿ ನದಾಪ್ ಸರ್ ಮಹಾಭಾರತದ ಧರ್ಮರಾಯ.
ಇವರ ಮುಖದಲ್ಲಿರುವುದು ಸದಾ ಬುದ್ದನಲ್ಲಿರುವ ಹುಣ್ಣಿಮೆಯ ಚಂದ್ರನಂತ ಕಳೆ,
ತೌಫೀನ್ ಮೇಡ್ಂರವರನ್ನು ಕಂಡಾಗ ನಾಚುವುದು ನಮ್ಮ ಇಳೆ.
ವಿಜ್ಞಾನ ವಿಷಯ ಅಂದರೆ ಇವರಿಗೆ ಅಚ್ಚುಮೆಚ್ಚು ,
ಆದರೆ ಆಸ್ಮಾ ಮೇಡ್ಂ ಕನ್ನಡ  ಮಾತನಾಡಲು ಕಲಿಯಬೇಕಿದೆ
ಹೆಚ್ಚುಹೆಚ್ಚು.

ಗಾನಕೋಗಿಲೆಗೆ ಪ್ರತಿಸ್ಪರ್ಧೆ ನೀಡುವ ಕಂಠ ಈ ಶಾಲೆಯಲ್ಲಿ ಉಂಟು,
ಸೀಮಾ ಮೇಡ್ಂರವರಿಗೆ ಕಿ.ರಾ.ಚೆ. ವಸತಿ ಶಾಲೆಗೆ ಇದೇ 
ಬಹಳ ದಿನದ ಜನುಮ ಜನುಮದ ನಂಟು.

ಶಾಲೆಗೆ ಒಬ್ಬರಾದರು ಶಿಸ್ತಿನ ಸಿಪಾಯಿ ಇರಬೇಕ್ರಿ ,
ತಪ್ಪು ಮಾಡಿದವರಿಗೆ, ಆಶಾಮೇಡ್ಂರವರು
 ಮಾಡುವರು ಆಗಾಗ ರಿಪೇರಿ.  ಬಂದವರಿಗೆ ಹೇಳಿಕೊಡುವರು ಇವರು
ಉಚಿತ ಕಂಪ್ಯೂಟರ್ ಶಿಕ್ಷಣ, ಕಷ್ಟ ಅಂತಾ ಅಂದಾಗ 
ಮಂಜುಳಾ ಮೇಡ್ಂರವರು ಸಹಾಯ ಮಾಡುವರು ತಕ್ಷಣ.

ಇವರು ಕ್ರೀಡೆ ಆಡಲು ನಿಂತರೆ ನಿಲ್ಲುವುದು ಎದುರಾಳಿ ಉಸಿರು ,
ಐ.ಎಮ್. ಕಿಲ್ಲೇದಾರ್ ಸರ್ ಎಂಬುದು ಇವರ ಹೆಸರು.
ಮಕ್ಕಳಿಗೆ ಬಹಳಷ್ಟು ಮಾಡುವರು ಇವರು ಪ್ರೀತಿಯಿಂದ ಮುದ್ದು ,
ಮಕ್ಕಳನ್ನು ಶಾಂತಮಾಡಲು ನಮ್ಮ ಶಾಲೆಯ ವ.ನಿ.ಪಾಲಕರಾದ ರೇಖಾ ಮೇಡ್ಂ ಬರುವರು
ಕುಳಿತಲ್ಲಿಂದ ಎದ್ದು ಬಿದ್ದು.

                        
 - ಕೊಟ್ರೇಶ ನಡುವಿನಮನಿ.
ಅತಿಥಿ ಶಿಕ್ಷಕರು ಕಿ.ರಾ.ಚೆ.ವಸತಿ ಶಾಲೆ ಹಿರೇಹೊನ್ನಿಹಳ್ಳಿ.

ಸೌಹಾರ್ದತೆ (ಕವಿತೆ) - ಮೇಘನಾ ಶಿವಾನಂದ್.

ಒಂಟಿಯಾಗಿ ಬಂದದ್ದಾಗಿದೆ ಹಾಗೆಯೇ ಹೋಗುವುದಿದೆ 
ಬಾಳ್ಮೆಯ ಹಂತದೊಳಾದರೂ ಜಂಟಿಯಾಗಿರಬಹುದಲ್ಲವೇ 
ಮೈತ್ರಿಯ ಮರೆತು ನಾನತ್ವದಿ ಮೆರೆದ ದಿನಗಳು 
ಮತ್ತೆ ಮರಳಿ ಬಾರದಾಗಿವೆ ನಿನ್ನೊಡನೆ 

ಇರುವುದದೆಷ್ಟು ದಿವಸವೀ ಮಾಯಾವಿ ಲೋಕದೊಳು 
ನಡೆದದ್ದು ನಡೆದಾಗಿದೆ ನಡೆಯಬೇಕಾದದ್ದನ್ನು ನೋಡು 
ಮತ್ಸರವ ಹಂಚುವ ಮೊದಲು ವಾಸ್ತವವನ್ನರಿತು 
ಭಾತೃತ್ವದ ಸವಿಯ ಸಾರುವಲ್ಲಿ ಮುಂದಾಗು 

ನಿನ್ನಂತೆ ಪರರಿಲ್ಲಿ ಅಜರಾಮರರಾರಿಲ್ಲ 
ಸ್ನೇಹಪರತೆಯಲ್ಲಿ ಎಲ್ಲರೊಳಗೊಂದಾಗಿ ಬದುಕಿ ಬಿಡು 
ನೀಡುವುದಾದರೆ ಪ್ರೀತಿ ವಿಶ್ವಾಸವ ನೀಡಿಬಿಡು ಬೇಡುವುದಾದರೆ ಕರುಣಾಂಬುನಿಧಿಯ ಬೇಡಿಬಿಡು 

ಇವನಾರವ ಎಂದೆನ್ನಬೇಡ ಇವ ನಮ್ಮವನೇ 
ದುಶ್ಚಟದ ದಾಸನಾಗಿಹೆಯಲ್ಲಾ ನಿನ್ನ ಪರಿಚಯವಾದರೂ ನಿನಗಿದೆಯೇ 
ಬಡವನಲ್ಲೂ ಹೃದಯವಿದೆ ಪ್ರೀತಿಯ ಉಣಬಡಿಸು 
ಮನುಷ್ಯರಂತಿರುವೆಲ್ಲರಲ್ಲೂ ಮನುಷ್ಯತ್ವವ ರೂಪಿಸು 

ದ್ವೇಷವೆಂಬ ಕಂತೆಯ ಸಲಹುತ ಮುಂಬರುವೆಯಾ 
ದಹಿಸುವಲ್ಲಿ ಆದಿಯಾಗು ಅನ್ಯರುನ್ನತಿಯ ಕಂಡ ಹೊಟ್ಟೆ ಉರಿಯ 
ಸೌಹಾರ್ದತೆಯಲಿ ಜೀವಿಸಿ ಇತಿಹಾಸದ ಪುಟವಾಗಲೆತ್ನಿಸು 
ಇಲ್ಲದ ದಳ್ಳೂರಿಯಲ್ಲಿ ಭವಿಷ್ಯ‌ ಹರಣವಾಗುವ ಮುನ್ನ

 - ಮೇಘನಾ ಶಿವಾನಂದ್
 ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿನಿ
 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ
 ಯುವ ಕವಯಿತ್ರಿ ಮತ್ತು ಬರಹಗಾರ್ತಿ.

ನೆನಪುಗಳು ಸಾಯುವುದಿಲ್ಲ (ಕವಿತೆ) - ಬಿ.ಹೆಚ್.ತಿಮ್ಮಣ್ಣ.

ಹೆತ್ತವ್ವ ಕಲಿಸಿದಳು ಅಮ್ಮ ಎಂದು 
ಅಪ್ಪನು ಹೆಗಲ ಮೇಲೆ ಹೊತ್ತುಕೊಂಡು 
ಅಕ್ಕನ ಕಂಕುಳಲ್ಲಿ ಕುಂತು ಬೆಳೆದು 
ತಂಗಿಯ ಜೊತೆಗೆ ಕುಂಟೆಬಿಲ್ಲೆ ಆಡಿ 
ತಮ್ಮನೊಂದಿಗೆ ಲಗೋರಿಯಲ್ಲಿ ಕೂಡಿ 
ಗೆಳೆಯರೊಟ್ಟಿಗೆ ಮರಕೋತಿಯಲ್ಲಿ ಸೇರಿ 
ಈಜು ಆಡಿ,ತೋಟಕ್ಕೆ ನುಗ್ಗಿ ಮಾಲೀಕನ ಕೈಗೆ ಸಿಕ್ಕಿ 
ಬುದ್ಧಿ ಮಾತ ತಿಳ್ಕೊಂಡು ಕಡೆಗೂ ಬಾಲ್ಯ ಕಳೆಯಿತು
ನೆನೆಸಿಕೊಂಡರೆ ಮೈನಿಗುರಿತು
ಉಪ್ಪಿಟ್ಟು ಸಾಲಿ ಮುಗಿಯಿತು

ಚಿಣ್ಣರಂಗಳಕ ಇಟ್ಟೀವಿ ಕಾಲ
ಅಆಇಈ ತಿದ್ದಿಸಿದರು ಪಾಟಿಮ್ಯಾಲ
ಹೆಗಲಿಗಿ ಹಾಕೊಂಡು ಹೊಂಟೀವಿ ಪಾಟಿಚೀಲ
ಬಾಯಾಗ ತಿನ್ನುತ್ತ ನಡೆದೀವಿ ಎಳ್ಳುಂಡಿಬೆಲ್ಲ

ಸಣ್ಸಾಲಿ ಮಾಸ್ತರ ಕಲಿಸ್ಯಾನ ಅಕ್ಷರ
ಪಾಟ್ಯಾಗ ಹಾಕ್ಯಾರ ಕೈಬರ
ಪ್ರಾಥಮಿಕ ಮುಗಿದರು ಮರಿವಲ್ದು ಅವ್ರೆಸ್ರ
ಅಚ್ಚೊತ್ತಿ ಕುಂತಾವ ಎದಿಯಾಗ ಪೂರ

ಪ್ರೌಢಕ್ಕ ಬಂದೇವ ಅರೆ ಜ್ಞಾನ ತಿಳಿದೇವ 
ಗೆಳೆಯರೆಲ್ಲರೂ ಕೂಡಿ ಆಡಿದೇವ 
ನಮಗೆಲ್ಲ ತಿಳಿತದ ಅಂತ್ಹೇಳಿ ಗುರುವ 
ತಲೆಯೊಳಗೆ ಜ್ಞಾನದ ಮೊಳಕೆ ಒಡದಾವ 
ಅಲ್ಲಿಂದ ಚಿಗುರುಗಳು ಬಲಿತಾವ
ಪ್ರೌಢದ ಮೂರೊರುಷ ನಗುನಗುತ ಕಳಿತೇವ ನೆನಪುಗಳು ಸಾಯದೆ ಇರುತಾವ 
ಗುರುಗಳ ಹೆಸರು ಮನದಾಗ ಅಚ್ಯೊತ್ಯಾವ

ಪದವಿ ಪೂರ್ವಕ್ಕೆ ಹೊರಡಾಗ ಒಡೆದೋಯ್ತು ನಂಗುಂಪು
ಆದರೂ ಮನಸ್ಸಿತ್ತು ಬಾಳ ತಂಪು 
ಕಲಿಯೋದೇ ಎರಡೊರುಷ
ಸಿಗುತ್ತಿತ್ತು ಬಹಳ ಹರುಷ
ನೆರೆಯೂರ ಗೆಳೆಯರು ಕೂಡ್ತೇವ ಒಂದೆಡೆಗೆ 
ಬಿಟ್ಟು ಹೋಗ್ವಾಗ ನೋವಾಯ್ತು ಮನಸ್ಸಿಗೆ

ಕವಲುಗಳ ದಾರಿ ಬರುತಾವ ಎದುರಿಗಿ
ಮಾಡಬೇಕು ಮೂರೊರುಷ ಡಿಗ್ರಿ 
ಕಲಿತೀವಿ ಅದರಲ್ಲಿ ಜೀವನದ ಪಾಠ 
ಕಾಡತೈತಿ ಮನದೊಳಗ ಗುರುವಿನ ನೋಟ 
ತಿಳಿದೀವಿ ಡಿಗ್ರಿಯು ಹಾಸ್ಯದ ಚದುರಂಗದಾಟ 
ಮೈ ಮರೆತು ಕಳೆದರೆ ಆಗುತೈತಿ ಬದುಕಿಗೆ ನಷ್ಟ

ಪ್ರೊಫೆಸರ್ ಇರ್ತಾರಂತ ತಂಪಾಡಿಗೆ ತಾವ 
ಅಂತ ತಿಳಿಹೇಳಿದ್ರು ಊರಾಗ ಕಲಿತವ್ರ 
ನಂಭಾಗ್ಯ ಚೆಂದಿತ್ತು
ಗುರು ನಂಟು ಗಟ್ಟಿತ್ತು

ಎಲ್ಲೆಡೆ ಇದ್ದವರು ಕೂಡಿದೆವು ಒಂದೆಡೆ 
ಅಪರಿಚಿತರಂತೆ ಬಂದವರು
ಸ್ಥಳ ನಾಮ ತಿಳಿಯದವರು
ನಿಧಾನಗತಿಯಲ್ಲಿ ಕೂಡಿತು ಎಲ್ಲರ ಹೃದಯ 
ನಮ್ಮವರೆಂದು ಮಾಡಿತು ಶುಭ ಸಮಯ

ಸವಿರುಚಿಯ ಮಾತುಗಳ ಆರಂಭ ಬಾಯಾಗ
ಹರಿಯುವುದು ರಕ್ತ ಎಲ್ಲರೊಳು ಮೈಯ್ಯಾಗ
ಸವಿಗಾಳಿ ಸುಳಿತಾದ ಸುಯ್ಯಂದು ಮನದಾಗ
ಹಗುರಾಯಿತು ಭಾವಗಳು ತುಂಬಿದ ಬನದಾಗ

ಕೂಡುತ್ತೇವ ಬಂಧುಗಳಂತೆ ಮಗ್ಗುಲಲ್ಲಿ ನಾವು 
ನಮ್ಮನ ಬೆರಿತಾಗ ಕೊಟ್ಟಂಗ ಕಾವು
ಲವಲವಿಕೆ ಎಲ್ಲರ ಮನದೊಳಗೆ ಠರಾವು
ಬೆಂಬಿಡದೆ ಕೂಡುವ ನೆನಪುಗಳಿಗೆ ಇಲ್ಲ ಸಾವು

ಡಿಗ್ರಿಯ ಕಲಿಕೆ ಜೀವನಕ್ಕೆ ಹೆಚ್ಚಿಸುವುದು ಬೇಡಿಕೆ
ಮೈಮರೆತು ಕಲಿತರೆ ಕಾಡುವುದು ಕಾಡಿಕೆ 
ಎಲ್ಲ ಬಿಟ್ಟು ಗೂಳಿಯಂಗೆ ತಿರುಗಿದರೆ ಆದಿತು ನಾಚಿಕೆ
ಪಡಿಬೇಕು ಮೂರೊರುಷದಾಗ ಅಮೂಲ್ಯ ಕಾಣಿಕೆ

ಗುರುವರ್ಯರ ಬಂಧ
ಮರೆಯಲಾಗದು ಎಂದ
ಬರುತೈತಿ ನೆನಪ ಬಿಡದ ಸಂದ
ನೆನೆದರೆ ಮನವು ಭಾರದ ಅಶ್ರುಗಂಧ

ಕಳೆದ ಅರೆಕ್ಷಣ ನೆನೆದರೆ ಬೀಳುವುದು ಕನಸು 
ಇದ್ದಾಗ ಖುಷಿಪಟ್ಟು ಹಗುರಗೊಳಿಸು ಮನಸ್ಸು
ಸಿಗುವುದಿಲ್ಲ ಮತ್ತೊಮ್ಮೆ ಕಳೆದರೆ ಆ ಚಾನ್ಸು 
ಮುಂದಿನ ಹಂತದಲ್ಲಿ ಸಿಗುವರೇನೋ ಇಂಥ ಫ್ರೆಂಡ್ಸು
ಬಿಟ್ಟು ಹೊರಡುವೆವು ಕೊನೆಗೊಮ್ಮೆ ತುಂಬಿದ ಹೌಸು

ಮರೆಯಲಾಗದು ಡಿಗ್ರಿಯ ಅನುಭವ 
ಬಾಳೆಗೊನೆಯಂತೆ ಕೂಡುತ್ತಾರ ಒಂದು ಗಿಡದಾಗ 
ಕೊನೆಗೊಮ್ಮೆ ಉದುರಬೇಕು ಹಣ್ಣೆಲೆನೇ
ಖಾಲಿ ಮಾಡಬೇಕು ಎಲ್ಲರೂ ಸುಮ್ಮನೇ
ಹರಸುವರು ಗುರುಗಳು ಭಾರದ ಮನದಿಂದ 
ತುಂಬಿ ಹರಿಯುವುದು ಅಶ್ರುಜಲ ಅಕ್ಷಿಯಿಂದ
ಕೂಡಬಹುದೇನೋ ಎಲ್ಲರೂ ಒಂದೊಮ್ಮೆ ದಿನ

ಬಾಳ ದಾರಿ ಸುಖದಿ ಸಾಗಲಿ
ನೆನಪುಗಳು ಸಾಯದಿರಲಿ
ಕನಸುಗಳು ಬೀಳುತ್ತಿರಲಿ
ಮನವು ಕೆಡದಿರಲಿ 
ಎಲ್ಲರೂ ಒಂದು ದಾರಿಗೆ ಸಾಗುತ್ತಿರಲಿ 
ಗುರಿಗೆ ಪ್ರೇರಣೆ ಗುರುಗಳೆಲ್ಲರೂ ಹಿಂದಿರಲಿ

ಶಿಶುವಿನಿಂದ ಮುಪ್ಪಿನೊರೆಗೆ ಕಲಿಸಿದ ಗುರು 
ಕಲಿತರೂ ಅಹಂನಿಂದ ಮೆರೆಯದಿರು
ಮೆರೆದು ಹಾಳಾಗದಿರು
ನೆನಪುಗಳಿಗೆ ಸಾವು ತರದಿರು
ಸಾಯುವುದಿಲ್ಲ ನೆನಪುಗಳು ಮರೆಯದಿರು.
  - ಬಿ.ಹೆಚ್.ತಿಮ್ಮಣ್ಣ.

ಬದುಕೊಂದು ಭಂಡಾರ (ಕವಿತೆ) - ಮಲ್ಲಿಕಾರ್ಜುನ ಎಸ್ ಆಲಮೇಲ.

ಬದುಕೊಂದು ಹಲವು ಹೊಂಗನಸುಗಳ ಭಂಡಾರ 
ಇಲ್ಲಿರುವದು ಆಸೆ ಆಕಾಂಕ್ಷಗಳ,ಮಹಾ ಸಾಗರ 
ಪ್ರೀತಿ,ಪ್ರೇಮ,ತ್ಯಾಗ,ಮಮತೆ,ವಾತ್ಸಲ್ಯಗಳ ಆಗರ 
ಅಗೋಚರವಾದ ಭರವಸೆಗಳೆ ಜೀವನಕ್ಕೆ ಆಧಾರ 

ಭಗವಂತನ ಸೃಷ್ಟಿಯು ಅದೆಷ್ಟೊಂದು ವಿಸ್ಮಯವು 
ಜನನದಿ ಶಿಶು,ಬೆಳೆದಂತೆ ಬಾಲ್ಯ ಯವ್ವನ ಮುದಿತನವು 
ತಂದೆ ತಾಯಿ,ಅಕ್ಕ ತಂಗಿ,ಅಣ್ಣ ತಮ್ಮ ಬಂಧು ಬಳಗವು 
ಸೃಷ್ಟಿಕರ್ತ ನಮಗಾಗಿ ನೀಡಿರುವ ಕೊಡುಗೆ ಅಪಾರವು 

ಮನುಜನಿಗೆ ಪ್ರಕೃತಿಯು ಅಮೋಘ ಸಂಪತ್ತು ನೀಡಿದೆ 
ನೆಲ ಜಲ ವಾಯು ಅಗ್ನಿ ಆಕಾಶ ಆಹಾರ ಕರುಣಿಸಿದೆ 
ಇಷ್ಟೆಲ್ಲ ಸಿರಿ ಸಮೃದ್ಧಿ ಇದ್ರು ದುರ್ಬುದ್ಧಿ ಹೋಗದಾಗಿದೆ 
ಮಾನವನ ಮರ್ಕಟ ಮನಸ್ಸು ದುರಾಸೆಗೆ ಬಿದ್ದಿದೆ 

ಜೀವನ ಒಂದು ಸುಂದರವಾದ ಗಾಳಿಯ ಪಟವು 
ಇದು ಜಗದೀಶನಾಡಿಸುವ ರಂಗು ರಂಗಿನ ನಾಟಕವು 
ಇಲ್ಲಿ ನಮ್ಮದು ಕೇವಲ ವ್ಯವಸ್ಥಿತವಾದ ಅಭಿನಯವು 
ಅರಿತು ಸಾಮರಸ್ಯದಿ ಬದುಕಿದರೆ ಬಾಳು ಅಪೂರ್ವವು. 

- ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.

ರೇಡಿಯೋ (ಕವಿತೆ) - ಶ್ರೀಮತಿ ಸುಲೋಚನಾ ಮಾಲಿಪಾಟೀಲ.

ನಮ್ಮೆಲ್ಲರ ಪರಮಮಿತ್ರ ನಾವಿದ್ದೆವು ನಿನ್ನ ಹತ್ತಿರ
ಶುಭೋದಯಕೆ ಮಂಗಲವಾದ್ಯ ತಂದ ಶುಭಕರ
ನಿನ್ನ ಅಗತ್ಯತೆಯಲ್ಲಿ ಸಂಭ್ರಮಿಸಿದ ಜನಸಾಗರ
ನಿನ್ನಿಂದ ವಿವಿಧತೆಯಲ್ಲಿ ಜನಮನ ರಮಿಸುವ ಕಾರ್ಯ

ನಿನಾಗಿದ್ದೆ ಎಲ್ಲಾ ಮನೆಯ ಶೋಭೆಯ ಸರದಾರ 
ಹಲವಾರು ರೂಪುಗಳಲ್ಲಿ ರೂಪಗೊಂಡ ನಿನ್ನ ಆಕಾರ
ನಿನ್ನ ಮೋದಲ ಅಡಿಗಲ್ಲು ಸ್ಥಾಪನೆ ನಮ್ಮ ಮೈಸೂರ 
ಆಕಾಶವಾಣಿಯ ಪದಕೆ ಪದಚಾಲನೆ ನೀಡಿದ ಠಾಗೋರ್

ಮುಸಂಜೆಯ ಶಾಸ್ತ್ರೀಯ ಸಂಗೀತ ಗಾನದ ಸುಮಧರ
ಬಿನಾಕಾ ಗೀತಮಾಲಾ ಕೇಳುತ್ತಿದ್ದೆವು ಪ್ರತಿಬುಧವಾರ
ಉದಯರಾಗ ಕವನ ವಾಚನ ಚಿತ್ರಗೀತೆಗಳು ಬಲು ಮಧುರ
ಮೆಲಕು ಹಾಕಲು ಬಿತ್ತರಿಸುತ್ತಿದ್ದೆ ಮೂಲ ಸಂಸ್ಕೃತಿಯ ಸಾರ

ಸಾಮಾಜಿಕ ಆರ್ಥಿಕ ಭೌಗೋಳಿಕ ತಾರತಮ್ಯದಲ್ಲು
ಪ್ರಕೃತಿ ವಿಕೋಪ ಯುದ್ಧ ತುರ್ತುಪರಿಸ್ಥಿತಿಗಳ ಸಮಯದಲ್ಲು
ಕ್ರೀಡೆ ಮನೋರಂಜನೆ ಸುದ್ದಿಯ ಪ್ರಾಮುಖ್ಯತೆಯಡಿಯಲ್ಲು
ಜಗತವಿಖ್ಯಾತವಾಗಿ ಮೆರೆದವನು ನೀನಲ್ಲವೇ ಮೊದಲು

ವಿವಿಧ ತರಂಗಗಳ ಮೂಲಕ ಬಾನುಲಿಯ ಕಾರ್ಯಕ್ರಮ
ಜಗತ್ತಿಗೆ ತಂತ್ರಜ್ಞಾನದ ಮೂಲಕ ಅರಿವಳಿಕೆಯ ನೀಡಿದ ಸಂಭ್ರಮ 
ದಿನ ಬೆಳಗಾದರೆ ಗ್ರಾಮೀಣರು ಕೇಳುವ ರೇಡಿಯೋ ಮಾಧ್ಯಮ
ಬಹುಜನಹಿತಾಯ ತತ್ವದಡಿಯ ನಡೆಯುವೇ ನೀ ಸುಗಮ

ಓಲ್ಡ್ ಇಜ್ ಗೋಲ್ಡ್ ಎನ್ನುವ ನಿನ್ನ ಪಥ ಚಲನ
ಪೇಬ್ರುವರಿ ಹದಿಮೂರು ವಿಶ್ವ ರೇಡಿಯೋ ಆಚರಣೆ ದಿನ
ಜಗತ್ತಿನೆಲ್ಲೆಡೆ ಹಲವಾರು ಭಾಷೆಗಳಲ್ಲಿ ಪ್ರಚಲಿತವಾದ ವಿದ್ಯಮಾನ
ಆಲ್ ಇಂಡಿಯಾ ರೇಡಿಯೋ ಸರ್ವವ್ಯಾಪಿ ಕೈಗೆಟಕೂವ ನವಿಕರಣ.

- ಶ್ರೀಮತಿ  ಸುಲೋಚನಾ ಮಾಲಿಪಾಟೀಲ, ಧಾರವಾಡ.


ಕುವೆಂಪು (ಕವಿತೆ) - ಕಾಡಪ್ಪಾ ಮಾಲಗಾಂವಿ, ಶಿರೋಳ.

ಕನ್ನಡದ ಕವಿ ಕುವೆಂಪು
ಬರೆದ ಕವಿತೆಗಳ ಇಂಪು
ಕೊಡುವದು ಮನಕ್ಕೆ ತಂಪು.

ಬರೆದರು ಕವಿತೆಗಳ ಸಾಗರ
ಕೇಳುಗರಿಗೆ ಅತಿ ಮಧುರ
ಮತ್ತೆ,ಮತ್ತೆ ಆಳಿಸುವ ಆತುರ.

ಸಾಹಿತ್ಯದ ಸುಂದರ ಮೂರುತಿ
ಕವಿತೆಗಳಲ್ಲಿ ಬಿಂಬಿಸಿದರು ಸಂಸ್ಕೃತಿ
ಬೆಳಗಿಸಿದರು ಜ್ಞಾನದ ಜ್ಯೋತಿ

ಪೋಣಿಸಿದರು ಅಕ್ಷರಗಳ ಜೋಡಣೆ
ಪಡೆದರು ಅನೇಕ ಬಿರುದಗಳ ಸನ್ಮಾನ
ಅವರೆ ಕವಿತೆ,ಬರಹಗಳ ಖಜಾನೆ.

ಪಸರಿಸಿದರು ಭಾರತೀಯ ಪರಂಪರೆ
ಅವರೆ ಸಾಹಿತ್ಯದ ಉಸಿರು
ಬೆಳಸಿದರು ಬರಹದ ಹಸಿರು.

- ಕಾಡಪ್ಪಾ ಮಾಲಗಾಂವಿ, ಶಿರೋಳ.


ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...