ಶುಕ್ರವಾರ, ಅಕ್ಟೋಬರ್ 29, 2021

ಇಂದು ಒಂದು ಕನಸಾಗಿ (ಕವಿತೆ) - ಜಗದೀಶ ತಿಗರಿ, ಹೊಳಗುಂದಿ, ಹೂವಿನ ಹಡಗಲಿ ತಾ. ವಿಜಯ ನಗರ ಜಿ.

ಕರುನಾಡ ಬೆಟ್ಟದ ತುದಿಯ
ರಾಜ ಮರದ ಹೂವು
ನೋಡಿದರೆ ಮುಟ್ಟಬೇಕು 
ಮುಟ್ಟಿದರೆ ಮುಡಿಯಬೇಕು
ಎಂಬ ಪರಿಶುದ್ಧ ಪ್ರೀತಿಯ 
ಭಾವ ಸ್ಫುರಿಸುವಂತ ಜೀವ...

ಕನ್ನಡಿಗರ ಮನೆ ಮನದಂಗಳದಿ
ಮಗುವಾಗಿ 
ನೀ ಚೆಲ್ಲುತ್ತಿದ್ದ ಆ ನಗೆ ಹೂ
ಸದಾ  ಹಚ್ಚ ಹಸಿರು ಬನ
ಆನಂದ ಸೂಸುವ ನಂದನವನ

ಎಳೆಮಗುವಿನ ಮನದ
ಪ್ರತಿಬಿಂಬದ ದರ್ಪಣ 
ಇಳಿವಯಸ್ಸಿನ ಊರುಗೋಲಾಸರೆಯ
ಹಿರಿಜೀವಗಳ ಬಾಳ ಪ್ರೇರಣ

ಹಮ್ಮು - ಬಿಮ್ಮುಗಳು
ತಮ್ಮಷ್ಟಕ್ಕೆ ತಾವು ಮಾತಾಡಿದವೇನೋ
ತಮ್ಮನ್ನು ನಿರಾಕರಿಸಿದ 
ಪುನೀತನ ವಿನಯದ ವಿಶ್ವಾಸ ಜರಿದು

ಹೇ  ದೇವಾ... ನಿನ್ನ ನಾಡಲ್ಲಿ 
ಪ್ರಹ್ಲಾದನ ಪಾತ್ರಧಾರಿ ಸಿಗಲಿಲ್ಲವೇನೋ
ಹಿರಣ್ಯಕಶಿಪುವಿನ ಊರುಭಂಗಗೊಳಿಸಲು
ಆಮಂತ್ರಣವಿಲ್ಲದೇ, ಬಯಸದೇ ಇದ್ದರೂ,
ಬರಮಾಡಿಕೊಂಡೆಯಾ ಬಾನ ದಾರಿಯಲ್ಲಿ...

ಕೋಟ್ಯಧಿಪತಿಯ ಅಪ್ಪುಗೆಗೆ 
ಕೋಟ್ಯಂತರ ಹೃದಯಗಳು
ಕನಸಿನ ಕಿಟಕಿಯಿಂದ ಕೈಚಾಚಿ
ಎದುರು ನೋಡುತ್ತಿರುವಾಗಲೇ
ನಿನ್ನ ತೋಳ ತೆಕ್ಕೆಯಲ್ಲಿ ಬಂಧಿಸಿಬಿಟ್ಟೆಯ..

ಕನ್ನಡಿಗರ ಕಣ್ಣ ಹನಿಗಳಿಗೆ
ಪುನೀತನ ಪಾದ ತೊಳೆಯುವ ತವಕ
ಮಲಗಿದ ಮುತ್ತಿನ ಕೂಸಿಗೆ
ತಿಳಿಯದು ಅಶ್ರುತರ್ಪಣದ ಪುಳಕ

ಇಂದು ಒಂದು ಕನಸಾಗಿ
ನಾಳೆ ಮತ್ತೆ ಬೆಳಗಾಗಿ
ಅಪ್ಪು ಬದುಕಲಿ ನಮಗಾಗಿ
ಆಸೆ ಇದು ಅಭಿಮಾನಿಯಾಗಿ....

- ಜಗದೀಶ ತಿಗರಿ,  ಹೊಳಗುಂದಿ,  ಹೂವಿನ ಹಡಗಲಿ ತಾ.
ವಿಜಯ ನಗರ ಜಿ. 8970273749.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಪ್ಪುಗೆ ಬರವಣಿಗೆಯ ಅಪ್ಪುಗೆ (ಕವಿತೆ) - ಬಿ.ಕುಬೇರಪ್ಪ (ಮುತ್ತುಕಂದ), ಕೆ.ಸೂಗೂರು, ಜಿ-ಬಳ್ಳಾರಿ.

ನಿನ್ನ ಸಾವು ನಂಬಲಸಾಧ್ಯ ಅಪ್ಪು,
ನಮ್ಮಿಂದ ಅಗಲಿಸಿದ್ದು ದೇವರ ತಪ್ಪು,

ನೀನು ಸದಾ ನಗುಮೊಗದ ಅರಸು, 
ನವ ಯುವಕರ ಪಾಲಿನ ಯುವರತ್ನ,
ನಾಡು ಮೆಚ್ಚಿದ ನಟ ಸಾರ್ವಭೌಮ,
ಅಭಿಮಾನಿಗಳಿಗೆ ಅಣ್ಣಾ ಬಾಂಡ್.

ಅಪ್ಪನಂತೆ ಬಾಳಿದ ಸರಳತೆಯ ವಂಶಿ,
ದಟ್ಟವಾಗಿ ಬೆಳೆದ ಬೆಟ್ಟದ ಹೂವು,
ಸೋಲೇ ಕಾಣದಿರುವ ವೀರ ಕನ್ನಡಿಗ,
ಜನಕ ಪರಂಪರೆಯ ಕನ್ನಡದ ಜಾಕಿ.

ಅನಾಥರ ಕೈ ಹಿಡಿದ ಅಂಜನಿಪುತ್ರ,
ಜನ್ಮ ಸಾರ್ಥಕತೆಯ ನಮ್ಮ ಬಸವ, 
ಅದ್ಭುತ ನೃತ್ಯ, ಗಾಯನದ ಮಿಲನ,
ಮಕ್ಕಳ ಶಿಕ್ಷಣಕ್ಕನುವಾದ ರಣವಿಕ್ರಮ.

ವೃದ್ಧರಿಗೆ ದೈರ್ಯ ತುಂಬಿದ ಮೌರ್ಯ,
ಬಡಿವಾರವೇ ತೋರದ ಪರಮಾತ್ಮ,
ನಂಬಿದವರಿಗೆ ಬೆನ್ನು ತಿಟ್ಟಿದ ಮೈತ್ರಿ,
ಕೋಟ್ಯಾಧಿಪತಿ ನಡೆಸಿದ ಅಜಯ್.

ಬಾಲ ನಟನೆಯಲ್ಲಿ ಸೈ ಭಕ್ತಪ್ರಹ್ಲಾದ,
ನಿನ್ನಿಂದಲೇ ಗೋಮಾತೆಗಿಷ್ಟು ಆಶ್ರಯ,
ನಿನ್ನಗಲಿಕೆಗೆ ಆತ್ಮಗಳು ಬಲು ನೊಂದಿವೆ,
ಮತ್ತೆ ಹುಟ್ಟಿ ಬಾ ಪುನಿತ್ ಕಂಗಳು ಕಂದಿವೆ.

- ಬಿ.ಕುಬೇರಪ್ಪ(ಮುತ್ತುಕಂದ), ಕೆ.ಸೂಗೂರು, ಜಿ-ಬಳ್ಳಾರಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೆಮ್ಮೆಯ ಕನ್ನಡ (ಕವಿತೆ) - ಅನ್ಸೀ. ಬಾಳೆಹೊನ್ನೂರು. ಚಿಕ್ಕಮಗಳೂರು(ಜಿಲ್ಲೆ).


ನನ್ನೆದೆ ಬಗೆದರು ಕನ್ನಡ
ನನ್ನೆದೆ ಬಡಿತದಲ್ಲೂ  ಕನ್ನಡ
ಗಾಳಿ ಗಾಳಿಯಲ್ಲೂ ಕನ್ನಡ
ಪ್ರತಿ ಪದ ನುಡಿಯುವೆ ನಾ ಅದುವೆ ಕನ್ನಡ....

ಬರೆಯುವೇ ನಾ ಸುಂದರ ಕನ್ನಡ
ಕನಸು-ನನಸಲ್ಲೂ ನನ್ನ ಕನ್ನಡ
ಪ್ರತಿ‌ ನಿಮಿಷದಲ್ಲೂ ಕನವರಿಕೆ ಕನ್ನಡ
ಕಣ್ಣ ಹನಿಯಲ್ಲೂ ಕನ್ನಡ....

ನನ್ನ ಬೆವರಿನ ಕಣ-ಕಣದಲ್ಲೂ ಕನ್ನಡ
ಭೂಮಿ ಬಿರಿದರೂ ಕನ್ನಡ
ರೋಮ ರೋಮದಲ್ಲೂ ಕನ್ನಡ
ಹಕ್ಕಿಗಳ ಗಾಯನದಿ ಕೇಳಿದೆ ನಾ ಕನ್ನಡ....

ಉಸಿರು ಬಿಡುವಾಗಲೂ ಕನ್ನಡ
ಜೀವನದ ಕೊನೆಯವರೆಗೂ ಕನ್ನಡ
ನನ್ನ ಉಸಿರಿನ ಕೊನೆ ಕ್ಷಣವೂ ಕನ್ನಡ
ಹೆಮ್ಮೆ ಇದೆ ನಾ ಹುಟ್ಟಿದ ನಾಡು ಕನ್ನಡ....

- ಅನ್ಸೀ, ಬಾಳೆಹೊನ್ನೂರು. ಚಿಕ್ಕಮಗಳೂರು(ಜಿಲ್ಲೆ).

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನ್ನಡದ ಜ್ಯೋತಿ ( ಕವಿತೆ) - ಶ್ರೀಮತಿ, ಭಾಗ್ಯ ಗಿರೀಶ್, ಹೊಸದುರ್ಗ‌‌‌‌.

ಕರುನಾಡ ಕಂದ ವರನಟನ ಪುತ್ರನಿವ
ಕನ್ನಡಿಗರ ಹೆಮ್ಮೆ ಸರಳತೆಯ ಪ್ರತೀಕನಿವ
ಪರಮಾತ್ಮ ಕರುನಾಡಿಗೆ ನೀಡಿದ ಕಣ್ಮಣಿ ಇವ
ಕರುಣೆಯಲಿ ಪರಮ ಪುನೀತನಿವ

ಕನ್ನಡಿಗರ ಮಿಲನಕ್ಕೆ ಬೆಟ್ಟದ ಹೂವು ಒಂದು
ಕನ್ನಡದ ಕಂಪು ರಾಷ್ಟ್ರಮಟ್ಟದಿ ಸೂಸುತ್ತಾ ಬಂದು
ಸಿನಿರಂಗದಲ್ಲಿ ಅಣ್ಣಾಬಾಂಡ್ ಆಗಿ ಮಿಂಚಿ ಮೆರೆದು
ನೇತ್ರದಾನದ ಧನ್ಯತೆಯಲಿ ಅಮರವಾಗಿದೆ ತಾ ಇಂದು

ಅಭಿಮಾನಿಗಳ ಪ್ರಿಯ ರಾಜಕುಮಾರ
ನಟಸಾರ್ವಭೌಮನ ಮುದ್ದು ಕುವರ
ಸ್ನೇಹದಲ್ಲಿ ಆಕಾಶದಷ್ಟು ಎತ್ತರ
ಬಾಂಧವ್ಯದಿ ಮೀರಿಸಲಾಗದು ಅಪ್ಪು ಹುಡುಗರ

ಚಿಣ್ಣರ ಕುಣಿಸುವ ಅಣ್ಣನು
ಹೆಚ್ಚಿಸಿದ ಬಣ್ಣದಲೋಕದ ಸೊಬಗನು
ನನಸು ಮಾಡಿದ ಬಹುಜನರ ಕನಸನು
ಅಮರನಾಗಿಹ ಕನ್ನಡ ಮಾತೆಯ ಪ್ರೀತಿಯ ಕುವರನು

ಕೋಟ್ಯಾಂತರ ಕನ್ನಡಿಗರ ಹೃದಯದ ಅಧಿಪತಿ
ಅಭಿಮಾನಿಗಳಲ್ಲಿ ಬೆಳಗಿದರು ಕನ್ನಡದ ಜ್ಯೋತಿ
ಲೀನವಾಯಿತು ವೀರ ಕನ್ನಡಿಗನ ಪ್ರಾಣ ಜ್ಯೋತಿ
ಕಾತರಿಸಿ ಹೊರಟಿದೆ ತಂದೆ ತಾಯಿಯ ಮಡಿಲ ಪ್ರೀತಿ.
✍️ ಶ್ರೀಮತಿ, ಭಾಗ್ಯ ಗಿರೀಶ್
      ಹೊಸದುರ್ಗ
ಮೋ:-೯೬೧೧೦೯೨೩೯೪.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಯುವರತ್ನವೇ ಮರಳಿ ಬಿಡು (ಕವಿತೆ) - ಸುರೇಶ್ ಕಲಾಪ್ರಿಯಾ ಗರಗದಹಳ್ಳಿ.

ನಂಬಲೇ.....?
ಸುದ್ದಿಯನೇ ಧಿಕ್ಕರಿಸಿಬಿಡಲೇ?
ವಿಧಿಯ ಅಟ್ಟಹಾಸವನು ಹಳಿಯಲೇ?
ಛೇ.... ಮೌನವಾಗಿಬಿಡು ಕ್ರೂರಿಯೇ?
ಕೊಂಚ ಕಾಲ ವಿರಮಿಸು.. 
ನಮ್ಮ ಅಪ್ಪು ಮರಳಲೆಮ್ಮ ಕರುನಾಡಿಗೆ..

'ಬೆಟ್ಟದ ಹೂವ' ನೇಕೆ ಬಾಡಿಸಿದೆ ವಿಧಿಯೇ
'ರಾಜಕುಮಾರ' ನ ಕಾರ್ಯವಿನ್ನೂ ಬಾಕಿಯಿದೆಯಿಲ್ಲಿ
ನೊಂದವರ ಕಣ್ಣೀರ ಒರೆಸಬೇಕಿದೆ
ಬಂಧುಗಳ ನಡುವೆ ಬಾಂಧವ್ಯದ 'ಮೈತ್ರಿ' ಬೆಸೆಯಬೇಕಿದೆ

'ಅರಸು' ಮನೆತನವನಾದರೂ ಅರಸುತನ ತೋರಿಲ್ಲ
ಸರಳತೆಯಲ್ಲೇ ಜೀವನವ ಸವೆಸುತ್ತಿದ್ದನಲ್ಲ
ಕಣ್ಣೇಕೆ ಬಿತ್ತು ನಿನ್ನದು ನಮ್ಮ ಅಪ್ಪುವಿನ ಮೇಲೆ
ಅಪ್ಪುಗೆಯೇ ಬೇಕೆನುವುದಾದರೆ ನಾನಿದ್ದೆನಲ್ಲ

ಯುವರತ್ನವೇ ಬೇಕಾಯಿತೇನು ನಿನಗೆ
ಅಪ್ಪಾಜಿಯ ಜೊತೆಗೂಡಿಸಲು ಕೊನೆಗೆ
ಹೃದಯವಂತನನೇ ಕಸಿದು 
ಕರುನಾಡಿನ ಉಸಿರನೆಲ್ಲಾ ಬಸಿಯುತಿರುವೆಯಲ್ಲಾ...

ಈಗಲು ಒಮ್ಮಗೇ ಕೂಗಿ ಮರಳಿಸು
ಅಪ್ಪು ಮರಳಿದ್ದಾನೆ.. ನಿಮಗಾಗಿ ಎಂದು
ಮಾರ್ಧನಿಸಲಿ ಕಹಳೆಯಂತಹ ಧ್ವನಿ
ಮುಗಿಲಾಚೆಗೂ... ರಾಜಕುಮಾರ ಮರಳಿದನೆಂದು.
- ಸುರೇಶ್ ಕಲಾಪ್ರಿಯಾ ಗರಗದಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಾಡಿದ ಬೆಟ್ಟದ ಹೂ. (ಕವಿತೆ) - ಗಂಗಜ್ಜಿ. ನಾಗರಾಜ್.

 ಬೆಟ್ಟದ ಹೂವೇ ಹೇಳಲಾರದೆ ಬಾಡಿ ಹೋಯಿತೆ..   
 ಏಕೆ  ಇಂತಹ ಶಿಕ್ಷೆ ಕೊಟ್ಟೆ ದೇವರೇ ಕಾಣಲಿಲ್ಲವೇ ನಿನ್ನಗೆ    
ಅಪ್ಪು ಅಪ್ಪು ಮಾಯವಾದೆಯ ...  

ಬಾನದಾರಿಯಲ್ಲಿ  ಸೂರ್ಯನಂತೆ ಬಂದಿರಿ..                     ಬಹು ಬೇಗ ಕಾಣದಂತೆ ಮಾಯವಾದಿರಿ ಅಪ್ಪು.. 
 ನನ್ನ ಉಡುಪು ನಿನ್ನದು ಎಂದು ಹಾಡಿದಿರಿ..                    ಕೊಡುವ ಮೊದಲೇ ನಮ್ಮಿಂದ ಕಣ್ಮರೆಯಾದಿರಿ..

ಎಷ್ಟೋ ಅನಾಥ ಮಕ್ಕಳ ಬಾಳು ಬೆಳಗಿದ ಕಣ್ಮಣಿ..          ವೃದ್ಧರ ಮಡಿಲ ತುಂಬಿದ  ಪ್ರೀತಿಯ ಕಣ್ಮಣಿ. 
 ಮಕ್ಕಳ ಶಿಕ್ಷಣ ನೋಡಿಕ್ಕೊಳ್ಳುತ್ತಿದ್ದ ಧಣಿ..                        ಸದಾ ನಾವೆಲ್ಲ ಇರುವೇವು ನಿಮಗೆ ಚಿರಋಣಿ..                                     

ಎಲ್ಲೆಡೆ ಹರಿದಿದೆ ನೋಡಿ ಕಣ್ಣೀರಿನ ಧರೆ..                         ಅಭಿಮಾನಿಗಳ ಕಣ್ಣೀರಿಂದ ತುಂಬಿದೆ ಕಡಲು..  
ಬರಿದು ಮಾಡಿದರು ಮೆಚ್ಚಿದ ಜನರ ಒಡಲು..                    ಮರೆಯಲಾಗದು ಅಪ್ಪುವಿನ ನೆನಪು..                                            
- ಗಂಗಜ್ಜಿ. ನಾಗರಾಜ್.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೆಣ್ಣು ನಾರಿಯೋ ಮಾರಿಯೋ (ಲೇಖನ) - ಶ್ರೀ ಮಲ್ಲಿಕಾರ್ಜುನ ಎಸ್ ಆಲಮೇಲ.

ಲೀಲಾ ವಿನೋದಗಾರ ಸೃಷ್ಟಿಕರ್ತನ,  ಸೃಷ್ಟಿಯ ಪ್ರತಿಯೊಂದು ಜೀವಿಗೂ, ಒಂದಲ್ಲ, ಒಂದು ಸಮಸ್ಯೆ ನೋವು, ಸೃಷ್ಟಿಸಿಯೇ ಭುವಿಗೆ ಕಳಿಸಿದ್ದಾನೆ, ಅದರಲ್ಲೂ ಮನುಷ್ಯ ಜೀವಿಗಂತೂ, ಸಮಸ್ಯೆಗಳ ಸರಮಾಲೆ, ನೋವಿನ, ಸಾಗರವನ್ನೇ ತುಂಬಿಸಿ ಸೃಷ್ಟಿಸಿದ್ದಾನೆ ಅನಿಸುತ್ತೆ.ಸಮಸ್ಯೆಯೇ ಇಲ್ಲದ,ವ್ಯಕ್ತಿ ಪೃಥ್ವಿಯೊಳು ಸಿಗುವದು ಅತಿ ವಿರಳ. ಒಂದು ತುಂಬು ಕುಟುಂಬ. ಅಲ್ಲಿ  ಆಗರ್ಭ, ಸಿರಿವಂತಿಕೆ ಇಲ್ಲದಿದ್ದರೂ, ಸುಖ,-ಶಾಂತಿ, ನೆಮ್ಮದಿ, ಸಡಗರ, ಸಂಭ್ರಮಕ್ಕೇನು ಕೊರತೆಯಿರಲಿಲ್ಲ, ಆ ಒಂದು ಕುಟುಂಬದ, ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದ, ಖಾಸಗಿ ಸಂಸ್ಥೆಯೊಂದರಲ್ಲಿ ನೌಕರಿಯಲ್ಲಿದ್ದ, ಶ್ರಮಜೀವಿ ವ್ಯಕ್ತಿಗೆ  ಶ್ರೀಮಂತ ಮನೆತನದ ಕನ್ನೆಯೊಂದಿಗೆ ವಿವಾಹವಾಗುತ್ತದೆ. ಎಲ್ಲರು ಹರುಷದಿ ಸಂಭ್ರಮಿಸುತ್ತಿರುತ್ತಾರೆ,ಆದರೆ ಆ ಮದುವೆ, ಕುಟುಂಬದಿ ಭೀಕರ, ಸುನಾಮಿಯನ್ನು ಸೃಷ್ಟಿಸುತ್ತದೆ ಅಂತ, ಕನಸಲ್ಲೂ ಸಹಿತ ಯಾರು ಊಹಿಸಿರಲಿಲ್ಲ. ಮನೆಗೆ ಸೌಭಾಗ್ಯ, ಲಕ್ಷ್ಮಿಯಾಗಿ ಬರಬೇಕಾದವಳು ಮಹಾಮಾರಿಯಾಗಿ ಬಂದಳು. ಬಂದವಳೇ ಜೇನುಗೂಡಿಗೆ ಕಲ್ಲೆಸೆದು, ಕೋಲಾಹಲ ಸೃಷ್ಟಿಸಿದಳು. ಸಹೋದರ, ಸಹೋದರಿಯರಲ್ಲಿ ಕೊನೆಗೆ ಹೆತ್ತಯೊಂದಿಗೆ ವಿರಸ, ಉಂಟಾಗುವಂತೆ ಮಾಡಿ ಆ ದೇವಸ್ಥಾನದಂತಾ ಮನೆಯಿಂದ ತನ್ನ ಗಂಡನನ್ನು ಹೊರ, ಕರೆತಂದು. ತನ್ನ ತವರೂರಾದ, ಪಟ್ಟಣದಲ್ಲಿ ಮನೆ ಮಾಡಿದಳು. ಪತಿಯನ್ನು ಪರವಶಮಾಡಿಕೊಳ್ಳಲ್ಲು ಅತೀವ ಪ್ರಯತ್ನ ಪಡುತ್ತಿದ್ದಳು, ಆದರೆ ಆ ಮಾತೃ ಮಮತೆಯ ಮನುಷ್ಯ,ದಿನಾಲೂ ಕುಟುಂಬದಲ್ಲಿ ಕಲಹ ಸರಿಯಲ್ಲವೆಂದು ಬೇರೆ ಮನೆಮಾಡಿದ್ದನೆ ವಿನಃ ಇವಳ, ತಾಳಕ್ಕೆ ಕುಣಿಯಲು ಅಲ್ಲ, ಅವನು ಆಕೆಯ, ಮಾತಿಗೆ ಸೊಪ್ಪು ಹಾಕಲಿಲ್ಲ. ಸಹೋದರ - ಸಹೋದರಿಯರ ವಿವಾಹ, ಮಾಡಿದ. ತಾಯಿಯನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದ, ದೇವತೆಯಂತೆ ಆರಾಧಿಸುತ್ತಿದ್ದ.ಇದನೆಲ್ಲ ಕಂಡು ಸಹಿಸಿಕೊಳ್ಳಲು ಸಾಧ್ಯವಾಗದೆ ಈಕೆ ನಾನಾ ಕುತಂತ್ರ, ಮಾಡುತ್ತಲೇ ಇದ್ದಳು. ಬಹುಶಃ ಈ ಎಲ್ಲಾ ಪಾಪ ಕೃತ್ಯದ, ಫಲವೇನು ? ಮದುವೆಯಾಗಿ ಹತ್ತು ವರುಷವಾದರೂ ಸಂತಾನ, ಭಾಗ್ಯ ಬರಲಿಲ್ಲ,ಇದರ ಕುರಿತು ಇವಳಿಗೆ ಕಿಂಚಿತ್ತೂ ಚಿಂತೆ, ನೋವು, ದುಃಖವಿರಲಿಲ್ಲ. ಆದ್ರೆ ಇವರ ಕುಟುಂಬದ, ಪ್ರತಿಯೊಬ್ಬರ ಹೃದಯದಲ್ಲಿ ಸಂಕಟದ ಸಾಗರವೆ ಮಡುಗಟ್ಟಿತ್ತು, ಅದರಲ್ಲೂ ಆ ಸಹ್ರದಯಿ ಹರಕೆಹೊತ್ತು ಕೊಳ್ಳದ ದೇವರುಳಿದಿಲ್ಲ.

ಇದೆಲ್ಲದರ ಫಲವೇನು ಅನ್ನುವಂತೆ ಮನೆಮುರ್ಕಿ ಗರ್ಭವತಿಯಾದಳು, ಈ ಸವಿ ಸಂಗತಿಯಿಂದ, ಕುಟುಂಬದಿ ಸಂತೋಷದ ಸಾಗರವೆ ಆವರಿಸಿತು. ಇವಳು ಮಾತ್ರ, ತನಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವಂತೆ ಇರುತ್ತಿದ್ದಳು, ನಮ್ಮ ನಡುವೆ, ಅದೇನೆ ಇದ್ರು ಕಾಲವನ್ನು ತಡೆಯೋರು ಯಾರು,? ನವಮಾಸ ತುಂಬಿ ಪ್ರಸವ ಸಮಯ ಬಂದೆ ಬಿಟ್ಟಿತು, ತಂದೆಯಾಗುತ್ತಿರುವೆ ಅನ್ನುವ ಈತನ  ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ ವಿಧಿ ಅಲ್ಲಿಯೂ ತನ್ನ ಅಟ್ಟಹಾಸ ಮೆರೆಯಿತು. ಸುಲಭವಾಗಿ ಆಗಬೇಕಿದ್ದ ಹೆರಿಗೆ, ಶಸ್ತ್ರ, ಚಿಕಿತ್ಸೆ ಮಾಡಿ ಮಗು ಹೊರತಗೆಯುವಂತಾಯಿತು, ಇದಾದ ಬಳಿಕವಾದ್ರೂ ಖುಷಿ ಇತ್ತೇ, ಖಂಡಿತ ಇಲ್ಲ. ಜನಿಸಿರುವದು ಸುಂದರ ವದನದ, ಅಸಹಜ ಹೆಣ್ಣು ಶಿಶು, ಕ್ಷೀಣ ದೇಹ, ಕಣ್ಣು ತೆರೆದಿಲ್ಲ,ಅಳುವಿನ ಧ್ವನಿಯಂತೂ ಮೊದಲೇ ಇಲ್ಲ. ವೈದ್ಯರ ಸಹಿತ, ಎಲ್ಲರು ಧಿಗ್ಬ್ರಾಂತರಾಗಿದ್ದಾರೆ. ಯಾರ, ಬಾಯಿಂದಲೂ ಮಾತುಗಳೇ ಬರುತ್ತಿಲ್ಲ. ಬರುತ್ತಿರುವದು ಕೇವಲ, ಕಂಬನಿ ಧಾರೆ ಮಾತ್ರ. ಇಲ್ಲಿ ಭರವಸೆಯ, ಸಂಗತಿಯಂದ್ರೆ ಮಗು ಉಸಿರಾಗುತ್ತಿರುವದು. ಅಷ್ಟರಲ್ಲಿ ಮಕ್ಕಳ ತಜ್ಞ ವೈದ್ಯರು ಆಗಮಿಸಿ ಮಗುವಿನ, ಪರಿಸ್ಥಿತಿಯನ್ನು ಪರಿಶೀಲಿಸಿ, ತುರ್ತುನಿಗಾ ಘಟಕಕ್ಕೆ ರವಾನಿಸಿ ಚಿಕಿತ್ಸೆ ಆರಂಭಿಸುತ್ತಾರೆ.ತಂದೆಯ ಆಕ್ರಂದನ  ಮುಗಿಲುಮುಟ್ಟಿತ್ತು, ದಿನಗಳು ಉರುಳುತ್ತಾ ಹೋಯಿತು,  ಮಗುವಿನಲ್ಲಿ ಯಾವದೇ ಚೇತರಿಕೆ ಇಲ್ಲ.  ಅವನಿಗೆ ದೈವಕ್ಕೆ ಬೈಯುವುದು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ,ಹಲವು  ದಿನಗಳ ನಂತರ ಅದ್ಭುತವೆಂಬಂತೆ,  ಮಗು ಕಣ್ತೆರೆದು  ಅಳಲು ಆರಂಭಿಸಿತು.  ವೈದ್ಯಲೋಕಕ್ಕೆ  ಸವಾಲಾಗಿದ್ದ, ಮಗುವಿನ ಅಳು ಕೇಳಿ ವೈದ್ಯರಿಗೂ ಸಂತಸವಾಯಿತು.  ಎಲ್ಲರ ಕಂಗಳಿಂದ ಆನಂದಬಾಷ್ಪ ಸರಿಯಿತು,  ಆದರೇನು ಫಲ ವಿಧಿಯ, ವಕ್ರದೃಷ್ಟಿ ಇಲ್ಲಿಯೂ ಬೀರಿತು. ಕಂದಮ್ಮ ಉಸಿರಾಡುತ್ತದೆ ಅನ್ನುವದು ಬಿಟ್ಟು ಬೇರಾವುದೂ ಸರಿ ಇರಲಿಲ್ಲ. ಸಜೀವ ಶವ ಸ್ಥಿತಿಯಲ್ಲಿಯೇ ಮಗು ಜೀವಿಸಿದಷ್ಟು ಸಮಯ ಇರುವದೆಂದು ಅರಿತ, ವೈದ್ಯರು. ಮಗುವನ್ನು ಮನೆಗೆ ಕರೆದುಕೊಂಡು ಹೋಗಿ ಅಂತ ಪೋಷಕರಿಗೆ ತಿಳಿಸಿದಾಗ, ನೀರವ ಮೌನ, ಆವರಿಸಿ ಅವರಿಗೆ ಬರಸಿಡಿಲುಗಳ, ಮಳೆಗರೆದು ಗಗನವೇ ಅಪ್ಪಳಿಸಿದಂತೆ, ಭುವಿಯೆ ಬಿರಿದು ಬರಸೆಳೆದಂತ್ತಾಯಿತು. ಆ ದೃಶ್ಯ ಕಂಡ ವ್ಯಕ್ತಿ ಅದೆಷ್ಟೇ ಕರುಣಾಹೀನ,.ಆಗಿದ್ದರು ಕಣ್ಣೀರು ಸುರಿಸದೆ ಇರಲಿಲ್ಲ.

ತಂದೆಯ ರೋದನೆಯಂತೂ ಹೇಳತೀರದು ಭಿಕ್ಷಕನಂತೆ ಪರಿಪರಿಯಾಗಿ ಬೇಡಿಕೊಳ್ಳುತಿದ್ದಾನೆ, "ಹೇಗಾದರೂ ಮಾಡಿ ನನ್ನ ಮಗುವನ್ನು ಗುಣಪಡಿಸಿರಿ ನಿಮಗೆ ಕಾಲಿಗೆ ಬಿದ್ದು ಬೇಡಿಕೊಳ್ಳುತ್ತೇನೆ." (ಕಾಲಿಗೆಬೀಳುವಷ್ಟರಲ್ಲಿ ವೈದ್ಯರು ತಡೆದು )" ನಿಮ್ಮ, ನೋವು ನಮಗೆ ಅರ್ಥವಾಗುತ್ತದೆ, ನಾವು ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇವೆ, ಆದರೆ ನಮ್ಮ ಕೈಯಲ್ಲಿ ಏನು ಇಲ್ಲ. ಎಲ್ಲವು ಸೃಷ್ಟಿಕರ್ತನ ಆಟ, ನಾನು ನಿಮಗೊಂದು ವಿಳಾಸ ಬರೆದುಕೊಡುತ್ತೇನೆ ಅಲ್ಲಿಗೆ ಹೋಗಿ ತೋರಿಸಿ ಗುಣಮುಖವಾದ್ರೂ ಆಗಬಹುದು. (ವಿಳಾಸ ಬರೆದುಕೊಟ್ಟು ಹೋಗುವರು ) ಭಾರವಾದ, ಮನದೊಂದಿಗೆ ಮಗುವನ್ನು ಮನೆಗೆ ಕರೆದುಕೊಂಡು ಹೋಗುವರು. ಅತೀವ, ಪ್ರೀತಿ, ಮಮತೆ, ವಾತ್ಸಲ್ಯದಿಂದ, ಲಾಲನೆ, ಪಾಲನೆ ಮಾಡಬೇಕಾದ ತಾಯಿಯೇ ಮಗುವಿನ ಬಗ್ಗೆ ಅಸಡ್ಡೆ ತೋರುವಳು, ಆ ಎಳೆಕಂದನ, ಕಂಡರೆ ಅಸಹ್ಯ ಪಟ್ಟುಕೊಳ್ಳುವಳು, ಇದರಿಂದ ಗಂಡ -ಹೆಂಡತಿಯ ನಡುವೆ ದಿನಾಲೂ ಜಗಳ, ಕಿರಿಕಿರಿ ಇದೆಲ್ಲದರ, ಜೊತೆ ನಿಂದಕರ, ಕಡುನುಡಿಗಳು ಇದರಿಂದ ಮಾನಸಿಕ ವೇದನೆಗೆ ಒಳಗಾದರು ಸಹೃದಯಿ ಮಗುವನ್ನು ಗುಣಪಡಿಸಲು ಈ ಪೃಥ್ವಿಯೊಳು ಇರುವ ಎಲ್ಲಾ ಆಸ್ಪತ್ರೆಗು ಅಲೆದಾಡಿದ ಸ್ವಲ್ಪ, ಚೇತರಿಕೆ ಅನ್ನುವದು ಬಿಟ್ಟು ಬೇರಾವ ಬೆಳವಣಿಗೆಯು ಆಗಲಿಲ್ಲ, ಇದ್ದ ಪರಸ್ಥಿತಿಯಲ್ಲಿಯೇ ಮಗು ಬಾಲ್ಯಾವಸ್ಥೆಯಿಂದ ಯವ್ವನಾವಸ್ಥೆ ಬಂದರು "ಅಪ್ಪಾ"ಅನ್ನುವ ಶಬ್ದ ಬಿಟ್ಟು ಬೇರಾವ ನುಡಿಯು ಬರುತ್ತಿರಲಿಲ್ಲ, ಅವಳಿಗೂ ಅಪ್ಪನೆಂದ್ರೆ ಅಷ್ಟೊಂದು ಪ್ರೀತಿ. ತಂದೆ ಮಗಳ, ಆ ಪ್ರೀತಿ ಮಮಕಾರ, ಅಕ್ಷರಗಳಿಂದ ವರ್ಣಿಸಲು ಅಸಾಧ್ಯ. ಇದು ಕೂಡ ವಿಧಿಗೆ ಇಷ್ಟವಾಗಲಿಲ್ಲವೆನುಸುತ್ತೆ,ಕರುಣಾಮಯ ವ್ಯಕ್ತಿಗೆ ಭೀಕರ ಮಾರಕ ಕಾಯಿಲೆ ಕ್ಯಾನ್ಸರ ರೋಗಕ್ಕೆ ತುತ್ತಾಗುತ್ತಾನೆ. ಆದರೂ ಆತನಿಗೆ ತನ್ನ ಬಗ್ಗೆ ಚಿಂತೆಯಿಲ್ಲ, ನಾನು ತೀರಿದ ಮೇಲೆ, ಮಗಳ ಗತಿಯೇನು ? ಅನ್ನುವ ಯೋಚನೆಯಲ್ಲಿಯೇ ಮತ್ತಷ್ಟು ದುರ್ಬಲನಾಗುತ್ತಾನೆ ಆ ನೋವಲ್ಲಿಯು 
ಮಗಳ ಭವಿಷ್ಯಕ್ಕಾಗಿ ಹಲವು ಸವಲತ್ತುಗಳನ್ನು ಮಾಡಿಡುತ್ತಾನೆ. ಇಷ್ಟೆಲ್ಲ ನಡೆಯುತ್ತಿದ್ದರೂ ಅವನ ಹೆಂಡತಿಗೆ ಕಿಂಚಿತ್ತೂ ಯೋಚನೆಯಿಲ್ಲ. ತನ್ನ ತವರುಮನೆಯವರು ಸಿರಿವಂತರೆನ್ನುವ  ಅಹಂಕಾರವೋ ? ಪೀಡೆ ತೊಲಗಿದರೆ ತೊಲಗಿತು ನಾನು ಆರಾಮಾಗಿರಬಹುದು ಹುಚ್ಚು ಮನೋಭಾವವೋ? ಅರಿಯದ ಪರಸ್ಥಿತಿ ಆತನದು.
ಪತ್ನಿಗೆ ಪರಿಪರಿಯಾಗಿ ತಿಳಿಹೇಳುತ್ತಾನೆ, ಆದರೇನು ಪ್ರಯೋಜನವಾಗುವದಿಲ್ಲ. ಅದೆಕೋರಗಲ್ಲಿ ಮಗಳ ಮಡಿಲಲ್ಲಿಯೇ ಇಹ ತ್ಯಜಿಸುವನು. ಆಗ ಆ ಬುದ್ದಿಮಾಂದ್ಯ ಜೀವಿಯ ಅಪ್ಪ, ಅಪ್ಪಾ ಅಂತ ಕೂಗುವ ಆರ್ತನಾದ, ನಿಷ್ಕರುಣಿ ದೇವರಿಗೆ ಪ್ರೀತಿ. ಹೀಗೆ ದುಃಖಿಸುತ್ತಾ ಕಂಬನಿಧಾರೆ ಹರಿಸುತ್ತಲೇ, ತನ್ನ ತಂದೆಯ ಎದೆಯ ಮೇಲೆ ಮಲಗಿ,  ಅವಳು ಪ್ರಾಣ ಬಿಡುವಳು.ಈ ಹೃದಯವಿದ್ರಾವಕ ದೃಶ್ಯ ನೋಡಿದ ಊರ ಜನರೆಲ್ಲಾ ಕಣ್ಣೀರ ಕಡಲಲ್ಲಿ ಮುಳುಗಿ, ಕರುಣಾಹೀನಳಾದ ಮೃತನ ಪತ್ನಿಗೆ ಚೀಮಾರಿ ಹಾಕುವರು. ಕುರಿಗಾಯಿಗೆ, ಹೇಗೆ ಕುರಿಗಳನ್ನು ಕಳೆದುಕೊಂಡ ಬಳಿಕ ಬುದ್ದಿ ಬರುತ್ತದೆಯೋ, ಹಾಗೆ ಈತನ ಮಡದಿಗೆ ಜ್ಞಾನೋದಯವಾಗುವದು. ಈಗ ದುಃಖಿಸಿ ಫಲವೇನು, ಮೊದಲೆ ವಾಸ್ತವ ಅರಿತು ನಡೆದಿದ್ದರೆ ಇಂತಾ ಘೋರದುರಂತ ನಡೆಯುತ್ತಿರಲಿಲ್ಲವೇನೋ, ಹೆಣ್ಣು, ಹಠಮಾರಿಯಾಗದೆ,  ಸಂಸಾರದ ಕಣ್ಣಾಗಿ ಜೀವನ ಸಾಗಿಸಿದರೆ, ಆ ಕುಟುಂಬ      ನಂದಗೋಕುಲವಾಗುವದು... 
- ಮಲ್ಲಿಕಾರ್ಜುನ ಎಸ್ ಆಲಮೇಲ. ಅಧ್ಯಕ್ಷರು, ಕಸಾಪ ಮತ್ತು ಕಜಾಪ ತಾಲೂಕು ಘಟಕ.  ಯಡ್ರಾಮಿ ಜಿಲ್ಲಾ : ಕಲಬುರಗಿ. 9740499814.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕವನ (ಕವಿತೆ) - ಗೊರೂರು ಅನಂತರಾಜು, ಹಾಸನ. 9449462879.

ಕನ್ನಡ  ಕನ್ನಡ. ಕನ್ನಡ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಸಂಗೀತ ಕಲೆಗೆ ಈ ನಮ್ಮ ಕನ್ನಡ
ಕಂಪನು ಸುರಿಸಿಹ ನವಚೇತನ
ಸಾಹಿತ್ಯ ಕಲೆಗೆ ಈ ಸರಳ ಕನ್ನಡ
ಸವಿಯನ್ನು ತುಂಬಿಹ ರಸದೌತಣ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಪ್ರೀತಿಯಿಂದ ನುಡಿವ ಈ ನುಡಿ
ಹೊಸತನ ತಂದಿಹ ರಾಗಾವಳಿ
ಮುತ್ತಿನಂತಹ ಈ ನಮ್ಮ ನುಡಿಯು
ಹರಡಲಿ ಲೋಕದ ಎಲ್ಲೆಡೆಯೂ

ನಮ್ಮ ಕನ್ನಡ ಭಾಷೆ
ಕವಿಗಳ ಕಾವ್ಯದ ಗಾಥೆ

ಜೀವನ ಬೇಸರ ಬಡಿದೋಡಿಸುವ
ನಾಳಿನ ಚಿಂತೆಯ ಹೊಡೆದೊಡಿಸುವ
ಬೆಳಕಿನಂತೆ ತಿಳಿಯಾದ ಭಾಷೆ
ಭವ್ಯವಾಗಿಹ ಇತಿಹಾಸ ಭಾಷೆ

  

- ಗೊರೂರು ಅನಂತರಾಜು, ಹಾಸನ. 9449462879.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಷಟಸ್ಥಲಜ್ಞಾನಿ ಚನ್ನಬಸವಣ್ಣ.(ಲೇಖನ) - ಶ್ರೀ ಸಂಗಮೇಶ ಎನ್. ಜವಾದಿ.

12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ‌ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ ಮಾಹಾನ ಕ್ರಾಂತಿಯಾಗಿತ್ತು ಅದು. ಕನ್ನಡ ಸಾಹಿತ್ಯ ಹಾಗೂ ಸಮಾಜಿಕ ಸಾರತ್ವ ಲೋಕಕ್ಕೆ ಶರಣರ ಸಮತಾವಾದದ ಕ್ರಾಂತಿಯು, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ದಾಖಲಾಗಿದೆ ಎಂದರೆ ತಪ್ಪಾಗಲಾರದು.  ಕಲ್ಯಾಣದ ಶರಣರ ವೈಚಾರಿಕ - ವೈಜ್ಞಾನಿಕ ವಿಚಾರಗಳ ಕ್ರಾಂತಿಯು, ಆದರ್ಶ ಸಮಾಜಕ್ಕೆ ಮುನ್ನುಡಿ ಬರೆದ ಐತಿಹಾಸಿಕ ಕ್ರಾಂತಿ ಪಥವಾಗಿದೆ. ಅಂದು ಬರೆದ ಅನುಭಾವದ ವಚನ ಸಾಹಿತ್ಯವು, ಆಶ್ರಯ ನೀಡಿದ ರಾಜರನ್ನು ಓಲೈಸಲು ಅಥವಾ ವೈಭವೀಕರಿಸಿ ಬರೆದ ಶರಣ ವಚನ ಸಾಹಿತ್ಯವಲ್ಲ. ಬದಲಾಗಿ ಜನ ಬದುಕಲಿ-ಜಗ ಬದುಕಲಿ, ಎಂದು ಬರೆದ ಮೌಲ್ಯಾಧಾರಿತ ತತ್ವ ಸಿದ್ಧಾಂತದ ಜನಪರ ವಚನ ಸಾಹಿತ್ಯ, ಸಕಲ ಜೀವಾತ್ಮರಿಗೆ ಲೇಸನೇ ಬಯಸಿದ ವಿಶ್ವ ಶ್ರೇಷ್ಠ ಸಾಹಿತ್ಯವಾಗಿದೆ.
ಇಂತಹ ಅಮೂಲ್ಯ ವಚನ ಸಾಹಿತ್ಯ, ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಕೆಲ ಜಾತಿ - ಮನುವಾದಿಗಳು ವಚನಗಳನ್ನು ಸಂಪೂರ್ಣವಾಗಿ ನಾಶ ಮಾಡಲು ಮುಂದಾದಾಗ 24ರ ಹರೆಯದ ಷಟಸ್ಥಲಜ್ಞಾನಿ ಚನ್ನಬಸವಣ್ಣ ಸೇರಿದಂತೆ ಮುಂತಾದ ಶರಣರ ಸಮೂಹ ವಚನ ಸಾಹಿತ್ಯ ಸಂರಕ್ಷಣೆಗೆ ಮುಂದಾಗಿ, ಬಸವಕಲ್ಯಾಣವನ್ನು ತೇಜಿಸಿ, ವಿವಿಧ ಸ್ಥಳಗಳಿಗೆ ತೆರಳಿ, ಕಷ್ಟಪಟ್ಟು, ಅವರ ಜೀವನದ ಹಂಗನ್ನೂ ತೊರೆದು
ವಚನಗಳನ್ನು ರಕ್ಷಣೆ ಮಾಡಿರುತ್ತಾರೆ. ಹೀಗೆ ವಚನ ಸಾಹಿತ್ಯ ರಕ್ಷಣೆಯ ಕಾರ್ಯದಲ್ಲಿ ಪ್ರಮುಖ ದಂಡನಾಯಕರಾಗಿ ಕಾರ್ಯ ನಿರ್ವಹಣೆ ಮಾಡಿರುವುದು
ಚನ್ನಬಸವಣ್ಣ, ಹೀಗಾಗಿ ಈ ವಚನ ಸಾಹಿತ್ಯದ ಉಳಿವಿಗಾಗಿ ಹೋರಾಡಿದ ಶರಣ ಸಂಕುಲಕ್ಕೆ ಚನ್ನಬಸವಣ್ಣ ಆಪದ್ಬಾಂಧವನಾಗಿ ಕಾಣುತ್ತಾರೆ.
ಹೀಗಾಗಿಯೇ ಹನ್ನೆರಡನೆ ಶತಮಾನ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯ ಮೇಧಾವಿ ಶಿವಶರಣರಾಗಿ ಮುನ್ನೆಲೆಗೆ ಬಂದ ಚೆನ್ನಬಸವಣ್ಣನವರು, ಭಕ್ತಿ, ಜ್ಞಾನ, ವೈರಾಗ್ಯ ಮೂರ್ತಿಯಾಗಿ ಜಗಕ್ಕೆಲ್ಲಾ ಜ್ಯೋತಿಯಾಗಿ ಕಂಗೊಳಿಸಿದ್ದಾರೆ.  ಜ್ಞಾನಿಯಾಗಿ, ಶರಣ ಭಕ್ತರಾಗಿ, ಷಟಸ್ಥಲ ಕಿಂಕರರಾಗಿ, ಸಕಲ ಜೀವಾತ್ಮರಿಗೂ ಲೇಸನು ಬಯಸುವ ಕಾಯಕದ ಮಹಿಮೆಯ ಗುಣಗಳನ್ನು ಪಡೆದು, ಶಿವಶರಣರಲ್ಲಿ ಅಗ್ರಗಣ್ಯ ದಂಡನಾಯಕನಾಗಿ  ಚೆನ್ನಬಸವಣ್ಣನವರು ಪ್ರಸಿದ್ಧನಾಗಿದ್ದಾರೆಂದು ಹೇಳಲು ಹೆಮ್ಮೆ ಎನಿಸುತ್ತದೆ. 

ಚನ್ನಬಸವಣ್ಣನವರ ಜೀವನ:
ಬಸವಣ್ಣನವರ ಪ್ರೀತಿಯ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರ ದಂಪತಿಗಳ ಮಗನಾಗಿ  ಕ್ರಿ. ಶ. 1144 ರಲ್ಲಿ 
ಜನ್ಮತಾಳಿದರು. ಚೆನ್ನಬಸವಣ್ಣನವರು ಚಿಕ್ಕವರಿದ್ದಾಗಲೇ ಆದ್ಯಾತ್ಮೀಕ ಹಸಿವು ಅವರಲ್ಲಿ ಎದ್ದು ಕಾಣುತ್ತಿತ್ತು.  ಅತ್ಯಂತ ಚುರುಕಾದ ಬುದ್ಧಿ, ಅತಿಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ಕಾರ್ಯಗಳನ್ನು ಮಾಡಿ ಜನರಿಂದ ಮೆಚ್ಚುಗೆ ಗಳಿಸಿದ ಯುವಕರಾಗಿ ಮಿಂಚಿದ್ದಾರೆ.  ಚೆನ್ನಬಸವಣ್ಣನವರು ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನರಾಗುವ ಮೂಲಕ ಕಲ್ಯಾಣದ ಕಡೆ ಹೆಜ್ಜೆ ಹಾಕಿ ಬಂದವರು, ತದನಂತರ ಬಸವಣ್ಣನವರ ಮಹಾಮನೆಯಲ್ಲಿ ಕೆಲಸ ಮಾಡುತ್ತಾ, ಧರ್ಮೊದ್ಧಾರ ಕಾಯಕ ಸೇವೆಗೆ ಮುಂದಾದರು. 
ಹೀಗೆ ಸಮಸ್ತ ಶರಣ ಬಳಗದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಅವರೆಲ್ಲರ ಪ್ರೀತಿಗೆ ಪಾತ್ರರಾಗಿ, ಅನುಭವ ಮಂಟಪದ ಜವಾಬ್ದಾರಿ ಹೊತ್ತಿಕೊಂಡರು. ತರುವಾಯ ಅನುಭವ ಮಂಟಪದ ಎಲ್ಲಾ ಕಾರ್ಯ 
ಕಲಾಪಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದವು. 
ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮರಿಗೆ ಲಿಂಗಧಾರಣೆ ಮಾಡಿದ ಕೀರ್ತಿ ಚನ್ನಬಸವಣ್ಣನವರಿಗೆ ಸಲ್ಲುತ್ತದೆ. 
ಅದೇ ರೀತಿ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ತಾಯಿಯ ಆದ್ಯಾತ್ಮೀಕ ಜೀವನದ ಕುರಿತು ಪರಿ ಪರಿಯಾಗಿ ಪರೀಕ್ಷೆಗೆ ಗುರಿಪಡಿಸಿ,ಅಕ್ಕನನ್ನು ವೈರಾಗ್ಯ ನಿಧಿ ಎಂದು ಹೇಳಿರುವುದು ಸಹ  ಚನ್ನಬಸವಣ್ಣನವರಿಗೆ ಸಲ್ಲುತ್ತದೆ. ಇನ್ನು ಇವರ
ವ್ಯಕ್ತತ್ವದ ಬಗೆ ಷಟಸ್ಥಲ ಸಿದ್ಧಾಂತದ ಆಚರಣೆಯಗಳಲ್ಲಿ  ಇವರು ತೆಗೆದುಕೊಂಡ ವೈಚಾರಿಕ ನಿಲುವುಗಳನ್ನು ಎಲ್ಲಾ ಶಿವಶರಣರು ಸೇರಿ ಒಗ್ಗಟ್ಟಿನಿಂದ ಒಪ್ಪಿಗೆ - ಮಚ್ಚುಗೆ ವ್ಯಕ್ತಪಡಿಸಿದ್ದು ಯಾರು ಮರೆಯುವಂತಿಲ್ಲ. ಇನ್ನು ಇವರ ಜೀವನದ ಬಗ್ಗೆ  ಹೆಚ್ಚಿನ ರೀತಿಯಲ್ಲಿ ಮಾಹಿತಿ ತಿಳಿದುಕೊಳ್ಳಲು ವಿರೂಪಾಕ್ಷ ಪಂಡಿತರ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ನೋಡಬಹುದಾಗಿದೆ. ಕೆಲವು ವಿವರಗಳು ಸಹ ದೊರೆಯುತ್ತಿವೆಯಾದರೂ ಒಂದೆರಡು ವಿಷಯಗಳ ಬಗೆಗೆ ಎಲ್ಲವುಗಳಲ್ಲಿಯೂ ಒಮ್ಮತವಿಲ್ಲ, ಹಾಗಾಗಿ ಉಪಲಬ್ದ ಹಾಗೂ ಇನ್ನಿತರ ದಾಖಲಾತಿ ಆಧರಿಸಿಯೇ ಚನ್ನಬಸವಣ್ಣನವರ ಜೀನವದ ಕುರಿತು ತಿಳಿದುಕೊಳ್ಳವುದು ಸೊಕ್ತ ಮತ್ತು ಸಮಂಜಸವಾಗಿದೆ. ಅವರು ರಚಿಸಿದ ವಚನಗಳ ಆಧಾರದ ಮೇಲೆ ಅವರ ಜೀವನದ ಸಂದೇಶಗಳ ಮಾನವೀಯ ಮೌಲ್ಯಗಳನ್ನು  ಹಾಗೂ ಸಮತಾವಾದದ ಸಮಾನತೆಯ ನೀತಿಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಚನ್ನಬಸವಣ್ಣನವರ ಆದ್ಯಾತ್ಮೀಕ :
ಸರ್ವೋದಯ ತತ್ವ ಪ್ರತಿಪಾದಿಸಿದ ಶರಣ ಸಂಕುಲವು, ಅನುಭವ ಮಂಟಪದ ಮೂಲಕ ಸಮತಾವಾದವನ್ನೇ ಜೀವಾಳವಾಗಿರಿಸಿಕೊಂಡು ಲಿಂಗಾಯತ ಧರ್ಮದ ಉಗಮಕ್ಕೆ ಕಾರಣವಾಯಿತು. ಈ ಉಗಮದ ಹಿಂದೆ ದೊಡ್ಡ ಶಕ್ತಿಯಾಗಿ ಕೆಲಸ ಮಾಡಿ ಸೈ ಎನಿಸಿಕೊಂಡವರು ಎಂದರೆ ಚನ್ನಬಸವಣ್ಣನವರು. ಹಾಗೆಯೇ
ಕಾಯಕ ಪಥದಲ್ಲಿ ಕಾರ್ಯಪೃವತರಾದಂತೆ, ರಾಜನೀತಿ ಶಾಸ್ತ್ರಜ್ಞರಾಗಿಯೂ ಸೇವೆ ಸಲ್ಲಿಸಿದ ಕೀರ್ತಿ ಇವರದು. 
ಅಷ್ಟಾವರಣ, ಪಂಚಾಚಾರ, ಷಟ್ಸ್ಥಲಗಳ ಅರಿವನ್ನು ಪ್ರತಿದಿನ ಅಂದಿನ ಶರಣರಿಗೆ ಪರಿಚಯಿಸುವ ಮತ್ತು ತಿಳಿ ಹೇಳುವ ಕಾರ್ಯ ನಿತ್ಯ ನಿರಂತರವಾಗಿ ಮಾಡಿದ ಶ್ರೇಯಸ್ಸು ಸಹ ಇವರಿಗೆ ಸಲ್ಲುತ್ತದೆ.
ಸುಮಾರು 1250 ಕ್ಕೂ  ಹೆಚ್ಚು ವಚನಗಳನ್ನು 
ಕೂಡಲ ಚೆನ್ನಸಂಗಮದೇವ ಎಂಬ ಅಂಕಿತನಾಮದೂಂದಿಗೆ
ರಚಿಸಿ,ಅಲ್ಲಮ ಪ್ರಭುದೇವರ ನಂತರ ಚನ್ನಬಸವಣ್ಣನವರು ಶೂನ್ಯಪೀಠದ ಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ.ಹೀಗೆ
ಆಧ್ಯಾತ್ಮಿಕ ಹಾದಿಯಲ್ಲಿ ಕ್ರಮಿಸಿ ಇಡೀ ಶರಣ ಸಂಕುಲಕ್ಕೆ ಮಾದರಿ ಶಿವಶರಣರಾಗಿ, ಮನುಕುಲದ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. 

ಕಲ್ಯಾಣದ ಕ್ರಾಂತಿ:
ಅಂದು ಕಲ್ಯಾಣ ನಾಡಿನಲ್ಲಿ ಮಾನವೀಯ ಮೌಲ್ಯಗಳಿಗಾಗಿ ನಡೆದ ಕ್ರಾಂತಿಯಿಂದಾಗಿ ಇಡಿ ಶರಣಸಂಕುಲ ಛಿದ್ರವಾಗಿ ಹೋಗಿದೆ ಎಂಬ ಪ್ರತೀತಿ ಇದೆ,
ಶರಣೆಯರೆಲ್ಲರೂ ಬೇರೆ ಬೇರೆ ಕಡೆ ಚದುರಿ ಹೋಗಿರುವ ನಡುವೆಯೂ ಚನ್ನಬಸವಣ್ಣನವರು ಕಲ್ಯಾಣದ ಕ್ರಾಂತಿಯ ಅನಂತರ ಕೆಲವು ದಿನ ಕಲ್ಯಾಣದಲ್ಲಿಯೇ ಉಳಿದು, ಅಲ್ಲಿದ್ದ ಉಳಿದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಎದ್ದು ಕಾಣುತ್ತದೆ. ಆಮೇಲೆ ಪರಿಸ್ಥಿತಿ ಇನ್ನಷ್ಟು ಹೆಚ್ಚಾಗಿ ಉಲ್ಬಣಗೊಂಡಾಗ, ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದ್ದಾರೆಂದು ಕೆಲವು ಕೃತಿಗಳಿಂದ ನಮ್ಮಗೆ ತಿಳಿದುಬರುತ್ತದೆ. ಹಾಗಾಗಿ ಚನ್ನಬಸವಣ್ಣನವರು ವಚನ ಸಾಹಿತ್ಯ ಸಂಪತ್ತನ್ನು ರಕ್ಷಿಸುವ ಹೊಣೆ ಹೊತ್ತಿಕೂಂಡು ಕೊನೆಯವರೆಗೂ ಹೋರಾಡಿದರು, ಹೋರಾಟ ಮಾಡುತ್ತಾ ಅವರ ಉಳವಿಯಲ್ಲಿಯೇ ಲಿಂಗೈಕ್ಯರಾದರು ಎಂಬ ಪ್ರಬಲವಾದ
ನಂಬಿಕೆ ಈಗಲೂ ಅನೇಕ ಜನರಲ್ಲಿ ಕಾಣುತ್ತೇವೆ. ಹಾಗಾಗಿ ಈ ದಿಸೆಯಲ್ಲಿ ಅಂದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶರಣರ ಹಾಗೂ ವಿಶೇಷವಾಗಿ ಚನ್ನಬಸವಣ್ಣನವರ ಕುರಿತು
ಸಂಶೋಧನೆ ಆದಾಗ ಮಾತ್ರ ವಾಸ್ತವ ನಿಜ ರೂಪ ಜನಸಾಮಾನ್ಯರಿಗೆ ಗೊತ್ತಾಗಬಹುದೆಂಬ ನಿರೀಕ್ಷೆ ನಮ್ಮದು. ಕಾರಣ ಸಂಬಂಧ ಪಟ್ಟ ಸರ್ಕಾರ ಸಂಶೋಧನೆ ಮಾಡಲ ಮುಂದಾಗಬೇಕು, ಈ ಮೂಲಕ ಜನರಿಗೆ ಸತ್ಯ ತಿಳಿಸಬೇಕು ಎಂಬುವುದೇ ಬಸವಾಭಿಮಾನಿಗಳ ಅದಮ್ಯ ಬಯಕೆ. 

ಚನ್ನಬಸವಣ್ಣನವರ ಸ್ಮರಣೆ:
ಚಿಕ್ಕವಯಸ್ಸಿನಲ್ಲಿಯೇ ಅಗಾಧವಾದ ಜನಪರ ಸಾಧನೆ ಮಾಡಿ, ಇಡೀ ಶರಣ ಸಂಕುಲದ ವಿಶ್ವಾಸ ಗಳಿಸಿ,ಶೂನ್ಯಪೀಠಾಧ್ಯಕ್ಷಾಗುವ ಮೂಲಕ ಸಾವಿರಾರು ವಚನಗಳನ್ನು ರಚಿಸಿ, ಲಿಂಗಾಯತ ಧರ್ಮ ಸ್ಥಾಪನೆಯಲ್ಲಿ ಮುಂಚುಣಿಯಾಗಿ ನಿಂತು,ದಣಿದವರ - ನೊಂದವರ ಬಾಳಿಗೆ ಬೆಳಕ್ಕಾಗಿ,ಕಲ್ಯಾಣ ರಾಜ್ಯದ ಸಮಾನತೆಯ ನೀತಿಯ  ಮೌಲ್ಯಗಳನ್ನು ಜಗಕ್ಕೆಲ್ಲ ಪಸರಿಸಿ, ಮುಗೀಲೆತ್ತರಕೇ ಬಸವ ಧ್ವಜವನ್ನು ಹಾರಿಸಿದ ಹಿರಿಮೆ ಇವರದು. ಶ್ರೇಷ್ಠ ಯುವ ರತ್ನ ಆಧ್ಯಾತ್ಮಿಕ ಚಿಂತಕ, ಸರ್ವಜನಾಂಗದ ಹೆಮ್ಮೆಯ ಪುತ್ರ,  ವಿಶ್ವಕಂಡ ಧೀಮಂತ ವ್ಯಕ್ತಿತ್ವದ ಯುವ ಚೈತನ್ಯ ಮೂರ್ತಿ, ಛಲಗಾರ, ಸೇವೆಯೇ ಶ್ರೇಷ್ಠ ಜೀವನವೆಂದು ಸಾರಿದ ಸಾಧಕ, ಮೇಧಾವಿ,ಇಂದಿನ ಸಮಾಜದ ಯುವ ಪೀಳಿಗೆಗೆ ಮಾರ್ಗದರ್ಶಕರಾಗಿ,ನಮ್ಮಲ್ಲರ ಅಚ್ಚುಮೆಚ್ಚಿನ ಶಿವಶರಣರಾಗಿ,ಕತ್ತಲೆಯಿಂದ - ಬೆಳಕಿನಡಗೆ ನಮ್ಮನ್ನು ಸಾಗಿಸಿದ ನಮ್ಮ ಆದ್ಯಾತ್ಮ ವೀರ, ಶಿವಶರಣ ನೆಚ್ಚಿನ  ಚನ್ನಬಸವಣ್ಣನರಿಗೆ ನನ್ನ ಅಂತರಂಗದ -  ಅಃತಕರಣದ ಶರಣು ಶರಣಾರ್ಥಿ.

ಕೊನೆಯ ನುಡಿ : ವಚನಗಳನ್ನು ಸಂರಕ್ಷಣೆ ಮಾಡುವಲ್ಲಿ ಶಿವಶರಣರ ಶ್ರಮ ಬಹಳ ದೊಡ್ಡದು ಅನ್ನುವುದು ಬಹಳಷ್ಟು ಜನರಿಗೆ ಗೂತ್ತಿಲ್ಲ, ಎನ್ನುವುದೇ ಅತ್ಯಂತ ನೋವಿನ  ಸಂಗತಿಯಾಗಿದೆ ಶರಣ ಬಂಧುಗಳೆ. 

 -  ಸಂಗಮೇಶ ಎನ್ ಜವಾದಿ, ಬೀದರ.
ಪ್ರಗತಿಪರ ಚಿಂತಕರು, ಸಾಹಿತಿ, ಪತ್ರಕರ್ತ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಚುಟುಕುಗಳು - ಸವಿತಾ ಆರ್ ಅಂಗಡಿ ಮುಧೋಳ.

ದುರಾಸೆ

 ಎಷ್ಟಿದ್ದರೂ  ಇನ್ನಷ್ಟು ಬೇಕೆನ್ನುವ ದುರಾಸೆ
 ಇನ್ನು ಬೇಕು ಬೇಕು ಎನ್ನುವ ಹಪಹಪಿ ನಿಲ್ಲದು ಜೀವಕ್ಕೆ
ಗೋರಿಗೆ ಹೋಗಲಿಕ್ಕೆ ಬಂದರೂ ನಿಲ್ಲದು ದುರಹಂಕಾರ
ಎಷ್ಟಿದ್ದರೂ ತೃಪ್ತಿಯಿಲ್ಲ ಮನುಷ್ಯನಿಗೆ ದುರಾಸೆ ಬದುಕು.

ನೆಮ್ಮದಿ

ಬದುಕೆಲ್ಲ ಹುಡಕಾಟ ನೆಮ್ಮದಿಗಾಗಿ
ಹಣಕ್ಕಾಗಿ ದಿನನಿತ್ಯ ಪರದಾಟ
ತಿನ್ನಲಿಕ್ಕೆ ಹೆರಳವಾಗಿದ್ದರೂ ತೃಪ್ತಿ ಯಿಲ್ಲ
ಎಷ್ಟೇ ಐಷಾರಾಮಿ ಜೀವನ ವಿದ್ದರೂ ನೆಮ್ಮದಿಯಿಂದ ಬದುಕಲ್ಲ
ಹೊರಗಡೆ ವಿರದು ನೆಮ್ಮದಿ ಆತ್ಮ ತೃಪ್ತಿಯೇ ನೆಮ್ಮದಿ.

✍️ ಸವಿತಾ ಆರ್ ಅಂಗಡಿ  ಮುಧೋಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ? (ಕವಿತೆ) - ಜಗದೀಶ ತಿಗರಿ. ಹೊಳಗುಂದಿ, ಹೂವಿನ ಹಡಗಲಿ ತಾ.

ಗರ್ಭದಲ್ಲಿರುವ ಕಂದ ತನ್ನ
ಮೊಳಕೆಯ ಕೈಕಾಲು ಮಿಸುಕಿದಾಗ
ಆ ತಾಯಿ ಆನಂದದಿ ಆಡುವ
ಪ್ರೇಮದ ಬೈಗುಳ ಆಲಿಸಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?

ತೊಟ್ಟಿಲಲ್ಲಿ ಮರಿ ಚಂದ್ರಮನಂತೆ
ತುಟಿ ಅರಳಿಸಿ ನಗುವಾಗ
ಪುಟ್ಟ ಕೈಗಳ ಹಿಡಿದು ಅಲುಗಿಸಿ
ನಗುವ ಚಂದ್ರಮುಖಿ ಅಮ್ಮನ ನೋಡಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?

ಅಂಬೆಗಾಲಿಡುತಾ ಅಮ್ಮಾ.ss ಎನುತಾ
ಒಮ್ಮೊಮ್ಮೆ ಎಳೆ ಪಾದದಿ ನಿಲ್ಲುತಾ
ಸುಮ್ಮ ಸುಮ್ಮನೇ ಬಿದ್ದು ಅಳುವಾಗ
ಅಮ್ಮನ ತೋಳಲಿ ಸೇರಿ ಹರ್ಷಿಸಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?

ಮನೆ ಮುಂದೆ ಹಾದು ಹೋಗುವ 
ಓಣಿಯ ಮಂದಿ ಇಣಿಕಿ ನೋಡಿ
ಜಾಣಮರೀ.ss ಪುಟ್ಟಾ.ss ಎಂದು
ಗೋಣಾಡಿಸಿ  ಮುದ್ದಾಡೋದ ಸವಿಯಲು
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?

ಓರಿಗೆ ಹುಡುಗರ ಜೊತೆ ಆಟವಾಡಿ
ಜಾರಿ ಬಿದ್ದು ಗಾಯ ಮಾಡಿಕೊಂಡು
ಚೀರುತ್ತಾ ಮನೆಗೆ ಬಂದಾಗ ಅಮ್ಮ
ತೋರುವಾ ಪ್ರೀತಿಯ ಅಪ್ಪುಗೆಗೆ 
ಮತ್ತೊಮ್ಮೆ ನಾ ಮಗುವಾಗಬಾರದಿತ್ತೇ..?

- ಜಗದೀಶ ತಿಗರಿ. ಹೊಳಗುಂದಿ,  ಹೂವಿನ ಹಡಗಲಿ ತಾ. ವಿಜಯ ನಗರ ಜಿ. 8970273749.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮುಗ್ಧತೆಯ ಸುತ್ತ. (ಕಥೆ) - ಶಾಂತಾರಾಮ ಶಿರಸಿ, ಉತ್ತರ ಕನ್ನಡ.

ಹಳ್ಳಿ ಜೀವನವೆಂದರೆ ಪರಿಸರಕ್ಕೆ ಹೊಂದಿಕೊಂಡು ಬದುಕಲೇ ಬೇಕು. ನಂಬಿಕೆ ಅದರಲ್ಲೂ ಮೂಢನಂಬಿಕೆಗಳ ಸುತ್ತಲೂ ಸುತ್ತು ಹಾಕುತ್ತಾ ಸಾಗುತಿರಲೇ ಬೇಕು.. 

ನಾನು ಹೇಳ ಹೊರಟಿರುವ ಕಥೆಯೇನೆಂದರೆ 
'ಮುಗ್ಧ ಬಾಲೆಯ ಸುತ್ತ ಎಲ್ಲರ ಚಿತ್ತ' ಮುಂದೆ ಸಾಗುತ್ತಾ ತಿಳಿಯುವುದು.. 
ಹಳ್ಳಿಯ ಜನರ ಜೀವನದಲ್ಲಿ ಹಾಸುಹೊಕ್ಕಾಗಿರುವ ಜಗಲಿ ಮಾತುಕಥೆಯಲ್ಲಿ  ಕೇಳಿಬರುವ ಅನುಭವದ ಸುದ್ಧಿ ಸಮಾಚಾರಗಳ ನಡುವಿಂದ ಹೊರಬಂದ ಸ್ವತಃ ಅವರೇ ಕಂಡ ಧ್ವನಿ-ಚಿತ್ರಣಗಳು ಕಣ್ಮುಂದೆ ಬಂದು ಜೀವವೇ ಬಾಯಿಗೆ ಬಂದ ಹಾಗೇ ಮಾಡಿದ ಭಯದ ಕಾಡಿನ ನಡುವಿನಿಂದ ಹೊತ್ತು ತಂದ ಮೈ ನವಿರೇಳಿಸುವ ನಡುಕ ಹುಟ್ಟಿಸುವ ಆಡುಮಾತಿನಂತೆ  ಹೆದರಿಸುತ್ತೆ ಎಂಬುದರ ಸುತ್ತ ಹೆಣೆದುಕೊಂಡಿರುವ ಉಳ್ಳವರು ಬಡವರನ್ನು ತಮ್ಮ ಸ್ವಾರ್ಥಕ್ಕಾಗಿ ಬಲಿ ಪಡೆದುಕೊಳ್ಳುವ ಜಗಲಿ ಕಟ್ಟೆಯ ಒಬ್ಬರ ಅನುಭವದ ಮಾತಿನ ಕಥೆಯ ತುಣುಕನ್ನು ಇಲ್ಲಿ ಇಳಿಸುವೆ.. 

ಹಳ್ಳಿ ಬದುಕು ಎಂದರೆ ಕಾನನ, ಅಡವಿ, ಪರಿಸರಕ್ಕೆ ಹೊಂದಿಕೊಂಡೆ ಬದುಕನ್ನು ದೂಡಲೇಬೇಕು. ಹಾಗೇ ಜೀವನ ಸಾಗಿಸಲು ದೂರದ ಧಣಿಗಳ ಅಥವಾ ಜಮೀನ್ದಾರರ, ಒಡೆಯರ ಮನೆಗೆ ಹೋಗಿ ಅಲ್ಲಿ ಚಾಕರಿ ಮಾಡಿ ಜೀವನ ಸಾಗಿಸಲೇ ಬೇಕು.
 
ಅಥವಾ ಪಕ್ಕದ ಊರಿಗಾದರೂ ದುಡಿಯಲು ಹೋಗಿ ಬಂದು  ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ. 
ಗಂಡಸರು, ಹೆಂಗಸರು, ೩-೪ ಕಿಲೋ ಮೀಟರ್ ನಷ್ಟು ದೂರ ಕಾಡಿನಲ್ಲಿಯೇ ಕ್ರಮಿಸಿ  ಕೆಲಸಕ್ಕೆ ಹೋಗಬೇಕು.
ಇದು ನಿತ್ಯ ಕಾಯಕ.
ಹೀಗೆ ಹೋಗಬೇಕಾದರೆ ನಾಲ್ಕೈದು ಜನರು ಗುಂಪಾಗಿ ಹೋಗಲೇ ಬೇಕು.
ಹೀಗೆ ಬದುಕು ಸಾಗುತಿರಲೇಬೇಕು. 
ಅದೊಂದು ದಿನ ಮಳೆಗಾಲ ಧಣಿಗಳ ಮನೆಯಲ್ಲಿ ಚಾಕರಿ ಮಾಡಿ ಮುಗಿಸುವುದಕ್ಕೂ ಮೂರ್ಸಂಜೆ ಹೊತ್ತು ಹತ್ತಿಕೊಳ್ಳುವುದಕ್ಕೂ ಸಮನಾಗುತ್ತದೆ.ಆ ದಿನ ಅಮವಾಸ್ಯೆ ಬೇರೆ. ಕತ್ತಲಾಗಿ ಬಿಡುತ್ತೆ.ದಾರಿ ಕಂಡರೂ ಒಂಥರಾ ಮಬ್ಬಾಗಿ ಸ್ಪಷ್ಟವಾಗಿ ಕಾಲಡಿ ಏನೂ ಕಾಣುವುದಿಲ್ಲ. 
ಒಡೆಯರ ಮನೆಯಿಂದ ಬರೋಬ್ಬರಿ ಎರಡು ಕಿಲೋ ಮೀಟರ್ ದೂರ ಹಳ್ಳ ದಾಟಿ ಕಗ್ಗತ್ತಲ ಕಾಡಿನ ದೈತ್ಯ ಮರಗಳ ನಡುವೆ ಉಸಿರು ಬಿಗಿಹಿಡಿದುಕೊಂಡು ಬರಲೇ ಬೇಕು. 
ಏನಕ್ಕೆಂದರೆ ಆ ಜಾಗ ಅಂತದ್ದು.
ಈ ದಾರಿಯಲ್ಲಿ ಹೆದರಿಸುತ್ತದೆ ಎಂದು ಜನರೆಲ್ಲರೂ ನಂಬಿದ್ದರು. 
ಎರಡು ಉದ್ದನೆಯ ಕಟ್ಟಿಗೆಯ ತುಂಡು ತೆಗೆದು ಅದಕ್ಕೆ ಬಟ್ಟೆಯ ಸುತ್ತಿ ಒಂಚೂರು ಸೀಮೆಎಣ್ಣೆ ಸೋಕಿ ಒಂದು ಬೆಂಕಿಪಟ್ನವನ್ನು ಪಡೆದು, ಎರಡು ಚೂಡು/ಜುಂಜುಗಳಿಗು ಬೆಂಕಿ ಹಚ್ಚಿಕೊಂಡು ಮನೆಕಡೆ ಹೊರಟರು... 

ಈಗ ಕಥೆಯ ಕಾತರತೆಯ ಮುಖ್ಯಭಾಗ ಪ್ರಾರಂಭ . 
ಸಣ್ಣನೇ ಜಿಟಿ-ಜಿಟಿ ಮಳೆ, ಕಂಬಳಿ ಕೊಪ್ಪೆಗಳು ತಲೆಗೆ ಹಾಕಿಕೊಂಡು ದಢ-ಭಡ ಎಂದು ಸಾಗುತಿರುವ ಇವರಲ್ಲಿ  ಊರಿನ ದೇವರ ಗುಡಿಯತನಕ ಮುಟ್ಟಿದರೆ ಸಾಕಪ್ಪಾ ಎಂಬುದು ಮನಸ್ಸಿನ ಇಚ್ಚೆ. 
ಇವರ ಇಚ್ಛೆ ಆ ದೇವರು ಈಡೇರಿಸುವನೋ ಕಾದು ನೋಡಿ .. 
ದಾರಿಯಲ್ಲಿ ಮಾತಾಡಿಕೊಂಡು ಪಟಾ-ಪಟಾ ಬರುತ್ತಿದ್ದಾರೆ. 
ಗಾಳಿಯು ಒಂದೇ ಸಮನೆ ಬೀಸುತ್ತಿದೆ. ಚೂಡುಗಳು ಆಗೋ-ಇಗೋ ಅನ್ನುತ್ತಿವೆ.
ಹೊಳೆಯ ಹತ್ತಿರ ಬಂದು ನೋಡುತ್ತಾರೆ ಮಳೆಯ ಪ್ರಮಾಣ ಕಡಿಮೆ ಇದ್ದರೂ ಕಡುಗೆಂಪು ನೀರು ಹರಿಯುತ್ತಿರನವುದು ನೋಡಿ ಎದೆಯಲ್ಲಿ ಝಲ್ ಎನಿಸಿತು, ರೋಮಗಳು ಹಾಗೇ ಎದ್ದುನಿಂತವು.ತಣ್ಣನೆಯ ಮಳೆಯಲ್ಲೂ ಬೆವರಿಳಿಯಲು ಪ್ರಾರಂಭಿಸಿತು. 
ಹಳ್ಳದಲ್ಲಿ ನೀರು ಕಡಿಮೆ ಇದ್ದರೂ ದಾಟಲು ಭಯ. 
ಆದರೂ ದೇವರ ಮೇಲೆ ಭಾರ ಹಾಕಿ ದಾಟಲು ಮುಂದಾದರು. 
ನೀರಿನೊಳಗೆ ಕಾಲು ಇಟ್ಟಿದ್ದೇ ತಡ, ಎರಡೇ ಹೆಜ್ಜೆಗೆ ಹೊಳೆ ದಾಟಿದ್ದೆ ಬದುಕಿದೆವು ಎಂದು ನಿಟ್ಟುಸಿರು ಬಿಡಲು ಹಿಂತಿರುಗಿ ನೋಡಿದಾಕ್ಷಣ ಹೊಳೆಯ ನೀರೆಲ್ಲಾ ತಿಳಿಯಾಯಿತು. 
ಅವರಿಗರಿವಾಯಿತು ಇಲ್ಲಿಂದ ದೇವಸ್ಥಾನದ ಕಟ್ಟೆ ಬರುವವರೆಗೂ ಇದು ಕಟ್ಟಿಟ್ಟ ಬುತ್ತಿ. ಅವನೇ ಕಾಪಾಡಬೇಕೆಂದು ಅವನನ್ನೇ ನೆನೆಯುತ್ತಾ ಸಾಗುತಿರಲು.

ಅಮ್ಮಾ...ಕೂ...ಎಂಬ ಹೆಣ್ಣಿನ ಧ್ವನಿಯಿಂದ ಕರೆದಂತಾಯ್ತು. ಅದನ್ನೆಲ್ಲಾ ಲಕ್ಷಿಸದೇ, ಮುಂದೆ ಧಾವಿಸತೊಡಗಿದರು. 
ಆದರೂ ಯಾವುದೋ ಹೆಣ್ಣಿನ ಧ್ವನಿ ಮತ್ತೆ ಅಮ್ಮಾ,ನಿಲ್ಲಿ,ಯಾರಾದ್ರೂ ಕಾಪಾಡಿ , ಯಾರಾದರೂ ಬನ್ನಿ ಎಂದು ಕರೆದ ಹಾಗಾಯಿತು. ಈ ಧ್ವನಿಯು ಅವರಲ್ಲಿ ಒಂದು ಹೆಂಗಸಿನ ಮಗಳ  ಧ್ವನಿಯು ಆಲಿಸಿದ ಹಾಗಾಯಿತು. ಆದರೂ ಹೆದರಿಕೆ, ಭಯ, ನಡುಕಗಳು ಅವರನ್ನು ಅಲ್ಲಿಯ ಸನ್ನಿವೇಶಗಳಿಗೆ ಕಿವಿಕೊಡದಂತೆ ಮಾಡಿ ಮುಂದೆ ಸಾಗಲು ಮನಸ್ಸು ಹೇಳುತ್ತಿತ್ತು.
ಹಾಗೇ ಮುಂದೆ ಬರಲು ಯಾರೋ ಇಬ್ಬರು ಕಾಡಿನಲ್ಲಿ ಬೆಳಕು ಹೊಡೆದಂತಾಯಿತು, ಆ ಕಡೆಯಿಂದ ಒಡಾಡುವ ದರ್ಕಿನ ಶಬ್ಧ ಕೇಳಿಸುತ್ತಿತ್ತು. 
ಇವರಿಗೇನೋ ದೆವ್ವ,ಭೂತ, ಪಿಶಾಚಿಗಳೇ ನಮ್ಮನ್ನು ಹೆದರಿಸುತ್ತಿವೆ ಎಂಬ ಭಯದಿಂದ ದಾಪುಗಾಲು ಹಾಕತೊಡಗಿದರು. 
ಇನ್ನೇನೂ ದೇವರ ಗುಡಿ ಕಾಣುತ್ತಿತ್ತು. 
ಅಷ್ಟರಲ್ಲಿ ಯಾರೋ ಇಬ್ಬರು ಬಿಳಿ -ಕೆಂಪು  ಸೀರೆಯುಟ್ಟ ಎರಡು ಹೆಂಗಸರು ಇವರ ಪಕ್ಕದಿಂದ ಹಾದು ಹೋದರು. 
ಇವರ ಜೀವ ಬಾಯಿಗೆ ಬಂದಂತಾಯಿತು. 
ಅವರಿಗೇನೂ ಆಗಲಿಲ್ಲ.. ಆದರೆ ಹೆದರಿಕೆ ಎನ್ನುವುದು ಯಾರನ್ನೂ ಸಹ ಏನು ಬೇಕಾದರೂ ಮಾಡಬಹುದು. 
ಅವರು ಹಳ್ಳಿಯ ಹೆಂಗಳೆಯರಾಗಿದ್ದರಿಂದ ಸ್ವಲ್ಪ ನಾಟಿತನ, ಗಡಸು ಧೈರ್ಯ, ದೇಹದಲ್ಲಿ ತುಂಬಿತ್ತು. 
ಆದರೆ ಕಾಡಿನ ದಾರಿಯಲ್ಲಿ ಬೆಂಕಿಪಟ್ಟಣ,ಉದುಬತ್ತಿ,
ಲಿಂಬು ಬಿದ್ದಿದ್ದನ್ನು ಒಬ್ಬಳು ಗಮನಿಸಿದ್ದಾದ್ರೂ ಭಯದ ನಡುವೆ ಅವೆಲ್ಲಾ ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ.

ದೇವರ ಗುಡಿಯ ದಾರಿಗೆ ತಲುಪಿದರು. ನಿಟ್ಟುಸಿರು ಬಿಟ್ಟರು. ಆದರೆ ಮನೆಯ ಅಂಗಳಕ್ಕೆ ತಲುಪುವುದರೊಳಗೆ ಒಂದು ಹೆಂಗಸಿನ ಎದೆಯ ಡವ-ಡವ ಶಬ್ಧ ನಿಂತಿರಲಿಲ್ಲ, ನಡುಕವೂ ನಿಂತಿರಲಿಲ್ಲ, ಮನಸ್ಸಿನಲ್ಲಿ ಏನೋ ಕಳೆದುಕೊಂಡಂತೆ ಭಾಸ, ಬದುಕೆ ಇಂದಿಗೆ ಕೊನೆಯಾಯಿತೇ ಎಂಬ ಶೋಕ. 
ಏತಕೇ ಇಂತಹ ಯೋಚನೆಗಳು ಬರುತ್ತಿವೆ ಎಂದು ಅಂಗಳದ ಮೆಟ್ಟಿಲನ್ನು ಏರುತಿರಲು ಅಂಗಳದಲ್ಲಿ ನಾಲ್ಕೈದು ಜನ ಗಂಡಸರು, ಮೂರ್ನಾಲ್ಕು ಜನ ಹೆಂಗಸರು ನಿಂತು ಯಾರಿಗೋ ಕಾಯುತ್ತಿರುವಂತೆ ಇವರಿಗೆ ಕಂಡಿತಾದರೂ ಏನೋ ಮಾತಾಡ್ತಾ ಇರ್ಬೇಕು ಎಂಬ ಭಾವನೆಯಿಂದ ಅಂಗಳಕ್ಕೆ ಬಂದವಳೇ ಮಗಳನ್ನು ಕರೆದಳು.
ತಕ್ಷಣ ನಿಮ್ಮ ಜೊತೆ ಬರಲಿಲ್ವಾ ಎಂಬ ಮಾತು ಕೇಳಿದ್ದೇ ತಡ ಮೂರ್ಛೆ ಬಿದ್ದಳು.
ಎಲ್ಲರಲ್ಲೂ ಭಯ, ಆತಂಕ ಮನೆ ಮಾಡಿತ್ತು, 
ಇನ್ನೊಂದು ಹೆಂಗಸಿನ ಹತ್ತಿರ ಹೇಳಿದರು ಹುಡುಗಿಯು ಶಾಲೆಯಿಂದ ನೇರವಾಗಿ ಒಡೆಯರ ಮಗಳ ಜೊತೆ ಅಲ್ಲಿಗೇ ಹೋಗಿರಬಹುದು, ಮತ್ತು ನಿಮ್ಮ ಜೊತೆ ಬರಬಹುದೇನೋ ಎಂದು ಮಾತಾಡ್ತಾ ಇದ್ದದ್ದಾಗಿತ್ತು... 

ಆದರೆ ಅಲ್ಲಿ ನಡೆದ ಅಸಲಿ ಕಥೆಯೇ ಬೇರೆಯಾಗಿತ್ತು. 
ಇದರ ಹಿಂದಿನ ಸಂಗತಿ-ಸನ್ನಿವೇಶ, ಉದ್ದೇಶಗಳೇ ಬೇರೆಯದ್ದಾಗಿತ್ತು. 
ಎಲ್ಲವನ್ನು ಕೂಡ ಯೋಜನಾತ್ಮಕವಾಗಿಯೇ ರೂಪಿಸಲಾಗಿತ್ತು. 
ಯಾವುದೋ ಒಂದು ಆಸೆಯನ್ನು ಪೂರೈಸಲು ಆ ಮುಗ್ದ ಹೆಣ್ಣು ಕೂಸು ಬಲಿಯಾಗಿದ್ದಳು.
ಇದರ ಹಿಂದೆ ನಿಂತವನೇ ಆ ಹೆಂಗಸರು ಚಾಕರಿ ಮಾಡಿದ ಧಣಿ/ಒಡೆಯನಾಗಿದ್ದನು..

ಇವೆಲ್ಲಾ ಏತಕೇ ಎಂದು 
ಇದರ ಸುತ್ತ ಮೂಡುವ ಕಾಡುವ ಪ್ರಶ್ನೆಗಳಿಗೆ  ಕಥೆಯ ಎರಡನೇ ಭಾಗ ರಹಸ್ಯ ಸತ್ಯ ಬಿಚ್ಚಿಡುತ್ತದೆ ಉತ್ತರಿಸುತ್ತದೆ.
- ಶಾಂತಾರಾಮ ಶಿರಸಿ, ಉತ್ತರ ಕನ್ನಡ. 
8762110543
7676406237.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವನ-ಬನ (ಕವಿತೆ) - ಧ್ಯಾಮ್ ರಾಜ್ ವಾಯ್ಹ್ ಸಿಂದೋಗಿ.

ವನ ಸಿರಿ ರೂಪವ ಕಂಡು
ಮನ ಸೋತು ಕರಗಿ ಕೊರಗಿದೆನು
ದಾರು ಕುಡಿದು ಕಡಿದು  ತುಂಡು
ನಿದ್ದೆ ಮಾಡದೆ ರಾತ್ರಿಯ ಕಳೆದೆನು//

ಕೆಳಿತು ಗೆಜ್ಜೆಯ ನಾದ
ಕಣ್ಣಿಗೆ ಕಾಣದು ಪಾದ
ನೀಡದೆ ಮುದ ನೀಡಿತು ಭಾಧ
ಬಲ್ಲವರಾರು ಹೃದಯ ವೀಣೆಯ ಶೋಧ//

ಮರ ಬಳ್ಳಿಯ ಅಪ್ಪಿಗೆ
ಸೂರ್ಯ ಚಂದ್ರರ ಒಪ್ಪಿಗೆ
ನಿಜ ಅದು ಕಾನನ ಸ್ವರ್ಗದ ತಾಣ
ಮಜ ಮಾಡಲು ತಡ ಮಾಡದೆ ಮಾಡು ಪಯಣ//

ಸವಿ ಹಣ್ಣು ಹಂಪಲ ಗಡ್ಡೆ ಗೆಣಸು
ಬೆಳೆಯಲು ಕಾಣು ಸುಂದರ ಕನಸು
ಪೀಳಿಗೆ ಬಾಳಲು ತುಸು ಪೋಷಿಸು
ನೀಡುವೆ ಆಹಾರ ನೀರು ಶುದ್ದ  ಗಾಳಿ ಸೇವಿಸು//

ಈ ಒಡಲು ಜೀವರಾಶಿಗಳ ಕಣಜ
ಅರಿತು ಬೆರೆತು ಬಾಳು
ಹಿರಿಯರೆ ಮಾಡಿಲ್ಲವೆ ವನ ಬನ ಪೂಜ
ಬದುಕಿಗೆ ಬರದಿರಲು  ಗೋಳು//
- ಧ್ಯಾಮ್ ರಾಜ್ ವಾಯ್ಹ್ ಸಿಂದೋಗಿ. ಸಾ!!ಭೈರಾಪೂರ, ತಾ!ಜಿ!!ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಂಗೈ ಮುಂಗೈ (ಕವಿತೆ) - ಕಿರಣ್ ಕುಮಾರ ಹೆಚ್ ತುಂಬೇನಹಳ್ಳಿ.

ಅಂಗಲಾಚು ಅಂಗೈ
ಹಿಡಿ  ಅನ್ನಕ್ಕೆ
ಮುಂಗೈ ಚಾಚು
ಮುಂದೆ ದಾನಕ್ಕೆ

ಅಂಗೈ ಚಾಚಿದರೆ
ಅಂಗಲಾಚಿ ಲಂಚಕ್ಕೆ
ಸಾಟಿ ಇಲ್ಲವೇ
ನಿನ್ನ ನೀಚತನಕ್ಕೆ

ಹಂಗಿಸುವವರ ಹಂಗು
ನಿನ್ನ ಅಂಗೈಯ ತೋರು
ಬೆರಳು ತೋರಿಸುವ
ದಾರಿ ಜಯಭೇರಿ

ಕೊಲ್ಲುವ ಅಂಗೈಲೇ
ಇರುವುದು ಅಂದ
ಮಾಡು ನೀ ಚಂದ
ತಾನಾಗಿಯೇ ದಾರಿ ಮುಂದ

ಅಂಗೈಯಲ್ಲೇ ಅರಮನೆ
ಮುಂಗೈಯಲ್ಲೇ ಸೆರೆಮನೆ
ನೀನಿರುವ ನಡುಮನೆ
ಮುಗ್ಗರಿಸಿದರೆ ಮಸಣದಮನೆ

ಅಂಗೈಯ ಹುಣ್ಣಿಗೆ
ಕನ್ನಡಿ ಬೇಕೇ
ಮುಂಗೈಯ ಮುನ್ನುಡಿ
ಯೋಚನೆ ಬರೆಯಬೇಕೇ ಎಂದು

- ಕಿರಣ್ ಕುಮಾರ  ಹೆಚ್ 
ತುಂಬೇನಹಳ್ಳಿ
ಕೈಲಾಂಚ ಹೋಬಳಿ
ಕೆ.ಪಿ. ದೊಡ್ಡಿ ಅಂಚೆ
ರಾಮನಗರ ತಾ ಮತ್ತು ಜಿಲ್ಲೆ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)


ಸ್ವಾತಂತ್ರ್ಯದ ಕಿಡಿಹೊತ್ತಿಸಿದ ಕನ್ನಡರಾಣಿ ಕಿತ್ತೂರಿನ ರಾಣಿ ಚೆನ್ನಮ್ಮ (ಲೇಖನ) - ಶಿವನಗೌಡ ಪೊಲೀಸ್ ಪಾಟೀಲ,ಹವ್ಯಾಸಿ ಬರಹಗಾರರು ಕೊಪ್ಪಳ.

" ಕಪ್ಪ.. ಕಪ್ಪ... ಕಪ್ಪ ಯಾರನ್ನು ಕೇಳುತ್ತಿದ್ದೀ ಕಪ್ಪ ಕೊಡಲು! ಯಾತಕ್ಕೆ ಕೇಳುತ್ತಿ? ಮೋಡ ಮಳೆ ಸುರಿಸುತ್ತದೆ, ಭೂಮಿ ಬೆಳೆಯುತ್ತದೆ, ನಿನಗೇಕೆ ಕೊಡಬೇಕು ಕಪ್ಪ? ನೀವೇನು ನೆಂಟರೆ, ಸೋದರರೇ, ದಾಯಾದಿಗಳೇ? ನಿಮಗೇಕೆ ಕೊಡಬೇಕು ಕಪ್ಪ? ನೀವೇನು ಉತ್ತಿರಾ, ಬಿತ್ತಿರಾ, ಬೆಳೆದಿರಾ, ನೀರು ಹಾಯಿಸಿ ಕಳೆಕಿತ್ತಿರಾ? ನಿಮಗೇಕೆ ಕೊಡಬೇಕು ಕಪ್ಪ.
-  ರಾಣಿ ಚೆನ್ನಮ್ಮ.
                   ಚೆನ್ನಮ್ಮ ಹುಟ್ಟಿದ್ದು 1778ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು 6 ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ, ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು.
                         179 ವರ್ಷಗಳಷ್ಟು ಹಿಂದೆಯೇ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಊದಿ ಕೆಚ್ಚೆದೆಯಿಂದ ಹೋರಾಡಿದ ಪ್ರಪ್ರಥಮ ಮಹಿಳೆ ಕಿತ್ತೂರ ರಾಣಿ ಚೆನ್ನಮ್ಮ ಕರ್ನಾಟಕದ ಹೆಮ್ಮೆಯ ವೀರರಾಣಿ.ಒಲಿದರೆ ನಾರಿ, ಮುನಿದರೆ ಮಾರಿಷಿ ಎಂಬ ಮಾತನ್ನು ಕಾಕತಿಯ ಪ್ರಸಿದ್ದ ದೇಸಾಯಿ ಮನೆತನಕ್ಕೆ ಸೇರಿದ ಚೆನ್ನಮ್ಮ ತನ್ನ ಬಾಲ್ಯಾವಸ್ಥೆಯಲ್ಲಿಯೇ ಕಾರ್ಯರೂಪಕ್ಕೆ ತಂದಿದ್ದಳು. ಕುದುರೆ ಸವಾರಿ, ಕತ್ತಿ ವರಸೆ, ಬಿಲ್ವಿದ್ಯೆಗಳನ್ನು ಕಲಿತು, ಅವುಗಳ ಬಳಕೆಯ ಹದವರಿತಿದ್ದ ಚೆನ್ನಮ್ಮಳಿಗೆ ಮನೆಗೆಲಸದಷ್ಠೇ ಸಂತೋಷವಾಗಿದ್ದವು. 1796 ರಲ್ಲಿ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನೊಂದಿಗೆ ಚೆನ್ನಮ್ಮಳ ವಿವಾಹ ನಡೆಯಿತು. ಕಿರಿಯ ವಯಸ್ಸಿನಲ್ಲಿಯೇ ಕಿತ್ತೂರಿನ ರಾಜ್ಯಭಾರ ಹೊತ್ತ ಮಲ್ಲಸರ್ಜನು ನಿಜಕ್ಕೂ ಶೂರ ಧೀರನಾಗಿದ್ದನು. ಮೊದಲ ರಾಣಿ ರುದ್ರವ್ವ ಚೆನ್ನಮ್ಮಳನ್ನು ಮಲ್ಲಸರ್ಜನ ಕಿರಿಯ ರಾಣಿಯಾಗಿ ತಂದಳು.
                  ಕಿತ್ತೂರು ಪುಟ್ಟದಾದರೂ, ಸುಖ ಸಮೃದ್ದಿಯ ಚೊಕ್ಕ ರಾಜ್ಯವಾಗಿದ್ದರಿಂದ ಇದರ ಮೇಲೆ ಪೇಶ್ವೆ, ಟಿಪ್ಪು ಸುಲ್ತಾನರ ಕಣ್ಣು ಬಿತ್ತು, ಕಿತ್ತೂರನ್ನು ಕಬಳಿಸಲು ಒಂದಿಲ್ಲೊಂದು ಸಂಚು ನಡೆಸುತ್ತಿದ್ದರು. ಮಲ್ಲಸರ್ಜನನು ಸೆರೆಸಿಕ್ಕು, ಸೆರೆಮನೆವಾಸದಲ್ಲಿ ಆರೋಗ್ಯ ತೀರ ಹದಗೆಟ್ಟು ಮರಳಿ ಕಿತ್ತೂರಿಗೆ ಬಂದ ನಂತರ 1818 ರಲ್ಲಿ ಕಾಲವಶನಾದ. ನಂತರ ಅವನ ತಮ್ಮ ಶಿವಲಿಂಗ ಸರ್ಜನನು ಪಟ್ಟವೇರಿದರೂ ಅವನು ಬೇಗನೆ ನಿಧನನಾದ ನಂತರ ಆಡಳಿತಭಾರ ಚೆನ್ನಮ್ಮಳ ಮೇಲೆ ಬಿತ್ತು. ಅನ್ನ ತಿನ್ನುವ ಸಂಸ್ಥಾನಕ್ಕೆ ದ್ರೌಹ ಮಾಡಲು ಹಿಂಜರಿಯದ ಮಲ್ಲಪ್ಪ ಶೆಟ್ಟಿ, ವೆಂಕೋಬರಾವ ಇಬ್ಬರೂ ಥ್ಯಾಕರೆಗೆ ಕಿತ್ತೂರಿನ ಒಳಗುಟ್ಟನ್ನು ತಿಳಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳತೊಡಗಿದರು. ಮುತ್ಸದ್ದಿಗಳಾದ ಬ್ರಿಟಿಷರು ಇವರನ್ನು ಉಪಯೋಗಿಸಿಕೊಂಡು ಕಿತ್ತೂರಿನ ಕೈವಶಕ್ಕಾಗಿ ಹೊಂಚು ಹಾಕಿದರು.
                   ಅಂದು 1824 ರಲ್ಲಿ ಅಕ್ಟೋಬರ್ 22 ಮಹಾನವಮಿ ಆಯುಧ ಪೂಜೆ, ಪೂಜೆಯ ಭಕ್ತಿ ಭಾವದಲ್ಲಿ ಮಗ್ನರಾದ ಕಿತ್ತೂರಿನ ನಾಗರಿಕರು ಒಮ್ಮಿಂದೊಮ್ಮೆಲೆ ಶುತ್ರುಗಳ ಮುತ್ತಿಗೆಯಿಂದ ದಿಗ್ಭ್ತ್ರಮೆಗೊಂಡು ಚೆನ್ನಮ್ಮ ಧೈರ್ಯಗುಂದದೇ ಯುದ್ಧಕ್ಕೆ ಸನ್ನದ್ಧಳಾಗಿ ಸೇನೆಗೆ ಏನೇ ಬಂದರೂ ಎದುರಿಸಲು ಸಿದ್ದವಾಗಿರುವಂತೆ ಹುರುಪು ತುಂಬಿದಳು. ಕೋಟೆಯನ್ನು ನೆಲಸಮಗೊಳಿಸಿ ಕಿತ್ತೂರನ್ನು ತಮ್ಮ ಅಧೀನಕ್ಕೆ ಸೇರಿಸಿಕೊಳ್ಳುವ ಕನಸಿನಲ್ಲಿದ್ದ ಥ್ಯಾಕರೆಗೆ ಕಿತ್ತೂರು ಕೋಟೆ ಹೆಬ್ಬಾಗಿಲು ತೆರೆದುಹರಿದು ಬರಲಾರಂಭಿಸಿದ ಉತ್ಸಾಹ,ಶಕ್ತಿ, ಶೌರ್ಯಗಳ ಸಾಕಾರದಂತಿದ್ದ ಕಿತ್ತೂರು ಸೇನೆಯನ್ನು ಕಂಡು ಜಂಘಾ ಬಲವೇ ಉಡುಗಿ ಹೋದಂತಾಯಿತು.
ಸ್ವತ: ರಾಣಿಯೇ ವೀರ ಪುರುಷರಂತೆ ಹೋರಾಡಿದರೆ ಇನ್ನು ಸೈನಕರು ಕೇಳಬೇಕೆ? ಕಂಡ ಕಂಡವರ ರುಂಡ ಚಂಡಾಡಿ ತಮ್ಮ ಆಯುಧಗಳಿಗೆ ಬ್ರಿಟಿಷ ಸೈನಕರ ಬಲಿಕೊಟ್ಟು ಅದರ ರಕ್ತಾಭೀಷೇಕ ಮಾಡಿದರು. ಮಿಂಚಿನಂದ ಸಂಚರಿಸಿ ಸಿಡಿಲೆರಗಿದಂತೆ ಶತ್ರುಗಳ ಮೇಲೆ ಎರಗುತ್ತಿದ್ದ ರಾಣಿಯನ್ನು ಕೊಲ್ಲಲು ಹೊಂಚು ಹಾಕಿದ ಥ್ಯಾಕರೆ ಸಾಹೇಬ ಕಿತ್ತೂರ ಸೈನಕರ ಆಯುಧಗಳಿಗೆ ಮಹಾನವಮಿ ಮಾರಣ ಹೋಮಕ್ಕೆ ಬಲಿಯಾದ. ಬ್ರಿಟಿಷ ಕಂಪನಿ ಸೇನೆ ಕಿತ್ತೂರಿನಲ್ಲಿ ಮಣ್ಣು ಮುಕ್ಕಿತ್ತು. ಹೆಂಗಸಿನ ಮುಂದಾಳತ್ವದಲ್ಲಿ ಪುಟ್ಟ ಕಿತ್ತೂರ ರಾಜ್ಯ ದೊಡ್ಡ ಬ್ರಿಟಿಷ ರಾಜ್ಯಕ್ಕೆ ತಲೆನೋವಾಯಿತು. ಇದು ಡೆಕ್ಕನ್ ಕಮಿಷನರ ಚಾಪ್ಲಿನನಿಗೆ ನುಂಗಲಾರದ ತುತ್ತಾಯಿತು. ಸೆರೆಯಾಳುಗಳನ್ನು ಬ್ರಿಟಿಷರಿಗೆ ಒಪ್ಪಿಸಲು ರಾಣಿಗೆ ಒಕ್ಕಣೆ ಕಳುಹಿಸಿ, ಹಾಗೆ ಮಾಡಿದರೆ ಮಾತ್ರ ಆಕೆಯನ್ನು ಕ್ಷಮಿಸುವದಾಗಿ ಹೇಳಿತು. ಆದರೆ ಸ್ವಾಭಿಮಾನ ಸ್ವಾತಂತ್ರ್ಯ ಪ್ರೇಮಿ ಚೆನ್ನಮ್ಮ ಒಪ್ಪುವ ಬದಲು ಕಿತ್ತೂರಿನಿಂದ ಸದಾಕಾಲ ಬ್ರಿಟಿಷರು ಕಾಲ್ತೆಗೆದರೆ ಮಾತ್ರ ಮಾತುಕತೆ ಎಂದಳು.
                   ಚಾಪ್ಲಿನನಿಗೆ ಇದನ್ನು ಸಹಿಸಲಾಗದೇ ಪುಟ್ಟ ಕಿತ್ತೂರಿನ ಮೇಲೆ ದೊಡ್ಡ ಸೈನ್ಯದೊಡನೆ ದಾಳಿ ಮಾಡಿದ, ಚೆನ್ನಮ್ಮ ಅಂಜದೆ ನಾಡಿನ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನು ತೆರಲು ಸಿದ್ದವೆಂದು ಹಟ ತೊಟ್ಟು ವೀರಾವೇಶದಿಂದ ಮುನ್ನುಗ್ಗಿದಳು. ಆದರೇನು ಕುತಂತ್ರ ವಿದ್ಯೆಯ ಪ್ರವೀಣರಾದ ಬ್ರಿಟಿಷರು ಅನ್ಯಾಯ ಹೇಡಿತನದಿಂದ ಯುದ್ಧದಲ್ಲಿ ಗೆದ್ದರು. ಕಿತ್ತೂರ ಕೋಟೆ ಬ್ರಿಟಿಷರ ವಶವಾಯಿತು.
                         ಕಡೆಗೂ ಬ್ರಿಟಿಷರ ಧ್ವಜ ಹಾರಾಡಲು ಎಡೆಮಾಡಿಕೊಟ್ಟೆಯಾ ಕಿತ್ತೂರು ಕೋಟೇಯೇ ? ಎಂಬ ವ್ಯಥೆಯಲ್ಲಿಯೇ ಬೈಲಹೊಂಗಲದ ಸೆರೆಮನೆಯಲ್ಲಿ 1829 ರ ಫೆಬ್ರವರಿಯಲ್ಲಿ ಕೊರಗಿ, ಕೊರಗಿ ಕೊನೆಯುಸಿರೆಳೆದಳು. ಇಡೀ ಜಗತ್ತಿನಲ್ಲಿಯೇ ಬೃಹತ್ ಸಾಮ್ರಾಜ್ಯ ನಿರ್ಮಿಸಿದ ಕುಟಿಲ ಬ್ರಿಟಿಷರನ್ನು ಎದುರಿಸಿದ ಕಿತ್ತೂರಿನ ರಾಣಿ ಚೆನ್ನಮ್ಮಳು ಚರಿತ್ರೆಯ ಪುಟಗಳಲ್ಲಿ ಸೇರಿ ಹೋಗಿದ್ದರೂ, ಆಕೆಯ ಶೌರ್ಯ, ಸಾಹಸ ಇಂದಿಗೂ ಕನ್ನಡ ನಾಡಿನ ಮನೆಮಾತಾಗಿದೆ.
ಇವತ್ತಿನ ಮಹಿಳೆಯರಿಗೆ ಸ್ಪೂರ್ತಿ. ಮಾದರಿ ಹೆಣ್ಣುಮಗಳು.ರಾಣಿ ಚೆನ್ನಮ್ಮ..... ಇವರಿಗೆ ಕೊಟಿ-ಕೊಟಿ ನಮನಗಳು....
- ಶಿವನಗೌಡ ಪೊಲೀಸ್ ಪಾಟೀಲ,
ಹವ್ಯಾಸಿ ಬರಹಗಾರರು - ಕೊಪ್ಪಳ
9845646370.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ತಳಿರು (ಕವಿತೆ) - ಶ್ರೀ ತುಳಸಿದಾಸ ಬಿ ಎಸ್. ಶಿಕ್ಷಕರು ಗೊರೇಬಾಳ ಕ್ಯಾಂಪ್, ಜಿ.ರಾಯಚೂರು.

ತವರಿಗೆ ತೆರಳಲುನುಮತಿ ಸಿಕ್ಕಾಗಿದೆ ಎಲ್ಲರಿಗದುವೆ ತವನಿಧಿ
ಬೆವರಿಗೆಲ್ಲರೂ ಬಾಗಿಯಾಗಿದೆ ಕಾಯಕವೇ ಇಲ್ಲಿ ಭವನಿಧಿ
ಜವರಾಯ ದೇವರ ಬಳಿ ನಿಲ್ಲಿಸಿಯಾಗಿದೆ ಈತನೆಮ್ಮ ನವನಿಧಿ
ರವವೆಲ್ಲ ಕಲರವಗಟ್ಟಿಯಾಗಿದೆ ಇದುವೆ ಈ ಭುವಿಯ ನಿಧಿ

ತೂರಿ ಬಿಡಿ ಜೊಳ್ಳನೆಲ್ಲ ಸ್ವಲ್ಪ ಗಟ್ಟಿಯಾದರೂ ಉಳಿಯಲಿ
ತೂಗಿ ಬಿಡಿ ಇರುವುದನೆಲ್ಲವ ಸ್ವಲ್ಪ ಸತ್ವವಾದರೂ ತಿಳಿಯಲಿ
ಅಳೆದು ಬಿಡಿ ಭಾವನೆಗಳೆಲ್ಲವ ಸ್ವಲ್ಪ ಹೊಸತನವಾದರೂ ಬರಲಿ
ಉಳಿದು ಬಿಡಿ ಎನ್ನಂತರಂಗದಲ್ಲಿ ಸ್ವಲ್ಪ ನಂಬಿಕೆಯಾದರೂ ಬರಲಿ

ಇಳಿದಾಗಿದೆ ಆಳಕ್ಕೆ ತೀರ ಮುಟ್ಟಬೇಕಿದೆ ಈಜಿ
ತಿಳಿಸಿಯಾಗಿದೆ ಭಾವನೆ ಸೇರಬೇಕಿದೆ ಹಿಂಡು ಗಜ
ಸೆಳೆತ ಬಾಡಿಯಾಗಿದೆ ಬಲಿಯ ಬೇಕಿದೆ ಯೋಚನೆಗಳೆಲ್ಲ ನಿಜ
ಬೆಳಕಿಗೆ ಮುಚ್ಚಿಯಾಗಿದೆ ಕಣ್ಣು ಹೇಗೆ ಕಂಡೀತು ರಾಜ್ಯ

ತಳಿರಂತೆ ಚಿಗುರೊಡೆದ ಪದಕೆ ಕೊಳೆ ಮೆತ್ತದಿರಲಿ
ತಾರಕರೇ ನೀವಾಗಿ ನಯವಾಗಿ ಮುನ್ನಡಿಸಿ ಬಿಡಿ
ತರುಲತೆಯ ಹೂವುಗಳೇ ಕಾವ್ಯ ಸುಗಂಧವಾಗಿರಿಸಿ
ಅರಿವಂತೆ ಮಾಡು ಲೋಕವೇ ಸತ್ಯ ಬಂದೆನ್ನ ಕಾವ್ಯದಿ ನೆಲೆಸು

-  ಶ್ರೀ ತುಳಸಿದಾಸ ಬಿ ಎಸ್. ಶಿಕ್ಷಕರು ಗೊರೇಬಾಳ ಕ್ಯಾಂಪ್,  ಜಿ.ರಾಯಚೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯೋತ್ಸವ ಒಂದು ನೆನಪು (ಲೇಖನ) - ಶ್ರೀ ಇಂಗಳಗಿ ದಾವಲಮಲೀಕ. ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

ಕನ್ನಡ ತಾಯಿ ಭುವನೇಶ್ವರಿಯ ಅವತಾರಗಳು
ಕರ್ನಾಟಕ ಏಕೀಕರಣಕ್ಕಾಗಿ ಅಹರ್ನಿಶಿ ಶ್ರಮಿಸಿದ ಕಟ್ಟಾ ಕನ್ನಡಿಗ,ತಮ್ಮ ಜೀವಮಾನದಲ್ಲಿ ಕನ್ನಡ ಯುವಕರಿಗೆ 
 ಸೆಲೆಯಾಗಿದ್ದ  ಶ್ರೀ ಅಂದಾನಪ್ಪ ದೊಡ್ಡ ಮೇಟಿಯವರು ರಚಿಸಿದ‌ ಕರ್ನಾಟಕ ಮಹಿಮ್ನಃ ಸ್ತೋತ್ರ ಗ್ರಂಥದಿಂದ ಆಯ್ದ ಭಾಗಗಳು.
ಖ್ಯಾತ ಸಾಹಿತಿ ಅನಕೃ ಅವರು ಮುನ್ನುಡಿ ಬರೆದ ಈ ಗ್ರಂಥದಲ್ಲಿ ಕನ್ನಡ ನಾಡ ತಾಯಿ ಭುವನೇಶ್ವರಿ ಶ್ರೀದೇವಿ ಬೇರೆ ಬೇರೆ ರೂಪಗಳಲ್ಲಿ ರಾಜ್ಯಾದ್ಯಂತ ಪ್ರಕಟವಾಗಿದ್ದಾಳೆಂಬುದನ್ನು ತುಂಬ ಮಾರ್ಮಿಕವಾಗಿ ಹೇಳಲಾಗಿದೆ.
ಹಂಪೆ-ಭುವನೇಶ್ವರಿ
ಮೈಸೂರು- ಚಾಮುಂಡೇಶ್ವರಿ
ಧಾರವಾಡ- ರೇಣುಕಾಂಬಾ
ಮುನಿರಾಬಾದ- ಹುಲಿಗೆವ್ವ
ಕೊಲ್ಲೂರು-ಮೂಕಾಂಬಿಕಾ
ಶಿರ್ಶಿ- ಮಾರಿಕಾಂಬಾ
ಬಾದಾಮಿ- ಬನಶಂಕರಿ
ಶೃಂಗೇರಿ- ಶಾರದಾ
ಸಿದ್ದ ಪರ್ವತ-ಅಂಬಾ ಭವಾನಿ
ಗೋಕರ್ಣ- ಭದ್ರಕರ್ಣಿಕೆ
  ಈ  ದಶರೂಪವನ್ನು ಪ್ರಸ್ತುತ ಪಡಿಸಿದ ಅವರು ದರ್ಶನ ಫಲವಾಗಿ ಮಹಿಮ್ನಃ ಸ್ತೋತ್ರ ರಚಿಸಿದ್ದಾರೆ.
     ಅಹಂಕಾರ ಮಮಕಾರಗಳು ಒಂದೆಡೆ ನಿರಾಶಾ ನಿರ್ವೀರ್ಯ ಭಾವಗಳು ಒಂದೆಡೆ ಈ ಇಕ್ಕೆಲದ ದೈತ್ಯ ಶಕ್ತಿಗಳ ನಡುವೆ ಕನ್ನಡ ರಾಜಕಾರಣ ಕಂಗೆಟ್ಟಾಗ ದೊಡ್ಡ ಮೇಟಿಯವರು ಶ್ರೀ ಅರವಿಂದ ಭಗವಾನ್ ಅವರು ಕೃಪೆಯಿಂದ ಅಂತರ್ಮುಖಿಯಾಗಿ ರಾಜರಾಜೇಶ್ವರಿಯನ್ನು ಧ್ಯಾನಿಸಿದಾಗ ಅವರ ಧ್ಯಾನ ದೃಷ್ಟಿಗೆ ದೃಗ್ಗೋಚರಿಸಿದ ಷೋಡಶ ರೂಪ ವಿಶೇಷಗಳ ಕುರಿತು ಅವರು ಹಾಡಿದ ಸ್ತೋತ್ರಗಳಿವು.ಇವುಗಳನ್ನು ಬಳ್ಳಾರಿಯ ಸಿ ವ ಚನ್ನ ಬಸವೇಶ್ವರರು ಅತ್ಯಂತ ತಾಧ್ಯಾತ್ಮತೆಯಿಂದ ಅಕ್ಷರ ಮಾಲೆಯಲ್ಲಿ ಪೋಣಿಸುವಲ್ಲಿ ಯಶಸ್ವಿಯಾಗಿದ್ದಾರೆ.
     *೧) ಅರ್ಧನಾರೀಶ್ವರ* 
     ವಿಶ್ವವೆಲ್ಲವೂ ಶಿವ ಶಕ್ತಿಯರ ಸಚ್ಚಿದಾನಂದಲೀಲಾವಿಲಸ.ಸದ್ರೂಪಿಯೇ ಶಿವನು.ಚಿದ್ರೂಪಿಯೇ ಶಕ್ತಿ. ಶಿವ ಶಕ್ತಿಗಳ ಸಾಮರಸ್ಯದ ಫಲವಾದ ವಿಶ್ವವೇ ಆನಂದ.
     *೨) ಪರಾಶಕ್ತಿ*
        ಭಾರತಾಂತರ್ಗತಳಾದ ಪರಾಶಕ್ತಿಯು ಒಂದು ಕೈಯಲ್ಲಿ ಸಮಸ್ತ ಭೂಗೋಳವನ್ನು ಹಿಡಿದು ನಿಂತಿದ್ದಾಳೆ. ಭೂಗೋಳದ ಗೋಳನ್ನು ಕಳೆಯುವ ಅಭಯವನ್ನು ನೀಡುತ್ತಿರುವಂತೆ ಆಕೆಯ ಅಭಯ ಹಸ್ತ ಸೂಚಿಸುತ್ತದೆ. ಮೇಲಿನ ಕೈಗಳೆರಡರಲ್ಲಿ ಪಾಶವನ್ನು ಪರಶುವನ್ನು ಧರಿಸಿದ್ದಾಳೆ.ಪಾಶವು ಬಂಧ ಕಾರಣ ಪರಶುವು ಮೋಕ್ಷ ಹೇಳಿತು.ಜಗತ್ತಿನ ಬಂಧ ಮೋಕ್ಷಗಳೆರಡೂ ಆಕೆಯ ಲೀಲೆಯೇ. ಹಿನ್ನೆಲೆಯಲ್ಲಿ ಪುರುಷನು ಪುರುಷೋತ್ತಮನಾಗಿ ಪರಾಶಕ್ತಿಯ ಲೀಲೆಗೆ ಸಾಕ್ಷಿ ಭೂತನಾಗಿದ್ದಾನೆ.ಶಕ್ತಿಯು ಆಡುವಾಕೆ.ಶಿವನು ನೋಡುವಾತ.
        *೩) ಭುವನೇಶ್ವರಿ.*
        ಪದ್ಮಾಸನಾಶೀನಳಾಗಿ ಭಗವತಿಯು ಕುಳಿತಿದ್ದಾಳೆ.ಅಭಯ ಹಸ್ತವನ್ನು ಚಿನ್ಮುದ್ರೆಯಲ್ಲಿ ಹಿಡಿದಿದ್ದಾಳೆ.ಸಚ್ಚಿದಾನಂದಾತ್ಮಕವಾದ ಲಿಂಗವನ್ನು ಧರಿಸಿದ್ದಾಳೆ.ಮೇಲಿನ ಕೈಗಳಲ್ಲಿ ಪಾಶವು ಕಂಗೊಳಿಸುತ್ತದೆ. ಹಿನ್ನೆಲೆಯಲ್ಲಿ ವಿಜಯನಗರದ ವಿರೂಪಾಕ್ಷ ದೇವಾಲಯದ ಗೋಪುರವು, ಕನ್ನಡ ನಾಡಿನ ಭೂಪರಿಮಿತಿಯು ಎದ್ದು ಕಾಣಿಸುತ್ತದೆ. ಇಬ್ಬದಿಗಳಲ್ಲಿ ಗಣಪತಿಯ ವಿಗ್ರಹವು ವಿಠ್ಠಲರಾಯ ದೇವಸ್ಥಾನದ ಶಿಲಾರಥವೂ ಇವೆ.ಹಂಪೆ ಯಲ್ಲಿ ಗಣಪತಿಯ ವಿಗ್ರಹವು ( ಸಾಸಿವೆ ಕಾಳು ಗಣಪತಿ ಮತ್ತು ಕಡಲೆ ಕಾಳು ಗಣಪತಿ) ಪೂರ್ಣವಾಗಿದೆ.ಶಿಲಾರಥವಾಗೆ  ಆ ರಥವಿರುವ ವಿಠ್ಠಲರಾಯ ದೇವಸ್ಥಾನವಾಗಲಿ‌ ಸಂಪೂರ್ಣವಾಗಿಲ್ಲ , ಅಪೂರ್ಣವಾಗಿ ಹಾಗೆಯೇ ಉಳಿದಿದೆ. ಅದನ್ನು ಮುಗಿಸುವುದರೊಳಗಾಗಿಯೇ ವಿಜಯನಗರದಲ್ಲಿ ಅಂತಃ ಕಲಹಗಳೂ ಹೊರಗಿನ ಕದನಗಳು ತಲೆಯತ್ತಿ ಕನ್ನಡಿಗರೆಲ್ಲರೂ ತಲೆತಗ್ಗಿಸುವಂತಹ ರಕ್ಕಸತಂಗಡಗಿಯ ಯುದ್ಧವಾಯಿತು.ತಲೆಗಳುರುಳಿದವು.ತಲೆಮಾರುಗಳೂ ಕಳೆದವು,ಅವರು ಆರಂಭಿಸಿದ್ದು ಹಾಗೆಯೇ ಆರಂಭದೆಸೆಯಲ್ಲಿಯೇ ಇದೆ.ಈ ಪೂರ್ಣಾಪೂರ್ಣಗಳ  ನಡುವೆ ಪರಿಪೂರ್ಣಳಾದ ಭುವನೇಶ್ವರಿಯು ಚಿತ್ರಿತಳಾಗಿದ್ದಾಳೆ.ಮಾನವನ ಸಂಕಲ್ಪ ವಿಕಲ್ಪಗಳಿಂದ ಅಪೂರ್ಣ ವಾದದ್ದು ಪೂರ್ಣವಾಗಬೇಕಾದದ್ದು‌ ಆಕೆಯ ದಿವ್ಯ ಸಂಕಲ್ಪವನ್ನೇ ಕೂಡಿದ್ದು.
        *೪) ಮಾಹೇಶ್ವರಿ*
        ಮಹೇಶ್ವರ ರೂಪವಾದ ಶಿವಲಿಂಗದಲ್ಲಿ ಸುಖಾಸಿನಳಾಗಿ‌ ನೆಲೆಸಿರುವಂತೆ ಇಲ್ಲಿ ಮಾಹೇಶ್ವರಿಯು ಚಿತ್ರಿತಳಾಗಿದ್ದಾಳೆ.ಲಿಂಗರ್ಭಾವಿಭೂತೆಯಾದ ಆ ಮಹಾಶಕ್ತಿ ಲಿಂಗಧಾರಿಯೂ ಆಗಿದ್ದಾಳೆ.ವಿಶ್ವದ ಸೃಷ್ಟಿ ಸ್ಥಿತಿ ಲಯ ತಿರೋಧಾನ ಅನುಗ್ರಹಗಳೆಂಬ ಪಂಚಕೃತ್ಯಪರಾಯಣಳಾದ ಮಾಹೇಶ್ವರಿಶಕ್ತಿ ನೆಲೆಸಿರುವುದು ಮಹೇಶ್ವರನಲ್ಲಿಯೇ ಅಂಥಹ ಮಹೇಶ್ವರ ನೆಲೆಸಿರುವುದು ಮಾಹೇಶ್ವರಿಯಲ್ಲಿಯೇ.
          *೫) ಮಹಾ ಕಾಳಿ*
          ಇಲ್ಲಿ ಚಿತ್ರಿತವಾಗಿರುವ ಕಾಳಿಯು ರುದ್ರ ಕಾಳಿಯಲ್ಲ ಭದ್ರ ಕಾಳಿ! ಮಹಿಷಾಸುರಾದಿ ರಾಕ್ಷಸರನ್ನು ಸಂಹರಿಸುವ ಕಾಲಕ್ಕೆ ಆಕೆಯು ತಳೆದಿದ್ದ ರೌದ್ರ ಭಾವವನ್ನು ಆಕೆಯೇ ಉಪಸಂಹರಿಸಿಕೊಂಡು ಶಾಂತಿಯಿಂದ ಕಾಂತಿಯಿಂದ ಪ್ರಸನ್ನಚಿತ್ತದಿಂದ ಅಭಯಹಸ್ತವನ್ನು ಹಿಡಿದು ಸಿಂಹಾರೂಢಳಾಗಿದ್ದಾಳೆ.ಬ್ರಹ್ಮಕಪಾಲವಿದೆ ಒಂದು ಕೈಯಲ್ಲಿ ತ್ರಿಶೂಲ ; ಒಂದು ಕೈಯಲ್ಲಿ ಪಾಶವಿದೆ.ತ್ರಿಪುಂಡ್ರಧಾರಿಯಾದ ಆಕೆಯ ಹಣೆಯ ಮೇಲೆ ಕಣ್ಣಿದೆ.ಜಟಾ ಮುಕುಟದಲ್ಲಿ ಸೋಮನೂ ,ಸೋಮಶೇಖರನೂ ಇದ್ದಾರೆ.ಕಿರೀಟದ ಹಿನ್ನೆಲೆಯಲ್ಲಿ ಭೇರುಂಡದ ಸಂಕೇತವು ಎದ್ದು ಕಾಣುತ್ತದೆ. ಅದು ಮೈಸೂರಿನ ಮತ್ತು ಮೈಸೂರನ್ನೇ ಮನೆಮಾಡಿಕೊಂಡು ನೆಲೆಸಿರುವ ಶ್ರೀ ಚಾಮುಂಡಿಯ ದಿವ್ಯ ಸಂಕೇತ. ಶಕ್ತಿಗೆ ಭೇರುಂಡೆ ಎನ್ನುವ ನಾಮವೂ ಇದೆ.
          ಮಹಾಕಾಳಿಯ  ವಾಹನವಾದ ಸಿಂಹವೂ ಕಟಸೂತ್ರದಲ್ಲಿರುವ ರುಂಡಾಮಾಲೆಗಳೂ, ಕೈಯಲ್ಲಿ ಹಿಡಿದಿರುವ ಕಪಾಲವೂ ರುದ್ರಭಯಂಕರವಾಗಿದ್ದರೂ ಆಕೆಯ ಮಂದಸ್ಮಿತಹಾಸದಿಂದೊಪ್ಪುವ ವದನಮಂಡಲವೂ‌ ಆಕೆಯ ಕರುಣಾಕಟಾಕ್ಷವೂ ಆಕೆಯ ವರದಹಸ್ತವೂ ಶಂಕರ ಶಿವಶಂಕರ ವಾಗಿದೆ.
          *೬) ಮಹಾಲಕ್ಷ್ಮಿ*
          ಶ್ರೀ ಮಹನ್ಮಹಾವಿಷ್ಣುವಿನ ನಾಭಿ ಕಮಲದಲ್ಲಿದ್ದಾನೆ.ಅವನ ಹೃತ್ಕಮಲದಲ್ಲಿ ಮಹಾಲಕ್ಷ್ಮೀಯಿದ್ದಾಳೆ.ಈ ಕಲ್ಪನೆ ಎಷ್ಟು ಸಾಂಕೇತಿಕವಾದದ್ದು!
          ಶ್ವೇತಪದ್ಮದಲ್ಲಿ ಪದ್ಮಾಸನಾಸೀನೆಯಾಗಿದ್ದಂತೆ ಮಹಾಲಕ್ಷ್ಮಿ ರೂಪಿತಳಾಗಿದ್ದಾಳೆ‌‌ ಇಲ್ಲಿ ಮುಂದಿನ ಎರಡು ಕೈಗಳಲ್ಲಿ ಶ್ರೀಫಲವನ್ನು ಕಮಲವನ್ನೂ ಹಿಡಿದಿದ್ದಾಳೆ.ಹಿಂದಿನ ಎರಡು ಕೈಗಳಲ್ಲಿ ಶಂಖಚಕ್ರಧಾರಿಣಿಯಾಗಿದ್ದಾಳೆ.ಮಣಿಮುಕುಟದಿಂದಲೂ ಸರ್ವಾಭರಣಗಳಿಂದಲೂಸಂಶೋಭಿತಳಾಗಿದ್ದಾಳೆ.ಸದ್ರೂಪಿಯಾದ ಈಶ್ವರನ ಸಂಪದ್ರೂಪಿಯಾದ ಶಕ್ತಿಯಾಕೆ ಅಮರ್ತ್ಯ ಸೌಂದರ್ಯದ ಅಮರ್ತ್ಯ ಸಂಪತ್ತಿಅ ಅಮೃತ ರೂಪಿಣಿಯಾದ ಮಹಾಲಕ್ಷ್ಮಿಯ ಮುಂದೆ ಅಮೃತಕಲಶವಿದೆ.
          *೭) ಮಹಾ ಸರಸ್ವತಿ*
          ಮಹಾ ಲಕ್ಷ್ಮೀಯು ಭೌತಿಕ ಸಂಪದ್ರೂಪಿಯಾದರೆ ಮಹಾ ಸರಸ್ವತಿ ಬೌದ್ಧಿಕ ಸಂಪದ್ರೂಪಿ.
          ವಿಕಸಿತ ಸಹಸ್ರದಳ ಪದ್ಮಪೀಠಸ್ಥಳಾದ ಭಗವತಿಯು ಅರ್ಧೋನ್ಮೀಲಿತ ದೃಷ್ಟಿಯುಳ್ಳವಳಾಗಿದ್ದಾಳೆ. ಜ್ಞಾನ ಜ್ಯೋತಿಗೆ ಆಕೆಯ ಕೈಯಲ್ಲಿರುವ ಪುಸ್ತಕವೂ ಜಪಮಾಲಿಕೆಯೂ‌ ಮಾತು ಮತ್ತು ಮಂತ್ರಗಳ ಸಂಕೇತ. ಮಾತು ವಾಂಗ್ಮಯವಾದರೆ ಮಂತ್ರವು ಮನನೀಯ. ಮಂತ್ರವು ಪರಾವಾಗ್ರೂಪವಾದರೆ ಮಾತು ಪರಾವಾಕ್ಕಿನ ವೈಖರೀರೂಪ.ಹಿಂದಿನ ಕೈಗಳಲ್ಲಿ ಎರಡು ಕಲಶಗಳನ್ನು ಎತ್ತಿ‌ ಹಿಡಿದಿದ್ದಾಳೆ ಶಾರದೆ.ಆ ಎರಡು ಕಲಶಗಳು ವಿದ್ಯಾ ವಿದ್ಯೆಗಳ ಸಂಕೇತ. ಮೃತ್ಯುವನ್ನು ದಾಟಲು ಆ ವಿದ್ಯೆಯೂ ಅಮೃತ್ವವನ್ನು ಪಡೆಯಲು ವಿದ್ಯೆಯೂ ಅವಶ್ಯಕವೆಂಬ  ಮಾತನ್ನು ಈಶವಾಸ್ಯಾದಿ ವೇದಾಂತ ಗ್ರಂಥಗಳು ಸಾರುತ್ತಿವೆ.ಜಟಾ ಮುಕುಟ ಮಂಡಿತಳಾದ ಶಾರದೆಯ ಶ್ರೀಲಲಾಟವು ಮುಂಗುರುಳಿನಿಂದ ಮುದ್ದಾಗಿದೆ.ನೀಲಾಲಕ ಲಲಾಟಶೋಭಿಯಾದ ಆಕೆಯ ಭ್ರೂಮಧ್ಯವು ಅರ್ಧ ಚಂದ್ರಾಂಕಿತದಿಂದೊಪ್ಪುತ್ತದೆ.ಮಹಾ ಸರಸ್ವತಿಯ ಪದ್ಮಪೀಠದ ಅಡಿಯಲ್ಲಿ ಮೃಣಾಳನಾಳವನ್ನು ಚಂಚುವಿನಲ್ಲಿ ಹಿಡಿದಿರುವ ಹಂಸವಿದೆ.ಸರಸ್ವತಿಯ ವಾಹನ ಹಂಸವೇ ಹೊರತು ನವಿಲಲ್ಲ.ಭಾರತೀಯ ಚಿತ್ರಕಲೆಯ ಸನಾತನ ಸಂಕೇತಗಳ ಮತ್ತು ಅಧ್ಯಾತ್ಮಿಕ ನಿರ್ದೇಶನಗಳ ಪೂರ್ಣ ಪರಿಚಯವಿಲ್ಲದಿರುವ ರವಿವರ್ಮನಿಂದ ಚಿತ್ರಿತವಾದ ಸರಸ್ವತಿಯ ಚಿತ್ರಗಳಲ್ಲಿ ಮಾತ್ರ ಗರಿಗೆದರಿಕೊಂಡು ನಿಂತಿರುವ ನವಿಲು ಸಿಗುತ್ತದೆ. ಪುರಾತನ ಶಿಲ್ಪಗಳಲ್ಲಿಯೂ ಚಿತ್ರಗಳಲ್ಲಿಯೂ ಅದಿಲ್ಲ.ಹಂಸವೆನ್ನುವ ಜೀವಭಾವದ ಮೇಲೆ ಸೋಹಂ ಎನ್ನುವ ದೇವಭಾವ ಆರೂಢವಾಗಿದೆ.ಜೀವಭಾವರು ಅವಿದ್ಯಾರತವಾದದ್ದು.ಜೀವಿಯಾಗಿ ಅವತಾರವಾಗುವ ದೇವನಲ್ಲಿಯೂ ಅಂತರ್ಯಾಮಿಯಾಗಿರುವ ಶಕ್ತಿಯು ಆಕೆಯೇ.ಬ್ರಹ್ಮಾದಿಕೀಟಪರ್ಯಂತವಾಗಿ ನೆಲೆಗೊಂಡಿರುವ ಸರ್ವಜ್ಞ ಶಕ್ತಿಯು ಆ ಬ್ರಹ್ಮಾಣಿಯೇ.ಸರ್ವಜ್ಞ ಶಬ್ದಕ್ಕೆ ಅರ್ಥ ಸರ್ವ ಜೀವಿಗಳಲ್ಲಿಯೂ ಜ್ಞಾನ ರೂಪದಿಂದಿರುವ ಶಕ್ತಿಯು!
          *೮)ಮೂಕಾಂಬೆ*
          ಪದ್ಮಾಸನಸ್ಥಿತಳಾಗಿ ಪ್ರಸನ್ನಭಾವದಿಂದ ಕುಳಿತಿರುವ ಶ್ರೀಮಾತೆ ಸರ್ವಾಲಂಕರಣ ಸಂಶೋಭಿತೆಯಾಗಿ ಸುಖಪ್ರದವಾದ ವರದ ಹಸ್ತವನ್ನೂ ಅಭಯಪ್ರದವಾದ ಅಭ್ಯಹಸ್ತವನ್ನೂ ಸೂಚಿಸುತ್ತ ಶಂಖಚಕ್ರಧಾರಿಣಿಯಾಗಿರುವಂತೆ ಇಲ್ಲಿ ಮೂಕಾಂಬೆ‌ ಚಿತ್ರಿತಳಾಗಿದ್ದಾಳೆ.ಮುಂದಿರುವ ಷಟ್ಕೋನ ಮಧ್ಯದ ಮಾತೃಕೇಂದ್ರದಲ್ಲಿ ಬಿಂದುರೂಪಿಯಾದ ಲಿಂಗವಿದೆ.
          *೯) ರತ್ನಗರ್ಭೆ*
          ರತ್ನಗರ್ಭಳಾದ ವಸುಂಧರೆಯು ಭೂಗೋಳದ ಮೇಲೆ ನಿಂತಿದ್ದಾಳೆ. ಈಕೆ ಕನ್ನಡದ ಭೂಶಕ್ತಿ ಬಲಗೈಯಿಂದ ಅಭಯವನ್ನು ನೀಡುತ್ತ ಎಡಗೈಯಲ್ಲಿ ಕಮಲವೊಂದನ್ನು ಹಿಡಿದು ನಿಂತಿದ್ದಾಳೆ. ಆಕೆಯ ಸೊಬಗು ಸುಂದರವೂ ಆದ ನಿಲುವಿನಲ್ಲಿ ಮತ್ತು ಚೆಲುವಿನಲ್ಲಿ ತಾಳ್ಮೆ ಮೂರ್ತಿವೆತ್ತಂತಿದೆ.ಎಲ್ಲರ ,ಎಲ್ಲದರ ಭಾರವನ್ನೂ ವಹಿಸಿ ನಿಂತಿರುವ ಸಹಿಸಿ ನಿಂತಿರುವ ಮಾತೃಮೂರ್ತಿಯ ಶ್ರೀರೂಪವಿದು.
          *೧೦) ಶ್ರೀ ದುರ್ಗೆ*
          ದುರ್ಗಮವಾದ ದಾರಿಯುದ್ದಕ್ಕೂ ಮಾರ್ಗಸ್ಥನಾದವನನ್ನು‌ ಹೆದರಿಸುವಂತೆ ದುರ್ದಮನೀಯವಾದ ದುಷ್ಟ ಶಕ್ತಿಗಳು ಬಾಯ್ದೆರೆದು ನುಂಗುವಂತೆ ನಿಂತಿವೆ.ಈ ಕಷ್ಟಗಳನ್ನೆಲ್ಲ ಕಡೆ ಹಾಯ್ದುಕೊಂಡು ಸಾಧಕನಾದ ಯಾತ್ರಾರ್ಥಿಯು ಮುಂದೆ ನುಗ್ಗಿ ನಡೆದಿದ್ದಾನೆ.ಭಯಂಕರ ಬೆಂಕಿಯ ಜ್ವಾಲೆಯ ಇಬ್ಬದಿಗಳಲ್ಲಿ ಉರಿಯುತ್ತದೆ.ಈ ಅಗ್ನಿಪಥವನ್ನು ನಡೆದು ಬಂದಿರುವ ಸಾಧಕನು ಮಾರ್ಗ ಮಧ್ಯದಲ್ಲಿದ್ದಾನೆ.ಹಿಂದೆ ಎಷ್ಟೋ ದಾರಿ ನಡೆದಿದ್ದಾನೆ.ಆದರೂ ಮುಂದೆ ಇನ್ನೂ ಎಷ್ಟೋ ದಾರಿ ನಡೆಯುವುದಿದೆ.ದೃಢ ಸಂಕಲ್ಪದಿಂದ ನಡೆಯುತ್ತಿರುವ ಅವನಿಗೆ ಕಾಣುತ್ತಿರುವುದು ಮಾರ್ಗದ ಕಷ್ಟಗಳಲ್ಲ,ತನ್ನನ್ನು ಬಾ ಬಾ ಇನ್ನೂ ಮುಂದೆ ಬಾ! ನಾನಿದ್ದೇನೆ ಏನೂ ಭಯವಿಲ್ಲ ಬಾ!ಎಂದು ಕರೆಯುತ್ತಿರುವ ಶ್ರೀ ದುರ್ಗೆಯ ದಿವ್ಯ ದರ್ಶನ ಒಳಗಣ್ಣಿಗೆ ಕಾಣುವ ಆ ಮಾತೃಮೂರ್ತಿಯ ಕೃಪಕಟಾಕ್ಷವನ್ನೇ ನಂಬಿಕೊಂಡು ಹೊರಗಿನ ದುರ್ಗಮ ಪಥವನ್ನು ತುಳಿದು ತನ್ನ ವಿಜಯಕ್ಕೆ ಅಡ್ಡ ಗಟ್ಟಿ ನಿಂತಿರುವ ದುರ್ಗಗಳನ್ನು ಗೆದ್ದು ನಡೆದಿದ್ದಾನೆ.ಕನ್ನಡದ ವೀರಸಾಧಕ. ಕೆಳಗೆ ಕಷ್ಟಗಳಿವೆಯಾದರೂ ಮೇಲೆ ನೋಡಿದಾಗ ಅವುಗಳನ್ನು ಗೆಲ್ಲುವ ಆತ್ಮ ಬಲವನ್ನು ನೀಡುವ ತಾಯಿ ತಾನೇತಾನಾಗಿ ನಿಂತಿದ್ದಾಳೆ. ಅಧೋಗತಿಯನ್ನು ದಾಟಬೇಕೆಂದರೆ ಊರ್ಧ್ವದೃಷ್ಟಿ ಅಗತ್ಯ.
          *೧೧) ಇಂದ್ರಾಣಿ*
          ಉನ್ನತ ಪೀಠದಲ್ಲಿ ಸುಖಾಸೀನಳಾಗಿದ್ದಾಳೆ.ಸರ್ವಾಲಂಕಾರ ಭೂಷಿತೆಯಾಗಿದ್ದಾಳೆ.ತನ್ನ ಶ್ರೀ ಹಸ್ತದಿಂದ ಅಭಯವನ್ನು ನೀಡುತ್ತ ಎಡಗೈಯಲ್ಲಿ ಕಲಶವನ್ನು ಹಿಡಿದಿದ್ದಾಳೆ.ಹಿಂದಿನ ಬಲಗೈಯಲ್ಲಿ ಶಿವಲಿಂಗವೂ ಜಪಮಾಲೆಯೂ ಇವೆ. ಎಡಗೈಯಲ್ಲಿ ತ್ರಿಶೂಲವಿದೆ.ನಮ್ಮ ಬಹಿರಂಗದ ಇಂದ್ರಿಯಗಳೆಲ್ಲವೂ ಈ ಇಂದ್ರಾಣಿಯ ಕರುಣಾಪೂರ್ವವಾಗಬೇಕು.ಕನ್ನಡ ನಾಡಿನ ಐಶ್ವರ್ಯರೂಪಿಯಾದ ಈಕೆಯ ಹಿನ್ನೆಲೆಯಾಗಿ ಕನ್ನಡ ನಾಡಿನ ರೇಖಾಚಿತ್ರವಿದೆ
          *೧೨) ವಾರಾಹಿ* 
          ಅಲ್ಲೋಲಕಲ್ಲೋಲವಾದ ನೀರಧಿಯ ಗರ್ಭದಿಂದ ವಾರಾಹಿ ನೆಲವನ್ನು ತನ್ನ ಕೋರೆಯ ಮೇಲೆ ಎತ್ತಿ ನಿಲ್ಲಿಸಿದ್ದಾಳೆ.ವಿಶ್ವದ ಅನಂತ ಗ್ರಹಗಳಲ್ಲಿ, ಗೋಳಗಳಲ್ಲಿ ಭೂಮಿಯು ನಿಂತಿರುವುದು ಆಕೆಯ ದಿವ್ಯ ಬಲದ ಮೇಲೆಯೇ ಭೂಗೋಳದಲ್ಲಿ ಭಾರತವೂ ,ಭಾರತದಲ್ಲಿ ಕರ್ನಾಟಕವೂ ಎದ್ದು ಕಾಣುತ್ತಿವೆ.ವಾರಾಹಿಯ ಕಣ್ಣಿನಲ್ಲಿ ಮಿಂಚುವ ಕರುಣೆಯು ಮನೋಜ್ಞವಾಗಿದೆ.
          *೧೩)ಅದಿತಿ*
          ದೇವಮಾತೆಯಾದ ಅದಿತಿಯು ಹಸನ್ಮುಖಿಯಾಗಿ ಪ್ರಸನ್ನ ಭಾವದಿಂದ ತನ್ನ ಕಲ್ಯಾಣ ಕಾರ್ಯಕ್ಕೆ ಕಂಕಣ ಕಟ್ಟಿ ನಿಂತಿರುವ ಕನ್ನಡಿಗರನ್ನು ಕೈಯತ್ತಿ ಹರಸುತ್ತಿದ್ದಾಳೆ.ಕನ್ನಡಿಗನ ಆತ್ಮ ಜ್ಯೋತಿಯ ನಿದರ್ಶನವಾಗಿ ಚಿತ್ರದ ಮುಂಬದಿಯಲ್ಲಿ ಅವಿರಳ ಜ್ಯೋತಿ ಅಖಂಡವಾಗಿ ಉರಿಯುತ್ತಿದೆ.ಶ್ರೀ ಅರವಿಂದರು ತಮ್ಮ ವೇದಭಾಷ್ಯದಲ್ಲಿ ಹೇಳುವಂತೆ ಅದಿತಿಯಂದರೆ ಅದ್ವಯ ಅಥವಾ ನಿರ್ದ್ವಂದ್ವ ಮನೋಭಾವ ದಿತಿಯೆಂದರೆ ದ್ವೈತ ಮನೋಭಾವ ದ್ವಂದ್ವಾತೀತ ಮನೋಭಾವ ಉಳ್ಳವರೇ,ಅದಿತಿಯ ಸಂತಾನವಾದಿ ಆದಿತ್ಯರು.ದ್ವಂದ್ವ ಮನೋಭಾವ ಉಳ್ಳವರೇ ದಿತಿಯ ಸಂತಾನವಾದ ದೈತ್ಯರು.ಕನ್ನಡ ಸಾಧಕನು ಆದಿತ್ಯ ಸಂತತಿಗೆ ಸೇರಿದ ದೇವಮಾನವ!
          *೧೪) ಕೌಮಾರಿ*
          ಕುತ್ಸಿತವನ್ನು ಅಳಿಯುವ ಶಕ್ತಿಯೇ ಕೌಮಾರಿ.ನಿತ್ಯ ಜವ್ವನೆಯಾದ ಆಕೆ  ಸತ್ಯಶೀಲಳೂ ಆಗಿದ್ದಾಳೆ.ಕೆಟ್ಟದ್ದನ್ನು ದಮನಗೈಯುವ ತ್ರಿಶೂಲವೂ ಒಳ್ಳೆಯದನ್ನು ಉಳಿಸುವೆನೆಂಬ ಬೆಳೆಸುವೆನೆಂಬ ಅಭಯ ಹಸ್ತವೂ ಸಾಂಕೇತಿಕವಾಗಿವೆ.ಪ್ರಭಾವಲಯಕ್ಕೆ ಪ್ರತಿಯಾಗಿ ಮತ್ತು ಪ್ರತ್ಯೇಕವಾಗಿ ಶ್ರೀ ಅರವಿಂದಾಶ್ರಮದ ಶ್ರೀ ಮಾತೆಯ ಆಧ್ಯಾತ್ಮಿಕ ಸಂಕೇತವನ್ನೇ ಬಳಸಲಾಗಿದೆ
          *೧೫)ಕುಂಡಲಿನೀ*
          ಮೂಲಾಧಾರದಿ ಸಹಸ್ರಾರು ಪರ್ಯಾಯವಾಗಿರುವ ಷಟ್ ಕ್ರಮಗಳನ್ನು ಭೇದಿಸಿಕೊಂಡು ಮುನ್ನಡೆದು ಶಿವಜೀವೈಕ್ಯವನ್ನು ಸಾಧಿಸುವುದು ಈ ಕುಂಡಲಿನೀ ನಾಮಕ ಯೋಗ ಶಕ್ತಿಯೇ ಕುಂಡಲಿನೀ ಶಕ್ತಿಯ ಊರ್ಧ್ವ ಗಮನವನ್ನು ಮಾತ್ರವೇ ಪುರಾತನ ಯೋಗ ಪದ್ದತಿಗಳು ಹೇಳುತ್ತಿವೆ.ಅದರ ನಿರ್ಗಮನವನ್ನೂ ಸಾಧಿಸಿ ಸಹಸ್ರಾರದಲ್ಲಿರುವ ಸಚ್ಚಿದಾನಂದಾನುಭೂತಿಯನ್ನು ಪೃಥ್ವಿ ಚಕ್ರ ಪರ್ಯಂತ ತಂದಿಳಿಸಬೇಕಾದದ್ದು ಪೂರ್ಣ ಯೋಗ ಸಾಧಕನಿಗೆ ಅವಶ್ಯಕವೆಂಬ ಮಾತನ್ನು ಶ್ರೀ ಮಾತಾರವಿಂದರು ಹೇಳುತ್ತಾರೆ. ಅದನ್ನು ಅನುಸರಿಸಿಯೇ ಕುಂಡಲಿನೀ ಶಕ್ತಿಯ ಊರ್ಧ್ವ ಮತ್ತು ಅಧೋಗಮನಗಳೆರಡನ್ನೂ ಇಲ್ಲಿ ಚಿತ್ರಿಸಲಾಗಿದೆ. ಕುಂಡಲಿನೀಯ ಕ್ರತುಶಕ್ತಿಯನ್ನು ಇಲ್ಲಿ ಚಿತ್ರಿಸಲಾಗಿದೆ. 
          *೧೬)ಸಾವಿತ್ರಿ*
          ಪರಾಶಕ್ತಿಯ ಚಿತ್ರಕ್ಕೂ ಈ ಸಾವಿತ್ರಿಯ ಚಿತ್ರಕ್ಕೂ ಪರಸ್ಪರ ಸಂಬಂಧವಿದೆ ಪರಮಪುರುಷನ ದಿವ್ಯ ಕಾರ್ಯಕ್ಕಾಗಿಯೇ ಕೆಳಗಿಳಿದು ಬಂದು ಭಾರತದಲ್ಲಿ ಅವತಾರ ಮಾಡಿದ ಪರಾಶಕ್ತಿಯು ತನ್ನ ಈಶ್ವರ ಕಾರ್ಯವನ್ನು ನೆರವೇರಿಸಿ ಪರಮಪುರುಷನೊಡನೆ ಒಂದಾಗುತ್ತಾಳೆ.ಈ ಚಿತ್ರದಲ್ಲಿ ಪ್ರಕೃತಿ ಪುರುಷರ ದ್ವಿವಿಧ ರೂಪಗಳನ್ನು ಒಮ್ಮುಖವಾಗಿ ಚಿತ್ರಿಸುವ ಜಾಣ್ಮೆ ಕಂಡುಬರುತ್ತದೆ. ಅಮೋಘವಾಗಿದೆ!ಅಭಿನಂದನವಾಗಿದೆ! ಯಾವ ಆಧ್ಯಾತ್ಮಿಕವಾದ ಅತಿಮಾನಸ ದಿವ್ಯ ಚೇತನವನ್ನು ಭಾರತದಲ್ಲಿ ತನ್ಮೂಲಕ ಯಾವ ಜಗತ್ತಿನಲ್ಲಿ ನೆಲೆಗೊಳಿಸಲು ಪರಾಶಕ್ತಿಯು ಶ್ರಮಿಸಿದಳೋ‌ ಆ ಸಿದ್ದಿಯು ಭಾರತೋರ್ವಿಯಲ್ಲಿ ಸಾಕ್ಷತ್ಕರಿಸಿದೆ.ಆ ಅತಿನಸ  ದಿವ್ಯ ಚೇತನವು ಭಾರತದ ಮೂಲಕ ಯಾವ ದ್ವಿಶ್ವವರನ್ನೂ ಹಬ್ಬಿಕೊಳ್ಳಬೇಕು. ಷೋಡಶ ದಳಗಳ ಸಂಕೇತವಿರುವ ಈ ಷೋಡಶಿಯ ಹಿನ್ನೆಲೆಯಲ್ಲಿ ತ್ರಿಶೂಲವಿದೆ.ಅದು ಪರಾಶಕ್ತಿಯ‌ ಪ್ರಭುಶಕ್ತಿಗೆ ಸಂಕೇತ. ಅದಕ್ಕಿರುವ ಡಮರು ಭಾರತದ ಜಯ ಡಿಂಡಿಮದ ಸಂಕೇತ.

- ಶ್ರೀ ಇಂಗಳಗಿ ದಾವಲಮಲೀಕ. ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನಿಚ್ಛೆಯಲಿ ಬದುಕಲು ಬಿಡ (ಕವಿತೆ) - ಗೌತಮ್ ಗೌಡ, ಕೀರಣಗೆರೆ - ರಾಮನಗರ.

ನನ್ನಿಚ್ಛೆಯಲಿ ಬದುಕಲು ಬಿಡಿ
ನಿಮ್ಮಿಚ್ಛೆಯಂತೆ ನನ್ನ ಬದುಕು  ಬೇಡ..!!

ನನನ್ನು ಹೆತ್ತಿರಿ, ಹೊತ್ತಿರಿ
ಬೆಳೆಸಿದಿರಿ, ಆಡಿಸಿದಿರಿ
ಕುಣಿಸಿದಿರಿ, ನಲಿಸಿದಿರಿ
ಅಳಿಸಿದಿರಿ, ನಗಿಸಿದಿರಿ
ನೀವೂ ನನಗಾಗಿ ಅತ್ತಿರಿ
ನಕ್ಕಿರಿ
ಅಷ್ಟೇಏಕೆ ನಿಮ್ಮ ಪ್ರಾಣವನ್ನೂ
ಸಹ ನನಗಾಗಿ ಪಣಕಿಟ್ಟಿರಿ
ನಾನು ಇದನ್ನು ಮರೆಯುವುದಿಲ್ಲ
ನಿಮ್ಮ ಋಣ ನಾನು ತೀರಿಸಲು ಆಗುವುದೂಇಲ್ಲ
ನಿಮ್ಮನ್ನು ಬಿಟ್ಟ ಬದುಕುಲು 
ನನಗಿಷ್ಟವು ಇಲ್ಲ
ಹಾಗೆಂದ ಮಾತ್ರಕ್ಕೆ
ನಿಮ್ಮಿಚ್ಛೆಯಂತೆ ನಾನು
ಬದುಕಲು ಆಗುವುದಿಲ್ಲ
ನನಗೂ ಭಾವನೆಗಳಿವೆ ಆಸೆಗಳಿವೆ
ಅವುಗಳಿಗೆ ನಿಮ್ಮ ಸರಪಳಿ ಬೇಡ

ನಿಮ್ಮ ಜಾತಿ, ಮತ, ಕುಲ, ಗೋತ್ರ
ಅಂತಸ್ತು, ಐಶ್ವರ್ಯ, ಮರ್ಯಾದೆ
ಗೌರವ ನಿಮಗಿರಲಿ ಬೇಡಎನ್ನುವುದಿಲ್ಲ
ಆದರೆ ನನ್ನ ಪ್ರೀತಿ, ಪ್ರೇಮಗಳಿಗೆ
ಅವು ತೊಡಕಾಡುವುದು ಬೇಡ

ನಾನು ನಿಮ್ಮವನು,,
ನಿಮ್ಮ ತೊಡೆಯ ಮೇಲೆ
ಆಡಿ ಬೆಳೆದವನು,, ಆದರೆ
ನಿಮ್ಮಿಚ್ಛೆಯಂತೆ ಬದುಕಲಾರೆನು
ಅದಕ್ಕೆ ಬಿಡಿ ಬಿಡಿ
ನನ್ನ ಬದುಕಿನ ಮೇಲಿರುವ
ನಿಮ್ಮ ಬಯಕೆ ಭಾವನೆಗಳನೆಲ್ಲ
ಬಿಟ್ಟು ಬಿಡಿ
ನನ್ನಿಚ್ಛೆಯಂತೆ ನನ್ನ ಬದುಕಲು ಬಿಡಿ..!!

- ಗೌತಮ್ ಗೌಡ, ಕೀರಣಗೆರೆ
ರಾಮನಗರ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶುಕ್ರವಾರ, ಅಕ್ಟೋಬರ್ 22, 2021

ನಾನೊಬ್ಬ ಸಿಪಾಯಿ(ಕವಿತೆ) - ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನಾನು ಆಗಿಬಿಡುವೆನು ವೀರ ಯೋಧನಂತೆ..
ನನ್ನ ಅರ್ಧಂಗಿ ಆವಳಾಗಿ ಆವರಿಸಿರಲು
ಮನದಲಿ ಅವಳಾಗುವಳು ಧೈರ್ಯ ಲಕ್ಷ್ಮಿಯಂತೆ.//೧//

ಅವಳಿಲ್ಲದೆ ನಾನಿಲ್ಲ ಗೃಹದೊಳಗೆ 
ಅವಳಿಲ್ಲದ ದಿನ ಚಂದಿರ ಮರೆಯಾದಂತೆ.. 
ಅವಳು ಬಳಿಯಿದ್ದರೆ ದಿನವು  ಹರುಷವೇ
ದೂರಾದರೆ ಅಮಾವಾಸ್ಯ ಕತ್ತಲು ಗವಿದಂತೆ.//೨//

ಅರಗಿಣಿಯ ನುಡಿಯು  ಚಂದನವು 
ಗೃಹದೊಳಗೆ ನಡೆದರೆ ನವಿಲು ನರ್ತವು.. 
ತೊಟ್ಟ ಕಂಕಣ ಕಾಲುಗೆಜ್ಜೆ  ನಾದವು
ಮೊಳಗುವುದು ವಾದ್ಯ ವೇದಘೋಷವು.//೩//

ಅವಳ ಧೀರತನ ಶಾಂತ ನುಡಿಯಿಂದ
ಕಷ್ಟ ನೋವ ಮರೆಸಿ ಕಂದನಾಗುವೇನು..
ಹೆಣ್ಣೊಂದು ಸಾಂತ್ವನ ಶಾಂತಸ್ವರೂಪಿ ಸಾಧ್ವಿಯು 
ಅವಳಿದ್ದರೆ ನಾನೊಬ್ಬ ಸಿಪಾಯಿಯಾಗಿ ಮೇರೆಯುವೇನು..//೪//
- ಕಟ್ಟೆ.ಎಂ.ಎಸ್.ಕೃಷ್ಣಸ್ವಾಮಿ, ಮಂಡ್ಯ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗುರು (ಕವಿತೆ) - ಎಚ್ ವಿ ಮೂರ್ತಿ, ರಂಗಭೂಮಿ ನಟ, ನಿರ್ದೇಶಕ.

ಗುರು ಇಲ್ಲದ ಗುರಿಯ 
ಮುಟ್ಟಲಾಗದಯ್ಯ 
ಅರಿವಿಲ್ಲದೆ ಜಯವ 
ಕಾಣಲಾಗದಯ್ಯ....

ತಾಯಿಯು ಮೊದಲ ಗುರುವು 
ಭಾಷೆಯ ಕಲಿಸುವಳು 
ಮಾತೃಭಾಷೆಯ ಕಲಿಸುವಳು 
ತುತ್ತನಿತ್ತು ಪ್ರೀತಿ ಉಣಿಸಿ 
ಆನಂದವ ಪಡುವವಳು 
ಮಕ್ಕಳ ಸಲಹುತ ನಲಿಯುವಳು... 

ತಂದೆಯು ಎರಡನೆ ಗುರುವು 
ನಡತೆಯ ಕಲಿಸುವನು 
ಒಳ್ಳೆಯ ನಡತೆಯ ಕಲಿಸುವನು 
ಎಷ್ಟೇ ಕಷ್ಟ ಇದ್ದರು ಬಾಳನು ಕಟ್ಟುವನು ನಮ್ಮ ಪೋಷಣೆ ಮಾಡುವನು... 

ಶಿಕ್ಷಕ ಮೂರನೆ ಗುರುವು 
ವಿದ್ಯೆಯ ಕಲಿಸುವನು 
ಜೊತೆಗೆ ಬುದ್ಧಿಯ ತುಂಬುವನು 
ಗಳಿಸುವ ಮಾರ್ಗ ತೋರುತ 
ನೆಲೆ ನಿಲ್ಲಲು ಶ್ರಮಿಸುವನು 
ಬಾಳಿಗೆ ಹೊಳಪನು ನೀಡುವನು... 

ಸಾಧಕರೆಲ್ಲ ನಾಲ್ಕನೇ ಗುರುವು 
ಸ್ಪೂರ್ತಿಯ ತುಂಬುವರು 
ಅವರು ಮಾದರಿಯಾಗುವರು 
ಅವರಂತೆ ನಾವಾಗಲು 
ಏಣಿಯಾಗುವರು...ನಮಗೆ  ಛಲವನು ತುಂಬುವರು... 

ಸಮಯವೆ ದೊಡ್ಡ ಗುರುವು 
ಪಾಠವ ಕಲಿಸುವುದು 
ಬಗೆಬಗೆ ಪಾಠವ ಹೇಳುವುದು 
ಜಾರಿದ ಸಮಯ ಮತ್ತೆ  ಬಾರದು ಜಾಗೃತರಾಗಿರಿ ಸಮಯ ಪಾಲನೆ ಮಾಡಿರಿ
- ಎಚ್ ವಿ ಮೂರ್ತಿ, 
ರಂಗಭೂಮಿ ನಟ, ನಿರ್ದೇಶಕ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಲ್ಪವೃಕ್ಷ (ಲೇಖನ) - ಮಂಜುನಾಥ ಹಿರೇಮಠ. ದಂಡಸೋಲಾಪುರ(ಚಾಮನಾಳ), ಯುವ ಸಾಹಿತಿಗಳು ಮತ್ತು ಶಿಕ್ಷಕರು.

ಕಲ್ಪವೃಕ್ಷ ಜೀವನದ ಮರ ಇದು ವಿಶ್ವ ವೃಕ್ಷ. ಸಮುದ್ರ ಮಂಥನದ ಆರಂಭಿಕ ಸಮಯದಲ್ಲಿ ಕಲ್ಪವೃಕ್ಷವು ಮೂಲಭೂತ ನೀರಿನಿಂದ ಹೊರಹೋಮ್ಮಿತ್ತು. ಸಾಗರ ಮಂಥನ ಪ್ರಕ್ರಿಯೆಯಲ್ಲಿ  ಎಲ್ಲಾ ಅಗತ್ಯಗಳನ್ನು ದಯಪಾಲಿಸುವ ದಿವ್ಯ ಹಸು. ದೇವಲೋಕದಲ್ಲಿ ಪಾರಿಜಾತ, ಹರಿಚಂದನ, ಕಲ್ಪವೃಕ್ಷ ಎಂಬ ವೃಕ್ಷಗಳಿವೆ ಅದರಲ್ಲಿ ಶ್ರೇಷ್ಠವಾದದ್ದೇ ಕಲ್ಪವೃಕ್ಷ. ಅಂತಹ ಕಲ್ಪವೃಕ್ಷ ಎಂಬ ಹೆಸರಿನ ವಿದ್ಯಾಸಂಸ್ಥೆಯನ್ನು
 ಎಸ್. ವಿ. ಬಿರಾದಾರ ರವರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಸ್ಥಾಪಿಸಿ ಗುಣಮಟ್ಟದ ಶಿಕ್ಷಣ ಜೊತೆಗೆ ಧರ್ಮಸಂದೇಶಗಳನ್ನು ಮಕ್ಕಳಿಗೆ ಧಾರೆಯೆರೆಯುತ್ತಿರುವದು ಕಲ್ಪವೃಕ್ಷಕ್ಕೆ ಮತ್ತಷ್ಟು ಮೆರಗು ತಂದಂತಾಗಿದೆ. ಧರ್ಮವನ್ನು ನಾವು ಕಾಪಾಡಿದರೆ ಧರ್ಮ ನಮ್ಮನ್ನು ಕಾಪಾಡುತ್ತದೆ. ಶಿಕ್ಷಣದ ಜೊತೆಗೆ ಧರ್ಮದ ಉಳಿವಿಗಾಗಿ ಶ್ರಮಿಸುತ್ತಿರುವ ಇವರು ಧರ್ಮಕ್ಕೆ ಭೂಷಣ. ದೇವಲೋಕದ ಕಲ್ಪವೃಕ್ಷಕ್ಕೆ ಚಿನ್ನದ ಬೇರುಗಳು, ಬೆಳ್ಳಿ ಕೊಂಬೆಗಳು, ಹವಳದ ಎಲೆಗಳು, ಮುತ್ತಿನ ಹೂವು, ರತ್ನದ ಮೊಗ್ಗುಗಳು, ವಜ್ರದ ಹಣ್ಣುಗಳು ಹೇಗೆ ಇವೆಯೋ ಹಾಗೆ ಎಸ್. ವಿ. ಬಿರಾದಾರ ಕಟ್ಟಿರುವ ಕಲ್ಪವೃಕ್ಷಕ್ಕೆ ಶಿಕ್ಷಣದ ಬೇರುಗಳು, ಜ್ಞಾನದ ಕೊಂಬೆಗಳು, ಧರ್ಮ ಸಂದೇಶದ ಎಲೆಗಳು, ವಿಚಾರವೆಂಬ ಹೂವು, ಆಚಾರವೆಂಬ ಮೊಗ್ಗುಗಳು, ಸಾಧನೆಯ ಹಣ್ಣುಗಳಿವೆ. ಸಾಧನೆಗೆ ಸ್ಫೂರ್ತಿ ವಾಣಿಯು ಅಷ್ಟೆ ಅವಶ್ಯಕತೆ ಇದೆ. ಅಂತಹ ಸ್ಫೂರ್ತಿವಾಣಿ ಕಲ್ಪವೃಕ್ಷ ನೀಡಿದೆ.

 ಕಲ್ಪವೃಕ್ಷದ ಸ್ಫೂರ್ತಿ ವಾಣಿ :
ಸಾಧನೆ ಸುಗಮ -- ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು, ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಯಾವುದಾದರು ಕ್ಷೇತ್ರದಲ್ಲಿ ಸಾಧನೆಯತ್ತ ಮುಖಮಾಡಬೇಕು. ಇದು ಸ್ಪರ್ಧಾತ್ಮಕ ಯುಗ ಇಲ್ಲಿ ನಾವು ಬದುಕಬೇಕಾದರೆ ಸ್ಪರ್ಧೆಯಲ್ಲಿ ಭಾಗಿಯಾಗುವದು ಅಗತ್ಯ. ಸೋಲಿನ ಅನುಭವ ಪಡೆದವರು ಮಾತ್ರ ಗೆಲುವಿನ ಮಹತ್ವ ತಿಳಿಯಲು ಸಾಧ್ಯ. ಸೋಲೇ ಗೆಲುವಿನ ಮೆಟ್ಟಿಲು ಎಂಬ ಭಾವ ತಾಳಬೇಕು ಆದರೂ ಪ್ರಯತ್ನ ಬಿಡಬಾರದು. ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ ಈ ಸತ್ಯ ಅರಿಯಬೇಕು. ಗೆಲುವು ಆನಂದ, ಸಂಭ್ರಮ ತರುವುದು.

ಸ್ಪರ್ಧೆ ಬದುಕಿನ ಭಾಗ -- ಸ್ಪರ್ಧೆ ಬದುಕಿನ ಭಾಗ, ಇದನ್ನು ಅರಿತು ಮುನ್ನಡೆಯಬೇಕು. ಸೋಲೇ ಗೆಲುವಿನ ಸೋಪಾನ ಎಂಬ ಮಾತು ವಾಸ್ತವ ಸತ್ಯ, ನಮ್ಮ ಸಾಧನೆ ಕಂಡು ಇತರರು ಸಂತಸ  ಪಡಬೇಕು. ಇನ್ನೊಂದು ಸತ್ಯ ಎಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಈ ಸೋಲು- ಗೆಲುವು ಚಕ್ರಗಳಂತೆ ಸದಾ ತಿರುಗುತ್ತಿರುತ್ತವೆ. ನನ್ನ ಬದುಕಿನ ಉದ್ದಕ್ಕೂ ಗೆಲುವೇ ಕಂಡಿವೆ, ನಾನೆಂದು ಸೋತೆ ಇಲ್ಲ ಎನ್ನುವ ಯಾವ ಒಬ್ಬ ವ್ಯಕ್ತಿಯು ಈ ಜಗತ್ತಿನಲ್ಲಿ ಕಾಣುವದಿಲ್ಲ. ನಮ್ಮ ಜೀವನ ಸಾರ್ಥಕತೆ ಪಡೆಯಬೇಕಾದರೆ ಮಾನವೀಯ ಮೌಲ್ಯ ರೂಢಿಸಿಕೊಂಡು ಆದರ್ಶ ವ್ಯಕ್ತಿಯಾಗಿ ನಿರ್ದಿಷ್ಟ ಗುರಿ ಹೊಂದಿ ಸಾಧನೆಯತ್ತ ಸಾಗಬೇಕು.
ಗುರಿಯ ಅಭಿರುಚಿ -- ಗುರಿಗಳನ್ನು ನಿರ್ಧರಿಸುವದು ಒಂದು ಕಲೆ ಎಂದೇ ಹೇಳಬಹುದು ಇದು ಒಮ್ಮೆ ಬರುವದಿಲ್ಲ ಆದರೆ ಸೂಕ್ತವಾದ ಗುರಿ ನಿರ್ಧರಿಸಬೇಕಾದರೆ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಗಳು ಹಾಗೂ ಅವುಗಳನ್ನು ಪ್ರೆರೇಪಿಸುವ ಅಂಶಗಳು ಗೊತ್ತಿರಬೇಕು ವಾಸ್ತವಿಕವಾದ ಗುರಿಗಳಿರಲಿ.
ಹೀಗೆ ತನ್ನದೇ ಆದ ಮಹತ್ವ ಪಡೆದಿರುವ ಈ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಮೇರು ಪರ್ವತದಂತೆ ಇದೆ ಅಲ್ಲದೆ ಸಂಸ್ಕೃತಿ, ಆಚಾರ ವಿಚಾರಗಳಿಗೂ ಸ್ಪಂದಿಸುತ್ತಿರುವ ಕಲ್ಪವೃಕ್ಷ ಧರ್ಮಕ್ಕೆ ಭೂಷಣ.

"ಧರ್ಮ ಮತ್ತು ಶಿಕ್ಷಣ"- ಸಮಾಜದ ಒಳಿತಿಗಾಗಿ ಧರ್ಮದ ಆಚರಣೆ ಅವಶ್ಯಕತೆ ಇದೆ. ನಮ್ಮ ಜೀವನದಲ್ಲಿ ಧರ್ಮವನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಲೆಗೂ, ಮರಕ್ಕೂ ಇರುವ ಅವಿನಾಭಾವ ಸಂಬಂಧ ನಮಗೂ ಧರ್ಮಕ್ಕೂ ಇದೆ. ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳೂ ಅಷ್ಟೆ ಅವಶ್ಯವಾಗಿವೆ. ಮಕ್ಕಳು ಸಂಸ್ಕಾರವಂತರಾಗಿ ಬೆಳೆದರೆ ಮಾತ್ರ ತಂದೆ ತಾಯಿಗೆ ಮಕ್ಕಳಾಗಿರುತ್ತಾರೆ ಮತ್ತು ಸಾಧನೆಯ ಮೆಟ್ಟಿಲು ಏರುತ್ತಾರೆ. ಎಸ್. ವಿ. ಬಿರಾದಾರ ರವರು ಉತ್ತಮ ಶಿಕ್ಷಣ ನೀಡುವದರ ಜೊತೆಗೆ ಧಾರ್ಮಿಕ ಅರಿವು ಮೂಡಿಸುತ್ತಿದ್ದಾರೆ. ಇವರ ಧರ್ಮದ ಕಾಳಜಿಗೆ ನಮ್ಮ ಯುವ ಸಾಹಿತ್ಯ ಬಳಗವು ಅಭಾರಿಯಾಗಿದೆ. ಮಕ್ಕಳ ಚಿಂತನ - ಮಂತನ, ವಿಚಾರಗೋಷ್ಠಿ, ಮಕ್ಕಳಕಾವ್ಯ ಕಮ್ಮಟ, ಉಪನ್ಯಾಸ, ನೆರವೆರುತ್ತಿರುವದು ಕಲ್ಪವೃಕ್ಷದ ಹೆಮ್ಮೆಯ ಸಂಗತಿ.ವಿಜಯಪುರ ಜಿಲ್ಲೆಯ "ದೃವ ತಾರೆ "ಶ್ರೀ ಎಸ್. ವಿ. ಬಿರಾದಾರ ಇವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

"ಸಂಸ್ಥಾಪಕರ ಧಾರ್ಮಿಕ ವಿಚಾರ "
 ಮಗುವೆಂದರೆ ಹೇಗೆ? ಮಗುವಿನ ಗುಣಸ್ವಾಭಾವಗಳೇನು? ಇದಕ್ಕೆ ಯಾವ ರೀತಿಯ ಜವಾಬ್ದಾರಿಗಳೇ ಇರುವದಿಲ್ಲ. ಇದರ ಎಲ್ಲಾ ಭಾರವನ್ನು ತಾಯಿಯೇ ಹೊತ್ತಿರುವಳು, ಯಾವ ವಸ್ತುವನ್ನಾಗಲಿ ತಾಯಿ ಕೊಟ್ಟಾಗಲೇ ತೆಗೆದುಕೊಳ್ಳುವದು, ಕೊಟ್ಟಾಗ ಉಣ್ಣುವದು, ಕೊಟ್ಟಾಗ ಉಡುವದು. ಹೀಗೆ ಸದಾ ತಾಯಿ ಅಧಿನದಲ್ಲಿಯೇ ನಡೆಯುವದು. ಅದರಂತೆ ತಪಸ್ವಿಗಳು ಪರಮಾತ್ಮನೆಂಬ ತಾಯಿಯ ಇಚ್ಛೆಯಲ್ಲಿಯೇ ನಡೆದಿದ್ದಾರೆ. ಮಹಾತ್ಮನು ಸಂಪೂರ್ಣವಾಗಿ ದೇವರ ಅಧಿನನಾಗಿ, ಶಿಶುವಾಗಿ ಸಾಧನೆಯ ಶಿಖರವನ್ನೇರಿದ್ದಾನೆ. ತಾಯಿಯಾದ ಪರಮಾತ್ಮ ಆಸೆಗಳನ್ನು ನೆರೆವೆರಿಸುವನು. ಮಾನವರು ಯಾರು? ಮಹಾತ್ಮರು ಯಾರು? ಲೋಕದಾಸೆಗಳನ್ನು  ಹಿಡಿದವರೇ ಮಾನವರು, ಪರಲೋಕದಾಸೆಗಳನ್ನು ಹಿಡಿದವರೇ ಮಹಾತ್ಮರು ಎಂಬ ಧಾರ್ಮಿಕ ವಿಚಾರ ಹೊಂದಿರುವ ಎಸ್. ವಿ. ಬಿರಾದಾರ ರವರು ತಾಯಿಯಂತಿರುವ ಕಲ್ಪವೃಕ್ಷ  ಮಕ್ಕಳ ಜವಾಬ್ದಾರಿ ಹೊತ್ತು ಗುರಿ ಮುಟ್ಟಲು ಸಹಕಾರಿಯಾಗಿದೆ. ಇಲ್ಲಿ ಮಗುವಾಗಿ ಸಾಧನೆ ಶಿಖರವನ್ನೆರಲು ಕರೆ ನೀಡಿದ್ದಾರೆ.
- ಮಂಜುನಾಥ ಹಿರೇಮಠ. ದಂಡಸೋಲಾಪುರ(ಚಾಮನಾಳ), ಯುವ ಸಾಹಿತಿಗಳು ಮತ್ತು ಶಿಕ್ಷಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹನಿಗವನಗಳು -ಶ್ರೀ ಗೊರೂರು ಅನಂತರಾಜು, ಹಾಸನ. 9449462879.

1. ಪಲಾಯನ

ನನ್ನ ಕನಸಿನ 
ಲೋಕಕ್ಕೆ ಬಂದಿದ್ದ
ಲೋಕ ಸುಂದರಿ
ಐಶ್ವಯ೯
ಮಗ್ಗುಲಲ್ಲಿ ಮಲಗಿದ್ದ
ನನ್ನಾಕೆ ಕಂಡು
ಓಡಿ ಹೋಗಿದ್ದು
ಆಶ್ಚಯ೯

2. ಲಕ್ಷಣಂ

ಒಡವೆ ತೊಟ್ಟ
ಹೆಂಗಸರು ಹೇಳುತ್ತಾರೆ
ಇದು ಸೌಂದಯ೯ ಲಕ್ಷಣಂ
ಮೀಸೆ ಬಿಟ್ಟ
ಪುರುಷರು ಹೇಳುತ್ತಾರೆ
ಇದು ಜೇಬಿಗೆ ಬೀಳುವ
ಕತ್ತರಿ ಲಕ್ಷಣಂ

3. ಶರಣು

ಯಾವ ಸ್ತ್ರೀ ದೇವಿಗೂ
ಶರಣಾಗುವುದಿಲ್ಲ
ಎನ್ನುತ್ತಿದ್ದ ಗುರು
ನಿದ್ರಾದೇವಿಗೆ
ಶರಣಾಗಿದ್ದರು

4. ಕಾವ್ಯ ನಾಮ

ಕಾಲೇಜಿನಲ್ಲಿ ಕಾವ್ಯಳಿಗೆ
ಪ್ರೇಮಪತ್ರ ಬರೆಯುತ್ತಿದ್ದ ಕಾಳಿದಾಸ
ಈಗ ಅವಳನ್ನೇ
ಮದುವೆಯಾಗಿ
ಬರೆಯುತ್ತಿದ್ದಾನೆ 
ದುರಂತ ಕಥನಾ ಕಾವ್ಯ
ನವ್ಯ ಕಾವ್ಯನಾಮದಿ
      

- ಗೊರೂರು ಅನಂತರಾಜು
ಹಾಸನ, 9449462879.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರೈಲೊಂದು ಆಲಯ(ಕವಿತೆ) - ಶ್ರೀಧರ ಗಸ್ತಿ ಧಾರವಾಡ.

ಉಗಿಯುಗುಳುತ್ತ ಕೂಗು ಹಾಕುತ್ತ
ಎಚ್ಚರಿಕೆಯ ಗಂಟೆ ಬಾರಿಸುತ್ತ
ಬರುತಿದೆ ಮಲಗಿದ್ದವರ ಎಚ್ಚರಿಸುತ್ತ
ನಾ ಬರುತಿರುವೆ ಬಿಡಿ ದಾರಿ ಎನ್ನುತ್ತ
ಕಾಯುತಿರುವವರ ಎಚ್ಚರಿಸುತ್ತ
ಮತ್ತೇ ಉಗುಳುತಿದೆ ಕೂಗುತ್ತ
ಚುಕು ಬುಕು ಚುಕು ಬುಕು ಎನ್ನುತ್ತ

ಮನೆಯ ತೆರದಿ ವಾಸದ ನೆಲೆ
ಇರುವುದಿಲ್ಲ ಧಡಕ್ ಧಡಕ್ ಎನ್ನುವ ಸೆಲೆ
ರೋಗಿ ಪಯಣಿಸಲು ಹೇಳಿಮಾಡಿಸಿದ ನೆಲೆ
ಶೌಚಕೂ ಮೂತ್ರ ವಿಸರ್ಜನೆಗೂ ಇಲ್ಲಿದೆ ಬೆಲೆ
ಕುಳಿತುಂಡರೆ ಕುಟುಂಬಕ್ಕೊಂದು ನೆಲೆ
ಹಂಚಿ ತಿನ್ನುವರಿಲ್ಲಿ ಸೌಹಾರ್ದತೆಗೆ ಬೆಲೆ
ಮತ್ತೇ ಚುಕು ಬುಕು ಚುಕು ಬುಕು ಎನ್ನುವ ಅಲೆ

ನಿತ್ಯ ಶ್ರಮಿಕರಿಗೆ ಮಿತ ಬೆಲೆಯ ಆಶ್ರಯ
ದುಡಿವ ಕೈಗಳಿಗೆ ಆದಾಯದ ಆಲಯ
ನಿರ್ಗತಿಕರಿಗೆ ಉಚಿತ ಪಯಣದ ನಿಲಯ
ಭಿಕ್ಷುಕರಿಗೆಲ್ಲ ನಿತ್ಯ ಸ್ವರ್ಗದ ಆಶ್ರಯ
ತ್ರಿಲಿಂಗಿಗಳಿಗೊಂದು ಪುಣ್ಯದಾಶ್ರಯ
ಮೈಮರೆತು ಪಯಣಿಸಿದರೆ ಕಳ್ಳಕಾಕರಿಗಾಶ್ರಯ
ಆವ ಅರಿವಿಲ್ಲದೇ ತಿರುಗುತಿವೆ ರೈಲಿನ ಗಾಲಿಯ

ರೈಲಿನ ಬಂಡಿಯಂತೆ ಪಯಣಿಗರು ನಾವೆಲ್ಲ
ಹತ್ತಿಹೆವು ಬಾಳಪಯಣದಿ ಗುರಿ ಮುಟ್ಟಲು ಎಲ್ಲ
ಇರಿಸು ಮುರಿಸುಗಳ ಸುರುಳಿ ಸುತ್ತುತ ನಾವೆಲ್ಲ
ಎಲ್ಲಿ ಅಂತ್ಯವೋ ಅಲ್ಲಿ ಇಳಿಯುವೆವೆಲ್ಲ
ಉಳಿಯುವದೊಂದೇ ವಿನಿಮಯದ ಸವಿಬೆಲ್ಲ
ತೆರೆದುಕೊಳ್ಳುವುದು ನಮ್ಮ ಬಾಳಪುಟವೆಲ್ಲ
ಶಾಂತವಾಗುವುದು ಚುಕು ಬುಕು ಚುಕು ಬುಕು ಎಲ್ಲ
-  ಶ್ರೀಧರ ಗಸ್ತಿ ಧಾರವಾಡ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ, 9731514051.

ಕಂಡಂತೆ ಕಾಣದೆಯೇ ಮರೆಯಾದೆ ಯಾಕೆ ಸಖಿ
ಮಾತನಾಡದೆ ಹಾಗೆಯೇ ಮೌನವಾದೆ ಯಾಕೆ ಸಖಿ

ಅಂಗಾಂಗ ಇಂದ್ರಿಯಗಳು ನಿನಗಾಗಿ ಧ್ಯಾನಿಸುತ್ತಿವೆ
ನಿರಾಕಾರದ ಓಂಕಾರದಲ್ಲಿ ನಿಶಬ್ಧವಾದೆ ಯಾಕೆ ಸಖಿ

ಕರಿ ಮುಗಿಲ ಮೋಡವಾಗಿದೆ ನನ್ನೆಲ್ಲಾ ಕನಸುಗಳು
ಕರಗಿಸುವ ನಿನ್ನ ಮನವು ಗಟ್ಟಿಯಾಗಿದೆ ಯಾಕೆ ಸಖಿ

ಭೂಮ್ಯಾಕಾಶಗಳ ಒಂದು ಮಾಡಿ ನಿಂತೆಯೆಲ್ಲಿ  ನೀನು
ಮಿನುಗುವ ನಕ್ಷತ್ರದಂತೆ ಸ್ಥಿರವಾದೆ ಯಾಕೆ ಸಖಿ

ನನ್ನೆಲ್ಲಾ ಒಳಗೂ-ಹೊರಗಿನ ಪ್ರತ್ಯಕ್ಷ ಸಾಕ್ಷಿ ನೀನು
ನನ್ನೊಳಗೆ ಇಂದು ಬರಿಯ ನೆನಪಾದೆ ಯಾಕೆ ಸಖಿ
  
-- ಲಕ್ಷ್ಮೀ ನಾರಾಯಣ ಕೆ ವಾಣಿಗರಹಳ್ಳಿ
                        9731514051.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಶೃಂಗಾರಕ್ಕೆ ಸೌಂದರ್ಯ ಕೂಡಾ ನಾಚಿತಂತೆ (ಲೇಖನ) - ಸೌಮ್ಯ ಗಣಪತಿ ನಾಯ್ಕ ಕಾನಸೂರು (ಉತ್ತರ ಕನ್ನಡ).

ಎಲ್ಲರಿಗೂ ಒಂದು ಆಸೆ ಇರತ್ತೆ, ನಾನು ಸುಂದರವಾಗಿ ಕಾಣಿಸಿಕೊಳ್ಳಬೇಕೆಂದು ಆದರೆ ಆ ದೇವರು ಮಾತ್ರ ನಮ್ಮ ಆಸೆಗೆ ವಿರುದ್ಧವಾಗಿ ನಮ್ಮನ್ನು ಸೃಷ್ಟಿ ಮಾಡಿರುತ್ತಾನೆ. ಒಬ್ಬರಿಗೆ ಕಪ್ಪು ಬಣ್ಣ  ಕೊಟ್ಟರೆ ಇನ್ನು ಕೆಲವರಿಗೆ  ಶ್ವೇತ ವರ್ಣ ಅಂದರೆ ಬಿಳಿ ಬಣ್ಣ  ಕೊಟ್ಟು ಅವರ ಅಂದಕ್ಕೆ ಕಳೆ ಬರೋ ಹಾಗೆ ಮಾಡುತ್ತಾನೆ. ಇನ್ನೂ ಕೆಲವರು ಅಂಗವಿಕಲರಾಗಿ ಹುಟ್ಟುತ್ತಾರೆ. ಇನ್ನೂ ಕೆಲವರು ಕಿವುಡುತನ, ಕುರುಡುತನದಿಂದ ಬಳಲುತ್ತಾರೆ. ಹ! ಪಾಪ ಅವರಿಗೂ ಒಂದು ಆಸೆ ಇದೆ ಅನ್ನುವುದೇ ಮರೆತಂತೆ. 
               ಬಣ್ಣ ಬಣ್ಣದ ಬಟ್ಟೆಯನ್ನು ಧರಿಸಿಕೊಂಡು ನೂರಾರು ಜನರಲ್ಲಿ ತಾವು  ಸುಂದರವಾಗಿ ಕಾಣಬೇಕು ಅನ್ನೋ ಆಸೆ ಅವರ ಮನದಾಳದಲ್ಲಿ, ಯಾಕೆ ಸಾಧ್ಯ ಇಲ್ಲ ಅಂದುಕೊಂಡು ನಾವೇ ಒಂದು ಹೆಜ್ಜೆ ಮುಂದೆ ಇಡಬೇಕು. ನಾವೆಲ್ಲರೂ ಭಾರತೀಯರು ನಾವು ಹೇಗೆ ಇದ್ದರು ಚೆನ್ನಾಗಿ ಕಾಣಿಸುತ್ತದೆ ನಮ್ಮ ಸಂಸ್ಕೃತಿಯನ್ನು ನಮ್ಮ ಮುಡಿಗೆ ಏರಿಸಿಕೊಂಡಾಗ ಎಂದು ಮುಂದೆ ಸಾಗೋಣ ಬನ್ನಿ.... 
              ನಾವು ತೋಡುವ ಉಡುಪಿನಿಂದಲೇ ಪ್ರಾರಂಭಿಸೋಣ ನಾವು ಹಾಕಿದ ಬಟ್ಟೆಯಿಂದ ಜನ ನಮ್ಮನ್ನು ಆಡಿಕೊಳ್ಳುವುದರ ಬದಲು ನಮ್ಮ ಅಂದ ನೋಡಿ ಬಾಯಿ ತುಂಬಿ ಹರಿಸಬೇಕು. ನಾ ಹಣೆಗೆ ಇಟ್ಟ ಕುಂಕುಮ  ನನ್ನ ಕಣ್ಣ ಅಂಚಲ್ಲಿ ಸೇರೆಯಾಗುವಂತೆ ಇರಬೇಕು. ನಮ್ಮ ಕಮಲದಂತ  ಕಣ್ಣ್ ರೆಪ್ಪೆಗಳು ನಾಚುವಂತೆ ಕಪ್ಪು ಕಾರಡಿಗೆ ಹಚ್ಚಬೇಕು. ನಮ್ಮ ತುಟಿಗಳು ತಡವರಿಸುವಂತೆ ಬಣ್ಣದ ರಂಗು ಇಡಬೇಕು. ನಮ್ಮ  ಕಿವಿಗಳಿಗೆ ಕೊಳಲಿನ ನಾದ ಕೇಳುವಂತೆ  ಜುಮಕಿ  ಹಾಕಿಕೊಂಡಾಗ, ಬಕುತಲೆ ತೆಗೆದ ಆ  ಮದ್ಯೆ ತಲೆ ಬಿಂದಿಗೆ ಇಟ್ಟಾಗ ನಮ್ಮ ಮುಖ ಅರಳಿದ ತಾವರೆಯಂತೆ ಶೋಭಿಸುವುದು. ಇನ್ನೂ ನಮ್ಮ  ಕೊರಳಿಗೆ  ಪಳಪಳ ಹೊಳೆಯುವ  ಹವಳದ ಸರ ಹಾಕಿಕೊಂಡು, ಆ ನೀಳ ಕೈಗಳಿಗೆ ನಾದ  ಸ್ವರದಂತೆ ಕೇಳಿಸುವ ಬಳೆಗಾರ ತೋಡಿಸಿದ ಬಳೆ ಹಾಕಿದರೆ   ಸಾಕು, ಅಂದಕ್ಕೆ ಅಂದ ಅನ್ನುವ ಪದ ನಿಮ್ಮ ಬಾಯಿಂದ ಮೊಳಗುವುದು ಬೇರೆ ಯಾರ  ಹೊಗಳಿಕೆಯು ಬೇಡ. ಇನ್ನೂ ಕೊನೆಯದಾಗಿ ನಮ್ಮ ಕಾಲುಗಳಿಗೆ ಬೆಳ್ಳಿ ಕಾಲ್ಗೆಜ್ಜೆ ಹಾಕಿ  ನಡೆದಾಡುವ ಗಳಿಗೆ  ನಮ್ಮ ಪಾಲಿಗೆ ಅದೇ ಏಳಿಗೆ ಆಗಿರುತ್ತದೆ. ಅದಕ್ಕೆ ನಾವು ಹೇಗೆ ಇರಲಿ ನಾವು ನಾವಾಗಿರಬೇಕು. "ನಮ್ಮ ಶೃಂಗಾರ ನೋಡಿ  ನಮ್ಮ ಸೌಂದರ್ಯ ಕೂಡಾ ನಾಚುವಂತೆ ನಾವೇ ಮಾಡಬೇಕು  . ಅದಕ್ಕೆ ನಾವು ನಗುವನ್ನು ಆಭರಣಗಳನ್ನಾಗಿ ಮಾಡಿಕೊಂಡು, ನಮ್ಮ ಸಂಸ್ಕೃತಿಯನ್ನು ರೂಢಿಯಲ್ಲಿ ಇಡುತ್ತ ,ಸಂಪ್ರದಾಯ ಪಾಲಿಸುತ್ತಾ, ಆಚಾರ ವಿಚಾರಗಳ ಕಡೆ ಗಮನ ಕೊಡುತ್ತ, ನಮ್ಮ ಅಂದವನ್ನು ಹೆಚ್ಚಿಸುವ ಪ್ರಯತ್ನ ಮಾಡೊಣ........... 
- ಸೌಮ್ಯ  ಗಣಪತಿ ನಾಯ್ಕ 
ಕಾನಸೂರು (ಉತ್ತರ ಕನ್ನಡ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರೈತನ ರಂಗು ( ಕಿರು ಪದ್ಯ ) - ಬಸವರಾಜ ಎಸ್ ಕೋಟಗೇರಾ.

 ಹಕ್ಕಿ ಹಾರುತ ನೋಗಿಲು ಇಡಿಯುತ ರೈತ ಭೂಮಿಯ ಸಿಳುತಾ,,,,,
         
       ಫಲವು ಬಂದು ರಾಶಿ ಮಾಡುತಾ,,,, ದೇಶಕ್ಕಾನ್ನವನಕುತಾ  ಜ್ಯೋತಿ ಬೆಳಗುತಾ ನಾಡ ನಡೆಸುತಾ ನಿತ್ಯ ಕಾಯಕ ಉಸಿರು ಎನ್ನುತಾ ದಾನ ಧರ್ಮವನಿವಾ ಮಾಡುತಾ  ಜ್ಯೋತಿ ಎನ್ನುವ ಹಚ್ಚಿನಲ್ಲಿ ತನ್ನ ಕಿಚ್ಚನ್ನಚ್ಚುತ ,,,

        ನಾನು ನೀನು ಶ್ರೇಷ್ಠ ಎನ್ನುವ ಹುಚ್ಚು ಮನುಜರಲ್ಲಿ
ರೈತನೇ ಶ್ರೇಷ್ಠನೆಂದು ಇವನು ಸಾರಿ ಹೇಳುತಾ............ಇವನು ಸಾರಿ ಹೇಳುತಾ......

~ ಬಸವರಾಜ ಎಸ್ ಕೋಟಗೇರಾ .


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾವ (ಕವಿತೆ) - ಶ್ರೀ ಇಂಗಳಗಿ ದಾವಲಮಲೀಕ, ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.

ಲೇಖನಿ ನಡುಗುತಿದೆ ಏಕೋ ಏನೋ
 ಪದಗಳು ಬಿಕ್ಕುತಿವೆ ಅತ್ತು ತತ್ತರಿಸಿ
 ಇಳಿಯದೆ ಮೇಲೆ ಕುಳಿತಿಹಳು ಕಾವ್ಯ
 ಕನ್ನಿಕೆ ಅಂಜಿ ಲೇಖನಿಗೆ ಬಿಕ್ಕುತಿಹಳು

ಯಾವ ನೋವ ಯಾರ ಮನಕೆ ಯಾವ
ನಲಿವು ಯಾವ ಮನಕೆ ಸೋತು ಹೋದ
ಬದುಕ ಕಟ್ಟಲು ಯಾವ ಪ್ರೀತಿ ತರಲಿ 
ಒಲವ ನಂಬಿ ಗೆಲುವು ಸಾಧಿಸಿ ತೋರಲಿ

ಬರಡು ಬದುಕಿಗೆ ಬಾನೆತ್ತರದ ಆಕಾಂಕ್ಷೆ
ಯಾರಿಗೆ ಹೇಳಲಿ ನೊಂದ ಮನದ ಬಯಕೆಯ
ಚಿಂತೆಯ ಸುಳಿಗಾಳಿಗೆ ಸಿಕ್ಕು ಬರಡಾಯಿತೆನ್ನ
ಮನ ಕನ್ನ ಕೊರೆದು ಹೋಯಿತು ಬಾಳು

ಹೃದಯವೇಕೋ ಅಳುತಿದೆ ಬಿಕ್ಕಿ ಬಿಕ್ಕಿ
ನುಂಗಲಾರದೆ ಕಕ್ಕಿತು ಅಂಜಿ ನಂಜನು 
ಬಿದ್ದ ಹಾಲಾಹಲಕೆ ತೊಟ್ಟಿಕ್ಕಿತು ನಾಲಗೆ
ಬೆಂಕಿಯುಂಡು ಕುಡಿದು ಲಾವಾರಸ 

ಮತ್ತದೇ ಲೋಕ ಚಂದಿರನಿಲ್ಲದ ಬೆಳದಿಂಗಳ
ಸಾವ ಲೋಕಕೆ ಲಗ್ಗೆ ಇಡುವ ಹುನ್ನಾರ
ಕತ್ತಲಲ್ಲಿ ಬೆಳಕು ಕಾಣುವ ಹಗಲುಗನಸು
ಬೇಡರ ವೇಷದ ಮೃತ್ಯು ಕೂಪ ಬದುಕು

ಯಾರಿಗೆ ಬೇಕಿತ್ತು ಈ ಲೋಕ ಏತಕ್ಕೆ
ಬೇಕಿತ್ತು ನಭ ಇಂದ್ರಲೋಕದ ಮಾಂತ್ರಿಕ
ಕಟೆದಿಟ್ಟ ಪ್ರತಿಮೆಯ ಮುಂದೆ ದೀಪ
ಆರಿ ಹೋದ ಹಣತೆ ಬೆಳಕಿಲ್ಲ ಕತ್ತಲೆ.
- ಶ್ರೀ ಇಂಗಳಗಿ ದಾವಲಮಲೀಕ
ಶಿಕ್ಷಕ ಸಾಹಿತಿಗಳು ಹತ್ತಿಮತ್ತೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬುಧವಾರ, ಅಕ್ಟೋಬರ್ 20, 2021

ಫಲಿತಾಂಶ ಪ್ರಕಟಣೆ : ವಿಚಾರ ಮಂಟಪ ಸಾಹಿತ್ಯ ಪತ್ರಿಕೆ ಸ್ಪರ್ಧೆ - ೮ ನೇ ಪಾಕ್ಷಿಕ ಅವಧಿ.

ಫಲಿತಾಂಶ ಪ್ರಕಟಣೆ.

ಸ್ಪರ್ಧೆಯ ವಿವರ :  "ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ  ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು ಅದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
 
 

ಶ್ರೀ ತುಳಸಿದಾಸ ಬಿ.ಎಸ್. ಇವರು ಬರೆದ "ನಿಲ್ಲಬೇಡ ನೀನು" ಎಂಬ ಹೆಸರಿನ‌ ಕವಿತೆ ದಿನಾಂಕ : ೦೧.೧೦.೨೦೨೧ ರಿಂದ ೧೫.೧೦.೨೦೨೧  ರ ನಡುವಿನ ೮
 ಪಾಕ್ಷಿಕ ಅವಧಿಯಲ್ಲಿ  ವಿಚಾರ ಮಂಟಪ  ಜಾಲ ಪತ್ರಿಕೆಯ ಜಾಲತಾಣ ದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

 

 ಇವರಿಗೆ ವಿಚಾರ ಮಂಟಪ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು ಹಾಗೂ  ಶುಭಹಾರೈಕೆಗಳು. 💐💐💐💐💐


(ನಿಮ್ಮ ಬರಹ ಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659
ಸಂಪಾದಕರು
ವಿಚಾರ ಮಂಟಪ ಸಾಹಿತ್ಯ ಪತ್ರಿಕೆ).

ಕುಣಿತದ ಆಡಳಿತದ ತಾಳಮೇಳ (ಕವಿತೆ) - ಪ್ರೊ.ಗಂಗಾರಾಂ ಚಂಡಾಲ ಮೈಸೂರು.

ದೂರದೃಷ್ಟಿಯ ಫಲ ಬದುಕೆಂದು ಆಶಾಗೋಪುರ ತೋರುವ ನಾಯಕ ಪಶ್ಚಿಮ ದಂಡೆಯಲ್ಲಿ ಹೊಸ ಬಾವುಟ ಹಿಡಿದು.
ಕ್ರಿಯೆಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ , ರಾಜಧರ್ಮ ಪಾಲಿಸೆಂದ ಪ್ರಧಾನಿ.
ಸರಳ ಜೀವನ ಕ್ರಿಯೆಗಳನ್ನು ಸಂಕೀರ್ಣಗೊಳಿಸುವ ವಂದಿಮಾಧಿಗರು.
ಮರೆಯಲಾರವು ಓ... ಪ್ರಧಾನಿ ಅಂತಃಕರಣ ಶುದ್ಧಿಯಿಂದ ಆಡಳಿತ ನಡೆಸುವ ಪ್ರತಿಜ್ಞೆ ಮಾಡಿದಾಗ.
ಕಣ್ಣುಗಳ ನೆತ್ತಿಗೆ ಒತ್ತಿಕೊಂಡು ಖಾತೆಗೆ ಹದಿನೈದು ಲಕ್ಷ ಬರುವ ಆಸೆಯಿಂದ ಓಟು.
ಒಂದಷ್ಟು ಸಂಭ್ರಮದ ನಡುವೆ ಖಾತೆಯಲ್ಲಿ ಡೆಪಾಸಿಟ್ ಇದೆಯೆಂದು ಬದುಕಿ.
ಬದುಕನ್ನು ಬದುಕೆಂದು ನಂಬಿ ಬದುಕುತ್ತಿರುವ ನಾವು ದೂರದೃಷ್ಟಿ
ಇಲ್ಲದವರು.
ಧರ್ಮದ ಅನಾಮಿಕ ಸಂಬಂಧಗಳಿಗೆ ಬೀದಿ ಬೀದಿಗಳಲ್ಲಿ ಅನಾಮಿಕ ಧರ್ಮದ ವ್ಯಕ್ತಿ ಎಂದು ಲಾಠಿ ರುಚಿ ತೋರಿಸುವಂತೆ ಕೇಸರಿ ಪಡೆಗೆ.
ಕಾಡುತಿದೆ ಸುಮ್ಮನೆ ಕಣ್ಣುಗಳಲ್ಲಿ ಅತಿಮಾನವರು ಎರಡು ಕಾಲಿದ್ದರು.
ಅವಮಾನಿಸಲೆಂದು ಅಧಿಕಾರ ಹಿಡಿದು ಸಬಕಾ ಸಾಥ್ ಸಬಕಾ ವಿಕಾರ ಎಂದು.
ಓಟು ಹಾಕುವ ಸ್ಪರ್ಧೆ ಇಂತಹ ಹುಟ್ಟಿಗೆ ಕಾರಣ ಆಗುತ್ತದೆಯೆ.
ಹಿಂದಿನವರು ನೀರು ಕುಡಿಯಲು ಕೊಡಲಿಲ್ಲ.
ಅದಕ್ಕೆ ನಾವು ಕೊಡಲಾರೆವು ಪ್ರಮಾಣ ಸಾಕ್ಷಿ.
ಮತ್ತೆ ಬದುಕುತ್ತೇವೆ ಓಟು ಹಾಕದೆ
ಪ್ರಜಾಪ್ರಭುತ್ವ ಉಳಿವಿಗಾಗಿ.
ಸಿಕ್ಕುಗಳಲ್ಲಿ ಪ್ರಜೆಗಳ ಸಿಕ್ಕಿಸಿ ಸಮಸ್ಯೆ
ಉಂಟಾಗಿದ್ದು ಹಿಂದಿನ ಸರ್ಕಾರದ ಅವಧಿಯಲ್ಲಿ.
ರಕ್ತ ತರಿಸುವ ಆಡಳಿತದ ತಾಳಮೇಳ ನೋವಿನ ಯಾತನೆ ಕೋವಿಡ್ ೧೯.
ಯೋಜನೆ ನಾಮಕರಣದ ಉತ್ಸವ
ಉತ್ಸಾಹ ಸಾಹಸದ ಉತ್ತುಂಗ.
ಮಹಾತ್ಮ ಗಾಂಧೀಜಿ ಎದೆಗೆ ಮತ್ತೊಮ್ಮೆ ಗುಂಡು ಹಾರಿಸಲು ಅಧಿಕಾರ ಅಹಂಕಾರ.
ತಂಗಾಳಿ ಬೀಸಿ ಬಂದಿದ್ದು ತನ್ನಿಂದ
ಬದುಕನ್ನು ಸವಿಯಬೇಕು ಮರೆವು ಖಾಯಿಲೆ.
ಕ್ಷುಲ್ಲಕ ಭಾವವೊಂದು ಆಡಳಿತಗಾರರಲ್ಲಿ ಜೀವಂತ.
ಬೀಜ ಬಿತ್ತುವ ಕೆಲಸ ಮಳೆಗಾಲದಲ್ಲಿ ಮಾಡುವುದಿಲ್ಲ ಪೈರು ಬರದಿರಲು ಹಿಂದಿನವರ ಷಡ್ಯಂತ್ರ.
ರೈತರ ಕಾರ್ಮಿಕರ ಬೆವರಿಗೆ ಡಬಲ್ ಬೆಲೆ ನೀಡುವ ಭರವಸೆ ಮಾತ್ರ.
ಅಸಹನೀಯ ಬದುಕು ಸಾದ್ಯವಾಗಿಸಿದ ಕೀರ್ತಿ ಪತಾಕೆ.
ಹತಾಶೆ ಹೇಳಿಕೆ ಪ್ರತಿ ಹೇಳಿಕೆ ನಷ್ಟ ಉಂಟಾಗಿದೆ ಮಾರುವೆವು.
ಖಾಸಗಿ ತಾಯಿ ಹಾಲು ಕುಡಿಯಲು
ಒತ್ತಾಯಪೂರ್ವಕ ವರ ಅದು.
ಕೆಲವು ಜನರ ಸಹಕಾರ ಸರ್ಕಾರ ಸಂಪತ್ತು ದೋಚಿ ಖಾಸಗಿಯವರಿಗೆ.
ಖಾಸಗಿ ಮರ ಹಣ ಬಿಡಿಸುವ ಸ್ಪರ್ಧೆ
ಸರ್ಕಾರದಲ್ಲಿ.
ಸಿಕ್ಕವರಿಗೆ ಸೀರುಂಡೆ ಆಸ್ತಿ ಹರಾಜು ಎಪ್ಪತ್ತು ವರ್ಷ ಗಳಿಸಿದ್ದು.
ಕಾಡುತ್ತಿದೆ ತೀವ್ರವಾಗಿ ಹಸಿವು ಮಕ್ಕಳಲ್ಲಿ ಅಪೌಷ್ಟಿಕತೆ.
ಎರಡು ಕಾಲಲ್ಲಿ ನಡೆಯಬಾರದು ಮೂರು ಕಾಲಲ್ಲಿ ನಡೆದರೆ ಲೈಸೆನ್ಸ್.
ಆಕಾಶ ಅವಕಾಶ ನೀಡಿಲ್ಲ ಆಡಳಿತ ನೀಡಲು.
ಜನಮನ ಗೆದ್ದ ಪಕ್ಷ ಶಿಸ್ತು ಮಾಯ
ಹರಾಜು.
ಪೊಲೀಸರು ನಮ್ಮನ್ನು ಕಾವಲು ಕಾಯುತ್ತಲೆ ತೆರಿಗೆ ದಂಡ ವಸೂಲಿ.
ರಾಶಿ ಫಲ ನಕ್ಷತ್ರ ದಕ್ಷಿಣದ ಕಡೆಗೆ ಹೊರಟಿದೆ.
ತಿರಸ್ಕಾರ ಪೂಜಿಸುವ ಮಂತ್ರಿ ಮಹೋದಯರು ನಕಾರ ಆಯುಧ.
ಋಷಿ ಮುನಿಗಳ ನಾಡು ಗುರುಕುಲ ಶಿಕ್ಷಣ ಕೆಲವರಿಗೆ.
ಹಣ ಗೆಲ್ಲುತ್ತದೆ ನಾಡಿ ಮಿಡಿತ ಸೋಲುತ್ತದೆ.
ವೀರಗಚ್ಚೆ ಪರಾಕ್ರಮಿ ಸಂಗೀತೋತ್ಸವದಲ್ಲಿ ವಿರಮಿಸಿ.
ಮಿಡಿತ ಜಡತ್ವದಿಂದ ಜನರು ದಿಕ್ಕುಗಾಣದೆ.
ಶತೃ ನೀಡಿದ ತೊಂದರೆ ಹಸು ಸಾಕಲು
ಭಟ್ಟಭಂಗಿ ಅಂಗಿ ಚಡ್ಡಿ ಧರಿಸಿ ದಡ್ಡ
ದಡ್ಡ ಗುರು.
ಕೇಶ ಮುಂಡನ ಶೂರರಿಗೆ ಉದ್ಯೋಗಿಗಳಿಗೆ ಸಂಬಳ ಕತ್ತರಿ.
ಮತ್ತೆ ಬೆಳೆಯುತ್ತದೆ ಬಿಡು ಚಿನ್ನ ಹಣ ಕೊಳ್ಳೆ.
ಮತದಾರರಿಗೆ ಮೈ ಉರಿಯುತ್ತದೆ ಏನು ಪ್ರಯೋಜನ ಎಂದು.
ಕೆಕ್ಕರಿಸಿ ನೋಡುವರು ಗಿಡದ ರೆಂಬೆ ಕೊಂಬೆ ಕತ್ತರಿಸದೆ ಬುಡವನ್ನು.
ಅಮ್ಮನ ಸ್ಥಾನ ತುಂಬಲು ಬಂದವರು ವಿಷಕನ್ಯೆಯರು.
ನಾಯಿ ಪಳಗಿಸುವ ನಾಯಕರು ಕಣ್ಣೀರು ಒರೆಸಲು ಸಾಧ್ಯವೇ.
ಆಳಕ್ಕಿಳಿದು ತಿವಿಯುವ ಅಭ್ಯಾಸ ಹವ್ಯಾಸ ಇಟ್ಟುಕೊಂಡವರು.
ಚರಿತ್ರೆ ತಿರುಚಿ ಬದುಕನ್ನು ವಿಚಿತ್ರ ವಿಚಿತ್ರ ಹೆಸರುಗಳಿಂದ.
ಅಭಿವೃದ್ಧಿ ಅಭಿವೃದ್ಧಿ ಬೆಲೆ ಏರಿಕೆ
ಬಡವರ ಬದುಕು ತುರಿಕೆ.
ಅಲಗು ಝಳಪಿಸುತ್ತಾ ಆತುರದಲ್ಲಿ ತನ್ನ ಕುತ್ತಿಗೆಗೆ ಹಚ್ಚಿ.
ಲೋಕದ ಕಂಗಳಲ್ಲಿ ಪ್ರೀತಿ ಧಾರಾಕಾರ ಮಳೆಯಾಗಲೆಂದು.

- ಪ್ರೊ.ಗಂಗಾರಾಂ ಚಂಡಾಲ ಮೈಸೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನೊಡಲ ವ್ಯಾಕರಣ ಪರಿಚಯಿಸಿದ ಪದಗಳ ಅನಾವರಣ (ಕವಿತೆ) - ಅಶ್ವಿನಿ.ಭೀ ಬರಗಾಲಿ.

ಬದುಕೊಂದು ವ್ಯಾಕರಣದ ಪುಸ್ತಕ
ಬರೀಯ ಪ್ರಶ್ನಾರ್ಥಕಗಳೇ ಮನದ ಮಸ್ತಕ
ಆಯುಷ್ಯದ ಅಲ್ಪಪ್ರಾಣ ಒಂದಿದೆ ನುಸ್ತುಕ
ಉಸಿರ ಹಿಡಿದು ಕರುಳ ಬಸಿದು ಮಹಾಪ್ರಾಣವಾದ ಪರಿಚಾರಕ...!! 

ಬದುಕು ಭಾರವಾಗಿ ನಿಂತಿದೆ 
ಎಲ್ಲವೂ ಪ್ರಶ್ನೆಗಳ ಅವತರಣಿಕೆ ಎಂದಿದೆ
ಉತ್ತರ ದೊರಕದ ಭಾವಾಂತರಣಿಕೆ ಕಾದಿದೆ
ಎಲ್ಲದಕ್ಕೂ ಉದ್ಗಾರ ಒಂದೇ ನನ್ನೊಳಗೆ ಸಂದಿದೆ....!! 

ಮಾತು  ಮೌನಗಳೊಳಗೆ ಸ್ವರ- ವ್ಯಂಜನಗಳ ಸರಸ
ಪದಗಳ ಪೋಣಿಕೆಗೆ ವರ್ಣಮಾಲೆಗಳೇ ಅರಸ
ಸವಿಭಾವ ಬೆರೆಸಲು ನವರಸಗಳಲಿ ಸಂತಸ
ಒಲವ ಬೆಸೆದು ಜಗವ ಮರೆಸಲು ರಸಗಳಲಿ ವಿರಸ....!! 

ಪ್ರೇಮನೌಕೆಯ ದಡ ಸೇರಿಸುವ ಸಂಚಾರಿ ಗುಣಿತಾಕ್ಷರ
ಭಾವನೆಗಳ ಬೆಸೆದ ಕೊಂಡಿಯ ಮಾತು ಸಂಯುಕ್ತಾಕ್ಷರ
ಮನದ ಮಾಯೆಯ ಮಮಕಾರ ವಚನಗಳ ವಿಚಾರ
ಅರಿತು ಬೆರೆಸುವದೇ ಸಂಧಿಗಳ ಚೆಲುವ ಸಹಕಾರ....!! 

ನವ ನಾಮ ನವ ರೀತಿ ನಡೆದಂತೆ ಗೆಲುವು ಅದೇ  ನಾಮಪ್ರಕೃತಿ
ಭಾವ ಬಂಧ ಹೊಸ ಅನುಬಂಧ ಅವ್ಯಯಗಳದೇ ಸುಕೃತಿ
ವೀಶೆಷ ಭಕ್ತಿ ವೀನೋದ ರೀತಿ ಕಾರಣ ವಿಭಕ್ತಿ
ನೀಡಿ ಪಡೆದ ಪ್ರಸಾದದ ಪರಿಮಳ ಅದರೊಳಗೆ ಅನುಕ್ತಿ....!! 

ಸಂಧ್ಯಾರಾಗದಿ ಸಂಧಿಸಲು ಸಹಕಾರಿ ತದ್ಧಿತ ಪದ
ಕ್ರಿಯೆಗೆ ಪ್ರತಿಕ್ರಿಯಿಸಲು ಪ್ರತಿಪದಕ್ಕೂ ಬೇಕು ಕ್ರಿಯಾಪದ
ನುಡಿದಂತೆ ನಡೆ ನೀನು ತಪ್ಪಿಲ್ಲ ತತ್ಸಮಗಳಲಿ ತಕರಾರು
ಸವಿದಷ್ಟು ಸವಿ ನೀನು ಕಹಿಯಿಲ್ಲ ತದ್ಭವಗಳಲಿ ಮತ್ತಾರು....!! 

ಬಾಳಿನ ಸಾಂಗತ್ಯದಲಿ ಸಮಾಸಗಳದೇ ಸಂಚಾರ
ಪ್ರತಿಕ್ಷಣಕ್ಕೂ ಕಾಲದಡಿಯಲಿ ಕಾಣದ ಭಾವೋದ್ಗಾರ
ಪ್ರತಿ ಹೆಜ್ಜೆಗೂ ಮಿಡಿದ ಮನದಲಿ ಅಧ್ಯಾಹಾರ
ಅವ್ಯಯಗಳ ಆಕರಣದಲಿ ಬಯಕೆಗಳ ನಿರಾಹಾರ....!! 

ಬಾಳಿನ ಅಲಂಕಾರವ ಅಲಂಕರಿಸಲಿ ಹೇಗೆ
ಅಂದ ತುಂಬಿದ ಛಂದಸ್ಸಿನ ಮೋಡಿಯಲಿ ಹೀಗೆ
ಒಂದರ್ಥಕ್ಕೆ ನಾಲ್ಕುಸಾಲು ನವಿಲುಗರಿ ಬಿಚ್ಚಿದಂಗೆ
ನಾನಾರ್ಥಕ್ಕೆ ಸಾವಿರ ಪಾಲು ಕೈಬೀಸಿ ಕರೆದಂಗೆ....!! 

ಕಂದಕಗಳೇ ಪಯಣದ ತುಂಬ ಪದ್ಯವಾಗುವವರೆಗೆ
ಅಂತ್ಯದಲಿ ಪ್ರಾಸವ ಕಂಡು ಆದಿ ಕೂಡ ಸೇರಿತು ಒರೆಗೆ
ಇನ್ನು ಮಧ್ಯದ ಭಾವಾರ್ಥಕ್ಕೆ ಜೀವ ಬಂದರೆ ಹಾಗೆ
ಗಿರಗಿಟ್ಟಲೆ ಹೊಡೆಸುವದು ಅಲ್ಪವಿರಾಮ ಆಗಾಗ್ಗೆ.....!! 

ಕನಸಿನ‌ ಕನವರಿಕೆಗೆ ಬೇಕು ಹೊಸ ರಾಗ ಭಾವಗಳು
ಹೊಸೆದು ಹೊನಲು ಹರಸಿವೆ ಉಪಮಾನ ಉಪಮೇಯಗಳು
ಹಳೆದು ಹೊಸತರಲ್ಲಿ ತುಂಬಿವೆ ಬರೀ ರಗಳೆಗಳು
ಎಲ್ಲವ ಸರಿಪಡಿಸುವ ರೂಪಧಾರಿ ಗುರು- ಲಘುಗಳು....!! 

ಅಂಶಾಂಶಿ ಭಾವಗಳ ಸಮ್ಮೀಲನದ ಸಮ್ಮೋಹನ
ಯತಿಗಣಗಳ ಯಥೇಚ್ಛ ವ್ಯಾಕುಲತೆಯ ಮೋಹನ
ಪ್ರತ್ಯಯಗಳ ಪರಿಭಾವದ ಪರಿಚಯದಲಿ ಏನೋ ಆಕರ್ಷಣ
ಮಾತಿನ ಸರಪಳಿಗಳಲಿ ನೋವಿಗೂ ಒಂಥರ ಉತ್ಕರ್ಷಣ...!! 

ನಾನಾ ರೀತಿ ನಾವು ನಡೆವ ದಾರಿ ಕಾರಣ ನಾಮಪ್ರಕೃತಿ
ಮನಸ್ಸೋ ಮೆಚ್ಚಿ ಕಾರಕಗಳ ಸೇರಿಸೋ ಶಕ್ತಿ ಸುಕೃತಿ
ಕೂಡಿ ಕಳೆದಾಗ ಬೇಕೆಂಬ ವಾಂಛೆಯಲಿ ನೆನಪಿನ ವಿಕೃತಿ
ನೀನು ನೀನಾದಾಗ ಹೊಸ ಬಾಳ ಪಲ್ಲವಿಯಲಿ ನಿರಾಕೃತಿ...!! 

ಅನುರಾಗದ ಆಲಿಂಗನಕೆ ಅವಶ್ಯ ವಿವರಿಸೋ ಲಿಂಗಗಳು
ಒಂದೊಂದು ವಿವಿಧತೆಯಲಿ ಅರಳಿಸಿ ತಿಳಿಸೋ ಅಂಗಗಳು
ಮರೆವಿನ ಮಂಪರ ಹರಸಿದಾಗ ಅಕರ್ಮಕಗಳೇ ಧಾತುಗಳು
ಪ್ರಯೋಗಗಳ ಗಮಕದಲ್ಲಿ ಗಮನಿಸು ನೀ ಗಮ್ಯಕಗಳು....!! 

ಎದೆಯೊಳಗಿನ ಅರಿಷಡ್ವರ್ಗಗಳ ಎಚ್ಚರಿಸೋ ಷಟ್ಪದಿಗಳಲಿ
ಗಣಗಳ ಗುಣ ಪರಿಚಯಿಸೋ ಪರಿಚಾರಕ ಪಂಜರಗಳಲಿ
ಕರ್ತರಿ- ಕರ್ಮಗಳ ಪರಿಣಿತ್ಯದ ಪಾವಿತ್ರ್ಯತೆಗಳಲಿ
ನಾಮ, ಹೋಮ, ಲಕ್ಷಣಗಳ ಜೋಡುಗಟ್ಟಿದ ನುಡಿಗಳಲಿ...!! 

ದಾಟಿ ಬಂದ ಅಪರಿಹಾರಕದ ಜೀವ ಭಾವನಾಮ
ವೃತ್ತಗಳ ವೃತ್ತಾಂತ ಕವಿಕಾಣದ ಪರಿಣಾಮ
ಏಣಿಸಿ, ಗುಣಿಸಿ ಬದುಕ ನೆನೆದಾಗ ಅನುಲೋಮ- ವಿಲೋಮ
ಪ್ರಶ್ನಾರ್ಥಕಗಳೇ ಉತ್ತರಗಳಾದಾಗ ಬಾಳಿಗೆ ಒಂದು ಪೂರ್ಣ ವಿರಾಮ....!!

- ಅಶ್ವಿನಿ.ಭೀ ಬರಗಾಲಿ
" ಕ್ರಾಂತದರ್ಶಿ" ನಿಲಯ
ವೀವೆಕಾನಂದ ನಗರ
7 ನೇ ಅಡ್ಡರಸ್ತೆ
ಗೋಕಾಕ-591307.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಾತೃ ದೇವತೆ (ಕವಿತೆ) - ಸೂಗಮ್ಮ ಡಿ ಪಾಟೀಲ್.

  ಹೆತ್ತು ಹೊತ್ತು ತುತ್ತು ನೀಡಿದ ನಿಮ್ಮ ತಾಯಿಗೆ 
ತುತ್ತು ಅನ್ನ ನೀಡಲು ಯಾಕೆ  ಲೆಕ್ಕ ಹಾಕಿಹೆ 
ಜನ್ಮವಿದು ತಾಯಿ ಕೊಟ್ಟ ಭಿಕ್ಷೆ ಎಂದು ಮರೆತಿಹೆ 
ಮುತ್ತು ಕೊಡುವವಳ ಮಡಿಲಲಿ ಮಮತೆ ತೊರೆದಿಹೆ
ಅತ್ತು ಅತ್ತು ತಾಯಿ ಕಣ್ಣೀರು ಬತ್ತಿವೆ  ಮಾತೃ ಶಾಪ ಹತ್ತದೆ //೧//

ಹೆತ್ತ ಹೊಟ್ಟೆಗೆ ಹಳಸಿದ ಅನ್ನವ ಕೊಟ್ಟು ಕೂತಿಹೆ 
ಮುದ್ದಾದ ಮಡದಿಗೆ ಮೃಷ್ಟಾನ್ನವ ಉಣಿಸಿದರೇನು ಫಲ
ಹಸಿದ ಹೊಟ್ಟೆ ತುಂಬಿಸದೆ  ಹಂಗಿಸಿದೆ ಪ್ರತಿದಿನವೂ
ಹಸಿಯದ ಹೊಟ್ಟೆಗೆ ತುತ್ತು ಮಾಡಿ ತಿನಿಸಿದೆ
ನಿನಗೆ ತುತ್ತು ಮಾಡಿ ತಿನ್ನಿಸಿದವಳ ದೂರಿದೆ  //೨//

ತಾಯಿ ದೇವರ ತಳ್ಳಿ ಗುಡಿ ಗುಂಡಾರವ ಸುತ್ತಿದೆ 
ಸುತ್ತುವದಾದರೆ ಸುತ್ತಿಬಿಡು ನೀ ಹೆತ್ತ ತಾಯಿಯ
ಎತ್ತಲು ಸುತ್ತಿದರೂ ಸಿಕ್ಕದು ಮಾತೃ ದೇವರು
ಬದಿಗೊತ್ತಿ ಸಾಗಬೇಡ ಅವಳನೆಂದು ನೀನು
ಮೋಹದ  ಮಡದಿಯ ಮಾತು ಕೇಳಿಕೊಂಡು //೩//

ಒಡತಿಯ ಒಲವಿಗೆ ಮರುಳಾಗಿ ಹೊಂಬನಾಗಬೇಡ
ಕರುಳಿನ ಕುಡಿ ಸಂಬಂಧವ ಕಳೆದುಕೊಳ್ಳಬೇಡ
ಹರುಷದ ಬಾಳಿಗೆ ಹರಸಿದ ಮಮತೆಯ ತಾಯಿಯ
ವರುಷದ ಕೂಳಿಗೂ  ಭಾರವೆಂದು ಜರಿಯಬೇಡ 
ಬಡಪಾಯಿ ಜೀವವಿದು ಬಾಂಧವ್ಯದಿಂದ  ಕಾಣು //೪//

ಭವಣೆಯ ಬದುಕಲಿ ಅಕ್ಕರೆಯಿಂದ ಕಂಡೋಳು
ಅನಕ್ಷರಸ್ತಳಾದರೂ ಅಕ್ಷರವ ಕಲಿಸಿದವಳು 
ಅಪ್ಪಿ ಮುದ್ದಾಡಿದವಳ ತಪ್ಪಿಯೂ ತೊರೆಯಬೇಡ
ತೊರೆದು ಮತೀಹೀನನಾಗಿ ಮರುಗಬೇಡ
ಸಹನಾ ಮೂರ್ತಿಯ ಸೇವಕನಾಗಿ ಬಾಳು //೫//

 -  ಸೂಗಮ್ಮ ಡಿ ಪಾಟೀಲ್
         ಉತ್ನಾಳ್ (ಬಿಜಾಪುರ ).


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಯಲಿನತ್ತ ಹೆಜ್ಜೆ ಇಡಬೇಕು (ಕವಿತೆ) - ಗೌತಮ್ ಗೌಡ, ಕೀರಣಗೆರೆ.

ಸಾಕಿನ್ನು ಕೋಣೆಯೊಳಗೆ
ಕೂತು ಕೂತು ಕೊಳೆತಿದ್ದು
ಇನ್ನೇನಿದ್ದರು,ಕದವನ್ನು ಕಿತ್ತೆಸೆದು
ಬಯಲಿನತ್ತ ಹೆಜ್ಜೆ ಇಡಬೇಕು..
ಬಯಲಲ್ಲಿ ಬಯಲಾಗಬೇಕು..
ಕಾಳು ಕೂಡಿ ಇಟ್ಟಷ್ಟು
ಹುಳು ಆಡಿಯಾತು
ಅದಕ್ಕೆ ಬಯಲಲ್ಲಿ ಬಿತ್ತಬೇಕು
ಬಿತ್ತಿ ಮತ್ತೆ ಬಯಲಿಗೆ ಹಂಚಬೇಕು..
ಸಾಕಿನ್ನು ಪಂಕದಗಾಳಿ ಕುಡಿದಿದ್ದು
ಇನ್ನೇನಿದ್ದರು ಮಂದಾನೀಲನಿಗೆ
ಮೈಯೊಡ್ಡ,,
ಬಿಸಿಲಿನಲ್ಲಿ ಬೆಂದು,,
ಮಳೆಯಲ್ಲಿ ನೆಂದು,,
ಬಯಲಲ್ಲಿ ಬೆತ್ತಲಾಗಬೇಕು..
ಕೋಣೆಯೊಳಗಿನ
ರಸವಾಗುವ ಬದಲು
ಬಯಲಲ್ಲಿ ಕಸವಾಗ ಬೇಕು..
ಕಸ ಕೊಳೆತು ಮತ್ತೇ ರಸವಾದಿತು
ಅದಕ್ಕೆ ಬಯಲಿನತ್ತ ಹೆಜ್ಜೆ ಇಡಬೇಕು
ಕೋಣೆಯಲ್ಲಿ ಮುಗಿಲುಗೊಳ್ಳುವ ಮೊದಲು ಬಯಲಿನಲ್ಲಿ ಬೆವರಿ ಬಯಲಾಗಬೇಕು..
ಅದಕ್ಕೆ ಬಯಲಿನತ್ತ ಹೆಜ್ಜೆ ಇಡಬೇಕು..!
- ಗೌತಮ್ ಗೌಡ, ಕೀರಣಗೆರೆ, ರಾಮನಗರ.

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವಾಲ್ಮೀಕಿ ವನಗಾವ್ಯ (ಕವಿತೆ) - ಹನುಮಂತ ದಾಸರ ಹೊಗರನಾಳ‌.

ಕಾನನದಲಿ ಕಾವ್ಯವೆಂಬ ವೃಕ್ಷದಡಿ ಲೇಖನಿಯಂ ಪಿಡಿದು
ಕಲ್ಪನೆಯ ಲೋಕದೊಳ್ ಮುಳುಗಿ.
ಕಣ್ಮುಂದಾವರಿಸುವ ತುಸು ಕನಸುಗಳ ಸವಿದು
ವನಸಿರಿಗಳ ಮಧ್ಯೆಮಂ ಪ್ರಾಣಿ-ಪಕ್ಷಿಗಳ ಬಳಗದೊಳ್ ಬೆಂದು.
ಧ್ಯಾನದೊಳ್ ಮುಳುಗಿರ್ದೊಡೆ ಆಗಾಧ ಶಕ್ತಿಯೊಂದ್ ತಲೆಗಪ್ಪಳಿಸಿ ಧ್ಯಾನಮುಕ್ತನಾಗಿ "ರಾಮಾಯಣಂ" ಎಂಬ ಹಿರಿದಾದ ಕಾವ್ಯವಂ ರಚಿಸಿ,
 ವಾಲ್ಮೀಕಿ ಎಂಬ ಹುತ್ತವಂ ನಿನ್ನ ಸುತ್ತುವರೆದು ಎತ್ತಲೂ ಸಾಗದಂತಿತ್ತಾ ನಿನ್ನ ಚಿತ್ತವಂ.
 ಇತ್ತ ಮಹತ್ತರ ಜ್ಞಾನದಿಂ ಪಡೆದಾ ಶಕ್ತಿಯೊಳ್  ಸಂತ,ಕವಿ ಶ್ರೀ ಮಹರ್ಷಿ "ವಾಲ್ಮೀಕಿ" ಎಂತಾಗಿ ಕಾವ್ಯ ಭಂಡಾರದಿಂ ಬೆಳಗು ಹರಿಸಿ ಧನ್ಯರಾದಿರಿ ಸ್ವಾಮಿಯೇ ನೀವ್ ತುಳಿದೀ ಭವ್ಯ ಜಗದೊಳ್..‌.!!
 
 -ಹನುಮಂತ ದಾಸರ ಹೊಗರನಾಳ‌.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನೀ ಬಂದೆ ನನ್ನ ಬಾಳ ಪುಟದಲಿ (ಕವಿತೆ) - ಕೆ. ಬಿ.ಮಧು.

ಹರೆಯದ ವಯಸ್ಸಿನಲ್ಲಿ.
ನೀ ಕಂಡೆ ನನ್ನ ಕಣ್ಣುಗಳಲ್ಲಿ.
ಮದುವೆಯೆಂಬ ಮಂಟಪದಲ್ಲಿ.
ಮಾಂಗಲ್ಯ ಎಂಬ ಸೂತ್ರದಲ್ಲಿ.//

ಜೊತೆಯಾಗಿ ಕೈಹಿಡಿದು ಸಪ್ತಪತಿ ಎಲ್ಲಿ.
ಸಾಗಿದೆ ಪಯಣದ ಓಟದಲ್ಲಿ.
ಮುಪ್ಪಿನ ಕಡೆಯವರಿಗೂ ನಿನ್ನ ಜೊತೆಯಲಿ.
ನಡೆದೆ ನಿನ್ನ ದಾರಿಯಲ್ಲಿ.//

ಬಾಳೆಲ್ಲ ಸವಿಜೇನು ನಿನ್ನ ಜೊತೆಯಲ್ಲಿ.
ಪ್ರತಿಕ್ಷಣ ನನ್ನ ಮನದ ಅರಮನೆಯಲ್ಲಿ.
ಬಿಸಿಯುಸಿರಿನ ಹೃದಯ ಮಂದಿರದಲ್ಲಿ.
ನಾ ಬಂದೆ ನಿನ್ನ ಬಾಳ ಪುಟದಲಿ.//

ಕನಸುಗಳ ಹೊತ್ತು ನೀ ತಂದೆ.
ಬಾಳೆಲ್ಲಾ ಮಲ್ಲಿಗೆ ಹರುಷದಲ್ಲಿ.
ನಮ್ಮಿಬ್ಬರ ಪ್ರೇಮದ ಸುಳಿಯಲ್ಲಿ.
ನಂಬಿಕೆಗಳ ಸತ್ಯಾಸತ್ಯತೆಗಳ ಹಾದಿಯಲ್ಲಿ.//

ನೀ ನಡೆಯುವ ದಾರಿಯಲಿ.
ನನ್ನ ಹೆಜ್ಜೆಗಳ ಸಮ್ಮಿಲನದಲ್ಲಿ.
ಬದುಕಿಲ್ಲ ಹೊಸ ಚೈತನ್ಯದ ಚಿಲುಮೆಯಲ್ಲಿ.
ನೀ ಬಂದೆ ನನ್ನ ಬಾಳ ಪುಟದಲಿ.//
-  ಕೆ. ಬಿ.ಮಧು
 ಕೊತ್ತತ್ತಿ ಗ್ರಾಮ.
ಮಂಡ್ಯ ತಾಲೂಕು ,ಜಿಲ್ಲೆ.
 "ಭಾವುಕ ಮನ".

(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಲಹುವಳು (ಕವಿತೆ) - ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು.

ನವಮಾಸ ಗರ್ಭದಿ ಹೊತ್ತು
ಜೀವನ್ಮರಣದ ನೋವುಂಡು ಹೆತ್ತು
ಉಣಿಸುವಳು ಎದೆಹಾಲ ಅಮೃತವ
ಪ್ರೀತಿ-ವಾತ್ಸಲ್ಯದಿ ಮುತ್ತಿಟ್ಟು
ಹೊರಡುವಳು ನಮಗೆಲ್ಲವೂ ಬಿಟ್ಟು
ಸಲಹುವಳು ನಮ್ಮನ್ನು ಹೆತ್ತ ತಾಯಿ.

ಸರ್ವ ಜೀವಿಗೂ ಆಶ್ರಯ ನೀಡುವಳು
ಆಸರೆಯಾಗಿ ಎಲ್ಲರ ಹರಸಿಹಳು
ಮಲ-ಮೂತ್ರ ಕಲ್ಮಶವ ಒಡಲಿಗೆ ಇರಿಸಿಕೊಂಡು
ಕೂಳು ನೀಡಿ ಜೀವತುಂಬಿ ಕಾಪಾಡಿ
ಕೊನೆಗೆ ತನ್ನ ಮಡಿಲಿಗೆ ಇರಿಸಿಕೊಳ್ಳುವಳು
ಸಲಹುವಳು ನಮ್ಮನ್ನು ಭೂಮಿತಾಯಿ.

ಸಮತೋಲನಗೊಳಿಸಿ ಕಾಪಾಡುವವಳು
ಸಕಲರಿಗೂ ಆರೋಗ್ಯ ನೀಡುವವಳು
ಆಮ್ಲಜನಕವ ನೀಡಿ ಉಸಿರಾಡಿಸುವಳು
ವ್ಯಾಧಿಗೆ ಔಷಧೀಯ ಮೂಲವಾಗಿರುವಳು
ಸೌದೆ, ಕಟ್ಟಿಗೆ ನೀಡಿ ಒಲೆ ಉರಿಸುವವಳು
ಸಲಹುವಳು ನಮ್ಮನ್ನು ಹಸಿರು ತಾಯಿ.

ಹರಿಯುವಳು ಪಾವನಾ ಗಂಗೆಯಾಗಿ
ತೊಳೆಯುವಳು ಪಾಪವ ತುಂಗೆಯಾಗಿ
ಜೀವರಾಶಿಗೆ ನೀರುಣಿಸಿ ಕಾವೇರಿಯಾಗಿ
ಕಾನನದಲ್ಲಿ ಹರಿಯುವಳು ನರ್ಮದೇಯಾಗಿ
ಹೊಲ-ಗದ್ದೆ ಹಸಿರಾಗಿಸಿ ಕೃಷ್ಣೆಯಾಗಿ
ಸಲಹುವಳು ನಮ್ಮನ್ನು ಜಲದ ತಾಯಿ.

ತಾಯಿಗೂ ಮಿಗಿಲಾಗಿ ಹಾಲುಣಿಸಿ
ಸಗಣಿಯ ಬೆರಣಿ ಮಾಡಿ ಒಲೆ ಉರಿಸಿ
ಸರ್ವರೋಗಕ್ಕೂ ಮದ್ದು ಗೋಮೂತ್ರವು
ಲೋಕವೆ ಪೂಜಿಸುವ ಕಾಮಧೇನುವು
ರೈತರ ಪಾಲಿನ ನಂದಾದದೀವಿಗೆಯಾಗಿ
ಸಲಹುವಳು ನಮ್ಮನ್ನು ಗೋವು ತಾಯಿ.

✍ ಲಕ್ಷ್ಮಿ ಕಿಶೋರ್ ಅರಸ್ ಕೂಡ್ಲೂರು.
ಯುವ ಕವಿ ಹಾಗೂ ಲೇಖಕರು.
ಮೊ: 9632505776.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...