ಮಂಗಳವಾರ, ಆಗಸ್ಟ್ 31, 2021

ಫಲಿತಾಂಶ ಪ್ರಕಟ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ೫ ನೇ ಪಾಕ್ಷಿಕ ಅವಧಿಯ ಉತ್ತಮ ಬರಹಗಾರರ ಆಯ್ಕೆಯ ಫಲಿತಾಂಶ.

ಫಲಿತಾಂಶ ಪ್ರಕಟಣೆ.

ಸ್ಪರ್ಧೆಯ ವಿವರ :  ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬ ರಿಗೆ ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
ಶ್ರೀ ಗಂಗಜ್ಜಿ. ನಾಗರಾಜ್ , ಸಾಸ್ವಿಹಳ್ಳಿ. ಇವರು  ಬರೆದ 'ಕರುಣೆ ಇಲ್ಲದ ಕರೋನಾ' ಕವಿತೆ  ದಿನಾಂಕ : 15:08:2021 ರಿಂದ : 31:08:2021 ರ ನಡುವಿನ ೫ ನೇ ಪಾಕ್ಷಿಕ ವಧಿಯಲ್ಲಿ  ವಿಚಾರ ಮಂಟಪ  ಜಾಲ ಪತ್ರಿಕೆಯ ಜಾಲತಾಣ ದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

ಶ್ರೀ ಗಂಗಜ್ಜಿ. ನಾಗರಾಜ್, ಸಾಸ್ವಿಹಳ್ಳಿ ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ  ಶುಭಹಾರೈಕೆಗಳು. 💐💐💐💐💐


ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ.

ಮರೆಮಾಚಿದ ಮುದ್ದು ಮಖದ ಅಂದ. (ಕವಿತೆ) - ರೇವಣಸಿದ್ದಪ್ಪ ಎಚ್ ಎಲ್ ಚನ್ನಪಟ್ಟಣ.

ಮರೆಮಾಚಿದ ಮುದ್ದು ಮಖದ ಅಂದ
ಮರೆಮಾಚಬಹುದು ಮುಖವ
ನಿನ್ನ ಮುಗ್ಧ ಸೌಂದರ್ಯವ
ಅಧ್ಯಯನ ಮಾಡುತಲೆ ಜೀವನ ಕಳೆವ

ಮುದ್ದು ಮುಖದ ಮುದ್ದು ಗೊಂಬೆ
ಸದಾ ನಿನ್ನ ಸಕ್ಕರೆ ಕಲಸಿದ ಸಿಹಿ ನಿಂಬೆ
ನಿನ್ನ ನಾಚಿಕೆ ಮಾವಿನರೆಂಬೆ
ಸದಾ ನಿನ್ನ ಬಾಳಲಿ ಖುಷಿ  ತುಂಬಿರಲಿ
ಭಗವಂತನೇ ನಿನ್ನ ನಗು ಬಯಸಲಿ
ನಿನ್ನ ಆನಂದ ಹರುಷದ ಬಾಳ ಪಯಣದಲಿ
ನನ್ನ ನೆನಪಿನ ದೋಣಿ ತೇಲಲಿ
- ರೇವಣಸಿದ್ದಪ್ಪ ಎಚ್ ಎಲ್
ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಆತಿಥ್ಯ (ಕವಿತೆ) - ಭವ್ಯ ಟಿ ಎಸ್.

ಆತಿಥ್ಯ

ಆದರದಿ ಸತ್ಕರಿಸುವ ಸಂಸ್ಕೃತಿ
ಭಾರತೀಯರ ಮನೆಮನಗಳ ಸುಕೃತಿ
ಹಸಿವು ತೃಷೆಗಳನು ಅಳಿಸುತ
ಆತಿಥ್ಯದಿ ಸರ್ವರನು ಸಂತೈಸುತ

ಶುಭ ಸಮಾರಂಭಗಳ ಕಳೆ
ಆತಿಥ್ಯದಿ ಬಂದವರ ಮನಸೆಳೆ
ಬಂದವರೆಲ್ಲರೂ ಬಂಧುಗಳು
ಆನಂದದಿ ನಡೆಸುವ ಮಾತುಕತೆಗಳು

ಬಡವಶ್ರೀಮಂತ ಭೇದವೆಣಿಸದಿರು
ಆತಿಥ್ಯಕೆ ಎಲ್ಲರೂ ಸಮಾನರು
ಭೋಜನದೊಂದಿಗೆ ಭಾವನೆಗಳಿರಲಿ
ಬಡಿಸುವಾಗ ಪ್ರೀತಿ ತುಂಬಿರಲಿ

ಕಳಿಸಿಕೊಡು ಸವಿನೆನಪುಗಳೊಡನೆ
ಮರಳಿ ಬರಲು ತಿಳಿಸು ಅದರೊಡನೆ
ಹಿರಿಕಿರಿಯರೆಲ್ಲರಿಗೂ ಗೌರವ ತೋರು
ಆತಿಥ್ಯದಿ ವ್ಯಕ್ತಿತ್ವದ ಘನತೆಯನೇರು
- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ‌ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಜೋಗುಳ (ಕವಿತೆ) - ದಾನೇಶ್ವರಿ ಬಸವರಾಜ ಶಿಗ್ಗಾoವಿ.

ಜೋಗುಳ

ತನುವೆಂಬ ತೊಟ್ಟಿಲಲ್ಲಿ
ಮನವೆಂಬ ಮಗುವನ್ನು
ಮಲಗಿಸಿ, ಜೋಗುಳವ ಹಾಡಿ
ಸಂಭ್ರಮಿಸಿದೆ.

ಕಪಟವಿಲ್ಲದ ನಗುವಿಗೆ
ಮೋಸವಿಲ್ಲದ ಮನಕೆ
ನಗುತ ಜೋಗುಳವ ಹಾಡಿ
ಸಂಭ್ರಮಿಸಿದೆ

ಕೂಗುವ ಕೋಗಿಲೆಯ
ಕುಣಿಯುವ ನವಿಲು
ಮನಸ್ಸಿಗೆ ನಗುತ ಜೋಗುಳವ ಹಾಡಿ ಸಂಭ್ರಮಿಸಿದೆ
- ದಾನೇಶ್ವರಿ ಬಸವರಾಜ ಶಿಗ್ಗಾoವಿ
ಜಲ್ಲಾಪುರ ಗ್ರಾಮ
ಸವಣೂರು ತಾಲೂಕ
ಹಾವೇರಿ ಜಿಲ್ಲಾ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಸ್ಫೂರ್ತಿ ಎಸ್ ಕನಸಾವಿ.

ಗಜಲ್ 
ಪುಟ್ಟ ಪೊರನೀವನು ಶ್ರೀ ಕೃಷ್ಣ
ಬೆಣ್ಣೆ ಕಳ್ಳನಿವನು ಶ್ರೀಕೃಷ್ಣ..

ಕೊಳಲಲುದುವ ಗೋಪಾಲನಿವನು ಶ್ರೀ ಕೃಷ್ಣ
ಗೋಕುಲದ ನಂದದೀಪನಿವನು ಶ್ರೀ ಕೃಷ್ಣ

ದೇವಕಿನಂದನಿವನು ಶ್ರೀ ಕೃಷ್ಣ
ಯಶೋದಿಶಾನಾಗಿಹನು ಶ್ರೀ ಕೃಷ್ಣ

ರಾಧಾನ ಪ್ರಿಯಕರನೀವನು ಶ್ರೀ ಕೃಷ್ಣ
ರುಕ್ಮಿಣಿಯ ಪತಿಯಾದನಿವನು ಶ್ರೀ ಕೃಷ್ಣ

"ಶ್ರೀ ಹರಿ"ಎನುತ ಭಜಿಸುವೇನು ನಿನ್ನ ಶ್ರೀ ಕೃಷ್ಣ
ಸರ್ವರ ಸಂಕಷ್ಟವ ಪರಿಹರಿಸೋ ಶ್ರೀ ಕೃಷ್ಣ

ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು🙏🏻
- ಸ್ಫೂರ್ತಿ ಎಸ್ ಕನಸಾವಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶ್ರೀ ಕೃಷ್ಣ ಜನ್ಮಾಷ್ಟಮಿ (ಕವಿತೆ) - ಶ್ರೀಮತಿ ಭಾಗ್ಯ ಗಿರೀಶ್ ಹೊಸದುರ್ಗ.


ಶ್ರೀ ಕೃಷ್ಣ ಜನ್ಮಾಷ್ಟಮಿ

ವಸುದೇವ-ದೇವಕಿಯ ಸುತ ಸೆರೆಮನೆಯಲಿ?
ಜನಿಸಿದ ಕೃಷ್ಣ ಬಾಲ್ಯ ಲೀಲೆ ತೋರುತಲಿ!
ಬೆಳೆದ ಯಶೋದ ನಂದನ ವಾತ್ಸಲ್ಯದಲಿ
ತುಂಟಾಟಗಳಾಡುತ,ಬೃಂದಾವನದಲಿ..

ಬೆಣ್ಣೆಕದಿಯುವ ಮುದ್ದು ಕಂದನಿವ!
ರಾಧೆಯ ಪ್ರೀತಿಗೆ ಮರುಳಾದವ 
ಪ್ರೀತಿಯ ಅರ್ಥವ ಜಗಕೆ ಸಾರಿದವ!
ಬಲರಾಮನ ಪ್ರಿಯ ಸೋದರನಿವ.

ರಕ್ಕಸ ಕಂಸನ ವಧಿಸಿದ ದೇವನ
ಕೌರವರ ನಾಶಕ್ಕೆ ಕಾರಣವಾದವನ
ಧರ್ಮಸಂಸ್ಥಾಪನೆ ಮಾಡಿದವನ..
ಜನ್ಮಾಷ್ಟಮಿಯಂದು ಸ್ಮರಿಸುವ ಸುದಿನ.

ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿಯ
ಆಚರಿಸುವ ಕೇಳುತ್ತಾ ಕೃಷ್ಣನ ಕಥೆಯ
ಧನ್ಯ ಶ್ರೀಕೃಷ್ಣನ ಸ್ಮರಿಸುವ ಹೃದಯ..
ಮರೆಯಲಾದೀತೆ ಆ ನಿಷ್ಕಲ್ಮಶ ಪ್ರೀತಿಯ. 

ಗೋಮಾತೆಗಳನ್ನು ಗೌರವದಿ ಸಿಂಗರಿಸಿ
ಭಕ್ತಿಭಾವದಿ ಶ್ರೀಕೃಷ್ಣನ ಜೊತೆ ಪೂಜಿಸಿ
ಸ್ನೇಹಿತರೊಂದಿಗೆ ಬೆಣ್ಣೆ ಮಡಿಕೆಯ ಹೊಡೆದು 
ಪ್ರೀತಿಯಿಂದ ಕುಣಿದು ನಲಿಯುವರು ಆನಂದಿಸಿ.
✍️ ಶ್ರೀಮತಿ ಭಾಗ್ಯ ಗಿರೀಶ್
        ಹೊಸದುರ್ಗ
ಹೊಸದುರ್ಗ ತಾಲೂಕು
ಚಿತ್ರದುರ್ಗ ಜಿಲ್ಲೆ.


(ನಿಮ್ಮ ಬರಹಗಳ ‌ಪ್ರಕಟಣೆಗಾಗಿ ಸಂಪರ್ಕಿಸಿ ‌9448713659 ವಾಟ್ಸಪ್ ಮಾತ್ರ)

ಕರೋನಾ (ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

ಕೊರೋನಾ  

ಜಗವನೆಲ್ಲ ನಡುಗಿಸಿ ಮತ್ತೆ ಸ್ಥಬ್ಧವಾಗಿಸಿ
ಮನುಜ ಕುಲದ ನಾಶಕೆಂದು ಪಣವ ತೊಟ್ಟು ನಿಂತಿದೆ
ಹೊರಗೆ ತಾನು ಕಾಣದೆ ಎಳೆಯ ಹರೆಯ ಎನ್ನದೆ
ಹೊಕ್ಕು ದೇಹ ಉಸಿರು ತೆಗೆವ ಮಾರಿ ರೋಗ ಕೊರೋನಾ

ಗಾಳಿಯಲ್ಲಿ ಅಲ್ಲಿ ಇಲ್ಲಿ ನೆಲೆಸಿ ಹೊಕ್ಕು ಮನುಜರಲ್ಲಿ
ಅವರು ಇವರು ಎನ್ನದಂತೆ ಹರಡುತಿಹುದು ಎಲ್ಲರಲ್ಲಿ
ಮಕ್ಕಳನ್ನು ವೃದ್ಧರನ್ನು ಮೊದಲು ಬಿಡೆನು ಎನ್ನುತಿಹುದು
ಮದ್ದು ತರುವ ಮುಂಚೆ ನಾನು ಗೆದ್ದು ಬೀಗ ಬಲ್ಲೆನೆಂದು

ಭಯದಿ ದಿನವ ಕಳೆಯುತಿಹೆವು ಕೆಲಸವೆಲ್ಲ ನಿಲ್ಲಿಸಿ
ಕಣ್ಣ ಎದುರೆ ಕೊಲ್ಲುತಿಹುದು ಶೋಕದಲ್ಲಿ ಮುಳುಗಿಸಿ
ಅಯ್ಯೋ! ಎಂತ ಕ್ರೂರಿ ನೀನು ಕರುಣೆ ಇರದ ಕಲ್ಕಿಯೆ
ಮಟ್ಟ ಹಾಕೊ ದಿನವು ಬರದು ತೊರೆದು ಜಗವ ತೊಲಗುವೆ

ಅಂತರವನು ಕಾಯ್ದುಕೊಂಡು ಹರಡದಂತೆ ತಡೆಯುವ
ನಂತರದಿ ಅದನು ಕೊಂದು ಭೀತಿಯನ್ನು ತೊರೆಯುವ.

(ಮೊದಲ ಅಲೆಯ ಸಂದರ್ಭದಲ್ಲಿ  ರಚನೆ)
- ಶ್ರೀ ತುಳಸಿದಾಸ ಬಿ ಎಸ್‌
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.




(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

7:00 ಗಂಟೆಗೆ ಅಮ್ಮನ ಧಾರವಾಹಿ - ಕುನಾಲ್.ಡಿ.ಐನಕಾರ್, ಬೀದರ್.

7:00 ಗಂಟೆಗೆ ಅಮ್ಮನ ಧಾರವಾಹಿ

ಅಂತೂ 7:00 ಗಂಟೆ ಸಮಯವಾಯಿತು 
ನಮ್ಮಮ್ಮನ ಧಾರವಾಹಿ ಶುರುವಾಯಿತು
ತನ್ನೆಲ್ಲ ಕೆಲಸವನ್ನು ಬಿಟ್ಟು ಟೀವಿ ಹತ್ತಿರ ಬಂದು ನಮ್ಮಲಿದ್ದ ರಿಮೋಟನ್ನು ಕಸಿದುಕೊಂಡು 
ಧಾರವಾಹಿ ನೋಡುತ್ತ ಕುತಳು 

ಟಿವಿ ಮುಂದೆಯಿಂದ ಎದ್ದೇಳುವುದಿಲ್ಲ
ನಮಗೆ ಕ್ರಿಕೆಟ ನೋಡುವುದಕ್ಕೆ ಬಿಡುವುದಿಲ್ಲ
ನಾವು ಹೇಳುವ ಮಾತುಗಳು ಒಂದನ್ನು ಅವಳು ಕೇಳುವುದಿಲ್ಲ
ಧಾರವಾಯಿ ಮುಗಿಯೋತನಕ ಮನೆಯಲ್ಲಿ ಅಡುಗೆ ಮಾಡುವುದಿಲ್ಲ

ಧಾರವಾಹಿಯನ್ನು ನೋಡುತ್ತ ನೋಡುತ್ತ ನಮ್ಮಮ್ಮ ಅಳುವಳು
ಯಾಕಮ್ಮ ಅಳ್ತಾಇದ್ದೀಯ ಅಂದರೇ ಅವಳು ಹೀಗೆ ಹೇಳುವಳು
ಪಾಪ ಅವಳಿಗೆ ಎಷ್ಟು ಕಷ್ಟ ಕೊಡುತ್ತಿದ್ದಾರೆ ಎಂದಳು ಅವಳ ಮಾತು ಕೇಳಿ  ನಾವೆಲ್ಲರೂ ನಕ್ಕು ನಕ್ಕು ಬಿದ್ದೆವು. 

ಕುನಾಲ್.ಡಿ.ಐನಕಾರ್
10ನೇ ತರಗತಿ
ಬೀದರ್.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸತ್ಯ ಒಸರಿದ ಕಣ್ಣೀರು (ಕವಿತೆ) - ಶ್ರೀ ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ.

ಸತ್ಯ ಒಸರಿದ ಕಣ್ಣೀರು

ನೆಡೆದುದೆಲ್ಲವನು
ಒಮ್ಮೆಗೆ ನೆನೆದು ಮರೆತು ಬಿಡು
ಇಲ್ಲಾ ಪ್ರಿಯವೆಂದರೆ..! ಕಣ್ಮುಚ್ಚಿ ಒಪ್ಪಿ ಬಿಡು
ಸುರ ಅಸುರಾದಿಗಳ ಸುಧೆ ಪಾನದಂತೆ  
ಮತ್ತೆ ಮತ್ತೆ ಬಲವಂತದಲಿ ಗೊಟ್ಟವೇರಿಸಿ ಕೇಕೆಯಾಕುವ ಆಳುವವರಿದ್ದಾರೆ…!!
ಆಗೊಮ್ಮೆ ನಮಗುಣ್ಣಿಸಿ ಸ್ಫೋಟ ಗೊಂಡದ್ದು
ಕಾಳಕಪ್ಪು ಬಿಡು…!! 
ಸ್ವಾತಂತ್ರ್ಯದ ಕಿಚ್ಚು 
ಉಳ್ಳವನ ಮನೆಯ ಬಾಗಿಲು ತಟ್ಟಿ 
ಹರುಷ ಪಡುತ್ತಿದೆ ಬಿಡು

ಚರಿತೆ ಪುಟಕ್ಕೆ ಸೇರಿ ದಾಖಲಾಗಲಿ ಎಲ್ಲಾ...
ಇಲ್ಲ ಇಲ್ಲಿ ಸುಖವೆಂದೂ....ಬರಿಯಕಸ 
ಹರುಷದಗಲು ನಿಮಿಷದಂತೆ 
ದುಃಖ ಉಮ್ಮಳಿಸಿ ಇರುಳೆಲ್ಲಾ ಆವರಿಸಿದೆ 
ಇತಿಹಾಸದ ಕಡೆ ತಣ್ಣೀರು?

ಸತ್ಯ ಒಸರಿದರೆ ಬರಿಯ ಕಣ್ಣೀರು 
ಬುದ್ಧ ಉಸುರಿದ ಅಹಿಂಸೆಯ ತತ್ವ
ಬಸವ ಸಾರಿದ ಸಮಾನತೆಯ ತತ್ವ 
ಕಾಲ ಉರುಳಿಸಿವೆ ಎಲ್ಲವನ್ನೂ ಇಲ್ಲವಾಗಿಸಿ
ಅಮ್ಮನಿದ್ದು ಅನಾಥವಾಗಿದೆ ಪ್ರಜಾಪ್ರಭುತ್ವದ ಕೂಸು

ಭಾರತಾಂಬೆಯು ಇನ್ನೂ ಹಾಗೆ
ಜಿಡ್ಡಿನೊಳಗೂ ಹಿಡಿದ ಮಹಾಜಿಡ್ಡು‌
ಮತ್ತೆ ಮತ್ತೆ ಕಾಯಿಸಿದರೂ
ಮತ್ತೆ ಮತ್ತೆ ಗಟ್ಟಿಯಾಗಿಸುವಷ್ಟು ಜಿಡ್ಡು 
ಜಡತ್ವದ ಮೋಹಕ್ಕೆ ಬಿದ್ದಿಹ ಕುರುಡು
ಅಂಧತ್ವ ಅಂಟಿಕೊಂಡ ಫಲವಿಲ್ಲದ ಗೊಡ್ಡು

ಪಾರ್ಥೇನಿಯಮ್ ನಂತೆಯೇ
ಧರ್ಮ ಜಾತಿ ಪ್ರತಿಷ್ಠೆಯ ಅಫೀಮುಗಳು
ಪಾಪಿ ಬೆಳೆಯುವ ಸಂತಾನಕ್ಕೆ ಸಡಗರ
ಇತಿಹಾಸ ಸದಾ ನಗುತ್ತಾ ಕೋಮುವಿಗೆ ಜಯ
ಸದಾ ಕಾಡುವ ಪಾಡುಗಬ್ಬ 
ಈ ಗಬ್ಬು ಒಪ್ಪಿಕೊಂಡು ಸಾಗುವ ಜನ ಸಾಗರ
ಸಡಗರಕ್ಕೂ  ಧರ್ಮ, ಜಾತಿ ಹೆಪ್ಪುಗಟ್ಟಿದ ಒಪ್ಪು

ಇರಲು ಹಾಗೆ.... ಸಾಗಲು ಹೀಗೆ...
ಎಲ್ಲ ಒಪ್ಪಿಕೊಂಡ ಪೀಳಿಗೆ 
ಎಂದಿಗೂ ಇರುವುದು ಇರುವ ಹಾಗೆ 
ನಾಶವಾಗುವ ಹಾದಿಗೆ ಒಪ್ಪಿಗೆ ಅನಿವಾರ್ಯ
ಅಸಹಾಯಕತೆಗೆ ಇನ್ನೆಲ್ಲಿ ಹೊಸದಾರಿ.
 - ಲಕ್ಷ್ಮೀನಾರಾಯಣ ಕೆ. ವಾಣಿಗರಹಳ್ಳಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

"ಹುಟ್ಟುತ್ತಾ ಜೋಡಿಯಾಗಿಲ್ಲ - ಹೋಗುವಾಗ ಜೋಡಿಯಾಗುವದಿಲ್ಲ" (ಲೇಖನ) - ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾ ಳ).

 "ಹುಟ್ಟುತ್ತಾ ಜೋಡಿಯಾಗಿಲ್ಲ -ಹೋಗುವಾಗ ಜೋಡಿಯಾಗುವದಿಲ್ಲ ".

  ಬಹಿರಂಗದಲ್ಲಿ ಒಂದು ಮಗುವಿರುವುದು  ಅದು ಆಡುತ್ತಾ  ಆಡುತ್ತಾ ಮನೆಯನ್ನು ಬಿಟ್ಟು ಹೊರಗೆ ಹೋಗುವದು ಹೀಗೆ ಮಗು ಹಾದಿಯಲ್ಲಿ ಯಾವುದೇ ವಸ್ತುಗಳು ಬಿದ್ದಿದ್ದರೆ ಅವುಗಳನ್ನು ತೆಗೆದುಕೊಂಡು ಬರುವದು. ಅವು ನನ್ನವೇ ನನ್ನದೇ ಎಂದು ಹೇಳುವದು. ಅದನ್ನು ಯಾರಾದರೂ  ಕೇಳಿದರು ಕೊಡಲಾರದು ಆ ವಸ್ತುವಿನ ಮಾಲೀಕರೇ  ಬಂದು ಕೇಳಿದರು ಕೊಡಲಾರದು. ಹಾದಿಯಲ್ಲಿ ಸಿಕ್ಕ ವಸ್ತುಗಳೆಂದರೆ ತಂದೆ ತಾಯಿ, ಸತಿ, ಸುತರಾಗಿರುವರು   ಇವರು ಹುಟ್ಟುತ್ತಾ ಜೋಡಿಯಾಗಿಲ್ಲ  ಹೋಗುವಾಗ  ಜೋಡಿಯಾಗುವದಿಲ್ಲ ಇವರು ನಡುಮದ್ಯದಲ್ಲಿ  ನಮಗೆ ಸಿಕ್ಕವರು. ಈ ವಸ್ತುಗಳಾದರೂ ನಮ್ಮವಲ್ಲ  ಹೀಗೆ ನಮ್ಮವಲ್ಲದ ವಸ್ತುಗಳನ್ನು  ಹಾದಿ ಮದ್ಯದಲ್ಲಿ ದೊರೆತವರನ್ನು ನನ್ನವರೇ ಎಂದು ಬಲವಾಗಿ ಹಿಡಿದುಕೊಂಡಿದ್ದೇವೆ ಆ ಮಗುವಿನಂತೆ ಅಜ್ಞಾನದಿಂದ ಪರವಸ್ತುಗಳನ್ನು ನಮ್ಮದೆಂದರೆ  ನಮ್ಮದಾಗಬಲ್ಲುದೆ ಅದರ ಮಾಲೀಕ ಶಿವನಾಗಿರುವನು. ಅದಕ್ಕಾಗಿ ಅಜ್ಞಾನದಲ್ಲಿರುವ ಮನಗಳಿಗೆ ಅರುವಿನ ಅವಶ್ಯಕತೆ ಇದೆ. ಸತ್ಯ, ಧರ್ಮ ಶಕ್ತಿಗಳಿಸಿದ  ಆತ್ಮಗಳು ಸಂಪತ್ತು ಗಳಿಸಿದಂತೆ ಇರುತ್ತವೆ. ಈ ಸಂಪತ್ತು ಗಳಿಸಿದ ಮನಗಳಿಗೆ ಹೊರಗಿನವರ ಸಹಕಾರದ ಅವಶ್ಯಕತೆ ಇರುವುದಿಲ್ಲ ಕಾರಣ ಅವರಲ್ಲಿ ಸತ್ಯ, ಧರ್ಮದ ಸಂಪತ್ತು ಅವರನ್ನು ಸದಾ ಧರ್ಮ ಮಾರ್ಗದಲ್ಲಿ ನಡೆಸುತ್ತದೆ. ಇದು ಒಳಗೆ ಗುರುವಾಗಿ, ಶಿವನಾಗಿ ರಕ್ಷಣೆ ಮಾಡುತ್ತದೆ.ಸಂಸಾರವೆಂಬುದು  ಬಡತನದ ಊರು, ಆದ್ಯಾತ್ಮವೆಂಬುದು  ಸಿರಿತನದ ಊರುಗಳು ಅಧ್ಯಾತ್ಮ ದೊರೆಯಬೇಕಾದರೆ ಮನದಲ್ಲಿ ಇಷ್ಟ ದೇವರನ್ನು ಸ್ಥಾಪಿಸಿಕೊಂಡು ಗುರುವಿನ ಮಾರ್ಗದರ್ಶನದಲ್ಲಿ  ನಡೆದರೆ  ಧಾರ್ಮಿಕ  ಸಂಪತ್ತು ಗಳಿಸಲು ಸಾಧ್ಯ. ಶಿನೋಲುಮೆ ಬರಲಾರದೆ  ನಮ್ಮ ಮನದಲ್ಲಿ ಪರಿವರ್ತನೆಯಾಗಲಾರದು  ಆದರೆ ಶಿವಾನೊಲುಮೆಯನ್ನು ಪಡೆದುಕೊಳ್ಳುವದು ಹೇಗೆ? ಶಿವನ ಮೇಲಿಟ್ಟ ನಂಬಿಗೆಯೇ ಶಿವನೋಲುಮೆಗೆ ಕಾರಣವಾಗುವದು. ಶಿವನ ಮೇಲೆ ಪೂರ್ಣ ನಂಬಿಕೆ ಇದ್ದಾಗ ನಮ್ಮ ಮನಕ್ಕೆ ಶಿವನು ಬರುವನು ಮತ್ತು ಒಲುಮೆ ಪಡೆಯುವದು. ಆದ್ದರಿಂದ ಹಾದಿಯಲ್ಲಿ ಸಿಕ್ಕ  ನಮ್ಮವಲ್ಲದ ವಸ್ತುಗಳನ್ನು ಆರಾಧಿಸುವದಕ್ಕಿಂತ ಧರ್ಮದ ಹಾದಿ ಹಿಡಿದು ಶಿವನೋಲುಮೆ ಪಡೆದರೆ ನಮ್ಮ ಮನದಲ್ಲಿ ಶಿವನು ಬಂದು ನಿಲ್ಲುವನು.. ಅಷ್ಟೆ ಏಕೆ ಸಂಸಾರದಲ್ಲಿ ಪರಿಶ್ರಮವು ಮತ್ತು ಸುಖವು ಅಲ್ಪವಾಗಿದೆ ಅದು ಕೂಡ ಸುಖದ ಆಭಾಸಾವೆ ಹೊರತು ಸುಖವಲ್ಲ." The young person say life is full of joy but wise person say life is sorrows"ಜೀವನ ಭೋಗಿಸುವ ಸಲುವಾಗಿ ಇದೆ ಎಂದು ಹೇಳುವವರು ಒಂದು ಕಡೆಯಾದರೆ ಜಾಣರು ಜೀವನ ದುಃಖಗಳ ಮನೆ ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಇದು ಭೋಗಿಸುವ ಸಲುವಾಗಿಯೂ ಇಲ್ಲ ದುಃಖದ ಮನೆಯು ಅಲ್ಲ ಜೀವವು ಜೀವದಾತ ಆ ಶಿವನನ್ನು ಅರಿಯುವ ಸಲುವಾಗಿ ಇದೆ.ಜ್ಞಾನದ ಬೆಳಕು ಬಂದಾಗ ಅಜ್ಞಾನವೆಂಬ ಕತ್ತಲು ದೂರವಾಗುವ ಹಾಗೆ ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದು ಶಿವನೋಲುಮೆ ಪಡೆದು ಬೆಳಕಿನಲ್ಲಿ ಸಾಗಬೇಕಾಗಿದೆ. "ನಂಬು ನಂಬಲೇ ಮನವೇ ಹಂಬಲಿಸದಿರು ಬರಿದೆ, ನಂಬುಗೆಯೇ ಕಾರಣವು ಸಾಂಬಾನೊಲಿಸುವದಕ್ಕೆ "


-  ಮಂಜುನಾಥ ಹಿರೇಮಠ ದಂಡಸೋಲಾಪುರ (ಚಾಮನಾ ಳ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಹನಿ ಸಾಹಿತ್ಯ ಪತ್ರಿಕೆ


( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ : ೯೪೪೮೭೧೩೬೫೯ ವಾಟ್ಸಪ್‌ ಮಾತ್ರ) ಕವಿ ಕಾವ್ಯ ಕಲ್ಪನೆ ಹನಿ ವಾರದ ಆನ್ಲೈನ್ ಸಾಹಿತ್ಯ ಪತ್ರಿಕೆ ..ತುಮಕೂರು! ಐದು ರಾಜ್ಯ ಕನ್ನಡಿಗರ ಕೈ ಸೇರುವ ಆನ್ಲೈನ್ ಸಾಹಿತ್ಯ ಪತ್ರಿಕೆ.. ಕನ್ನಡ ಸಾಹಿತ್ಯ! ನಿಮ್ಮ ಬೆಂಬಲ ನಮ್ಮ ಧೈರ್ಯ.. ಯುವ ಬರಹಗಾರ ಪ್ರೋತ್ಸಾಹ ಮಾಡುವ ನಿಟ್ಟಿನಲ್ಲಿ ಈ ವೇದಿಕೆ.. ಈ ಪತ್ರಿಕೆಯು ಪ್ರತಿ ಮಂಗಳವಾರ ಪ್ರಕಟವಾಗುತ್ತದೆ. ನಿಮ್ಮ ಬರಹಗಳನ್ನು ಉತ್ತಮ ರೀತಿಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ .. ಉತ್ತಮ ಆರ್ಥ ಪೂರ್ಣವಾದ ಬರಹಗಳನ್ನು ಮಾತ್ರ ವಾರದ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು! ಹನಿ ಪತ್ರಿಕೆ ಕಾರ್ಯ ಮಂಡಳಿ : ಸಂಸ್ಥಾಪಕರು: ಅಂಜನ್ ಕುಮಾರ್ ಐಪಿಎಸ್.! ಸಂಪಾದಕರು : ದಯಾನಂದ್ ಪಾಟೀಲ್ ಮತ್ತು ಅಕ್ಷತಾ ಎಸ್ ಬೆಂಗಳೂರು/ ಕರಾವಳಿ . ಗೌರವ ಸಲಹೆಗಾರರು : ವರುಣ್ ರಾಜ್ ಜಿ ( ವಿಚಾರ ಮಂಟಪ ಸಾಹಿತ್ಯ ಪತ್ರಿಕೆ) ಪ್ರೇಮ ಈ ಕೋಲಾರ , ರಾಧಾ ಅಪರಂಜಿ ! ಪ್ರಕಟಣೆಗಾಗಿ ಸಂಪರ್ಕಿಸಿ :- ajankumar2002@gmail.com ( +91 73382 31254. +91 84969 08242 ) Office number :-+ 91 7483146697 Anjan Kumar ips kavi Kavya kalpane ಪುಸ್ತಕಗಳ ಆಹ್ವಾನ ( ವಿಮರ್ಶೆಗೆ) ಸಂಪರ್ಕಿಸಿ :- 7483146697....! https://www.instagram.com/p/CTO2krABboD/?utm_medium=share_sheet

ಸೋಮವಾರ, ಆಗಸ್ಟ್ 30, 2021

ಜಗದೋದ್ದಾರಕನಿಗೆ ಜೋಗುಳದ ಲಾಲಿ (ಕವಿತೆ) - ಮಾಜಾನ್ ಮಸ್ಕಿ.

ಜಗದೋದ್ದಾರಕನಿಗೆ ಜೋಗುಳದ ಲಾಲಿ 

ಜಗದೋದ್ದಾರಕ ಬಂದನಾ 
ಜನರುದ್ದಾರ ಮಾಡ್ಯಾನ 
ಎನ್ನಿರೋ ಜೋ ಜೋ ಜೋ 

ಮಾಧವ ಹುಟ್ಟ್ಯಾನ 
ಬಂಗಾರ ತೊಟ್ಟಿಲೊಳು ಮಲಗ್ಯಾನ 
ನಗು ನಗುತಾ ಜೋ ಜೋ ಜೋ

ಕಟಿಯುವ ಮಜ್ಜಿಗೆಯೊಳ ಬೆಣ್ಣೆಗೆ ಕೈ ಹಾಕ್ಯಾನ 
ತುಂಟ ಕೃಷ್ಣನು ಬಚ್ಚಿಟ್ಟ ಬೆಣ್ಣೆಯ ಕದ್ದನಾ 
ನಗು ನಗುತಾ ಜೋ ಜೋ ಜೋ 
 
ಹೊತ್ತ ನೀರ ಮಡಿಕೆಗೆ  ಕಲ್ಲು ಎಸೆದಾನ 
ಗೋಪಿಯರ ಬಟ್ಟೆ ಕದ್ದ ಗೋಪಾಲ ಮರೆಯಲ್ಲಿ ನಿಂತ
ನಗುನಗುತಾ ಜೋ ಜೋ ಜೋ 

ಪ್ರೇಮದಿ ಛೇಡಿಸ್ಯಾನ ರಾಧೆಗೆ 
ನಸುಗೋಪ ತರಿಸ್ಯಾನ ಮುರಳಿ 
ಮೋಹನ ನುಡಿಸ್ಯಾನ ನಗು ನಗುತಾ ಜೋ ಜೋ ಜೋ 

ಮಣ್ಣು ತಿಂದ ಬಾಯಿ ತೆರೆದಾನ 
ಯಶೋದಮ್ಮಗೆ ಬ್ರಹ್ಮಾಂಡ ತೋರಿಸ್ಯಾನ 
ಮುರುಳೀಧರ ನಗು ನಗುತಾ 
ಜೋ ಜೋ ಜೋ 

ಆಟ ಆಡುತಲಿ ಕಾಳಿಂಗ ಸರ್ಪ 
ಮಣಿಸ್ಯಾನ 
ಶ್ಯಾಮ ಸುಂದರ ನಗು ನಗುತಾ ಜೋ ಜೋ ಜೋ 

ಕೊಲ್ಲಲು ಬಂದ ಕಂಸನ ಕೊಂದ್ಯಾನ 
ಮರಣವ ಗೆದ್ದ ಗಿರಿಧರ 
ನಗು ನಗುತಾ ಜೋ ಜೋ ಜೋ 

ಮನೆ ಮನೆಯಾಗ ಹುಟ್ಟ್ಯಾನ 
ನಗು ನಗುತಾ ಓಡ್ಯಾಡಾನಾ ನಮ್ಮ ತುಂಟಾ ಕೃಷ್ಣನಂಗೆ ಎನ್ನಿರೋ ಜೋ ಜೋ ಜೋ 
- ಮಾಜಾನ್ ಮಸ್ಕಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ದೇವ ಮಾನವ ( ಕವನ) - ಹಂಸರಾಗ ಶೆಟ್ಟಿ ಪುತ್ತೂರು.

ದೇವ ಮಾನವ....

ಕಂಸನ ಆಡಳಿತದ ಪ್ರಭಾವ
ದೇವಕಿ ದಂಪತಿಗೆ ಶಿಕ್ಷೆಯ ವಿಪ್ಲವ
ಸತತ ಹಿಂಸೆಯ ಕಂಸ ದುರುಳ
ಸೆರೆಮನೆ ಕೃಷ್ಣನ ಜನ್ಮಸ್ಥಳ

ದುಷ್ಟ ಶಿಕ್ಷೆಯ ಅವತಾರಿ ಕಂದ
ಯಶೋಧೆ ಮಡಿಲಲಿ ಬೆಳೆದ ಚೆಂದ
ಬೆಣ್ಣೆ ಕಳ್ಳ ಮುದ್ದು ಕೃಷ್ಣನ ಅಂದ
ರಾಧಾಕೃಷ್ಣ ಪ್ರೇಮದ ಅನುಬಂಧ...

ಕೊಳಲ ನಾದದ ಗಾನ
ಪ್ರೇಮ ಭಾವದ ಮನ
ರಂಗಿನಾಟದ ರಾಸಲೀಲೆ
ರಾಧೆ ಒಲವಿನ ಅಲೆ...

ಹಲವು ಯುಗಗಳಲಿ ಜನನ
ಧರ್ಮರಕ್ಷಣೆಯ ಜೀವನ
ನವಿಲ ಗರಿಯ ಮಾಧವ
ಗೀತೆ ಸಾರಿದ ದೇವಮಾನವ

ಪಾರ್ಥ ಸಾರಥಿ  ವಾಸುದೇವ
ಅಕ್ಷಯ ಸೀರೆಯನಿತ್ತ  ದೇವ
ಮಹಾಭಾರತ ಯುದ್ಧದ ನಿರ್ಮಾಪಕ
ಧರ್ಮರಕ್ಷಣೆಯೇ ಕೃಷ್ಣನ ಕಾಯಕ
- ಹಂಸರಾಗ ಶೆಟ್ಟಿ ಪುತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಭಾನುವಾರ, ಆಗಸ್ಟ್ 29, 2021

ನಾಡ ಹಬ್ಬದ ನಿಮಿತ್ತ ಲೇಖನ ಸ್ಪರ್ಧೆ (ಪ್ರಕಟಣೆ) - ಶೃಂಗಾರ ಕಾವ್ಯ ಪ್ರಕಾಶನ.

ನಾಡ ಹಬ್ಬದ ನಿಮಿತ್ತ ಲೇಖನ ಸ್ಪರ್ಧೆ
       
ರಾಣಿಬನ್ನೂರು: ಶೃಂಗಾರ ಕಾವ್ಯ ಪ್ರಕಾಶನ
ಸಂಸ್ಥೆ ವತಿಯಿಂದ ಪತ್ರ ಲೇಖನ ಸ್ಪರ್ಧೆಯನ್ನು
ಹಮ್ಮಿಕೊಳ್ಳಲಾಗಿದ್ದು, ಕೋವಿಡ್ -19 
ಇರುವುದರಿಂದ ನಾಡ ಹಬ್ಬವನ್ನು ಹೇಗೆ 
ಆಚರಣೆ ಮಾಡುತ್ತಾರೆ ಎಂಬುದರ ಬಗ್ಗೆ ಕುರಿತು
50 ಪೈಸೆ ಅಂಚೆ ಕಾರ್ಡ್ ನಲ್ಲಿ ಅಂದವಾಗಿ
ಲೇಖನವನ್ನು ಬರೆದು ನಿಮ್ಮ ಸಂಪೂರ್ಣವಾಗಿ 
ವಿಳಾಸ ಹಾಗೂ ಮೊಬೈಲ್ ನಂಬರ ಹೊಂದಿದೆ 
ಬರೆದು ಕಳಿಸಿ ಕೊಡಬಹುದು. 
ಈ ಸ್ಪರ್ಧೆಯಲ್ಲಿ 10 ನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬೇಕು. 
ಆಯ್ಕೆಯಾದ 3 ಜನ ಪ್ರತಿಭೆಗಳಿಗೆ ವಿಶೇಷವಾಗಿ
ನಿಮಗೆ ಓದಲು ಅನುಕೂಲ ಆಗುವಂತೆ 
ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಗುತ್ತದೆ.
ಪ್ರತ್ಯೇಕವಾಗಿ 50 ರೂ ಪೀ ಇರುತ್ತದೆ.
ಆಸಕ್ತರು ಲೇಖನವನ್ನು ಸಪ್ಟೆಂಬರ್ 25 ರೊಳಗೆ
'ಬಸವರಾಜ ಎಸ್. ಬಾಗೇವಾಡಿಮಠ. 
ಶೃಂಗಾರ ಕಾವ್ಯ ಪ್ರಕಾಶನ
ವಿಳಾಸ: ರಂಗನಾಥ ನಗರ: ರಾಣಿಬೆನ್ನೂರು: 
581115. ಜಿಲ್ಲಾ: ಹಾವೇರಿ. ಈ ವಿಳಾಸಕ್ಕೆ 
ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 
ವಾಟ್ಸಪ್: 9611381039 ಸಂಪರ್ಕಿಸಿಬಹುದು.


(ನಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಸಾಮಾಜಿಕ ಜೀವನದ ಕೈಗನ್ನಡಿ "ವಸಂತಗಾನ" (ಪುಸ್ತಕ ವಿಮರ್ಶೆ) - ಅಂಜಿನಗೌಡ ಎನ್. (ಅಂಜನ್).

ಸಾಮಾಜಿಕ ಜೀವನದ ಕೈಗನ್ನಡಿ "ವಸಂತಗಾನ"

ಕೃತಿ : ವಸಂತಗಾನ ( ಕವನ ಸಂಕಲನ)
ಕವಯಿತ್ರಿ : ಲತಾಮಣಿ ಎಂ. ಕೆ. ತುರುವೇಕೆರೆ.
ಪ್ರಕಟಣೆ : ಮಾಣಿಕ್ಯ ಪ್ರಕಾಶನ, ಹಾಸನ.
ವರ್ಷ : ೨೦೨೦.
ಪುಟಗಳು : ೧೦೮.
ಮುಖಬೆಲೆ : ೧೨೦/-
ಕೃತಿ ವಿಮರ್ಶೆ : ಶ್ರೀ ಅಂಜಿನಗೌಡ ಎನ್. ಕಾಡನೂರು ಪಾಳ್ಯ, ದೊಡ್ಡ ಬಳ್ಳಾಪುರ.

*****

ಶ್ರೀಮತಿ ಲತಾಮಣಿ ಎಂ ಕೆ ಅವರು ಐತಿಹಾಸಿಕ ಮಹತ್ವವುಳ್ಳ ತುರುವೇಕೆರೆಯಲ್ಲಿ ಹುಟ್ಟಿ ಬೆಳೆದ ಇವರು ಕಲಾ ಪದವೀಧರರು ವೃತ್ತಿಯಲ್ಲಿ ಗುರುಮಾತೆ, ಪ್ರವೃತ್ತಿಯಲ್ಲಿ ಕವಯಿತ್ರಿಯಾಗಿ,ಮತ್ತು ಕನ್ನಡವನ್ನು ಬೆಳೆಸುವ, ಮತ್ತು ಕಟ್ಟುವ ಕಾರ್ಯಕ್ರಮಕ್ಕೆ ಕ್ರಿಯಾಶೀಲರು. ಇವರು ಗೃಹಿಣಿಯಾಗಿದ್ದು. ಮಾದಿಹಳ್ಳಿ ಬದರಿಕಾಶ್ರಮ ವಿದ್ಯಾ ಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿಯಾಗಿ, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತುರುವೇಕೆರೆ ತಾಲ್ಲೂಕು ಘಟಕದ ಅಧ್ಯಕ್ಷರಾಗಿ, ಕಾರ್ಯ ನಿರ್ವಹಿಸುತ್ತಿದ್ದಾರೆ.
ಲೇಖಕಿಯಾದ ಲತಾಮಣಿಯವರು ಸಾಹಿತ್ಯಾಸಕ್ತರು, ಮತ್ತು ಮಹತ್ವದ ಕೃತಿಗಳ ಅಧ್ಯಯನ ಮಾಡುವುದರ ಜೊತೆಯಲ್ಲಿ, ಕವನ, ಕಥೆ ಲೇಖನ, ನಾಟಕ,ಇತ್ಯಾದಿ ಇನ್ನಿತರ ಪ್ರಕಾರಗಳಲ್ಲಿ ಹಲವಾರು ಸಾಹಿತ್ಯದ ವೇದಿಕೆಗಳಲ್ಲಿ ತನ್ನಲ್ಲಿರುವ ತನ್ನದೇ ಆದ ಅಗಾಧ ಸಾಹಿತ್ಯದ ಅಭಿರುಚಿಯನ್ನು ಹೊರತರುವಲ್ಲಿ ಯಶಸ್ವಿಯಾಗಿ, ಇದೀಗ ಇವರ ಮತ್ತೊಂದು ವಿಮರ್ಶಾ ಸಂಕಲನವಾದ ಕಾವ್ಯಕ್ಕೊಂದು ಕನ್ನಡಿ ಎಂಬ ವಿಮರ್ಶಾ ಸಂಕಲನ ಹೊರತರಲಿದ್ದು, ಈ ಸಂಕಲನವು ಎಲ್ಲ ಕನ್ನಡ ಕವಿ ಮನಸ್ಸುಗಳ ಮನೆ ಮನ ತನವನ್ನು ಮುಟ್ಟಲಿ ಎಂಬ ಆಶಯದೊಂದಿಗೆ, ಇವರು ಬರೆದಿರುವ ಸಂಕಲನಗಳಲ್ಲಿ ಕೆಲವೊಂದನ್ನು ವಿಮರ್ಶಿಸಲು ಇಚ್ಛಿಸುತ್ತೇನೆ.

ಜೀವನ....
ಪ್ರಸ್ತುತ ಈ ಕವನ ಸಂಕಲನದಲ್ಲಿ ಜೀವನದ ಪ್ರತಿಯೊಂದು ಘಳಿಗೆಯಲ್ಲೂ, ತನ್ನದೇ ಆದ ಒಂದು ವಿಶಿಷ್ಟವಾದ ಜೀವನ ರೂಪಿಸಿಕೊಳ್ಳುವುದು. ಜೀವನದ ವಿವಿಧ ಮುಖಗಳಲ್ಲಿ ಒಂದು ಮುಖ ಸುಖ ಸಂತೋಷ, ಹಣ, ನೆಮ್ಮದಿ, ಮತ್ತು ಇನ್ನೊಂದು ಮುಖ ನಮಗಾಗಿ ಅಂತ ಒಮ್ಮೆ, ನಮ್ಮವರಿಗೆ ಅಂತ ಒಮ್ಮೆ, ಈ ತರಹದ ಪ್ರಯತ್ನಗಳು ಜೀವನದಲ್ಲಿ ಬರುವುದು ಸಹಜ. ಆದ್ರೆ ಕೇಳಿದಾಗಲೆಲ್ಲ ಕೇಳಿದ್ದು, ಕೇಳಿದಷ್ಟು, ಸಿಕ್ಕಿ ಬಿಟ್ಟರೆ ಇವೆಲ್ಲ ಒಂದೆರೆಡು ದಿನ ಖುಷಿ ಕೊಟ್ಟು ನಂತರ ಜೀವನದಲ್ಲಿ ಸಂಚಲನ ಮೂಡಿಸಿರುವ ಸಂಗತಿಗಳು ಇಂದಿಗೂ ಉಂಟು. ಜೀವನ ಅರಳದೆ ಇದ್ದದ್ದರಲ್ಲೆ ತೃಪ್ತಿ ಕೊಳ್ಳುವುದು ಅವಶ್ಯಕ, ಬದುಕೆಂದರೆ ಸದಾ ಹಾಸಿಗೆ ಇದ್ದಷ್ಟೇ ಕಾಲನ್ನು ಚಾಚೋಗದೆ, ಕಾಲಿದ್ದಷ್ಟು ಹಾಸಿಗೆಯನ್ನು ಜಾಸ್ತಿ ಮಾಡೋ ಕೆಲಸ ಆಗಬೇಕು, ಇದನ್ನ ಮಾಡೋವಾಗ ಇತರರ ಜೀವನಕ್ಕೆ ಧಕ್ಕೆಯಾಗದೆ ನ್ಯಾಯದ ದಾರಿ ದೀಪದಂತೆ ಇದ್ದರೆ ಸಾಕು. ಜೀವನದಲ್ಲಿ ಕಲ್ಲಿಗೆ ಆಗಾಗ ಉಳಿಯ ಪೆಟ್ಟನ್ನು ತಿಂದಾಗಲೇ ಅದು ಸುಂದರ ಶಿಲೆಯಾಗಿ ಮೂಡೋದು, ಹಾಗೆಯೇ ಕಷ್ಟಗಳು ಬೇಡ ಅನ್ನೋದಕ್ಕಿಂತ ಕಷ್ಟಗಳನ್ನು ಎದುರಿಸುವ ಶಕ್ತಿ ಇರಬೇಕಷ್ಟೆ. ಪ್ರತಿ ದಿನ, ಪ್ರತಿ ಕ್ಷಣ, ನಮ್ಮ ಜೊತೆಯಿರುವ ಮನಸ್ಸು ಗೆಲ್ಲುವ ಜೀವನ ಪಂಚರಂಗಿ ನವರಂಗಿ ಸತರಂಗಿ ನಾನಾತರದ ಆಟಗಳು ಹೌದು. ಇದರ ನಡುವೆಯೇ ಬೇರೆಯವರ ಭಾವನೆಗಳಿಗೂ ನಿಮ್ಮ ಭಾವನೆಗಳ ಸೇರಿಸಿ ಜೀವನವೆಂಬ ಆಟದಲ್ಲಿ ಬಣ್ಣದೋಕುಳಿ ಆಟ ಆಡಬಹುದೆಂಬುದು ಈ ಕವನದ ನನ್ನ ಆಶಯವಾಗಿದೆ.

ಶಿಕ್ಷಕ.....
ಪ್ರಸ್ತುತ ಕವನ ಸಂಕಲನದಲ್ಲಿ ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಅನ್ನೋದು ವ್ಯಾಪಾರೀಕರಣ 
ವಾಗುತ್ತಿದೆ. ಬಡವರು ಮತ್ತು ಮಧ್ಯಮ ವರ್ಗದವರಿಗೆ ಗಗನ ಕುಸುಮವಾಗಿರೋ ದಿನಗಳು ದೂರವೇನಿಲ್ಲ ಹಣವಿದ್ದವರಿಗೆ ಮಾತ್ರ ವಿದ್ಯೆ ಎನ್ನುವಂತ ಪರಿಸ್ಥಿತಿಯೂ ಈಗಾಗಲೇ ಎದುರಾಗಿದೆ. ಶಿಕ್ಷಣ ಲೋಕದಲ್ಲಿ ಆಗುತ್ತಿರುವ ಅನಾರೋಗ್ಯಕರ ಬೆಳವಣಿಗೆಗೆ ಮದ್ದನ್ನು ಹುಡುಕೋ ಕೆಲಸ ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯ. ಏನೇ ಆಗಲಿ ಗುರಿ ಮುಂದಕ್ಕೆ ಇತ್ತು, ಹಿಂದಕ್ಕೆ ಗುರು ಇದ್ದ,ಸಾಗುದುದು ಧೀರರ ದಂಡು ಇದು. ಅನಾದಿ ಕಾಲದಿಂದಲೂ ಅಂದರೆ ಕುವೆಂಪು ಮತ್ತು ವೆಂಕಣ್ಣಯ್ಯ ಇವರಿಬ್ಬರ ಗುರು ಮತ್ತು ಶಿಷ್ಯ ಪರಂಪರೆಯ ಕೃಷಿಯಿಂದಲೂ ಒಲಿದು ಬಂದ ಒಂದು ಜವಾಬ್ದಾರಿ ಆಗಿದೆ. ಹೀಗೆ ಪ್ರತಿಯೊಬ್ಬ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಎಂಬ ಮಾತು ವಾಸ್ತವಿಕವಾಗಿದ್ದರೂ ಸಾಧಿಸುವ ಒಬ್ಬ ಸಾಧಕನ ಹಿಂದೆ ಸಾರ್ಥಕ ಗುರುವಿದ್ದಾನೆ ಎಂಬುದು ಸಹ ಅಷ್ಟೇ ಸತ್ಯ ಇದು ಈಗಿನ ವಾಸ್ತವಿಕತೆ. ಉದಾಹರಣೆಗೆ ಒಬ್ಬ ಶಿಕ್ಷಕ ತಿಳಿದೇ ತಪ್ಪನ್ನು ಮಾಡಿದರೆ ಅದು ಇಡೀ ಪರಂಪರೆಗೆ ಅವಮಾನ ಅಥವಾ ನಾಶವಾಗುತ್ತದೆ ಎಂದು ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಸ್ಪಷ್ಟ ವಿಶ್ಲೇಷಣೆ ಉಲ್ಲೇಖಿತವಾಗಿದೆ.
ಸಹಜವಾಗಿ ಒಬ್ಬ ಶಿಕ್ಷಕನಿಗೆ ಇರಬೇಕಾದ ಐದು ಗುಣಗಳು
-ಆತ ಹೃದಯವಂತ ಜ್ಞಾನದಾಹಿಯಾಗಿರಬೇಕು.
-ಊರಿಗೆ ನ್ಯಾಯಾಧೀಶ ಶಿಕ್ಷಕನಾಗಿರಬೇಕು.
-ಪಠ್ಯ ಕೇವಲ ಕೊಡಿಸಲು ಅಲ್ಲ ಸಮಾಜದಲ್ಲಿ ಭರವಸೆಯ ದನಿಯಾಗುವ ಶಬ್ದ ಶಿಕ್ಷಕನಾಗಿರಬೇಕು.
-ಶಾಲೆಯ ಹೊರಗಿನ ಜನರೊಂದಿಗೆ ವಿದ್ಯಾರ್ಥಿಗಳನ್ನು ಚಟುವಟಿಕೆಗಳಲ್ಲಿ ಬೆರೆಸುವ ಸ್ಫೂರ್ತಿ ಹೊಂದಿರಬೇಕು.
-ಸಾಮಾಜಿಕ ಕೆಡುಕುಗಳ ವಿರುದ್ಧ ಯುವಜನ ಮತ್ತು ವಿದ್ಯಾರ್ಥಿಗಳ ಅಣಿ ನೆರೆಸಬೇಕು.
ಈ ಐದು ಗುಣಗಳನ್ನು ಪಾಲಿಸುವುದರ ಜೊತೆಗೆ ತನ್ನಲ್ಲಿ ಒಗ್ಗೂಡಿಸಿಕೊಂಡು ತನ್ನ ಕಾರ್ಯ ನಿರ್ವಹಿಸಬೇಕು. ಆಗ ನಿಜವಾದ ಶಿಕ್ಷಕ
ಎನಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಎಂಬುದು ಈ ಕವನದ ನನ್ನ ಆಶಯ.

ಹೆಣ್ಣು...
ಪ್ರಸ್ತುತ ಕವನ ಸಂಕಲನದಲ್ಲಿ"ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಾತೇ ದೇವತಾ" ಅಂದರೆ ಹೆಣ್ಣನ್ನು ಎಲ್ಲಿ ನಾವು ಆರಾಧಿಸುತ್ತೇವೆಯೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆಂಬುದು ಒಂದು ನಂಬಿಕೆ. ಪ್ರೀತಿ ವಾತ್ಸಲ್ಯ ಮಮತೆ ದಯೆ ಕರುಣೆ ಸೌಹಾರ್ದತೆ ಕನಿಕರ ಎಲ್ಲದಕ್ಕೂ ಹೆಣ್ಣೇ ಶ್ರೇಷ್ಠ. ಜಗತ್ತಿನ ಸಕಲ ಜೀವರಾಶಿಗಳಿಗೂ ಜನ್ಮ ಕೊಡೋಳು ಒಂದು ಹೆಣ್ಣು. ಅತಿರಥಮಹಾರಥರಿಗೆಲ್ಲ ಜನ್ಮ ಕೊಟ್ಟವಳು ಸಹ ಒಬ್ಬ ಹೆಣ್ಣೇ. ಅಂತಹ ಹೆಣ್ಣಿನ ಮಹತ್ವ ಈ ದೇಶದ ಎಷ್ಟೋ ಜನಕ್ಕೆ ತಿಳಿದೇ ಇಲ್ಲ, ಒಬ್ಬ ವ್ಯಕ್ತಿ ಅವನ ಜೀವನದಲ್ಲಿ ಅದೃಷ್ಟ ಮಾಡಿದ್ದರೆ ಅವನು ಬದುಕಿರುವಾಗಲೇ ತನ್ನ ಮೂರು ಜನ ತಾಯಂದಿರನ್ನು ಅವನು ಕಂಡಿರುತ್ತಾನೆ.
ಅವನು ಕಂಡಂತ ಮೂರು ಜನ ತಾಯಂದಿರೆಂದರೆ
-ಹೆತ್ತು ಹೊತ್ತು ಸಾಕಿ ಸಲಹಿ ಭೂಮಿ ಮೇಲೆ ಕಾಲಿಡುವಂತೆ ಮಾಡಿದವಳು ಮೊದಲ ತಾಯಿ.
-ಕಷ್ಟ ಸುಖ ನೋವು ನಲಿವು ತನ್ನೆಲ್ಲಾ ಕಷ್ಟಗಳ ಸಮನಾಗಿ ಹಂಚಿ ಅರ್ಧಾಂಗಿಯಾಗಿ ಬರೋ ಹೆಂಡತಿ ಎರಡನೇ ತಾಯಿ.
-ಜನುಮ ಕೊಟ್ಟ ಗಂಡು ಮಕ್ಕಳಿಂದ ವಂಚಿತರಾಗಿ ನಿರಾಶ್ರಿತರಾಗಿ ಬೀದಿಗೆ ಬಿದ್ದಾಗ ತನ್ನ ಮಗಳಂತೆ ಮಗಳ ಸ್ಥಾನದಲ್ಲಿ ಆಶ್ರಯ ಒದಗಿಸುವವಳು ಮೂರನೇ ತಾಯಿ.
ಈ ಮೂರು ಜನ ತಾಯಂದಿರು ಸಹ ಮೂರು ದೃಷ್ಟಿಯಿಂದ ಕಾಣಬಹುದು
ಕತೃಥ್ವ, ನೇತೃತ್ವ, ಮತ್ತು ತಾಯತ್ವ, ಈ ಮೂರು ಅಂಶಗಳು ಹೆಣ್ಣಿನ ಗುಣದಲ್ಲಿದ್ದಾಗ ಸಮಾಜದಲ್ಲಿ ಶಾಂತಿ ನೆಮ್ಮದಿಯ ಸುಂದರವಾದ ಒಂದು ನೆಲೆಯಾಗುತ್ತದೆ. ಹಾಗೇ ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಒಬ್ಬ ಹೆಣ್ಣು ಇರುತ್ತಾಳೆ. ಎಂಬ ಅಂಶ ನೂರಕ್ಕೆ ನೂರರಷ್ಟು ಸತ್ಯ ಎಂಬ ಆಶಯ ನನ್ನದು.

ನಗರೀರಣ....
ಪ್ರಸ್ತುತ ಕವನ ಸಂಕಲನದಲ್ಲಿ ಹಳ್ಳಿ ಮತ್ತು ನಗರದ ಪರಿಸ್ಥಿತಿಯ ಕುರಿತು ನಾವು ಕಾಣಬಹುದು ತೀವ್ರ ನಗರೀಕರಣ ಮತ್ತು ಡಾಂಬರೀಕರಣ, ಪಾಶ್ಚಾತ್ಯೇಕರಣಗೊಳಿಸಲು ತನ್ನ ಸುತ್ತ ಮುತ್ತಲಿನ ಪರಿಸರವ ಕಳೆದುಕೊಂಡು ಸಾಂಸ್ಕೃತಿಕವಾಗಿ ಬರಡಾಗಿಸುವುದು ಸದ್ಯದ ಸ್ಥಿತಿ ಆಗಿದೆ.ಉದಾಹರಣೆಗೆ ಕಾಶಿಯನ್ನು ಬಿಟ್ಟರೆ ಉಡುಪಿ ಈಗಲೂ ಸಹ ಆಧುನಿಕತೆಯ ಪರಂಪರೆಯ ತಿರುಳನ್ನು ಉಳಿಸಿ ಕೊಂಡಿರುವುದು ವಿಶ್ವಾಸನೀಯ ಸಂಗತಿ. ಇದಕ್ಕೆ ಕಾರಣ ಉಡುಪಿ ಕೇವಲ ದಾಸ ಪಂಥಕ್ಕೆ ತಾತ್ವಿಕವಾದ ಒಂದು ನೆಲೆಯನ್ನು ರೂಪಿಸಿಕೊಟ್ಟಿದೆ. ಮತ್ತು ದ್ವೈತ ಮತದ ಕೇಂದ್ರವಾಗಿದ್ದು ಕೊಂಡು ವೇದಗಳ ಅಧ್ಯಯನ ಆದ್ಯಾತ್ಮ ಮತ್ತು ಚಿಂತನ ಮಂಥನಗಳ ಜೊತೆಗೆ ಅಧ್ಯಯನ ಪ್ರವಚನ ಅದ್ಯಾಪನಗಳ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ಇದು ಇಂದಿಗೂ ಸಹ ನಗರೀಕರಣದ ನೆಲೆಯಾಗಿದೆ ನಮ್ಮ ಉಡುಪಿ ಎಂಬ ಆಶಯ ನನ್ನದು...

ಬಾಲ್ಯ.....
ಪ್ರಸ್ತುತ ಕವನ ಸಂಕಲನದಲ್ಲಿ ನೆನಪುಗಳು ಅದರಲ್ಲೂ ಶಾಲೆಯ ಬಾಲ್ಯದ ನೆನಪುಗಳು ಪ್ರತಿಯೊಬ್ಬರಿಗೂ ನೆಮ್ಮದಿ ನೀಡುವಂತಹ ನೆನಪುಗಳು. ಅಂದಿನ ಬಾಲ್ಯದಲ್ಲಿ ಅನೇಕ ಆಟಗಳ ಆಡುತ್ತಾ ನಲಿಯುತ್ತ ಕುಣಿಯುತ್ತಾ ಅದರಲ್ಲೂ ಬೇಸಿಗೆ ರಜೆ ಬಂತೆಂದರೆ ಮಜವೊ ಮಜಾ. ಏಕೆಂದರೆ ಬೇಸಿಗೆ ಕಾಲದಲ್ಲಿ ಅತಿ ಹೆಚ್ಚಾಗಿ ಸಿಗುವುದು ಮಾವು ಮತ್ತು ಹುಣಸೆ ಹಣ್ಣು. ಆಗ ಶಾಲೆಯ ಸ್ನೇಹಿತರೆಲ್ಲ ಸೇರಿ ಒಂದು ಗುಂಪನ್ನು ಕಟ್ಟಿಕೊಂಡು ಆ ಗುಂಪಿನಲ್ಲಿ ಗುಂಪಿಗೆ ರಾಜನಾದ ನನ್ನದೇ ಹೆಚ್ಚಿನ ದರಬಾರು ಆಗಿತ್ತು. ಮನೆಯಲ್ಲಿ ಅಮ್ಮನ ಬಳಿ ಶಾಲೆಗೆ ಹೋಗುವೆ ಅಂತ ಸುಳ್ಳನ್ನು ಹೇಳಿ ಅಪ್ಪನ ಜೊತೆ ಹೊಲಕೆ ಹೋಗಿ ಸಹಾಯ ಮಾಡುವುದೋ ಆಗೆ ಅಮ್ಮನಿಗೆ ಹೇಳಿ ಹೋಗಿದ್ದ ಸುಳ್ಳು ಆ ಸುಳ್ಳಿನಿಂದ ಅಮ್ಮನ ಕೈ ಅಲ್ಲಿನ ಬೆತ್ತದಿಂದ ತಿಂದ ಪೆಟ್ಟು ಆ ಪೆಟ್ಟನ್ನು ತಿನ್ನದ ದಿನವೇ ಇಲ್ಲ ಒಂದು ಸುಂದರ ಹುಡುಗಿಯ ಜೊತೆ ಭಾಂದವ್ಯವೆಂಬ ಸಂಬಧದ ಗೆಳೆತನ ಕಟ್ಟಿ ಅವಳು ನನ್ನ ಸ್ನೇಹಿತೆ ಎಂಬ ನಂಟು ಆದರೆ ಗೆಳತಿ ಏನೋ ಸರಿ ಆದರೆ ಎಂಬ ಸಂಶಯ ನಾನು ಅವಳಿಗೆ ಗೆಳೆಯನೋ ಅಲ್ಲವೋ ಎಂಬ ಸಂಶಯ ಸ್ನೇಹವಾಗಿ ಹತ್ತಿರ ಕೂಡಿದಾಗ ಅವಳ ಹೆಸರೇ ನೆನಪಿಗೆ ಬಾರದಾಯಿತಲ್ಲ ಆಗ ತರಲೆಯ ತಿಮ್ಮನಾಗಿ ಸದಾ ನಗಿಸುವ ಮುದ್ದು ಗುಮ್ಮನಾಗಿ ನನ್ನ ಜೀವನ ಆರಂಭವಾಗಿ ಜೀವನದ ಬೆಲೆ ತಿಳಿದು ಆ ಜೀವನದ ಏಳು- ಬೀಳುಗಳ ಒಡೆತಕ್ಕೇ ಸಿಲುಕದೆ ಕಲಿತ ಪಾಠದಿಂದ ಇಂದು ಎಲ್ಲರ ಜೀವನ ದುಡಿದು ಸಾಕುವ ಅಂತಕ್ಕೆ ಬೆಳೆದು ನಿಂತಿದೆ.
ಆದರೆ ದೊಡ್ಡವರಾಗುತ್ತ ಹೋದಂತೆಲ್ಲ ಆ ನೆನಪುಗಳು ನಮ್ಮನ್ನು ಸದಾ ಹೆಚ್ಚು ಹೆಚ್ಚಾಗಿ ಕಾಡತೊಡಗುತ್ತವೆ. ಹೀಗೆ ದಿನ ನಿತ್ಯದ ಬದುಕಿನಲ್ಲಿ ಕಾಡುವ ನೆನಪುಗಳನ್ನು ಈ ರೀತಿಯಲ್ಲಿ ವಿವರಿಸಿದ್ದೇನೆ. ಲತಾಮಣಿ ಎಂ. ಕೆ. ತುರುವೇಕೆರೆ ಅವರು ಕನ್ನಡ ಸಾಹಿತ್ಯದ ಭರವಸೆಯ ಕವಯಿತ್ರಿ.. ಅವರಿಂದ ಇನ್ನೂ ಉತ್ತಮವಾದ ಕೃತಿರತ್ನಗಳು ನಾಡಿಗರ್ಪಿತವಾಗಲಿ.
✍️ *ಅಂಜಿನಗೌಡ ಎನ್. (ಅಂಜನ್)*
ಕಾಡನೂರು ಪಾಳ್ಯ
ಕಾಡನೂರು ಅಂಚೆ
ಮಧುರೆ ಹೋಬಳಿ
ದೊಡ್ಡಬಳ್ಳಾಪುರ ತಾಲ್ಲೂಕು
ಬೆಂಗಳೂರು ಗ್ರಾಮಾಂತರ ಜಿಲ್ಲೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಕಂಬನಿಯ ರೋಧನೆ ( ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ಕಂಬನಿಯ ರೋಧನೆ

ಹರಿಹಾಯ್ದಳಾಕೆ ಮುದ ತೋರದ ಕುವರನಿಗೆ
ರಕ್ತಬಸೀದು ಬೆಳೆಸಿದಾಕೆಯ ಕನವರಿಕೆಗೆ
ಹುಸಿತೋರಿದಾ ಕರುಳಕುಡಿಗೆ ಕಣ್ಣೀರಮಿಡಿಯುತ
ಬೆಂಕಿಯಾದಳು ಕಾದ ಶೀಸದಂತೆ ಪ್ರಜ್ವಲಿಸುತ

ತನ್ನೊಡಲ ಕುಡಿಯೆಂದು ಅಪ್ಯಾಯತೆ ತೋರಿದೆ
ಬಯಕೆ ಬೇಲಿಯ ಮೀರಿ ಕಾರುಣ್ಯ ನೀಡಿದೆ
ಹೆತ್ತೊಡಲ ಬುಡಕೀಳುವ ಕುಡಿಯಾಗದಿರಲೆಂದು
ಬೆಳೆಸಿದೆ ಪರಕೀಯ ಗಾಳಿ ಬೀಸದಂತೆ

ಸಾಧುವಾಗಲಿಲ್ಲ ಸತ್ಯಹರಿಶ್ಚಂದ್ರನ ನೀತಿಗಳು
ಫಲನೀಡಲಿಲ್ಲ ವೀವೇಕರ ಸ್ಪೂರ್ತಿಯ ಮಾತುಗಳು
ಪುಟಿದೇಳಲಿಲ್ಲ ಭಗತ್ ರಾಯಣ್ಣರಂಗ ಸಿಡಿಗುಂಡುಗಳು
ಶಾಂತವಾದವು ಸಮಚಿತ್ತದ ಬ್ರಷ್ಟ ಕೂಪದೊಳಗೆ

ಎಂದು ಕಾಣುವೆವೋ ಚಂದವಳ್ಳಿ ತೋಟದಲ್ಲಿ
ಅರಳುವ ಗುಲಾಬಿ ಹೂವಿನ ತೋಟ
ಇರುವೆಯಂತ ಶಿಸ್ತಿನ ಪಾಠ ಜೇನಿನಂತೆ ಒಟ್ಟಾಗಿ
ಶ್ರಮಿಸಿ ಫಲನೀಡುವ ಸಿಹಿಬಾಳ್ವೆಯ ಕೂಟ
ಕಾಗೆಯಂತೆ ಹಂಚಿತಿನ್ನುವ ಮೈಮಾಟ
✍ ಶ್ರೀಧರ ಗಸ್ತಿ ಧಾರವಾಡ.




( ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಹಳ್ಳಿಯ ಘನತೆ ( ಕವಿತೆ ) - ಶ್ರೀ ತುಳಸಿದಾಸ ಬಿ ಎಸ್.

 ಹಳ್ಳಿಯ ಘನತೆ

ದಿಲ್ಲಿ ತಿರುಗಿದರೇನು
ಎಲ್ಲಿ ಸುತ್ತಿದರೇನು
ಹಳ್ಳಿ ನಂಟಿನ ಬಂಧ
ಕಳ್ಳು ಮರೆಯುವುದೇನು

ಪ್ರೀತಿ ಹಂಚುವರಿಲ್ಲಿ
ನೀತಿ ಧರ್ಮಕೆ ಹೆಸರು
ಮತಿಗೆ ಸಾಣಿಯ ಹಿಡಿದು
ಜೊತೆಯೆಂದು ಬಿಡದವರು

ಮಣ್ಣು ನಂಬಿ ಬದುಕಿ
ಹೆಣ್ಣು ಪೂಜಿಸುವವರು
ಬೆಣ್ಣೆಯಂತೆ ಕರಗೋ
ಜಾಣ ಜನಾರ್ಧನರು

ಒಂದೇ ಮಾತಿನ ಮೇಲೆ
ಹೊಂದಿ ನಡೆಯುವವರು
ಅಂದು ಅಂದಿನ ಖುಷಿಗೆ
ಚಂದದಿ ನಲಿವವರು

ಬದುಕು ಪ್ರೀತಿಸೊ ಇವರು
ಮುದದಿ ದಣಿಯುತಲಿಹರು
ಹದಿಯ ಮನದ ಕೊಳೆಯ
ನದಿಯಂತೆ ತೊಳೆವವರು
- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ರಾಜಕೀಯದಿಂದ ದೂರವುಳಿದಾಗ ಮಾತ್ರ ಉತ್ತಮ ಸಾಹಿತ್ಯ ಹುಟ್ಟಲು ಸಾಧ್ಯ --- ಶ್ರೀಮತಿ ಗಿರಿಜಾ ಮಾಲಿ ಪಾಟೀಲ್.

ರಾಜಕೀಯದಿಂದ ದೂರವುಳಿದಾಗ ಮಾತ್ರ ಉತ್ತಮ ಸಾಹಿತ್ಯ ಹುಟ್ಟಲು ಸಾಧ್ಯ ---  ಶ್ರೀಮತಿ ಗಿರಿಜಾ ಮಾಲಿ ಪಾಟೀಲ್

ಹೊಸದುರ್ಗ:: ದಿನಾಂಕ 29/08/2021 ರ ಭಾನುವಾರದಂದು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ, ಹೊಸದುರ್ಗ ತಾಲೂಕು ಘಟಕದ ಉದ್ಘಾಟನೆ, ಕವಿಗೋಷ್ಠಿ ಹಾಗೂ "ಜಾಗತಿಕ ಭಯೋತ್ಪಾದನೆ ವಿರೋಧಿಸಿ- ಮಾನವಿಯತೆಯೆಡೆಗೆ" ಆನ್ಲೈನ್ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಆನ್ಲೈನ್ ಮೂಲಕ ಹೊಸದುರ್ಗ ತಾಲೂಕು ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದ, ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾನಾಗೌಡ ಮಾಲಿ ಪಾಟೀಲ್ ರವರು "ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ, ಇಂದಿನ ದಿನಮಾನಗಳಲ್ಲಿ ಭಯೋತ್ಪಾದನೆಯು ತನ್ನ ಕರಾಳ ಬಾಹುಗಳನ್ನು ಪ್ರಪಂಚದ ಉದ್ದಗಲಕ್ಕೂ ಚಾಚಿದ್ದು, ಭಯದ ವಾತಾವರಣ ನಿರ್ಮಿಸಿ ಜನರಲ್ಲಿ ಬದುಕುವ ಧೈರ್ಯವನ್ನು ಕಿತ್ತುಕೊಳ್ಳುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ, ಮಾನವೀಯತೆಯ ಮೂಲಕ ಒಂದು ಸ್ವಾಸ್ಥ್ಯ ಸಮಾಜವನ್ನು ಕಟ್ಟುವ ಕೆಲಸ ಆಗಬೇಕಾಗಿದೆ" ಎಂದು ತಿಳಿಸಿದರು.

ನಂತರ ಕಾರ್ಯಕ್ರಮದಲ್ಲಿ ಶ್ರೀ ಸಿದ್ದೇಶ್ವರ ಸಾಹಿತ್ಯ  ವೇದಿಕೆ ಹೊಸದುರ್ಗ ತಾಲೂಕು ಘಟಕದ ಅಧ್ಯಕ್ಷರಾದ ಬೆಳಕು-ಪ್ರಿಯ ಮುರಳಿಯವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ "ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಮೂಲಕ ಸಾಹಿತ್ಯಾಸಕ್ತರನ್ನು ಒಟ್ಟುಗೂಡಿಸಿ ಕನ್ನಡ,ನಾಡು,ನುಡಿ,ಸಾಹಿತ್ಯದ  ಸೇವೆಯನ್ನು ಮಾಡುತ್ತಿರುವ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ದಂಪತಿಗಳ ಕಾರ್ಯವನ್ನು ಶ್ಲಾಘಿಸಿದರು, ಮುಂದುವರೆದು ಪ್ರತಿಯೊಬ್ಬ ಬರಹಗಾರನು ಕೂಡ ಮಾನವೀಯತೆಯ ನೆಲೆಗಟ್ಟಿನಲ್ಲಿ ಕಾವ್ಯ ಕಟ್ಟುವ ಮತ್ತು ಸದಾ ಸಮಾಜವನ್ನು ಜಾಗೃತಗೊಳಿಸುವ ಕಾರ್ಯ ಹಿಂದೆಂದೆಗಿಂತಲೂ ಇಂದು ಅತೀ ಅವಶ್ಯಕ ಮತ್ತು ಅನಿವಾರ್ಯವಾಗಿದೆ ಎಂದು ಬರಹಗಾರರನ್ನು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಿರಿಯ ಸಾಹಿತಿಗಳು ತಾಲೂಕು ಘಟಕದ ಗೌರವಾಧ್ಯಕ್ಷರಾದ ಶ್ರೀಯುತ ಧನಂಜಯ ಮೆಂಗಸಂದ್ರ ರವರು ಮಾತನಾಡಿ,  ಆಧುನಿಕತೆಯ ಸಮಾಜದಲ್ಲಿ ಮಾನವಿಯತೆಯು ಕಣ್ಮರೆಯಾಗುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ನಾವು ನೀವುಗಳು ಮನೆಯ ವಾತಾವರಣದಿಂದಲೆ ಮಕ್ಕಳಲ್ಲಿ ಮಾನವೀಯತೆಯನ್ನು ಬೆಳೆಸುವ ಕಾರ್ಯವನ್ನು  ಅತ್ಯಂತ ತುರ್ತಾಗಿ ಕೈಗೊಳ್ಳುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದು ನುಡಿದರು.

"ಜಾಗತಿಕ ಭಯೋತ್ಪಾದನೆ ವಿರೋಧಿಸಿ-ಮಾನವಿಯತೆಯೆಡೆಗೆ" ಎಂಬ ವಿಷಯಕ್ಕೆ ಸಂಬಂಧಿಸಿದಂತೆ ವಿಶೇಷ ಉಪನ್ಯಾಸ ನೀಡಿದ ಮೊಳಕಾಲ್ಮುರಿನ ಯುವ ಬರಹಗಾರ ಜಬಿವುಲ್ಲಾ ಎಂ ಅಸದ್ ರವರು."ಭಯೋತ್ಪಾದನೆ ಇಂದು ಯಾವುದೇ ಒಂದು,ಧರ್ಮ,ದೇಶ,ಭೌಗೋಳಿಕ ಪ್ರದೇಶಕ್ಕೆ ಸೀಮಿತವಾಗಿಲ್ಲ, ಮನುಷ್ಯ ಮನುಷ್ಯನಲ್ಲಿ ಭಯ ಹುಟ್ಟಿಸುವ ಇಂತ ಹೀನ ಕೃತ್ಯಕ್ಕೆ ಯಾವ ಧರ್ಮದ ಬೆಂಬಲವೂ ಕೂಡ ಇರುವುದಿಲ್ಲ ಎಂದರು. ಮುಂದುವರೆದು ಧರ್ಮ ಎಂದರೇನು, ಮಾನವೀಯತೆ ಎಂದರೇನು, ಧರ್ಮಕ್ಕೂ ಮಾನವಿಯತೆಗೂ ಇರುವ ಸಂಬಂಧ, ಅನಾದಿ ಕಾಲದಿಂದ ಹಿಡಿದು ಬುದ್ಧನವರೆಗೆ ಹಾಗೂ ಇಂದಿನ ದಿನಮಾನಗಳವರೆಗೂ ವಿವಿಧ ಧರ್ಮ, ಧರ್ಮ ಗ್ರಂಥಗಳಲ್ಲಿ ಮಾನವ ಧರ್ಮ ಮತ್ತು ಮಾನವೀಯತೆಯ ಕುರಿತು ಅತ್ಯಂತ ಸಂಕ್ಷಿಪ್ತವಾಗಿ ತಮ್ಮ ಉಪನ್ಯಾಸ ಕಾರ್ಯವನ್ನು ನೆರವೇರಿಸಿದರು.

ಮುಖ್ಯ ಅಥಿತಿಗಳಾಗಿದ್ದ ಬೆಂಗಳೂರು ಗ್ರಾಮಾಂತರ ಘಟಕದ ಅಧ್ಯಕ್ಷರಾದ ಶ್ರೀಮತಿ ಕಮಲಾಕ್ಷಿ ಕೌಜಲಗಿಯವರು ಮಾತನಾಡಿ ಭಯೋತ್ಪಾದನೆಯನ್ನು ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರೂ ವಿರೋಧಿಸಬೇಕಾಗಿದೆ,ಹಾಗೆಯೇ ಕವಿಗಳು ತಮ್ಮ ಬರಹಗಳಲ್ಲಿ ಅದನ್ನು ರೂಢಿಸಿಕೊಳ್ಳಬೇಕೆಂದು ಕವಿಗಳಿಗೆ ಕಿವಿಮಾತು ಹೇಳಿದರು.

ತದನಂತರ ನಡೆದ ಕವಿಗೋಷ್ಠಿಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಹಾಜರಿದ್ದ ಸುಮಾರು 30 ಕ್ಕೂ ಹೆಚ್ಚು ಹಿರಿಯ ಕಿರಿಯ, ಕವಿ ಕವಯಿತ್ರಿಯರು ತಮ್ಮ ಕವನಗಳನ್ನು ವಾಚಿಸಿದರು. ಬಹುತೇಕ ಕವನಗಳು ಭಯೋತ್ಪಾದನೆ ವಿರೋಧಿಸಿ ಮಾನವಿಯತೆಯೆಡೆಗೆ ಕುರಿತಾಗಿಯೇ ಇದ್ದದ್ದು ವಿಶೇಷವಾಗಿತ್ತು.

ಅಂತಿಮವಾಗಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ್ ರವರು ಮಾತನಾಡಿ, ಹೊಸದುರ್ಗ ತಾಲೂಕು ಘಟಕವು ಮುಂದಿನ ದಿನಗಳಲ್ಲಿ ಮತ್ತಷ್ಟೂ ವಿನೂತನವಾದ ಕಾರ್ಯಕ್ರಮಗಳನ್ನು ನಡೆಸಿಕೊಡಲಿ ಎಂದು ಶುಭ ಹಾರೈಸಿ ಹಲವು ಕವಿಗಳ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದುವರೆದು ಮಾತನಾಡಿ ಪ್ರಸ್ತುತ ದಿನಗಳಲ್ಲಿ ಮಾನವೀಯತೆ ಬೆಳೆಸುವ ನಿಟ್ಟಿನಲ್ಲಿ ಕವಿಗಳ ಮತ್ತು ಕವಿತೆಗಳ ಪಾತ್ರದ ಕುರಿತು ವಿವರಿಸಿದರು. ಸಾಹಿತ್ಯದಲ್ಲಿ ರಾಜಕೀಯವನ್ನು ಬೆರೆಸುವುದು ಆರೋಗ್ಯಕರ ಬೆಳವಣಿಗೆಯಲ್ಲ, 
ಸಾಹಿತ್ಯ ರಾಜಕೀಯದಿಂದ ದೂರವುಳಿದಾಗ ಮಾತ್ರ ಉತ್ತಮ ಆರೋಗ್ಯಕರ ಸಾಹಿತ್ಯ ಹುಟ್ಟಲು ಸಾಧ್ಯ, ಹಾಗೆಯೇ ಬರಹಗಾರರು ಸದಾ ತನ್ನ ಸುತ್ತಲಿನ ಸಮಾಜವನ್ನು ಸೂಕ್ಷವಾಗಿ ವೀಕ್ಷಿಸುತ್ತ  ಅಲ್ಲಿಯ ತಪ್ಪು ಒಪ್ಪುಗಳನ್ನು ತಮ್ಮ ಬರಹಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯವನ್ನು ನಿರಂತರವಾಗಿ ಮಾಡಬೇಕೆಂದು ಬರಹಗಾರರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮವು ಗಾಯಕಿ ಶ್ರೀಮತಿ ಜಾನಕಿ ರಾಘು ರವರ ಸುಶ್ರಾವ್ಯ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ, ಶ್ರೀಯುತ ಶ್ರೀನಿವಾಸ್ ಡಿ ಗೊರವಿನಕಲ್ಲು ಇವರ ಸ್ವಾಗತದೊಂದಿಗೆ ಸಾಗಿತು. ವೇದಿಕೆಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಮತಿ ಭಾಗ್ಯ ಗಿರೀಶ್ ರವರು ಕಾರ್ಯಕ್ರಮವನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿ,ನಿರೂಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ವೇದಿಕೆಯ ಸದಸ್ಯರಾದ ಬಿ.ಎಚ್. ರಾಮಣ್ಣ ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.

       *ವರದಿ ::* 
                   ಬೆಳಕು-ಪ್ರಿಯ
                      ಅಧ್ಯಕ್ಷರು 
ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಹೊಸದುರ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ ಜನ್ಮದಿನ ಆಚರಣೆ.

ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ ಜನ್ಮದಿನ ಆಚರಣೆ.
ಚಿಟಗುಪ್ಪಾ :  ತಾಲೂಕು ಶರಣ ಸಾಹಿತ್ಯ ಪರಿಷತ್ತು ಚಿಟಗುಪ್ಪಾ ಹಾಗೂ ಜಿಲ್ಲಾ ಕರುನಾಡು ಸಾಹಿತ್ಯ ಪರಿಷತ್ತು,ಜಿಲ್ಲಾ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು,ಲೋಕಪ್ರಕಾಶ ಶಿಕ್ಷಣ, ಸಂಸ್ಕೃತಿ ಸಾಹಿತ್ಯ ಸೇವಾ ಸಂಸ್ಥೆ ಯವರ ಸಂಯುಕ್ತ ಆಶ್ರಯದಲ್ಲಿ ಇಂದು ಕಲ್ಯಾಣ ಕಾಯಕ ಪ್ರತಿಷ್ಠಾನದ ಕಚೇರಿಯಲ್ಲಿ 
ಲಿಂ.ಪೂಜ್ಯ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಾಹಾಸ್ವಾಮಿಗಳವರ  
ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜನ್ಮದಿನ ಆಚರಣೆ ಮಾಡಲಾಯಿತು. 
ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ
ನಿವೃತ್ತ ಬೀದರ ಜಿಲ್ಲಾ ತೆರಿಗೆ ಅಧಿಕಾರಿಗಳಾದ
ಶರಣ ದಯಾನಂದ ಕಾಂಬ್ಳೆಯವರು ಮಾತನಾಡಿ 12ನೇ ಶತಮಾನದ ಬಸವಾದಿ ಪ್ರಮಥರು ಜಗತ್ತಿಗೆ ಸಮಾನತೆ, ಸಂದೇಶ ಸಾರಿದ್ದಾರೆ. ನುಡಿದಂತೆ ನಡೆಯುವ ಮೂಲಕ,ಜಾಗತಿಕ ಲೋಕಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ಶರಣರು ಲಿಂಗಭೇದ, ಜಾತಿಭೇದ, ಮೇಲುಕಿಳುಗಳೆನ್ನುವ ಪಿಡುಗುಗಳನ್ನು ಸಮಾಜದಿಂದ ಹೋಗಲಾಡಿಸಲು ಸತತವಾಗಿ ಪ್ರಯತ್ನ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಿದ್ದಾರೆ ಎಂದರು.ಪ್ರಾಥಮಿಕ
ಗ್ರಾಹಕರ ಸಹಕಾರ ಸಂಘದ ಉಪಾಧ್ಯಕ್ಷರಾದ ಶರಣ ವಿಠಲರಾವ ಪಟ್ಟಣಕರವರು ಮಾತನಾಡಿ ಪ್ರತಿಯೊಬ್ಬರೂ ಸಮಾಜದಲ್ಲಿ ಸಮಾನತೆಯಿಂದ ಬಾಳಬೇಕು, ವಿಶ್ವಗುರು ಬಸವಣ್ಣನವರು ಸೇರಿದಂತೆ ಸರ್ವ ಶರಣರ ಆಶೆ ಸಹ ಇದೆ ಆಗಿತ್ತು. ಅದೇ ದಿಸೆಯಲ್ಲಿ ಚಿಟಗುಪ್ಪಾ ತಾಲೂಕು ಶರಣ ಸಾಹಿತ್ಯ ಪರಿಷತ್ತು ಸಾಗಲೆಂದರು.
ಶಿಕ್ಷಕರಾದ ಶರಣ ರಾಜಶೇಖರ ಉಪ್ಪಿನ ರವರು ಮಾತನಾಡಿ ಶರಣರ ಆಶಯದಂತೆ ನಾವೆಲ್ಲರೂ ಬದುಕು ಸಾಗಿಸಬೇಕಾಗಿದೆ.ಶಿವಶರಣರ ವಿಚಾರಧಾರೆಯಂತೆ ನಡೆಯೋಣ.ಈ ದಿಸೆಯಲ್ಲಿ ಚಿಂತನ - ಮಂಥನ ಮಾಡುವ ಮೂಲಕ ಶರಣರ ದಾರಿಯಲ್ಲಿ ಸಾಗೋಣವೆಂದರು. 
ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶರಣ ರಾಜಪ್ಪಾ ಜಮಾದಾರ್ ರವರು ಮಾತನಾಡಿ ಶರಣರ ವಿಚಾರಗಳು ಎಲ್ಲರಿಗೂ ತಲುಪುವಂತೆ ಆಗಬೇಕು. ಈ ನಿಟ್ಟಿನಲ್ಲಿ ಶಾಲಾ - ಕಾಲೇಜುಗಳಲ್ಲಿ ಶರಣರ ಕುರಿತು ಉಪನ್ಯಾಸ ಗೋಷ್ಠಿಗಳು ಏರ್ಪಡಿಸಬೇಕೆಂದರು.  ಶಿಕ್ಷಕ,ಸಾಹಿತಿಗಳಾದ ಶರಣ ರಮೇಶ ಸಲಗರವರು ಶರಣ ಸಂಸ್ಕೃತಿ ಮೇಲೆ ವಿಶೇಷ
ಉಪನ್ಯಾಸವನ್ನು ನೀಡುತ್ತಾ, ಹನ್ನೆರಡನೇ ಶತಮಾನ ರಾಜಕೀಯ, ಮತಧರ್ಮ, ಭಾಷೆ, ಸಾಹಿತ್ಯ, ಸಾಮಾಜಿಕ ಬದಲಾವಣೆಗಳಿಂದಾಗಿ ವಿಶೇಷ ಮಹತ್ವ ಪಡೆದಿದೆ.

 ಶರಣ್ಯ ಭಾವದಿಂದ ಸೃಷ್ಟಿಕರ್ತನನ್ನು ಆರಾಧಿಸಿ ಕೊನೆಯಲ್ಲಿ ಸೃಷ್ಟಿಕರ್ತನೇ ಆಗುವ ಭಕ್ತರನ್ನು ಶಿವಶರಣರು ಎಂದು ಕರೆಯುತ್ತಾರೆ. ನಡೆ-ನುಡಿಗಳಲ್ಲಿ ಅಂತರವಿರದ ಇವರ ಜೀವನದ ಆದರ್ಶಗಳೇ ಶರಣ ಸಂಸ್ಕೃತಿ. ಈ ಶರಣರು ರಚಿಸಿದ ವಚನ ಸಾಹಿತ್ಯವನ್ನೇ ಇಲ್ಲಿ 'ಶರಣ ಸಾಹಿತ್ಯ' ಎನ್ನುತ್ತಾರೆ. ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣ ಕಾಯಕ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತಧರ್ಮವೂ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. 'ಕಾಯಕವೇ ಕೈಲಾಸ' ಎಂದ ಬಸವಣ್ಣ 'ಉದ್ಯೋಗಂ ಕಾಯಕಜೀವಿಗಳ ಲಕ್ಷಣ' ಎಂದು ಜಗತ್ತಿಗೆ ಸಾರಿದಾರೆ. ಕಾಯಕದಲ್ಲಿ ನಿರತವಾದರೆ,ಗುರುದರ್ಶನವಾದರೂ ಮರೆಯಬೇಕು,ಲಿಂಗಪೂಜೆಯಾದರೂ ಮರೆಯಬೇಕು' ಎಂದು ಹೇಳುವ ಶರಣರ ಮಾತುಗಳು ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಸಾಲುಗಳು ಶರಣ ಸಂಸ್ಕೃತಿಯಲ್ಲಿ ಕಾಯಕಕ್ಕೆ ಶರಣರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತವೆ. ಹಾಗಾಗಿ ಶರಣ ಸಂಸ್ಕೃತಿ ಶರಣರ ಸಮಗ್ರಹ ವಿಚಾರಧಾರೆಯ ಸಂಗಮವಾಗಿದೆ.ಇಲ್ಲಿ ಸಮಾನತೆ, ಸಹೋದರತೆ ಸೇರಿದಂತೆ ವಿವಿಧ ಜೀವಪರ ಚಿಂತನೆಗಳು ಮುಖ್ಯವಾಗಿ ಕಾಣುತೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ, ಪರಿಷತ್ತಿನ ಅಧ್ಯಕ್ಷರು, ಸಾಹಿತಿಯಾದ ಸಂಗಮೇಶ ಎನ್ ಜವಾದಿಯವರು ಮಾತನಾಡಿ 12ನೇ ಶತಮಾನದ ಬಸವಾದಿ ಶರಣರ ಆಶಯದಂತೆ ನಾವೆಲ್ಲರೂ ಸೇರಿ ಹೆಜ್ಜೆ ಹಾಕೋಣ, ಶರಣರ ಚಿಂತನೆಗಳನ್ನು ಪ್ರತಿಯೊಬ್ಬ ವ್ಯಕ್ತಿಯ ಮನಸ್ಸುಗಳಿಗೆ ಮುಟ್ಟಿಸುವ ಕೆಲಸ ಬರುವಂತಹ ದಿನಗಳಲ್ಲಿ ಮಾಡೋಣ ವೆಂದು,
ಶರಣರ ಆದರ್ಶ ವಿಚಾರಗಳು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು,ಸಮಾಜಕ್ಕೆ ಮಾದರಿಯಾಗಿ ಬದುಕುವ ಮೂಲಕ ನಮ್ಮ ಋಣವನ್ನು  ತೀರಿಸುವ ಪ್ರಯತ್ನ ಮಾಡೋಣವೆಂದರು. ಶರಣೆ ಶಿಕ್ಷಕಿ ಸಾವಿತ್ರಿ ಮುತ್ತಲಗೇರಿಯವರು ಶರಣರ ವಚನಗಳನ್ನು ಗಾಯನ ಮಾಡಿದರು. ಶರಣ ಮಾಹಾರುದ್ರಪ್ಪಾ ಅಣದೂರೆ ಯವರು ಪ್ರಸ್ತಾವಿಕವಾಗಿ ಮಾತನಾಡಿದರು.
ಶರಣ ಚಂದ್ರಶೇಖರ ತಂಗಾರವರು ಸ್ವಾಗತಿಸಿದರು. ಶರಣೆ ಶಿಕ್ಷಕಿ ಸವಿತಾ ಪಾಟೀಲರವರು ನಿರೂಪಿಸಿದರು. ಶರಣ ಮನೋಹರ ಜಕ್ಕಾರವರು ಶರಣು ಸಮರ್ಪಣೆ ಮಾಡಿದರು.ಕಾರ್ಯಕ್ರಮದಲ್ಲಿ
ಸಹಕಾರಿ ಧುರೀಣ ತಿಪ್ಪಣ್ಣಾ ಶರ್ಮಾ,ಚಂದ್ರಕಾಂತ ಜಂಬಗಿ,ಈರಣ್ಣಾ ಚೀತಕೋಟಿ,
ಚನ್ನಪ್ಪಾ ಅಂಬಲಗಿ,ಈರಪ್ಪಾ ಪಾರಾ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು, ಗಣ್ಯರು
ಉಪಸ್ಥಿತರಿದ್ದರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ ) 

ಆದಿಪೂಜಿಪ ಪಾರ್ವತಿ ತನಯ ( ಕವಿತೆ) - ಶ್ರೀ ಪುರುಷೋತ್ತಮ ಪೆಮ್ನಳ್ಳಿ.

 ಆದಿಪೂಜಿಪ ಪಾರ್ವತಿ ತನಯ

ಆದಿಪೂಜಿಪ ಪಾರ್ವತಿ ತನಯ
ಕರುಣಿಸು ಗಜವದನ ನೀ ಅಭಯ
ನಿವಾರಿಸಿ ಸಲಹು ಮನದ ಭಯ
ದೊರಕಿಸು ಬೆನಕ ಬಾಳಿಗೆ‌ ವಿಜಯ
ಶಾಂತಿಯಲಿರುಸು ನಮ್ಮ ಧರೆಯ...

ಆನೆಯ ಮೊಗದ ಸುಂದರ ವದನ
ಕರಮುಗಿಯಲು ಬಾಳೇ ಪಾವನ
ಸಮೃದ್ಧಿಯಲಿರಿಸು ನಮ್ಮ ಜೀವನ
ಹೃದಯ ನಂದನದಿ ಮಾಡಿದೆ ಭವನ
ಬರೆದು ಬೇಡುವೆ ಭಕ್ತಿಯ ಕವನ...

ಬಾಳಿನ ತೇರ ನೆಮ್ಮದಿಯಲಿ ಸಾಗಿಸು
 ಬುದ್ದಿಯ ಬಲವ ನಮಗೆ ತಿಳಿಸು
ಮನದಲಿ ಭಕ್ತಿಯ ಭಾವವ ಬೆಳೆಸು
ಒಳ್ಳೆಯ ತನಕೆ  ನಮ್ಮನು ಹರಸು
ಪಾಪದ ಮನವನು ದೂರ ಸರಿಸು...

ರಾವಣನಿಂದ ಆತ್ಮಲಿಂಗವ  ಪಡೆದು
ಬುದ್ಧಿಚಾತುರ್ಯದಿ ಕಾದಿಯೇ ಮೆರೆದು
ಶಶಿ ಸೋತನು ಶಾಪದಿ ದೂರ ಸರಿದು
ನೀಡಿದೆ ವರವ ಭಕ್ತಿಯ ಮೆಚ್ಚಿ ಮೆರೆದು
ಸ್ವರ್ಗವೇ ದೇವ ನೀ ನೆಲಸಿದ ಮನವದು...

ಮೊದಲ ಪ್ರಾರ್ಥನೆಯು ನಿನಗೆ ಬೆನಕ
ಇಳೆಯಲಿ ಮೊಳಗಿಸು ಭಕ್ತಿಯ ಕಾಯಕ
ಸಕಲ ಗಣಕೂ ನೀನೆ ಪ್ರೀತಿಯ ನಾಯಕ
ಏಳ್ಗೆಗೆ ಬೇಡುವೆವು ನಿನ್ನ ವಿನಾಯಕ...
- ಪುರುಷೋತ್ತಮ ಪೆಮ್ನಳ್ಳಿ
ಪಾವಗಡ ತಾ ತುಮಕೂರು ಜಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಧರ್ಮವೆಂಬ ಪ್ರಸಾದ ಬೇಕು ( ಲೇಖನ) - ಶ್ರೀ ಮಂಜುನಾಥ ಹಿರೇಮಠ, ದಂಡಸೋಲಾಪುರ.

 ಧರ್ಮವೆಂಬ ಪ್ರಸಾದ ಬೇಕು

ಧಾರ್ಮಿಕ ಯುವ ಸಾಹಿತಿಗಳು ಮತ್ತು ಶಿಕ್ಷಕರು. ಧರ್ಮವೆಂಬ ಪ್ರಸಾದ  ಬೇಕು :ಜಗತ್ತಿನಲ್ಲಿ ಎಲ್ಲರಿಗೂ ಪ್ರಸಾದ ಬೇಕೇ ಬೇಕು ರಾಜನಿಂದ ಹಿಡಿದು ಭಿಕ್ಷೆಕರವರೆಗು ಪ್ರಸಾದ. ಎಲ್ಲರು ಬದುಕಬೇಕೆಂದರೆ  ಪ್ರಸಾದವನ್ನು ಅವಲಂಬಿಸಲಾಗಿದೆ. ಯಾರೊಬ್ಬರೂ ಪ್ರಸಾದವನ್ನು ತಿರಸ್ಕರಿಸಲಾರರು ಅದನ್ನು ಪ್ರಾಣ ಸಮಾನವಾಗಿ ಪ್ರೇಮಿಸುತ್ತಾರೆ. ಕಾರಣ ಶರೀರದ ದುಡಿತಕ್ಕೆ ಹಾಗೂ ಚೈತನ್ನೆಕ್ಕೆ ಪ್ರಸಾದವೇ ಮೂಲವಾಗಿದೆ ಈ ಸತ್ಯವನ್ನು ಎಲ್ಲರು ಒಪ್ಪಿಕೊಳ್ಳುತ್ತಾರೆ ಅದೇ ರೀತಿಯಲ್ಲಿ ಪ್ರತಿಯೊಬ್ಬರಿಗೂ ಧರ್ಮವೆಂಬ ಪ್ರಸಾದ ಬೇಕೇ ಬೇಕೆಂದು ತಪಸ್ವಿಗಳು ತಿಳಿಸುತ್ತಾರೆ ಧರ್ಮದ ಪ್ರಸಾದ ಇಲ್ಲದಿದ್ದರೆ ಜೀವನದಲ್ಲಿ ಸುಖವಾಗಿ ಬದುಕಲು ಸಾಧ್ಯವಿಲ್ಲ ಯಾರೊಬ್ಬರೂ ಧರ್ಮವನ್ನು ತಿರಸ್ಕರಿಸುವಂತಿಲ್ಲ ಅದರಂತೆ ಶರಣರು ಧರ್ಮವೆಂಬ ವಿದ್ಯೆಗೆ ಪ್ರೋತ್ಸಾಹ ಕೊಡುತ್ತಿದ್ದರು ಈ ಧರ್ಮದ ವಿದ್ಯೆಯನ್ನು ಎಷ್ಟಾ ದರು ಪ್ರಮಾಣದಲ್ಲಿ ಕಲಿತಗಲೇ ಸುಖಿಗಲಾಗಬಹುದು. ಪುಣ್ಯಕಾರ್ಯಗಳನ್ನು ಮಾಡುತ್ತ ಹೋಗುತ್ತೀದ್ದಂತೆ ಮಾರ್ಗ ರಚಿತವಾಗುತ್ತದೆ ಅದು ಪುಣ್ಯದುರಿಗೆ ಹೋಗುವ ಮಾರ್ಗವಾಗಿದೆ ಪುಣ್ಯದ ಶಕ್ತಿಯೇ ಧರ್ಮ ಮಾರ್ಗವನ್ನು ರಚಿಸಿ ಕೊಡುತ್ತದೆ ಅದಕ್ಕಾಗಿ ಮಾರ್ಗ ಬೇಕಾದವರು ಪುಣ್ಯಕಾರ್ಯಗಳನ್ನು ಮಾಡುತ್ತ ಹೋಗಬೇಕು. ಅಷ್ಟೆ ಅಲ್ಲ ಧರ್ಮವು ಸಮಾಜದ ಅಂಕು ಡೊಂಕು ತಿದ್ದುವಲ್ಲಿ ಸಹಕರಿಯಾಗಿದೆ.

- ಮಂಜುನಾಥ ಹಿರೇಮಠ,  ದಂಡಸೋಲಾಪುರ (ಚಾಮನಾ ಳ )ತಾ /ಶಹಾಪುರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹನಿಗವನಗಳು - ಸವಿತಾ ಆರ್ ಅಂಗಡಿ ಮುಧೋಳ.

ಹನಿಗವನಗಳು

  ರೈತ

 ಸೂರ್ಯೋದಯಕ್ಕೆ ಭೂತಾಯಿಗೆ ನಮಿಸುವೆನು
 ಮಳೆ ಬಿಸಿಲೆನ್ನದೆ ಹೊಲದಲ್ಲಿ ದುಡಿಯುವವನು
 ಬೆವರನ್ನು ಸುರಿಸಿ ಕಷ್ಟಪಡುವ ವನು
 ಮಣ್ಣಲ್ಲಿ ಮಣ್ಣಾಗಿ ಶ್ರಮಿಸುವ ವನು

 ನೇಗಿಲ ಹೊತ್ತ ನೇಗಿಲಯೋಗಿ ಯವನು
 ಅನ್ನ ಕೊಡುವ ಅನ್ನದಾತನಿವನು
 ಭಾಗ್ಯವ ಬೆಳಗಿಸುವ ಭಾಗ್ಯದಾತ ನಿವನು
ಜನರಲ್ಲಿ  ಸಂತಸ ಮೂಡಿಸುವ ರೈತನಿವನು.



 ನಂದಾದೀಪ.

ಮನೆಗೆ ಸೊಸೆಯಾಗಿ ಬಂದವಳು.
 ಜೊತೆ-ಜೊತೆಯಾಗಿ ನಡೆದವಳು.
 ನೋವಿನಲ್ಲೂ ನಗುವ ಕಂಡವಳು.
 ಸರ್ವವನ್ನು ಕೊಟ್ಟವಳು.

 ಬಿಸಿಲಿಗೆ ನೆರಳಾಗಿ ನಿಂತವಳು.
 ಮಳೆಗೆ ಕೊಡೆಯಾಗಿ ನಿಂತವಳು.
 ಮನೆಗೆ ಕಾವಲಾಗಿ ಇರುವವಳು.
 ಆರದ ನಂದಾದೀಪ ಅವಳು.

✍️ ಸವಿತಾ  ಆರ್ ಅಂಗಡಿ  ಮುಧೋಳ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶನಿವಾರ, ಆಗಸ್ಟ್ 28, 2021

ನನ್ನ ತಾಯಿ (ಕವಿತೆ) - ಶ್ರೀ ಗಂಗಜ್ಜಿ. ನಾಗರಾಜ್ ಸಾಸ್ವಿಹಳ್ಳಿ.

  ನನ್ನ ತಾಯಿ 


ಅವಳ ಕರುಳನ್ನೇ ಕತ್ತರಿಸಿ ಹೊರ ಬಂದ ಕಟುಕರು ನಾವು
ಅ ಕರುಳು ತುಂಬುವಷ್ಟು ಅನ್ನ ನೀಡದ ನೀಚರು ನಾವು 
ನಮ್ಮ ಕಣ್ಣಲಿ ನೀರು ಬಂದರೆ ಅವಳ ಹೊಟ್ಟೆಯಲ್ಲಿ ತಳಮಳ 
ಅವಳ ಹೊಟ್ಟೆಯನ್ನು ಖಾಲಿ ಇಟ್ಟರೆ ಬದುಕಿದ್ದೇನು ಫಲ... 

ಅರ್ಥವಾಗದ ನಮ್ಮ ತೊದಲು ಮಾತನ್ನೇ ಅರ್ಥಮಾಡಿಕೊಂಡ ತಾಯಿ ಅವಳು... 
ಅರ್ಥವಾಗುವ ಅವಳ ಬೇಡಿಕೆಯನ್ನು ಪೂರೈಸದ ನಾವೆಂತ ಪಾಪಿಗಳು...

ಇಡೀ ಜಗತ್ತೇ ನಮ್ಮನ್ನು ಹೀಯಾಳಿಸಿ ಬೈದರೂ ಕೂಡ ನಮ್ಮನ್ನೇ ವಹಿಸಿಕೊಳ್ಳುವಳು ತಾಯಿಯೆಂಬ ದೇವರು... 
ಹುಟ್ಟಿದಾಗಿನಿಂದ ಜೊತೆಯೆಲ್ಲಿಯೇ ಇದ್ದ ಹೆತ್ತ ಮಗ ಮದುವೆಯಾದರೆ ಸಾಕು ಮರೆಯುವನು ಹೆತ್ತವಳ ಮೊಗ... 

ಹೆಂಡತಿಯನ್ನು ಪ್ರೀತಿಸಿ ನಿಮ್ಮ ಮನಸ್ಸನ್ನೇ ಅಡವಿಟ್ಟು, ಆದರೆ ತಾಯಿಯೆನ್ನು ಪೋಷಿಷಿ ನಿಮ್ಮ ಮನೆಯೆಲ್ಲಿ ಸ್ಥಳಕೊಟ್ಟು "ಹೆಂಡತಿಗೆ  ಪ್ರೀತಿಯನ್ನು ಕೇಳುವಷ್ಟು ಸಲುಗೆ ಕೊಡಿ ಆದರೆ ತಾಯಿಯೆನ್ನ ದೂರ ಮಾಡುವಷ್ಟಲ್ಲ "

ತಾಯಿಗೆ ಚಿಕ್ಕವರಿದ್ದಾಗ ಕೋಟೋಸ್ಟು ನೋವು ಕೊಡಿ ಮನೆಯಿಂದ ದೂರ ಹೋಗುವಷ್ಟು ಅಲ್ಲ. ಕೊನೆವರೆಗೂ ತಲೆಬಾಗಿ ನಿಮ್ಮ ತಾಯಿಯು ಪಟ್ಟ ಅ ಶ್ರಮಕ್ಕೆ, ಬೇಡವೆಂದರೂ ದೂರಬೇಡಿ ವಯಸಾಯಿತು ಎಂದು ಆಶ್ರಮಕ್ಕೆ... 

ಜನುಮವನ್ನು ಕೊಟ್ಟ ತಾಯಿಯನ್ನೇ ಅನುಮಾನ ಪಡಬೇಡಿ ಅನುಮಾನ ಪಟ್ಟ ಮಕ್ಕಳಾರೂ ಮತ್ತೇ ಜನುಮನಾ ಪಡೆಯಬೇಡಿ....... 
                
                    ಗಂಗಜ್ಜಿ. ನಾಗರಾಜ್ 
                         ಸಾಸ್ವಿಹಳ್ಳಿ 
             (ಹವ್ಯಾಸಿ ಬರಹಗಾರರು )
           M-8548985753.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)
          

ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದ – ಬಸವೇಶ್ವರರು. (ಲೇಖನ) - ಶ್ರೀ ಮಂಜುನಾಥ ಹಿರೇಮಠ.

ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದ – ಬಸವೇಶ್ವರರು.
ಜಾತಿಯತೆಯನ್ನು ತೋಲಗಿಸಲು ಲಿಂಗ  ಧೀಕ್ಷೆ ನೀಡಿದ ಮಹಾನ್ ಶರಣ.

 ಬಸವಣ್ಣನವರ ಕುರಿತು ಅರ್ಜುನವಾಡ ಶಾಸನ, ಚೌಡದಾನಪುರ ಶಾಸನ, ಕಲ್ಲದೇವಪುರ ಶಾಸನಗಳ ಮೂಲಕ ಅನೇಕ ಮಾಹಿತಿಗಳು ಲಭಿಸಿದೆ ಎಂದು ತಿಳಿದುಬರುತ್ತದೆ. 
                  ಧರ್ಮವೆಂಬ ಜ್ಯೋತಿ ಬೆಳಗಲು ನಮ್ಮ ನಾಡಿನಲ್ಲಿ   ಬಸವಣ್ಣನವರು ಜನ್ಮ ತಾಳಿದರು. ತಂದೆ  ಮಂಡಿಗೆಯ ಮಾದಿರಾಜ, ತಾಯಿ ಮಾದಲಾಂಬೆ, ಮಾದಿರಾಜರು ಅವರ ಅಗ್ರಹಾರದಲ್ಲಿ ಬರುವ ಐನೂರು ಮಹಾರಾಜರ ಸಭೆಗೆ ಅಧ್ಯಕ್ಷರು ಆಗಿದ್ದರು. ಪರಂಪರೆಗೆ ಅನುಗುಣವಾಗಿ ವೇದಾಧ್ಯಾಯನ, ಯಜ್ಷಯಾಗಗಳನ್ನು ನಡೆಸುವ ಶ್ರೋತ್ರಿಯ ಬ್ರಾಹ್ಮಣರಾಗಿದ್ದರು. ಬಸವಣ್ಣನವರು ತಮ್ಮ 16ನೇ ವಯಸ್ಸಿನಲ್ಲಿ ಕೂಡಲಸಂಗಮಕ್ಕೆ ಆಗಮಿಸಿ ಕೂಡಲಸಂಗಮ ದೇವನ ಸೇವೆಯಲ್ಲಿ ತೊಡಗಿಸಿಕೊಂಡರು. ಕಾಲಕಳೆದಂತೆ ಒಂದು ದಿನ ಸ್ವಪ್ನದಲ್ಲಿ ಕೂಡಲಸಂಗಮವನ್ನು ಬಿಟ್ಟು ಹೊರಡು ನಿನ್ನನ್ನು ನಾನು ಅಗಲುವುದಿಲ್ಲ ನಿನ್ನನ್ನೇ ಲೋಕದಲ್ಲಿ ಸಾಧಕನನ್ನಾಗಿ ಮೆರೆಸುತ್ತೇನೆ “ ಮಂಗಳ ವೆಡೆಯೇ ನಿನ್ನ ಮುಂದಿನ ಗಮ್ಯ “ ಎಂದು ಶಿವನ ಆಜ್ಞೆಯಾಯಿತು. ಶಿವವಾಣಿಯಂತೆ ಪಯಣಿಸಿದ ಅವರು ಧಾರ್ಮಿಕವೆಂಬ ದಾರಿಯ ಮೂಲಕ ಮಾನವ ಕುಲವನ್ನು ದೇವಲೋಕವನ್ನಾಗಿಸಿದರು. ಮರ್ತ್ಯಲೋಕವನ್ನು ಕರ್ತಾರನ ಕಮ್ಮಟವನ್ನಾಗಿಸಿದರು. ಬಸವಣ್ಣನವರು ರಚಿಸಿದ ಹದಿನಾಲ್ಕುನೂರಕ್ಕೂ ಹೆಚ್ಚು ವಚನಗಳು ನಮಗಿಂದು ದೊರಕಿದೆ. ಶರಣಧರ್ಮವನ್ನು ಜನಮನಕ್ಕೆ ತಲುಪಿಸುವ ಜವಬ್ದಾರಿಯನ್ನು ವಚನಗಳು ಪೂರೈಸಿವೆ.
                             ಬಸವಣ್ಣನವರಿಗೆ ಮಹಾಮನೆ ಮತ್ತು ಅನುಭವ ಮಂಟಪ ಎರಡು ಕಣ್ಣುಗಳಿದ್ದಂತೆ. ಮಹಾಮನೆ ಅನ್ನದಾಸೋಹಕ್ಕೆ ಪ್ರಸಿದ್ದಿಯಾದರೆ ಅನುಭವ ಮಂಟಪದಲ್ಲಿ ಜ್ಞಾನದಾಸೋಹಕ್ಕೆ ಆದ್ಯತೆ ಇತ್ತು. ಸೊನ್ನಲಿಗೆ ಸಿದ್ದರಾಮ, ಸಕಲೇಶಮಾದರಸ, ಮಡಿವಾಳ ಮಾಚಿದೇವ, ಮೋಳಿಗೆ ಮಾರಯ್ಯ, ಚನ್ನಬಸವಣ್ಣನವರ ಚಿಂತನಾಧಾರೆಗಳೂ ಅನುಭವ ಮಂಟಪದಲ್ಲಿ ಆಧ್ಯಾತ್ಮ ವಿಸ್ತಾರವಾಗಿ ಹಬ್ಬಿತ್ತು. ಜಾತಿಯತೆಯನ್ನು ತೋಲಗಿಸಲು ಬಸವಣ್ಣನವರು ಎಲ್ಲಾ ಸಮೂದಾಯದ ವ್ಯಕ್ತಿಗಳಿಗೂ ಲಿಂಗಧೀಕ್ಷೆ ನೀಡುವದಷ್ಟೇ ಅಲ್ಲ ತಮ್ಮ ನಡೆ-ನುಡಿಗಳಲ್ಲೂ ಸಮಾನತೆಯಿಂದ ಕಾಣುತ್ತಿದ್ದರು. ಒಮ್ಮೆ ಹರಳಯ್ಯನೆಂಬ ಚಮ್ಮಾರನು ತನ್ನ ಚರ್ಮದಿಂದಲೇ ಪಾದುಕೆಗಳನ್ನು ತಯಾರಿಸಿ ಬಸವಣ್ಣನವರಿಗೆ ಅರ್ಪಿಸಿದಾಗ ಅದನ್ನು ಪಾದಗಳಿಂದ ಮುಟ್ಟಲಿಲ್ಲ. ತಮ್ಮ ತಲೆಯ ಮೆಲೆ ಹೊತ್ತು ಹರಳಯ್ಯನ ಆರಾಧನೆಗೆ ತಕ್ಕ ಗೌರವ ಸೂಚಿಸಿದ್ದರು. ಕನ್ನಡ ನಾಡಿಗೆ ಆಧ್ಯಾತ್ಮಿಕ , ಧಾರ್ಮಿಕ ದೃಷ್ಟಿಯಿಂದ ಸರ್ವಸಮ್ಮತವಾದ ನೆಲೆ ಒದಗಿಸಿ ಕೊಟ್ಟ ಕೀರ್ತಿ ಬಸವೇಶ್ವರರಿಗೆ ಸಲ್ಲುತ್ತದೆ. ಕಾಲಕಳೆದಂತೆ ಮತ್ತೆ ಕೂಡಲಸಂಗಮಕ್ಕೆ ಬಂದು ನೆಲೆಸಿದಾಗ  ಬಸವಣ್ಣನವರಿಗೆ ಕೇವಲ 36 ವರ್ಷ. ಎಲ್ಲಿ ಅವರ ಆದರ್ಶ ಆಧ್ಯಾತ್ಮಿಕ ಮೂಲ ಪ್ರೇರಣೆಯಾಯಿತೊ ಅಲ್ಲೆ ಜಗದ ಜ್ಯೋತಿಯು ಆರುವುದು ಶಿವನಿಚ್ಚೆಯಾಗಿತ್ತು.
                             ಭಕ್ತಿಯೆಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ, ಲಿಂಗವೆಂಬ ಎಲೆಯ ಮೇಲೆ ವಿಚಾರವೆಂಬ ಹೂವಾಯಿತ್ತು, ಆಚಾರವೆಂಬ ಕಾಯಾಯಿತ್ತು, ಹಣ್ಣು ಕಳಚಿ ಬೀಳುವಲ್ಲಿ ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ.
                   
                                                                                  - - - ಮಂಜುನಾಥ ಹಿರೇಮಠ. ದಂಡಸೋಲಾಪೂರ (ಚಾಮನಾಳ), ಯುವ ಸಹಾತಿಗಳು ಮತ್ತು ಶಿಕ್ಷಕರು.
ಮೊ.9740755308.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)



ಹಳ್ಳಿಯ ಘನತೆ ( ಕವಿತೆ) - ಶ್ರೀ ತುಳಸಿದಾಸ ಬಿ ಎಸ್.

 ಹಳ್ಳಿಯ ಘನತೆ

ದಿಲ್ಲಿ ತಿರುಗಿದರೇನು
ಎಲ್ಲಿ ಸುತ್ತಿದರೇನು
ಹಳ್ಳಿ ನಂಟಿನ ಬಂಧ
ಕಳ್ಳು ಮರೆಯುವುದೇನು

ಪ್ರೀತಿ ಹಂಚುವರಿಲ್ಲಿ
ನೀತಿ ಧರ್ಮಕೆ ಹೆಸರು
ಮತಿಗೆ ಸಾಣಿಯ ಹಿಡಿದು
ಜೊತೆಯೆಂದು ಬಿಡದವರು

ಮಣ್ಣು ನಂಬಿ ಬದುಕಿ
ಹೆಣ್ಣು ಪೂಜಿಸುವವರು
ಬೆಣ್ಣೆಯಂತೆ ಕರಗೋ
ಜಾಣ ಜನಾರ್ಧನರು

ಒಂದೇ ಮಾತಿನ ಮೇಲೆ
ಹೊಂದಿ ನಡೆಯುವವರು
ಅಂದು ಅಂದಿನ ಖುಷಿಗೆ
ಚಂದದಿ ನಲಿವವರು

ಬದುಕು ಪ್ರೀತಿಸೊ ಇವರು
ಮುದದಿ ದಣಿಯುತಲಿಹರು
ಹದಿಯ ಮನದ ಕೊಳೆಯ
ನದಿಯಂತೆ ತೊಳೆವವರು

- ಶ್ರೀ ತುಳಸಿದಾಸ ಬಿ ಎಸ್
ಶಿಕ್ಷಕರು, ಗೊರೇಬಾಳ ಕ್ಯಾಂಪ್, ರಾಯಚೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅತ್ಯಾಚಾರ ಮತ್ತು ನಾನು (ಲೇಖನ) - ಶ್ರೀ ಇಂಗಳಗಿ ದಾವಲಮಲೀಕ.

ಅತ್ಯಾಚಾರ ಮತ್ತು ನಾನು

                               ಅತ್ಯಾಚಾರ ಎಂಬುದು ಇಂದಿನ ದಿನಗಳಲ್ಲಿ ಪಾಲಕರನ್ನು ಕಾಡುತ್ತಿರುವ ಮುಖ್ಯ ಪಾತ್ರ.ಪಾಲಕರಿಗೆ ತಮ್ಮ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಹೊರಗೆ ಹೋಗಿ ಪುನಃ ಮನೆ ಸೇರುವವರೆಗೆ ಜೀವವನ್ನು ಅಂಗೈಯಲ್ಲಿ ಹಿಡಿದು ಕಾಯುತ್ತಾರೆ.ಏಕೆ ಹೀಗೆ ಎಂದು ಒಮ್ಮೆ ಆಲೋಚಿಸಿದರೆ,ನಾವೇನು ಕಲಿಸುತ್ತಿದ್ದೇವೆ.ನಮ್ಮ ಮಕ್ಕಳು ಏನು ಕಲಿಯುತ್ತಿದ್ದಾರೆ,ಎಂಬುದನ್ನು ತಿಳಿಯಬೇಕಿದೆ.ಇದೆಲ್ಲವೂ ಹೇಗೆ ಸಾಧ್ಯ ಎಂದು ಒಮ್ಮೆ ಯೋಚಿಸಿದರೆ,ತಪ್ಪು ನಮ್ಮದೇ.ಕಾರಣ ನಮ್ಮ ಮಕ್ಕಳಿಗೆ ನಾವು ಕೊಡುತ್ತಿರುವ ಶಿಕ್ಷಣ ಇದೇನೆ.ನಮ್ಮ ಮಕ್ಕಳು ಅಮೋಘ ಸಾಧನೆ ಮಾಡಬೇಕು ನಿಜ.ಆದರೆ ಅದು ನಮ್ಮೊಳಗಿನ ಬಾಂಧವ್ಯವನ್ನು ಗಟ್ಟಿಗೊಳಿಸಲು  ಶ್ರಮಿಸಬೇಕು.ನಾವು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಯುವ ಎಲ್ಲಾ ರೀತಿಯ ಪ್ರಮುಖ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯುತ್ತೇವೆ. ಜೊತೆಗೆ ಆ ಸಂಸ್ಕೃತಿಯನ್ನು ಬಿಂಬಿಸುವ ಉದ್ದೇಶವನ್ನು ಹೊಂದಲು ಅವಕಾಶ ನೀಡುತ್ತೇವೆ.ಆದರೆ ಇದು ಭಾರತ. ಇಲ್ಲಿ ಮುಕ್ಕೋಟಿ ದೇವತೆಗಳ ನೆಲೆಯಿದೆ.ಆ ಸಂಸ್ಕ್ರತಿಯನ್ನು ಆರಾಧಿಸೋಣ,ಗೌರವಿಸೋಣ.ಆದರೆ ಅದೇ ನಮ್ಮ ನೆಲದ ರಾಜ್ಯವಾಳಲು ಅವಕಾಶ ಬೇಡ.
                               ನಮ್ಮ ದೇಶದಲ್ಲಿ ನಮ್ಮದೇ ಸ್ವಂತ             ಸಂಸ್ಕ್ರತಿಯಿದೆ.ನಮ್ಮ ಮಕ್ಕಳಿಗೆ‌  ಅಂಕಲ್,ಆಂಟಿ‌,ಬ್ರದರ್,ಸಿಸ್ಟರ್,ಕಸಿನ್ ಇವುಗಳ ಬದಲಾಗಿ ಅಮ್ಮ, ಚಿಕ್ಕಮ್ಮ, ಅತ್ತೆ,ಮಾವ ಎನ್ನುವುದನ್ನು ಕಲಿಸೋಣ.ಆಗ ಈ ಅತ್ಯಾಚಾರ ಎನ್ನುವ ಪದ ಇರುವುದಿಲ್ಲ.ಜೊತೆಗೆ ನಮ್ಮ ಮಕ್ಕಳಿಗೆ ಬಾಲ್ಯದಲ್ಲಿ ಸಂಬಂಧಗಳ ಬೆಲೆ ತಿಳಿಸೋಣ.ನಾವು ಮೊದಲು ಮಕ್ಕಳೊಂದಿಗೆ ಬೆರೆತು ಅವರಿಗೆ ನಿಜವಾದ ಮಾನವೀಯತೆಯ ಆದರ್ಶದ ಮೌಲ್ಯಗಳನ್ನು ತುಂಬೋಣ.ಸುತ್ತಲಿನ ಪ್ರಪಂಚದಲ್ಲಿ ನಡೆಯುವ ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕಿದೆ.ಮಾನವತೆ ಸಾರುವ ಅನೇಕ ವ್ಯಕ್ತಿಗಳನ್ನು ಪರಿಚಯಿಸಬೇಕಿದೆ.
                               ಸಂಬಂಧಗಳನ್ನು ಬೆಸೆಯಬೇಕಿದೆ.ತಾತ್ವಿಕವಾಗಿ ಆಲೋಚನಾ ಪದ್ದತಿಗಳನ್ನು ಅನುಸರಿಸಬೇಕಿದೆ.ನಾವು ಯಾವುದು ಚೆನ್ನಾಗಿದೆ ಎಂದು ನಂಬಿದ್ದೇವೆಯೋ ಅದೆಲ್ಲವೂ ಟೊಳ್ಳು ಎಂಬುದನ್ನು ಬಿಂಬಿಸಬೇಕು.ಮೊದಲು ಭಾಷೆ,ಉಡುಗೆ, ತೊಡುಗೆ, ಆಹಾರ ಅಭ್ಯಾಸಗಳನ್ನು ಬದಲಿಸಬೇಕಿದೆ.ಲೈಂಗಿಕ ಶಿಕ್ಷಣದ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ.ಹದಿ ಹರೆಯದ ಮಕ್ಕಳನ್ನು ರೂಪಿಸಲು ಪಣತೊಡಬೇಕಿದೆ.ಅವರ ಆಸೆ ಆಕಾಂಕ್ಷೆಗಳನ್ನು ತಿಳಿದು ಅವುಗಳನ್ನು ಧನಾತ್ಮಕವಾಗಿ ಕಾಣುವಂತೆ ಮಾಡಬೇಕಿದೆ.ಆಧ್ಯಾತ್ಮಿಕ ನೆಲೆಗಟ್ಟಿನ ಮೇಲೆ ಮಕ್ಕಳನ್ನು ರೂಪಿಸಬೇಕಿದೆ.ಚಲನಚಿತ್ರ, ಧಾರಾವಾಹಿಗಳಲ್ಲಿ ಬರುವ ಪಾತ್ರಗಳು ಕೇವಲ ಒಂದಷ್ಟು ಕಾಲ ಮನೋರಂಜನೆ ಎನ್ನುವುದನ್ನು ಸಾಬೀತುಪಡಿಸಬೇಕು.ಅವೆಲ್ಲವೂ ಕೇವಲ ಒಂದು ಮನರಂಜನೆ ನೀಡುವ ಕ್ಷಣಿಕ ಪಾತ್ರಗಳು ಎನ್ನುವುದು ತಿಳಿಸಬೇಕು.ಮಕ್ಕಳು ಅವುಗಳಲ್ಲಿ ಪರಕಾಯ ಪ್ರವೇಶ ಮಾಡದಂತೆ ನೋಡಿಕೊಳ್ಳಬೇಕಿದೆ.
                               ಆಲೋಚಿಸುವ ರೀತಿ ಒಂದು ಹೆಣ್ಣು ಮಗಳನ್ನು ಕಾಣುವ ರೀತಿ ಬದಲಾಗಬೇಕು.ಒಂದು ಹೆಣ್ಣನ್ನು ಭೋಗದ ವಸ್ತುವಾಗಿ ನೋಡದೆ,ಅವಳಲ್ಲಿಯೂ ನಮ್ಮ ತಾಯಿ, ಅಕ್ಕ-ತಂಗಿ ಇವರನ್ನು ಕಾಣುವ ಮನೋಭಾವ ಬೆಳೆಸಬೇಕು.ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಃ ಎನ್ನುವ ವೇದೋಕ್ತಿಯನ್ನು ತಿಳಿಸಬೇಕು.ಆಗ ನಿಜವಾದ ಭಾರತೀಯ ಮಕ್ಕಳು ದೇಶದಲ್ಲಿ ಜನಿಸುತ್ತಾರೆ.ಅತ್ಯಾಚಾರಕ್ಕೆ ಅಂತ್ಯ ಸಿಗುತ್ತದೆ. ಕೇವಲ ಯಾವುದೋ ಒಂದು ಮಗು ಅತ್ಯಾಚಾರಕ್ಕೆ ಬಲಿಯಾದಳು,ಎಂದು ಸುದ್ದಿ ವಾಹಿನಿಗಳಲ್ಲಿ ಓದಿ ಒಂದೆರಡು ದಿನಗಳ ಕಾಲ ಅದೇ ಮಾತನಾಡಿ ಸುಮ್ಮನಿದ್ದು ಬಿಡುವುದು. ನಮ್ಮ ಕೆಲಸವಾಗಿದೆ.ಆ ಕುಟುಂಬಕ್ಕೆ ಒಂದಷ್ಟು ಆರ್ಥಿಕ ಸಹಾಯ ಮಾಡಿ ಕೈ ತೊಳೆದು ಬಿಡುವುದಲ್ಲ.ಒಂದು ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡುವ ಯಾವುದೇ ವ್ಯಕ್ತಿ ಅತ್ಯಾಚಾರ ಮಾಡಲು‌ ಅವಕಾಶವನ್ನು ನೀಡಬಹುದೆ.ಹೋಗುತ್ತಿರುವುದು.ನಮ್ಮ ನೆಲದ ಹೆಣ್ಣಿನ ಮಾನ ಇದು ನೆನಪಲ್ಲಿರಲಿ.
                               ಅತ್ಯಾಚಾರ ಮಾಡುವ ಮೊದಲು ಅವಳಲ್ಲಿ ನಮ್ಮ ಮನೆಯ ಕುಟುಂಬದ ಸದಸ್ಯರನ್ನು ಅವಳಲ್ಲಿ ಕಾಣೋಣ.ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಈ ಗತಿ ಬಂದಿದ್ದರೆ ನಾನೇನು ಮಾಡಬಲ್ಲೆ ಎಂಬುದು ನನಗರಿವಾಗಬೇಕು.ಆಗ ಈ ಅತ್ಯಾಚಾರ ಎನ್ನುವ ಪದ ಇರುವುದಿಲ್ಲ.

    - ಶ್ರೀ ಇಂಗಳಗಿ ದಾವಲಮಲೀಕ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ.

ಗಜಲ್ 

ಮಾತು ಬಲ್ಲವನಿಗೆ ಎದೆಗಾರಿಕೆ ಜಾಸ್ತಿ ಗಾಲಿಬ್ 
ಮನದ ಮಾತುಗಳ ಅರಿಯದ ಛಲಗಾರಿಕೆ ಜಾಸ್ತಿ ಗಾಲಿಬ್ 

ಹಸಿವಿನ ಬಳಲಿಕೆಗೆ ನೊಂದಿರುವರೆ 
ಬಡತನದ ಗುಂಗಿನ ಬಿಕ್ಕಳಿಕೆ ಜಾಸ್ತಿ ಗಾಲಿಬ್ 

ದಿಕ್ಕು ತಪ್ಪುವರ ಮಾನಕ್ಕಿಂತಲೂ 
ಬೆನ್ನು ತಟ್ಟುವರ ಮೌನಿಕೆ ಜಾಸ್ತಿ ಗಾಲಿಬ್ 

ಮಾತಿಗೆ ಉತ್ತರ ಕೊಡದ ಮನ ನೊಂದಿದೆ 
ಕಣ್ಣಾಲಿಯ ಕಣ್ಣೀರು ಮರೆಯಾಗುವ ಹರಕೆ ಜಾಸ್ತಿ ಗಾಲಿಬ್ 

ಬಡತನದ ಬಳುವಳಿಯಲ್ಲಿ ಬಳಲಿದೆ 
ನೋವನ್ನು ಸಹಿಸುವ ಮಾಜಾಳ ಹೃದಯವಂತಿಕೆ ಜಾಸ್ತಿ ಗಾಲಿಬ್

                  
                                    - ಮಾಜಾನ್ ಮಸ್ಕಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶುಕ್ರವಾರ, ಆಗಸ್ಟ್ 27, 2021

ಶ್ರೀಮತಿ ಪ್ರಭಾವತಿ ಎಸ್ ದೇಸಾಯಿ ಅವರ 'ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ ' ಗಜಲ್ ಸಂಕಲನದ ಒಂದು ಅವಲೋಕನ - ಶ್ರೀಮತಿ ಗಿರಿಜಾ ಮಾಲಿ ಪಾಟೀಲ.

“ಹುಟ್ಟಿದ ಉಸಿರುಗಳ ಒಳಗಿನ ಆತ್ಮವು ಏಕರೂಪಿಯಾಗಿದೆ, ಲಿಂಗ ಭೇದ ಮಾಡಿ ಬೆಳಸುವುದ ಕಂಡು ತಲೆತಗ್ಗಿಸಿದ್ದೇನೆ” ಎನ್ನುವ ಪ್ರಭಾವತಿ ದೇಸಾಯಿ ಅವರ ತರಹೀಗಜಲ್ ಸಂಕಲನ ‘ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ’

“ಬಣ್ಣಗೆಟ್ಟ ಪರದೆಗಳ ತೆಗೆದು ಹಾಕಿಬಿಡು ಕಾದಿದೆ ಹೊಸ ಬದುಕು
ತೊಟ್ಟಿರುವ ಹಳೆ ಬದುಕು ಬಿಚ್ಚಿ ಹಾಕಿಬಿಡು ಕಾದಿದೆ ಹೊಸ ಬದುಕು
ಇಳೆಯಲಿ ದ್ವೇಷ ಅಸೂಯೆಯ ನೆತ್ತರು ಹರಿದು ಕೆಂಪು ಕಲೆಯಾಗಿದೆ
ಸ್ವಚ್ಛ ಮಾಡಲು ಒಲವ ನೀರು ಹಾಕಿಬಿಡು ಕಾದಿದೆಹೊಸ ಬದುಕು
ಭೂಮಿ ಬಾನುವಿನ ತುಂಬ ಹಾರಾಡುತಿವೆ ದುಷ್ಟ ಜೀವಾಣುಗಳು
ಕೆಟ್ಟ ಹುಳುಗಳು ಸಾಯಲಿ ವಿಷಹಾಕಿಬಿಡು ಕಾದಿದೆ ಹೊಸ ಬದುಕು
ಜಗದ ಜೀವಿಗಳೆಲ್ಲ ಬದುಕಿವೆ ರಂಗು ರಂಗಿನ ಮುಖವಾಡದಲ್ಲಿ
ಹಾವಿನಂತೆ ಪೊರೆಯನ್ನು ಕಳಚಿಹಾಕಿಬಿಡು ಕಾದಿದೆ ಹೊಸ ಬದುಕು 
ಪಿಸು ಮಾತಿನ ಮಧುರ ಗಜಲ್ ಹಾಡಿ ಹುಚ್ಚು ಹಿಡಿಸಿ ಎಲ್ಲಿ ಮರೆಯಾದೆ
ಒಲಿದ ಹೃದಯ ಪ್ರೀತಿಗೆ ಹಾರಹಾಕಿದೆ ಕಾದಿದೆ ಹೊಸ ಬದುಕು” ಎಂದು ಹೊಸ ಬದುಕನ್ನು ಆಮಂತ್ರಿಸುವ ಶ್ರೀಮತಿ ಪ್ರಭಾವತಿ ಅಮ್ಮನವರ ತರಹೀಗಜಲ್ ಇದು ಸಿದ್ದರಾಮ ಹಿರೇಮಠ ಕೂಡ್ಲೀಗಿ ಇವರ “ತೊಟ್ಟಿರುವ ಹಳೆ ಬದುಕ ಬಿಚ್ಚಿಹಾಕಿಬಿಡು ಕಾದಿದೆ ಹೊಸ ಬದುಕು” ಎನ್ನುವ ಸಾನಿ ಮಿಸ್ರ ಬಳಸಿ ಬರೆದಿರುವ ಮೇಲಿನ ಗಜಲ್ ಹೊಸ ಬದುಕಿನ ಆಶಾವಾದಕ್ಕೆ ಬೇಕಾದ ಅರ್ಹತೆಗಳನ್ನು ಮನತಟ್ಟುವಂತೆ ಹೇಳುತ್ತದೆ. ಗಜಲ್ ಸಾಹಿತ್ಯ ಲೋಕದ ಮೇರು ಗಿರಿ ಪ್ರಭಾವತಿ ಅಮ್ಮ ಈಗಾಗಲೆ ಸಾಕಷ್ಟು ಗಜಲ್ ಸಂಕಲನಗಳನ್ನು ಪರಿಚಯಿಸಿದ್ದು ‘ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ’ ಎನ್ನುವುದು ಇವರ ತರಹೀಗಜಲ್ ಸಂಕಲನವಾಗಿದೆ. 
ಬಾಳಿನಲಿ ನಾವು ಹೊಸ ಮನ್ವಂತರಕೆ ಮುನ್ನುಡಿ ಇಡಬೇಕಾದರೆ ಹಳೆಯ ಜಡ ಗಟ್ಟಿದ ಮನಸ್ಸುನ್ನು ನವೀಕರೀಸಲು ಮೊದಲು ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳಬೇಕು. ಪ್ರಮಾಣಿಕವಾದ ಬದುಕು ಖಂಡಿತ ಸ್ವಂಚದ ಮನಸ್ಸಿಗೆ ಮತ್ತು ಬದುಕಿಗೆ ಕಾರಣವಾಗುತ್ತದೆ. ಎನ್ನುವ ಆಶಯದಲ್ಲಿ ಮಾತನಾಡುವ ಪ್ರಭಾವತಿ ಅಮ್ಮ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಅವರು ಕೈವಾರಿಸಿದ್ದು ಅತ್ಯದ್ಭುತ ಕೃತಿಗಳನ್ನು ಹೊರ ತಂದಿದ್ದಾರೆ. 
“ಜಗದ ಅಪನಿಂದೆ ಅವಮಾನಗಳಿಗೆ ಕಿವಿಗೊಟ್ಟರೆ ಗರಬಡಿದಂತೆ 
ಎಲ್ಲ ಮರೆತು ಬೀರುವ ಮಂದಹಾಸ ನಗೆಹೊನಲು ಆವರಿಸಿದಂತೆ
ಕರಾಳ ಇರುಳ ಗರ್ಭದಲ್ಲಿಯೇ ಅಡಗಿರುತ್ತದೆ ಬೆಳಕಿನ ಕಿರಣ
ಸೋಲಿನ ಚಳಿಕೆಳೆಯಲು ಗೆಲುವೆಂಬುದು ಎಳೆಬಿಸಿಲು ಆವರಿಸಿದಂತೆ”
ಎಂದು ತುಂಬಾ ಅರ್ಥ ಗರ್ಭಿತವಾದ ಸಾಲುಗಳನ್ನು ಹೆಣೆಯುವ ಮೂಲಕ ಬದುಕಿಗೆ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ. “ನರಳದಿರು ಜೀವವೆ ಕೊರಗದಿರು ಮನವೆ ಬರುತ್ತವೆ ಕಷ್ಟ ಕಳೆವ ದಿನ ಮಳೆನಿಂತ ಮೇಲೆ ದಿಗಂತದಲಿ ಕಾಮನಬಿಲ್ಲು ಆವರಿಸಿದಂತೆ” 
ಶ್ರೀಮತಿ ಪ್ರಭಾವತಿ ದೇಸಾಯಿ ಅಮ್ಮನವರು ಜನಿಸಿದ್ದು ರಾಯಚೂರಿನಲ್ಲಿ, ನೆಲಸಿದ್ದು ವಿಜಯಪುರದಲ್ಲಿ. ಹೊಲಿಗೆಯ ಮುಖ್ಯ ಭೋದಕಿಯಾಗಿ ಕಾರ್ಯ ನಿರ್ವಹಿಸಿದ ಇವರು ಈಗ ನಿವೃತ್ತಿ ಜೀವನದಲ್ಲಿ ಸಂತೃಪ್ತಿ ಕಾಣುತ್ತಾ ಸಾಹಿತ್ಯ ರಚನೆಯಲ್ಲಿ ಸಕ್ರೀಯವಾಗಿ ತೊಡಗಿ ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಮಾ.ಶಾರದಾ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಇವರು ಸಾಕಷ್ಟು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಸಹೃದಯಿಗಳಾಗಿದ್ದಾರೆ. 
ಡಾ. ಕಾಶಿನಾಥ್ ಅಂಬಲಗೆಯವರ ಸಾನಿಮಿಸ್ರಾ “ನೋವೇ ನೋವನ್ನು ಅರಿಯಲು ಕಲಿಸುತ್ತದೆ” ಎನ್ನುವ ಗಜಲ್‌ನಲ್ಲಿ ಅಮ್ಮ ಹೀಗೆ ಹೇಳುತ್ತಾರೆ.
“ಸಾಗರ ಅಲೆಗಳ ಕುಣಿತ ಭಯಹುಟ್ಟಿಸುವುದು 
ಪ್ರಮಾಣಿಕ ಬಾಳು ಜೀವಿಸಲು ಕಲಿಸುತ್ತದೆ” 
ಲಕ್ಷ್ಮಿ ದೊಡ್ಡಮನಿ ಅವರ ಸಾನಿಮಿಸ್ರಾ “ಮನುಜರು ಪಶುಗಳಂತೆ ಆಡುವುದು ಕಂಡು ತಲೆತಗ್ಗಿಸಿದ್ದೇನೆ” ಎನ್ನುವಲ್ಲಿ ಮಾನವನ ದುರ್ನಡತೆಯಿಂದಾಗಿ ಸಮಾಜ ದುರ್ಗತಿಗೆ ತಲುಪಿರುವ ಸ್ಥಿತಿಯನ್ನು ಅಮ್ಮ ಚನ್ನಾಗಿ ಕಟ್ಟಿಕೊಟ್ಟಿದ್ದಾರೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ, ಬ್ರಷ್ಟಾಚಾರ, ಲಿಂಗತಾರತಮ್ಯ, ಪುರುಷಪ್ರಧಾನತೆ, ಜನಸಂಖ್ಯೆ ಹೀಗೆ ಹಲವಾರು ಸಾಮಾಜಿಕ ಸಮಸ್ಯೆಗಳ ವಿರುದ್ದ ಧ್ವನಿಯಾಗಿ ಹೊರಹೊಮ್ಮಿದೆ. ಹೆಣ್ಣಿನ ಮೇಲೆ ಬಲತ್ಕಾರ ಮಾಡುವ ಹೀನ ಮನಸ್ಸಿನ ವಿರುದ್ಧ ಚಾಟಿ ಬೀಸಿದ್ದಾರೆ.
“ಹೆಣ್ಣಾದ ಅಕ್ಕ ತಂಗಿ ತಾಯಿ ಅಜ್ಜಿ ಸಾಲದಾಗಿದೆ ದಾಹಕೆ 
ಸೊಕ್ಕಿದ ನಾಯಿ ಹರಿದು ತಿನ್ನುವುದು ಕಂಡು ತಲೆತಗ್ಗಿಸಿದ್ದೇನೆ
ಹೌದು ಅಮ್ಮನದು ಬರೀ ಸಮಸ್ಯೆಯ ಅನಾವರಣವಲ್ಲ ಅದಕ್ಕೆ ಕಾರಣವನ್ನು ನೀಡುತ್ತಾರೆ
“ಹುಟ್ಟಿದ ಉಸಿರುಗಳ ಒಳಗಿನ ಆತ್ಮವು ಏಕರೂಪಿಯಾಗಿದೆ
ಲಿಂಗ ಭೇದ ಮಾಡಿ ಬೆಳೆಸುವುದು ಕಂಡು ತಲೆತಗ್ಗಿಸಿದ್ದೇನೆ”
ನಾವೇ ಮಾಡುವ ಲಿಂಗ ತಾರತಮ್ಯವೇ ನಮ್ಮ ಬದುಕಿನ ದುರಂತಕ್ಕೆ ಕಾರಣವಾಗಿದೆ ಅಲ್ಲವೆ? 
“ಗೇಣು ಬಟ್ಟೆ ಚೋಟು ಹೊಟ್ಟೆಗೆ  ಬೇಕೆಷ್ಟು ಎಲ್ಲ ಬಿಟ್ಟು ಹೋಗು
ಎಲ್ಲವು ನನಗೆಂದು ಕೂಡಿಡುವುದ ಕಂಡು ತಲೆತಗ್ಗಿಸಿದ್ದೇನೆ”
ಅಮ್ಮ ಇಲ್ಲಿ ದುರಾಸೆ, ಬ್ರಷ್ಟಾಚಾರದ ವಿಡಂಬನೆಗೆ ತೊಡಗುತ್ತಾರೆ. ಮುಂದುವರೆದು
“ಮುಗ್ಧ ಜೀವಿಗಳಿಗೆ ಬಣ್ಣ ಬಳಿದು ಜಗಳ ಹಚ್ಚಿ ಮಜಾ ಮಾಡುವಿರಿ
ಧರ್ಮಗುರುಗಳು ಜಗವೆಲ್ಲ ಉರಿಸುವುದು ಕಂಡು ತಲೆತಗ್ಗಿಸಿದ್ದೇನೆ”
ಜಾತಿ, ಧರ್ಮದ ವೈಶಮ್ಯ ಹೆಚ್ಚಾಗಿ ಮುಗ್ಧ ಜನಗಳಲ್ಲಿ ಬಿತ್ತುವವರು ಸಾಕಷ್ಟು ಪಾಂಡಿತ್ಯ ಸಂಪಾದಿಸಿದ ಧರ್ಮಗುರುಗಳೆ ಎನ್ನುವ ಅಂಶ ವೇದ್ಯವಾಗುತ್ತದೆ. 
ಅಮ್ಮನ ಸಾಲುಗಳಲ್ಲಿ ನನಗೆ ಕಾಣಿಸಿದ್ದು ಸಮಾಜದ ಅನ್ಯಾಯಗಳ ವಿರುದ್ಧದ ಧ್ವನಿ, ಅಸಹಾಯಕರ ಪರವಾದ ಅನುಕಂಪ, ವೈರಾಗ್ಯದ ಜೊತೆಯಲ್ಲಿಯೇ ಬದುಕಿನ ಆಶಾವಾದ, ಇನ್ನುಳಿದಂತೆ ಗಜಲ್‌ನಲ್ಲಿ ಸಾಮನ್ಯ ಎನ್ನಬಹುದಾದ ಪ್ರೀತಿ, ಪ್ರೇಮ, ವಿರಹದ ಭಾವಗಳು. ಅಗಲಿಕೆಯ ತಲ್ಲಣಗಳು.
“ಇಳೆ ಬಿಸಿ ಕರಗಿಸಲು ನಭ ಹನಿ ಉದುರಿಸಿ ಹಗುರಾಗಿದೆ ಸಾಕಿ
ಬೆಚ್ಚಗಾಗಲು ತುಂಬಿದ ಮಧುಬಟ್ಟಲು ಬೇಕಾಗಿದೆ ಸಾಕಿ”
“ಸಾಕಿ ಇಲ್ಲದೆ ಬರಿದಾಗಿದೆ ಜಗದ ಮಧುಶಾಲೆಗಳು
ಖಾಲಿಯಾದ ಮಧು ಹೂಜಿಯು ಬದುಕಿಗೆ ಸವಾಲಾಗಿದೆ ಸಾಕಿ”  ಕಡುವಿರಹದ ಮಾತನಾಡುವ ಈ ಸಾಲು ಕೇಳಲು ಹಿತವೆನ್ನಿಸುತ್ತದೆ.
ಸಂಕಲನದ ಆರಂಭದಲ್ಲಿಯೇ ಬರುವ ಶಾಂತರಸರ ಸಾನಿ ಮಿಸ್ರಾದ ಗಜಲ್‌ನ ಸಾಲುಗಳು ಪ್ರಾಪಂಚಿಕ ಬದುಕಿನ ಕ್ಷುಲ್ಲಕ ವಿಚಾರಗಳ ಕುರಿತಾದ ವೈರಾಗ್ಯ ಎಲ್ಲರಿಗೂ ಆಗುವಂತದ್ದೇ ಆದರೆ ಆಧ್ಯಾತ್ಮದ ಮೂಲಕ ನಾವು ಶಾಂತಿ, ಸಹನೆ, ಅನುಕಂಪದ ಗುಣಗಳನ್ನು ಬೆಳೆಸಿಕೊಂಡು ಜಗತ್ತನ್ನು ಹೇಗೆ ಪ್ರೀತಿಸುತ್ತಾ ನಡೆದು ಬಿಡಬೇಕೆಂದು ತುಂಬಾ ಚನ್ನಾಗಿ ವಿಶ್ಲೇಷಿಸುತ್ತಾರೆ.
“ಫಲವತ್ತಾದ ಭೂಮಿ ಬರಕ್ಕಿ ಬಿರುಕು ಬಿಟ್ಟು ಬರುಡಾಗಿದೆ
ಬಂಜರ ನೆಲದಲಿ ಮಲ್ಲಿಗೆ ಸುಮ ಅರಳಿಸುತ್ತ ನಡೆದು ಹೋದೆ
ಮೌನದ ಚೂರಿಯಿಂದಿರಿದು ಮಾಡಿದ ಗಾಯ ಎಂದು ಮಾಯದು
ಹೃದಯಕೆ ಚುಚ್ಚಿ ಆದ ನೋವು ಆಡಿಸುತ್ತ ನಡೆದು ಹೋದೆ
ಈ ಲೋಕದ ಕ್ರೂರತೆ ನೋಡಿ ಬಳಲಿ ಬೆಂಡಾಗಿದೆ ಉಸಿರು 
ನೊಂದು ಜೀವಿಗೆ ಪ್ರೀತಿಯ ಹೊನಲು ಹರಿಸುತ್ತ ನಡೆದು ಹೋದೆ”

- ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಸಂಸ್ಥಾಪಕರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗೀತ ಗಾಯನ ಸ್ಪರ್ಧೆ : ತನುಶ್ರೀ ಪ್ರಕಾಶನ, ಸೂಲೇನಹಳ್ಳಿ.

"ತನುಶ್ರೀ ಪ್ರಕಾಶನ ಸಂಸ್ಥೆ ಸೂಲೇನಹಳ್ಳಿ 🌹"

🌹🌹🌹🌿🌿🌹🌹🌹

*"ದಿನಾಂಕ ೨೯/೦೮/೨೦೨೧ ಭಾನುವಾರ ಹಾಡು ಸ್ಪರ್ಧೆ"*
 *"ಪ್ರಕಾರ: ಗೀತ ಗಾಯನ 

*" ಹಾಡು ವಿಷಯ*: ಡಾ. ವಿಷ್ಣುವರ್ಧನ್ ಅವರ ಅಭಿನಯದ ' ಹೃದಯ ಗೀತೆ' ಚಲನಚಿತ್ರ ಇರುವ ಹಾಡುಗಳಲ್ಲಿ ಯಾವುದಾದರೂ ಒಂದು ಹಾಡು ಹಾಡಿ ಕಳುಹಿಸಿ ಕೊಡಿ 

*"ನಿಯಮಗಳು"*
ಹಾಡುಗಳಿಗಿಂತ ಮೊದಲು ತನುಶ್ರೀ ಪ್ರಕಾಶನ ಸೂಲೇನಹಳ್ಳಿ ಸ್ಪರ್ಧೆಗಾಗಿ ಎಂದು ಕಡ್ಡಾಯವಾಗಿ ನಮೂದಿಸುವುದು.*

👉 *ಕೊನೆಯಲ್ಲಿ ನಿಮ್ಮ ಹೆಸರು,ವಿಳಾಸ ಮತ್ತು ಪೋನ್ ನಂಬರ್ ಸ್ಪಷ್ಟವಾಗಿ ನಮೂದಿಸುವುದು*

👉 *" ಕೊಟ್ಟ ವಿಷಯಕ್ಕೆ ಹಾಡು ನಿಮ್ಮದೇ ದನಿಯಲ್ಲಿ ಹಾಡಿ ಕಳುಹಿಸಿ ಕೊಡಿ 

👉 *ಕನಿಷ್ಠ  ೩-೫ ನಿಮಿಷಗಳ ಕಾಲ ಹಾಡು ವೀಡಿಯೋ ಮಾಡಿ ಕಳುಹಿಸಿ ಕೊಡಿ ಮತ್ತು ಕರೋಕೆ ಬಳಸಿ ಹಾಡಿ ಕಳುಹಿಸಿ ಕೊಡಬಹುದು 
ಭಾಗವಹಿಸಿದ ಎಲ್ಲಾ ಗಾಯಕರಿಗೆ ಇ - ಪ್ರಮಾಣ ಪತ್ರ ನೀಡಿ ಗೌರವಿಸಲಾಗುತ್ತದೆ 

👉 *"ನಿಮ್ಮ ಹಾಡು ಈ ಹಿಂದೆ ಯಾವುದೇ ಜಾಲತಾಣಗಳಲ್ಲಿ ಪ್ರಕಟವಾಗಿರಬಾರದು"*

👉 ಭಾನುವಾರ ಬೆಳಿಗ್ಗೆ ೯.೩೦ ರಿಂದ ರಾತ್ರಿ ೧೦.೦೦ ಗಂಟೆ ವರೆಗೆ ಕೆಳಗೆ ಕೊಟ್ಟಿರುವ ಸಂಖ್ಯೆಗಳಿಗೆ ಹಾಡು ಕಳುಹಿಸಬೇಕು.*


*.ಎಸ್. ರಾಜು ಸೂಲೇನಹಳ್ಳಿ *
*9741566313 
*ಪ್ರಕಾಶಕರು ತನುಶ್ರೀ ಪ್ರಕಾಶನ ಸೂಲೇನಹಳ್ಳಿ 

*ಅಧ್ಯಕ್ಷತೆ: ಲಿಂಗರಾಜ್ ತಿಮ್ಮನಹಳ್ಳಿ
ಗಾಯಕರು ಮತ್ತು ಕಲಾವಿದರು 


👉 *"ಸ್ಪರ್ಧೆಯ ಸಮಯದಲ್ಲಿ ಬೇರೆ ಯಾವುದೇ ಸಂದೇಶಗಳನ್ನು ಹಾಕುವಂತಿಲ್ಲ.*

👉 *ತಾವು ಹಾಡುವ 
ಹಾಡು ಯಾವುದೇ ವ್ಯಕ್ತಿ , ದೇಶ, ರಾಜಕೀಯ ಪ್ರೇರಿತ ಸಂದೇಶವನ್ನು ನೀಡದಂತಿರಲಿ*

🌹🌹🌹🌹🌹🌹🌹🌹
 
ತೀರ್ಪುಗಾರರು : ಶ್ರೀಯುತ ವೀರು ಹೂಗಾರ ಗಾಯಕರು 
ಯುವ ಬರಹಗಾರರು ಮತ್ತು ಕಲಾವಿದರು 

" ಎಲ್ಲರೂ ಕಲಿಯೋಣ: ಎಲ್ಲರೂ ಬೆಳೆಯೋಣ "


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರಾಜ್ಯ ಮಟ್ಟದ ಲೇಖನ ಸ್ಪರ್ಧೆ : ವಿಚಾರ ಮಂಟಪ ಸಾಹಿತ್ಯ ವೇದಿಕೆ, ಜಿಲ್ಲಾ ಘಟಕ - ಬೀದರ್.

*ವಿಚಾರ ಮಂಟಪ ಸಾಹಿತ್ಯ ವೇದಿಕೆ*
*~~~~~~~~~~~~~~~~~~*
*ಜಿಲ್ಲಾ ಘಟಕ:-ಬೀದರ*
🌸🌸🌸🌸🌸🌸🌸🌸
  *ರಾಜ್ಯ ಮಟ್ಟದ ಲೇಖನ ಸ್ಪರ್ಧೆ*
     💐💐💐💐💐
*ದಿನಾಂಕ-  30 ಆಗಸ್ಟ್ 2021*
          
       *_ಸ್ಪರ್ಧೆ : 03*

⏰ *ಸಮಯ :  ಮಧ್ಯಾಹ್ನ 2:30 PM ಗಂಟೆಯಿಂದ ರಾತ್ರಿ 9:30 PM ಗಂಟೆಯವರೆಗೆ*

🌺🌺🌺
*ವಿಷಯ : "ಶಿಕ್ಷಣದಲ್ಲಿ ಮೊಬೈಲ್ ಬಳಕೆ"*

🏠🏠🏠🏠🏠🏠🏠
*ನಿರ್ವಹಣೆ :-ಪರಮೇಶ.ಡಿ.ವಿಳಸಪೂರೆ*
                   *ರೋಹಿಣಿ ಬೀರಾದರ್*
🦚🦚🦚🦚🦚🦚🦚
*ಸ್ಪರ್ಧೆಯ ನಿಯಮಗಳು*
👇👇👇👇👇👇👇

👉 ನಿಮ್ಮ ಲೇಖನವು ಸ್ವರಚಿತವಾಗಿದು ಇದಕ್ಕಿಂತ ಮೊದಲು ಎಲ್ಲಿಯೂ ಪ್ರಕಟಗೊಂಡಿರಭಾರದ್ದು.

👉ಒಬ್ಬರು ಒಂದೇ ಲೇಖನ ಕಳಿಸಬೇಕು. ವಯಸ್ಸಿನ ನಿರ್ಭಂಧವಿಲ್ಲ. ಹೊಸ ವೈಚಾರಿಕ ಲೇಖನಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು

👉ನಿಮ್ಮ ಲೇಖನ ಗರಿಷ್ಠ 230 ಪದಗಳು ಮೀರದಂತೆ ಇರಲಿ 

👉 ಕೊಟ್ಟಿರುವ ವಿಷಯಕ್ಕೆ ಸಂಬಂಧಿಸದ ಲೇಖನಗಳು ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ.

👉 ಲೇಖನವು ಕಡ್ಡಾಯವಾಗಿ whatsapp ನಲ್ಲಿಯೇ  ಟೈಪ್ ಮಾಡಿ ಕಳಿಸಬೇಕು. ಪಿಡಿಎಪ್, ಪೋಟೋ ಹೊಡೆದು, docx, jpg, tif ಮುಂತಾದ ಪಾರ್ಮಾಟಿನಲ್ಲಿ ಕಳಿಸಿದರೆ ಸ್ಪರ್ಧೆಗೆ ಪರಿಗಣಿಸುದಿಲ್ಲ.

👉 ಲೇಖನವು  *ವಿಚಾರ ಮಂಟಪ ಸಾಹಿತ್ಯ ವೇದಿಕೆ(ಬೀದರ)*  ಬಳಗದಲ್ಲಿ ಸಂಪೂರ್ಣ ವಿಳಾಸದ ಜೊತೆಗೆ ಹಾಕಬೇಕು. 

✍️ ಸಮಯಕ್ಕೆ ಮುಂಚೆ ಹಾಗೂ ನಂತರ ಬಂದ ಲೇಖನಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ.


✍️ ಸ್ಪರ್ಧೆ ನಡೆಯುವ ಸಮಯದಲ್ಲಿ ಯಾವುದೇ ಲೇಖನಕ್ಕೆ ವಿಮರ್ಶೆ ಮಾಡಬಾರದು. 

👉 ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ E-Certificate ವಿದ್ಯುನ್ಮಾನ ಪ್ರಮಾಣ ಪತ್ರ ನೀಡಲಾಗುವುದು.

👉 ಸೆಪ್ಟೆಂಬರ್ 06ಕ್ಕೆ ಫಲಿತಾಂಶ ಹೊರಡಿಸಲಾಗುವುದು.

✍️ ತೀರ್ಪುಗಾರರ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:- 

*ಪರಮೇಶ.ಡಿ.ವಿಳಸಪೂರೆ*
ಜಿಲ್ಲಾ ಕಾರ್ಯದರ್ಶಿ/ಬಳಗದ ನಿರ್ವಾಹಕರು +91 80506 83835
*ರೋಹಿಣಿ ಬೀರಾದರ್*
ಮಹಿಳಾ ಕಾರ್ಯದರ್ಶಿ/ಬಳಗದ ನಿರ್ವಾಹಕರು+91 93533 15077

*ಅಂಜನ್ ಕುಮಾರ್*
ರಾಜ್ಯ ಅಧ್ಯಕ್ಷರು +91 74831 46697

 *ಅಶ್ವಜೀತ ದಂಡಿನ* 
 ಜಿಲ್ಲಾಧ್ಯಕ್ಷರು 

 *ಅಜೇಯ್.ಪಿ.ಎಸ್*
ಜಿಲ್ಲಾ ಉಪಾಧ್ಯಕ್ಷರು

 *ಪರಮೇಶ.ಡಿ.ವಿಳಸಪೂರೆ* 
ಜಿಲ್ಲಾ ಕಾರ್ಯದರ್ಶಿ

*ಸುನೀತಾ.ಎಸ್.ಪಾಟೀಲ*
ಜಿಲ್ಲಾ ಸಹಾ ಕಾರ್ಯದರ್ಶಿ

*ರೋಹಿಣಿ ಬೀರಾದರ್*
ಜಿಲ್ಲಾ ಮಹಿಳಾ ಕಾರ್ಯದರ್ಶಿ

*ಸಂಗೀತಾ ಕಲಬುರ್ಗೆ*
ಜಿಲ್ಲಾ ಜಂಟಿ ಕಾರ್ಯದರ್ಶಿ

*ಉಮೇಶ್ ಬಾಬು ಮಠದ್ (ಉಬಾಮ)* 
ಜಿಲ್ಲಾ ಕೋಶಾಧಿಕಾರಿ

*ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ*

*ಪ್ರತಿಭೆ ನಿಮ್ಮದು ಪ್ರೋತ್ಸಾಹ ನಮ್ಮದು*


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗುರುವಾರ, ಆಗಸ್ಟ್ 26, 2021

ಹೆಚ್ ನರಸಿಂಹಯ್ಯನವರ 'ತೆರೆದ ಮನೆ' - ಒಂದು ಅವಲೋಕನ (ವಿಮರ್ಶೆ) - ಶ್ರೀಮತಿ ಗಿರಿಜಾ ಮಾಲಿ‌ ಪಾಟೀಲ.


ಹೆಚ್ ನರಸಿಂಹಯ್ಯನವರ 'ತೆರೆದ ಮನೆ'  - ಒಂದು ಅವಲೋಕನ.

"ಪುರಾಣ ಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ಸಂತಃ ಪರೀಕ್ಷಾ ಅನ್ಯತರತ್ ಭಜಂತೆ ಮೂಢಃ ಪರಪ್ರತ್ಯನೇಯ ಬುದ್ಧಿಃ” 

                             “ಭ್ರೂಣದಿಂದ ಸಮಾಧಿಯವರೆಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಕೇವಲ ತರಗತಿಯ ನಾಲ್ಕು ಗೋಡೆಗಳಿಗಷ್ಟೆ ಎಲ್ಲ ಕಲಿಕೆ ಸೀಮಿತ ಎಂಬ ತಪ್ಪು ಕಲ್ಪನೆಯಿದೆ. ಚುರುಕಾದ ಪರಿಶೀಲನೆಯುಳ್ಳ ವ್ಯಕ್ತಿಯ ಸೂಕ್ಷ್ಮಸಂವೇದಿ ಮನಸ್ಸು ಬದುಕಿನ ಪ್ರತಿಯೊಂದು ಘಟನೆಯಿಂದಲೂ ಕಲಿಯಬಹುದು” ಹೌದು ಈ ವಿಚಾರ ನಮ್ಮ ಕರ್ನಾಟಕದ ಖ್ಯಾತ ವೈಚಾರಿಕ ಚಿಂತಕರಾದ ಎಚ್. ನರಸಿಂಹ್ಯನವರದೆ, ಇವರ ‘ತೆರೆದ ಮನ’ ಎನ್ನುವ ಕೃತಿ ಅವರ ಮುಕ್ತ ಹಾಗೂ ವೈಚಾರಿಕ ಮನಸ್ಸಿನ ಪ್ರತಿಬಿಂಬವಾಗಿದೆ. ಎಲ್ಲಾ ಕಾಲಕ್ಕೂ ಪ್ರಸ್ತುತವೆನ್ನಿಸುವ ಇವರ ವಿಚಾರದಾರೆ ಜನಮಾನಸದಲ್ಲಿ ಬೇರೂರಿ ದೇಶ ಅಭಿವೃದ್ಧಿಯ ಪಥದತ್ತ ಸಾಗಲಿ ಎನ್ನುವುದು ನಮ್ಮ ನಿಮ್ಮೆಲ್ಲರ ಕನಸು ಅಲ್ಲವೆ? ಪ್ರಚಲಿತ ಸನ್ನಿವೇಶಕ್ಕೂ ಅಗತ್ಯ ಮತ್ತು ಅನಿವಾರ್ಯವೆನ್ನಿಸುವ ಇವರ ಚಿಂತನೆ ತುಂಬಾ ಮೌಲ್ಯಯುತವಾದದ್ದು.
ಸ್ವಾರ್ಥಕ್ಕಾಗಿ ಬದುಕುವವರು ಸಾಕಷ್ಟು ಜನರಿತ್ತಾರೆ ಆದರೆ ಸಮಾಜಕ್ಕಾಗಿ ಬದುಕುವವರು ಬೆರಳೆಣಿಕೆಯಷ್ಟು ಮಾತ್ರ ಹೌದು ಎಚ್.ನರಸಿಂಹಯ್ಯನವರ ತೆರೆದ ಮನ ಕೃತಿ ಓದುತ್ತಾ ನಾನು ತುಂಬಾ ಭಾವುಕಳಾದೆ ನಿಜ ಕೆಲವರು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದನ್ನು ನೋಡಿದಾಗ ತುಂಬಾ ಅಚ್ಚರಿಯಾಗುತ್ತದೆ. ಇಲ್ಲಿ ಎಚ್. ನರಸಿಂಹಯ್ಯನವರೂ ಸಹ ಅಂತಹದ್ದೆ ಒಂದು ಮೇರು ವ್ಯಕ್ತಿತ್ವ. ಸಮಾಜಿಕ ಬದುಕಿಗಾಗಿ ತಮ್ಮ ವಯ್ಯಕ್ತಿಕ ಬದುಕನ್ನು ಸಂಪೂರ್ಣವಾಗಿ ತ್ಯಾಗ ಮಾಡಿದ್ದಾರೆ. ದೇಶ ಪ್ರೇಮಿ, ಶಿಕ್ಷಣ ಪ್ರೇಮಿ ಅಭಿವೃದ್ದಿಯ ಹರಿಕಾರನಾಗಿ ಇವರ ಸೇವೆ ಅಜರಾಮರ. 
ಅಧ್ಯಾಪಕರಾಗಿ ವಿದ್ಯ್ಯಾರ್ಥಿಗಳ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿರುವ ಇವರು “ಮುಕ್ತ ಮನಸ್ಸಿದ್ದು, ವಿದ್ಯಾರ್ಥಿಗಳನ್ನು ಅಪ್ರಬುದ್ಧರು ಹಾಗೂ ಬೇಜವಾಬ್ದಾರರೆಂದು ಪರಿಗಣಿಸದೆ ಇದ್ದರೆ, ಮಲಿನವಾಗದ, ತಾಜಾ ಯುವ ಮನಸ್ಸುಗಳಿಂದ ಹೊಸ ಸಲಹೆಗಳನ್ನು ಸ್ವೀಕರಿಸಲು ಸಾಧ್ಯ.” ಎನ್ನುತ್ತಾರೆ. ಅಧ್ಯಪಕ ಮತ್ತು ವಿಧ್ಯಾರ್ಥಿಯ ನಡುವಿನ ಸಂಬಂಧವನ್ನು ವಿಶ್ಲೇಷಿಸುತ್ತ ಅಮೇರಿಕಾದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಕುರಿತು ಮಾತನಾಡುತ್ತಾರೆ. “ಅಮೇರಿಕನ್ ಅಧ್ಯಾಪಕ ನನಗೆ ಕಂಡದ್ದು ಹೀಗೆ “ಆತ್ಮ ಸಾಕ್ಷಿಗೆ ನಿಷ್ಠುರವಾಗಿರುವ ಆತ್ಮಗೌರವ ಮತ್ತು ಸ್ವಯಂಶಿಸ್ತಿಗೆ ಬೆಲೆ ಕೊಡುವ ತನ್ನ ಕರ್ತವ್ಯಕ್ಕೆ ಸಮರ್ಪಿಸಿಕೊಂಡ ಸಮರ್ಥ ವ್ಯಕ್ತಿ.” ನಿಜ “ಅಮೇರಿಕಾದ ಹಿರಿಮೆ ಮೇಲ್ವಿಚಾರಕರಿಲ್ಲದೆ ಕೆಲಸ ಮಾಡುವುದರಲ್ಲಿದೆ. ತದ್ವಿರುದ್ಧವಾಗಿ ನಮ್ಮ ದೇಶದಲ್ಲಿ ಕೆಲಸಗಾರರಿಗಿಂತ ಹೆಚ್ಚಿಗೆ ಮೇಲ್ವಿಚಾರಕರಿದ್ದಾರೆ.” ಎಂದು ಹೇಳಿರುವುದು ತುಂಬ ಚಿಂತನೆಗೆ ಹಚ್ಚುವ ಸಂಗತಿಯಾಗಿದೆ.
  ತಮ್ಮ ಬದುಕಿನ ಅನುಭವಗಳನ್ನು ಹೇಳುತ್ತಲೆ ಸಮಾಜದಲ್ಲಿರುವ ಮೂಢ ನಂಬಿಕೆಗಳಿಗೆ ಚಾಟಿ ಬೀಸುತ್ತಾರೆ. “ಶಿಕ್ಷಣ ಪಡೆದು ಮೂಢನಂಬಿಕೆಯನ್ನು ಹೊಂದಿರುವ ವ್ಯಕ್ತಿ, ಶಿಕ್ಷಣ ಪಡೆಯದೆ ಮೂಡನಂಬಿಕೆಯನ್ನು ಹೊಂದಿರುವವನಿಗಿಂತ ಹೆಚ್ಚು ಅಪಾಯಕಾರಿ” ಎನ್ನುತ್ತಾರೆ.
ಪ್ರತಿಯೊಂದು ವಿಷಯಗಳಲ್ಲಿ ತಮ್ಮ ದೃಢವಾದ ನಿಲುವನ್ನು ವ್ಯಕ್ತ ಪಡಿಸುವ ಎಚ್.ನರಸಿಂಹಯ್ಯನವರು ಪತ್ರಿಕೆಗಳ ಕುರಿತು ಮಾತನಾಡುತ್ತ “ಪತ್ರಿಕೆಯಲ್ಲಿ ಪ್ರಕಟವಾಗುವ ಯಾವ ಸುದ್ದಿಯೂ ಕಸ ಆಗಬಾರದು” ಎನ್ನುವುದು ಇವರ ಅಭಿಮತ. “ಸುಳ್ಳನ್ನೂ ನಾಲ್ಕು ಜನ ಹೇಳಿ, ದಪ್ಪಕ್ಷರದಲ್ಲಿ ನಾಲ್ಕು ಸಲ ಪ್ರಕಟವಾದರೆ ಆ ಸುದ್ದಿ ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಕಾಣುತ್ತದೆ. ಯೋಚನೆ ಮಾಡಲೂ ಸಹ ತಯಾರಿಲ್ಲದ ಜನಗಳು, ಯಾರೋ ಹೇಳಿದ್ದನ್ನೆಲ್ಲಾ ಕೇಳುವ ಜನಗಳು, ಬರೆದಿದ್ದನ್ನೆಲ್ಲಾ ನಂಬುವ ಸಂಪ್ರದಾಯವದಿ ಜನಗಳೇ ನಮ್ಮಲ್ಲಿ ಅಸಂಖ್ಯಾತ ಮಂದಿ ಇದ್ದಾಗ ಸುಳ್ಳು ಪ್ರಕಟಣೆಗಳಿಂದ ಎಂತಹ ಅನಾಹುತ ಆಗುವುದು ಎಂದು ಹೇಳಬೇಕಾದ ಅವಶ್ಯಕತೆ ಇಲ್ಲ.”  ಹಾಗೆ ಮುಂದುವರೆದು “ಎಲ್ಲಾ ವಿಧಿ ಲಿಖಿತ ಎಂಬ ಸಿದ್ಧಾಂತಕ್ಕೆ ಬಹು ಜನರು ಶರಣುಹೋಗಿದ್ದಾರೆ. ನಮ್ಮ ಭವಿಷ್ಯವನ್ನು ರೂಪಿಸುವುದು ನಮ್ಮ ಕೈಯಲ್ಲಿಯೇ ಇದೆ, ಸಮಾಜವನ್ನೂ ಬದಲಾವಣೆ ಮಾಡುವ ಶಿಲ್ಪಿಗಳು ನಾವು. ಎಂದು ಆತ್ಮವಿಶ್ವಾಸ ಹುಟ್ಟಿಸುವ ಧೈರ್ಯಶಾಲಿ, ಧೀಮಂತ, ಗಂಡು ಲೇಖನಗಳ ಸಂಖ್ಯೆ ಹೆಚ್ಚಾಗಬೇಕು” ಎನ್ನುವುದು ಇವರ ಅಭಿಮತ
ಹಾಗೆಯೇ ವಿಧ್ಯಾರ್ಥಿ ಮತ್ತು ಅಧ್ಯಾಪಕನ ಕುರಿತು ವಿಸ್ತೃತವಾಗಿ ಮಾತನಾಡುವ ಇವರು “ಅಧ್ಯಾಪಕನಾದವನು ನಿರಂತರವಾಗಿ ಸಂಶೋಧನೆಯಲ್ಲಿ ನಿರತನಾಗಿದ್ದು ಹೊಸ ವಿಷಯಗಳನ್ನು ಗ್ರಹಿಸುತ್ತಿರಬೇಕು. ವಿದ್ಯಾರ್ಥಿಗಳು ವೇದಿಕೆಯ ಮೇಲಿಂದ ತೋರುವ ಆಕಾರ ರಹಿತ ಗುಂಪೆಂದು ತಿಳಿಯದೆ, ಸ್ನೇಹಿತರೆಂದು ಭಾವಿಸಬೇಕು.” 
ವಿಜ್ಞಾನ ಮತ್ತು ಸಮಾಜ ಎನ್ನುವ ಲೇಖನದಲ್ಲಿ “ಭಯ ಮತ್ತು ಅಜ್ಞಾನಗಳಿಂದ ರೂಪಿತವಾಗಿರುವ ಮೂಢನಂಬಿಕೆಗಳು, ಆತ್ಮವಿಶ್ವಾಸವನ್ನು ಖಂಡಿಸುತ್ತವೆ. ಸ್ವತಂತ್ರ ಆಲೋಚನೆಗಳನ್ನು ಮೊಟಕುಗೊಳಿಸುತ್ತವೆ. ಮಾಟ ಮಂತ್ರದಂತಹ ಪ್ರಗತಿವಿರೋಧೀ ಚಟುವಟಿಕೆಗಳೂ ನಮ್ಮ ಸಮಾಜಕ್ಕೆ ಹೆಚ್ಚಿನ ಆಘಾತವನ್ನುಂಟುಮಾಡಿವೆ.” ಎನ್ನುವ ಅವರ ನಿಲುವನ್ನು ವ್ಯಕ್ತ ಪಡಿಸಿದ್ದಾರೆ.
ಡಾ. ಎಚ್. ನರಸಿಂಹಯ್ಯನವರು ಬೆಂಗಳೂರಿನ ಹೆಸರಾಂತ ಭೌತಶಾಸ್ತçಜ್ಞರೂ, ಶಿಕ್ಷಣ ತಜ್ಞರೂ ಆಗಿದ್ದರು. ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಭೌತಶಾಸ್ತçದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅಮೇರಿಕಾ ದೇಶದಲ್ಲಿ ಓಹಯೋ ವಿಶ್ವವಿಧ್ಯಾಲಯದಲ್ಲಿ ಪರಮಾಣು ಭೌತಶಾಸ್ತçದಲ್ಲಿ ಪದವಿಯನ್ನು ಪಡೆದರು. 
 ಇತಂಹ ಮಹಾನ್ ಮುತ್ಸದ್ದಿಗಳು ಜನಿಸಿದ್ದು ಜೂನ್ ೬ ೧೯೨೦ ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರಿನಲ್ಲಿ. ಇಂತಹ ವೈಚಾರಿಕ ಲೇಖನಗಳಿಂದಲೇ ಪ್ರಸಿದ್ದಿ ಪಡೆದಿದ್ದಾರೆ. ಇವರ ಮೇಲೆ ಮಹಾತ್ಮ ಗಾಂಧಿಯ ಪ್ರಭಾವ ಹೆಚ್ಚಾಗಿದ್ದು ಸ್ವಾತಂತ್ರ ಚಳುವಳಿಯಲ್ಲೂ ಕೆಚ್ಚದೆಯಿಂದ ಹೋರಾಡಿ ಸೆರೆಮನೆ ವಾಸ ಅನುಭವಿಸಿದ ಇವರ ದೇಶಪ್ರೇಮವನ್ನು ಮೆಚ್ಚಲೇಬೇಕು.
 ಇವರ ಕೃತಿಗಳು ತೆರೆದ ಮನ ಹಾಗೂ ಹೋರಾಟದ ಹಾದಿ. ತಮ್ಮ ಎರಡೂ ಕೃತಿಗಳಲ್ಲಿ ಇವರ ಸಾರ್ಥಕ ಬದುಕಿನ ಹೆಜ್ಜೆಗಳು ಓದುಗನ ಎದೆಯಲ್ಲಿ ಚಲಗಾರಿಕೆಯನ್ನು ಹೆಚ್ಚಿಸುತ್ತವೆ.  
ತೆರೆದ ಮನ ಎನ್ನುವ ಅವರ ಈ ಕೃತಿಯಲ್ಲಿ ಹಲವಾರು ಅಧ್ಯಾಯಗಳ ಮೂಲಕ ಸಾಕಷ್ಟು ವಿಷಯ ವಸ್ತುಗಳನ್ನು ಮಂಡನೆ ಮಾಡಿದ್ದಾರೆ. ತಮ್ಮ ಬದುಕಿನ ಅನುಭವಗಳನ್ನು ತುಂಬಾ ಯಶಸ್ವಿಯಾಗಿ ಕಟ್ಟಿಕೊಟ್ಟಿದ್ದಾರೆ. ಕಾಲೇಜಿನ ದಿನಗಳಲ್ಲಿನ ಹೋರಾಟದ ಕಿಚ್ಚು ಕೃತಿಯ ಉದ್ದಕ್ಕೂ ಹಾಸುಹೊಕ್ಕಾಗಿ ಮೂಡಿಬಂದಿದೆ. 
ಧರ್ಮದ ಕುರಿತಾಗಿ ಮಾತನಾಡುತ್ತ ಇವರು ಹೇಳುವ ವಿಚಾರ ತುಂಬಾ ಮೌಲ್ಯಯುತವಾಗಿದೆ. “ಪುರಾಣ ಮಿತ್ಯೇವ ನ ಸಾಧು ಸರ್ವಂ ನ ಚಾಪಿ ಕಾವ್ಯಂ ನವಮಿತ್ಯವದ್ಯಂ ಸಂತಃ ಪರೀಕ್ಷಾö್ಯ ಅನ್ಯತರತ್ ಭಜಂತೆ ಮೂಢಃ ಪರಪತ್ಯೇಯ ಬುದ್ಧಿಃ” ಅಂದರೆ ಹಳೆಯದು ಎಂಬ ಕಾರಣದಿಂದಲೇ ಎಲ್ಲವೂ ಸರಿಯಲ್ಲ. ಹೊಸದು ಎಂಬ ಕಾರಣದಿಂದಲೇ ಕಾವ್ಯವನ್ನಿ ತಿರಸ್ಕರಿಸಬೇಕಾಗಿಲ್ಲ. ಸತ್ಪುರುಷರು ಯ್ಯೋಗ್ಯತೆಯನ್ನು ಪರೀಕ್ಷಿಸಿ ಸ್ವೀಕರಿಸುತ್ತಾರೆ. ಆದರೆ ಇತರರ ಅಭಿಪ್ರಾಯದಂತೆ ಎಳೆಯಲ್ಪಡುವ ಬುದ್ದಿಯುಳ್ಳವನು ಮೂರ್ಖ.” ಇಷ್ಟಕ್ಕೆ ನಿಲ್ಲದೆ ಹಣೆ ಬರಹ, ಜಾತಕ, ಪವಾಡಗಳನ್ನು ಕುರಿತು ತುಂಬಾ ತಾರ್ಕಿಕವಾದ ತಮ್ಮ ವಾದವನ್ನು ಮಂಡಿಸುತ್ತಾರೆ.
ಮಾತೃಭಾಷೆಯ ಪ್ರಾಮುಖ್ಯತೆಯನ್ನು ಹೇಳುವಾಗಲಂತೂ ಗಾಂಧಿಜಿಯವರ ಅಭಿಪ್ರಯಾವನ್ನು ಅನುಮೋಧಿಸುತ್ತಾರೆ. “ಒಂದು ವಿಷಯವನ್ನು ತಿಳಿದುಕೊಳ್ಳಬೇಕಾದರೆ ಅದು ಮಾತೃಭಾಷೆಯ ಮೂಲಕ ಮಾತ್ರ ಸಾಧ್ಯ” ಎನ್ನುತ್ತಾರೆ.
ಬದುಕನ್ನು ಅತೀವವಾಗಿ ಪ್ರೀತಿಸುವವರು ಮಾತ್ರ ಅತ್ಯುನ್ನತ ಸಾಧನೆ ಮಾಡುತ್ತಾರೆ ಎನ್ನುವುದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಎಚ್. ನರಸಿಂಹಯ್ಯನವರು ನಮ್ಮ ಮುಂದಿದ್ದಾರೆ. ಸಂಸಾರ ಚೌಕಟ್ಟಿಗೆ ಬಹುದೂರವಾಗಿ ಬದುಕಿದರೂ ಎಷ್ಟೆಲ್ಲಾ ವಿಧವಿಧವಾಗಿ ಬದುಕನ್ನು ಅಸ್ವಾದಿಸಿದ್ದಾರೆ. ಎಷ್ಟೆಲ್ಲ ಜನರನ್ನು ತುಂಬು ಹೃದಯದಿಂದ ಪ್ರೀತಿಸಿದ್ದಾರೆ. ಇಡೀ ಸಮಾಜ, ದೇಶ, ತಮ್ಮ ವಿಧ್ಯಾರ್ಥಿ ವೃಂಧವನ್ನೇ ತಮ್ಮ ಕುಟುಂಬವೆಂದು ಭಾವಿಸಿ ಬದುಕಿದ ಮಹಾನುಭಾವನಿಗೆ ನಾನಂತೂ ಹೃದಯ ತುಂಬಿ ವಂದಿಸುತ್ತೇನೆ.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ಧೇಶ್ವರ ಸಾಹಿತ್ಯ ವೇದಿಕೆ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಚಿಟಿಗೆವ್ವನೆಂಬ ದೇವತೆಯ ವಿಧಿಲಿಖಿತ (ಲೇಖನ) - ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.

  ಚಿಟಿಗೆವ್ವನೆಂಬ ದೇವತೆಯ ವಿಧಿಲಿಖಿತ 

    ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಹಳೆಯ ಆಚಾರ ವಿಚಾರಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜೀವಂತಿಕೆ ಇದೆ.ಸಹಜವಾಗಿ ಇಂದಿನ ನಮ್ಮ ತಲೆಮಾರಿನವರಿಗೆ ಅವೆಲ್ಲಾ ಈಗಿನ ಕಾಲಕ್ಕೆ ಅನ್ವಯವಾಗೋಲ್ಲ ,ಅಂತಹ ಪದ್ದತಿಗಳಿಂದ ಏನೂ ಪ್ರಯೋಜನವಿಲ್ಲ. ವಿಜ್ಞಾನ ತುಂಬಾ ಮುಂದುವರಿದಿದೆ ಹಾಗೆ ,ಹೀಗೆ ಎನ್ನುವ ವಿಚಾರಗಳು ಸರ್ವೇ ಸಾಮಾನ್ಯ.ನಮ್ಮ ಕರ್ನಾಟಕ ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಶಿಶು ಜನಿಸಿದ ಮೂರನೇ ದಿನಕ್ಕೆ ಆಚರಿಸುವ ಒಂದು ವಿಶಿಷ್ಟ ಆಚರಣೆ ಅದುವೇ ಈರ್ಲ ಪೂಜೆ ಅಥವಾ  ಚಿಟಿಗೆವನ ಪೂಜೆ. ಗ್ರಾಮೀಣ ಭಾಗದಲ್ಲಿ ಆಚರಿಸುವ ಈ ಪೂಜೆಯ ಬಗ್ಗೆ ಬರೆಯಬೇಕು ಅನಿಸಿತು .ಆದರೆ ನಗರ ಪ್ರದೇಶಗಳಲ್ಲಿ ಇಂತಹ ಆಚರಣೆಗಳು ಕಡಿಮೆ ಎನ್ನಬಹುದು .
              ಜನಪದ ಕಥೆಗಳ ಪ್ರಕಾರ ಚಿಟಿಗೆವ್ವ   ಪೌರಾಣಿಕ ಕಥೆಯಲ್ಲಿ ಬರುವ ಒಬ್ಬ ದೇವತೆ. ತಾಯಿ ಗರ್ಭದಿಂದ ಶಿಶು ಜನ್ಮ ಪಡೆದ ನಂತರ ಮೂರನೇ ದಿವಸ ಈ ದೇವತೆ ಬಂದು ಆ ಶಿಶುವಿನ ಹಣೆಬರಹ ಬರೆಯುತ್ತಾಳೆ ಎಂಬ ನಂಬಿಕೆ .ನಮ್ಮ ಕುಟುಂಬದಲ್ಲಿ ನಡೆದ ನವಜಾತ ಶಿಶುವಿನ ಮೂರನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ  ಚಿಟಿಗೆವ್ವನ ಹಣೆಬರಹದ ಬಗ್ಗೆ ಜನಪದ ಕತೆಯ ಬಗ್ಗೆ ಮಾತಾಡ್ತಾ ಇದ್ರು. ಚಿಟಿಗೆವ್ವ ಬರೆದ ಹಣೆಬರಹವನ್ನು ಹರಿ ಹರಬ್ರಹ್ಮ ರಿಂದಲೂ ಬದಲಿಸಲು ಸಾಧ್ಯವಿಲ್ಲವಂತೆ, ಸ್ವತಃ ತನ್ನ ಮಗಳ ಹಣೆ ಬರಹವನ್ನು ಬರೆದ ಚಿಟಿಗೆವ್ವ ನಂತರ
  ಪಶ್ಚಾತಾಪ ಪಟ್ಟರು ಬದಲಿಸಲು ಸಾಧ್ಯವಾಗಲಿಲ್ಲ ಎನ್ನುವುದಕ್ಕೆ ಒಂದು ದೃಷ್ಟಾಂತದ ಬಗ್ಗೆ ತಿಳಿಸಿದರು .ಒಂದು ಸಾರಿ ಚಿಟಿಗೆವ್ವನ  ಕುಟುಂಬದಲ್ಲಿ ಆಕೆಯ ಮಗಳಿಗೆ ಹೆಣ್ಣುಶಿಶುವಿನ ಜನನವಾಯಿತು. ಮೂರನೆಯ ದಿನಕ್ಕೆ  ಚಿಟಿಗೆವ್ವಾ ವಿಧಿಬರಹ ಬರೆಯುತ್ತಾಳೆ, ಎನ್ನುವುದನ್ನು ಅರಿತ ಆಕೆಯ ಮಾವ ಆ ಹಣೆಬರಹದ ಬಗ್ಗೆ ತಿಳಿಯಲೇಬೇಕು ಎಂದು ನಿರ್ಧರಿಸಿ, ಚಿಟಿಗೆವ ಬರುವ ವೇಳೆ ಬಾಗಿಲಿಗೆ 'ಒನಕೆ'ಯನ್ನು ಅಡ್ಡಲಾಗಿ ಇಡುತ್ತಾನಂತೆ .ಎಷ್ಟೇ ಹೇಳಿದರೂ ಒನಕೆಯನ್ನು ತೆಗೆಯುವುದಿಲ್ಲ. ಕಾರಣ ಕೇಳಿದಾಗ ನೀನು ಈಗ ಬರೆಯುವ ವಿಧಿಲಿಖಿತದ ಬಗ್ಗೆ ನನಗೆ ತಿಳಿಸಬೇಕು, ಇಲ್ಲದಿದ್ದರೆ ನಾನು ನಾನು ಒನಕೆಯನ್ನು ತೆಗೆಯುವುದಿಲ್ಲ ಎಂದಾಗ, ಅನಿವಾರ್ಯವಾಗಿ  ಮಾವನಿಗೆ ಭಾಷೆ ಕೊಡುತ್ತಾಳೆ. ನಾನು ಬರೆದ ವಿಧಿಲಿಖಿತದ ಬಗ್ಗೆ ನಿಮಗೆ ತಿಳಿಸುವೆ ಎಂದು ಹೇಳಿ ಅದರ ಒಳ ಬರುತ್ತಾಳೆ .ತನ್ನ ಮಗಳ ಹಣೆ ಬರಹವನ್ನು ಬರೆದ ಚಿಟಿಗೆವ್ವಾ ಮಾವನಿಗೆ ಕೊಟ್ಟ ಮಾತಿನಂತೆ ಬರೆದ ಬರಹವನ್ನು ಹೇಳಿದಳು "ನಿನ್ನ ಮಗನ ಮದುವೆ ಸಂದರ್ಭದಲ್ಲಿ ನೀನು ದಾರಿ ತಪ್ಪಿ ನಡೆದು ಕುಲಕ್ಕೆ ಕಂಟಕಳಾಗುವಿ"  ಎಂದು ಬರೆದಿದ್ದಳು .ಅದನ್ನು ಕೇಳಿ ಮಾವನಿಗೆ ತುಂಬಾ ನೋವಾಯಿತು. ಇದು ನಮ್ಮ ಮನೆತನದ ಕುಡಿ ಇದರಿಂದ ಮನೆತನದ ಗೌರವಕ್ಕೆ ಕುತ್ತು ಬರುತ್ತದೆ ಇದನ್ನು ಬದಲಿಸು ಎಂದು ಪರಿಪರಿಯಾಗಿ ಕೇಳಿದ .ಒಮ್ಮೆ ಬರೆದ ಬರಹವನ್ನು ಬದಲಿಸಲು  ತನ್ನಿಂದ ಅಸಾಧ್ಯವೆಂದಳು.ಅನಂತರ ತನ್ನಿಂದ ತನ್ನ ಕುಡಿಗೆ ಅನ್ಯಾಯ ಮಾಡಿದೆ  ಎಂದೆನಿಸಿ ಪರಶಿವನ ಬಳಿ ಬರುತ್ತಾಳೆ. ಆದರೆ ಶಿವನು ನೀನು ಬರೆದ ಈ ವಿಧಿಲಿಖಿತವನ್ನು  ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಆಯಾ ಕಾಲಕ್ಕೆ ಏನೇನು ನಡೆಯಬೇಕೆಂದು ಬರೆದಿರುವೆ ಅದು ನಡೆಯುತ್ತದೆ ಎಂದು ತಿಳಿಸಿದನಂತೆ .ಈ ರೀತಿಯಾಗಿ  ತನ್ನ ಮಗಳ ಹಣೆಬರಹ ಬರೆದಂತೆ ಆಕೆ ಮಗನ ಮದುವೆಯ ಸಂದರ್ಭ ಕುಲಕ್ಕೆ ಕಂಟಕವಾದಳು ಎನ್ನುವ ದಂತ ಕಥೆಯನ್ನು ಹೇಳಿದರು.ಇದೇ ರೀತಿಯ ಬೇರೆ ಬೇರೆ ದಂತಕಥೆಗಳು ಇರಬಹುದೇನೋ ಈ ಸಂದರ್ಭದಲ್ಲಿ ಈ ದಂತಕಥೆಯ ಬಗ್ಗೆ ಮಾಹಿತಿ ತಿಳಿಯಿತು .
                 ತಮ್ಮ ಮಗುವಿನ ವಿಧಿಲಿಖಿತ ಭವಿಷ್ಯ ಚೆನ್ನಾಗಿರಲಿ ಎನ್ನುವ ಸದುದ್ದೇಶದಿಂದ ಗ್ರಾಮೀಣ ಭಾಗದ ಜನರು ವಿಶೇಷವಾಗಿ ಈ ಪೂಜೆ ಆಚರಿಸುತ್ತಾರೆ .ಈ ಪೂಜೆಯ ವಿಧಾನಗಳೆಂದರೆ ಅಂದಿನ ದಿನ ಬಾಣಂತಿ ಮತ್ತು ಮಗುವಿನ ಶುಚಿರ್ಭೂತರಾದ ಮೇಲೆ  
ಮನೆಯನ್ನು ಶುಭ್ರ ಗೊಳಿಸುತ್ತಾರೆ . ಒಂದು ಹೊಸ  ಮರದ ಮೇಲೆ ಜೋಳದ ಧಾನ್ಯ ಹಾಕಿ, ಅದರ ಮೇಲೆ ಹೊಸ ವಸ್ತ್ರವನ್ನು ಹಾಕಿ, ಅದರ ಮೇಲೆ ನವಜಾತ ಶಿಶುವನ್ನು ಮಲಗಿಸಿ, ದೇವರಮನೆಯಲ್ಲಿ  ಜಗಲಿಯ ಮುಂದೆ ಭಕ್ತಿಯಿಂದ ಪ್ರಾರ್ಥಿಸುತ್ತಾರೆ . ಚೀಟಿಗೆವ್ವನ ವಿಧಿಲಿಖಿತದ ಆಚರಣೆ ಮಾಡುತ್ತಿದ್ದೇವೆ. ನಮ್ಮ ಕಂದನಿಗೆ ಒಳಿತನ್ನು ಬಯಸು ಭಗವಂತ ಎಂದು ಬೇಡಿಕೊಳ್ಳುತ್ತಾರೆ. ನಂತರ ಬಾಣಂತಿ ಮಲಗಿದ್ದ ವರಸಿನ ಕೆಳಗೆ ಚಿಟಿಗೆವನ ಸಂಕೇತವಾಗಿ "ರುಬ್ಬುವ ಗುಂಡನ್ನು" ಪೋಷಿಸುತ್ತಾರೆ. ಅದುವೇ "ಚಿಟಿಗೆವ್ವನಪೂಜಾ ವಿಗ್ರಹ" .ನೆಲ ಸಾರಿಸಿ, ಜೋಳ ಹಾಕಿ, ಅದರ ಮೇಲೆ  ಪೂಜಾ ವಿಗ್ರಹ ಇಟ್ಟು ಅದಕ್ಕೆ ಪೂಜೆ ಸಲ್ಲಿಸುತ್ತಾರೆ .ಈ ಪೂಜೆ ಮಾಡುವವರು ಸೂಲಗಿತ್ತಿಯವರು ಮಾತ್ರ. ವಾಸ್ತವವಾಗಿ ತಾಯಿ ಮತ್ತು ಮಗುವಿನ ಕರುಳುಬಳ್ಳಿ ಬೇರ್ಪಡಿಸಿದ ಸೂಲಗಿತ್ತಿಯರು ಪೂಜೆ ಸಲ್ಲಿಸಿದರೆ ಶ್ರೇಷ್ಠ ಎನ್ನುವ ನಂಬಿಕೆ .ಅನಂತರ ಬಾಣಂತಿಗೆ ಮತ್ತು ಮಗುವಿಗಾಗಿ ಕಾಡಿಗೆ ತಯಾರಿಸುವ ವಿಶೇಷ ತಯಾರಿಯನ್ನು ಸೂಲಗಿತ್ತಿಯಾದಂತಹ ಮಹಿಳೆ ಮಾಡುತ್ತಾಳೆ .ಲವಂಗ, ಮೆಣಸು,ಬಜೆಬೇರು, ಬೆಳ್ಳುಳ್ಳಿ, ಕರಿಎಲೆ ತುಂಬು ಇವುಗಳನ್ನು ಒಂದೊಂದೇ ದೀಪಕ್ಕೆ ಹಿಡಿದು ಸುಟ್ಟು ಒಂದು ಚಾಕುವಿನ ಮೇಲೆ ಸಂಗ್ರಹಿಸಿ, ಅದಕ್ಕೆ ಹರಳೆಣ್ಣೆ ಹಾಕಿ ಕಾಡಿಗೆ ತಯಾರಿಸಿ, ಅದನ್ನು ಬಾಣಂತಿಯರ ಕಣ್ಣುಗಳಿಗೆ ಹಚ್ಚುವುದು ವಿಶೇಷ . ಇದರಿಂದ ಕಣ್ಣಿನ ದೋಷಗಳು ನಿವಾರಣೆಯಾಗುತ್ತವೆ ಅಲ್ಲದೆ ನವಜಾತ ಶಿಶುವಿಗೆ ಹಣೆ ಮತ್ತು ಹುಬ್ಬುಗಳನ್ನು ಅದೇ ಕಾಡಿಗೆಯಿಂದ ಮೊದಲ ಬಾರಿಗೆ ಅಲಂಕಾರಕ್ಕಾಗಿ ಬಳಸುವ ವಿಶಿಷ್ಟ ಪದ್ಧತಿ. ಅಲ್ಲಿಯವರೆಗೆ ಆ ಶಿಶುವಿಗೆ ಯಾವುದೇ ಅಲಂಕಾರಿಕ ಕಪ್ಪನ್ನು ಹಚ್ಚಿರುವುದಿಲ್ಲ ಅನಂತರ ಪೂಜೆ ಸಲ್ಲಿಸಿದ ಚೀಟಿಗೆವ್ವನ ಸಂಕೇತದ  ಪೂಜಾ ವಿಗ್ರಹದ ಮುಂದೆ ನವಜಾತ ಶಿಶುವನ್ನು ಮಲಗಿಸಿ ಒಂದು ಬಟ್ಟಲಿನಲ್ಲಿ ತುಪ್ಪಹಾಕಿ ಬಾಣಂತಿಯು ತನ್ನ ಬಲಗೈಯ ೫ ಬೆರಳಿನ ತುದಿಗಳನ್ನು ತುಪ್ಪದಲ್ಲಿ ಅದ್ದಿ ವಿಗ್ರಹದ ಮುಂದೆ "ತುಪ್ಪದ ಧಾರೆ ತೆಗೆದುಕೊಂಡು ನನ್ನ ಕಂದನಿಗೆ ಹಾಲಿನ ಧಾರೆ ಹರಿಸುವ ತಾಯೇ" ಎಂದು ೫ ಸಾರಿ ೫ ಬೆರಳುಗಳ ತುದಿಯಿಂದ ಭೂತಾಯಿಗೆ ತಾಗಿಸುತ್ತಾಳೆ. ತಾಯಿಯು ತನ್ನ ಕಂದನ ಹಸಿವು ನೀಗಿಸಲು ಹಾಲಿನ ಉತ್ಪತ್ತಿಯನ್ನು ಹೆಚ್ಚಿಸಿ,  ಹಸಿವಿನಿಂದ ಬಳಲದಂತೆ ನನ್ನ ಕಂದನನ್ನು ಪೋಷಿಸುವ ಶಕ್ತಿಯನ್ನು ಕೊಡು ಎಂದು ಭಕ್ತಿಯಿಂದ ಬೇಡಿಕೊಳ್ಳುವ ಪದ್ಧತಿ  ವೈಶಿಷ್ಟ್ಯಪೂರ್ಣವಾದುದು .ಜಗತ್ತಿನಲ್ಲಿ ಎಷ್ಟೋ ಕಂದಮ್ಮಗಳು ತಾಯಿಯ ಎದೆ ಹಾಲಿನ ಪೂರೈಕೆ ಇಲ್ಲದೆ ಬಳಲುತ್ತಿದ್ದಾರೆ .ಒತ್ತಡದ ಜೀವನದಿಂದಾಗಿ ಅಥವಾ ಇನ್ನಾವುದೋ ಕಾರಣಗಳಿಂದ ಮಗುವಿಗೆ ಎದೆಹಾಲು ಉಣಿಸದೇ ಆಕಳ ಹಾಲನ್ನು,ಪುಡಿಹಾಲನು  ಕುಡಿಸುತ್ತಿದ್ದಾರೆ .ಈ ರೀತಿ ಮಾಡುವುದರಿಂದ ಮಕ್ಕಳು ಹಲವಾರು ಕಾಯಿಲೆಗಳಿಂದ ಬಳಲುತ್ತಾರೆ .ವೈದ್ಯರ ಸಲಹೆಯ ಪ್ರಕಾರ ನವಜಾತ ಶಿಶುವಿಗೆ ಕನಿಷ್ಠ  ಒಂದೂವರೆ ವರ್ಷದಿಂದ ೨ ವರ್ಷದವರೆಗೂ ಎದೆ ಹಾಲು ಕೊಡುವುದರಿಂದ ತಾಯಿ ಮತ್ತು ಮಗು ಆರೋಗ್ಯಯುತವಾಗಿರುತ್ತಾರೆ .  ಚೀಟಿಗೆವ್ವನ ಪೂಜಾ ಸಂದರ್ಭದಲ್ಲಿ  ಅಗೋಚರ ಶಕ್ತಿಯ ರೂಪದಲ್ಲಿ ಚಿಟಿಗೆವ್ವ ಆ ಕಂದನ ವಿಧಿಲಿಖಿತ ಅಥವಾ ಹಣೆ ಬರಹವನ್ನು ಬರೆದು  ಹೋಗುವಳು ಎಂಬ ನಂಬಿಕೆ. ವಿಧಿ ಲಿಖಿತ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ನಂಬಿಕೆಯಿಂದ ಆ ಸಂದರ್ಭದಲ್ಲಿ ಬಾಣಂತಿಯನ್ನು ಒಳಗೊಂಡು ಎಲ್ಲರೂ ಸಂತಸದಿಂದ ಪೂಜಾ ಕಾರ್ಯದಲ್ಲಿ ಭಾಗಿಯಾಗುತ್ತಾರೆ ."ಬಜೇ ಎಂಬ ಬೇರನ್ನು" ಚಿಕ್ಕ ಚಿಕ್ಕ  ಪೀಸ್‌  ಮಾಡಿ ಅದಕ್ಕೆ ದಾರ ಕಟ್ಟಿ ಎಲ್ಲರ ಕೈಗೆ  ಕಟ್ಟುತ್ತಾರೆ .ಇದನ್ನು "ಚಿಟಿಗೆವ್ವನ ಕಂಕಣ" ಎನ್ನುವುದು ವಾಡಿಕೆ.



 ಕುಟುಂಬದ ಎಲ್ಲ ಸದಸ್ಯರಿಗೂ ಈ ಚಿಟಿಗೆವ್ವನ ಕಂಕಣವನ್ನು ಕಟ್ಟುತ್ತಾರೆ.ಇದನ್ನು ಕಟ್ಟುವ ಉದ್ದೇಶ  ಮನೆಯಲ್ಲಿ ಇದೇ ರೀತಿ  ಸಂತಾನಾಭಿವೃದ್ಧಿ ಬೆಳೆಯಲಿ ಮನೆ ಯಾವಾಗಲೂ ನಗುವಿನಿಂದ ಕೂಡಿರಲಿ ಎನ್ನುವದು.ಪೂಜಾ ಕಾರ್ಯದ ನಂತರ ಸೂಜಿಯನ್ನು ಕಾಯಿಸಿ ಕೇರಿಗೆ ಚುಚ್ಚಿ  ಕೇರಿನ ರಸವನ್ನು ನವಜಾತ ಶಿಶುವಿನ ಕಾಲಿಗೆ (+)ಚಿಹ್ನೆಯನ್ನು ಹಾಕಿ ಅದಕ್ಕೆ ಬೂದಿ ಸವರುತ್ತಾರೆ .ಈ ರೀತಿ ಪ್ರತಿದಿನ ಒಂದು ವರ್ಷದವರೆಗೆ ಮಾಡುವುದರಿಂದ ಮಕ್ಕಳು ನರದೌರ್ಬಲ್ಯದಿಂದ ಬಳಲುವುದಿಲ್ಲ ಎಂಬ ತಿಳುವಳಿಕೆಯ ಮಾತನ್ನು ಹೇಳುತ್ತಾರೆ. ವೈಜ್ಞಾನಿಕವಾಗಿ ಅದು ಯಾವ ರೀತಿ ಸರಿಯೋ ಗೊತ್ತಿಲ್ಲ. ಆದರೂ ಅವರು ನಮ್ಮ ಮನೆಯ ಪ್ರತಿಯೊಂದು ಮಗುವಿಗೂ ಇದೇ ರೀತಿ ಮಾಡುತ್ತೇವೆ ಎಂದು ಹೇಳುತ್ತಾರೆ.ಎಲ್ಲಾ ಪೂಜಾ ವಿಧಾನಗಳು ಮುಗಿದ ನಂತರ ಸೂಲಗಿತ್ತಿಗೆ ಉಡಿ ತುಂಬುವ ಶಾಸ್ತ್ರ ಮಾಡುತ್ತಾರೆ ಜೋಳದ ಉಡಿಯಕ್ಕಿ ಹಾಕಿ ಆಕೆಯನ್ನು ಬೀಳ್ಕೊಡಲು ತೆರಳುತ್ತಾರೆ .ಸೂಲಗಿತ್ತಿಯೂ ತನ್ನ ಉಡಿಯಲ್ಲಿ ನಜೋಳದ ಕೆಲವು ಕಾಳುಗಳನ್ನು ಭೂತಾಯಿಗೆ ಹಾಕುತ್ತಾ" ಮುತ್ತು ಚೆಲ್ಲಿರುವೆ ಆಯ್ದುಕೊಳ್ಳಿ" ಎನ್ನುತ್ತ ಮುಂದೆ ಹೋಗುತ್ತಾಳೆ. ಅವರ ಹಿಂದೆಯೇ ಮನೆಯ ಒಡತಿ ಒಂದು ತಾಮ್ರದ ತಂಬಿಗೆಯಲ್ಲಿ ನೀರನ್ನು ಹಿಡಿದು "ಮುತ್ತು ಆಯ್ದುಕೊಳ್ಳುವೆನಮ್ಮ ಮುತ್ತು ಆಯ್ದುಕೊಳ್ಳುವೆನಮ್ಮ "ಎಂದು ನೀರನ್ನು ಪ್ರೋಕ್ಷಣೆ ಮಾಡುತ್ತಾ, ಬೀಳ್ಕೊಡುವ ರೀತಿ ವಿಶೇಷ .ನನ್ನ ಹುಡಿಯನ್ನು ಧಾನ್ಯಗಳಿಂದ ತುಂಬಿಸಿದ ನಿಮ್ಮ ಮನೆ ಧಾನ್ಯಗಳಿಂದ ಸಮೃದ್ಧಿಯಾಗಲಿ. ಹಸಿವೆಯಿಂದ ಯಾರೂ ಬಳಲದಂತೆ ಇರಲಿ ಎಂದು ಶುಭಕೋರಿ ಸೂಲಗಿತ್ತಿ ಹೋಗುವುದೇ ಒಂದು ಆಚರಣೆ.ಚಿಟಿಗೆವ್ವನ ಪೂಜೆಯ ಈ ಆಚರಣೆಯ ಸತ್ಯಾಸತ್ಯತೆಗಳು ಏನೇ ಇರಲಿ, ಒಂದು ಕುಟುಂಬದ ಎಲ್ಲ ಜನರು ಒಗ್ಗೂಡಿ ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಸಹಾಯಕವಾದಂತ ಇಂತಹ ಹಲವಾರು ಆಚರಣೆಗಳಿದ್ದರೂ ತಪ್ಪಿಲ್ಲ ಎನ್ನಸಿತು. ಆ ಸಂಭ್ರಮ, ಎಲ್ಲ ಮಕ್ಕಳ ಮೊಗದಲ್ಲಿ ನಗುವಿನ ಮಂದಹಾಸ  ಮೂಡಿಸುವ ಈ ಒಂದು ಆಚರಣೆಯಲ್ಲಿ ಭಾಗವಹಿಸಿದ್ದು ಸಂತಸವನುಂಟುಮಾಡಿತು.ಹಾಗೆಯೇ ಸುಮ್ಮನೆ ಅವರನ್ನು ಹಣೆಬರಹವನ್ನು ಬರೆಯುವುದು ಪೌರಾಣಿಕ ಕಥೆಯ ಪ್ರಕಾರ ಬ್ರಹ್ಮದೇವರು ಅಲ್ಲವೇ ?ಎಂದು ಕೇಳಿದೆ ಅದಕ್ಕೆ ಅವರು ನಮ್ಮ ದೇಶದ ಪ್ರಧಾನ ಮಂತ್ರಿಗಳು ಎಲ್ಲಾ ಕೆಲಸವನ್ನು ಅವರೇ ಮಾಡ್ತಾರಾ? ಒಂದೊಂದು ಕೆಲಸವನ್ನು ಒಬ್ಬೊಬ್ಬ ಮಂತ್ರಿಗೆ ಹಂಚಿ ಕೊಟ್ಟಿಲ್ವಾ ?ಹಾಗೆ ಬ್ರಹ್ಮದೇವರು ಸಹ ಲಕ್ಷಾಂತರ ಜೀವರಾಶಿಗಳ ಹಣೆಬರಹವನ್ನು ತಾವೇ ಬರೆದರೂ ಪ್ರತಿಯೊಬ್ಬರಿಗೂ ಒಂದೊಂದು ಕೆಲಸವನ್ನು ಹಂಚಿಕೊಟ್ಟಿದ್ದಾರೆ.ಮಾನವನ ಹಣೆಬರಹದ ಕೆಲಸವನ್ನು ಚಿಟಿಗೆವ್ವ  ಎಂಬ ದೇವತೆಗೆ ವಹಿಸಿದ್ದಾರೆ  ಎಂಬ ಅವರ  ಉತ್ತರದಿಂದ ನಾನು ನಿರುತ್ತರಳಾದೆ.ಅವರ ಜೀವನದ ಅನುಭವದ ನುಡಿ  ಆಡಳಿತ ವಿಕೇಂದ್ರೀಕರಣದ ಪಾಠ ಕಲಿಸಿತ್ತು ನನಗೆ . 

               -   ಶ್ರೀಮತಿ ಸುಮಂಗಲಾ ಕೃಷ್ಣ ಕೊಪ್ಪರದ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭುವನೇಶ್ವರಿದೇವಿ (ಕವಿತೆ) - ಶ್ರೀ ರೇವಣಸಿದ್ದಪ್ಪ ಎಚ್ ಎಲ್.

ಭುವನೇಶ್ವರಿದೇವಿ 

ಕರುನಾಡ ಒಡತಿ ಕರುಣಿಸು
ಕನ್ನಡಿಗರ ಏಳ್ಗೆಗೆ ನೀ ಹರಸು
ಕನ್ನಡದ ಕಂಪು ಜಗದಲೆಲ್ಲ ಬೀರಿಸು
ಕರುನಾಡ ಮಕ್ಕಳ ಕಣ್ಣೀರು ಒರೆಸು
ಕರುನಾಡ ಮಹಾಲಕ್ಷ್ಮಿ ನೀನಮ್ಮ
ಕನ್ನಡಿಗರ ಸೌಭಾಗ್ಯ ನೀನಮ್ಮ
ಕರುನಾಡ ಸರ್ವೇಶ್ವರಿ ನೀನಮ್ಮ
ಕರುನಾಡ ಕಾಯುವವಳು ನೀನಮ್ಮ
ಕರುನಾಡೇ ನಮಗೆ ಕೈಲಾಸ
ಕರನಾಡೇ ನಮಗೆ ವೈಕುಂಠ
ಕನ್ನಡವೇ ನಮಗೆ ಬ್ರಹ್ಮಲಿಖಿತ
ಕನ್ನಡಿಗರೇ ನಿನ್ನ ಸರ್ವಶ್ರೇಷ್ಠ ಪೌರೋಹಿತ್ಯ
ಪಂಡಿತರು ಕನ್ನಡದ ಸಾಹಿತ್ಯ ಸಕಲ ವೇದಗಳು
ಕನ್ನಡ ಕೃತಿಗಳೇ ಸಕಲ ಹೋಮಾಗ್ನಿಗಳು
ಉರಿಯುವುದು ನಮ್ಮ ಸಾಹಿತ್ಯ ಪ್ರತಿಭೆ
ಕರುಣಿಸು ತಾಯಿ ಜನುಮ ಜನುಮದಲಿ
ಕನ್ನಡಿಗನಾಗಿ ಹುಟ್ಟುವೆ ಬೇರೆನು ಬೇಡ

- ರೇವಣಸಿದ್ದಪ್ಪ ಎಚ್ ಎಲ್
ಸಂಸ್ಥಾಪಕರು
ಕನ್ನಡ ಸಹೃದಯಿ ಸೇವಾ ಟ್ರಸ್ಟ್
ಚನ್ನಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...