ಭಾನುವಾರ, ಜನವರಿ 30, 2022

ಗಾಂಧಿ ಪುಣ್ಯ ಸ್ಮರಣೆ (ಕವಿತೆ) - ಶ್ರೀಮತಿ ರೇಖಾ ನಾಡಿಗೇರ.

ಮೋಹನದಾಸ ಕರಮಚಂದ ಗಾಂಧಿ
ಪೋರಬಂದರಿನ ಪುತಳಿಬಾಯಿಯ ಉದರದಿಂದ ಜನಿಸಿ ಈ ಜಗಕೆ ಬಂದಿ

ಅಮ್ಮ ಮಾಡ್ವ ವ್ಳತ,ನೇಮ, ನಿಷ್ಠೆ
ಎರಕ ಹೊಯ್ದವು ನಿಮ್ಮಲ್ಲಿ
ಬಿಡದೆ ದುಡಿವ ಕಾಯಕ ನಿಷ್ಠೆ

ಕಥೆ,ನಾಟಕಗಳು ಬೀರಿದಂಥ ಸತ್ ಪ್ರಭಾವ
ಹರಿಶ್ಚಂದ್ರ ನಾಟಕ ತಿಳಿಸಿತು ನಿಮಗೆ 
ಸತ್ಯವೇ ಶಕ್ತಿ ಎಂಬ ಭಾವ

ಮಾತಾ ಪಿತರ ದೀನರ ಸೇವೆಯೇ ಈಶ ಸೇವೆ ಎಂದರಿತೆ
ಓದಿ ಶ್ರವಣಕುಮಾರ ಚರಿತೆಯ
ಸತ್ಯ ಶಾಂತಿ ಅಹಿಂಸಾ ಮಾರ್ಗದಾಯ್ಕೆಗೆ ಅವೇ ನೀಡಿದವು ಪ್ರೇರಣೆಯ

ಮೂರು "ಮ"ಗಳಿಂದ ದೂರವಿರು (ಮದಿರೆ,ಮಾನಿನಿ,ಮಾಂಸ)
ಎಂದ ಮಾತೆಗೆ 
ನೀಡಿದೆ ಭರವಸೆಯ
ನಿಯಮದಂತೆ ನಡೆದು ಪಡೆದೆ ವಿದೇಶದಿಂದ ಬ್ಯಾರಿಸ್ಟರ್ ಪದವಿಯ

ವಿದೇಶದ ಓದಿನಿಂದ ಬರಲಿಲ್ಲ ನಿಮಗೆ ದಪ೯,ಅಹಂಕಾರ
ದೇಶ ಸುತ್ತುವರೆದ ದಾಸ್ಯ,ಬಡತನ ಕಣ್ಣುತೆರೆಸಿ ಆದೆ ನೀನು ಸ್ವಾತಂತ್ರ್ಯ ಹೋರಾಟಗಾರ

ಸತ್ಯ ಶಾಂತಿ ಅಹಿಂಸೆ ಉಪವಾಸ ಸತ್ಯಾಗ್ರಹ,ಆಂದೋಳನ ಗಳೇ ನಿಮ್ಮ ಅಸ್ತ್ರ
ನಡೆ ನುಡಿಯ ಸರಳತೆ
ನಿ:ಸ್ವಾರ್ಥ ಚರಿತ್ರೆ ಮಾಡಿದವು ಜನರ ಪಾಲಿಸುವಂತೆ ನಿಮ್ಮ ಸೂತ್ರ

ಕೈಯಲ್ಲೊಂದು ಕೋಲು
ತುಂಡು ಪಂಚೆ ಸರಳ ಉಡುಗೆ
ಮುಖದ ತುಂಬ ಮಗುವಿನಂಥ ಹೂ ನಗೆ

ಕೋಟ್ಯಾನುಕೋಟಿ ಭಾರತೀಯರು 
ಹೆಜ್ಜೆಗೂಡಿಸಿದರು ನಿಮ್ಮೊಂದಿಗೆ
ಛಲ ಬಿಡದ ಹೋರಾಟದಿಂದ ಬೆಳಗಿದೆ ಸ್ವಾತಂತ್ರ್ಯ ದೀವಿಗೆ

ಆದೆ ನೀನು ವಿಶ್ವವಂದ್ಯ ರಾಷ್ಟ್ರಪಿತ
ಭಾರತಾಂಬೆ ಸಂಕೋಲೆ ಬಿಡಿಸಲು ಸವ೯ಸಂಗ ಪರಿತ್ಯಾಗ ಮಾಡಿದ ವೀರ ಸುತ, ಶಾಂತಿ ದೂತ

ದೇಶ ಇಬ್ಭಾಗಕೆ ಒಪ್ಪಿಗೆಯಿತ್ತ ಆ ಘಳಿಗೆ
ಶಾಂತಿ ಸೂತ್ರ ಒಪ್ಪಿತವಾಗಲಿಲ್ಲ 
ಕ್ರಾಂತಿಕಾರಿಗಳಿಗೆ

1948 ಜನವರಿ 30ರ ದಿನ ಬಲಿಯಾದಿರಿ ಘೋಡ್ಸೆ ಗುಂಡಿನೇಟಿಗೆ
ತತ್ತರಿಸುತ್ತಿದೆ ದೇಶ ಇಂದಿಗೂ......

- ಶ್ರೀಮತಿ ರೇಖಾ ನಾಡಿಗೇರ, ಹುಬ್ಬಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ರುಬಾಯಿ - ಕುಡಗುಂಟಿ ಗವಿಸಿದ್ದಪ್ಪ

ಬಿಸಿರಕ್ತದ ಉರುಪಿನಲಿ 
ತಪ್ಪು ಒಪ್ಪಿನ ತಿಳಿಯದಲಿ 
ಹೊದಿದ್ದೆ ದಾರಿ ಮಾಡಿದ್ದೆ ಹಾದಿ 
ಅಂತ ಹಾಳಾದ ಜೀವನದಲಿ 

ದಂಪತಿಗಳ ನುಡುವಿನ ಸರಸ 
ಬದುಕಲು ತೊರೆಯಬೇಕು ವಿರಸ 
ತಿಳಿದು  ಬಾಳಿದರೆ ಸುಖ ಸಂಸಾರ 
ಆಗಲಾರದು ದುಃಖಗಳ ಸಾಹಸ

ಇರುವುದು ತಲೆಯ ತುಂಬ ಶಕ್ತಿ
ಕಣ್ಣತುಂಬ ಕನಸುಗಳ ಯುಕ್ತಿ 
ನೀನಾಗಬೇಡ ಸೋಮಾರಿತನವು 
ಸಾಧಿಸಿ ಜಯಿಸದೆ ಇಲ್ಲ ಮುಕ್ತಿ

ಹೊಟ್ಟೆ ಹಸಿವು ಮಾಡಿಸುವುದು ಕೆಲಸ 
ಭಿಕ್ಷೆ ಬೇಡುವ ಬಾರದಿದ್ದರೆ ಗೆಲಸ 
ಊರೂರು ತಿರುಗಿ ಕೊನೆಗೆ ಮಾಡುವನು 
ಸಮಾಜಕ್ಕೆ ದೊಡ್ಡ ದೊಡ್ಡ ದುಃಖದ ಮೋಸ 

ಮಗನ ಸೋಮಾರಿತನ ಅಪ್ಪನಿಗಿಡಿಸದು 
ಅವನ್ನೆಲ್ಲ ಮಾಡುವ ಕಾರ್ಯ ಅಮ್ಮನಿಗಾಗದು 
ಅವರೆಲ್ಲರೂ ಬೈದರೆಂದು ಅವನು ಊರುಬಿಟ್ಟು 
ಸೂರಿಲ್ಲದೆ ಅಳುತ್ತಾ ಕುಳಿತ ನೆನೆ ನೆನೆದು 

ಹಠದಲಿ ತಾನು ಊರು ಬಿಟ್ಟು ಪರಾರಿಯಾದ 
ಚಿಂತೆಯಿಲ್ಲದೆ ಮದುವೆಯ ವಯಸ್ಸು ತಾನಾದ 
ಸುಳ್ಳುಗಳ ಹೇಳಿಕೆಯಲ್ಲಿಯೇ ಮದುವೆಯಾಗಿ 
ದುಃಖಿಸುವನು ನಿತ್ಯ ಮಾಡಿದ ತಪ್ಪು ನೆನದ 

- ಕುಡಗುಂಟಿ ಗವಿಸಿದ್ದಪ್ಪ,
ಜೀವಶಾಸ್ತ್ರ ಉಪನ್ಯಾಸಕರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಹಾತ್ಮ — ಹುತಾತ್ಮ (ಕವಿತೆ) - ಮಧುಮಾಲತಿ ರುದ್ರೇಶ್, ಬೇಲೂರು.

ಶಾಂತಿಧೂತ ರಾಷ್ಟ್ರಪಿತ ಸಹನೆ ನಿನ್ನ ಮಂತ್ರ 

ರಾಮಭಕ್ತ ಅಹಿಂಸಾವಾದಿ ಇದುವೆ ನಿನ್ನ ಅಸ್ತ್ರ 

 ಸತ್ಯ ಶಾಂತಿ ವೃತ್ತಿನಿಷ್ಠೆ ಇದುವೆ ನಿನ್ನ ಮಾರ್ಗ

 ನಿನ್ನ ಪಡೆದ ಭೂಮಿ ಇದುವೆ ಧನ್ಯ ತಾ ಸ್ವರ್ಗ 

ಮಕ್ಕಳಿಗೆಲ್ಲ ಅಚ್ಚುಮೆಚ್ಚು ದೇಶಕೆ ನೀ ಬಾಪು

 ಸರಳ ಉಡುಗೆ ಸಹೃದಯಿ ಕರುಣೆ ನಿನ್ನ ರೂಪು

 ಮಹಾತ್ಮ ನೆಂಬ ಬಿರುದುˌ ನಿನಗೆ ತಂದ ಮೆರುಗು 

ನಿನ್ನ ಪಡೆದು ಧನ್ಯಭಾವ ನಮ್ಮ ಭರತ ಮಾತೆಗು

 ನಿನ್ನ ನುಡಿ ದಾರಿದೀಪ ವರ್ಷವೆಷ್ಟೆ ಕಳೆದರೂ

 ಮಾಸದು ನಿನ್ನ ಛಾಪು ನೀನಿಲ್ಲಿ ಇಲ್ಲವಾದರೂ

 ಸ್ಫೂರ್ತಿ ನಿನಗೆ ಶ್ರವಣಕುಮಾರ ಹರಿಶ್ಚಂದ್ರರು

 ಅಮರ ನೀನು ಇರುವವರೆಗೂ ಜಗದಿ ˌಸೂರ್ಯಚಂದ್ರರು

 ಮರಳಿ ಬಾ ಮತ್ತೆ ನೀನು ಶಾಂತಿಮಂತ್ರ ಬಿತ್ತಲು

ಸತ್ಯ ಶಾಂತಿ ಧರ್ಮನಿಷ್ಠೆ ಸುಮವರಳಲಿ  ಸುತ್ತಲೂ

ನಿನ್ನ ನಾವು ಕಳೆದುಕೊಂಡ ದಿನವಿದು
ಆಚರಿಸುವೆವು ಹುತಾತ್ಮರ ದಿನವೆಂದು

ಶ್ರೇಷ್ಠ ಮಹಾತ್ಮ ನೀನು ಹುತಾತ್ಮನಾದೆ
ಭಾರತದ ಭವ್ಯ ಭವಿಷ್ಯಕೆ ನಂದಾದೀಪವಾದೆ

ಆಧುನಿಕ ಯುಗದಲೂ ಸತ್ಯವನೇ ನುಡಿದು ಜಗವ ಜಯಿಸಿದೆ

ಸತ್ಯಮೇವ ಜಯತೆ ಮೂಲಮಂತ್ರವನು ಜಗಕೆ ಬಿತ್ತಿದೆ

ಸತ್ಯಾಗ್ರಹ ಚಳುವಳಿಗಳೇ ನಿನ್ನ ಆಯುಧವಂದು
ಕಾರಾಗ್ರಹವಾಸದಲೂ ಬಿಡದ ಛಲವದು

ನಿನಗಿದೋ ಸಾವಿರದ ಶರಣು

 - ಮಧುಮಾಲತಿ ರುದ್ರೇಶ್, ಬೇಲೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೀತಿ (ಕವಿತೆ) - ಸ್ಪೂರ್ತಿ ಎಸ್. ಆರ್.

ಪ್ರೀತಿ (ಕವಿತೆ) - ಸ್ಪೂರ್ತಿ ಎಸ್ ಆರ್.

ಪ್ರತಿ ನೋಟದಲ್ಲೂ ಅಲಂಕಾರ ರೂಪ 
ಪ್ರತಿ ಸಂಭಾಷಣೆಯಲ್ಲೂ ದೇವತೆಯ ಪ್ರತಿಬಿಂಬ
ಪ್ರತಿ ನಡತೆಯಲ್ಲೂ ಪ್ರಕೃತಿಯ ಪ್ರತಿರೂಪ   
ನನ್ನೆದೆಯಲ್ಲಿ ಅಚ್ಚು ಉಳ್ಳಿದ ಅತ್ಯಂತ ಅಪರೂಪ 

ಕಾಡಿಗೆ ಕಣ್ಗಳ ಮೋಡಿಗೆ ಸೋತೆ ಈದಿನ
ಕಮಲದ ನಯನ ರೆಪ್ಪೆ ಬಡಿದರೆ ಚಿಟ್ಟೆಯಂತೆ 
ಆಗಿದೆ ನೋಡುತ್ತ ಹೃದಯ ತಲ್ಲಣ

ಎಲ್ಲರಂತಲ್ಲ ನನ್ನವರು 
ಎಲ್ಲ ಹುಡುಕಿದರೂ ಸಿಗದೇ ಇರುವವರು 
ಹುಡುಕಲು ಬೇಕಾಗುವುದು ಏನೋ ಒಂದೆರಡು ಜನ್ಮ 

ನಾನು ಕಂಡ ಚೆಂದವ
ಎಲ್ಲೆಲ್ಲೂ ಹುಡುಕಿದರೂ ಸಿಗದು ಅ ಅಂದವ 

ಕಣ್ಣು ಸನ್ನೆ ನೀ ವಾಗಿರಲು 
ಹೃದಯತುಂಬಿ ಕವಿತೆ ಬರೆಯುತ್ತಿರುವೆ 
ನಗುಮೊಗವನ್ನು ತೋರುತಿರಲು  ಸಿಹಿಜೇನು ಮಡಿಲಲ್ಲಿ ಸಾಗುತ್ತಿರುವೆ  
- ಸ್ಪೂರ್ತಿ ಎಸ್‌ ಆರ್. 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೇಮ ವಿರಹ (ಕವಿತೆ) - ಶ್ರುತಿ ಚಂದ್ರು ಎಸ್

  ನೋಡದೆ ಇರಲಾರೆನು ಪ್ರೀತಿಯ ಕೊಡಲಾರೆನು ಮರೆತು ಬದುಕಲಾರೆನು ಅಗಲಿಕೆಯನ್ನು ಸಹಿಸಲಾರೆನೂ
 ॥  ಇದೆಂಥ ವಿಚಿತ್ರ ॥

ಮನಸ್ಸಿನಲ್ಲಿ ತುಂಬಿದೆ ನೋವುಗಳು 
ಸೇರುತ್ತಿಲ್ಲ ಊಟ ಉಪಚಾರಗಳು ನಗುವುದನ್ನೇ ಮರೆತಿದೆ ಈ ಮನವು ॥

ಏಳಲಾರದ ದುಗುಡ ದುಮ್ಮಾನವು
 ನೋವು ತರಿಸಿದೆ ಮನಸ್ಸಿನ ಭಾವನೆಗಳು ಕಾಡಿಸುತ್ತಿವೆ
 ಆದ  ಕ್ಷಣಗಳು ॥

ಊಹಿಸಿಕೊಳ್ಳಲಾರದ ವಿಚಿತ್ರ ಅನುಭವಗಳು !
ಇದೇನೂ ಅಂಥ ತಿಳಿಯಲಾರದದೆನು  ನಾನೀಗ ।
॥ಒಲವೇ ॥

ಉತ್ತರಿಸು  ಬಳಿ ಬಂದು
          ನೀನೀಗ !
    - ಶ್ರುತಿ ಚಂದ್ರು ಎಸ್., ಕೊಟ್ಟೂರು .


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೆಚ್ಚೆದೆಯ ಕಲಿ (ಕವಿತೆ) - ಮೊಹಮ್ಮದ್ ಅಜರುದ್ದೀನ್

ಭಾರತಾಂಬೆಯ ಹೆಮ್ಮೆಯ ಸುಪುತ್ರನೇ
ದೇಶದ ಕೆಚ್ಚೆದೆಯ ಕಲಿಯೇ
ಯುವಜನರ ಮುತ್ತಿನ ಮಾಣಿಕ್ಯನೇ
ಭಾರತದ ಚೇತನ ಶಕ್ತಿಯೇ ||

ನೀನು ಯಾರಿಗೂ ಅಂಜದ ವೀರ
ಸ್ವಾತಂತ್ರ್ಯ ಪಡೆಯಲು ಹೋರಾಡಿದ ಧೀರ
ಯೌವ್ವನದಲ್ಲಿ ನೀನು ಕಂಡೆ ನೂರಾರು ಕನಸು  
ಯುವಕರ ಪಾಲಿಗೆ ಈಗ ಕನಸೇ ನನಸು  ||
ಅಪ್ರತಿಮ ದೇಶಭಕ್ತನೇ
ಭಾರತಾಂಬೆಯ ವೀರ ಸೇನಾನಿಯೇ
ಬ್ರಿಟೀಷರ ಪಾಲಿಗೆ ಶಕ್ತಿಯ ಚೆಂಡೇ
ಸ್ವಾತಂತ್ರ್ಯ ಹೋರಾಟದ ಹೆಮ್ಮೆಯ ಗಂಡೇ ||

ಕೋಟ್ಯಾಂತರ ಜನರಿಗೆ ಸ್ಪೂರ್ತಿಯೂ
ದೇಶದ ಅಪ್ರತಿಮ ದೇಶಭಕ್ತನೂ
ಇತಿಹಾಸ ಪುಟದಲ್ಲಿ ಉಳಿದಿರುವ ಶೂರನೂ
ನಿನ್ನ ಸಾವು ಇಂದಿಗೂ ನಿಗೂಢವೂ ||

ನೇತಾಜಿ ಎಂಬ  ಹೆಮ್ಮೆ ಅಮರ  
ಈ ನಾಡಲ್ಲಿ ನೀನು ಸಮರ
ನಮ್ಮ ನಾಡಿನ ಕೆಚ್ಚೆದೆ ಹುಲಿಯೇ
ನಿನಗೆ ನನ್ನ ಕೋಟಿ ವಂದನೆ ||  

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಬಾಡದ ಹೂವು- ಆಸೆ ಹಲವು (ಕವಿತೆ) - ಶಾಂತಾರಾಮ ಶಿರಸಿ

ಕಣ್ತೆರೆದು ನೋಡಿದರೆ ಪ್ರಪಂಚ ಸುಂದರವಾಗಿ ಸೃಷ್ಚಿಸಿಹನು ಆ ದೇವರು, 
ಈ ಸುಂದರ ಪ್ರಪಂಚದಲ್ಲಿ  ಎಲ್ಲರೂ ಬದುಕುವ ಆಸೆಯನು ಹೊಂದಿ ಉಸಿರಾಡುತಿಹರು, 
ಅದರಲ್ಲಿ ಅವೆಷ್ಟೋ ಹೊಸದಾಗಿ ಮೊಳಕೆಯೊಡೆದು ಬದುಕಿನತ್ತ ಪುಟ್ಟ ಹೆಜ್ಜೆ ಹಾಕುತ್ತಿರುವ ಚಿಗುರು, 
ಚಿಗುರಿಗೂ ಆಸೆಯುಂಟು ಹಲವಾರು, 
ಆ ಚಿಗುರು ಬೆಳೆದು ಹೂವಾಗಿ ಅರಳಲು ನೀರೆರೆದು ಪೋಷಿಸುವವರ್ಯಾರು... 

ಬದುಕಿನಲ್ಲಿ ಅರಳಬೇಕಾಗಿರುವ ಮೊಗ್ಗಿವಳು, 
ಅರಳಿದರೂ ಎಂದೂ ಬಾಡದವಳು, 
ಎಲ್ಲರಂತೆ ಬದುಕಿ ಬಾಳಬೇಕಾಗಿರುವವಳು, 
ಅರಳಿ ತನ್ನ  ಘಮವನ್ನು ಲೋಕಕೆ ಪಸರಿಸುವವಳು...

ಎಲ್ಲರಂತೆ ಅವಳಿಗೂ ಇದೆ ಭರವಸೆಯ  ಬಾಳು, 
ಒಲ್ಲದ ಮನಸ್ಸಿನವಳೆಂದು ನಿಂದನೆಗೆ ಒಳಗಾಗುವವಳು,
ನಿಂದಿಸಿ ಮನವೊಲ್ಲೆಯೆಂದರೂ ಹೃದಯದ ಮಾತು ಕೇಳುವವಳು,
ಕಷ್ಟದಲಿ ನೆರವಾಗುವವಳು-ಬದುಕಿನಲಿ ಏಳು-ಬೀಳನು ಕಂಡವಳು, 
ತನ್ನ ನೋವನು ತನ್ನಲ್ಲಿಯೇ ಅರಗಿಸಿಕೊಂಡವಳು, 
ಬದುಕಿಗೆ ಭರವಸೆಯ ತುಂಬಿದವಳು.. 

ಕಿರುನಗೆಯ ಹೊರಸೂಸಿ- ಸವಿಜೇನ ಸಿಹಿಯ ಮಧುರ ಮಾತುಗಳನಾಡುವವಳು, 
ಹಲವರ ಮನವ ಗೆದ್ದವಳು-ಹೃದಯದರಮನೆಯಲ್ಲಿ ನೆಲೆಸಿರಿವವಳು, 
ಭಾವನೆಗಳೊಂದಿಗೆ ಪ್ರೀತಿಯ ಸಂಬಂಧಗಳ ಬೆಸೆಯುವವಳು... 

ನಂಬಿದವರ ಬದುಕಿಗೆ ಆಸರೆಯಾಗಿರುವವಳು, 
ಕೈಯ್ಯಾರೆ ಕಣ್ಣ ಕಂಬನಿ ಒರೆಸಿ ತುತ್ತು ತಿನಿಸುವವಳು,
ಎಂದೂ ಬಾಡದ ಹೂ ಯಾರಿವಳು-ಯಾರಿವಳು...
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ
8762110543
7676106237



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹದಿಯಾ (ಕವಿತೆ) - ಮಹಮ್ಮದ್ ರಫೀಕ್ ಕೊಟ್ಟೂರು.

ಅಂಗಡಿಯವನನ್ನು ಕೇಳಿದೆ
ಈ ಕುರಾನಿನ ಬೆಲೆಯೆಷ್ಟು?
ತೋಬಾ !ತೋಬಾ!
ಹಾಗೆನ್ನಬಾರದು 'ಹದಿಯಾ" ಅದು

ಬಣ್ಣ ಬಣ್ಣದ ಬೇರೆ ಬೇರೆ ಡಿಜೈನಿನ
ರ್ಯಾಪರಿನ ಕುರಾನುಗಳು,
ಹದಿಯಾ ಕೂಡಾ ಬೇರೆ ಬೇರೆ

ಒಳಗಿರುವ ಅಕ್ಷರಗಳು
ಅಂದಿನಂತೆಯೇ..
ಅರ್ಥಗಳು ಅವರವರ ಭಾವಕ್ಕೆ
ರ್ಯಾಪರಿನಂತೆ!

ಕಪಾಟಿನಲ್ಲಿ ಧೂಳು ಮೆತ್ತಿದ
ಗಾಜಿನ ಹಿಂದೆ ಇನ್ನಷ್ಟು ಪುಸ್ತಕಗಳ  ಪೇರಿಸಿದ್ದ!
ಒಂದರ ಬೆನ್ನಿಗೆ ಇನ್ನೊಂದರಂತೆ
ಗೀತೆ, ಗ್ರಂಥಾ ಸಾಹೀಬ್,ಬೈಬಲ್..
ಎಲ್ಲದಕ್ಕೂ ಹದಿಯಾ ಪಟ್ಟಿ  ಬರೆದೇ ಇತ್ತು!
- ಮಹಮ್ಮದ್ ರಫೀಕ್ , ಕೊಟ್ಟೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವೀರ ಕನ್ನಡಿಗರು (ಕವಿತೆ) - ಸೂಗಮ್ಮ ಡಿ ಪಾಟೀಲ್

ಕನ್ನಡಾಂಬೆಯ ಗರ್ಭದಲ್ಲಿ ಎಂದು
ಜನಿಸಲಾರರು ಇಲ್ಲಿ ಹೇಡಿಗಳೆಂದು
ವೀರ ಮಾತೃವಿಗೆ ವೀರ ಮಕ್ಕಳಿವರು
ಸದಾ ತಾಯಿನಾಡ ರಕ್ಷಣೆಗೆ ನಿಂತಿಹರು!!೧!!


ಕನ್ನಡ ಮಣ್ಣಿನ ಕಣ ಕಣದಲಿ ಶೌರ್ಯವಿದೆ
ಕನ್ನಡಿಗರ ರಕ್ತದ ಹನಿ ಹನಿಯಲಿ ತ್ಯಾಗವಿದೆ
ನುಡಿದಂತೆ ನಡೆಯುವ ನಾಡು ನಮ್ಮದಾಗಿದೆ
ಸಹಸ್ರ ಕೋಟಿ ಕವಿಗಳ ಆಶ್ರಯತಾಣವಾಗಿದೆ!!


ಸ್ವರಾಜ್ಯದಲ್ಲಿ ಜನಿಸಿ ಪರರಾಜ್ಯದ ಮೋಹವೇಕೆ
ಕನ್ನಡಾಂಬೆಯ  ಮಡಿಲಲಿ  ಬೆಳೆದರೆ  ಸಾಕೆ
ತಾಯಿನೆಲದ ಋಣವಿದೆ ನಿಮ್ಮ ಮೇಲೆ ಜೋಕೆ
ನಾಡ ಋಣ ತೀರಿಸದೆ ಪರರಾಜ್ಯದ ಪ್ರಗತಿಬೇಕೆ


ಹಂಬಲವಿರಲಿ ನೀ ಜನಿಸಿದ ನೆಲದಲ್ಲಿ
ಬೆಂಬಲವಿರಲಿ ನೀ ಮೆಟ್ಟಿದ ಮಣ್ಣಲ್ಲಿ
ಶ್ರೇಷ್ಠತನವಿರಲಿ ಕನ್ನಡ ಮಾತಾಡುವಾಗಿಲ್ಲಿ
ಗರ್ವವಿರಲಿ ನಾವು ಕನ್ನಡಿಗರೆಂದಾಗಿಲ್ಲಿ!!


ರಾಜ್ಯದ್ರೋಹಿಗಳಿಗೆಂದು ಕನ್ನಡ ಒಲಿಯದಿಲ್ಲಿ
ಒಲಿದಿದ್ದರೆ ನಾವೇಕೆ ಕಲಿಯುತ್ತಿದ್ದೇವು ಅಲ್ಲಿ
ಆಂಗ್ಲ ಭಾಷೆಯನ್ನಲ್ಲವೇ ಅಂದು ಬ್ರಿಟಿಷರಲ್ಲಿ
ಕಲಿಸಿ ಬೆಳೆಸಿ ಕನ್ನಡ ನೆಲದಾಗ ಕನ್ನಡವನ್ನಿಲ್ಲಿ!!

                   -  ಸೂಗಮ್ಮ ಡಿ ಪಾಟೀಲ್
                ಉತ್ನಾಳ (ವಿಜಯಪುರ ಜಿಲ್ಲೆ )


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ

ಸೂರ್ಯನಿಗೂ ಒಮ್ಮೊಮ್ಮೆ ಮೋಡಗಳು ಕವಿದು ಕತ್ತಲೆಯಾಗಿರುವುದುಂಟು ಸಾಖಿ
ಚಂದಿರನೂ ಕೂಡ ಒಮ್ಮೊಮ್ಮೆ ಇರುಳನು ಜರಿದು ಕತ್ತಲೆಯಾಗಿರುವುದುಂಟು ಸಾಖಿ

ಧರಿಸಿದ ವಿಭೂತಿ ರುದ್ರಾಕ್ಷಿಮಾಲೆಯಲ್ಲಿ ಭಕ್ತಿಯು ಕತ್ತಲೆಯ ಮಡಿಯ ಮೈಲಿಗೆ
ಖಾವಿ ಕಾಶಾಯಿಯ ಕರಸ್ಥಳದಲ್ಲೂ ಕಾಮ ಕಡಿದು ಕತ್ತಲೆಯಾಗಿರುವುದುಂಟು ಸಾಖಿ

ಋಷಿಯ ತಪಸ್ಸು ಭಂಗವಾಗಿ ಮೈ ಮರೆತುದಕ್ಕೆ ಮಕ್ಕಳಾಗಿ ಅನಾಥವಾಗಿವೆ
ಕವಿದ ಮೋಡಗಳು ಬಿರುಗಾಳಿಗೆ ಹರಿದು ಕತ್ತಲೆಯಾಗಿರುವುದುಂಟು ಸಾಖಿ

ಉರಿವ ಅಗ್ನಿ ಪರ್ವತಂದೆ ದಗದಗಿಸೊ ಜೀವಾತ್ಮದ ಅರಿವಿಲ್ಲದ ಹಾದಿಗೆ
ಅಜ್ಞಾನವೇ ಆವರಿಸಿ ಅಂಧಕಾರ ಸುರಿದು ಕತ್ತಲೆಯಾಗಿರುವುದುಂಟು ಸಾಖಿ

ಸೃಷ್ಟಿಯೂ ಕೂಡ ವ್ಯತಿರಿಕ್ತಗಳ ಕತ್ತಲಲ್ಲಿ ಮೈಮರೆತು ಬೆತ್ತಲೆಯಾಗಿ ಮೌನತಾಳಿದೆ
’ನಾಣಿ’ಯ ಅವಲೋಕಿಸದ ಆತ್ಮ ಕೂಡ ಗೌವ್ವೆಂದು ಕತ್ತಲೆಯಾಗಿರುವುದುಂಟು ಸಾಖಿ
      - ಲಕ್ಷ್ಮೀನಾರಾಯಣ ಕೆ ವಾಣಿಗರಹಳ್ಳಿ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೈನಿಕನಾಗಬೇಡ ಎಂದು ಹೇಳಬೇಡ (ಕವಿತೆ) - ಪಂಗರಗಾ ರವಿಚಂದ್ರ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ಅವನನ್ನು
ಶತ್ರುಗಳ ರುಂಡ ಚೆಂಡಾಡುವ ಶಕ್ತಿ ಅವನ್ನಲ್ಲಿದೆ

ಸೈನಿಕನಾಗಬೇಡ ಎಂದು ಹೇಳಬೇಡ ನೀನು ನಿನ್ನ ಮಗನನ್ನು
ಭಾರತಾಂಬೆಯ ಅನೇಕ ಮಕ್ಕಳನ್ನು ಕಾಯುವ ಧೈರ್ಯ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಹೊರಟಿರುವವನನ್ನು ತಡೆಯಬೇಡ ನೀನು
ಭಾರತದ ಅತ್ಯುತ್ತಮ ಸೇವೆಯನ್ನು ಮಾಡಬೇಕೆಂಬ ತುಡಿತ ಅವನ್ನಲ್ಲಿದೆ

ಸೈನಿಕನಾಗಬೇಕೆಂದು ಯೋಚಿಸುವವನನ್ನು ಹುರಿದುಂಬಿಸು ನೀನು
ಕೆಲವೇ ದಿನಗಳಲ್ಲಿ ನಿನ್ನನ್ನು ಭಾರತೀಯರನ್ನು ಕಾಯಲು ಗಡಿಗೆ ಹೋಗಿ ನಿಲ್ಲುವ ತಾಕತ್ತು ಅವನ್ನಲ್ಲಿದೆ

-  ಪಂಗರಗಾ ರವಿಚಂದ್ರ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಂತೋಷದ ಹೊನಲು ಆದರ್ಶದ ಮುಗಿಲು ನಮ್ಮಿ ಅಪರೂಪದ ಗುರುಗಳು (ಲೇಖನ) - ಪೂಜಾ ಎಂ ಪಿ.

ಗುರುಬ್ರಹ್ಮ ಗುರುವಿಷ್ಣು ಗುರು ದೇವೋ ಮಹೇಶ್ವರಃ 
 ಗುರುವನ್ನ ಸಾಕ್ಷಾತ್ ದೇವರು ಎಂದು ಹೇಳುವ ಭಾರತೀಯರು, ಪ್ರಸ್ತುತದಲ್ಲಿ  ಈ ನುಡಿಯಿಂದ ಅಂತರ ಪಡೆದಂತಿದೆ. ಕೇವಲ ಪಠ್ಯ ಮಾತ್ರ ಹೇಳಿಕೊಡುವ ಭೋದಕರಾಗಿ ಬದಲಾಗಹೊರಟಿದ್ದಾರೆ. ಗುರುವೆಂದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಮಾರ್ಗದರ್ಶಕರು, ತಮ್ಮ ವ್ಯಕ್ತಿತ್ವ ಮತ್ತು ನಡವಳಿಕೆಯಿಂದ ವಿದ್ಯಾರ್ಥಿಗಳ ಬಾಳಿಗೆ ಆದರ್ಶವಾಗಿ, ಸೋಲು - ಗೆಲುವನ್ನು ಸಮವಾಗಿ ಸ್ವೀಕರಿಸಿ ಮುನ್ನುಗ್ಗಲು ಸಹಕರಿಸೋ ಸ್ಪೂರ್ತಿಯ ಚಿಲುಮೆ.  ಬದುಕಿಗೆ ಬೇಕಾದ ಮೌಲ್ಯಗಳನ್ನು ಪರಿಚಯಿಸಿ ಅಳವಡಿಸಿಕೊಳ್ಳಲು ಪ್ರೇರೇಪಿಸಿ, ಅತ್ಯುತ್ತಮ ಜೀವನ ನಡೆಸಲು ದಾರಿ ತೋರುವ ರೂವಾರಿಗಳು.

ಇಂತಹ ಅಗಾಧ ಶಕ್ತಿಯುಳ್ಳ , ತನು-ಮನವನ್ನು ವಿದ್ಯಾರ್ಥಿಗಳ ಏಳಿಗೆಗಾಗಿ ಮೀಸಲಿಟ್ಟ ಅಪರೂಪದ ಶಿಕ್ಷಕರೇ ಸಾಂಸ್ಕೃತಿಕ ನಗರಿ ಮೈಸೂರಿನ ಜೆ ಎಸ್ ಎಸ್ ವಿಜ್ಞಾನ, ವಾಣಿಜ್ಯ ಮತ್ತು  ಕಲಾ ಕಾಲೇಜಿನ ಕನ್ನಡ ವಿಭಾಗದ  ಸಹಾಯಕ ಪ್ರಾಧ್ಯಾಪಕರು ಎನ್ ಸಂತೋಷ್ ಕುಮಾರ್, ಭೋದಿಸುವುದಷ್ಟೇ ಅಲ್ಲದೆ ಹಲವಾರು ಉಪಯುಕ್ತ ಮಾಹಿತಿಗಳೊಂದಿಗೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಉತ್ತೇಜಿಸುತ್ತಾರೆ, ಉದಾಹರಣೆ ಸಹಿತ ಸಕಾರಾತ್ಮಕ ಭಾವನೆಯನ್ನು ಪರಿಚಯಿಸುತ್ತಾರೆ.  ಆರ್ಥಿಕವಾಗಿ ಅದೆಷ್ಟೋ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ , ಅವರ ಪ್ರತಿಭೆಯನ್ನು ಗುರುತಿಸಿ ವೇದಿಕೆ ಕಲ್ಪಿಸಿ ಯಾವುದೇ ಪ್ರತಿಫಲ ಅಪೇಕ್ಷಿಸದೆ,ಏಳು ಬೀಳಿನಲ್ಲಿ ಜೊತೆಯಿದ್ದು ಗುರಿ ಮುಟ್ಟಲು ಸಹಾಯ ಮಾಡುವ ಮಾದರಿ ಗುರುಗಳು.  

ಇದಲ್ಲದೆ ಸಾಮಾಜಿಕ ಕಳಕಳಿ ಹೊಂದಿರೋ ಸೇವಾ ಮನೋಭಾವವುಳ್ಳ  ಇವರು  ಐದು ವರ್ಷಗಳಿಂದ ಪ್ರಸಿದ್ಧವಾದ ಯಶಸ್ವಿ  ಕಾರ್ಯಕ್ರಮಗಳ ನಿರೂಪಿಸಿರುವ,ಎನ್ ಎಸ್ ಎಸ್ ನ ದಕ್ಷ ಹಾಗೂ ಪ್ರಾಮಾಣಿಕ ಕಾರ್ಯಕ್ರಮ ಅಧಿಕಾರಿಯಾಗಿದ್ದಾರೆ. ವರ್ಷಕ್ಕೆ ಸಾವಿರಕ್ಕೂ ಅಧಿಕ ಕಾರ್ಯಕ್ರಮ ಮಾಡುವ ಕ್ರಿಯಾಶೀಲರು,ಮೂರು ವರ್ಷಗಳ ಕಾಲ ಕೆ ಎಸ್ ಗದ್ದಿಗೆಯನ್ನು ದತ್ತು ಪಡೆದು ಹಲವಾರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಾಡಿ ಶಾಲೆಗಳನ್ನು ಗುರುತಿಸಿ,ಶಾಲಾ ಕಟ್ಟಡಗಳಿಗೆ ರಂಗು ರಂಗಿನ ಕಲಾಕೃತಿಗಳ ಬಿಡಿಸಿ, ಮಕ್ಕಳು ಶಾಲೆಯತ್ತ ಆಕರ್ಷಿತರಾಗುವಂತೆ ಮಾಡಿದ್ದಾರೆ.
ಅಲ್ಮೇರಾ, ನೀರಿನ ಶುದ್ದೀಕರಣ ಯಂತ್ರ, ಸ್ಮಾರ್ಟ್ ಟಿವಿ, ಕಲಿಕಾ ಸಾಮಾಗ್ರಿ ಮುಂತಾದ ಪಠ್ಯ ಪೂರಕಗಳನ್ನು , ಸಮಾಜಮುಖಿ ಚಿಂತಕರಾದ ಕ್ರಿಯಾಶೀಲ ನಿರ್ದೇಶಕರಾದ ತೇಜಸ್ವಿಯವರ ಸಹಯೋಗದೊಂದಿಗೆ ಒದಗಿಸಿದ್ದಾರೆ, ಸದ್ದಿಲ್ಲದೆ ಎಲೆಮಾರೆಕಾಯಿಯಂತೆ ಸರ್ಕಾರಿ ಶಾಲೆ ಕಾಲೇಜುಗೆ ಸಹಾಯ ಮಾಡಲು ಮುಂದಾಗಿರುವ ತೇಜುರವರ ಈ ಗುಣವು ಸಮಾಜಕ್ಕೆ ಶ್ಲಾಘನೀಯವಾಗಿದೆ.

 ವಿಜೇತ  ನಾಗಭೂಷಣ್ ರವರ ಸಸ್ಯಾಧಾಮದಿಂದ  ಗಿಡಗಳನ್ನು ಪಡೆದು ಸ್ವಯಂ ಸೇವಕರ ಜೊತೆಯಲ್ಲಿ  ಇದುವರೆಗೂ ಸಹಸ್ರಾರು ಸಸಿಗಳನ್ನು ನೆಟ್ಟು ಅದರ ಪೋಷಣೆ ಮಾಡುತ್ತಿದ್ದಾರೆ,
ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಿ , ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ, ದೇವಾಲಯಗಳ ಸ್ವಚ್ಛತೆ ಕಾರ್ಯವಂತು ಬಾಯಿಯ ಮೇಲೆ ಬೆರಳಿಡುವಂತೆ ಮಾಡಿದೆ,ಅಲ್ಲದೆ ಅನಾಥಾಶ್ರಮ, ವೃದ್ದಾಶ್ರಮಗಳಿಗೆ ಆಗಾಗ್ಗೆ ಭೇಟಿ ನೀಡಿ ಭರವಸೆಯ ಮಾತಾಡಿ ಆತ್ಮವಿಶ್ವಾಸ ತುಂಬುತ್ತಿದ್ದಾರೆ, ದಿನಸಿ ಮತ್ತಿತರ ಪದಾರ್ಥಗಳನ್ನು ನೀಡಿದ್ದಾರೆ. ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಾಸ್ಕ್ ಮತ್ತು ಆಹಾರವನ್ನು ಹಂಚುತ್ತಾ ಜಾಗೃತಿ ಮೂಡಿಸುವುದರಲ್ಲಿ ನಿರತರಾಗಿದ್ದರು.

ಮುಖ್ಯವಾಗಿ ಆಕರ್ಷಿಸುವ ಹಾಗೆ ಅಪರೂಪ ಎನಿಸುವ ಶ್ರೀಯುತರ ಗುಣವೆಂದರೆ ತಾವೆಷ್ಟೇ ಸೇವೆ ಮಾಡಿದರು ,ಶ್ರಮ ಪಟ್ಟಿದ್ದರು ಸಹ ನಾನೇನು ಮಾಡಿಲ್ಲ ಎಲ್ಲವೂ ನಮ್ಮ ತಂಡದ ಸಹಕಾರದಿಂದ ಆದುದ್ದು ಎಂದು ಹೇಳುವ ಸರಳ ಸಜ್ಜನ ವ್ಯಕ್ತಿಯಾಗಿದ್ದಾರೆ. 
ಅವರ ಕಾರ್ಯಗಳ ಮೆಚ್ಚಿ ಯಾವುದಾದರೂ ಸಂಘ ಸಂಸ್ಥೆಗಳು ಅಭಿನಂದಿಸಿ, ಪ್ರಶಸ್ತಿ ಪ್ರದಾನ ಮಾಡಲು ಮುಂದಾದರೆ, ಒಮ್ಮೆಲೇ ನಿರಾಕರಿಸಿ ಏನೇ ಪ್ರಶಸ್ತಿ ಇದ್ದರು ಅದನ್ನು ನಮ್ಮ ವಿದ್ಯಾರ್ಥಿಗಳಿಗೆ ಕೊಡಿ,ನಿಜವಾದ ಅರ್ಹರು ಎಂದು ಹೇಳುವ ಶ್ರೇಷ್ಠ ವ್ಯಕ್ತಿತ್ವ ಇವರದ್ದು. ಇಂದು ತೃಣದಷ್ಟು ಮಾಡಿ ಪರ್ವತದಷ್ಟು ಎಂದು ಬಿಂಬಿಸಿಕೊಂಡು ಪ್ರಚಾರಕ್ಕೆ ಮುಗಿಬೀಳುವ, ಪ್ರಶಸ್ತಿಗೆ ದುಂಬಾಲು ಬೀಳುವ  ಜನರ ಪೈಕಿ ಇಂಥಹ ನಿಸ್ವಾರ್ಥ ನಿಷ್ಕಲ್ಮಶ ಸಮಾಜ ಸೇವಕರಾದ ಗುರುಗಳಿರುವುದು ನಮ್ಮ ಹೆಮ್ಮೆ.
ಧನ್ಯೋಸ್ಮಿ.. 💐🙏🏻
 ✍️ಪೂಜಾ ಎಂ ಪಿ.
ಮೇಳಾಪುರ ಶ್ರೀರಂಗಪಟ್ಟಣ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮನಮಿಡಿಯುವ ದೀಪ ಧಾರಿಣಿ (ಪುಸ್ತಕ ಅವಲೋಕನ) - ಶ್ರೀ ದಯಾನಂದ ಪಾಟೀಲ

ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆಯ ಯುವ ಸಾಹಿತಿ
ಸಹನ,ಅರ್,  ಅದಡದವರು ಬರೆದಿರುವ 

ದೀಪ ಧಾರಿಣಿ ಕವನ ಸಂಕಲನ ಅರ್ಥಪೂರ್ಣ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಮೋಸ ವಂಚನೆ ನಂಬಿಕೆ ದ್ರೋಹ ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಕವನಸಂಕಲನದಲ್ಲಿ ಮೂಡಿ ಬಂದಿದೆ, ಸಹನಾ ಅವರ ಸಾಹಿತ್ಯ ಬಗ್ಗೆ ಕಳಕಳಿ ಮೆಚ್ಚುವಂತದ್ದು,
ಓಡುತ್ತಾ,-ಓಡುತ್ತಾ ಸಂಬಂಧಗಳ
ಸರಪಳಿಯ ಕಡಿದು ಹಾಕುವ ಕತ್ರಿ ಯಾದೆ,
ಹಣವಿಲ್ಲದೆ ಸುಖವಾಗಿದ್ದ ನೀನು
ಹಣಗಳಿಸಿ ಅನಾಥನಾದೆ,
ಮಾನವ ಅನಾದಿಕಾಲದಿಂದ ತನ್ನ ಸಂಸಾರವನ್ನು ಉತ್ತಮ ರೀತಿಯಿಂದಶಾಂತಿ ಹಾಗೂ ನೆಮ್ಮದಿಯ ಜೀವನ ಮಾಡಿಕೊಂಡು ಇತರರಿಗೆ ಮಾದರಿಯಾಗಿ ಸ್ನೇಹಜೀವಿ ಮಾನವೀಯತೆ  ಗುಣಗಳನ್ನು ಅಳವಡಿಸಿಕೊಂಡು ಮುಂದಿನ ಜನಾಂಗಕ್ಕೆ ಮಾದರಿ ಆಗಿದ್ದರು, ಅಂದಿನ ಜನ,ಆದರೆ ದಿನಗಳು ಕಳೆದಂತೆ ಹಣ ಮತ್ತು ಅಧಿಕಾರಕ್ಕಾಗಿ ಹಗಲು-ಇರುಳು ಎನ್ನದೆ ಸಂಬಂಧ ಬೇಡವಾಗಿ ನಾನು ನನ್ನ ಕುಟುಂಬ ಸ್ವಾರ್ಥ ಮನೋಭಾವನೆ ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ, ಬಡತನ ಇದ್ದರೂ ಪರವಾಗಿಲ್ಲ ನೆಮ್ಮದಿ ಮುಖ್ಯ , ಸಂತೋಷ ಅನುಭವಿಸಲು ವೇಳೆ ಇಲ್ಲವಾಗಿದೆ, ಹಣ ಇದ್ದರು ಕೂಡ ಕುಟುಂಬದ ಜೊತೆ ಇರುವುದು ಅಪರೂಪ ಇಂದಿನ ದಿನಗಳಲ್ಲಿ, ಕವಿತ್ರಿ ಕವನದಲ್ಲಿ ವಿವರಿಸಿದ್ದಾರೆ,
ಮುಖಾಮುಖಿ ಭೇಟಿ ಯು,
ಅಪರೂಪದ ಚಿಲುಮೆ ಯಾಗಿದೆ,
ಮೊಬೈಲ್ನಲ್ಲಿ ಎಲ್ಲಾ
ಮುಗಿದು ನಾಂದಿಯಾಗಿದೆ,
ಕಳೆದ ಅಂದಿನ ದಿನಗಳು ಮರೆಯಲು ಸಾಧ್ಯವಿಲ್ಲ ಒಬ್ಬರ ಮನೆಗೆ ಮತ್ತೊಬ್ಬರು ಪರಂಪರೆ ನಮ್ಮದು ನೆರೆಹೊರೆಯ ಸಂಬಂಧ ಮರೆಯಲಾಗದ  ನೆನಪು ಹಬ್ಬ ಇರಲಿ ಸೂತಕ ಇರಲಿ ಹುಟ್ಟುಹಬ್ಬ ಇರಲಿ ಹೀಗೆ ಎಲ್ಲರೂ ಕೂಡಿಕೊಂಡು ಭಾಗವಹಿಸುತ್ತಿದ್ದರು ಜಾತಿ ಭೇದ ಇರಲಿಲ್ಲ ಎಲ್ಲರೂ ನಮ್ಮವರು ಎಂಬ ಭಾವನೆ, ಈಗ ಸತ್ತರೆ ಹುಟ್ಟುಹಬ್ಬದ ಯಾವುದೇ ಕಾರ್ಯಕ್ರಮ ನಡೆಯಲಿಮೊಬೈಲ್ನಲ್ಲಿ ಎಲ್ಲಾ ಮಾತುಕತೆ ನಡೆದಿದೆ ಒಂದು ರೀತಿಯಲ್ಲಿ ಹೇಳಬೇಕಾದರೆ ಮೊಬೈಲ್ ಸಂಬಂಧವನ್ನು ಹಳ್ಳ ಹಿಡಿಸಿದೆ ಅಂದರೆ ತಪ್ಪಾಗಲಾರದು, ಇನ್ನಾದರೂ ಸಂಬಂಧಕ್ಕೆ ಬೆಲೆ ನೀಡಿ ಪ್ರೀತಿ-ವಿಶ್ವಾಸಕ್ಕೆ ಭದ್ರ ಬುನಾದಿ ಹಾಕಿ, ಕವಿತ್ರಿ ನೈಜಘಟನೆಗಳನ್ನು ಕವನ ರೂಪದಲ್ಲಿ ಅಳವಡಿಸಿಕೊಂಡಿರುವುದು ನಿಜಕ್ಕೂ ಅಭಿನಂದನೀಯ,
ಮುಳುಗುತ್ತಿದೆ ಮುಳುಗುತ್ತಿದೆ,
ಹಣದ ದಾಹದಿಂದ ಮನುಷ್ಯತ್ವ ಮುಳುಗುತ್ತಿದೆ,
ಹಣ ಇಂದು ಪ್ರತಿಯೊಬ್ಬರನ್ನು ಹುಚ್ಚು ಹಿಡಿಸಿದೆ ಹಣಕ್ಕಾಗಿ ಕೊಲೆ ವರದಕ್ಷಿಣೆ ಕಿರುಕುಳ ಆಸ್ತಿಗಾಗಿ ಅಣ್ಣನ ಕೊಲೆ ತಂದೆ ಮಗನ ಕೊಲೆ ಮಗ ತಂದೆಯ  ಕೊಲೆ ಮಲತಾಯಿಯ ಕಂದಮ್ಮನ ಕೊಲೆ ಹೀಗೆ ಹತ್ತು ಹಲವು ಘಟನೆಗಳು ಪ್ರತಿದಿನ ನಡೆಯುತ್ತಿರುವುದು ವಿಷಾದನೀಯ ಮಾನವ ಇಂದು ರಾಕ್ಷಸನಾಗಿ ಮಾನವೀಯತೆ ಪ್ರೀತಿ ವಿಶ್ವಾಸಕ್ಕೆ ಕೊಳ್ಳೆ ಇಟ್ಟಿದ್ದಾನೆ ಯಾರನ್ನು? ನಂಬಬೇಕು ಯಾರನ್ನು ನಂಬಬಾರದು ಹೀಗೆ ತ್ರಿಶಂಕು ಸ್ಥಿತಿಯಲ್ಲಿ ನಿಂತಿದ್ದಾನೆ, ಎಲ್ಲರೂ ಹಣಕ್ಕೆ ದಾಸರಾಗಿದ್ದಾರೆ ಮಾಡಬಾರದ ಕೆಲಸ ಮಾಡುತ್ತಿದ್ದಾರೆ ಎಲ್ಲಿದೆ? ಪ್ರೀತಿ ದಯೆ ಕರುಣೆ ಮಮತೆ ಮನುಷ್ಯ ಮನುಷ್ಯನಾಗಿ ಉಳಿದಿಲ್ಲ ಇದಕ್ಕೆ ಕಾರಣರು ಯಾರು? ಪ್ರಪಂಚಕ್ಕೆ ಶಾಂತಿ ಬಾಂಧವ್ಯಸಾರಿದ ಸ್ವಾಮಿ ವಿವೇಕಾನಂದರು ಅವರು ನಡೆದಾಡುವ ಪುಣ್ಯಭೂಮಿಯಲ್ಲಿಚುನಾವಣೆಯಲ್ಲಿ ಮತದಾನ ಮಾಡಲಿಕ್ಕೆ ಹಣ ಸಂದಾಯ ಮಾಡಬೇಕು ಅಂದಾಗ ಮಾತ್ರ ಮತದಾನಕ್ಕೆ ಸೈ ಪ್ರತಿಯೊಂದಕ್ಕೂ ಹಣ ಹಣ ಹಣ ಇದ್ದರೆ ಅವನೇ ಅವನೇ ಧಣಿ ಅವನೇ ಗಣಿ ಇಂಥ ಘಟನೆಗಳು ಇಂದಿನ ದಿನಮಾನಗಳಲ್ಲಿ ಕಾಣಲು ಸಾಧ್ಯ ನಿಜಕ್ಕೂ ವಿಷಾದನೀಯ ಮೊದಲು ಗುಣವಂತ ನಿಗೆಕಿಮ್ಮತ್ತು ಇತ್ತು ಆದರೆ ಈಗ ಹಣವಂತ ನಿಗೆ ಇದು ನಿಜಕ್ಕೂ ವಿಷಾದನೀಯ,
ಮನೆಯ ಮೇಲೊಂದು ಮನೆಯ,
ನಿರ್ಮಿಸಿ ಯಾರಿಗೆ ಬಿಟ್ಟು, ಮಸಣ ವ
ಸೇರುವೆ,
ಬಡವರ ದುರ್ಬಲರ ಕಣ್ಣೀರನ್ನು ಬಂಡವಾಳ ಮಾಡಿಕೊಂಡು ಅಚ್ಚುಕಟ್ಟಾದ ಮನೆಯನ್ನು ಕಟ್ಟಿ ನೆಮ್ಮದಿಯ ನಾಲ್ಕು ದಿನ ಮನೆಯಲ್ಲಿಇರಲು ಅವಕಾಶ ನೀಡುವುದಿಲ್ಲ ವಿಧಿ ತನ್ನ ಜೀವನವನ್ನು ಮನೆ ಕಟ್ಟಡದಲ್ಲಿ ಕಳೆದುಹೋಗಿ ಜೀವನದ ಅಂತ್ಯ ಬಂದಾಗ ನಿರಾಶಾಭಾವನೆ ಬರುತ್ತೆ ನನ್ನ ಜೀವನ ಇಷ್ಟು ಬೇಗ ಅಂತ್ಯ? ತನಗೋಸ್ಕರ ಮಜಲುಗಳ ಮೇಲೆ ಮಜಲು ನಿರ್ಮಿಸಿ ಸುಖಂ ತೋರಿಸಲು ನಾನೇ ಇಲ್ಲ ನಾನು ನಾನು ದುಡಿದು ಆಸ್ತಿ ಮಾಡಿ ಹೆಂಡರು ಮಕ್ಕಳಿಗೆ ಮಕ್ಕಳಿಗೆ ಬಿಟ್ಟು ಹೋಗುವಾಗ ನಿರಾಸೆ ಅಷ್ಟಿಷ್ಟಲ್ಲ ನೆನೆದರೆ ಮೈ ಕಂಪನಆಗುತ್ತೆ  ಅದೇ ರೀತಿ ಎಚ್ಚರಿಕೆಯ ಗಂಟೆ ಅಂದರೆ ತಪ್ಪಾಗಲಾರದು,
ಕಾಣದಾಗಿದೆ ಗುಡಿ  ಕೈಗಾರಿಕೆ ಯು
ಧ್ವನಿ ಯತ್ತಿವೆ ಧೂಳೆಬ್ಬಿಸುವ ಕಾರ್ಖಾನೆಯು,
ತಲ್ಲಣಿಸುತ್ತಿದೆ ಕನ್ನಡ ಭಾಷಾ ನುಡಿಯು
ಟಸು ಪುಸು ಇಂಗ್ಲಿಷ್ ಕೇಕೆ ಹಾಕಿವೆ,
ಪುರಾತನ ಕಾಲದಿಂದ ಹಳ್ಳಿ ಪ್ರದೇಶ ಅಲ್ಲದೆ ನಗರ ಪ್ರದೇಶಗಳು ಕುಂಬಾರಿಕೆ ಬಡಗಿತನ ಕಮ್ಮಾರಿಕೆ ಬುಟ್ಟಿ ಹೆಣೆಯುವಕೆಲಸ ಹೀಗೆ ಹತ್ತು ಹಲವಾರು ಕೈಗಾರಿಕೆಗಳು ಜನರ ಮುಖ್ಯ ಉದ್ಯೋಗವಾಗಿತ್ತು ನಿರುದ್ಯೋಗ ಸಮಸ್ಯೆ ಕಣ್ಮರೆಯಾಗಿತ್ತು ದುಡಿಮೆಯೇ ದೇವರು ತಿಳಿದುಕೊಂಡ ಜನ ಸ್ವಾಭಿಮಾನಿಗಳು ಯಾರು ಯಾ ರ ಹಂಗು ಇಲ್ಲದೆ ಕಾಯಕದ ಮೇಲೆ ನಿಷ್ಠೆ ಭಕ್ತಿ ಆದರೆ ಇಂದು  ಗುಡಿ ಕೈಗಾರಿಕೆಗಳ ಬೇಡಿಕೆ ಕಡಿಮೆಯಾಗಿ ಇಂದು ಅದೇ ಜಾಗದಲ್ಲಿ ಯಂತ್ರಗಳ ಮೂಲಕ ವಸ್ತುಗಳ ತಯಾರಿಕೆ ಪ್ರಾರಂಭವಾಗಿದೆ, ಇದರಿಂದ ಪರಿಸರ ಮಾಲಿನ್ಯದಿಂದ ನೀರು ವಿಷ ಹರಿಯುತ್ತಿದೆ ಇದರಿಂದ ಬೆಳೆ ರೋಗ ಪೀಡಿತವಾಗಿ ಸರಿಯಾದ ಬೆಳೆ ಬಾರದೆ ರೈತ ಆರ್ಥಿಕ ಬಾಧೆಯಿಂದ  ನರಳುತ್ತಿದ್ದಾನೆ, ಸರ್ಕಾರದ ವಿನಾಶಕಾರಿ ನೀತಿಯಿಂದ ರೈತ ಬೀದಿಗೆ ಬಿದ್ದಿದ್ದಾನೆ ರಾಜಕೀಯ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿ ನಿಂತಿವೆ ನಾಡು  ಉಳಿಸಬೇಕಾದ ಸರ್ಕಾರ ಹಾಗೂ ವಿರೋಧ ಪಕ್ಷ ರೈತರ ಜನರ ಪಾಲಿಗೆ ಮರಣ ಶಾಸನ,
ಇಂಗ್ಲಿಷ್ ಭಾಷೆ ಹಳ್ಳಿಯಿಂದ ನಗರ ಪ್ರದೇಶಗಳಲ್ಲಿ ಕೂಡ ತನ್ನ ಪ್ರಭುತ್ವ ಸಾಧಿಸುತ್ತಿದೆ ಸರ್ಕಾರಿ ಶಾಲೆಗಳಿಗೆ ಕಳುಹಿಸುವ ಮನೋಭಾವನೆ ಇಲ್ಲದಿರುವುದು ವಿಷಾದ ಲಕ್ಷಾಂತರ ರೂಪಾಯಿ ಖರ್ಚುಮಾಡಿ  ಶಾಲೆಗಳಿಗೆ ಕಳಿಸಲಾಗುತ್ತಿದೆ ಇಂಗ್ಲಿಷ್ ವ್ಯಾಮೋಹ ಇಂದಿನ ಪಾಲಕರಲ್ಲಿ ಹೆಚ್ಚಾಗುತ್ತಿರುವುದು ವಿಷಾದನೀಯ ಇದರಿಂದ ಕನ್ನಡ ಭಾಷೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ ಕನ್ನಡಕ್ಕಿಂತ ಇಂಗ್ಲಿಷ್ ಹೊಸದು ಕನ್ನಡ ಭಾಷೆ ಪುರಾತನ ಕಾಲದಿಂದ ತನ್ನದೇ ಆದ ಪ್ರಾಬಲ್ಯ ಹೊಂದಿದ ಭಾಷೆ ಕನ್ನಡದಲ್ಲಿ ಎಂಟು ಜನ ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡನಾಡಲ್ಲಿ ಸ್ವಾರ್ಥ ರಾಜಕೀಯ ನಿರಭಿಮಾನಿ ಕನ್ನಡಿಗರಿಂದ ಇಂಥ ಸಂಕಟ ಬಂದಿರುವುದು ನಿಜಕ್ಕೂ ಖಂಡನೀಯ ಇನ್ನಾದರೂ ಕನ್ನಡಿಗರು ಕನ್ನಡ ಭಾಷೆ ನೆಲ-ಜಲ ಬಗ್ಗೆ ವಿಚಾರ ಮಾಡಲಿ ಕನ್ನಡ ಕಟ್ಟುವ ವೀರ ರಾಗಲಿ ಇದು ಸರಕಾರ ಮಾಡುವ ಕೆಲಸವಲ್ಲ ಪ್ರತಿಯೊಬ್ಬ ಕನ್ನಡಿಗರಿಂದ ಕೆಲಸ ಆಗಬೇಕಾಗಿದೆ,
ಯುವ ಸಾಹಿತಿ ಕುಮಾರಿ ಸಹನಾ ಆರ್, ಎಂ ಅವರ ಸಾಹಿತ್ಯ ಸೇವೆ ನಿರಂತರವಾಗಿ ಸಾಗಲಿ, ಅವರಿಗೆ ಶುಭವಾಗಲಿ,
- ದಯಾನಂದ ಪಾಟೀಲ ಅಧ್ಯಕ್ಷರು ಭಾರತೀಯ ಕನ್ನಡ ಸಾಹಿತ್ಯ ಬಳಗ  ಮಹಾರಾಷ್ಟ್ರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗುರುವಾರ, ಜನವರಿ 27, 2022

ಫಲಿತಾಂಶ ಪ್ರಕಟಣೆ ೧೫ ನೇ ಪಾಕ್ಷಿಕ ಅವಧಿ - ವಿಚಾರ ಮಂಟಪ ಸಾಹಿತ್ಯ ಪತ್ರಿಕೆ

ಸ್ಪರ್ಧೆಯ ವಿವರ :  "ಪ್ರತಿ ಹದಿನೈದು ದಿನಕ್ಕೊಮ್ಮೆ  ವಿಚಾರ ಮಂಟಪ ಸಾಹಿತ್ಯ ಪತ್ರಿಕೆಯ ಬ್ಲಾಗ್ ನಲ್ಲಿ ಅತಿ ಹೆಚ್ಚು ವಿಕ್ಷಕರನ್ನು (views) ಪಡೆದ ಒಬ್ಬರನ್ನು ವಾರದ ಉತ್ತಮ ಬರಹಗಾರ/ಬರಹಗಾರ್ತಿ ಎಂದು ಗುರುತಿಸಿ  ಗೌರವಿಸಿ ಪ್ರಮಾಣ ಪತ್ರ ನೀಡಲಾಗುವುದು" ಎಂದು ಈ ಹಿಂದೆ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಇದಕ್ಕೆ ಸಂಭಂಧಿಸಿದಂತೆ ಅತಿ ಹೆಚ್ಚು ವೀಕ್ಷಕರನ್ನು‌ ಪಡೆದಿರುವ ಬರಹಗಾರರನ್ನು ಈ ದಿನದ ಗೌರವಕ್ಕೆ ಆಯ್ಕೆ ಮಾಡಲಾಗಿದೆ...
 
 
ಶ್ರೀ ಭರತ್ ಕೆ ಆರ್. 

 ಇವರ  'ಮುದುಡಿದ ನೀಲೋತ್ಪಲ' ಎಂಬ ಕವಿತೆ 

ಹಾಗೂ
 ಡಿ. ಶಬ್ರಿನಾ ಮಹಮದ್ ಆಲಿ 
ಇವರ ' ಬದುಕೆಂದರೆ ಭಯವಲ್ಲ ಬರವಸೆ' ಎಂಬ ಕವಿತೆಗಳು 

  ದಿನಾಂಕ 01.01.2022 ರಿಂದ 15.01.2022 ರ ನಡುವಿನ 15 ನೇ ಪಾಕ್ಷಿಕ ಅವಧಿಯಲ್ಲಿ  ವಿಚಾರ ಮಂಟಪ ಸಾಹಿತ್ಯ ಜಾಲ ಪತ್ರಿಕೆಯ ಜಾಲತಾಣದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದಿದ್ದು ಇವರನ್ನು ಈ ವಾರದ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಉತ್ತಮ ಬರಹಗಾರರು ಎಂದು ಗುರುತಿಸಿ ಗೌರವಿಸಿ ಅಭಿನಂದನಾ ಪತ್ರವನ್ನು ನೀಡಲಾಗಿದೆ. 

 
 
ಇವರಿಗೆ ವಿಚಾರ ಮಂಟಪ ಸಾಹಿತ್ಯ ಬಳಗದ ಸಮಸ್ತ ಓದುಗರ, ಬರಹಗಾರರ ಪರವಾಗಿ ತುಂಬು ಹೃದಯದ ಅಭಿನಂದನೆಗಳು 💐💐💐💐💐


(ನಿಮ್ಮ ಬರಹಗಳ  ಪ್ರಕಟಣೆಗಾಗಿ ಸಂಪರ್ಕಿಸಿ :
9448713659 ಸಂಪಾದಕರು ವಿಚಾರ ಮಂಟಪ ಸಾಹಿತ್ಯ ಪತ್ರಿಕೆ, (ವಾಟ್ಸಪ್ ಮಾತ್ರ)).

ಮುಡಿಸುವೆ ಹೂ ಮಲ್ಲಿಗೆ (ಕವಿತೆ) - ಶ್ರೀಮತಿ ಭಾಗ್ಯ ಗಿರೀಶ್

ಮೂಡಿಸುವೆ ಹೂ ಮಲ್ಲಿಗೆ
ನಲ್ಲೆ ನಾ ನಿನ್ನ ಮುಡಿಗೆ
ಮನ ಸೂರೆಗೊಂಡಿದೆ ಆ ನಿನ್ನ ಹೂ ನಗೆ.

ದೇಹಕ್ಕೆ ಮುಪ್ಪಾದರೂ
ಪ್ರೇಮಕೆ ಮುಪ್ಪು ಬಾರದೂ
ಸಂಗಾತಿ ಇದು ನಿತ್ಯ ಸತ್ಯ ತಿಳಿ ಎಂದೂ.

ಅರೆಯದಲ್ಲಿ ನನ್ನ ವರಿಸಿ
ನೀನಾದೆ ನನ್ನಾರಸಿ
ಪ್ರೀತಿಯ ಬೆಳಕನು ಬಾಳಲಿ ಪಸರಿಸಿ.

ಕಷ್ಟ ನೂರು ಬಂದರೂ
ಜೊತೆಯಾಗಿ ನಿಂತೆ ನೀನೂ
ಸಂಸಾರದ ಸಾರ ಅರಿತಾ ರಾಣಿ ಜೇನು.

ಮಡದಿಯಾಗಿ,ಮಾತೆಯಾಗಿ
ನನ್ನ ಪ್ರಿಯ ಸ್ನೇಹಿತೆಯಾಗಿ
ನೀನಿಂತೆ ನನ್ನಯ ಬಾಳಿಗೆ ಆಸರೆಯಾಗಿ.

ನಿನಗಾಗಿ ನೀ ಎಂದೂ
ನನ್ನ ಕೇಳಲಿಲ್ಲ ಏನನೂ
ಮೂರು ಮೊಳದ ಮಲ್ಲಿಗೆ ಒರತು ಏನು ನೀನೂ.

ಮುಪ್ಪಿನಲ್ಲಿ ಮಕ್ಕಳು ಕೈ ಬಿಟ್ಟಾಗ
ನನ್ನ ಕೈ  ಹಿಡಿದು ನೀ ಮಂದಹಾಸ ಬೀರಿದಾಗ
ನವ ಚೈತನ್ಯ ತುಂಬಿದೆ ನನ್ನೆದೆಯ ಗೂಡಿನಾಗ.

ನಿನಗೆ ನಾನು,ನನಗೆ ನೀನು
ಇಬ್ಬರೂ ಸೇರಲು ಹಾಲು ಜೇನು
ಎನ್ನುತಾ ನಿನ್ನ ಮುಡಿಗೆ ಮಲ್ಲಿಗೆ ಮೂಡಿಸುವೆ ನಾನು.

✍️ಶ್ರೀಮತಿ ಭಾಗ್ಯ ಗಿರೀಶ್
       ಹೊಸದುರ್ಗ
ಮೊ :-9611092394


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಣ್ಣಲಿಳಿದ ಬೆಳಕು (ಕವಿತೆ) - ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ

ಬೆಣ್ಣೆ ಚಂದ್ರ ಕಣ್ಣಲಿಳಿದ
ಎಣ್ಣೆ ಲಾಂದ್ರ ಏತಕೆ
ಸಣ್ಣ ಸುಂದ್ರ ಬಣ್ಣಬಳಿದ
ನುಣ್ಣ ಮನದ ಮಂಚಕೆ.....

ತಂಬೆಲರ ನಡುಕ ಹೆಚ್ಚಿ
ಹೊಂಬಣ್ಣದ ಮೈಯಿಗೆ
ಅಂಬು ಮೇಣ್ ಚಳಿಯ ಹಚ್ಚಿ
ಕಂಬಳಿಯೆಳೆದೆ ಮೆಲ್ಲಗೆ....

ಸಾಗರವು ಉಕ್ಕಿ ಕರೆದು
ಮಾಗಿಚಳಿಯ ವೇಗಕೆ
ಸಾಗಿಬಂದ ಅಲೆಯು ಕೊರೆದು
ಬಾಗಿಬಳುಕೋ ಲಾಸ್ಯಕೆ ....

ಕಾಯುತಿರಲು ಸನಿಹ ಬರುವ
ಬೇಯದಾಸೆ ತುಡಿತಕೆ
ನೋಯಿಸದೆ ಕೇಳುತಿರುವ
ಮಾಯದಾಸೆ ಮಿಡಿತಕೆ....

ಕಣ್ಣ ಹೊಳಪು ಕರೆದು ತಂತು
ಸಣ್ಣ ತಪ್ಪು ಮಾಡಲು
ತಣ್ಣ ಮಳಲ ತೀರ ಕೂತು
ಬಣ್ಣ ಕನಸು ಕಾಣಲು ....
- ಸಿ.ಎನ್.ಭಾಗ್ಯಲಕ್ಷ್ಮಿ ನಾರಾಯಣ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಪ್ರೇಮದನುರಾಗ (ಗಜಲ್) - ಹಾಲೇಶ್ ಕೆ. ಜಿ.

ನಿನ್ನ ಒಲವ ಅನುರಾಗದ ಅಲೆ ಮನವ ತಾಕಿದೆ ಗೆಳತಿ 
 ಪ್ರೇಮದೂಟೆ ಚಿಮ್ಮಿ ಸುಗಂಧದ  ನವಿರು ರಾಚಿದೆ ಗೆಳತಿ 

 ನಿನ್ನ ಕರೆಯ ರಿಂಗಣಕೆ ತವಕಿಸುತಿದೆ ಮನ 
ದ್ವನಿಯ ತಾಕಿಸಿ ಧಮನಿಯಲಿ ಚೈತನ್ಯ ನೀಡು ಗೆಳತಿ 

 ಸ್ವಪ್ನಗಳೆಲ್ಲ ಆಸೆಗಳ ಮೂಡಿಸುತಿವೆ ಮನದ  ಕಡಲಿನಲ್ಲಿ ಪ್ರೇಮದ ದೋಣಿ ಸಾಗಿಸು ಗೆಳತಿ 

 ಮನದ ಬನದಲಿ ಮೇಘ ಮಾಲೆಯ ಸುರಿಸು 
ಹಸಿರಾಗಿ ಒಲವ ಉಸಿರು ಪಸರಿಸಲಿ ಗೆಳತಿ 

 ನಿನ್ನ ಅನುರಾಗಕೆ ಕಾದಿಹನು ಹಾಲರಾಜಾ 
 ಬಂದು ಮನವ ತಬ್ಬಿ ಸಿಂಗರಿಸು ಗೆಳತಿ
✍️ ಹಾಲೇಶ್ ಕೆ ಜಿ 
        ಅಧ್ಯಕ್ಷರು,
  ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ, ಜಗಳೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೊಡಗಿನ ಗೌರಮ್ಮ (ಲೇಖನ) - ಶ್ರೀಮತಿ ಗಿರಿಜಾ ಮಾಲಿ ಪಾಟೀಲ

ಗೌರವಸ್ತ ಗೌರವಸ್ಮಿತ ಗೌರವದಿ ಗೌರಿ| ಮಿಂಚಿದಳೊ ಬಾನಂಚಿಗೆ ಕಾವೇರಿಯ ಕುವರಿ–ದಾ.ರಾ.ಬೇಂದ್ರ
ಜಲದೇವತೆ ವನದೇವತೆ ಒಂದೆಡೆಯಲಿ ಸೇರಿ
ಬಿನದಿಸುತಿಹ ಹೊಳೆಮಡುವಿಗೆ ನೀನೀಸಲು ಹಾರಿ
ತಾಯೊಡಲನು ಕೂಸಾಟಕೆ ತಾಯ್ಮಡಲಿಗೆ ಬೀರಿ
ತೀರಲು, ಜಡವಾಗಳೆ ಕಾವೇರಿಯೆ ತಂಪೇರಿ?
ನೆನೆದರೆಯೇ ನಾ ನಡುಗುವೆ ಇದು ಆದುದೆಂತೋ?
ಎಲ್ಲಿಂದೀ ಎಳೆ ಜೀವಕೆ ಸಾವೆಂಬುದು ಬಂತೋ?
ಈ ಸುಂದರ ಸಾಲುಗಳನ್ನು ಖಂಡಿತಾ ನೀವೆಲ್ಲಾ ಕೇಳಿಯೇ ಇರುತ್ತೀರಿ. ಈ ಮನ ಮಿಡಿಯುವ ಸಾಲುಗಳನ್ನು ಬರೆದವರು ನಮ್ಮೆಲ್ಲರ ನೆಚ್ಚಿನ ಶಬ್ಧ ಗಾರುಡಿಗ ದಾ.ರಾ ಬೇಂದ್ರೆಯವರು. ಅವರಿಂದ ಮನಮಿಡಿಯುವ ಈ ಸುಂದರ ಸಾಲುಗಳು ಹೊರಹೊಮ್ಮಿದ್ದು ಚಿಕ್ಕ ವಯಸ್ಸಿಗೆ ಕೊಡಗಿನ ಗೌರಮ್ಮನವರು ದುರಂತ ಸಾವನಪ್ಪಿದ್ದರಿಂದ. ನಿಜ ಗೌರಮ್ಮನವರ ನೆಚ್ಚಿನ ಹವ್ಯಾಸಗಳಲ್ಲಿ ಟೆನಿಸ್ ಆಡುವುದು ಹಾಗೂ ಈಜುವುದಾಗಿತ್ತು. ಇವರು ತಮ್ಮ ೨೭ ನೇ ವಯಸ್ಸಿನಲ್ಲಿ ಮನೆಯ ಹತ್ತಿರದ ಹೊಳೆಯ ಬಳಿ ಈಜಲು ಹೋದಾಗ ಸುಳಿಗೆ ಸಿಕ್ಕು ಅಕಾಲಿಕ ಮರಣವನ್ನಪ್ಪಿದರು. ಆಗ ಈ ಕವಿತೆಯನ್ನು ರಚಿಸಿದ ದಾ.ರಾ.ಬೇಂದ್ರೆಯವರು ‘ಕಂಬನಿ’ ಸಂಕಲನದಲ್ಲಿ ಇದನ್ನು ದಾಖಲಿಸಿದ್ದಾರೆ.
ಕನ್ನ್ನಡದ ಪ್ರಥಮ ಕತೆಗಾರ್ತಿಯಾದ ಇವರು ಜನಿಸಿದ್ದು ೧೯೧೨ ರಲ್ಲಿ ಮಡಿಕೇರಿಯಲ್ಲಿ. ಗೌರಮ್ಮನವರು ವಕೀಲ ಎನ್.ಎಸ್.ರಾಮಯ್ಯ ಹಾಗೂ ಶ್ರೀಮತಿ ನಂಜಕ್ಕನವರ ಕೊನೆಯ ಮಗಳು. ಬಾಲ್ಯದಲ್ಲೆ ತಾಯಿಯನ್ನು ಕಳೆದುಕೊಂಡು ತಂದೆಯ ಆಶ್ರಯದಲ್ಲಿ ಬೆಳೆದರು. ೧೯೨೮ ರಲ್ಲಿ ಬಿ.ಟಿ. ಗೋಪಾಲಕೃಷ್ಣ ಜೊತೆ ಇವರ ವಿವಾಹವಾಗಿ ಶ್ರೀಮತಿ ಬಿ.ಟಿ.ಕೃಷ್ಣ ಎಂದು ಬದಲಾದರು. ಉತ್ತಮ ವಾಗ್ಮಿಗಳಾದ ಕೊಡಗಿನ ಗೌರಮ್ಮನವರು ರಾಜಕೀಯ ಹಿನ್ನಲೆಯ ಕುಟುಂಬದವರಾಗಿದ್ದರಿAದ ಆಗ ನ್ಯಾಷನಲ್ ಕಾಂಗ್ರೇಸ್ ಪರ ಕೆಲಸ ಮಾಡಿದ್ದರು. ಸ್ವಾತಂತ್ರ್ಯ ಆಂದೋಲನದ ಸಂದರ್ಭದಲ್ಲಿ ಮಹಾತ್ಮಾ ಗಾಂಧೀಜಿಯವರು ಕೊಡಗಿನಲ್ಲಿ ಪ್ರವಾಸ ಕೈಗೊಂಡಾಗ ಅವರನ್ನು ತಮ್ಮ ಮನೆಗೆ ಬರಮಾಡಿಕೊಂಡ ಹರಿಜನೋದ್ದಾರಕ್ಕಾಗಿ ತಮ್ಮ ಆಭರಣಗಳನ್ನೆಲ್ಲ ದಾನ ನೀಡಿದರು. ಆಗ ಗೌರಮ್ಮನವರಿಗೆ ಕೇವಲ ೨೧ ವರ್ಷ ವಯಸ್ಸು. ಅತ್ಯಂತ ಚಿಕ್ಕ ವಯಸ್ಸಿಗೆ ಇವರಲ್ಲಿ ಉತ್ತಮ ವ್ಯಕ್ತಿತ್ವ ರೂಪಗೊಂಡಿತ್ತು. ಇದರೊಂದಿಗೆ ಅನೇಕ ಸಾಹಿತ್ಯ ವ್ಯಕ್ತಿಗಳ ಒಡನಾಟವೂ ಇವರಿಗಿತ್ತು. ಹಿಂದಿ, ಇಂಗ್ಲೀಷ್, ಕನ್ನಡದಲ್ಲಿ ಕೃತಿ ರಚಿಸುತ್ತಿದ್ದ ಪದ್ಮಾವತಿ ರಸ್ತೋಗಿ ಇವರ ಆತ್ಮೀಯರಾಗಿದ್ದರು. ಆರ್ ಕಲ್ಯಾಣಮ್ಮನವ ಒಡನಾಡಿಯಾದ ಇವರು ಬೇಂದ್ರೆ, ಮಾಸ್ತಿ, ರಾಜರತ್ನಂ, ದ.ಬಾ.ಕುಲಕರ್ಣಿ ಮದಲಾದವರೊಂದಿಗೆ ಸಾಹಿತ್ಯದ ಕುರಿತು ಸಂವಾದ ನಡೆಸುತ್ತಿದ್ದರು. ಇವರೆಲ್ಲ ಇವರ ಮನೆಗೆ ಬಂದು ಹೋಗುತ್ತಿದ್ದ ಆತ್ಮೀಯರೂ ಆಗಿದ್ದರು. ಯಕ್ಷಗಾನ ತಾಳೆಮದ್ದಳೆಯ ಜೊತೆಗೆ ಕುಮಾರವ್ಯಾಸ ಮತ್ತು ಉಮರ್ ಖಯಾಂ ಕಾವ್ಯದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದರು. ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಂಡ ಇವರು ಜನಪದ ಗೀತೆಗಳನ್ನು ಸಂಗ್ರಹಿಸುತ್ತಿದ್ದರು. 
ಮದುವೆಯ ನಂತರ ಇವರು ಮಿಸೆಸ್ ಬಿ.ಟಿ.ಜಿ.ಕೃಷ್ಣ ಎನ್ನುವ ಹೆಸರಿನಲ್ಲಿ ಕತೆಗಳನ್ನು ಬರೆದಿದ್ದಾರೆ. ೧೯೨೧ ರಿಂದ ೧೯೩೯ ರವರೆಗೆ ಇವರು ರಚಿಸಿದ ಸಣ್ಣ ಕತೆಗಳು ಸ್ತ್ರೀ ಸಂವೇದನೆಗಳ ಪ್ರತಿಬಿಂಬದಂತೆ ಮೂಡಿಬಂದಿವೆ ಇವರ ಪ್ರತಿಯೊಂದು ಕತೆಯೂ ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಉದಾಹರಣೆಗೆ “ವಾಣಿಯ ಸಮಸ್ಯೆ”ಯಲ್ಲಿ ವಿದವೆಯೊಬ್ಬಳು ಪುರುಷ ಸಮಾಜದಿಂದ ಅನುಭವಿಸುವ ಮುಜುಗರ ಸಂಕಟಗಳನ್ನು ತುಂಬಾ ಚನ್ನಾಗಿ ಹಿಡಿದಿಟ್ಟಿದ್ದಾರೆ. “ಅವಳ ಭಾಗ್ಯ” ಕಥೆಯಲ್ಲಿ ಗುಮಾಸ್ತರ ಮಗಳು ಪಾರೂಗೆ ಖರ್ಚಿಲ್ಲದ ಮದುವೆ ಕ್ಷಯರೋಗಿಯೊಂದಿಗೆ ಆಗುತ್ತದೆ. ಅವನ ರೋಗ ತಿಳಿಯದ ಇತರ ಹೆಂಗಸರಿಗೆ ಪಾರುವಿನದು ಬಾಗ್ಯ ಎನಿಸುತ್ತದೆ. “ಅಪರಾದಿ ಯಾರು?” ಇದರಲ್ಲಿ ಪುಟ್ಟ ಹುಡುಗಿ ಪಾರ್ವತಿ ತಾನು ಮನೆಗೆಲಸ ಮಾಡುತ್ತಿರುವ ಒಡೆಯನಿಂದಲೆ ಅತ್ಯಾಚಾರಕ್ಕೊಳಗಾಗಿ ಅವನಿಂದಲೇ ಹೊರದೂಡಲ್ಪಡುತ್ತಾಳೆ ತನ್ನವರು ತನ್ನ ಧರ್ಮ ತನಗೆ ಬಹಿಷ್ಕಾರ ಹಾಕಿದಾಗ ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ ಆಗ ತನನ್ನು ರಕ್ಷಿಸಿ ಬಾಳುಕೊಡಲು ಮುಂದಾದ ಇಸ್ಲಾಂ ಧರ್ಮವನ್ನು ಆಕೆ ಸ್ವೀಕರಿಸುತ್ತಾಳೆ. “ಒಂದು ಪುಟ್ಟ ಚಿತ್ರ” ಇದರಲ್ಲಿ ಬಾಲ ವಿದವೆ ಶಾಂತ ಮೋಸಗಾರ ಅತ್ತಿಗೆಯ ಅಣ್ಣನ ಬಲೆಗೆ ಬಿದ್ದು ಅವನ ಕಾಮದಾಟದಲ್ಲಿ ಗರ್ಭಧರಿಸಿ ಅವನು ಕೈಬಿಟ್ಟಾಗ ಕೆರೆಯಲ್ಲಿ ಬಿದ್ದು ಆತ್ಮಹತ್ಯೆಗೆ ಪ್ರಯತ್ನಿಸುತ್ತಾಳೆ. ‘ಕೆಲವು ಕಾಗದಗಳು’ ಈ ಕಥೆಯಲ್ಲಿ ಕಾನ್ವೆಂಟಿನಲ್ಲಿ ಓದುತ್ತಿದ್ದ ಬಾಲಕಿ ಪ್ರಭಾ ಕುಮಾರಿ ತನ್ನ ಪ್ರಣಯಿಯ ಸಾವಿನಿಂದ ಹತಾಶಳಾಗಿ ಯಾರಿಗೂ ಹೇಳದೆ ಶಾಲೆ ಬಿಟ್ಟು ಹೋಗುತ್ತಾಳೆ.’ ಆಹುತಿ’ ಕತೆಯಲ್ಲಿ ಬಡ ತಂದೆಯ ಮಗಳು ಶಾಂತಿ ಮುದುಕನೊಬ್ಬನ ಮೂರನೇ ಹೆಂಡತಿಯಾಗಬೇಕಾದಾಗ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.  ಹಾಗೆ ಇವರ ಇನ್ನೊಂದು ಕತೆ ಪುನರ್ವಿವಾಹದಲ್ಲಿ ವಿಧುರನೊಬ್ಬನ ಮಡದಿ ಸತ್ತು ಆರು ತಿಂಗಳಾಗಿರುವುದಿಲ್ಲ ತಾನು ಮೋಹಿಸಿದ ಹುಡುಗಿಯನ್ನು ಮದುವೆಯಾಗಲು ಹತೊರೆಯುತ್ತಾನೆ. ಆ ಹುಡುಗಿಯೂ ವಿದವೆ ಅಂತ ತಿಳಿದಾಗ ಮದುವೆಯಾಗಲು ನಿರಾಕರಿಸುತ್ತಾನೆ. “ಒಂದು ಚಿತ್ರ” ಇದರಲ್ಲಿ ಪ್ರೇಮದ ಅಗತ್ಯತೆಯನ್ನು ರೋಹಿಣಿ ಪಾತ್ರದ ಮೂಲಕ ಚಿತ್ರಿಸಿದ್ದಾರೆ, ‘ಮರದ ಬೊಂಬೆ’ಯಲ್ಲಿ ಬೋಂರ್ಡಿಂಗ್ ಸ್ಕೂಲಿನ ಹುಡುಗಿ ಮೇಷ್ಟನ್ನು ಮದುವೆಯಾಗುವ ಶೈಲಾ ಪಾತ್ರ. ‘ಪ್ರಾಯಶ್ಚಿತ’ ದಲ್ಲಿ ತನ್ನ ತಂದೆಯ ಮನಸ್ಸಿಗೆ ವಿರುದ್ದವಾಗಿ ಮದುವೆಯಾಗುವ ಮೂರ್ತಿ, ನಂತರ ಇವರ ‘ಯಾರು?’ ಸಣ್ಣ ಕತೆಯಲ್ಲಿ ಗಂಡನಿಂದ ತಿರಸ್ಕಾರಕ್ಕೆ ಒಳಗಾದ ಹುಡಿಗಿಯೊಬ್ಬಳು ಅಳುತ್ತಾ ಕೂರದೆ ಕಲಾವಿದೆಯಾಗಿ ಜೀವನವನ್ನು ಕಟ್ಟಿಕೊಳ್ಳುತ್ತಾಳೆ. ಹಾಗೆ ಇವರ ಮುನ್ನ ದಿನ,ಹೋಗಿಯೇ ಬಿಟ್ಟಿದ್ದ, ಕಂಬನಿ, ಚಿಗುರು, ಸಂನ್ಯಸಿ ರತ್ನ ಇವೆಲ್ಲ ಇವರ ಅಧ್ಭುತ ಕತೆಗಾರಿಕೆಗೆ ಹಿಡಿದ ಕನ್ನಡಿಯಾಗಿವೆ. ಸಾಹಿತ್ಯದಲ್ಲಿ ಹೆಚ್ಚಾಗಿ ಅಂದಿನ ಕಾಲಗಟ್ಟದ ಒಟ್ಟಾರೆಯಾಗಿ ಮಹಿಳೆಯರು ಎದುರಿಸುತ್ತಿದ್ದ ಸಮಸ್ಯೆಗಳಾದ ವೈದವ್ಯ, ವರದಕ್ಷಣೆ, ಪ್ರೇಮ, ವಿರಹ, ಪ್ರೇಮ ವೈಫಲ್ಯ, ಸ್ತಿçà ಶೋಷಣೆಯ ಹಲವು ಮುಖಗಳು, ಕೌಟುಂಬಿಕ ವ್ಯವಸ್ಥೆ, ಮಾನವೀಯ ಸಂಬಂಧ, ಅನಕ್ಷರತೆ, ಜಾತಿಸಂಘರ್ಷ ಹೀಗೆ ಹಲವಾರು ಸಮಾಜಮುಖಿಯಾದ ವಿಷಯಗಳ ಕಡೆಗೆ ಬೆಳಕು ಚೆಲ್ಲುತ್ತಾ ಹೊರಡುತ್ತಾರೆ. ತುಂಬಾ ಗೌರವಯುತವಾದ ಕುಟುಂಬದ ಹಿನ್ನೆಲೆಯಿಂದ ಬಂದ ಇವರು ತಮ್ಮ ಬದುಕಿನ ಗಟ್ಟಿ ಅನುಭವಗಳನ್ನೆ ಸಾಹಿತ್ಯದಲ್ಲಿ ಹಿಡಿದಿಟ್ಟಿದ್ದಾರೆ. ಬೇಂದ್ರೆಯವರು ಮೇಲ್ಕಾಣಿಸಿದ ಕವಿತೆಯಲ್ಲಿ ಮುಂದುವರೆದು ಇವರ ಬಗ್ಗೆ ಈ ರೀತಿ ಹೇಳಿದ್ದಾರೆ. “ಗೌರವಸ್ತ ಗೌರವ ಸ್ಮಿತ ಗೌರವದಿ ಗೌರಿ| ಮಿಂಚಿದಳೊ ಬಾನಂಚಿಗೆ ಕಾವೇರಿಯ ಕುವರಿ” ಎಂದು ಹೊಗಳಿದ್ದಾರೆ. ಅಲ್ಲದೆ ಗೌರಮ್ಮನವರ ಕಂಬನಿ ಮತ್ತು ಚಿಗುರು ಎನ್ನುವ ಕೃತಿಗಳಿಗೆ ಇವರೇ ಮುನ್ನುಡಿಯನ್ನೂ ಬರೆದಿದ್ದರೆ. ಕೊಡಗಿನ ಗೌರಮ್ಮನವರು ಜಮಖಂಡಿಯಲ್ಲಿ ಹಾಗೂ ಮಡಕೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದರು.
- ಶ್ರೀಮತಿ ಗಿರಿಜಾ ಮಾಲಿ ಪಾಟೀಲ
 ಸಂಸ್ಥಾಪಕ ಅಧ್ಯಕ್ಷರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಮಾಜಾನ್ ಮಸ್ಕಿ

ನಿನ್ನ ಸನಿಹ ನನ್ನೊಳು ಹರಿದ ಮಿಂಚಿಗೆ ಬೆದರಿದೆ ತಂಬೆಳಕೆ 
ನಲ್ಮೆಯ ಬಿಗಿದಪ್ಪಿದ ಆಲಿಂಗನದಲ್ಲಿ ಮುದುರಿದೆ ತಂಬೆಳಕೆ 

ಭಾವಾತೀತ ಹೃದಯಗಳ ಮಿಡಿತ ಅರಿತೇವು ಏನೂ 
ಒಂದಾದ ಮೃದು ಭಾವ ಭಾವನೆ ಕುದರಿದೆ ತಂಬೆಳಕೆ 

ಚಿಗುರೋಡೆದ ಮಧುರ ಪ್ರೇಮ ಸಿಂಚರಿಸಿತು ಸುಗಂಧ 
ಹೂಬನದಲ್ಲಿ ಅರಳು ಮಲ್ಲಿಗೆ ಮೋಹ ಕೆದರಿದೆ ತಂಬೆಳಕೆ 

ಬಾಗುತ್ತಿವೆ ರೆಪ್ಪೆಗಳು ನಸು ನಾಚಿ ಸಂಜೆಯ ಕಾಂತೆ 
ಇರುಳ ಸವಿಗನಸಿಗೆ ಮನ ಅದರಿದೆ ತಂಬೆಳಕೆ 

ಹಂಬಲಿಸಿತು ಆಸೆಯ ಅಲೆ ದಡ ಸೇರಲು "ಮಾಜಾ"
ತೆರೆದ ಸಿಂಪಿಗೆ ಸ್ವಾತಿ ಮಳೆ ಹನಿ ಉದುರಿದೆ ತಂಬೆಳಕೆ 
- ಮಾಜಾನ್ ಮಸ್ಕಿ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನವರಿಕೆ (ಕವಿತೆ) - ಶ್ರುತಿ ಚಂದ್ರು, ಕೊಟ್ಟೂರು

ಸೋಲುವ ಪರಿಗೆ ಸುಳಿದಾಡದಿರು ಈ ಕಡೆಗೆ 
ಕುತೂಹಲದ ಕರೆಗೆ 
ಸನಿಹವೂ ಈ ಕರಗಳಿಗೆ ।
     
ಬಿಗಿ ದಿರಿಸು ನಿನ್ನ  ಉಸಿರೊಳಗೆ ಬೆಚ್ಚಗಿರುವೆ
ನಿನ್ನ ಎದೆಯೊಳಗೆ ॥
ನಿನ್ನ ಉಸಿರ ಬೆಸುಗೆ 
ಈ ಹೃದಯಕ್ಕೆ ಹಸಿರೇ ।
ಹಗಲ ಕನಸಿನ ಕರೆಗೆ ಇರುಳೆಲ್ಲ ಕನವರಿಕೆಯ ಜಾಗರಣೆ !

ಸೋತರೂ ಗೆಲುವಿನ ಖುಷಿಗೆ. 
ಕಲ್ಲಿನ ಹೃದಯ ಹೂವಾಗುವ ಕಡೆಗೆ।
ಇದೇನು? ಹೊಸದೊಂದು ಬೆಸುಗೆ
ನನ್ನೊಳಗೆ ಕಸಿಬಿಸಿಯ ಮನವರಿಕೆ  ॥
                   
  -  ಶ್ರುತಿ ಚಂದ್ರು, ಕೊಟ್ಟೂರು.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸರ್ಕಾರಿ ಶಾಲೆ ಉಳಿಸಿ ಬೆಳಸಿ (ಲೇಖನ) - ಮೊಹಮ್ಮದ್ ಅಜರುದ್ದೀನ್

ಶಿಕ್ಷಣ ಎಂಬುವುದು ಸಾಮಾನ್ಯ ಅರ್ಥದಲ್ಲಿ ಶಿಕ್ಷಣ ಜ್ಞಾನ, ಕೌಶಲ್ಯ ಮತ್ತು  ಒಂದು ಗುಂಪಿನ ಪದ್ಧತಿ ಬೋಧನೆ, ತರಬೇತಿ ಅಥವಾ ಸಂಶೋಧನೆ ಮೂಲಕ ಮುಂದಿನ ಪೀಳಿಗೆಗೆ ಅಭಿವೃದ್ಧಿಯ ಭಾರತ ನಿರ್ಮಾಣ ಮಾಡುವುದು. ಇದರಲ್ಲಿ ಕಲಿಕೆಯು ಒಂದು ರೂಪ. ಶಿಕ್ಷಣ  ಇತರರ ಮಾರ್ಗದರ್ಶನದಲ್ಲಿ ನಡೆಯುತ್ತದೆ.   ಶಿಕ್ಷಣ ಸಾಮಾನ್ಯವಾಗಿ  ಪ್ರಾಥಮಿಕ ಶಾಲೆ, ಸೆಕೆಂಡರಿ ಶಾಲೆ ಮತ್ತು ನಂತರ ಕಾಲೇಜು, ವಿಶ್ವವಿದ್ಯಾಲಯ ಅಥವಾ ಶಿಷ್ಯವೃತ್ತಿಯ ಎಂಬ ಹಲವು ಹಂತಗಳಲ್ಲಿ ವಿಂಗಡಿಸಲಾಗಿದೆ.

ಹಿಂದಿನ ಕಾಲದಲ್ಲಿ  ಹೆಚ್ಚಾಗಿ ಯಾರು ಶಿಕ್ಷಣದ ಕಡೆ ಚಿಂತನೆ ಮಾಡುತ್ತಿರಲಿಲ್ಲ.   ಈಗ ಶಿಕ್ಷಣವೇ ಎಲ್ಲಾರ ಬದುಕಿನ ರೂಪವಾಗಿದೆ. ಈಗಿನ ಯುಗದಲ್ಲಿ ಶಿಕ್ಷಣವೇ ಎಲ್ಲಕ್ಕಿಂತ ಮುಖ್ಯವಾದ ಅಂಶವಾಗಿದೆ.   ಶಿಕ್ಷಣ ಎಂಬುದು ಅನೇಕ ಹಂತದಲ್ಲಿಯೇ  ವಿಂಗಡಗೊಂಡಿದೆ.  ಶಿಕ್ಷಣದ ಮೂಲ ಹಾದಿಯೇ ಸರ್ಕಾರಿ ಶಾಲೆಗಳು.

ಕೆಲವು ವರ್ಷಗಳ ಹಿಂದೆ  ಭಾರತವು ಶಿಕ್ಷಣವಿಲ್ಲದೆ  ಅನಕ್ಷರಸ್ಥರ ದೇಶವಾಗಿತ್ತು.  ಭಾರತ ದೇಶದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಲಿ   ಹಾಗೂ ಭಾರತ ಅಭಿವೃದ್ಧಿಯಾಗಲಿ ಎಂದು  ಸರ್ಕಾರವು ಪ್ರತಿ ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಆರಂಭಿಸಿ ಅಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು  ಆರಂಭ ಮಾಡಿತು. ಹಂತ ಹಂತವಾಗಿ ನಮ್ಮ  ಕರ್ನಾಟಕ ರಾಜ್ಯದಲ್ಲಿ  ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗುತ್ತಿದೆ.   ಖಾಸಗಿ ಶಾಲೆಗಳ ಅಬ್ಬರದಿಂದ ನಮ್ಮ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿ ಬಂದು ನಿಂತಿವೆ.  

ನಮ್ಮ ದೇಶ ಭಾರತದಲ್ಲಿ ಖಾಸಿಗೆ ಶಾಲೆಗಳ ಅಬ್ಬರಗಳು ಹೆಚ್ಚಾಗುತ್ತಾ ಹೋಗುತ್ತಿದೆ. ಪ್ರತಿ, ಹಳ್ಳಿ, ಗ್ರಾಮ, ನಗರಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಾಗುತ್ತಾ ಹೋಗುತ್ತವೆ. ಈ ಖಾಸಗಿ ಶಾಲೆಗಳು ನೀಡುವ  ಆಮಿಷಗಳಿಗೆ  ನಮ್ಮ ಜನರು ಮೊರೆಹೋಗಿ ಲಕ್ಷ ಲಕ್ಷ ಹಣಗಳನ್ನು ಸುರಿದು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸಗಳನ್ನು ಕೊಡಿಸುತ್ತಿದ್ದಾರೆ.   ಈ ಖಾಸಿಗೆ ಶಿಕ್ಷಣ ಸಂಸ್ಥೆಗಳು ಪೋಷಕರಿಂದ  ಹಣ ಸುಲಿಗೆ ಮಾಡುತ್ತಾ ಹೋಗುತ್ತಿದ್ದಾರೆ.   ಈಗ  ವಿದ್ಯಾಭ್ಯಾಸ ಎಂಬುವುದು  ಒಂದು ವ್ಯಾಪಾರದ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ.  ಖಾಸಗಿ ಶಾಲೆಗಳು  ವ್ಯಾಪಾರದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ  ಶಿಕ್ಷಣವನ್ನು ನೀಡುತ್ತಾ ಹೋಗುತ್ತಿದ್ದಾರೆ ಈ ಶಿಕ್ಷಣವು ಈಗ ವ್ಯಾಪಾರದ ಸಂತೆಯಾಗಿ ನಿಂತಿದೆ.   

ನಮ್ಮ ಸರ್ಕಾರವು  ಸರ್ಕಾರಿ ಶಾಲೆಗಳನ್ನು ತೆರೆದು ಅನೇಕ ಉಪಯೋಗಗಳನ್ನು ಮಾಡಿಕೊಟ್ಟರು  ನಮ್ಮ ಜನರು ಸರ್ಕಾರಿ ಶಾಲೆಗಳಿಗೆ ಸೇರಿಸದೆ  ಖಾಸಿಗೆ ಶಾಲೆಗಳಿಗೆ ನಮ್ಮ ಮಕ್ಕಳನ್ನು ಸೇರಿಸುತ್ತಿದ್ದಾರೆ.   ಈ ಕಾರಣಕ್ಕಾಗಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ. ಹಣವಿಲ್ಲದೆ ಉತ್ತಮ ಶಿಕ್ಷಣ ನೀಡುತ್ತಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಮರೆತು ಪೋಷಕರು ತಮ್ಮ ಮಕ್ಕಳಿಗಾಗಿ ಖಾಸಿಗೆ ಶಾಲೆಗಳತ್ತ ಮೊರೆಹೋಗುತ್ತಿದ್ದಾರೆ.   ವಿದ್ಯಾರ್ಥಿಗಳಿಲ್ಲದೆ ನಮ್ಮ ಕರ್ನಾಟಕದ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿಹೋಗಿವೆ.

ಸರ್ಕಾರಿ ಶಾಲೆಗಳನ್ನು ಮುಚ್ಚಲು ಮೂಲ ಕಾರಣಗಳು:-   ನಮ್ಮ ಕರ್ನಾಟಕ ರಾಜ್ಯದಲ್ಲಿ ಅನೇಕ ಖಾಸಗಿ ಶಾಲೆಗಳು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ನಿಂತಿವೆ.   ಆದರೆ ನಮ್ಮ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಕಟ್ಟಡದ ವ್ಯವಸ್ಥೆ ಇಲ್ಲ. ಖಾಸಿಗೆ ಶಾಲೆಗಳಲ್ಲಿ  ಶಿಕ್ಷಕರನ್ನು ನೇಮಕ ಮಾಡಿಕೊಂಡು ವಿದ್ಯಾಭ್ಯಾಸ ಗಳನ್ನು ಕಲಿಸುತ್ತಾರೆ.   ನಮ್ಮ ಸರ್ಕಾರಿ ಶಾಲೆಗಳಲ್ಲಿ ಸರಿಯಾಗಿ ಶಿಕ್ಷಕರ ವ್ಯವಸ್ಥೆ ಇಲ್ಲ.  ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರುವ ಕೆಲ ಸರ್ಕಾರಿ ಶಾಲೆಗಳಲ್ಲಿ  ಒಬ್ಬರೇ ಶಿಕ್ಷಕರು ಇರುತ್ತಾರೆ.  ಖಾಸಗಿ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳನ್ನು  ಒದಗಿಸುತ್ತಾರೆ.   ನಮ್ಮ ಸರ್ಕಾರಿ ಶಾಲೆಗಳಲ್ಲಿ ಇರುವ ಸೌಲಭ್ಯಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಹಣಕ್ಕೆ ತಕ್ಕ ಶಿಕ್ಷಣವನ್ನು ನೀಡುತ್ತಾರೆ.  ನಮ್ಮ ಸರ್ಕಾರಿ ಶಾಲೆಗಳಲ್ಲಿ  ಹಣ ತೆಗೆದುಕೊಳ್ಳುವುದಿಲ್ಲ ಆದರೆ ಸರಿಯಾದ ಶಿಕ್ಷಣ ನೀಡಲು ಶಿಕ್ಷಕರ  ಕೊರತೆ ಇರುತ್ತದೆ. ಈ ಮೇಲಿನ ಕಾರಣಗಳಿಗೆ ನಮ್ಮ ಸರ್ಕಾರಿ ಶಾಲೆಗಳನ್ನು ಬಿಟ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಖಾಸಗಿ ಶಾಲೆಗಳ  ಮೊರೆಹೋಗುತ್ತಾರೆ.  

ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯಗಳು:-   ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಸಿಗುವ ಸವಲತ್ತು ಸೌಲಭ್ಯಗಳನ್ನು ಗಮನಿಸಿದರೆ ಇದೇ ಶಾಲೆಗೆ ದಾಖಲಿಸಬೇಕೆಂಬ ಹಂಬಲ ಉಂಟಾಗುವುದು ಸಹಜ. ಅಷ್ಟರ ಮಟ್ಟಿಗೆ ಸೌಲಭ್ಯಗಳು ಅಲ್ಲಿವೆ. ಒಬ್ಬ ವಿದ್ಯಾರ್ಥಿ ಆ ಶಾಲೆಗೆ ದಾಖಲಾದ ಕೂಡಲೇ ಉಚಿತ ಪಠ್ಯ ಪುಸ್ತಕಗಳು ಸಿಗುತ್ತವೆ. ಉಚಿತ ಬ್ಯಾಗ್, ಉಚಿತ ಶೂ, ಮಧ್ಯಾಹ್ನದ ಬಿಸಿಯೂಟ, ಹಾಲು, ಬಸ್‍ಪಾಸ್, ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ಇತ್ಯಾದಿ ಸೌಲಭ್ಯಗಳು ದೊರಕುತ್ತವೆ.

ಹಿಂದೆಲ್ಲ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದವು. ಶಾಲೆಗಳಿಗೆ ಹೋಗುವಾಗ ರೊಟ್ಟಿ, ಮುದ್ದೆ ಮಾಡುವ ಮಡಕೆ ತಳದ ಸೀಕು ಇತ್ಯಾದಿ.. ಏನು ಸಿಗುತ್ತದೋ ಅದನ್ನು ತಿಂದು ಸಂಜೆ ವಾಪಸ್ ಮನೆಗೆ ಬಂದಾಗಲೇ ಊಟ ಮಾಡಬೇಕಾಗಿತ್ತು. ನಿಗದಿತ ಸಮಯಕ್ಕೆ ಉಪಹಾರ, ಊಟ ಸಿಗುತ್ತಿರಲಿಲ್ಲ. ಸಮಯ ಆಯಿತೆಂದು ಬಹಳಷ್ಟು ಮಕ್ಕಳು ಊಟೋಪಚಾರವಿಲ್ಲದೇ ಹೆಗಲಿಗೆ ಬ್ಯಾಗ್ ಏರಿಸಿಕೊಂಡು ಶಾಲೆಯತ್ತ ದೌಡಾಯಿಸುತ್ತಿದ್ದರು. ಇದರಿಂದ ಆಗಿನ ಕಾಲಕ್ಕೆ ಅಪೌಷ್ಟಿಕತೆ ಹೆಚ್ಚಿತ್ತು. ಈಗ ಹಾಲಿನಿಂದ ಹಿಡಿದು ಬಿಸಿಯೂಟದವರೆಗೆ ಶಾಲೆಯಲ್ಲಿಯೇ ಸಿಗುತ್ತಿರುವಾಗ ವಿದ್ಯಾರ್ಥಿಗಳ ಆರೋಗ್ಯವೂ ವೃದ್ಧಿಯಾಗುವುದರ ಜೊತೆಗೆ ಶೈಕ್ಷಣಿಕ ವ್ಯಾಸಂಗಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

ಇದರ ಜೊತೆಗೆ ಉಚಿತ ಬೈಸಿಕಲ್, ಪ್ರವಾಸ, ಪ್ರತಿಭಾ ಕಾರಂಜಿ, ವಿವಿಧ ವಿದ್ಯಾರ್ಥಿ ವೇತನಗಳು, ಹಾಜರಾತಿ ಶಿಷ್ಯ ವೇತನ, ಹೆಚ್ಚು ಅಂಕ ಪಡೆದ ಟಾಪರ್‍ಗಳಿಗೆ ಲ್ಯಾಪ್‍ಟಾಪ್ ವಿತರಣೆ ಇಂತಹ ಅನೇಕ ಯೋಜನೆಗಳು ವಿದ್ಯಾರ್ಥಿಗಳಿಗೆ ಪೂರಕವಾಗಿವೆ. ವಿದ್ಯಾರ್ಥಿ ವೇತನಗಳು ಮಕ್ಕಳ ಇತರೆ ವೆಚ್ಚಗಳನ್ನು ಸರಿದೂಗಿಸಲು ಸಹಕಾರಿಯಾಗುತ್ತಿವೆ. ವಿಶೇಷವಾಗಿ ಇಂತಹ ಸವಲತ್ತುಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು ಹೆಚ್ಚು ಅಂಕಗಳಿಸುವತ್ತ ಇವೆಲ್ಲವೂ ಪೂರಕ ವಾತಾವರಣ ಸೃಷ್ಟಿಸಿವೆ.

ಸರ್ಕಾರಿ ಶಾಲೆಯ ಶಿಕ್ಷಕರು:- ಸರ್ಕಾರಿ ಶಾಲೆಗಳಲ್ಲಿ ಬೋಧನೆ ಮಾಡುವ ಶಿಕ್ಷಕರು ನಿಗದಿತ ವಿದ್ಯಾರ್ಹತೆಯೊಂದಿಗೆ ಕಾಲ ಕಾಲದ ತರಬೇತಿಗಳನ್ನು ಪಡೆಯುತ್ತಿದ್ದಾರೆ. ಪದವಿ ಮಾಡಿದವರೆಲ್ಲ ಶಿಕ್ಷಕರಾಗಲು ಅರ್ಹರಲ್ಲ. ಪದವಿಯ ಜೊತೆಗೆ ಉತ್ತಮ ಅಂಕ ಗಳಿಸಿರಬೇಕು. ಸರ್ಕಾರ ನಿಗದಿಪಡಿಸಿರುವ ಕೋರ್ಸ್ ಅಧ್ಯಯನ ಮಾಡಬೇಕು. ಟಿಇಟಿಯಲ್ಲಿ ರ್ಯಾಂಕ್ ಪಡೆಯಬೇಕು. ಸಿಇಟಿಯಲ್ಲಿ ಉತ್ತೀರ್ಣರಾಗಬೇಕು. ಇಷ್ಟೆಲ್ಲ ವಿವಿಧ ಹಂತದ ಪರೀಕ್ಷೆಗಳನ್ನು ದಾಟಿ ಬಂದ ನಂತರ ಅವರಿಗೆ ತರಬೇತಿಗಳನ್ನು ನೀಡಲಾಗುತ್ತದೆ. ಇತ್ತೀಚೆಗೆ ಶಿಕ್ಷಕರಿಗೆ ಸ್ಮಾರ್ಟ್ ಕ್ಲಾಸ್‍ಗಳ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿ ಲ್ಯಾಪ್‍ಟಾಪ್ ಖರೀದಿಸುವ ಅವಕಾಶ ಕಲ್ಪಿಸಲಾಗಿದೆ. ವಿಷಯವಾರು ತರಬೇತಿ ನೀಡಲು ಮಾಸ್ಟರ್ ಟ್ರೈನರ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ.  

ಸರ್ಕಾರಿ ಶಾಲೆಯಲ್ಲಿ ಬೋಧನೆ ಮಾಡಬೇಕೆಂದರೆ ಶಿಕ್ಷಕನಾದವನು ಮೇಲ್ಕಂಡಂತೆ ಈ ಎಲ್ಲ ಅರ್ಹತೆಗಳನ್ನು ಹೊಂದಿರಬೇಕು. ಇಂತಹ ಅರ್ಹತೆಗಳು ಖಾಸಗಿ ಶಾಲೆಗಳಲ್ಲಿ ಸಿಗುವುದು ಕಡಿಮೆಯೇ. ಖಾಸಗಿ, ಅನುದಾನರಹಿತ ಶಾಲೆಗಳಲ್ಲಿ ಶೈಕ್ಷಣಿಕ ಅರ್ಹತೆಗಳಿಗಿಂತ ಮೇಲ್ನೋಟದ ಆಕರ್ಷಣೆಯೇ ಹೆಚ್ಚಿರುತ್ತದೆ. ಇಲ್ಲಿ ಬೋಧನೆ ಮಾಡುವವರು ಯಾರು ಬೇಕಾದರೂ ಆಗಿರಬಹುದು.

ಶಾಲೆಗಳಲ್ಲಿ ಶಿಕ್ಷಕರ ಸಂಬಂಧ:- ಗ್ರಾಮೀಣ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಯ ಶಿಕ್ಷಕರು  ಗ್ರಾಮದಲ್ಲಿರುವ ಎಲ್ಲಾ  ಪೋಷಕರ ಪರಿಚಯವಿರಬೇಕು.   ಹೀಗೆ ಎಲ್ಲ ಜನರ ಪರಿಚಯವೂ ಶಿಕ್ಷಕರಿಗೆ ಇದ್ದರೆ  ಶಿಕ್ಷಕರು ಸತತವಾಗಿ ಗೈರು  ಹಾಜರಾದರೆ ಪೋಷಕರು ಪ್ರಶ್ನಿಸುತ್ತಾರೆ.  ಶಾಲೆಯಲ್ಲಿ ಸುಂದರವಾದ ಪರಿಸರವನ್ನು ನಿರ್ಮಾಣ ಮಾಡಿದರೆ  ಪೋಷಕರಿಗೆ ಸುಂದರವಾದ ಶಾಲೆಯು ಆಕರ್ಷಕವಾಗಿ ಕಾಣುತ್ತದೆ.   ಶಾಲೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣುವ ಹಾಗೆ ಶಿಕ್ಷಕರು ಮಾಡಬೇಕು. ಖಾಸಗಿ ಶಾಲೆಗಳು ಕಾಣುವ ಹಾಗೆ ನಮ್ಮ ಸರ್ಕಾರಿ ಶಾಲೆಗಳನ್ನು ಶಿಕ್ಷಕರು ಮತ್ತು ಪೋಷಕರು ಸೇರಿ ಮಾಡಬೇಕು.   ಪ್ರತಿ ಮನೆ ಮನೆಗಳಿಗೂ ಭೇಟಿ ನೀಡಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರುವ ಹಾಗೆ ಮಾಡಬೇಕು ಹಾಗೆ ಪೋಷಕರಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ವಿಶ್ವಾಸ ಮತ್ತು ನಂಬಿಕೆಯನ್ನು ಮೂಡಿಸಬೇಕು.  ಪೋಷಕರ ಸಭೆ ಕರೆದಾಗ ಹಾಜರಾಗಬೇಕು. ಸರ್ಕಾರಿ ಶಾಲೆಗಳಲ್ಲಾದರೆ ಈ ಯಾವ ನಿಬಂಧನೆಗಳು ಇಲ್ಲ. ನಿತ್ಯವೂ ಶಾಲೆಗೆ ಹೋಗಬಹುದು, ಮಕ್ಕಳ ಶೈಕ್ಷಣಿಕ ಚಟುವಟಿಕೆ ವಿಚಾರಿಸಬಹುದು. ಇವೆಲ್ಲವೂ ಮಕ್ಕಳ ವ್ಯಾಸಂಗಕ್ಕೆ ಪೂರಕವಾದ ವಾತಾವರಣ.

ಸರ್ಕಾರಿ ಶಾಲೆಗಳನ್ನು ಕುರಿತು ಜಾಗೃತಿ:-   ನಮ್ಮ ಸರ್ಕಾರವು ಸರ್ಕಾರಿ ಶಾಲೆಗಳನ್ನು ಉಳಿಸಲು  ಸರ್ಕಾರಿ ಶಾಲೆಗಳನ್ನು ಕುರಿತು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಜಾಗೃತಿ ಮೂಡಿಸಬೇಕು.   ಗ್ರಾಮೀಣ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ  ತಯಾರಾಗಲು ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ನೇಮಕ ಮಾಡಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಉನ್ನತ ಪ್ರಗತಿ ಕಾಣಲು ಅವಕಾಶ ಮಾಡಿಕೊಡಬೇಕು.   ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣವನ್ನು ನೀಡಬೇಕು ಹಾಗೂ ಇದರ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು.  ವಿದ್ಯಾರ್ಥಿಗಳು ಉದ್ಯೋಗ ಪಡೆಯಬೇಕು ಎಂಬ ಹಂಬಲವೂ ಅವರ ಮನಸ್ಸಿನಲ್ಲಿ ಮೂಡಿಸಬೇಕು ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಹುದ್ದೆಗಳಿಗೆ ಹೋಗಿ ಅಲಂಕರಿಸಬಹುದು ಎಂಬ  ಆಲೋಚನೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರ ಮನಸ್ಸಿನಲ್ಲಿ ಮೂಡಿಸಬೇಕು.  ಸರ್ಕಾರಿ ಶಾಲೆಗಳು ನಮ್ಮೂರಿನ ಹೆಮ್ಮೆಯ ಶಾಲೆಗಳು ಎಂಬ ಹಾಗೆ ಎಲ್ಲರ ಮನಸ್ಸಿನಲ್ಲಿ  ಶಾಲೆಗಳನ್ನು ಕುರಿತು ಜಾಗೃತಿ ಮೂಡಿಸಬೇಕು.

ಬದ್ಧತೆಯ ಶಿಕ್ಷಣ:-  ಸರ್ಕಾರದ ಮಾರ್ಗಸೂಚಿಗಳು, ಕಟ್ಟುನಿಟ್ಟಿನ ಆದೇಶಗಳು ಏನೆಲ್ಲಾ ಇರಬಹುದು. ಆದರೆ ಶಿಕ್ಷಕ ವರ್ಗದಲ್ಲಿ ಒಂದು ಬದ್ಧತೆಯಂತೂ ಇದ್ದೇ ಇದೆ. ನಾನು ಸರ್ಕಾರದ ಋಣದಲ್ಲಿದ್ದೇನೆ. ಸರ್ಕಾರದ ಅನ್ನ ತಿನ್ನುತ್ತಿದ್ದೇನೆ ಎನ್ನುವ ಅರಿವು ಆ ವರ್ಗಕ್ಕೆ ಇದೆ. ದಿನನಿತ್ಯ ರೈತಾಪಿ ವರ್ಗ ಪಡುತ್ತಿರುವ ಕಷ್ಟಗಳನ್ನು ಹತ್ತಿರದಿಂದ ನೋಡುತ್ತಾರೆ. ಅವರ ಮಕ್ಕಳ ಸ್ಥಿತಿಗತಿಗಳೇನು ಎಂಬುದು ಚೆನ್ನಾಗಿ ಗೊತ್ತು. ನಾವಿಂದು ಇದ್ದುದರಲ್ಲಿ ಇವರಿಗಿಂತ ಉತ್ತಮ ಸ್ಥಿತಿಯಲ್ಲಿದ್ದೇವೆ. ಇರುವಷ್ಟು ಅವಧಿಯಲ್ಲಿ ಪ್ರಾಮಾಣಿಕ ಕರ್ತವ್ಯ ನಿಭಾಯಿಸಬೇಕೆಂಬ ಎಚ್ಚರಿಕೆ ಮೂಡುವುದರಿಂದಲೇ ಹೆಚ್ಚು ಜಾಗೃತನಾಗುತ್ತಿದ್ದಾನೆ.

      ಖಾಸಗಿ ಶಾಲೆಗಳತ್ತ ವಿದ್ಯಾರ್ಥಿಗಳು ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತರಾಗುತ್ತಿರುವುದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ನೋಂದಣಿ ಪ್ರಮಾಣ ಕುಸಿತವಾಗುತ್ತಿದೆ. ಇದು ಶಿಕ್ಷಕ ವರ್ಗದಲ್ಲಿ ಹೆಚ್ಚು ಆತಂಕಕ್ಕೆ ಕಾರಣವಾಗಿದೆ. ಹೀಗೆಯೇ ಮುಂದುವರೆದರೆ ಖಾಸಗಿ ಶಾಲೆಗಳ ಪ್ರಭಾವದಿಂದಾಗಿ ಸರ್ಕಾರಿ ಶಾಲೆಗಳಿಗೆ ಧಕ್ಕೆಯಾಗಬಹುದು, ಆ ಮೂಲಕ ನಮ್ಮ ಭವಿಷ್ಯಕ್ಕೂ ಕುತ್ತು ಬೀಳಬಹುದು ಎಂಬ ಆತಂಕ ಸರ್ಕಾರಿ ವಲಯದ ಶಿಕ್ಷಕ ಸಮೂಹದಲ್ಲಿ ಮನೆಮಾಡಿದೆ. ಈ ಪ್ರಜ್ಞೆಯೂ ಶಿಕ್ಷಕರೂ ಹೆಚ್ಚು ಜಾಗೃತರಾದರು ಒಂದು ಕಾರಣ ಎನ್ನಬಹುದು.

ಸರ್ಕಾರಿ ಶಾಲೆಗಳ ಪರೀಕ್ಷೆ ಕ್ರಮ:- ನಮ್ಮ ಸರ್ಕಾರಿ ಶಾಲೆಗಳು ಪರೀಕ್ಷೆ ಕ್ರಮಗಳನ್ನು ಬದಲಾಯಿಸಿಕೊಂಡು ಖಾಸಗಿ ಶಾಲೆಗಳು ಮಾಡುವಹಾಗೆ ಪರೀಕ್ಷೆ ಕ್ರಮಗಳನ್ನು ನಡೆಸಬೇಕು.   ಪ್ರತಿ ತಿಂಗಳು ಮತ್ತು ವಾರದಲ್ಲಿ  ಕಿರು ಪರೀಕ್ಷೆಗಳನ್ನು ನಡೆಸಿ  ಆ ಅಂಕಗಳನ್ನು ಅವರ ಪೋಷಕರಿಗೆ ತಲುಪುವ ಪ್ರಯತ್ನ ಮಾಡಬೇಕು.   ಖಾಸಗಿ ಶಾಲೆಗಳು ಪಾಲಿಸುವ  ಎಲ್ಲಾ ಪರೀಕ್ಷಾ ಕ್ರಮಗಳನ್ನು ನಮ್ಮ ಸರ್ಕಾರಿ ಶಾಲೆಗಳನ್ನು ಪಾಲಿಸಬೇಕು.  ಕಿರು ಪರೀಕ್ಷೆಗಳಲ್ಲಿ ಕಡಿಮೆ ಅಂಕ ತೆಗೆದ ವಿದ್ಯಾರ್ಥಿಗಳ  ಬಗೆಹರಿಸಬೇಕು.  ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತಷ್ಟು ಅಂಕ ಪಡೆಯುವ ಹಾಗೆ ಉನ್ನತ ಶಿಕ್ಷಣವನ್ನು ನೀಡಬೇಕು.   ಈ ಮೇಲಿನ ಕ್ರಮಗಳನ್ನು ನಮ್ಮ ಸರ್ಕಾರಿ ಶಾಲೆಗಳು ಪಾಲಿಸಬೇಕು.

ವಲಸೆ ತಡೆಯಬೇಕು:- ಗ್ರಾಮೀಣ ಪ್ರದೇಶದಲ್ಲಿ ಶಾಲೆಗಳು ಉತ್ತಮ ಫಲಿತಾಂಶ ಬಂದಷ್ಟೂ ಆ ಶಾಲೆಗಳತ್ತ ಪೋಷಕರ ಗಮನ ಹರಿಯಲು ಸಾಧ್ಯವಾಗುತ್ತದೆ. ದಿನೇ ದಿನೇ ಹೆಚ್ಚುತ್ತಿರುವ ನಗರೀಕರಣದಿಂದಾಗಿ ಪಟ್ಟಣ ಪ್ರದೇಶಗಳಲ್ಲಿ ಶಾಲಾ ಕಾಲೇಜುಗಳು ಗಲ್ಲಿಗಲ್ಲಿಗಳಲ್ಲಿ ಆರಂಭವಾಗುತ್ತಿವೆ. ಶಿಕ್ಷಣ ನಗರ ಕೇಂದ್ರೀತವಾಗುತ್ತಿದೆ. ಮಕ್ಕಳು ಹಳ್ಳಿಯಿಂದ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಶಿಕ್ಷಣವು ದುಬಾರಿಯಾಗುತ್ತಿದೆ. ಅತ್ತ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಶ್ರಮಿಸಿದರೂ ಪ್ರಯೋಜನಕ್ಕೆ ಬಾರದಂತಾಗುತ್ತಿದೆ. ನಮ್ಮ ಮುಂದೆ ಇರುವ ಈಗಿನ ದೊಡ್ಡ ಸವಾಲೆಂದರೆ ಗ್ರಾಮೀಣ ಮಕ್ಕಳು ಅಲ್ಲಿನ ಶಾಲೆಗಳಲ್ಲಿಯೇ ಕಲಿಯುವಂತಾಗುವುದು. ಆ ಮೂಲಕ ನಗರ ಪ್ರದೇಶಕ್ಕೆ ವಲಸೆ ಬರುವುದನ್ನು ತಡೆಯುವುದು.

ಈ ಮೇಲಿನ ಕ್ರಮಗಳನ್ನು ನಮ್ಮ ಸರ್ಕಾರವು ಹೆಚ್ಚಿನ ರೀತಿಯಲ್ಲಿ ನಿಗಾವಹಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಭಿವೃದ್ದಿಯ ಪಥವನ್ನು ಸಾಯಿಸಬೇಕು.   ಸರ್ಕಾರಿ ಶಾಲೆಗಳನ್ನು ಮುಚ್ಚುವ ಬದಲು  ಇನ್ನಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳತ್ತ ಬರುವ ಹಾಗೆ ಉತ್ತಮ ಕಾರ್ಯಗಳನ್ನು ಹಮ್ಮಿಕೊಂಡು ಶಾಲೆಗಳ ಬಗ್ಗೆ ಜಾಗೃತಿಯನ್ನು ಮೂಡಿಸಬೇಕು.  ನಮ್ಮ ಸರ್ಕಾರಿ ಶಾಲೆಗಳನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು.   ಶಿಕ್ಷಕರ ಕೊರತೆ ಇರುವ ಶಾಲೆಗಳಲ್ಲಿ ಹೆಚ್ಚಿನ ಶಿಕ್ಷಕರನ್ನು ನೀಡಿ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಹಾಗೆ ಸರ್ಕಾರ ಮತ್ತು ಪೋಷಕರು ಗಮನ ಹರಿಸಬೇಕು.   ಅಳಿಯುವ ಅಂಚಿನಲ್ಲಿರುವ ನಮ್ಮ ಸರ್ಕಾರಿ ಶಾಲೆಗಳನ್ನು ಎಲ್ಲರೂ ಉಳಿಸಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ಲೇಖನದ ಮೂಲಕ ಆಶಿಸುತ್ತೇನೆ.

- ಮೊಹಮ್ಮದ್ ಅಜರುದ್ದೀನ್
ಯುವಸಾಹಿತಿ
ಅಕ್ಕಿಹೆಬ್ಬಾಳು ಗ್ರಾಮ
ಕೃಷ್ಣರಾಜಪೇಟೆ ತಾಲ್ಲೂಕು
ಮಂಡ್ಯ ಜಿಲ್ಲೆ-571605


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ತಿಳಿ ಮನವೇ ತುಳಿಯುವ ಮುನ್ನ (ಕವಿತೆ) - ಶಿವಾ ಮದಭಾಂವಿ

ಓ ಮುಗ್ಧಮನದ ಮುಗ್ಧ ಜೀವವೇ
 ನಿನ್ನಲ್ಲೊಂದು ನನ್ನ ಮನವಿ 
ಹೇಳುತ್ತೇನೆಂದು ಬೇಸರಿಸಬೇಡ 

 ಮುಗ್ಧತೆಯ ಮಾರ ಹೊರಟಿಹರಿಲ್ಲಿ
 ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸುವ 
 ಮೋಸ ಮಾಡುವ ಮೂರ್ಖರು 


 ಶ್ರೀಗಂಧ ಯಾವಾಗಲೂ ಶ್ರೀಗಂಧವೇ
 ಮಾರು ಹೋಗಬೇಡ ಅವರ 
ಗೋಸುಂಬೆ ಮಾತಿಗೆ
 ಮರುಳಾಗಬೇಡ ತಿಳಿಮನವೇ


 ಆಗಿರುವೆ ನೀ ಕೇಂದ್ರಬಿಂದು 
ಮೂರ್ಖರು ಬರುವರು 
ನಯನದಿ ಹಿಂಬಾಲಿಸಿ 
 ಹಗಲಲಿ ಬಾವಿಗೆ ತಳ್ಳಿ 
ಕೇಕೆ ಹಾಕುವ ಕಿರಾತಕರು 

 ಎಚ್ಚೆತ್ತುಕೊ ಓ ಜೀವವೇ 
 ನಿನ್ನ ಯಶಸ್ಸಿನ ದಾರಿ ಸಮೀಪವಿದೆ 
 ಬೇರಾರು ನೀಡರು ಯಶಸ್ಸು 
ದೈವವೇ ನಿನ್ನ ಜೊತೆ ಇರುವಾಗ 
ಹೋಗದಿರು ಮಾರು 

 ಮರುಳಾಗಿ ಮೋಸಹೋಗಿ 
ಮನ ಮರಗಿಸುವ ಮುನ್ನ
 ಎಚ್ಚೆತ್ತುಕೊ ಬೇರೇನು ಹೇಳಲಿ 
ಮುಗ್ಧತೆಗೆ ಹಾಕು ಕಡಿವಾಣ 

 ದಾರಿ ಮಾಡಿಕೊಡದಿರು ನೀನಾಗಿ 
ಮರುಳ ಮಾತಿಗೆ ಸೋಲಬೇಡ 
ಸೋಲಿಸು ಹೊಂಚುಹಾಕುತ್ತಿರುವ 
ಸಂಚುಕೋರರನ್ನ ಡಾಂಭಿಕರನ್ನ   
- ಶಿವಾ ಮದಭಾಂವಿ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕಾಯಕಯೋಗಿ (ಕವಿತೆ) - ಮಧುಮಾಲತಿ ರುದ್ರೇಶ್ ಬೇಲೂರು

ತ್ರಿವಿಧ ದಾಸೋಹಿ ಕಾಯಕಯೋಗಿ ನೀವು
 ಭುವಿಗಿಳಿದ ಶಿವಸ್ವರೂಪಿ ದೈವವೇ ನೀವು

 ವಿಶ್ವರತ್ನ ನೀವು ಭಾರತಾಂಬೆಯ ಮುಕುಟವೇ
 ವಿಶ್ವಕೇ ಹಬ್ಬಿತು ಕೀರುತಿ ನೀ ಕಳಶವೇ

 ಸರ್ವಧರ್ಮಸಮನ್ವಯದ ಹರಿಕಾರನೇ
 ಬಸವಣ್ಣನ ಮರು ಜನ್ಮವೇ ನೀ ಸಿದ್ಧಿಪುರುಷನೇ

 ಕೋಟಿ ಮಕ್ಕಳ ಬಾಳು ಬೆಳಗಿದ ನಂದಾದೀಪವೇ
 ಮೇಟಿ ವಿದ್ಯೆಯನೂ ಅರುಹಿದ ಸದ್ಗುರುವೇ

 ಜಾತಿ ˌಧರ್ಮ ˌಲಿಂಗˌ ಭಾಷೆ ಮೀರಿನಿಂತ ಮೇರುವೆ
 ಸಿದ್ದಗಂಗಾ ಭಾಸ್ಕರನೇ ನೀ ಜಗದ ಪುಣ್ಯವೇ

 ಸರಳ ಸಜ್ಜನಿಕೆಯೊಂದಿಗೆ ವಿದ್ಯಾಸಾಗರವೇ
 ಅಕ್ಕರದಿ ಅಕ್ಷರ ಬೀಜ ಬಿತ್ತಿದ ಮಹಾಸಾಧುವೇ

 ಅನುಕ್ಷಣ ಶಿವ ಜಪವು ಭಸ್ಮವೇ ಭೂಷಣ
 ಅರಸಿಬಂತು ಕೀರುತಿಯ ಮುಕುಟಕೆ ಪದ್ಮಭೂಷಣ

 ತಂದೆ-ತಾಯಿ ಗುರು ಎಲ್ಲವೂ ಮೇಳೈಸಿದ ವ್ಯಕ್ತಿತ್ವ
 ಜೀವಿಸಿ ತೋರಿದಿರಿ ಕಾಯಕವೇ ಕೈಲಾಸವೆಂಬ ತತ್ವ

 ನಿಮ್ಮ ಮಡಿಲಲಿ ನುಡಿ ಕಲಿತವರು ಸಾವಿರಾರು
 ಮತ್ತೆ ಭುವಿಯ ಬೆಳಕಾಗಲು ಬಾ ಓ ಸದ್ಗುರು 
- ಮಧುಮಾಲತಿ ರುದ್ರೇಶ್ ಬೇಲೂರು.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗಜಲ್ - ಕಾವೇರಿ ಪೋತ್ನಾಳ್.

ನಲಿವು ಬಂದು ನೋವು ಕಳೆಯುವತನಕ ಓದು
ಗೆಲುವು ಒಲಿದು ನಗುವ ನೀಡುವತನಕ ಓದು.

ವೈರಿಗಳು ಹೆದರುವ ಪ್ರಬಲ ಅಸ್ತ್ರವೇ ಜ್ಞಾನ
ಸಮಾಜದ ಉತ್ತಮ ನಾಯಕನಾಗುವತನಕ ಓದು.

ಬದುಕಿನ ಉಜ್ವಲ ಭವಿಷ್ಯಕ್ಕೆ ವಿದ್ಯಯೇ ಹಣತೆ
ಅದ ಅವಮಾನಗಳಿಗೆಲ್ಲ ಸನ್ಮಾನ ದೊರಕುವತನಕ ಓದು.

ಜೀವನದ ಗುರಿ ಸಾಗುತ್ತಿರುವ ದಾರಿ ಸ್ಪಷ್ಟವಾಗಿರಲಿ
ಹೆತ್ತವರು ಕಂಡ ಕನಸು ನೆನಸಾಗುವತನಕ ಓದು.

ಕಾವ್ಯಳ ಪಾಲಿಗೆ ಪರಿಶ್ರಮವೇ ದೈವಪೂಜೆ
ಶಾರಾದೆಯೇ ಮೆಚ್ಚಿ ಫಲ ನೀಡುವತನಕ ಓದು.

- ಕಾವೇರಿ ಪೋತ್ನಾಳ್.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕೂರೋನಾ ಮೂಲರೂಪವಾಗಿರುವ ಒಮಿಕ್ರೋನ್ ವೈರಸ್ (ಲೇಖನ) - ವೈಷ್ಣವಿ ರಾಜಕುಮಾರ್

  ಕಳೆದ ಒಂದುವರೆ ವರ್ಷದಿಂದ ಕೋವಿಡ್-19 ವೈರಸ್ ಹರಡಿದಾಗ ಇಡೀ ವಿಶ್ವವೇ ನಲುಗಿ ಹೋಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ, ಈಗಾಗಲೇ ಬಹುತೇಕವಾಗಿ ಎಲ್ಲಾ ದೇಶಗಳಲ್ಲಿಯೂ ಕೋವಿಡ್-19 ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ಜನರಿಗೆ ಹಾಕಿಸಿದ್ದು.
       ಎಲ್ಲವೂ ಸಾಧಾರಣ ಸ್ಥಿತಿಗೆ ಬಂದಿದೆ ಎಂದು ಜನಜೀವನ ಸುಧಾರಣೆಯ ಹಾದಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಹೊಸ ಕೋವಿಡ್ ರೂಪಾಂತರ ಒಮಿಕ್ರೋನ್ ವೈರಸ್ ಬಂದೇ ಬಿಡ್ತು.
        ಕೂರೋನಾ ವೈರಸ್   ಮೂಲರೂಪವಾಗಿರುವ ಒಮಿಕ್ರೋನ್ ವೈರಸ್ ಇದು ಮೊದಲು ದಕ್ಷಿಣ ಆಫ್ರಿಕಾದಲ್ಲಿ ಈ ಸೋಂಕು ನವೆಂಬರ್ 24- 2021ರಲ್ಲಿ ಪತ್ತೆಯಾಗಿತ್ತು.
         ಒಮಿಕ್ರೋನ್ ರೂಪಾಂತರ ವೈರಸ್ ಮೂರು ರೀತಿಯಾಗಿ ಮನುಷ್ಯನ ದೇಹಕ್ಕೆ ಎಫೆಕ್ಟ್ ಮಾಡುತ್ತೆ ಅಂತಾ ಹೇಳಲಾಗಿದೆ. ಸಮಾನ ರೋಗ ಲಕ್ಷಣಗಳು, ಕಡಿಮೆ ಸಾಮಾನ್ಯ ರೋಗ ಲಕ್ಷಣಗಳು ಮತ್ತು ಗಂಭೀರ ರೋಗ ಲಕ್ಷಣಗಳ ಮೂಲಕ ಸೋಂಕಿತನ ಮೇಲೆ ಪರಿಣಾಮ ಬೀರೋ ಸಾಧ್ಯತೆ ಇದೆಯಂತೆ.
       ಒಮಿಕ್ರೋನ್ ಸೋಂಕಿನ ಲಕ್ಷಣವೆಂದರೆ ಉಸಿರಾಟದ ತೊಂದರೆ ಆಗುತ್ತೆ. ಒಮಿಕ್ರೋನ್ ಸೋಂಕು ಅಪಾಯಕಾರಿಯಾಗುವುದನ್ನು ತಡೆಯುವುದು ಮುನ್ನೆಚ್ಚರಿಕೆಯಾಗಿ ಲಸಿಕೆಯನ್ನು ಪಡೆಯುವುದು ಸೂಕ್ತ ಮತ್ತು ಗಂಭೀರ ಲಕ್ಷಣಗಳು ಕಾಣಿಸಿಕೊಂಡರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
        ಒಮಿಕ್ರೋನ್ ಸೋಂಕಿನ ಸಾಮಾನ್ಯ ಲಕ್ಷಣವೆಂದರೆ ಜ್ವರ, ಕೆಮ್ಮು, ಗಂಟಲು ನೋವು, ತಲೆನೋವು ಹಾಗೂ ಕಣ್ಣು ಬಣ್ಣಕ್ಕೆ ತಿರುಗುವುದು.
        ಯಾರಿಗಾದರೂ ಜ್ವರ, ಕೆಮ್ಮು ಬಂದಿದ್ದರೆ ಯಾರು ಹೆದರಬೇಡಿ, ಚಿಕಿತ್ಸೆ ಮಾಡಿಕೊಳ್ಳಿ ಧೈರ್ಯದಿಂದ ಇರಿ, ಧೈರ್ಯ ಇದ್ದರೆ ಜೀವ ನಮ್ಮ ಕೈಯಲ್ಲಿ ಇರುತ್ತೆ, ಧೈರ್ಯ ಕಳೆದುಕೊಂಡರೆ ಜೀವ ಕಳೆದುಕೊಳ್ಳಬೇಕಾಗುತ್ತೆ, "ನಮ್ಮ ಜೀವ ನಮ್ಮ ಕೈಯಲ್ಲಿದೆ" ಅದಕ್ಕೆ ಏನೇ ಆಗಲಿ ಧೈರ್ಯದಿಂದ ಎದುರಿಸಿ.
             ಈ ಒಮಿಕ್ರೋನ್ ನಿಂದ ದೂರವಿರಬೇಕಾದರೆ ನಮ್ಮ ಪ್ರಯತ್ನ ನಾವು ಮಾಡಲೇಬೇಕು, ನಮ್ಮ ದೇಹಕ್ಕೆ ನಾವು ಸುರಕ್ಷಿತವಾಗಿ ಇಟ್ಟಿಕೊಳ್ಳಬೇಕು, ಸುರಕ್ಷಿತವಾಗಿ ಹೇಗೆ ಇಟ್ಟುಕೊಳ್ಳಬೇಕೆಂದು  ನಿಮಗೆ ಗೊತ್ತೇ ಇದೆ. ನಿಯಮಗಳನ್ನು ಪಾಲಿಸಲೇಬೇಕು, ಮಾಸ್ಕ್, ಸೈನಿಟೈಜರ್ ಬಳಸಲೇಬೇಕು,
ನಮ್ಮ ಪ್ರಯತ್ನ ನಾವು ಮಾಡಲೇಬೇಕು.
"ನಮ್ಮ ಪ್ರಯತ್ನ ನಾವೇ ಮಾಡೋಣ ಮುಂದೆ ಏನಾಗುತ್ತೋ ನೋಡೋಣ"
- ವೈಷ್ಣವಿ ರಾಜಕುಮಾರ್,
 ಕರಕ್ಯಾಳ, ಔರಾದ,  ಬೀದರ್


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸೂರ್ಯ ನಕ್ಕನು (ಕವಿತೆ) - ರಾಜು ನಂಜಪ್ಪ

ಬಂಗಾರದ ಹುಡಿಯೆರಚಿ
ಕಡಲ ತುದಿಯ ಕೊನೆಗೆ
ಕೆಂಬಣ್ಣದ ಬಣ್ಣವೆರಚಿ
ಅಗಸದ ಚಾವಣಿಯ ಕೆಳಗೆ!!!1!!!

ಇದು ಬರೀ ಕಡಲಲ್ಲ
ಇದು ಬರೀ ಉಪ್ಪು ನೀರಲ್ಲ
ಇದು ಬಂಗಾರದ ನೀರು
ಇದು ಸೌಂದರ್ಯದ ಬೀರು!!!2!!!

ಸೂರ್ಯ ನಕ್ಕನು
ಚಿನ್ನದ ಹುಡಿಯೆರಚಿ
ತೀರದ ಮರಳೆಲ್ಲ
ಬಂಗಾರವಾಗಿದೆ!!!3!!!

ಶರದಿ ಎಷ್ಟು ಬಾಚಿದರೂ 
ಮುಗಿಯದ ನಿಧಿಯು
ಎಷ್ಟು ನೋಡಿದರೂ
ಮುಗಿಯದ ಕೊನೆಯು !!!4!!!
✍️ ರಾಜು ನಂಜಪ್ಪ 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಅಮ್ಮ (ಕವಿತೆ) - ಮಣಿಕಂಠ ಗೌಡ

ಅಮ್ಮ......
ಅಮ್ಮ ನಿನ್ನ ಕುರಿತು ನಾ ಏನ ಹೇಳಲಿ 
ಅಕ್ಷರಗಳೇ ಸಾಲದು ನನಗಿಲ್ಲಿ..... !!

ಸೃಷ್ಟಿಯಲ್ಲಿ ಮೊದಲಿಗೆ ಜನಿಸಿದೆ ನೀನು 
ದೇವರಿಗಿಂತ ಮಿಗಿಲು ನೀನು.... !!

ನನ್ನ ಭಾವನೆಗಳ ನಾ ಹೇಳದೇನೆ ಅರಿತವಳು ನೀ 
ನನ್ನ ಕೈ ಬೆರಳ ಹಿಡಿದು ನಡೆಸಿದವಳು ನೀ 
ನನ್ನ ಕಂದ ಅಂದಾಗ ನೀ 
ನಾ ಅರಿತೇ ಮೊದಲಿಗೆ ನಿನ್ನ ದನಿ 
ನೀ ಇಲ್ಲದೆ ಈ ಜೀವ ಭೂಮಿಗೆ ಬರಲಾರದು 
ಮಹಾ ತ್ಯಾಗಕ್ಕೆ ಆಗಿರುವೆ ನಾನು ಋಣಿ... !!

ನಾ ಕಣ್ಣ ತೆರೆದಾಗ 
ಮೊದಲು ನಿನ್ನ ಕಂಡಾಗ 
ಮೊದಲ ಖುಷಿ ನನಗೆ ನಿನ್ನ ನೋಡಿದಾಗ 
ತುತ್ತ ನಿಟ್ಟು ಮುತ್ತ ನಿಟ್ಟು ಮಗುವಿನ ನಗುವಲಿ ನಿನ್ನ ನೋವ ಮರೆಯುವೆ 
ನಿನ್ನ ಋಣ ತೀರಿಸಲು ಪ್ರತಿ ಜನ್ಮದಲ್ಲೂ ನಿನ್ನ ಮಗುವಾಗಿ ನಾ ಹುಟ್ಟುವೆ...... !!

ನೆರಳು ನೀಡುವ ವೃಕ್ಷವು ನೀನು 
ನಿನ್ನಡಿಯಲಿ ಬೆಳೆದ ಚಿಗುರು ನಾನು 
ಮಾತು ಕಲಿಸಿದ ಮೊದಲ ಗುರು ನೀನು 
ವರ್ಣಿಸಿದರು ಮುಗಿಯದ ಮಾತು ನೀನು..... !!

ಮುದ್ದು ಮನಸಿನ ಮಗು ನಗಲು ಕಾರಣ ನೀನಾದೆ 
ಅಳುತಿದೆ ಕಾರಣ ನೀನಿಲ್ಲದೆ 
ನೆರಳ ನೀಡಿದೆ ನಿನ್ನ ಸೆರಗಿನ ಮರೆಯಲ್ಲಿ 
ಅಮ್ಮ ಮತ್ತೆ ಮಗುವಾಗುವೇ ನಿನ್ನ ಮಡಿಲಲ್ಲಿ...... !!
- ಮಣಿಕಂಠ ಗೌಡ 
ಶಿರಸಿ (ಉ. ಕ )
9482079553



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನನ್ನ ದೇಶ-ನನ್ನ ಹೆಮ್ಮೆ (ಕವಿತೆ) - ಹನುಮಂತ ಹೊಗರನಾಳ

ಹಾರಲಿ ಹಾರಲಿ ಆಕಾಶದ ಮಟ್ಟಕೆ
ಭಾರತಾಂಬೆಯ ತ್ರಿವರ್ಣ ಭಾವುಟ,
ಧೈರ್ಯ, ಶಾಂತಿ, ಸಮೃಧ್ಧಿಯ ಸಂಕೇತ
ಮಧ್ಯದೀ ಬೌಧ್ಧ ಧಮ್ಮದ ನೀತಿಯ ಚಕ್ರ....!!

ಕೈ ಎತ್ತಿ ಹೊಡೆಯುವೆವು ಬಾವುಟಕೆ ಸೆಲ್ಯೂಟ್
ವಿಶ್ವದೆಲ್ಲೆಡೆ ತೋರುವೆವು ಎಲ್ಲದರಲ್ಲೂ ಟ್ಯಾಲೆಂಟ್,
ಸಂಸ್ಕೃತಿ-ಆಚರಣೆಯಲಿ ನಾವೇ ಗ್ರೇಟ್
ದೇಶದ ರಕ್ಷಣೆಯಲಿ ನಮ್ಮ ಸೈನ್ಯವೇ ಸ್ಟ್ರಿಕ್ಟ್...!!

ದೇವಮಾನವರ ತಾಣ ನನ್ನದು
ದೇವಭಾಷೆಯ ಲಿಪಿಯು ನನ್ನದು,
ಶಾಸನಗಳ ಸರಮಾಲೆಯು ನನ್ನದು
ವಜ್ರ-ವೈಡೂರ್ಯಗಳ ಸಂಪತ್ತು ನನ್ನದು...!!

ರಾಜಮನೆತನಗಳ ರಂಗಭೂಮಿ ನನ್ನದು
ಖನಿಜ-ಸಂಪತ್ತಿನ ಸಾಗರ ನನ್ನದು,
ರಾಮಾಯಣ-ಮಹಾಭಾರತಗಳ ದೇಶ ನನ್ನದು
ವಿಶ್ವಕ್ಕೆ ಹೆಸರಾದ ಸಂವಿಧಾನ ನನ್ನದು....!!

ಆವಿಷ್ಕಾರಗಳ ಅವತಾರ ನನ್ನ ದೇಶ
ಜ್ನಾನಪೀಠಗಳ ಆಸ್ಥಾನ ನನ್ನ ದೇಶ,
ವಿಶ್ವ ಗುರು, ವಿಶ್ವ ಶಾಂತಿ, ವಿಶ್ವ ಜ್ಞಾನಿಯ ಹೆಮ್ಮೆಯ ನನ್ನ ದೇಶ.....!!
 - ಹನುಮಂತ ಹೊಗರನಾಳ


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಜಗದ ಕಣ್ಣು ನೀ (ಕವಿತೆ) - ನಂದಿನಿ ರಾಜಶೇಖರ್

ಬದುಕೆಂಬ ರಂಗ ಮಂದಿರದಲ್ಲಿ
ಇರುವೆ ನೀ ಹಲವಾರು  ಪಾತ್ರಗಳಲಿ
ಪೊರೆಯುವೆ ಅಕ್ಕನಾಗಿ ತಂಗಿಯಾಗಿ  
ಸಲಹುವೆ ತಾಯಿಯಾಗಿ ಹೆಂಡತಿಯಾಗಿ
ಕ್ಷಮಯಾ ಧರಿತ್ರಿ ನೀ
 ವಾತ್ಸಲ್ಯಮಯಿ ಸ್ಫೂರ್ತಿ ಸೆಲೆ ನೀ
ನೋವುಂಡರೂ ಆಳುವ ಮರೆ ಮಾಚುವೆ
ಎಲ್ಲ ಮರೆತು ಮುದದಿ
ನಗುವ ಚೆಲ್ಲವೆ
ಕೊಚ್ಚಿ ಹೋಗಲಿ  ನಡೆಯುವ ಅನಾಚಾರಗಳು
 ಕೊನೆಯಾಗಲಿ ಹಾಳು ಅನಾಹುತಗಳು
ಮೂಡಲಿ ನಮ್ಮಲ್ಲಿ ಆತ್ಮರಕ್ಷಣೆಯ ಪಾಠದ ಅರಿವು
ರಕ್ಷಿಸಿ ಸಂರಕ್ಷಿಸೋಣ ಸ್ತ್ರೀಯ ಇರುವು
ಒಲಿದರೆ ಮಾತೆಯಾಗುವೆ
 ಮುನಿದರೆ ಮಾರಿಯಾಗುವೆ
ಸೃಷ್ಟಿಯ ಅದ್ಭುತ ನೀನು
 ಸೋಜಿಗಕ್ಕೆ ನಿಲುಕದ ಮಿನುಗು ನೀನು 
ಉರಿಯುವ ಕೆಂಡದಂತಹಾ ಕಿಡಿಗಳಿವೆ ನಿನ್ನಲ್ಲಿ
ಬರುವ ಕಣ್ಣೀರ ಕಟ್ಟಿ ಹಾಕು ಧೈರ್ಯದಲಿ
ಭ್ರಮೆಗಳಾಚೆ ಸಾಗಿ ವಾಸ್ತವದಲಿ
ನಿನ್ನ ಗುರುತು ಕಂಡುಕೊ ಬಾಳಲಿ
ಬೇಡದ ಮಾನದಂಡಗಳಾಚೆ ಹೆಜ್ಜೆ ಇಡು
ಫೀನಿಕ್ಸ್ ನಂತೆ ಮತ್ತೆ ಆಸೆಯ ರೆಕ್ಕೆಗಳ ಬಡಿದು ಬೇಲಿಯ ದಾಟು
ಆಕಾಶವನೇ ಮುಟ್ಟಲಿ ನಿನ್ನ ಯಶೋಗಾಥೆ
ನೀ ಆಗು ಅನೇಕರಿಗೆ ಸ್ಫೂರ್ತಿ ದಾತೆ
- ನಂದಿನಿ ರಾಜಶೇಖರ್, ಹಾಸನ 


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ನಿಸರ್ಗ ಸೃಷ್ಟಿ (ಕವಿತೆ) - ಶಾಂತಾರಾಮ ಶಿರಸಿ

ಎಲ್ಲವೂ ಸಹಜ - ದೃಷ್ಟಿಗೆ ಬಲು ಸುಂದರ,
"ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಒಪ್ಪುವ ವಿಚಾರ... 

ಈ ನಿಸರ್ಗವೇ ಸೃಷ್ಟಿಕರ್ತನ ಅದ್ಭುತ! ಸೃಷ್ಟಿ, 
ನಿಸರ್ಗ ನಿರ್ಮಿತ ರಮಣೀಯ-ನಯನ ಮನೋಹರ ಸುಂದರ ಕ್ಷಣಗಳ -ದೃಶ್ಯಗಳ ಆಸ್ವಾದಿಸುವುದು ಈ ನಮ್ಮ ದೃಷ್ಟಿ.. 

ಸೃಷ್ಟಿಯಲ್ಲಿನ ಸಹಜವಾದ ಸುಂದರ ದೃಶ್ಯಗಳು ಹಲವು, 
ನಮ್ಮ ದೃಷ್ಟಿಗೆ ಗೋಚರವಾಗುವಂತಹವು ಕೆಲವು, 
ನಿಸರ್ಗ ನಿರ್ಮಿತ ಸುಂದರ ಕ್ಷಣಗಳ ಆಸ್ವಾದಿಸುವುದೇ ರೋಮಾಂಚನ, 
ಈ ಸೌಂದರ್ಯಕ್ಕೆ ಸೂರೆಗೊಳ್ಳುವವು ಈ ಮೈ-ಮನ..

ಮನುಷ್ಯನ ಸಹಜ ಬಣ್ಣ ನೋಡಿ ದೂರ ತಳ್ಳುವರು, 
ಆತನ ಒಳ್ಳೆಯ ಗುಣವನ್ನ ಯಾರೂ ನಂಬಲಾರರು,
ಬಣ್ಣವ ನೋಡದೇ ವ್ಯಕ್ತಿಯ ಗುಣಕ್ಕೆ ತಲೆಬಾಗುವವರು ಕೆಲವರು,

ಮನುಜನ ಸಹಜ ಬಣ್ಣ -ಗಣಕ್ಕೆ ಬೆಲೆಯಿಲ್ಲ, 
ಹಣದ ಮದದಿಂದ ಕೃತಕ ಬಣ್ಣ-ಗುಣಗಳ ಹಿಂಬಾಲಿಸುವವರೆಲ್ಲ,
ಈಗಿನ ಕಾಲದಲ್ಲಿ ಮುಖಕ್ಕೆ ಮೆತ್ತಿಕೊಂಡ ಮೇಕಪ್ ನ ಕೃತಕ ಬಣ್ಣಗಳ ನೋಡಿ ಮರುಳಾಗಿ ಹಿಂದೆಯೇ ಹಿಂಬಾಲಿಸುವವರು ತುಂಬಿಹರು ಸುತ್ತೆಲ್ಲ, 
ಮುಖಕ್ಕೆ ಮೆತ್ತಿಕೊಂಡ ಬಣ್ಣಕ್ಕಿಂತ ಧರಿಸಿರುವ ಮುಖವಾಡಗಳು ಯಾರಿಗೂ ಕಾಣಿಸುವುದಿಲ್ಲ, 
ಬಣ್ಣವನು ತೊಳೆದ ಮೇಲೆ- ಮುಖವಾಡಗಳು ಕಳಚಿದ ಮೇಲೆ ಏನೂ ಪ್ರಯೋಜನವಿಲ್ಲ, 
ನಂಬಿಕೆಯೇ ಸುಳ್ಳಾಗಿ ಹೋಯಿತಲ್ಲಾ ಎಂದು ಮರುಗುವುದು ಮಾತ್ರ ತಪ್ಪಿದ್ದಲ್ಲ... 

ಸಹಜ ಸುಂದರ ಬಣ್ಣಗಳ ಆಸ್ವಾದಿಸೋಣ,
ವ್ಯಕ್ತಿಯ ಬಣ್ಣ ಕಪ್ಪಾಗಿದ್ದರೂ ಗುಣಕ್ಕೆ ಗೌರವ ನೀಡೋಣ,
ಮುಖಕ್ಕೆ ಮೆತ್ತಿಕೊಂಡ ಬಣ್ಣವ ಕಂಡು ಹಿಂಬಾಲಿಸದಿರೋಣ, 
ಮುಖವಾಡಗಳ ನಂಬಿ ಮೋಸಹೋಗದಿರೋಣ.. 

ಬದುಕಿದು ಬಗೆ-ಬಗೆಯ ಬಣ್ಣ, 
ಕೆಲವೊಮ್ಮೆ ಕಪ್ಪು-ಕೆಲವೊಮ್ಮೆ ಬಿಳುಪು ಹಾಗೇ ಕೆಲವೊಮ್ಮೆ ರಂಗುರಂಗಾಗಿರುತ್ತೆ ಈ ಬದುಕಿನ ಬಣ್ಣ, 
ಯಾವುದೇ ಬಣ್ಣದ ಬದುಕಿದ್ದರೂ ನಿತ್ಯವೂ ದಾರಿಯಲಿ ಸಾಗುತಲಿರೋಣ, 
ಸಾಗುವ ದಾರಿಯುದ್ದಕ್ಕೂ ಪ್ರೀತಿಯ ಸವಿಯ ತುತ್ತನು ಉಣಿಸುತ ಸಾಗೋಣ...

ನೋಡಲು ಎಲ್ಲವೂ ಸಹಜ - ದೃಷ್ಟಿಗೆ ಬಲು ಸುಂದರ, 
ಕೆಲವು ಬಣ್ಣಗಳು-ಮುಖವಾಡಗಳು ಭೀಕರ-ಭಯಂಕರ,
ಭಯ ಬೇಡವೇ ಬೇಡ ಸೃಷ್ಟಿಕರ್ತನೇ ನಮ್ಮ ಜೊತೆಗಾರ,
ಈ ಬದುಕೇ ಬಹಳ ಚಿತ್ರ- ವಿಚಿತ್ರ,
ಬಯಸಿದಂತಲ್ಲ ಬದುಕು ಬಂದಂತೆ ಸಾಗುತಿರುವ ನಿರಂತರ.....
- ಶಾಂತಾರಾಮ ಶಿರಸಿ,
ಉತ್ತರ ಕನ್ನಡ...
8762110543
7676106237



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಹೇ ಕೋಮಲೆ (ಕವಿತೆ) - ನಾಗೇಶ್ ಎಸ್.ಆರ್.ಸಿ.

 ನೀ ನನ್ನಲ್ಲೆ
ಬಾನಂಗಳದಿ ತುಸು ಮೆಲ್ಲನೆ
ಕಾಲಿಟ್ಟೆ ನನ್ನ ಹೃದಯದಂಗಳದಿ
ಹೃದಯ ಜಪಿಸುವ ಮುನ್ನ ಏಕೆ 
ನೀ ದೂರಾ ಹೊರಟೆ
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕುವೇನೆ...

ಕೆಂಪಾನ ಗುಲಾಬಿ ನಿನ್ನ ಮುಡಿಗೆ ತರುವೆ
ಅಂದದ ನನ್ನ ಅರಗಿಣಿಗೆ
ಚಂದದ ಬಳೆಯ ತೊಡಿಸುವೆ
ಸಿಂಗಾರದಿ ವೈಯಾರ ಮಾಡಿ
ಈ ಪುಟ್ಟ ಹೃದಯದಲ್ಲಿ ಕೊರಿಸುವೆ
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕುವೇನೆ...

ಗುಬ್ಬಿಯ ಗೂಡಂತೆ ಬೆಚ್ಚಗೆ ಕಾಯುವೆ ನೋವು ನಲಿವಿನಲು..
ನೀ ನೊಂದರು ನಾ ಅಳುವೆ
ಜೋಪಾನವಾಗಿ ಜೋಗುಳ ಹಾಡುವೆ..
"ಹೇಳೆ ಚಲುವೆ ನೀ ನಿಲ್ಲದೆ
ನಾ ಬದುಕವೇನೆ...
                  
- ನಾಗೇಶ್ ಎಸ್.ಆರ್.ಸಿ.



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಮಾನವತಾ ಮಿತ್ರ (ಕಿರು ಲೇಖನ) - ಭವ್ಯ ಟಿ.ಎಸ್.

ಸ್ವಾಮಿ ವಿವೇಕಾನಂದರು ಪರಿಪೂರ್ಣ
ವ್ಯಕ್ತಿತ್ವದ ಸಾಕಾರ ಮೂರ್ತಿಯಾಗಿದ್ದಾರೆ.ಅವರ
ಜೀವನ ಪ್ರತಿಯೊಬ್ಬರ ಬದುಕಿಗೆ ನವಚೈತನ್ಯ 
ತುಂಬುವ ಸ್ಫೂರ್ತಿಧಾರೆಯಾಗಿದೆ.ನಿಸ್ತೇಜನಾದ
ಯಾವುದೇ ವ್ಯಕ್ತಿಯ ಬದುಕಿನ ಅಂಧಕಾರವನ್ನು
ಹೋಗಲಾಡಿಸಿ,ಹೊಸ ಬೆಳಕಿನತ್ತ ಕೊಂಡೊಯ್ಯುವ
ಶಕ್ತಿಯ ಚಿಲುಮೆಯಾಗಿದೆ.

ಸ್ವಾಮಿ ವಿವೇಕಾನಂದರು ಕ್ರಿಸ್ತಶಕ ೧೮೬೩
ಜನವರಿ ೧೨ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿ
ದೇವಿಯರ ಸುಪುತ್ರರಾಗಿ ಕಲ್ಕತ್ತಾದಲ್ಲಿ ಜನಿಸಿದರು.
ನರೇಂದ್ರ ನೆರೆಹೊರೆಯವರೊಂದಿಗೆ,ಬಂಧುಗಳೊಂದಿಗೆ
ಪ್ರೀತಿಯಿಂದ ಬೆರೆಯುವ ಬಾಲಕನಾಗಿದ್ದ.ಪ್ರಾಣಿ
ಪಕ್ಷಿಗಳೆಂದರೆ ಅವನಿಗೆ ಅತೀವವಾದ ಪ್ರೇಮವಿತ್ತು.
ತುಂಟತನವೂ ಅವರ ಸ್ವಭಾವವಾಗಿದ್ದು,ಅಂಜಿಕೆ,
ಬೆದರಿಕೆಗಳಿಗೆ ತಗ್ಗುತ್ತಿರಲಿಲ್ಲ.ಅವರಿಗೆ ಎಂಟುವರ್ಷ
ತುಂಬಲು,ಈಶ್ವರ ಚಂದ್ರ ವಿದ್ಯಸಾಗರರ ಶಾಲೆಗೆ
ಸೇರಿಸಿದರು.ತನ್ನ ಬುದ್ಧಿಕೌಶಲ್ಯದಿಂದ ಅಲ್ಲಿನ
ಉಪಾಧ್ಯಾಯರೆಲ್ಲರಿಗೂ ಪ್ರಿಯ ವಿದ್ಯಾರ್ಥಿಯಾದರು.
ಕ್ರೀಡೆಯಲ್ಲಿಯೂ ಅವರು ಅತ್ಯಂತ ಚುರುಕಾಗಿದ್ದರು.
ಹೊಸಹೊಸ ಆಟಗಳನ್ನು ಕಂಡುಹಿಡಿದು,ಸ್ನೇಹಿತರನ್ನು
ಸಂತೋಷಪಡಿಸುತ್ತಿದ್ದರು.ಕಾಲೇಜಿಗೆ ಸೇರಿದ ಮೇಲೆ
ವಿಚಾರ ಪ್ರಚೋದಕ ಪುಸ್ತಕಗಳು,ವೃತ್ತ ಪತ್ರಿಕೆಗಳನ್ನು
ಓದಲಾರಂಭಿಸಿದರು.ಸಾಹಿತ್ಯ, ಇತಿಹಾಸ, ಖಗೋಳ
ಶಾಸ್ತ್ರ, ತತ್ವ ಶಾಸ್ತ್ರ, ತರ್ಕ ಮುಂತಾದ ವಿಷಯಕ್ಕೆ
ಸಂಬಂಧಿಸಿದ ಪುಸ್ತಕಗಳನ್ನು ಓದುತ್ತಿದ್ದರು.ಹಾಗೆಯೇ
ಅವರ ವಾಕ್ಚಾತುರ್ಯದಿಂದ ಎಲ್ಲರನ್ನೂ ಮಂತ್ರ
ಮುಗ್ಧಗೊಳಿಸುತ್ತಿದ್ದರು.ಕ್ರಮೇಣ ಅವರ ಜೀವನದಲ್ಲಿ
ಆಧ್ಯಾತ್ಮಿಕ ತೃಷೆ ಹೆಚ್ಚಾಗತೊಡಗಿತು.ಒಮ್ಮೆ ಅವರು
ಕೆಲವು ಸ್ನೇಹಿತರೊಡನೆ ಶ್ರೀ ರಾಮಕೃಷ್ಣರನ್ನು ನೋಡಲು ದಕ್ಷಿಣೇಶ್ವರಕ್ಕೆ ಹೋಗುತ್ತಾರೆ. ಅವರಿಂದ
ಪ್ರಭಾವಿತರಾಗಿ ಅವರ ಶಿಷ್ಯರಾಗುತ್ತಾರೆ.

ವಿಶ್ವನಾಥದತ್ತರ ಆಕಸ್ಮಿಕ ಮರಣದಿಂದ
ಕುಟುಂಬದ ಜವಾಬ್ದಾರಿ ನರೇಂದ್ರರರು ನಿಭಾಯಿಸ
ಬೇಕಾದ ಪರಿಸ್ಥಿತಿ ಎದುರಾಯಿತು. ಸಂಸಾರ ಜೀವನದಲ್ಲಿ ನಿರಾಸಕ್ತಿ ಹೊಂದಿದ್ದ ಅವರು ಸನ್ಯಾಸಿ
ಗಳಾಗಲು ನಿರ್ಧರಿಸುತ್ತಾರೆ. ಶ್ರೀರಾಮಕೃಷ್ಣರ 
ಮರಣದ ನಂತರ ಸನ್ಯಾಸದೀಕ್ಷೆ ಸ್ವೀಕರಿಸುತ್ತಾರೆ.
ವಿದೇಶಕ್ಕೆ ಹೊರಡುವ ಮುನ್ನ ವಿವೇಕಾನಂದ 
ಎಂಬ ಹೆಸರನ್ನು ಇಟ್ಟುಕೊಂಡರು.ಕಾಶಿಯಿಂದ
ಕನ್ಯಾಕುಮಾರಿಯವರೆಗೂ ಭಾರತದ ಉದ್ದಗಲಕ್ಕೆ
ಸಂಚರಿಸಿ ತಮ್ಮ ಜ್ಞಾನದ ಸಾರವನ್ನು ಹರಡಿದರು.
೧೧-೦೯-೧೮೯೩ರಂದು ಚಿಕಾಗೋ ಸರ್ವಧರ್ಮ
ಸಮ್ಮೇಳನದಲ್ಲಿ ಮಾತನಾಡುತ್ತಾ ಅವರು "ಸ್ವಮತಾ
ಭಿಮಾನ,ಅನ್ಯಮತದ್ವೇಷ ಮತ್ತು ಇವುಗಳಿಂದ
ಉತ್ಪನ್ನವಾದ ಘೋರ ಧಾರ್ಮಿಕ ದುರಭಿಮಾನಗಳು
ಈ ಸುಂದರ ಜಗತ್ತನ್ನು ಆವರಿಸಿಕೊಂಡಿವೆ..ಇಂತಹ
ಉಗ್ರ ಧರ್ಮಾಂಧತೆಯ ದೈತ್ಯರಿಲ್ಲದೇ ಇದ್ದರೆ
ಮಾನವ ಜನಾಂಗ ಇಂದಿಗಿಂತ ಎಷ್ಟೋ ಮುಂದು
ವರೆಯುತಿತ್ತು"ಎಂದರು.
ಕುವೆಂಪು ಅವರು ಹೇಳುವಂತೆ ಅವರು
ಮಾನವತಾ ಮಿತ್ರರಾಗಿದ್ದರು.ಅವರಿಂದ ಇಂದಿನ
ಯುವಜನತೆ ಕಲಿಯಬೇಕಾದ ಬಹುಮುಖ್ಯ
ಮೌಲ್ಯವೆಂದರೆ ಮನುಷ್ಯತ್ವ."ಮನುಷ್ಯತ್ವದ 
ಮಹಿಮೆಯನ್ನು ಎಂದಿಗೂ ಮರೆಯಬೇಡಿ"
ಎಂದು ಘೋಷಿಸಿದರು.ದೀನದಲಿತರ ಉದ್ಧಾರವೇ
ಅವರ ಮೊದಲ ಆದ್ಯತೆಯಾಗಿತ್ತು.ಹಿಂದುಳಿದ
ವರ್ಗಗಳ ಬಗ್ಗೆ ಅವರಿಗೆ ಸಾಮಾಜಿಕ ಕಳಕಳಿಯಿತ್ತು.
ಜಾತಿವ್ಯವಸ್ಥೆಯನ್ನು ವಿರೋಧಿಸಿದರು.ಬಡವರ
ಹೊಟ್ಟೆ ಹಸಿವನ್ನು ಹಿಂಗಿಸಬೇಕು ಎಂದು ಹೇಳಿದರು.
"ಶಕ್ತಿಯೇ ಜೀವನ;ದೌರ್ಬಲ್ಯವೇ ಮರಣ",
"ಏಳಿ,ಎದ್ದೇಳಿ ಗುರಿ ಮುಟ್ಟುವವರೆಗೂ ನಿಲ್ಲದಿರಿ"
ಎಂದು ಭಾರತದ ಯುವಶಕ್ತಿಗೆ ಕರೆ ನೀಡಿದರು.
"ಭವಿಷ್ಯ ಭಾರತದ ನಿರ್ಮಾಣವು ತಮ್ಮ ಕಾಯಕವನ್ನು
ಆಧರಿಸಿದೆ", ಸ್ತ್ರೀಯರ ಸ್ಥಾನಮಾನವನ್ನು ಉನ್ನತೀಕರಿಸಿದರೆ ಮಾತ್ರ ಅವರ ಮಕ್ಕಳು ಉದಾತ್ತ
ಉನ್ನತ ಕಾರ್ಯಗಳಿಂದ ದೇಶದ ಹೆಸರನ್ನು
ಉಜ್ವಲಗೊಳಿಸುತ್ತಾರೆ; ಆಗ ಸಂಸ್ಕೃತಿ, ಜ್ಞಾನ, ಶಕ್ತಿ
ಮತ್ತು ಭಕ್ತಿ ಇವು ದೇಶದಲ್ಲಿ ಜಾಗೃತವಾಗುತ್ತವೆ
ಎಂಬ ಮಹತ್ವದ ಸಂದೇಶ ನೀಡಿದರು.

ಸ್ವಾಮಿ ವಿವೇಕಾನಂದರು ತಮ್ಮ ಮೂವತ್ತೊಂಬತ್ತನೇ ವಯಸ್ಸಿನಲ್ಲಿ ಪ್ರಾಣತ್ಯಾಗ
ಮಾಡಿದರು.ಇಷ್ಟು ಚಿಕ್ಕ ಜೀವನದಲ್ಲಿ ಅವರು
ಮಾಡಿದ ಸಾಧನೆ ಯುವಜನತೆಗೆ ಒಂದು 
ರೋಮಾಂಚನಕಾರಿ ಅಧ್ಯಾಯವಾಗಿದೆ.
ಭಾರತದ ಯುವಶಕ್ತಿ ವಿವೇಕಾನಂದರ ತತ್ವಗಳನ್ನು
ಜೀವನದಲ್ಲಿ ಅಳವಡಿಸಿಕೊಂಡಾಗ ಭವ್ಯ ಭಾರತ
ನಿರ್ಮಾಣದ ಅವರ ಕನಸು ಖಂಡಿತವಾಗಿಯೂ
ನನಸಾಗುತ್ತದೆ.
- ಭವ್ಯ ಟಿ.ಎಸ್.
ಶಿಕ್ಷಕರು.ಹೊಸನಗರ
ಶಿವಮೊಗ್ಗ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ವರ್ಷದ ಮೊದಲ ಹಬ್ಬ (ಕವಿತೆ) - ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ

ವರ್ಷದ ಮೊದಲ ಹಬ್ಬ
ನಮ್ಮ ಸಂಕ್ರಾಂತಿ ಹಬ್ಬ 
ಎಳ್ಳು ಬೆಲ್ಲದ ಹಬ್ಬ
ಎಳ್ಳ್ಳು ಬೆಲ್ಲವನ್ನು ಬೆರಸಿ ಪ್ರೀತಿ ಸ್ನೇಹಗಳ ಹಂಚುವ ಹಬ್ಬ
ನಮ್ಮ ಈ ಸಂಕ್ರಾಂತಿ ಹಬ್ಬ..

 ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು
ಇಡುವ ಹಬ್ಬ..
ಕತ್ತರಿಸಿದ ಬೆಲ್ಲ, ಒಣ ಕೊಬ್ಬರಿ, ಹುರಿಗಡಲೆ, ಕಡಲೇಕಾಯಿ ಬೀಜ ಹಾಗೂ ಹುರಿದ ಬಿಳಿ ಎಳ್ಳು ಇವೆಲ್ಲವುಗಳ ಮಿಶ್ರಣವೇ ನಮ್ಮ ಹೆಮ್ಮೆಯ  ಹಬ್ಬ.. 

 ರೈತರಿಗೆ ಖುಷಿಯ ಹಬ್ಬ..
ಮಕ್ಕಳ ಸುಗ್ಗಿಯ ಹಬ್ಬ.  
ಪುಟ್ಟ ಮಕ್ಕಳ ಸಂಭ್ರಮದ ಹಬ್ಬ
ಬಣ್ಣ ಬಣ್ಣದ ಚಿತ್ತಾರಗಳ ಹಬ್ಬ
ರಂಗು ರಂಗಿನ ರಂಗೋಲಿ ಗಳ  ಹಬ್ಬ ..ನಮ್ಮ ಈ  ಸಂಕ್ರಾತಿಯ ಹಬ್ಬ.. 

 ಹೊಸ ಬಟ್ಟೆಗಳ ಧರಿಸಿ
ಚಿಣ್ಣರು ಸಂಭ್ರಮಿಸುವ ಹಬ್ಬ..
ಪ್ರೀತಿ ಪ್ರೇಮ ಬಾಂಧವ್ಯ ಬೆಸೆಯುವ ಹಬ್ಬ.. 
ಎಳ್ಳುಬೆಲ್ಲ ಹಂಚುತ್ತಾ ಸಂಬಂಧಗಳ ಗಟ್ಟಿಗೊಳಿಸುವ ಹಬ್ಬ..
ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ..
ನಾಡಿಗೆಲ್ಲ ಒಳ್ಳೆಯ ಸಂದೇಶ ಸಾರೋಣ..

 ಎಲ್ಲರೂ ಸೇರಿ ಹಾಡಿ ಕುಣಿಯುವ ಹಬ್ಬ..
ಭಕ್ಷ್ಯ ಭೋಜನಗಳನ್ನು ಸವೆಯುವ ಹಬ್ಬ..
ಹಸು ಗೋಮಾತೆ ಗಳನ್ನ     ಸಿಂಗರಿಸಿ ಪೂಜಿಸುವ ಹಬ್ಬ..
ಇದುವೇ ನಮ್ಮ ಸಂಕ್ರಾಂತಿ ಹಬ್ಬ..

 ನಮ್ಮ ಕನ್ನಡ ನಾಡಿನ ಹೆಮ್ಮೆಯ ಹಬ್ಬ..
ನಮ್ಮ ಆಚಾರ ವಿಚಾರ ಸಂಸ್ಕೃತಿಯ ಯಾನ್ನು ಉಳಿಸುವ ಹಬ್ಬ..
ಮುತೈದೆಯರಿಗೆ ಬಾಗಣ 
ನೀಡುವ ಹಬ್ಬ..
ಮಕರ ಸಂಕ್ರಾಂತಿ ಹಬ್ಬದ ಲ್ಲಿಯೇ 
ನಮ್ಮ ಅಯ್ಯಪ್ಪ ಸ್ವಾಮಿಯ
ಜ್ಯೋತಿಯು ಎಲ್ಲೆಡೆ ಬೆಳಗುವ ಹಬ್ಬ..
ಇದುವೇ ವರ್ಷದ ಮೊದಲ ಹಬ್ಬ..
ನಮ್ಮ  ಹೆಮ್ಮೆಯ  ಹಬ್ಬ
ಮಕರ ಸಂಕ್ರಾಂತಿ ಹಬ್ಬ..

✍️ ಶ್ರೀ ಶಿವಮೂರ್ತಿ.ಟಿ ಕೋಡಿಹಳ್ಳಿ 
ಚಳ್ಳಕೆರೆ ತಾ, ಚಿತ್ರದುರ್ಗ ಜಿಲ್ಲೆ..
 # 09742756304 

ದಡ್ಡರಲ್ಲಿ ದಡ್ಡರೋ ನಮ್ಮ ಜನ (ಕವಿತೆ) - ಸಾಬಣ್ಣ.ಎಚ್.ನಂದಿಹಳ್ಳಿ

ಹೆತ್ತ ತಂದೆ-ತಾಯಿಯ ಕ್ಷೇಮ
ವಿಚಾರಿಸದ ಮಗ ರಾಜಕೀಯ
ಪುಡಾರಿಯ ಹೆಂಡತಿ-ಮಕ್ಕಳ
ಹುಟ್ಟು ಹಬ್ಬಕ್ಕೆ ಶುಭಕೋರಿದನಂತೆ!

ಅಣ್ಣ-ತಮ್ಮಂದಿರೊಂದಿಗೆ ಮಾತನಾಡದ
ಮೂರ್ಖ ಸಿನಿಮಾ ಹೀರೋಗಳಾದ
ದರ್ಶನ್ ಯಶ್ ಧ್ರುವ ಸುದೀಪರೇ
ನಮ್ಮಣ್ಣಂದಿರು ಎಂದು ಜಂಭ ಕೊಚ್ಚಿಕೊಂಡನಂತೆ!

ನವಮಾಸ ಹೊತ್ತು - ಹೆತ್ತು ಭುವಿ
ಪರಿಚಯಿಸಿದ ತಾಯಿ-ತಂದೆ ಪ್ರೀತಿಗೆ
ಬೆಲೆ ಕೊಡದ ಮೂರ್ಖ ಸಪ್ತಪದಿ ತುಳಿದ ಹೆಂಡ್ತಿಗೆ ಹೆಚ್ಚೆಚ್ಚು-ಪ್ರೀತಿ ನೀಡ್ತೆನೆಂದನಂತೆ!
- ಸಾಬಣ್ಣ.ಎಚ್.ನಂದಿಹಳ್ಳಿ (ಜೆ)
ತಾ||ಶಹಾಪುರ ಜಿಲ್ಲಾ||ಯಾದಗಿರಿ
ಮೊಬೈಲ್ ನಂಬರ್-7348983463


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕನ್ನಡದ ಉಸಿರ ಉಳಿಸೋಣ (ಕವನ) - ರಂಜಿತ್ ಕುದುಪಜೆ

ಅಮ್ಮ ಎಂದ ಕನ್ನಡ ಬಂಧ
ನವಮಾಸದಿ ಕಲಿಸಿದ ಅನುಬಂಧ
ತೊದಲಿನ ನುಡಿಯ ಅಂದದ ಗುಡಿಯು
ನಮ್ಮಯ ಜೀವದ ನಾಡಿಯ ಮಿಡಿತವು

ಮೆಟ್ಟಿದ ನೆಲದಿ ಕಟ್ಟಿದ ನೋವು
ಎದೆಯ ತಟ್ಟುತ ನಿಲ್ಲುವ ನಾವು
ಅಭಿಮಾನದ ಆಶ್ರಯ ಅಪ್ಪಟ ಕನ್ನಡ
ಅದುವೇ ನಿರಾಶ್ರಿತ ಅನ್ಯರ ಕರಿಮೋಡ

ಕಾಯಕವಿರಲಿ ಕಾಳಜಿಯಿರಲಿ
ನಿತ್ಯೋತ್ಸವದ ಪ್ರೇಮವು ಇರಲಿ
ಕನ್ನಡ ಭಾಷೆಯ ಸೊಗಡಿರಲಿ
ಎನ್ನಡ ಎನ್ನುವ ಭಾಷೆಯು ಹೊರಗಿರಲಿ

ಕರಗದಿರಲಿ ಕರುನಾಡ ಭಾಷೆಯು
ಹೃದಯದಲಿ ಅಚ್ಚೊತ್ತಲಿ ಆಶ್ರಯದಾಸೆಯು
ಆಡುವ ಭಾಷೆ ಆಳುವ ಭಾಷೆ
ಅಪ್ಪುತ ಒಪ್ಪುತ ಬೆಳೆಯಲಿ ಭಾಷೆ

ಭುವನೇಶ್ವರಿಯ ಕಣ್ಣೀರ ಒರಸಿ
ಕವಿ ಕಾವ್ಯ ಸಾಹಿತ್ಯವ ಹರಸಿ
ನಿತ್ಯವೂ ಬೆಳಗಿ ಕನ್ನಡ ಆರತಿ
ಬದುಕಲಿ ಕನ್ನಡ ಉಸಿರ ಜ್ಯೋತಿ

    ✍🏻 ರಂಜಿತ್ ಕುದುಪಜೆ
S/o ದಾಮೋದರ ಕೆ. ಡಿ. 
ತಣ್ಣಿಮಾನಿ ಗ್ರಾಮ
ಭಾಗಮಂಡಲ 
ಮಡಿಕೇರಿ - ೫୭೧೨೪୭
ಮೋ : ೯೪೮೦೭೩೨೫೭೬


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಸಂಕ್ರಮಣ (ಕವಿತೆ) - ಸಂಜಯ.ಜಿ.ಕುರಣಿ

ಹೊಸ ವರ್ಷದ  ಹುರುಪಿನಲಿ 
ಮೈ ಕೊರೆಯುವ ಚಳಿಯಲಿ 
ಮತ್ತೆ ಬಂದಿರುವದು 
ಸಂಕ್ರಮಣದ ಕಾಲವಿದು. 

ಭೂ ತಾಯಿಯ ಹಸಿರುಡಗಿಯಲಿ 
ರೈತರ  ಮನಗಳಲ್ಲಿ 
ಸಂತೋಷದ ಸಂಭ್ರಮದಲಿ 
ಆಗಮಣದ ಸಂಕ್ರಮಣ.

ದೇಶದ ಬೆನ್ನೆಲಬು ರೈತ 
ಅನ್ನದ ಒಡೆಯನಿಗೆ 
ಶಾಂತಿ ನೆಮ್ಮದಿ ಸಂತೋಷ 
ಸಂಭ್ರಮ ಸಂಕ್ರಮಣ ತರಲಿ. 

ಭೂಮಿ ಒಡಲಿಗೆ ಹಾಕಿದ 
ಬೀಜ ಗೊಬ್ಬರದ ಭಾರ 
ಆಗದಿರಲಿ ಹೊಗದಿರಲಿ 
ಬಂಪರ ಪಸಲು ಬರಲಿ. 

ಹಸುರಿಗೆ ಉಸಿರನ್ನು ಸೇರಿಸಿ 
ಹೆಸರು ಬಯಸದೆ 
ಮಣ್ಣಿನೋಳಗೆ ಮಣ್ಣಾಗಿ 
ದುಡಿಯುವ ಅಣ್ಣ 
ಕಾಯಕಯೋಗಿ ರೈತ. 

ನಾಡಿನ ನಾವು ನೀವೆಲ್ಲರೂ 
ಪಶು ಪಕ್ಷಿ ಕೀಟಗಳೆಲ್ಲ 
ಸಂಕ್ರಮಣದ ಸಂಭ್ರಮದಲಿ 
ತೇಲೋಣ - ತೇಲಾಡೋಣ
          -  ಸಂಜಯ.ಜಿ.ಕುರಣಿ,  ಶಿಕ್ಷಕರು, ಐನಾಪೂರ 
    ತಾಲೂಕು. ಕಾಗವಾಡ, ಜಿಲ್ಲಾ ಬೆಳಗಾವಿ 
ಮೊಬೈಲ್. 9663065992



(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಭಾನುವಾರ, ಜನವರಿ 16, 2022

ಯಶಸ್ವಿಯಾಗಿ ನಡೆದ ಪುಸ್ತಕ ಓದು - ಸಂವಾದ ಸರಣಿ ೦೧ ಕಾರ್ಯಕ್ರಮ : ವಿಚಾರ ಮಂಟಪ ಸಾಹಿತ್ಯ ಬಳಗ

ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ವಿವೇಕಾನಂದರ ಚಿಂತನೆಗಳ ಓದು - ಸಂವಾದ ಕಾರ್ಯಕ್ರಮವನ್ನು ಹಮ್ಮಿಕ್ಕೊಳ್ಳಲಾಗಿತ್ತು. 
ಇದೇ ಸಂದರ್ಭದಲ್ಲಿ ವಿಚಾರ ಮಂಟಪ ಬಳಗದ ಪುಸ್ತಕ ಓದು - ಸಂವಾದ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಮತಿ ಕಲಾವತಿ ಮಧುಸೂದನ ರವರು ವಿವೇಕಾನಂದರ ಚಿಂತನೆಗಳು ಮತ್ತು ಅವರು ಕಲಿಸಿದ ಮೌಲ್ಯಗಳು ಸರ್ವಕಾಲಕ್ಕೂ ಆದರ್ಶಪ್ರಾಯ ಮತ್ತು ಅನುಕರಣೀಯವಾದವು. ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ವಿವೇಕಾನಂದರನ್ನು ನೆನೆಸಿಕೊಳ್ಳುವ ಅವರ ಚಿಂತನೆಗಳನ್ನು ಓದುವ ಸಂವಾದಿಸುವ ಚರ್ಚಿಸುವ ಇಂತಹಾ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು. ಕೇವಲ ಚರ್ಚೆ ಸಂವಾದಕ್ಕೆ ನಿಲ್ಲದೆ ವಿವೇಕಾನಂದರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಇಂತಹಾ ಕಾರ್ಯಕ್ರಮಗಳನ್ನು ಸಾರ್ಥಕಗೊಳಿಸಬೇಕು.

 ವಿವೇಕಾನಂದರ ಆತ್ಮವಿಶ್ವಾಸದ, ಯುವ ಜಾಗೃತಿಯ, ಶೋಧಕ ಪ್ರವೃತ್ತಿಯ, ಸತ್ಯಾನ್ವೇಷಣೆಯ ಮಾರ್ಗ ನಮ್ಮೆಲ್ಲರದ್ದು ಆಗಲಿ ಎಂದು ಹೇಳಿದರು. ಆಶಯ ನುಡಿಗಳನ್ನು ಆಡಿದ ಶ್ರೀ ರಾಕೇಶ್ ಎಂ. ರವರು ವಿಚಾರ ಮಂಟಪ ಸಾಹಿತ್ಯ ಬಳಗದ ಉದ್ದೇಶ ಮತ್ತು ಪುಸ್ತಕ ಓದಿನ ಮಹತ್ವವನ್ನು ವಿವರಿಸಿದರು. 

ಮುಖ್ಯ ಅತಿಥಿಗಳಾದ ಶ್ರೀ ರಾಜು ಸೂಲೇನಹಳ್ಳಿಯವರು ಮಾತನಾಡುತ್ತಾ ವಿವೇಕಾನಂದರು ತಮ್ಮ ಬಾಲ್ಯದಿಂದಲೇ ಹಲವಾರು ಪುಸ್ತಕಗಳನ್ನು ಓದಿ ಮನನ ಮಾಡುತ್ತಾ ಅವುಗಳ ಮಹತ್ವವನ್ನು ತಿಳಿದು, ಅವುಗಳ ಜ್ಞಾನ ಮತ್ತು ಅನುಭವದ ಮೂಲಕ ಅವರು ಬೆಳೆದು ಜಗತ್ತಿಗೇ ಬೆಳಕನ್ನು ನೀಡುವ, ಬೆಳಕಿನತ್ತ ಕರೆದೊಯ್ಯುವ ಕೆಲಸವನ್ನು ಮಾಡಿರುವರು. ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ವಿವೇಕಾನಂದರದ್ದು. ಅವರು ಸ್ಥಾಪಿಸಿದ ರಾಮಕೃಷ್ಣ ಮಿಷನ್ ಸಂಸ್ಥೆಯು ಇಂದು ಹಲವು ರೀತಿಯ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಅಂತಹವರ ನೆನಪಿನಲ್ಲಿ ಈ ಕಾರ್ಯಕ್ರಮ ಮತ್ತು ಓದು - ಸಂವಾದ ಸರಣಿಯ ಉದ್ಘಾಟನೆ ನಿಜಕ್ಕೂ ಬಹಳ ಹೆಮ್ಮೆಯ ಕೆಲಸ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಸ್ವಾಮಿಯವರ ವೇದಾಂತ ಉಪನ್ಯಾಸ ಮಾಲೆ ಎಂಬ ಪುಸ್ತಕದ ಆಯ್ದ ಭಾಗಗಳನ್ನು  ಬೆಂಗಳೂರಿನ ಶ್ರೀಮತಿ ಅಂಬಿಕಾ, ಯಾದಗಿರಿಯ ಸೋಮೇಶ್ ಪ್ರಚಂಡಿ, ಹಾಸನದ ಭರತ್ ಕೆ.ಆರ್, ಚಿತ್ರದುರ್ಗದ ಶ್ರೀ ಶಿವಮೂರ್ತಿ ಟಿ.,  ಉತ್ತರ ಕನ್ನಡ ಜಿಲ್ಲೆಯ ಶ್ರೀಮತಿ ಸುಮಾ ಹಡಪದ, ರಾಮನಗರದ ಗೌತಮ್ ಗೌಡ ಮುಂತಾದವರು ಓದಿ ಚರ್ಚೆಗೆ ಒಳಪಡಿಸಿದ್ದು ವಿಶೇಷವಾಗಿತ್ತು. ವಿವೇಕಾನಂದರ ಚಿಂತನೆಗಳ ಮಹತ್ವ ಮತ್ತು ಪ್ರಸ್ತುತತೆಯನ್ನು  ಅರಿಯುವ ಪ್ರಯತ್ನ ಮಾಡಲಾಯಿತು.

ಶ್ರೀ ವರುಣ್ ರಾಜ್ ಜಿ. ವಿಚಾರ ಮಂಟಪ ಸಾಹಿತ್ಯ ವೇದಿಕೆ ಸಂಸ್ಥಾಪಕರು, ಇವರು ಮಾತನಾಡುತ್ತಾ ಒಂದು ವರ್ಷದ ಅವಧಿಯಲ್ಲಿ ಒಟ್ಟು ೨೫ ಸರಣಿ ಪುಸ್ತಕ ಓದು - ಸಂವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವ ಜನರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವ, ಪುಸ್ತಕ ಓದಿಗೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರುತ್ತಾ ಓದು ಅಭಿಯಾನದ ಸಂಚಾಲಕರಾದ ಶ್ರೀ ಗೌತಮ್ ಗೌಡ ಸೇರಿದಂತೆ ಸಹಕರಿಸಿದ  ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಫಯಾಜ್ ಅಹಮದ್ ಖಾನ್ ಅಧ್ಯಕ್ಷರು ಕರುನಾಡ ಸಾಹಿತ್ಯ ಪರಿಷತ್ತು ಇವರು ಮಾತನಾಡುತ್ತಾ ವಿವೇಕಾನಂದರ ಚಿಂತನೆಗಳ ಮಹತ್ವ, ಯುವ ಜನತೆಗೆ ವಿವೇಕಾನಂದರ ಚಿಂತನೆಗಳ ಪ್ರಸ್ತುತತೆ, ವಿವೇಕಾನಂದರ ಚಿಂತನೆಗಳ ಚರ್ಚೆ ಸಂವಾದ ಮತ್ತು ಅನುಸರಣೆಯ ಮಹತ್ವ ಮುಂತಾದವನ್ನು ವಿವರಿಸುತ್ತಾ ಭಾರತ ಹಲವು ಸಂತರ ಪಕೀರರ ಅವಧೂತರ ವೀರ ಸನ್ಯಾಸಿಗಳ ಪುಣ್ಯಭೂಮಿ. ವಿವೇಕಾನಂದರು ಇಡೀ ವಿಶ್ವದಾದ್ಯಂತ  ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕೆಲಸವನ್ನು ಮಾಡಿದವರು. 
ಯಾವುದೇ ಭೇಧ ಭಾವ ವಿಲ್ಲದೇ ದೀನರ ದಲಿತರ ಬಡವರ ಹಸಿದವರ ಸೇವೆಗಾಗಿ ತಮ್ಮ ಜೀವನವನ್ನು ಸವೆಸಿದವರು. ನಮಗೆ ನಮ್ಮ ಧರ್ಮ, ನಮ್ಮ ಜಾತಿ ಎಂಬ ಶ್ರೇಷ್ಠತೆಯ ವ್ಯಸನ ಇರಬಾರದು. ಸನಾತನವೆಂದರೆ ಸರ್ವವನ್ನು ಒಳಗೊಳ್ಳುವುದು. ಹೀಗೆ ಎಲ್ಲರನ್ನೂ ಒಳಗೊಳ್ಳುವ ಎಲ್ಲರನ್ನೂ ಪ್ರೀತಿಸುವ ಆಧರಿಸುವ ಧರ್ಮ ನಮ್ಮದಾಗಬೇಕಿದೆ. ಆದರ್ಶ ಸಮಾಜ ಮತ್ತು ಆದರ್ಶ ಬದುಕಿಗೆ ವಿವೇಕಾನಂದರ ಚಿಂತನೆಗಳು ಮತ್ತು ಅವರ ಜೀವನ ಇಂದಿಗೂ ಮಾದರಿ. ಸಮಾನತೆ,  ಸ್ವಾತಂತ್ರ್ಯ, ಪ್ರೀತಿ, ಶುದ್ಧಭಕ್ತಿ, ರಾಷ್ಟ್ರಪ್ರೇಮಗಳಿಗೆ ಮತ್ತೊಂದು ರೂಪವೇ ಸ್ವಾಮಿ ವಿವೇಕಾನಂದರು. ಇಂತಹವರನ್ನು ಕೇವಲ ಒಂದು ಚಿಹ್ನೆಯಾಗಿ ಅಥವಾ ಒಂದು ಧರ್ಮಕ್ಕೆ ಸೀಮಿತವಾಗಿಸಿದ್ದು ದುರಂತ. 

ವಿವೇಕಾನಂದರು ಮತ್ತು ಅವರ ಚಿಂತನೆಗಳು ವಿಶ್ವದ ಆಸ್ತಿ. ವಿಶ್ವಮಾನವತೆಯೇ ಅವರ ಚಿಂತನೆಗಳ ಸತ್ವ. ಇಂತಹಾ ಮಹಾತ್ಮರ ಚಿಂತನೆಗಳ ಓದು ಸಂವಾದ ಪ್ರಸ್ತುತ ಸಂಧರ್ಭಕ್ಕೆ ಅತ್ಯವಶ್ಯಕವಾದದ್ದು ಎಂದು ಹೇಳುತ್ತಾ  
ಒಟ್ಟು ಕಾರ್ಯಕ್ರಮದ ಮಹತ್ವವನ್ನು ವಿವರಿಸಿ ಕಾರ್ಯಕ್ರಮದ ಸಾರ್ಥಕತೆಯನ್ನು ಸ್ಪಷ್ಟಪಡಿಸಿದರು. 

ಡಾ.ನಾಡಶ್ರೀ ಬಾ.ನಂ.ಲೋಕೇಶ್, ಶ್ರೀಮತಿ ಭಾಗ್ಯಮ್ಮ, ಹರೀಶ ಪಿ.ಎ., ಲಕ್ಷ್ಮೀ ಕೆ.ಬಿ.,  ರಾಜ್ ಕುಮಾರ್.ವಿ, ಶ್ರೀ ಶ್ರೀರಾಮ ದಿವಾಣ, ಶ್ರೀಮತಿ ರಾಧ ಸಿ.ಪಿ, ಶ್ರೀಮತಿ ಶಾಂತಾ ಜಯಾನಂದ, ಶಿಲ್ಪ ಜಗದೀಶ್, ಆದರ್ಶ ಕೆ.ಎಸ್. ರಜನಿಕಾಂತ ಎಚ್.ಪಟಗಾರ, ಸುಧಾಮ ಎಸ್, ವಿಕಾಸ್ ಕನ್ನಸಂದ್ರ,  ಮುಂತಾದ ೩೦ ಕ್ಕೂ ಹೆಚ್ಚು ಜನ  ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

- ವರದಿ : ಗೌತಮ್ ಗೌಡ.

(ಪುಸ್ತಕ ಓದು ಚರ್ಚೆಯಲ್ಲಿ ಭಾಗವಹಿಸುವ, ಪುಸ್ತಕ ಓದುವ ಆಸಕ್ತಿ ಉಳ್ಳವರು ದಯಮಾಡಿ ವಾಟ್ಸಪ್ ಮೂಲಕ 9902649766 ಸಂಪರ್ಕಿಸಿ ಅಭಿಯಾನಕ್ಕೆ ನೊಂದಣಿ ಮಾಡಿಕೊಳ್ಳಿ)


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ )

ಶನಿವಾರ, ಜನವರಿ 15, 2022

ಧರೆಯಲ್ಲಿನ ಆಟ (ಕವಿತೆ) - ಬಸವರಾಜ ಉಪ್ಪಿನ.

ಧರೆಯನ್ನಾಳಿದ ಮಹಾನ್ ದೊರೆಗಳೆಲ್ಲಾ
ಮರೆಯಾದರೂ ದೃವತಾರೆ ಯಂತೆ ಅಮರರಾದರು ದರೆಯನ್ನೆ ದರೋಡೆ ಹೊಡೆದ ಸ್ವಾರ್ಥಿಗಳೆಲ್ಲರೂ ಭವಿಷ್ಯದಲ್ಲಿ ಮಾರಣಹೋಮಕ್ಕೆ ಬಲಿಯಾದರು.

ಭವದೊಳಗೆ ಎಲ್ಲ ಧನವೇ ಮುಖ್ಯವೆಂದು ಧನಿಕರು ಮಾನವೀಯ ಮೌಲ್ಯವನ್ನು ಗಾಳಿಯಲ್ಲಿ ತೂರಿದರು ನರಳುವ ನರರಿಗೆ ನೆರಳಾದ ಹೃದಯವಂತರು
ಬಡವರ ಬಾಂಧವ್ಯ ತೆಗೆ ನಲುಮೆಯಾದರು.

ವಸುದೆಗೆ ಹಸಿರು ವಸ್ತ್ರವ ಶೃಂಗಾರದಿ ತೊಡಿಸಿದ
ರೈತರಲ್ಲ ಜಗದ ಜನರ ಹಸಿವಿಗೆ ಅನ್ನವನಿಕ್ಕಿದರು ಮನುಜನ ಮನದಲ್ಲಿ ವಿಷ ಬೀಜವ ಬಿತ್ತಿದ ದ್ರೋಹಿಗಳು ಬದುಕಿನ ಬುಡಕ್ಕೆ ಕೊಡಲಿಯ ಪೆಟ್ಟು ಹಾಕಿಕೊಂಡರು.

ಭೂರಮೆಯ ಉಳಿವಿಗಾಗಿ ತಮ್ಮ ಪ್ರಾಣತೆತ್ತ
ಮಹಾತ್ಮರೆಲ್ಲ ಸರ್ವರಿಗೂ ದಾರಿದೀಪವಾದರು
ಜಗವ ಬೆಳಗುವೆ ಎಂದು ದೀಪವ ಹಿಡಿದುಕೊಂಡು ತಿರುಗಾಡುವ ಗಾವಿಲರು ಪಾತಾಳಕ್ಕೆ ಹೋದರು.

-  ಬಸವರಾಜ ಉಪ್ಪಿನ.
  ಕುಕನೂರು ಜಿ/ ಕೊಪ್ಪಳ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಗೆಲುವಿನ ಕೋಟೆ (ಕವಿತೆ) - ಐಶ್ವರ್ಯ ಶ್ರೀ, ಶರೆಗಾರ.

ಗೆಲ್ಲಬೇಕು ಗೆಲ್ಲಬೇಕು ಗಟ್ಟಿ 
ಮನಸ ಮಾಡಬೇಕು 
ಸಾಗರದ ಆಚೆ ಗೆಲುವಿನ ಕೋಟೆ 
ಕಟ್ಟಬೇಕು ಸಾಗರದಲ್ಲಿ ಆಕೋಟೆಗೆ ಮೆಟ್ಟಿಲು 

ಗೆಲುವೆಂಬ ಹಾದಿಯಲ್ಲಿ 
ಕಲ್ಲು-ಮುಳ್ಳು ತುಳಿಯಬೇಕು 
ಕ್ಷಣ ಕ್ಷಣಕ್ಕೂ ತಂದೆ ತಾಯ
ಬೆವರ ಹನಿಯ ನೆನೆಯ ಬೇಕು
ಸುತ್ತಿ ನಿಂದೆಯ ಸಹಿಸ ಬೇಕು 

ಗೆಲ್ಲಬೇಕು ಗೆಲ್ಲಬೇಕು ಗಟ್ಟಿ ಮನಸ ಮಾಡಬೇಕು 

ಗೆದ್ದೆನೆಂಬ ಕನಸು ಕಾಣು
ತಂದೆ ತಾಯ ಖುಷಿಯ ನೋಡು
ಕಂಡ ಕನಸ ನನಸಿಗಾಗಿ 
ಗಟ್ಟಿ ಮನಸ ಮಾಡಬೇಕು 

ಗೆಲುವೆಂಬ ಕೋಟೆಯ ಹಾದೀಲಿ 
ಕಣ್ಣರಳಿಸೂ ದೃಶ್ಯಗಳು ನೂರಾರು 
ಗುರಿ ಮರೆತು ಕ್ಷಣ ಸರಿದರು 
ಗೆಲುವಿನ ಕೋಟೆ ಚೂರು ಚೂರು 

ಗೆಲ್ಲಬೇಕು ಗೆಲ್ಲಬೇಕು ಗಟ್ಟಿ ಮನಸ ಮಾಡಬೇಕು 

ನಿನ್ನವರಿಗಾಗಿ ನೀ ಗೆಲ್ಲಬೇಕು 
ಹೆತ್ತವರ ಋುಣವ ತಿರಿಸಬೇಕು
ಗೆಲುವಿನ ರಥವ ಎಳೆಯಬೇಕು 
ಗಟ್ಟಿ ಮನಸ ಮಾಡಬೇಕು 
- ಐಶ್ವರ್ಯ ಶ್ರೀ, ಶರೆಗಾರ.


(ನಿಮ್ಮ ಬರಹಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ವತಿಯಿಂದ ಯಶಸ್ವಿಯಾಗಿ ನಡೆದ ರಾಷ್ಟ್ರೀಯ ವೈದ್ಯ ದಿನಾಚರಣೆ.‌

ದಿನಾಂಕ 1-7 2025, ಬೇಲೂರು:  ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಬೇಲೂರು ಘಟಕದ ವತಿಯಿಂದ ಬೇಲೂರಿನ ವೈಷ್ಣವಗೋಷ್ಠಿಯಲ್ಲಿ ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಬೇಲೂ...